02.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡಿ, ಸಹೋದರ-ಸಹೋದರರ ದೃಷ್ಟಿಯಿಂದ ನೋಡಿ ಆಗ ದೇಹವನ್ನು ನೋಡುವುದಿಲ್ಲ, ದೃಷ್ಟಿಯು ಕೆಡುವುದಿಲ್ಲ, ವಾಣಿಯಲ್ಲಿ ಶಕ್ತಿ ಇರುತ್ತದೆ"

ಪ್ರಶ್ನೆ:
ತಂದೆಯು ಮಕ್ಕಳಿಗೆ ಸಾಲಗಾರನಾಗಿದ್ದಾರೆಯೋ ಅಥವಾ ಮಕ್ಕಳು ತಂದೆಗೆ ಸಾಲಗಾರರಾಗಿದ್ದಾರೆಯೋ?

ಉತ್ತರ:
ತಾವು ಮಕ್ಕಳಂತೂ ಅಧಿಕಾರಿಗಳಾಗಿದ್ದೀರಿ, ತಂದೆಯು ನಿಮ್ಮ ಸಾಲಗಾರನಾಗಿದ್ದಾರೆ. ನೀವು ಮಕ್ಕಳು ದಾನವನ್ನು ಕೊಡುತ್ತೀರಿ ಅಂದಾಗ ತಂದೆಯು ನಿಮಗೆ ಒಂದಕ್ಕೆ ನೂರರಷ್ಟು ಕೊಡಬೇಕಾಗುತ್ತದೆ. ಈಶ್ವರಾರ್ಥವಾಗಿ, ನೀವು ಏನನ್ನು ಕೊಡುತ್ತೀರೋ ಇನ್ನೊಂದು ಜನ್ಮದಲ್ಲಿ ಅದಕ್ಕೆ ಪ್ರತಿಯಾಗಿ ಸಿಗುತ್ತದೆ. ನೀವು ಹಿಡಿ ಅವಲಕ್ಕಿಯನ್ನು ಕೊಟ್ಟು ವಿಶ್ವದ ಮಾಲೀಕರಾಗುತ್ತೀರಿ ಅಂದಾಗ ಎಷ್ಟೊಂದು ಉದಾರ ಹೃದಯಿಗಳಾಗಬೇಕು. ನಾನು ತಂದೆಗೆ ಕೊಟ್ಟನೆಂಬ ವಿಚಾರವೂ ಸಹ ಬರಬಾರದು.

ಓಂ ಶಾಂತಿ.
ಸಂಗ್ರಹಾಲಯ, ಮ್ಯೂಸಿಯಂ, ಪ್ರದರ್ಶಿನಿಯಲ್ಲಿ ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದು ತಿಳಿಸಬೇಕು. ಕೇವಲ ತಾವೇ ಬುದ್ಧಿವಂತರಾಗಿದ್ದೀರಿ ಅಂದಮೇಲೆ ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದು ಎಲ್ಲರಿಗೆ ಎಷ್ಟೊಂಡು ತಿಳಿಸಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಿನ ಸರ್ವೀಸಿನ ಸ್ಥಾನವು ಮ್ಯೂಸಿಯಂ ಆಗಿದೆ, ಅಲ್ಲಿಗೆ ಅನೇಕರು ಬರುತ್ತಾರೆ. ಒಳ್ಳೆಯ ಸೇವಾಧಾರಿ ಮಕ್ಕಳು ಕಡಿಮೆ ಇದ್ದಾರೆ. ಎಲ್ಲಾ ಸೇವಾಕೇಂದ್ರಗಳು ಸರ್ವೀಸ್ ಸ್ಟೇಷನ್ಗಳಾಗಿವೆ. ದೆಹಲಿಯಲ್ಲಿ ಆಧ್ಯಾತ್ಮಿಕ ಸಂಗ್ರಹಾಲಯ ಎಂದು ಬರೆದಿದ್ದಾರೆ ಆದರೆ, ಇದಕ್ಕೆ ಸರಿಯಾದ ಅರ್ಥವು ಬರುವುದಿಲ್ಲ. ನೀವು ಭಾರತಕ್ಕೆ ಏನು ಸೇವೆ ಮಾಡುತ್ತಿದ್ದೀರಿ ಎಂದು ಅನೇಕರು ಕೇಳುತ್ತಾರೆ. ಭಗವಾನುವಾಚ ಇದೆಯಲ್ಲವೇ - ಇದು ಅರಣ್ಯವಾಗಿದೆ. ನೀವು ಈ ಸಮಯದಲ್ಲಿ ಸಂಗಮದಲ್ಲಿದ್ದೀರಿ. ನೀವು ಅರಣ್ಯವಾಸಿಗಳೂ ಅಲ್ಲ, ಹೂದೋಟದವಾಸಿಗಳೂ ಅಲ್ಲ. ಈಗ ಹೂದೋಟಕ್ಕೆ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ. ನೀವು ಈ ರಾವಣರಾಜ್ಯವನ್ನು ರಾಮರಾಜ್ಯವನ್ನಾಗಿ ಮಾಡುತ್ತಿದ್ದೀರಿ. ಇಷ್ಟೊಂದು