01.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ಯಾರಾಗಿದ್ದಾರೆ, ಹೇಗಿದ್ದಾರೆಯೋ ಅದೇ ರೀತಿ ನೀವು ಮಕ್ಕಳಲ್ಲಿಯೂ ನಂಬರ್ವಾರ್ ಅರಿತುಕೊಂಡಿದ್ದಾರೆ,
ಒಂದುವೇಳೆ ಎಲ್ಲರೂ ಅರಿತುಕೊಂಡರೆ ಇಲ್ಲಿ ಬಹಳ ಜನಸಂದಣಿ ಆಗಿ ಬಿಡುವುದು”.
ಪ್ರಶ್ನೆ:
ನಾಲ್ಕೂ ಕಡೆಯು
ಪ್ರತ್ಯಕ್ಷತೆಯ ನಗಾರಿಯು ಯಾವಾಗ ಮೊಳಗುತ್ತದೆ?
ಉತ್ತರ:
1. ಸ್ವಯಂ
ಭಗವಂತನೇ ಬಂದು ಹಳೆಯ ಪ್ರಪಂಚವನ್ನು ವಿನಾಶ ಮಾಡಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ
ಎಂದು ಮನುಷ್ಯರಿಗೆ ಗೊತ್ತಾದಾಗ ನಗಾರಿಯು ಮೊಳಗುತ್ತದೆ. 2. ನಮ್ಮೆಲ್ಲರ ಸದ್ಗತಿ ಮಾಡುವ ತಂದೆಯು
ಭಕ್ತಿಯ ಫಲವನ್ನು ಕೊಡಲು ಬಂದಿದ್ದಾರೆ, ಇದರ ನಿಶ್ಚಯವಾದಾಗ ಪ್ರತ್ಯಕ್ಷತೆಯಾಗುತ್ತದೆ. ನಾಲ್ಕಾರು
ಕಡೆ ಹಂಗಾಮಗಳುಂಟಾಗುತ್ತದೆ.
ಗೀತೆ:
ಯಾರು ಪ್ರಿಯತಮನ
ಜೊತೆಯಿದ್ದಾರೆಯೋ...............
ಓಂ ಶಾಂತಿ.
ಮಕ್ಕಳು ಗೀತೆಯ ಎರಡು ಸಾಲುಗಳನ್ನು ಕೇಳಿದಿರಲ್ಲವೆ. ಯಾರು ಪ್ರಿಯತಮನ ಜೊತೆಯಲ್ಲಿದ್ದಾರೆ.... ಈಗ
ಪ್ರಿಯತಮ ಯಾರು ಎಂಬುದು ಈ ಪ್ರಪಂಚದವರಿಗೆ ತಿಳಿದಿಲ್ಲ. ಭಲೆ ಬಹಳ ಮಂದಿ ಮಕ್ಕಳಿದ್ದಾರೆ ಅವರಲ್ಲಿಯೂ
ಬಹಳ ಮಂದಿ ಮಕ್ಕಳಿಗೆ ತಂದೆಯನ್ನು ನೆನಪು ಮಾಡುವುದು ಹೇಗೆಂದು ತಿಳಿದೇ ಇಲ್ಲ, ಗಳಿಗೆ-ಗಳಿಗೆಗೂ
ಮರೆತು ಹೋಗುತ್ತಾರೆ. ನಿಮ್ಮನ್ನು ನೀವು ಆತ್ಮ ಬಿಂದುವೆಂದು ತಿಳಿದುಕೊಳ್ಳಿ, ತಂದೆಯು ಜ್ಞಾನ
ಸಾಗರನಾಗಿದ್ದಾರೆ, ಅವರನ್ನು ನೆನಪು ಮಾಡಬೇಕಾಗಿದೆ. ನೆನಪು ಮಾಡವಂತಹ ಅಭ್ಯಾಸವು ಹೀಗಿರಬೇಕು, ಅದು
ನಿರಂತರವಾಗಿ ನೆನಪು ಉಳಿದು ಬಿಡಬೇಕು. ಅಂತ್ಯದಲ್ಲಿ ನಾವು ಆತ್ಮ, ಶರೀರವಂತೂ ಇದೆ ಆದರೆ
ಬುದ್ಧಿಯಲ್ಲಿ ನಾನಾತ್ಮನು ಎನ್ನುವ ಜ್ಞಾನವಿರಬೇಕಾಗಿದೆ. ತಂದೆಯ ಡೈರೆಕ್ಷನ್ ಸಿಕ್ಕಿದೆ - ನಾನು
ಹೇಗಿದ್ದೇನೆಯೋ ಅದೇರೀತಿ ಕೆಲವರು ನೆನಪು ಮಾಡುತ್ತಾರೆ. ದೇಹಾಭಿಮಾನದಲ್ಲಿರುವ ಮಕ್ಕಳು ಬಹಳ ಮಂದಿ
ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೂ ತಂದೆಯ ಪರಿಚಯ ಸಿಗುವುದಿಲ್ಲವೋ
ಅಲ್ಲಿಯವರೆಗೆ ಏನೂ ಅರ್ಥವಾಗುವುದಿಲ್ಲ. ಮೊದಲು ನಿರಾಕಾರನು ನಮ್ಮ ತಂದೆಯಾಗಿದ್ದಾರೆ, ಗೀತೆಯ
ಭಗವಂತನಾಗಿದ್ದಾನೆ. ಅವರೇ ಎಲ್ಲರ ಸರ್ವರ ಸದ್ಗತಿದಾತನಾಗಿದ್ದಾರೆ ಅಂದಾಗ ಈ ಸಮಯದಲ್ಲಿ ಎಲ್ಲರಿಗೂ
ಸದ್ಗತಿ ಕೊಡುವ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಈ ಮಾತುಗಳು ಬುದ್ಧಿಯಲ್ಲಿ, ನಿಶ್ಚಯವಾದರೆ
ಎಲ್ಲಾ ಸಾಧು-ಸಂತರು ಒಂದೇ ಸೆಕೆಂಡಿನಲ್ಲಿ ಬಂದು ಬಿಡುತ್ತದೆ, ಭಾರತದಲ್ಲಿ ದೊಡ್ಡ ಹಂಗಾಮ
ಉಂಟಾಗುತ್ತದೆ. ಈಗ ಈ ಪ್ರಪಂಚವು ವಿನಾಶವಾಗಲಿದೆ, ಈ ಮಾತಿನ ನಿಶ್ಚಯವಾದರೆ ಬಾಂಬೆಯಿಂದ
ಅಬುವಿನವರೆಗೆ ಸಾಲು ನಿಲ್ಲುತ್ತದೆ ಆದರೆ ಇಷ್ಟು ಬೇಗನೆ ನಿಶ್ಚಯವಾಗಲು ಸಾಧ್ಯವಿಲ್ಲ.
