03.04.24         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯ ನೆನಪಿನಲ್ಲಿ ಸದಾ ಹರ್ಷಿತರಾಗಿರಿ, ಹಳೆಯ ದೇಹದ ಭಾನವನ್ನು ತೆಗೆಯುತ್ತಾ ಹೋಗಿ ಏಕೆಂದರೆ ನಿಮ್ಮ ಯೋಗಬಲದಿಂದ ವಾಯುಮಂಡಲವನ್ನು ಶುದ್ದ ಮಾಡುವ ಸೇವೆ ಮಾಡಬೇಕಾಗಿದೆ"

ಪ್ರಶ್ನೆ:
ಸ್ಕಾಲರ್ಶಿಪ್ (ವಿದ್ಯಾರ್ಥಿವೇತನ) ತೆಗೆದುಕೊಳ್ಳುವ ಅಥವಾ ತಮಗೆ ತಾವು ರಾಜ್ಯತಿಲಕವನ್ನು ಕೊಡುವುದಕ್ಕಾಗಿ ಯಾವ ಪುರುಷಾರ್ಥ ಮಾಡಬೇಕು?

ಉತ್ತರ:
ಯಾವಾಗ ನೆನಪಿನ ಯಾತ್ರೆಯ ಪುರುಷಾರ್ಥ ಮಾಡುತ್ತೀರಿ ಆಗ, ರಾಜ್ಯತಿಲಕ ಸಿಗುತ್ತದೆ. ಪರಸ್ಪರ ಸಹೋದರ-ಸಹೋದರ ಎನ್ನುವ ಅಭ್ಯಾಸ ಮಾಡಿ ಆಗ ನಾಮ-ರೂಪದ ಪರಿವೆಯು ಹೊರಟು ಹೋಗುತ್ತದೆ. ವ್ಯರ್ಥ ಮಾತುಗಳನ್ನೆಂದೂ ಕೇಳಬೇಡಿ. ತಂದೆಯು ಏನನ್ನು ತಿಳಿಸುವರೋ ಅದನ್ನೇ ಕೇಳಿ ಅನ್ಯ ಮಾತುಗಳಿಂದ ಕಿವಿಗಳನ್ನು ಮುಚ್ಚಿಕೊಳ್ಳಿ. ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಿ ಆಗ ಸ್ಕಾಲರ್ಶಿಪ್ ಸಿಗುತ್ತದೆ.

ಓಂ ಶಾಂತಿ.
ಮಕ್ಕಳಿಗೆ ತಿಳಿದಿದೆ - ನಾವು ಶ್ರೀಮತದನುಸಾರ ನಮಗಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಯಾರೆಷ್ಟು ಸರ್ವೀಸ್ ಮಾಡುತ್ತಾರೆ, ಮನಸಾ-ವಾಚಾ-ಕರ್ಮಣಾ ತಮ್ಮದೇ ಕಲ್ಯಾಣ ಮಾಡಿಕೊಳ್ಳುತ್ತಾರೆ. ಇದರಲ್ಲಿ ಏರುಪೇರಿನ ಮಾತಿಲ್ಲ. ಈ ಹಳೆಯ ದೇಹದ ಪರಿವೆಯನ್ನು ಬಿಡುತ್ತಾ-ಬಿಡುತ್ತಾ ನೀವು ಅಲ್ಲಿ ಹೋಗಿಬಿಡುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ ಬಹಳ ಖುಷಿಯೂ ಆಗುತ್ತದೆ, ಸದಾ ನೆನಪಿದ್ದಾಗ ಖುಷಿಯೇ ಖುಷಿ ಇರುತ್ತದೆ. ತಂದೆಯನ್ನು ಮರೆಯುವುದರಿಂದ ಬಾಡಿ ಹೋಗುತ್ತೀರಿ. ಮಕ್ಕಳು ಸದಾ ಹರ್ಷಿತರಾಗಿರಬೇಕು. ನಾವು ಆತ್ಮರಾಗಿದ್ದೇವೆ, ನಾವು ಆತ್ಮಗಳ ತಂದೆ ಈ ಮುಖದ (ಬ್ರಹ್ಮಾರವರ) ಮೂಲಕ ಮಾತನಾಡುತ್ತಾರೆ. ನಾವು ಆತ್ಮ ಈ ಕಿವಿಗಳ ಮೂಲಕ ಕೇಳುತ್ತೇವೆ. ಹೀಗೆ ತಮ್ಮ ಅಭ್ಯಾಸವನ್ನು ಮಾಡಿಕೊಳ್ಳಲು ಶ್ರಮಪಡಬೇಕಾಗುತ್ತದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ಈ ನೆನಪಿನ ಯಾತ್ರೆಯು ಬಹಳ ಶಕ್ತಿ ಕೊಡುತ್ತದೆ. ನಿಮಗೆ ಅಷ್ಟು ಶಕ್ತಿ ಸಿಗುತ್ತದೆ, ಅದರಿಂದ ನೀವು ವಿಶ್ವಕ್ಕೆ ಮಾಲೀಕರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನೀವು ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ವಿಕರ್ಮಗಳು