ಹಣವು ಎಲ್ಲಿಂದ ಬಂದಿತು ಎಂದು ಕೇಳಿದರೆ ನಾವು ಬ್ರಹ್ಮಾಕುಮಾರ-ಕುಮಾರಿಯರೇ ಮಾಡುತ್ತೇವೆ, ರಾಮರಾಜ್ಯ ಸ್ಥಾಪನೆ ಆಗುತ್ತಿದೆ ಎಂದು ಹೇಳಿ. ನೀವು ಕೆಲವು ದಿನಗಳ ಕಾಲ ಬಂದು ನಾವು ಏನು ಮಾಡುತ್ತಿದ್ದೇವೆ, ನಮ್ಮ ಗುರಿ-ಧ್ಯೇಯವೇನಾಗಿದೆ ಎಂದು ತಿಳಿದುಕೊಳ್ಳಿ. ಅವರು ರಾಜರುಗಳ ಅಧಿಕಾರವನ್ನು ಒಪ್ಪುವುದಿಲ್ಲ, ಆದ್ದರಿಂದ ರಾಜರುಗಳ ರಾಜಧಾನಿಯನ್ನೇ ಸಮಾಪ್ತಿ ಮಾಡಿಬಿಟ್ಟಿದ್ದಾರೆ. ಈ ಸಮಯದಲ್ಲಿ ಅವರೂ ಸಹ ತಮೋಪ್ರಧಾನವಾಗಿಬಿಟ್ಟಿದ್ದಾರೆ ಆದ್ದರಿಂದ, ಇಷ್ಟವಾಗುವುದಿಲ್ಲ. ಅವರದೂ ಸಹ ನಾಟಕದನುಸಾರ ದೋಷವಿಲ್ಲ. ನಾಟಕದಲ್ಲಿ ಏನಿದೆಯೋ ಆ ಪಾತ್ರವನ್ನು ನಾವು ಅಭಿನಯಿಸುತ್ತೇವೆ. ಕಲ್ಪ-ಕಲ್ಪವು ತಂದೆಯ ಮೂಲಕ ಸ್ಥಾಪನೆಯ ಪಾತ್ರವು ನಡೆಯುತ್ತದೆ. ನೀವು ಮಕ್ಕಳೇ ತಮಗಾಗಿ ಖರ್ಚು ಮಾಡುತ್ತೀರಿ. ಶ್ರೀಮತದನುಸಾರ ತಮ್ಮ ಖರ್ಚು ಮಾಡಿ ತಮಗಾಗಿ ಸತ್ಯಯುಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ ಮತ್ತ್ಯಾರಿಗೂ ತಿಳಿದೇ ಇಲ್ಲ. ಗುಪ್ತ ಸೈನಿಕರೆಂದು ನಿಮ್ಮ ಹೆಸರು ಪ್ರಸಿದ್ಧವಾಗಿದೆ, ವಾಸ್ತವದಲ್ಲಿ ಆ ಸೈನ್ಯದಲ್ಲಿ ಯಾರೂ ಗುಪ್ತ ಸೈನಿಕರಿರುವುದಿಲ್ಲ. ಸಿಪಾಯಿಗಳ ಹಾಜರಾತಿ ಪುಸ್ತಕವಿರುತ್ತದೆ. ಯಾರದೇ ಹೆಸರು, ಹಾಜರಾತಿಯಲ್ಲಿ ಇಲ್ಲದಿರಲು ಸಾಧ್ಯವಿಲ್ಲ. ವಾಸ್ತವದಲ್ಲಿ ನೀವು ಗುಪ್ತ ಸೈನಿಕರಾಗಿದ್ದೀರಿ. ಯಾವುದೇ ಹಾಜರಾತಿಯಲ್ಲಿ ನಿಮ್ಮ ಹೆಸರು ಇಲ್ಲ, ನಿಮಗೆ ಯಾವುದೇ ಅಸ್ತ್ರ-ಶಸ್ತ್ರಗಳಿಲ್ಲ. ಇದರಲ್ಲಿ ದೈಹಿಕ ಹಿಂಸೆಯಂತೂ ಇಲ್ಲ. ಯೋಗ ಬಲದಿಂದ ನೀವು ವಿಶ್ವದ ಮೇಲೆ ಜಯಗಳಿಸುತ್ತೀರಿ. ಈಶ್ವರನು ಸರ್ವಶಕ್ತಿವಂತನಾಗಿದ್ದಾರಲ್ಲವೇ. ನೆನಪಿನಿಂದ ನೀವು ಶಕ್ತಿಯನ್ನು ಪಡೆಯುತ್ತಿದ್ದೀರಿ. ಸತೋಪ್ರಧಾನರಾಗಲು ತಂದೆಯೊಂದಿಗೆ ಯೋಗವನ್ನು ಜೋಡಿಸುತ್ತಿದ್ದೀರಿ. ನೀವು ಸತೋಪ್ರಧಾನರಾದರೆ ಸತೋಪ್ರಧಾನ ರಾಜ್ಯ ಬೇಕು, ನೀವು ಈಗ ಶ್ರೀಮತದನುಸಾರ ಸ್ಥಾಪನೆ ಮಾಡುತ್ತೀರಿ. ತಂದೆ ಇದ್ದಾರೆ ಆದರೆ, ಕಾಣಿಸುವುದಿಲ್ಲ. ಅಂತಹವರಿಗೆ ಗುಪ್ತವೆಂದು ಹೇಳಲಾಗುತ್ತದೆ. ನೀವು ಶಿವತಂದೆಯನ್ನೂ ಸಹ ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ನೀವು ಗುಪ್ತವಾಗಿದ್ದೀರಿ ಅಂದಾಗ ಶಕ್ತಿಯನ್ನೂ ಗುಪ್ತವಾಗಿ ಪಡೆಯುತ್ತಿದ್ದೀರಿ. ನಾವು ಪತಿತರಿಂದ ಪಾವನರಾಗುತ್ತಿದ್ದೇವೆ ಮತ್ತು ಪಾವನರಲ್ಲಿಯೇ ಶಕ್ತಿಯಿರುತ್ತದೆ ಎಂದು ತಿಳಿಯುತ್ತೀರಿ. ಸತ್ಯಯುಗದಲ್ಲಿ ತಾವೆಲ್ಲರೂ ಪಾವನರಿರುತ್ತೀರಿ. ಅವರದೇ 84 ಜನ್ಮಗಳ ಕಥೆಯನ್ನು ತಂದೆ ತಿಳಿಸುತ್ತಾರೆ. ನೀವು ತಂದೆಯಿಂದ ಶಕ್ತಿಯನ್ನು ಪಡೆದು ಪವಿತ್ರರಾಗಿ, ಮತ್ತೆ ಪವಿತ್ರ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ. ಬಾಹುಬಲದಿಂದ ಎಂದೂ ಯಾರೂ ವಿಶ್ವದ ಮೇಲೆ ಜಯಗಳಿಸಲು ಸಾಧ್ಯವಿಲ್ಲ. ಇದು ಯೋಗಬಲದ ಮಾತಾಗಿದೆ, ಅವರೂ ಹೊಡೆದಾಡುತ್ತಾರೆ ಆದರೆ, ರಾಜ್ಯವು ನಿಮ್ಮ ಕೈಯಲ್ಲಿ ಬರುತ್ತದೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ ಅಂದಮೇಲೆ, ಅವರಿಂದ ಶಕ್ತಿ ಸಿಗಬೇಕು. ನೀವು ತಂದೆಯನ್ನು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ.

ನಾವೇ ಸ್ವದರ್ಶನಚಕ್ರಧಾರಿಗಳು ಆಗಿದ್ದೇವೆ ಎಂದು ನಿಮಗೆ ಗೊತ್ತಿದೆ, ಇದು ಎಲ್ಲರಿಗೂ ಸ್ಮೃತಿ ಇರುವುದಿಲ್ಲ. ನೀವು ಮಕ್ಕಳಿಗೆ ಸ್ಮೃತಿ ಇರಬೇಕು ಏಕೆಂದರೆ, ನೀವು ಮಕ್ಕಳಿಗೆ ಜ್ಞಾನ ಸಿಗುತ್ತದೆ. ಹೊರಗಿನವರು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಸಭೆಯಲ್ಲಿ ಕುಳ್ಳರಿಸಲಾಗುವುದಿಲ್ಲ. ಪತಿತಪಾವನ ತಂದೆಯನ್ನು ಎಲ್ಲರೂ ಕರೆಯುತ್ತಾರೆ. ಆದರೆ, ಎಲ್ಲರೂ ತಮ್ಮನ್ನು ಪತಿತರೆಂದು ತಿಳಿಯುವುದಿಲ್ಲ ಕೇವಲ ಪತಿತಪಾವನ ಸೀತಾರಾಂ ಎಂದು ಹಾಡುತ್ತಿರುತ್ತಾರೆ. ನೀವೆಲ್ಲರೂ ವಧುವಾಗಿದ್ದೀರಿ, ತಂದೆಯು ವರನಾಗಿದ್ದಾರೆ. ಅವರು ಬರುವುದೇ ಸರ್ವರ ಸದ್ಗತಿ ಮಾಡಲು. ನೀವು ಮಕ್ಕಳಿಗೆ ಶೃಂಗಾರ ಮಾಡುತ್ತಾರೆ. ನಿಮಗೆ ಈಗ ಡಬಲ್ ಇಂಜನ್ ಸಿಕ್ಕಿದೆ. ರೋಲ್ಸ್ ರಾಯಲ್ಸ್ ಎನ್ನುವ ಕಾರಿನಲ್ಲಿ ಇಂಜನ್ ಬಹಳ ಚೆನ್ನಾಗಿರುತ್ತದೆ. ತಂದೆಯು ಹಾಗೆಯೇ. ಪಾತಿತ-ಪಾವನ ಬನ್ನಿ, ನಮ್ಮನ್ನು ಪಾವನರನ್ನಾಗಿ ಮಾಡಿ, ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ನೀವೆಲ್ಲರೂ ಶಾಂತಿಯಲ್ಲಿ ಕುಳಿತಿದ್ದೀರಿ. ಯಾವುದೇ ಭಜನದ ಮಾತೂ ಇಲ್ಲ, ಕಷ್ಟದ ಮಾತೇ ಇಲ್ಲ. ನಡೆಯುತ್ತಾ, ತಿರುಗಾಡುತ್ತಾ, ತಂದೆಯನ್ನು ನೆನಪು ಮಾಡುತ್ತಿರಿ. ಯಾರೇ ಸಿಗಲಿ ಅವರಿಗೆ ಮಾರ್ಗವನ್ನು ತಿಳಿಸುತ್ತಿರಿ. ತಂದೆಯು ತಿಳಿಸುತ್ತಾರೆ - ನನ್ನ ಹಾಗೂ ಲಕ್ಷ್ಮೀ-ನಾರಾಯಣರ, ರಾಧಾ-ಕೃಷ್ಣ ಮೊದಲಾದವರ ಭಕ್ತರಿಗೆ ಈ ಜ್ಞಾನವನ್ನು ಕೊಡಿ, ವ್ಯರ್ಥವಾಗಿ ಕಳೆಯಬೇಡಿ. ಪಾತ್ರರಿಗೆ (ಯೋಗ್ಯರಿಗೆ) ದಾನ ಮಾಡಲಾಗುತ್ತದೆ. ಪತಿತ ಮನುಷ್ಯರು ಪತಿತರಿಗೇ ದಾನ ಮಾಡುತ್ತಿರುತ್ತಾರೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರಿಂದ ನೀವು ಶಕ್ತಿಯನ್ನು ಪಡೆದು ಉತ್ತಮರಾಗುತ್ತೀರಿ. ರಾವಣ ಬಂದಾಗ, ಅದೂ ಸಹ ತ್ರೇತಾ ಮತ್ತು ದ್ವಾಪರದ ಸಂಗಮವಾಯಿತು ಆದರೆ, ಇದು ಕಲಿಯುಗ ಮತ್ತು ಸಂಗಮಯುಗದ ಸಂಗಮವಾಗಿದೆ. ಜ್ಞಾನವು ಎಷ್ಟು ಸಮಯ ಮತ್ತು ಭಕ್ತಿಯು ಎಷ್ಟು ಸಮಯ ನಡೆಯುವುದೆಂದು ಎಲ್ಲಾ ಮಾತುಗಳನ್ನು ತಿಳಿದು ತಿಳಿಸಬೇಕಾಗುತ್ತದೆ. ಮುಖ್ಯ ಮಾತು ಬೇಹದ್ದಿನ ತಂದೆಯನ್ನು ನೆನಪು ಮಾಡಿ. ಬೇಹದ್ದಿನ ತಂದೆಯು ಬಂದಾಗ ವಿನಾಶವೂ ಆಗುತ್ತದೆ, ಮಹಾಭಾರತ ಯುದ್ಧವು ಯಾವಾಗ ನಡೆಯಿತು? ಭಗವಂತ ರಾಜಯೋಗವನ್ನು ಕಲಿಸಿದಾಗ ನಡೆಯಿತು. ಹೊಸ ಪ್ರಪಂಚದ ಆದಿ, ಹಳೆಯ ಪ್ರಪಂಚದ ಅಂತ್ಯ ಅರ್ಥಾತ್ ವಿನಾಶವಾಗಲಿದೆ ಎಂದು ತಿಳಿಯುತ್ತದೆ. ಪ್ರಪಂಚವು ಘೋರ ಅಂಧಕಾರದಲ್ಲಿದೆ. ಈಗ ಅವರನ್ನು ಜಾಗೃತಗೊಳಿಸಬೇಕಾಗಿದೆ. ಅರ್ಧಕಲ್ಪದಿಂದ ಮಲಗಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರನ ದೃಷ್ಟಿಯಿಂದ ನೋಡಿ ಆಗ, ನೀವು ಯಾರಿಗೆ ಜ್ಞಾನವನ್ನು ಕೊಟ್ಟಾಗ ನಿಮ್ಮ ವಾಣಿಯಲ್ಲಿ ಶಕ್ತಿ ಬರುತ್ತದೆ. ಆತ್ಮವೇ ಪಾವನ ಮತ್ತು ಪತಿತವಾಗುತ್ತದೆ. ಆತ್ಮವು ಪಾವನ ಆದಾಗ, ಪಾವನ ಶರೀರವು ಸಿಗುತ್ತದೆ, ಈಗಂತೂ ಸಿಗಲು ಸಾಧ್ಯವಿಲ್ಲ. ಎಲ್ಲರೂ ಪಾವನರಾಗಲೇ ಬೇಕಾಗಿದೆ. ಕೆಲವರು ಯೋಗಬಲದಿಂದ, ಕೆಲವರು ಶಿಕ್ಷೆಗಳಿಂದ ಪಾವನರಾಗುತ್ತಾರೆ. ಶ್ರಮವು ನೆನಪಿನ ಯಾತ್ರೆಯದಾಗಿದೆ. ತಂದೆಯು ಅಭ್ಯಾಸವನ್ನು ಮಾಡಿಸುತ್ತಿರುತ್ತಾರೆ. ಎಲ್ಲಿಗೇ ಹೋದರೂ ತಂದೆಯ ನೆನಪಿನಲ್ಲಿ ಹೋಗಿ. ಹೇಗೆ ಪಾದ್ರಿಗಳು ಶಾಂತಿಯಲ್ಲಿ ಕ್ರೈಸ್ತನ ನೆನಪಿನಲ್ಲಿ ಹೋಗುತ್ತಾರೆ ಮತ್ತು ಕ್ರೈಸ್ತನನ್ನು ನೆನಪು ಮಾಡುತ್ತಾರೆ ಆದರೆ, ಭಾರತವಾಸಿಗಳು ಅನೇಕರನ್ನು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಒಬ್ಬರ ವಿನಃ ಮತ್ಯಾರ ನೆನಪು ಮಾಡಬೇಡಿ. ಬೇಹದ್ದಿನ ತಂದೆಯಿಂದ ನೀವು ಮುಕ್ತಿ-ಜೀವನ್ಮುಕ್ತಿಗೆ ಹಕ್ಕುದಾರರಾಗುತ್ತೀರಿ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಜೀವನ್ಮುಕ್ತಿಯಲ್ಲಿದ್ದರು. ಕಲಿಯುಗದಲ್ಲಿ ಎಲ್ಲರೂ ಜೀವನ ಬಂಧನದಲ್ಲಿದ್ದಾರೆ. ಇದು ಯಾರಿಗೂ ಗೊತ್ತಿಲ್ಲ. ಇವೆಲ್ಲಾ ಮಾತುಗಳು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ ಮತ್ತೆ ಮಕ್ಕಳು ತಂದೆಯ ಪ್ರತ್ಯಕ್ಷತೆಯನ್ನು ಮಾಡುತ್ತಾರೆ. ಎಲ್ಲಾ ಕಡೆ ಹೋಗುತ್ತಾರೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ ಎಂಬ ಈ ಸಂದೇಶವನ್ನು ನೀವು ಮನುಷ್ಯಾತ್ಮರಿಗೆ ತಿಳಿಸಬೇಕು. ಮಕ್ಕಳೇ ನನ್ನೊಬ್ಬನನ್ನೇ ನೆನಪು ಮಾಡಿದಾಗ ವಿಕರ್ಮ ವಿನಾಶ ಆಗುತ್ತದೆ ಮತ್ತು ಪಾಪ ಸಮಾಪ್ತಿ ಆಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಇದು ಸತ್ಯ ಗೀತೆಯಾಗಿದೆ, ಇದನ್ನು ತಂದೆಯೇ ಕಲಿಸುತ್ತಾರೆ. ಮನುಷ್ಯರ ಮತದಿಂದ ಕೆಳಗೆ ಬಿದ್ದಿದ್ದೀರಿ, ಭಗವಂತನ ಮತದಿಂದ ನೀವು ಆಸ್ತಿಯನ್ನು ಪಡೆಯುತ್ತಿದ್ದೀರಿ. ಮೂಲ ಮಾತಾಗಿದೆ – ಏಳುತ್ತಾ, ಕುಳಿತುಕೊಳ್ಳುತ್ತಾ, ನಡೆಯುತ್ತಾ, ಓಡಾಡುತ್ತಾ ತಂದೆಯನ್ನು ನೆನಪು ಮಾಡುತ್ತಿರಿ ಮತ್ತು ತಂದೆಯ ಪರಿಚಯವನ್ನು ನೀಡುತ್ತಿರಿ. ಬ್ಯಾಡ್ಜಂತೂ ನಿಮ್ಮ ಬಳಿ ಇದೆ. ಉಚಿತವಾಗಿ ಕೊಡುವುದರಲ್ಲಿ ಯಾವುದೇ ಚಿಂತೆಯಿಲ್ಲ. ಆದರೆ, ಪಾತ್ರವನ್ನು ನೋಡಿ ಕೊಡಬೇಕು.

ನಿಮ್ಮ ಲೌಕಿಕ ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ಪಾರಲೌಕಿಕ ತಂದೆಯಾದ ನನ್ನನ್ನು ಮರೆಯುತ್ತೀರಿ ಎಂದು ತಂದೆಯು ಮಕ್ಕಳನ್ನು ದೂರುತ್ತಾರೆ. ನಿಮಗೆ ನಾಚಿಕೆ ಆಗುವುದಿಲ್ಲವೇ! ನೀವೇ ಪವಿತ್ರ ಪ್ರವೃತ್ತಿ ಮಾರ್ಗದ ಗೃಹಸ್ಥಿ ಪುನಃ ಆಗಬೇಕಾಗಿದೆ, ನೀವು ಭಗವಂತನ ವ್ಯಾಪಾರಿಗಳಾಗಿದ್ದೀರಿ. ತಮ್ಮೊಳಗೆ ನೋಡಿಕೊಳ್ಳಿ ಬುದ್ಧಿಯು ಎಲ್ಲಿಯೂ ಅಲೆಯುವುದಿಲ್ಲವೇ? ಎಂದು ತಮ್ಮನ್ನು ನೋಡಿಕೊಳ್ಳಿ. ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆನು? ಮತ್ತೆಲ್ಲಾ ಸಂಗಗಳನ್ನು ಬಿಟ್ಟು ತಂದೆಯ ಸಂಗ ಮಾಡಿ, ತಪ್ಪು ಮಾಡಬೇಡಿ ಎಂದು ತಂದೆಯು ತಿಳಿಸುತ್ತಾರೆ. ಸಹೋದರ-ಸಹೋದರನ ದೃಷ್ಟಿಯಿಂದ ನೋಡಿದರೆ ದೇಹವನ್ನು ನೋಡುವುದಿಲ್ಲ, ದೃಷ್ಟಿಯು ಕೆಡುವುದಿಲ್ಲ ಎಂದು ತಿಳಿಸಲಾಗಿದೆ. ಇದು ಗುರಿ ಇದೆಯಲ್ಲವೇ. ಈ ಜ್ಞಾನವು ನಿಮಗೆ ಈಗಲೇ ಸಿಗುತ್ತದೆ. ಸಹೋದರ-ಸಹೋದರ ಎಂದು ಎಲ್ಲರೂ ಹೇಳುತ್ತಾರೆ, ವಿಶ್ವ ಭ್ರಾತೃತ್ವವೆಂದು ಮನುಷ್ಯರು ಹೇಳುತ್ತಾರೆ. ಇದು ಸರಿಯಾಗಿದೆ. ನಾವು ಪರಮಪಿತ ಪರಮಾತ್ಮನ ಸಂತಾನರಾಗಿದ್ದೇವೆ. ಇಲ್ಲಿ ಏಕೆ ಕುಳಿತಿದ್ದೀರಿ? ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಅಂದಮೇಲೆ, ಈ ರೀತಿ ತಿಳಿಸುತ್ತಾ ಈಗ ಉನ್ನತಿಯನ್ನು ಹೊಂದುತ್ತಾ ಇರಿ ಎಂದು ತಿಳಿಸುತ್ತಾರೆ. ತಂದೆಗೆ ಬಹಳ ಸೇವಾಧಾರಿ ಮಕ್ಕಳು ಬೇಕು. ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ. ಮಕ್ಕಳಿಗೆ ಬಹಳ ಆಸಕ್ತಿ ಇದೆ. ಅನೇಕರ ಕಲ್ಯಾಣ ಆಗುವುದು ಎಂದು ತಿಳಿಯುತ್ತಾರೆ ಆದರೆ, ಶಿಕ್ಷಕಿಯರನ್ನೂ ಸಹ ಸಂಭಾಲನೆ ಮಾಡುವವರು ಒಳ್ಳೆಯ ಮಹಾರಥಿ ಇರಬೇಕು. ಶಿಕ್ಷಕಿಯರಲ್ಲೂ ಸಹ ನಂಬರ್ವಾರ್ ಇದ್ದಾರೆ. ಎಲ್ಲಿಯೇ ಲಕ್ಷ್ಮೀ-ನಾರಾಯಣರ, ಶಿವನ ಮಂದಿರವಿದ್ದರೆ, ಗಂಗಾನದಿಯ ತೀರದಲ್ಲಿಯೂ ಸಹ, ಅಂದರೆ ಎಲ್ಲಿ ಬಹಳ ಜನ ಸಂದಣಿ ಇರುತ್ತದೋ ಅಲ್ಲಿಗೆ ಹೋಗಿ ಬಹಳ ಸರ್ವೀಸ್ ಮಾಡುತ್ತಿರಿ ಎಂದು ತಂದೆಯು ತಿಳಿಸುತ್ತಾರೆ. ಭಗವಂತ ಹೇಳುತ್ತಾರೆ ಕಾಮ ಶತ್ರು ಎಂದು ತಿಳಿಸಿ. ನೀವು ಶ್ರೀಮತದ ಪ್ರಮಾಣ ಸೇವೆ ಮಾಡುತ್ತಿರಿ, ಇದು ನಿಮ್ಮದು ಈಶ್ವರೀಯ ಪರಿವಾರವಾಗಿದೆ, ಇಲ್ಲಿ 7 ದಿನಗಳ ಭಟ್ಟಿಯಲ್ಲಿ ಬಂದು ಪರಿವಾರದ ಜೊತೆಯಲ್ಲಿ ಇರುತ್ತೀರಿ. ನೀವು ಮಕ್ಕಳಿಗೆ ಬಹಳ ಖುಷಿ ಇರಬೇಕು. ಬೇಹದ್ದಿನ ತಂದೆಯಿಂದ ನೀವು ಪದಮಾಪದಮ ಭಾಗ್ಯಶಾಲಿಗಳು ಆಗುತ್ತೀರಿ. ಭಗವಂತನೂ ಸಹ ಓದಿಸುತ್ತಾರೆ ಎಂಬುವುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಇಲ್ಲಿ ನೀವು ಓದುತ್ತೀರಿ ಎಂದಾಗ ನಿಮ್ಮಲ್ಲಿ ಎಷ್ಟೊಂದು ಖುಷಿ ಇರಬೇಕು. ನಾವು ಶ್ರೇಷ್ಠಾತಿ ಶ್ರೇಷ್ಠ ಧಾಮಕ್ಕೆ ಹೋಗಲು ಓದುತ್ತಿದ್ದೇವೆ. ಎಷ್ಟು ವಿಶಾಲ ಹೃದಯಿಗಳಾಗಬೇಕು. ತಂದೆಯ ಮೇಲೆ ನೀವು ಸಾಲವನ್ನು ಹೇರುತ್ತೀರಿ, ಈಶ್ವರಾರ್ಥವಾಗಿ ನೀವು ಏನನ್ನು ಕೊಡುತ್ತೀರೋ ಇನ್ನೊಂದು ಜನ್ಮದಲ್ಲಿ ಇದರ ಪ್ರತಿಯಾಗಿ ತೆಗೆದುಕೊಳ್ಳುತ್ತೀರಲ್ಲವೇ. ತಂದೆಗೆ ನೀವು ಸರ್ವಸ್ವವನ್ನೂ ಕೊಟ್ಟರೆ, ತಂದೆಯೂ ಸಹ ನಿಮಗೆ ಎಲ್ಲವನ್ನೂ ಕೊಡಬೇಕಾಗುತ್ತದೆ. ನಾನು ತಂದೆಗೆ ಕೊಟ್ಟೆ ಎಂಬ ವಿಚಾರವೂ ಸಹ ಎಂದೂ ಬರಬಾರದು. ನಾವು ಇಷ್ಟೊಂದು ಮಾಡಿದೆವು ಆದರೆ, ನಮಗೆ ಅಷ್ಟು ಗೌರವ ಸಿಗಲಿಲ್ಲವೆಂದು ಅನೇಕರಲ್ಲಿ ಸಂಕಲ್ಪ ನಡೆಯುತ್ತದೆ. ನೀವು ಹಿಡಿ ಅವಲಕ್ಕಿಯನ್ನು ಕೊಟ್ಟು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ತಂದೆಯಂತೂ ದಾತನಾಗಿದ್ದಾರಲ್ಲವೇ. ರಾಜರು ಬಹಳ ಘನತೆಯಿಂದ ಇರುತ್ತಾರೆ. ಮೊದಲು ಭೇಟಿ ಆದಾಗ ನಾವು ಕಾಣಿಕೆಯನ್ನು ಕೊಡುತ್ತೇವೆ, ಅವರು ಕೈಯಲ್ಲಿ ಎಂದೂ ತೆಗೆದುಕೊಳ್ಳುವುದಿಲ್ಲ. ಸೇಕರೇಟಿರಿಯ ಕಡೆ ಸನ್ನೆ ಮಾಡುತ್ತಾರೆ. ಅಂದಾಗ ಶಿವತಂದೆಯು ದಾತನಾಗಿದ್ದಾರೆ ಎಂದ ಮೇಲೆ ಅವರು ಹೇಗೆ ತೆಗೆದುಕೊಳ್ಳುತ್ತಾರೆ? ಇವರು ಬೇಹದ್ದಿನ ತಂದೆಯಾಗಿದ್ದಾರಲ್ಲವೇ. ಇವರ ಮುಂದೆ ನೀವು ಕಾಣಿಕೆ ನೀಡುತ್ತೀರಿ ಆದರೆ, ತಂದೆಯಂತೂ ಅದಕ್ಕೆ ಪ್ರತಿಫಲವಾಗಿ 100ರಷ್ಟು ಕೊಡುತ್ತಾರೆ. ಅಂದಮೇಲೆ ನಾನೂ ಕೊಟ್ಟೆ ಎಂಬ ಸಂಕಲ್ಪವೂ ಸಹ ಬರಬಾರದು. ಸದಾ ನಾವು ತಂದೆಯಿಂದ ಪಡೆಯುತ್ತೇವೆ ಎಂದು ತಿಳಿದುಕೊಳ್ಳಬೇಕು. ಸತ್ಯಯುಗದಲ್ಲಿ ನೀವು ಪದಮಾಪತಿಗಳಾಗುತ್ತೀರಿ. ನೀವು ಪ್ರತ್ಯಕ್ಷ ರೂಪದಲ್ಲಿ ಪದಮಾಪದಮ ಭಾಗ್ಯಶಾಲಿಗಳಾಗುತ್ತೀರಿ. ಅನೇಕ ಮಕ್ಕಳು ಉದಾರ ಹೃದಯಿಗಳೂ ಇದ್ದಾರೆ, ಇನ್ನೂ ಕೆಲವರು ಜಿಪುಣರೂ ಇದ್ದಾರೆ. ನಾವು ಪದಮಾಪತಿಗಳಾಗುತ್ತೇವೆ, ನಾವು ಸುಖಿಯಾಗುತ್ತೇವೆ ಎಂಬುದನ್ನು ತಿಳಿದುಕೊಂಡೇ ಇಲ್ಲ. ಪರಮಾತ್ಮ ತಂದೆಯು ಈ ಸಾಕಾರ ಸೃಷ್ಟಿಯಲ್ಲಿ ಇಲ್ಲದಿರುವಾಗಲೇ ಪರೋಕ್ಷವಾಗಿ ಅಲ್ಪಕಾಲಕ್ಕಾಗಿ ಫಲವನ್ನು ಕೊಡುತ್ತಾರೆ. ಹಾಜಾರಾಗುತ್ತಾರೆಂದಾಗ 21 ಜನ್ಮಗಳಿಗೆ ಕೊಡುತ್ತಾರೆ. ಶಿವತಂದೆಯ ಬಂಡಾರವು ಸದಾ ಸಂಪನ್ನವಾಗಿದೆ ಎಂಬ ಗಾಯನವೂ ಇದೆ. ನೋಡಿ, ಅನೇಕ ಮಕ್ಕಳಿದ್ದಾರೆ, ಯಾರು ಏನು ಕೊಡುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ತಂದೆಗೆ ಗೊತ್ತು ಮತ್ತು ತಂದೆಯ ಚೀಲ (ಬ್ರಹ್ಮಾ)ಕ್ಕೆ ಗೊತ್ತು. ಇದರಲ್ಲಿ ತಂದೆಯು ಇರುತ್ತಾರೆ ಆದರೆ, ಬಹಳ ಸಾಧಾರಣವಾಗಿ. ಈ ಕಾರಣ ಮಕ್ಕಳು ಇಲ್ಲಿಂದ ಹೊರಗೆ ಹೋದಾಗ ಆ ನಶೆಯು ಮರೆಯಾಗುತ್ತದೆ. ಜ್ಞಾನ-ಯೋಗವಿಲ್ಲದಿದ್ದರೆ ಏರುಪೇರಾಗುತ್ತಿರುತ್ತದೆ. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯೆ ಸೋಲಿಸುತ್ತದೆ. ಮಾಯೆ ವಿಮುಖರನ್ನಾಗಿ ಮಾಡಿಬಿಡುತ್ತದೆ. ಶಿವತಂದೆಯ ಬಳಿ ಬರುತ್ತೀರೆಂದರೆ ನೀವು ಅವರನ್ನೇ ನೆನಪು ಮಾಡಲು ಆಗುವುದಿಲ್ಲವೇನು! ಆಂತರಿಕವಾಗಿ ಬಹಳ ಖುಷಿ ಇರಬೇಕು. ಯಾವ ದಿನಕ್ಕಾಗಿ ಬಾಬಾ, ತಾವು ಬಂದರೆ ನಾವು ಬಲಿಹಾರಿ ಆಗುತ್ತೇವೆ ಎಂದು ಹೇಳುತ್ತಿದ್ದೀರೋ ಆ ದಿನ ಇಂದು ಬಂದಿದೆ. ಭಗವಂತನು ಬಂದು ದತ್ತು ಮಾಡಿಕೊಳ್ಳುತ್ತಾರೆಂದರೆ ಎಷ್ಟೊಂದು ಅದೃಷ್ಟವಂತರು ಎಂದು ಹೇಳುವುದು! ಅಂದಾಗ ಎಷ್ಟೊಂದು ಖುಷಿಯಲ್ಲಿ ಇರಬೇಕು ಆದರೆ, ಮಾಯೆಯು ಖುಷಿಯನ್ನು ಕಳೆಯುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಭಗವಂತನು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಅವರೇ ನಮ್ಮ ಶಿಕ್ಷಕರಾಗಿ ಓದಿಸುತ್ತಿದ್ದಾರೆ, ಈಗ ಪದಮಾಪದಮ ಭಾಗ್ಯದ ಸ್ಮರಣೆ ಮಾಡಿ ಖುಷಿಯಲ್ಲಿ ಇರಬೇಕಾಗಿದೆ.

2. ನಾವು ಆತ್ಮಗಳು ಸಹೋದರ-ಸಹೋದರರಾಗಿದ್ದೇವೆ - ಈ ದೃಷ್ಟಿಯನ್ನು ಪರಿಪಕ್ವ ಮಾಡಿಕೊಳ್ಳಬೇಕು. ದೇಹವನ್ನು ನೋಡಬಾರದು, ಭಗವಂತನೊಂದಿಗೆ ವ್ಯಾಪಾರ ಮಾಡಿದ ನಂತರ ಮತ್ತೆ ಬುದ್ಧಿಯನ್ನು ಅಲೆದಾಡಿಸಬಾರದಾಗಿದೆ.

ವರದಾನ:
ಈ ಅಲೌಕಿಕ ಜೀವನದಲ್ಲಿ ಸಂಬಂಧದ ಶಕ್ತಿಯಿಂದ ಅವಿನಾಶಿ ಸ್ನೇಹ ಮತ್ತು ಸಹಯೋಗ ಪ್ರಾಪ್ತಿ ಮಾಡಿಕೊಳ್ಳುವಂತಹ ಶ್ರೇಷ್ಠ ಆತ್ಮ ಭವ

ಈ ಅಲೌಕಕ ಜೀವನದಲ್ಲಿ ಸಂಬಂಧದ ಶಕ್ತಿ ನೀವು ಮಕ್ಕಳಿಗೆ ಡಬ್ಬಲ್ ರೂಪದಲ್ಲಿ ಪ್ರಾಪ್ತಿಯಾಗಿದೆ. ಒಂದು ತಂದೆಯ ಮೂಲಕ ಸರ್ವ ಸಂಬಂಧ, ಇನ್ನೊಂದು ದೈವೀ ಪರಿವಾರದ ಮೂಲಕ ಸಂಬಂಧ. ಈ ಸಂಬಂಧದಿಂದ ಸದಾ ನಿಸ್ವಾರ್ಥ ಸ್ನೇಹ, ಅವಿನಾಶಿ ಸ್ನೇಹ ಮತ್ತು ಸಹಯೋಗ ಸದಾ ಪ್ರಾಪ್ತಿಯಾಗುತ್ತಿರುತ್ತದೆ. ಆದ್ದರಿಂದ ನಿಮ್ಮ ಬಳಿ ಸಂಬಂಧದ ಶಕ್ತಿಯೂ ಸಹ ಇದೆ. ಇಂತಹ ಶ್ರೇಷ್ಠ ಅಲೌಕಿಕ ಜೀವನವುಳ್ಳವರು ಶಕ್ತಿ ಸಂಪನ್ನ ವರದಾನಿ ಆತ್ಮಗಳಾಗಿರುವಿರಿ ಆದ್ದರಿಂದ ಅರ್ಜಿ ಹಾಕುವಂತಹವರಲ್ಲ, ಸದಾ ರಾಜಿóಯಾಗಿರುವವರಾಗಿ.

ಸ್ಲೋಗನ್:
ಯಾವುದೇ ವಿದೇಹಿ ಯಾಗುವ ಪ್ಲಾನ್, ಸಾಕ್ಷಿಯಾಗಿ ಯೋಚಿಸಿ ಮತ್ತು ಸೆಕೆಂಡ್ ನಲ್ಲಿ ಪ್ಲೇನ್ ಸ್ಥಿತಿ ಮಾಡಿಕೊಂಡು ಆಗುತ್ತಾ ಹೋಗಿ.