ವಿನಾಶವಾಗಲಿದೆ ಆದರೆ ಎಲ್ಲರೂ ಘೋರ ನಿದ್ರೆಯಲ್ಲಿದ್ದಾರೆ ಎಂದು ನೀವು ತಿಳಿದಿದ್ದೀರಿ ನಂತರ
ಅಂತ್ಯದಲ್ಲಿ ನಿಮ್ಮ ಪ್ರಭಾವ ಬೀರುವುದು. ಗೀತೆಯ ಭಗವಂತ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ ಎಂದು
ನಿಶ್ಚಯವಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಇದು ಪ್ರಸಿದ್ಧವಾದಾಗ ಇಡೀ ಪ್ರಪಂಚದಲ್ಲಿ ಎಲ್ಲರಿಗೂ
ತಿಳಿದು ಬಿಡುತ್ತದೆ. ಈಗ ನೀವು ಒಬ್ಬರಿಗೆ ತಿಳಿಸಿದರೆ ಇನ್ನೊಬ್ಬರು ನಿಮಗೆ ಜಾದು ಹಿಡಿದಿದೆ ಎಂದು
ಹೇಳುತ್ತಾರೆ. ಈ ವೃಕ್ಷವು ಬಹಳ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ಈಗ ಸ್ವಲ್ಪ ಸಮಯವಿದೆ,
ಆದರೂ ಪುರುಷಾರ್ಥ ಮಾಡುವುದಕ್ಕೆ ಅಡ್ಡಿಯಿಲ್ಲ. ನೀವು ದೊಡ್ಡ-ದೊಡ್ಡ ವ್ಯಕ್ತಿಗಳಿಗೆ
ತಿಳಿಸುತ್ತೀರೆಂದರೆ ಅವರು ತಿಳಿಯುತ್ತಾರೆಯೇ! ಮಕ್ಕಳಲ್ಲಿಯೂ ಸಹ ಈ ಜ್ಞಾನವು ಕೆಲವರಲ್ಲಿ ಇಲ್ಲ.
ತಂದೆಯ ನೆನಪಿರುವುದಿಲ್ಲ ಎಂದರೆ ಈ ಸ್ಥಿತಿಯು ಇರುವುದಿಲ್ಲ. ನಿಶ್ಚಯವೆಂದರೆ ಏನು ಎಂಬುದನ್ನು
ತಂದೆಯು ತಿಳಿಸುತ್ತಾರೆ. ಈಗ ಕೆಲವರು 1-2% ಮಾತ್ರವೇ ಬಹಳ ಕಷ್ಟಪಟ್ಟು ತಂದೆಯನ್ನು ನೆನಪು
ಮಾಡುತ್ತಾರೆ. ಇಲ್ಲಿ ಕುಳಿತಿದ್ದರೂ ಸಹ ತಂದೆಯ ಜೊತೆ ಪ್ರೀತಿಯೇ ಇರುವುದಿಲ್ಲ. ಇದರಲ್ಲಿ ಪ್ರೀತಿಯೂ
ಬೇಕು, ಅದೃಷ್ಟವೂ ಬೇಕು. ತಂದೆಯೊಂದಿಗೆ ಪ್ರೀತಿಯಿದ್ದಾಗ ನಾವು ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ
ನಡೆಯಬೇಕು. ನಾವು ವಿಶ್ವದ ಮಾಲೀಕರಾಗುತ್ತೇವೆ ಎಂಬುದನ್ನು ತಿಳಿದುಕೊಳ್ಳವರು. ಅರ್ಧಕಲ್ಪದ
ದೇಹಾಭಿಮಾನವು ಕುಳಿತಿದೆ ಆದ್ದರಿಂದ ಈಗ ದೇಹೀ-ಅಭಿಮಾನಿಗಳಾಗುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ.
ತಮ್ಮನ್ನು ಆತ್ಮನೆಂದು ತಿಳಿದು ಅತಿಪ್ರಿಯ ತಂದೆಯನ್ನು ನೆನಪು ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ.
ಅವರ ಚಹರೆಯಲ್ಲಿಯೇ ಕಾಂತಿಯು ಬಂದು ಬಿಡುವುದು. ಕನ್ಯೆಯು ವಿವಾಹ ಮಾಡಿಕೊಳ್ಳುವಾಗ ಆಭರಣಗಳನ್ನು
ಧರಿಸುತ್ತಾಳೆ ಆಗ ಚಹರೆಯಲ್ಲಿ ಒಮ್ಮೆಲೆ ಖುಷಿಯು ಬಂದುಬಿಡುತ್ತದೆ ಆದರೆ ಇಲ್ಲಂತೂ ಪ್ರಿಯತಮನನ್ನು
ನೆನಪೇ ಮಾಡುವುದಿಲ್ಲ ಆದ್ದರಿಂದ ಚಹರೆಯು ಬಾಡಿಹೋಗಿರುತ್ತದೆ. ಅದರ ಮಾತೇ ಕೇಳಬೇಡಿ! ಕನ್ಯೆಯು
ವಿವಾಹವಾಗುವಾಗ ಚಹರೆಯು ಪ್ರಸನ್ನಚಿತ್ತವಾಗಿ ಬಿಡುತ್ತದೆ. ಕೆಲವರಿಗೆ ವಿವಾಹದ ನಂತರವೂ ಸಹ ಚಹರೆಯು
ಬಾಡಿ ಹೋಗಿರುತ್ತದೆ. ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ಕೆಲವರಂತೂ ಇನ್ನೊಂದು ಮನೆಗೆ ಹೋಗಿ
ತಬ್ಬಿಬ್ಬಾಗುತ್ತಾರೆ ಅಂದಾಗ ಇಲ್ಲಿಯೂ ಹಾಗೆಯೇ ತಂದೆಯನ್ನು ನೆನಪು ಮಾಡುವ ಪರಿಶ್ರಮವಿದೆ.
ಅತೀಂದ್ರಿಯ ಸುಖವನ್ನು ಗೋಪಿವಲ್ಲಭನ ಗೋಪ-ಗೋಪಿಕೆಯರೊಂದಿಗೆ ಕೇಳಿ ಎಂಬುದು ಅಂತಿಮದ ಗಾಯನವಾಗಿದೆ.
ತಮ್ಮನ್ನು ಗೋಪ-ಗೋಪಿಕೆಯರೆಂದು ತಿಳಿದುಕೊಳ್ಳುವುದು ಮತ್ತು ನಿರಂತರ ತಂದೆಯನ್ನು ನೆನಪು ಮಾಡುವುದು
- ಈ ಸ್ಥಿತಿಯು ಬರಬೇಕಾಗಿದೆ. ತಂದೆಯ ಪರಿಚಯವನ್ನು ಎಲ್ಲರಿಗೆ ಕೊಡಬೇಕಾಗಿದೆ - ತಂದೆಯು
ಬಂದಿದ್ದಾರೆ, ಅವರು ಆಸ್ತಿಯನ್ನು ಕೊಡುತ್ತಿದ್ದಾರೆ. ಇದರಲ್ಲಿ ಇಡೀ ಜ್ಞಾನವು ಬಂದು ಬಿಡುತ್ತದೆ.
ಲಕ್ಷ್ಮೀ-ನಾರಾಯಣರು ಯಾವಾಗ 84 ಜನ್ಮಗಳನ್ನು ಪೂರ್ಣ ಮಾಡಿದರೋ ಆಗ ತಂದೆಯು ಅಂತಿಮದಲ್ಲಿ ಬಂದು
ಅವರಿಗೆ ರಾಜಯೋಗವನ್ನು ಕಲಿಸಿ ರಾಜ್ಯಭಾಗ್ಯವನ್ನು ಕೊಟ್ಟರು. ಈ ಲಕ್ಷ್ಮೀ-ನಾರಾಯಣರ ಚಿತ್ರವು
ನಂಬರ್ವನ್ ಆಗಿದೆ. ನೀವು ತಿಳಿದುಕೊಂಡಿದ್ದೀರಿ - ಅವರ ಮೊದಲ ಜನ್ಮದಲ್ಲಿ ಇಂತಹ ಕರ್ಮ ಮಾಡಿದ್ದಾರೆ,
ಅಂತಹ ಕರ್ಮವನ್ನು ಈಗ ತಂದೆಯು ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ.