ವಿನಾಶ ಆಗುತ್ತವೆ. ಈ ಮಾತನ್ನು ಪಕ್ಕಾ ಮಾಡಿಕೊಳ್ಳಬೇಕು. ಅಂತ್ಯದಲ್ಲಿ ಇದೇ ವಶೀಕರಣ ಮಂತ್ರವು ಕೆಲಸಕ್ಕೆ ಬರುತ್ತದೆ. ತಮ್ಮನ್ನು ಆತ್ಮನೆಂದು ತಿಳಿಯಿರಿ, ಈ ಶರೀರವು ವಿನಾಶಿಯಾಗಿದೆ, ತಂದೆಯ ಆದೇಶವಾಗಿದೆ - ನನ್ನನ್ನು ನೆನಪು ಮಾಡಿದರೆ ಪಾವನರಾಗಿಬಿಡುತ್ತೀರಿ, ಎನ್ನುವ ಇದೇ ಸಂದೇಶವನ್ನು ಎಲ್ಲರಿಗೆ ಕೊಡಬೇಕು. ನೀವು ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ಜೊತೆಯಲ್ಲಿ ಜ್ಞಾನವೂ ಇದೆ. ಏಕೆಂದರೆ ನೀವು ರಚಯಿತ ಮತ್ತು ರಚನೆಯನ್ನು, ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಂಡಿದ್ದೀರಿ. ಸ್ವಯಂ ಆತ್ಮದಲ್ಲಿ ಪೂರ್ಣ ಜ್ಞಾನವಿದೆ, ನೀವು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಲ್ಲವೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ ನಿಮ್ಮದು ಬಹಳ ಸಂಪಾದನೆಯಾಗುತ್ತಿದೆ. ದಿನ-ರಾತ್ರಿ ನಿಮ್ಮದು ಸಂಪಾದನೆಯೇ ಸಂಪಾದನೆಯಾಗಿದೆ. ನೀವು ಇಲ್ಲಿ ಸತ್ಯ ಸಂಪಾದನೆಯನ್ನು ಮಾಡುವುದಕ್ಕಾಗಿಯೇ ಬರುತ್ತಿದ್ದೀರಿ. ಜೊತೆಯಲ್ಲಿ ಬರುವಂತಹ ಸತ್ಯ ಸಾಂಪಾದನೆ ಮತ್ತೆಲ್ಲಿಯೂ ಇಲ್ಲ. ನಿಮಗೆ ಇಲ್ಲಿ ಮತ್ತ್ಯಾವುದೇ ವ್ಯವಹಾರವಂತೂ ಇಲ್ಲ. ವಾಯುಮಂಡಲವೂ ಹಾಗೆಯೇ ಇದೆ. ನೀವು ವಾಯುಮಂಡಲವನ್ನು ಶುದ್ದ ಮಾಡುತ್ತೀರಿ. ನೀವು ಬಹಳ ಸೇವೆ ಮಾಡುತ್ತಿದ್ದೀರಿ. ಯಾರು ತನ್ನ ಸೇವೆ ಮಾಡಿಕೊಳ್ಳುವರೋ ಅವರೇ ಭಾರತದ ಸೇವೆ ಮಾಡುತ್ತಾರೆ ಮತ್ತೆ ಈ ಹಳೆಯ ಪ್ರಪಂಚವೂ ಇರುವುದಿಲ್ಲ, ನೀವೂ ಇರುವುದಿಲ್ಲ, ಪ್ರಪಂಚವೇ ಹೊಸದಾಗಿ ಬಿಡುತ್ತದೆ. ನೀವು ಮಕ್ಕಳ ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ. ಯಾರು ಕಲ್ಪದ ಹಿಂದೆ ಸರ್ವೀಸ್ ಮಾಡಿದ್ದಾರೆಯೋ ಅವರೇ ಈಗ ಮಾಡುತ್ತಿರುತ್ತಾರೆ ಎಂದೂ ಸಹ ಗೊತ್ತಿದೆ. ದಿನ-ಪ್ರತಿದಿನ ಅನೇಕರನ್ನು ತನ್ನ ಸಮಾನ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ಜ್ಞಾನವನ್ನು ಕೇಳಿ ಬಹಳ ಖುಷಿ ಆಗುತ್ತದೆ. ರೋಮಾಂಚನವಾಗಿ ನಿಂತು ಬಿಡುತ್ತಾರೆ. ಈ ಜ್ಞಾನವಂತೂ ಎಂದೂ ಯಾರಿಂದಲೂ ಕೆಳಿಲ್ಲ. ನೀವು ಬ್ರಾಹ್ಮಣರಿಂದ ಕೇಳುತ್ತೇವೆ ಎಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಪರಿಶ್ರಮವೇನೂ ಇಲ್ಲ. ಇದರಲ್ಲಿ ಇಡೀ ಹಳೆಯ ಪ್ರಪಂಚವನ್ನು ಮರೆಯಲಾಗುತ್ತದೆ. ಈ ಬೇಹದ್ದಿನ ಸನ್ಯಾಸವನ್ನು ತಂದೆಯೇ ಮಾಡಿಸುತ್ತಾರೆ. ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಖುಷಿಯೂ ಸಹ ನಂಬರ್ವಾರ್ ಇರುತ್ತದೆ, ಒಂದೇ ರೀತಿ ಇರುವುದಿಲ್ಲ. ಜ್ಞಾನ-ಯೋಗವೂ ಒಂದೇ ರೀತಿ ಇರುವುದಿಲ್ಲ. ಮತ್ತೆಲ್ಲಾ ಮನುಷ್ಯರು ದೇಹಾಧಾರಿಗಳ ಬಳಿ ಹೋಗುತ್ತಾರೆ. ಇಲ್ಲಿ ತಾವು ಯಾರಿಗೆ ತನ್ನ ದೇಹವಿಲ್ಲವೋ ಅವರ ಬಳಿ ಬರುರಿತ್ತೀರಿ. ಎಷ್ಟು ನೆನಪಿನ ಪುರುಷಾರ್ಥ ಮಾಡುತ್ತಿರುತ್ತೀರಿ, ಅಷ್ಟು ಸತೋಪ್ರಧಾನರಾಗುತ್ತಾ ಹೋಗುತ್ತೀರಿ, ಖುಷಿಯು ಹೆಚ್ಚುತ್ತಾ ಇರುತ್ತದೆ. ಇದು ಆತ್ಮ ಮತ್ತು ಪರಮಾತ್ಮನ ಶುದ್ದ ಪ್ರೀತಿಯಾಗಿದೆ. ಅವರು ನಿರಾಕಾರನಾಗಿದ್ದಾರೆ. ಎಷ್ಟು ನಿಮ್ಮ ತುಕ್ಕು ಇಳಿಯುತ್ತಾ ಹೋಗುವುದು ಅಷ್ಟು ಆಕರ್ಷಣೆ ಆಗುತ್ತಾ ಹೋಗುವುದು. ನಾವು ಎಷ್ಟು ಖುಷಿಯಲ್ಲಿ ಇರುತ್ತೇವೆಂದು ತಾವು ತಮ್ಮ ಡಿಗ್ರಿಯನ್ನು ನೋಡಿಕೊಳ್ಳಬಹುದು. ಇದರಲ್ಲಿ ಆಸನಗಳು ಹಾಕುವ ಮಾತಿಲ್ಲ, ಇದು ಹಠಯೋಗವು ಅಲ್ಲ. ಆರಾಮಾಗಿ ಕುಳಿತು ತಂದೆಯನ್ನು ನೆನಪು ಮಾಡುತ್ತಾ ಇರಿ. ಮಲಗಿಕೊಂಡಾದರೂ ನೆನಪು ಮಾಡಬಹುದು. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ ಮತ್ತು ಪಾಪವು ತುಂಡಾಗುತ್ತಾ ಹೋಗುತ್ತದೆ. ಯಾವ ಬೇಹದ್ದಿನ ತಂದೆಯು ನಿಮ್ಮ ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ ಅವರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ಇದರಲ್ಲಿ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ನಾವು ತಂದೆಯ ನೆನಪಿನಲ್ಲಿ ಇದ್ದು ಭೋಜನವನ್ನು ಸ್ವೀಕರಿಸಿದ್ದೇವೆಯೇ ಎಂದು ನೋಡಿಕೊಳ್ಳಬೇಕು. ಪ್ರಿಯತಮೆಗೆ ಪ್ರಿಯತಮನು ಸಿಕ್ಕಿದ್ದಾರೆಂದರೆ ಖುಷಿ ಇರುತ್ತದೆಯಲ್ಲವೆ! ನೆನಪಿನಲ್ಲಿ ಇರುವುದರಿಂದ ನಿಮ್ಮದು ಬಹಳಷ್ಟು ಜಮಾ ಆಗುತ್ತಾ ಹೋಗುತ್ತದೆ. ಗುರಿಯು ಬಹಳ ಉನ್ನತವಾಗಿದೆ. ನೀವು ಹೇಗಿದ್ದವರು ಏನಾಗುತ್ತೀರಿ! ಮೊದಲು ಬುದ್ಧಿಹೀನರಾಗಿದ್ದಿರಿ, ಈಗ ಬುದ್ಧಿವಂತರಾಗಿದ್ದೀರಿ, ನಿಮ್ಮ ಗುರಿ ಧ್ಯೇಯವೂ ಎಷ್ಟು ಚೆನ್ನಾಗಿದೆ. ನಾವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಹಳೆಯ ಪೆÇರೆಯನ್ನು ಬಿಟ್ಟು ಹೋಗಿ ಹೊಸದನ್ನು ಪಡೆಯುತ್ತೇವೆ ಎಂದು ನಿಮಗೆ ತಿಳಿದಿದೆ. ಕರ್ಮಾತೀತ ಸ್ಥಿತಿ ಆಗುವುದರಿಂದ ಮತ್ತೆ ಈ ಪೆÇರೆಯನ್ನು ಬಿಟ್ಟುಬಿಡುತ್ತೇವೆ. ಸಮೀಪ ಬಂದಾಗ ಮನೆಯು ನೆನಪು ಬರುತ್ತದೆಯಲ್ಲವೇ. ತಂದೆಯ ಜ್ಞಾನವು ಬಹಳ ಮಧುರವಾಗಿದೆ. ಮಕ್ಕಳಿಗೆ ಎಷ್ಟೊಂದು ನೆನಪಿರಬೇಕು! ಸ್ವಯಂ ಭಗವಂತನು ಈ ರಥದಲ್ಲಿ ಕುಳಿತು ಓದಿಸುತ್ತಾರೆ. ಈಗ ನಿಮ್ಮದು ಏರುವ ಕಲೆಯಾಗಿದೆ. ಏರುವ ಕಲೆಯಿಂದ ಸರ್ವರ ಉದ್ಧಾರ ಆಗುತ್ತದೆ. ನೀವು ಯಾವುದೇ ಹೊಸ ಮಾತನ್ನು ಕೇಳುವುದಿಲ್ಲ ಏಕೆಂದರೆ, ನಿಮಗೆ ಗೊತ್ತಿದೆ - ನಾವು ಅನೇಕ ಬಾರಿ ಕೇಳಿದ್ದೇವೆ ಅದನ್ನೇ ಪುನಃ ಕೇಳುತ್ತಿದ್ದೇವೆ. ಹೇಳಿದಾಗ ಒಳಗಿಂದೊಳಗೆ ಗದ್ಗದಿತರಾಗುತ್ತಿರಿ. ನೀವು ಗುಪ್ತ ಸೈನಿಕರಾಗಿದ್ದೀರಿ ಮತ್ತು ಬಹಳ ಪ್ರಸಿದ್ಧರಾಗಿದ್ದೀರಿ. ನೀವು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ, ಆದ್ದರಿಂದಲೇ ದೇವಿಯರಿಗೆ ಇಷ್ಟೊಂದು ಪೂಜೆ ಆಗುತ್ತದೆ. ಮಾಡುವವರು ಮತ್ತು ಮಾಡಿಸುವವರು ಇಬ್ಬರ ಪೂಜೆಯೂ ಆಗುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಿ, ದೇವಿ-ದೇವತಾ ಧರ್ಮದ ಸಸಿಯು ನಾಟಿಯಾಗುತ್ತಿದೆ, ಈ ಪದ್ಧತಿಯು ಈಗ ಬಂದಿದೆ. ನೀವು ನಿಮಗೆ ತಿಲಕವನ್ನು ಇಟ್ಟುಕೊಳ್ಳುತ್ತೀರಿ. ಯಾರು ಚೆನ್ನಾಗಿ ಓದುತ್ತಾರೋ ಅವರು ತಮ್ಮನ್ನು ಸ್ಕಾಲರ್ಶಿಪ್ಗೆ (ವಿದ್ಯಾರ್ಥಿವೇತನಕ್ಕೆ) ಯೋಗ್ಯರನ್ನಾಗಿ ಮಾಡಿಕೊಳ್ಳುತ್ತಾರೆ. ಮಕ್ಕಳು ನೆನಪಿನ ಯಾತ್ರೆಯ ಬಹಳ ಪುರುಷಾರ್ಥ ಮಾಡಬೇಕು. ತಮ್ಮನ್ನು ಸಹೋದರ-ಸಹೋದರ ಎಂದು ತಿಳಿಯಿರಿ. ಇದರಿಂದ ನಾಮ-ರೂಪದ ಚಟ ಹೊರಟು ಹೋಗಲಿ, ಇದರಲ್ಲಿಯೇ ಶ್ರಮವಿದೆ. ಬಹಳ ಗಮನ ಕೊಡಬೇಕಾಗಿದೆ, ವ್ಯರ್ಥ ಮಾತುಗಳನ್ನು ಎಂದೂ ಕೇಳಬಾರದು. ನಾನು ಏನನ್ನು ತಿಳಿಸುತ್ತೇನೆಯೋ ಅದನ್ನು ಕೇಳಿ, ಅಲ್ಲ-ಸಲ್ಲದ ಮಾತುಗಳನ್ನು ಕೇಳಬೇಡಿ, ಕಿವಿಗಳನ್ನು ಮುಚ್ಚಿಕೊಳ್ಳಿ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರಿಗೆ ಶಾಂತಿಧಾಮ ಮತ್ತು ಸುಖಧಾಮದ ಮಾರ್ಗವನ್ನು ತಿಳಿಸುತ್ತಿರಿ. ಯಾರೆಷ್ಟು ಜನರಿಗೆ ಮಾರ್ಗವನ್ನು ತಿಳಿಸುತ್ತಾರೋ ಅಷ್ಟು ಅವರಿಗೆ ಲಾಭ ಸಿಗುತ್ತದೆ, ಸಂಪಾದನೆ ಆಗುತ್ತದೆ. ತಂದೆಯು ಎಲ್ಲರ ಶೃಂಗಾರ ಮಾಡಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಸದಾ ತಂದೆಯು ಮಕ್ಕಳ ಸಹಯೋಗಿ ಆಗಿರುತ್ತಾರೆ. ಯಾರು ತಂದೆಗೆ ಸಹಯೋಗಿಗಳಾಗಿದ್ದಾರೆಯೋ ಅವರನ್ನು ತಂದೆಯು ಪ್ರೀತಿಯಿಂದ ನೋಡುತ್ತಾರೆ. ಅವರಿಗೆ ತಂದೆಯ ನೆನಪಿನ ಆಕರ್ಷಣೆ ಆಗುತ್ತದೆ, ನೆನಪಿನಿಂದಲೇ ತುಕ್ಕು ಇಳಿಯುತ್ತಾ ಹೋಗುತ್ತದೆ. ತಂದೆಯನ್ನು ನೆನಪು ಮಾಡುವುದು ಎಂದರೆ ಮನೆಯನ್ನು ನೆನಪು ಮಾಡುವುದು. ಸದಾ ಬಾಬಾ-ಬಾಬಾ ಎನ್ನುತ್ತಾ ಇರಿ, ಇದು ಬ್ರಾಹ್ಮಣರ ಆತ್ಮಿಕ ಯಾತ್ರೆ ಆಗಿದೆ. ಪರಮಾತ್ಮನನ್ನು ನೆನಪು ಮಾಡುತ್ತಾ-ಮಾಡುತ್ತಾ ಮನೆಯನ್ನು ತಲುಪಿತ್ತೀರಿ. ಎಷ್ಟು ಆತ್ಮಾಭಿಮಾನಿಗಳಾಗುವ ಪುರುಷಾರ್ಥ ಮಾಡುತ್ತೀರೋ ಅಷ್ಟು ಕರ್ಮೇಂದ್ರಿಯಗಳು ವಶ ಆಗುತ್ತವೆ. ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳುವ ಒಂದೇ ಉಪಾಯವಾಗಿದೆ - ನೆನಪು. ನೀವು ಆತ್ಮಿಕ ಸ್ವದರ್ಶನಚಕ್ರಧಾರಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ. ನಿಮ್ಮದು ಸರ್ವೊತ್ತಮ ಶ್ರೇಷ್ಠ ಕುಲವಾಗಿದೆ. ಬ್ರಾಹ್ಮಣ ಕುಲವು ದೇವತಾ ಕುಲಕ್ಕಿಂತಲೂ ಶ್ರೇಷ್ಠವಾಗಿದೆ ಏಕೆಂದರೆ ನಿಮಗೆ ತಂದೆಯೇ ಓದಿಸುತ್ತಾರೆ. ನೀವು ತಂದೆಯಿಂದಲೇ ರಾಜ್ಯಪದವಿಯ ಆಸ್ತಿಯನ್ನು ಪಡೆಯಲು ತಂದೆಯ ಮಕ್ಕಳಾಗಿದ್ದೀರಿ. ತಂದೆ ಎಂದು ಹೇಳುವುದರಿಂದಲೇ ಆಸ್ತಿಯ ಸುವಾಸನೆಯು ಬರುತ್ತದೆ. ಶಿವನಿಗೆ ಸದಾ ಬಾಬಾ-ಬಾಬಾ ಎಂದು ಹೇಳುತ್ತಾರೆ. ಶಿವತಂದೆಯು ಸದ್ಗತಿದಾತನಾಗಿದ್ದಾರೆ. ಮತ್ತ್ಯಾರೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಸತ್ಯ ಸದ್ಗುರು ಒಬ್ಬರೇ ನಿರಾಕಾರನಾಗಿದ್ದಾರೆ. ಅವರು ಅರ್ಧಕಲ್ಪಕ್ಕಾಗಿ ರಾಜ್ಯವನ್ನು ಕೊಟ್ಟು ಹೋಗುತ್ತಾರೆ ಅಂದಮೇಲೆ ಮೂಲ ಮಾತಾಗಿದೆ - ನೆನಪು. ಅಂತ್ಯಕಾಲದಲ್ಲಿ ಯಾವುದೇ ಶರೀರದ ಪರಿವೆ ಅಥವಾ ಹಣ-ಅಂತಸ್ತು ನೆನಪಿಗೆ ಬರಬಾರದು. ಇಲ್ಲವೆಂದರೆ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಕ್ತಿಯಲ್ಲಿ ಕಾಶಿಗೆ ಹೋಗಿ ಬಲಿ ಆಗುತ್ತಾರೆ, ನೀವೂ ಸಹ ಬಲಿ ಆಗಿದ್ದೀರಿ ಅಥವಾ ತಂದೆಗೆ ಮಕ್ಕಳಾಗಿದ್ದೀರಿ. ಭಕ್ತಿ ಮಾರ್ಗದಲ್ಲಿಯೇ, ಕಾಶಿಯಲ್ಲಿ ಬಲಿಹಾರಿ ಆಗಿ ಎಲ್ಲಾ ಪಾಪಗಳು ತುಂಡಾದವು ಎಂದು ತಿಳಿಯುತ್ತಾರೆ ಆದರೆ, ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಯಾವಾಗ ಎಲ್ಲಾ ಆತ್ಮಗಳು ಮೇಲಿನಿಂದ ಬಂದು ಬಿಡುತ್ತಾರೋ ಆಗ ವಿನಾಶ ಆಗುತ್ತದೆ. ತಂದೆಯು ಹೋಗುತ್ತಾರೆ, ನೀವೂ ಹೋಗುತ್ತೀರಿ. ಬಾಕಿ ಪಾಂಡವರು ಪರ್ವತಗಳ ಮೇಲೆ ಕರಗಿಹೋದರು ಎಂದು ಹೇಳುತ್ತಾರೆ, ಅದು ಅಪಘಾತವಾದ ಹಾಗೆ! ಮಕ್ಕಳೇ, ನಾನು ಒಬ್ಬನೇ ಸರ್ವರ ಸದ್ಗತಿದಾತನಾಗಿದ್ದೇನೆ, ಯಾವುದೇ ದೇಹಧಾರಿಗಳು ನಿಮ್ಮ ಸದ್ಗತಿ ಮಾಡಲು ಸಾಧ್ಯವಿಲ್ಲ ಎಂದು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಭಕ್ತಿಯಿಂದ ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ. ಅಂತ್ಯದಲ್ಲಿ ತಂದೆಯು ಬಂದು ಜೋರಾಗಿ ಮೇಲೇರಿಸುತ್ತಾರೆ. ಇದಕ್ಕೆ ಆಕಸ್ಮಿಕ ಬೇಹದ್ದಿನ ಸುಖದ ಲಾಟರಿ ಸಿಗುವುದು ಎಂದು ಹೇಳಲಾಗುತ್ತದೆ. ಹೇಗೆ ಆ ಓಟದ ಸ್ಪರ್ಥೆ ಇರುತ್ತದೆ, ಇದು ಆತ್ಮಗಳ ಓಟವಾಗಿದೆ, ಆದರೆ ಮಾಯೆಯ ಕಾರಣ ಅಪಘಾತವಾಗಿಬಿಡುತ್ತದೆ ಅಥವಾ ವಿಚ್ಛೇದನವನ್ನು ಕೊಡುತ್ತಾರೆ. ಮಾಯೆಯು ಬುದ್ಧಿಯೋಗವನ್ನು ಕತ್ತರಿಸಿ ಹಾಕುತ್ತದೆ. ಕಾಮದಿಂದ ಸೋಲನ್ನು ಅನುಭವಿಸದರೆ ಮಾಡಿಕೊಂಡಿರುವ ಸಂಪಾದನೆಯು ನಷ್ಟವಾಗಿಬಿಡುತ್ತದೆ. ಕಾಮವು ಬಹಳ ದೊಡ್ಡ ಭೂತವಾಗಿದೆ, ಕಾಮದ ಮೇಲೆ ಜಯಗಳಿಸಿದರೆ ಜಗತ್ಜೀತರಾಗುತ್ತೀರಿ, ಲಕ್ಷ್ಮೀ-ನಾರಾಯಣರು ಜಗತ್ಜೀತರಾಗಿದ್ದರು. ಈ ಅಂತಿಮ ಜನ್ಮ ಅವಶ್ಯವಾಗಿ ಪವಿತ್ರವಾಗಬೇಕಾಗಿದೆ, ಆಗ ಜಯವಾಗುತ್ತದೆ, ಇಲ್ಲವೆಂದರೆ ಸೋಲನ್ನು ಅನುಭವಿಸುತ್ತೀರಿ ಎಂದು ತಂದೆಯು ಹೇಳುತ್ತಾರೆ. ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಅಮರಲೋಕದ 21 ಜನ್ಮಗಳು ಮತ್ತು ಮೃತ್ಯುಲೋಕದ 63 ಜನ್ಮಗಳ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಈಗ ತಮ್ಮ ಮನಸ್ಸಿನೊಂದಿಗೆ ಕೇಳಿಕೊಳ್ಳಿ - ನಾವು ಲಕ್ಷ್ಮೀ-ನಾರಾಯಣರಾಗಲು ಯೋಗ್ಯರಾಗಿದ್ದೇವೆಯೇ? ನಾವು ಎಷ್ಟು ಧಾರಣೆ ಮಾಡುತ್ತೇವೆಯೋ ಅಷ್ಟು ಖುಷಿ ಇರುತ್ತದೆ ಆದರೆ, ಅದೃಷ್ಟದಲ್ಲಿ ಇಲ್ಲವೆಂದರೆ ಮಾಯೆಯು ಬಿಡುವುದಿಲ್ಲ.

ಈ ಮಧುಬನದ ಪ್ರಭಾವವು ದಿನ ಪ್ರತಿದಿನ ಹೆಚ್ಚಾಗುತ್ತಿರುತ್ತದೆ. ಮುಖ್ಯ ಬ್ಯಾಟರಿಯು ಇಲ್ಲಿ ಇದೆ. ಯಾರು ಸೇವಾಧಾರಿ ಮಕ್ಕಳಿದ್ದಾರೆಯೋ ಅವರು ತಂದೆಗೆ ಬಹಳ ಪ್ರಿಯವಾಗುತ್ತಾರೆ. ಒಳ್ಳೆಯ ಸೇವಾಧಾರಿ ಮಕ್ಕಳನ್ನು ತಂದೆಯು ಆರಿಸಿ-ಆರಿಸಿ ಸಕಾಶ ಕೊಡುತ್ತಾರೆ. ಅವರೂ ಸಹ ಅವಶ್ಯವಾಗಿ ತಂದೆಯನ್ನು ನೆನಪು ಮಾಡುತ್ತಾರೆ. ಸೇವಾಧಾರಿ ಮಕ್ಕಳನ್ನು ತಂದೆ ಮತ್ತು ದಾದಾ ಇಬ್ಬರೂ ನೆನಪು ಮಾಡುತ್ತಾರೆ, ಸಕಾಶವನ್ನು ಕೊಡುತ್ತಾರೆ. ಪ್ರೀತಿ ಕೊಟ್ಟರೆ ಪ್ರೀತಿ ಸಿಗುವುದು. ನೆನಪು ಮಾಡುವುದರಿಂದ ನೆನಪಿನ ಪ್ರತ್ಯುತ್ತರ ಸಿಗುತ್ತದೆ. ಒಂದುಕಡೆ ಇಡೀ ಪ್ರಪಂಚ ಇದೆ, ಇನ್ನೊಂದು ಕಡೆ ನೀವು ಸತ್ಯ ಬ್ರಾಹ್ಮಣರಿದ್ದೀರಿ. ನೀವು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೀರಿ. ಆ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ. ಈ ನಿಮ್ಮ ದಿವ್ಯ ಜನ್ಮವೇ ವಜ್ರ ಸಮಾನವಾಗಿದೆ, ನಮ್ಮನ್ನು ಕವಡೆಯಿಂದ ವಜ್ರ ಸಮಾನ ಅವರೇ ಮಾಡುತ್ತಾರೆ. ಅರ್ಧಕಲ್ಪಕ್ಕಾಗಿ ಇಷ್ಟು ಸುಖವನ್ನು ಕೊಡುತ್ತಾರೆ ಮತ್ತೆ ಅವರನ್ನು ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ ನಿಮಗೆ ಬಹಳಷ್ಟು ಹಣವನ್ನು ಕೊಡುತ್ತೇನೆ, ನೀವು ಎಲ್ಲವನ್ನು ಕಳೆದುಕೊಂಡು ಕುಳಿತಿದ್ದೀರಿ. ಎಷ್ಟೊಂದು ವಜ್ರ, ರತ್ನಗಳನ್ನು ನನ್ನದೇ ಮಂದಿರದಲ್ಲಿ ತೊಡಗಿಸುತ್ತೀರಿ. ಈಗ ವಜ್ರದ ಬೆಲೆ ನೋಡಿ ಎಷ್ಟಿದೆ? ಹಿಂದೆ ವಜ್ರಗಳನ್ನು ತೂಕಕ್ಕಿಂತ ಹೆಚ್ಚಿಗೆ ಹಾಕುತ್ತಿದ್ದರು, ಈಗಂತೂ ತರಕಾರಿಯೂ ಸಹ ಹೆಚ್ಚಿಗೆ ಕೊಡುವುದಿಲ್ಲ. ನಿಮಗೆ ಗೊತ್ತಿದೆ - ಹೇಗೆ ರಾಜ್ಯವನ್ನು ಪಡೆದೆವು, ಹೇಗೆ ಕಳೆದುಕೊಂಡೆವು. ಈಗ ಮತ್ತೆ ಪಡೆಯುತ್ತಿದ್ದೇವೆ. ಈ ಜ್ಞಾನವು ಬಹಳ ವಿಚಿತ್ರವಾಗಿದೆ. ಇದು ಕೆಲವರ ಬುದ್ಧಿಯಲ್ಲಿ ಶ್ರಮದಿಂದ ಕುಳಿತುಕೊಳ್ಳುತ್ತದೆ. ರಾಜ್ಯಭಾಗ್ಯವನ್ನು ಪಡೆಯಬೇಕೆಂದರೆ ಅವಶ್ಯವಾಗಿ ಶ್ರೀಮತದಂತೆ ನಡೆಯಬೇಕಾಗಿದೆ. ತಮ್ಮ ಮತವೂ ಕೆಲಸಕ್ಕೆ ಬರುವುದಿಲ್ಲ. ಜೀವಿಸಿದ್ದಂತೆಯೇ ವಾನಪ್ರಸ್ಥದಲ್ಲಿ ಹೋಗಬೇಕಾಗಿದೆ, ಆದ್ದರಿಂದ ಎಲ್ಲವನ್ನು ಇವರಿಗೆ ಕೊಡಬೇಕಾಗುತ್ತದೆ, ವಾರಸುಧಾರರನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಭಕ್ತಿ ಮಾರ್ಗದಲ್ಲಿಯೂ ವಾರಸುಧಾರರನ್ನು ಮಾಡಿಕೊಳ್ಳುತ್ತಾರೆ, ದಾನ ಮಾಡುತ್ತಾರೆ. ಆದರೆ, ಅಲ್ಪಕಾಲಕ್ಕಾಗಿ. ಇಲ್ಲಂತೂ ಇವರನ್ನು ಜನ್ಮ-ಜನ್ಮಾಂತರಕ್ಕಾಗಿ ವಾರಸುಧಾರರನ್ನಾಗಿ ಮಾಡಿಕೊಳ್ಳಲಾಗುತ್ತದೆ. ಫಾಲೋ ಫಾದರ್ ಎಂಬ ಗಾಯನವೂ ಇದೆ. ಯಾರು ತಂದೆಯನ್ನು ಅನುಸರಿಸುತ್ತಾರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಬೇಹದ್ದಿನ ತಂದೆಯ ಮಕ್ಕಳಾಗುವುದರಿಂದಲೇ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಾರೆ. ಶಿವತಂದೆಯಂತೂ ದಾತನಾಗಿದ್ದಾರೆ, ಈ ಭಂಡಾರವು ಅವರದಾಗಿದೆ. ಈಶ್ವರಾರ್ಥವಾಗಿ ಏನು ದಾನ ಮಾಡುತ್ತಾರೋ ಅದಕ್ಕೆ ಇನ್ನೊಂದು ಜನ್ಮದಲ್ಲಿ ಅಲ್ಪಕಾಲದ ಸುಖ ಸಿಗುತ್ತದೆ. ಅದು ಪರೋಕ್ಷವಾಯಿತು. ಇದು ಪ್ರತ್ಯಕ್ಷವಾಗಿದೆ. ಶಿವತಂದೆಯು 21 ಜನ್ಮಗಳಿಗಾಗಿ ಕೊಡುತ್ತಾರೆ. ನಾವು ಶಿವತಂದೆಗೆ ಕೊಡುತ್ತೇವೆ ಎಂದು ಯಾರ ಬುದ್ಧಿಯಲ್ಲಿಯಾದರೂ ಬಂದರೆ, ಅದು ಅಗೌರವವಾಗಿದೆ. ಪಡೆಯುವುದಕ್ಕಾಗಿ ಕೊಡುತ್ತೇವೆ. ಇದು ತಂದೆಯ ಭಂಡಾರವಾಗಿದೆ. ಕಾಲಕಂಠಕಗಳು ದೂರ ಆಗಿಬಿಡುತ್ತವೆ ಅಮರಲೋಕಕ್ಕಾಗಿ ಮಕ್ಕಳು ಓದುತ್ತಾರೆ. ಇದು ಮುಳ್ಳುಗಳ ಕಾಡಾಗಿದೆ ತಂದೆ ಹೂದೋಟದಲ್ಲಿ ಕರೆದುಕೊಂಡು ಹೋಗುತ್ತಾರೆ. ಅಂದಮೇಲೆ ಮಕ್ಕಳಿಗೆ ಬಹಳ ಖುಷಿ ಇರಬೇಕು. ದೈವೀ ಗುಣಗಳನ್ನು ಧಾರಣೆ ಮಾಡಬೇಕು, ತಂದೆಯು ಎಷ್ಟು ಪ್ರೀತಿಯಿಂದ ಹೂಗಳನ್ನಾಗಿ ಮಾಡುತ್ತಾರೆ. ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಾರೆ - ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಲು ಬಯಸಿದರೆ ದೈವೀ ಗುಣಗಳನ್ನು ಧಾರಣೆ ಮಾಡಿ ಮತ್ತು ಯಾರ ಅವಗುಣಗಳನ್ನೂ ನೋಡಬೇಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೇಹದ್ದಿನ ತಂದೆಯಿಂದ ಸಕಾಶವನ್ನು ಪಡೆಯಲು ಅವರ ಸಹಯೋಗಿಗಳಾಗಬೇಕು. ಮುಖ್ಯ ಬ್ಯಾಟರಿಯೊಂದಿಗೆ ತಮ್ಮ ಸಂಬಂಧವನ್ನು ಜೋಡಿಸಬೇಕು. ಯಾವುದೇ ಮಾತಿನಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು.

2. ಸತ್ಯ ಸಂಪಾದನೆ ಮಾಡಲು ಹಾಗೂ ಭಾರತದ ಸತ್ಯ ಸೇವೆ ಮಾಡಲು ಒಬ್ಬ ತಂದೆಯ ನೆನಪಿನಲ್ಲಿ ಇರಬೇಕು ಏಕೆಂದರೆ, ನೆನಪಿನಿಂದ ವಾಯುಮಂಡಲವು ಶುದ್ಧವಾಗುತ್ತದೆ, ಆತ್ಮವು ಸತೋಪ್ರಧಾನವಾಗುತ್ತದೆ. ಅಪಾರ ಖುಷಿಯ ಅನುಭವವಾಗುತ್ತದೆ, ಕರ್ಮೇಂದ್ರಿಯಗಳು ವಶ ಆಗುತ್ತವೆ.

ವರದಾನ:
ಸ್ವ-ಪರಿವರ್ತನೆಯಿಂದ ವಿಶ್ವ ಪರಿವರ್ತನೆಯ ಸಫಲತೆಯನ್ನು ಪ್ರಾಪ್ತಿಮಾಡಿಕೊಳ್ಳುವಂತಹ ಸಿದ್ಧಿ ಸ್ವರೂಪ ಭವ

ಪ್ರತಿಯೊಬ್ಬರೂ ಸ್ವ ಪರಿವರ್ತನೆಯ ಮೂಲಕ ವಿಶ್ವ ಪರಿವರ್ತನೆ ಮಾಡುವಂತಹ ಸೇವೆಯಲ್ಲಿ ತೊಡಗಿರುವರು. ಎಲ್ಲರ ಮನಸ್ಸಿನಲ್ಲಿ ಇದೇ ಉಮಂಗ-ಉತ್ಸಾಹವಿದೆ ಈ ವಿಶ್ವವನ್ನು ಪರಿವರ್ತನೆ ಮಾಡಲೇ ಬೇಕು ಮತ್ತು ನಿಶ್ಚಯವೂ ಸಹ ಇದೆ ಪರಿವರ್ತನೆ ಆಗಲೇ ಬೇಕು. ಎಲ್ಲಿ ಸಾಹಸವಿದೆ ಅಲ್ಲಿ ಉಮಂಗ-ಉತ್ಸಾಹ ವಿರುತ್ತದೆ. ಸ್ವ ಪರಿವರ್ತನೆಯಿಂದಲೇ ವಿಶ್ವ ಪರಿವರ್ತನೆಯ ಕಾರ್ಯದಲ್ಲಿ ಮನಸ್ಸಿಗೆ ಇಚ್ಛಿಸಿದಂತಹ ಸಫಲತೆ ಪ್ರಾಪ್ತಿಯಾಗುವುದು ಆದರೆ ಈ ಸಫಲತೆ ಯಾವಾಗ ಸಿಗುವುದೆಂದರೆ ಯಾವಾಗ ಒಂದೇ ಸಮಯದಲ್ಲಿ ವೃತ್ತಿ, ವೈಬ್ರೇಷನ್ ಮತ್ತು ವಾಣಿ ಮೂರೂ ಶಕ್ತಿಶಾಲಿಯಾಗಿದ್ದಾಗ.

ಸ್ಲೋಗನ್:
ಯಾವಾಗ ಮಾತಿನಲ್ಲಿ ಸ್ನೇಹ ಮತ್ತು ಸಂಯಮವಿರುತ್ತೆ ಆಗ ವಾಣಿಯ ಶಕ್ತಿ ಜಮಾ ಆಗುವುದು.