ಪವಿತ್ರರಾಗಿರಿ. ಯಾವುದೇ ಪಾಪ ಮಾಡಬೇಡಿ ಏಕೆಂದರೆ ನೀವೀಗ ಸ್ವರ್ಗದ ಮಾಲೀಕರು
ಪುಣ್ಯಾತ್ಮರಾಗುತ್ತೀರಿ. ಅರ್ಧಕಲ್ಪ ಮಾಯಾ ರಾವಣನು ಪಾಪ ಮಾಡಿಸುತ್ತಾ ಬಂದಿದ್ದಾನೆ. ಈಗ
ತಮ್ಮೊಂದಿಗೆ ಕೇಳಿಕೊಳ್ಳಿ - ನನ್ನಿಂದ ಯಾವುದೇ ಪಾಪ ಆಗುತ್ತಿಲ್ಲವೆ? ಪುಣ್ಯದ ಕರ್ಮವನ್ನು
ಮಾಡುತ್ತಾ ಇರುತ್ತೇವೆಯೇ? ಅಂಧರಿಗೆ ಊರುಗೋಲಾಗಿದ್ದೇನೆಯೇ? ತಂದೆಯು ತಿಳಿಸುತ್ತಾರೆ - ಮನ್ಮನಾಭವ.
ಇದನ್ನೂ ಸಹ ಕೇಳಲಾಗುತ್ತದೆ - ಮನ್ಮನಾಭವ ಎಂಬುದನ್ನು ಯಾರು ಹೇಳಿದರು? ಕೃಷ್ಣನು ಹೇಳಿದನೆಂದು ಅವರು
ಹೇಳುತ್ತಾರೆ. ಪರಮಪಿತ ಪರಮಾತ್ಮ ಶಿವನು ಹೇಳಿದರೆಂದು ನೀವು ಒಪ್ಪುತ್ತೀರಿ. ರಾತ್ರಿ-ಹಗಲಿನ
ಅಂತರವಿದೆ. ಶಿವ ಜಯಂತಿಯ ಜೊತೆ ಗೀತಾ ಜಯಂತಿಯಾಗುತ್ತದೆ. ಗೀತಾ ಜಯಂತಿಯ ಜೊತೆ ಕೃಷ್ಣ ಜಯಂತಿ.
ನೀವು
ತಿಳಿದುಕೊಂಡಿದ್ದೀರಿ - ನಾವು ಭವಿಷ್ಯದಲ್ಲಿ ರಾಜಕುಮಾರರಾಗುತ್ತೇವೆ. ಭಿಕಾರಿಗಳಿಂದ
ರಾಜಕುಮಾರರಾಗಬೇಕಾಗಿದೆ. ಈ ಗುರಿ-ಧ್ಯೇಯವೇ ರಾಜಯೋಗದ್ದಾಗಿದೆ. ನೀವು ಇದನ್ನು ಸಿದ್ಧ ಮಾಡಿ ತಿಳಿಸಿ
- ಗೀತೆಯ ಭಗವಂತನು ಶ್ರೀಕೃಷ್ಣನಾಗಿರಲಿಲ್ಲ, ಅವರು ನಿರಾಕಾರನಾಗಿದ್ದರು, ಆಗ ಸರ್ವವ್ಯಾಪಿಯೆಂಬ
ಜ್ಞಾನವು ಹೊರಟು ಹೋಗುವುದು. ಸರ್ವರ ಸದ್ಗತಿದಾತ, ಪತಿತ-ಪಾವನನು ತಂದೆಯಾಗಿದ್ದಾರೆ,
ಮುಕ್ತಿದಾತನೆಂದು ಹೇಳುತ್ತಾರೆ. ಮತ್ತೆ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಏನೆಲ್ಲವನ್ನೂ
ಹೇಳುತ್ತಾರೆಯೋ ಅದನ್ನು ತಿಳಿದುಕೊಂಡಿಲ್ಲ. ಧರ್ಮವನ್ನು ಕುರಿತು ಏನು ಬಂದರೆ ಅದನ್ನು ಹೇಳಿ
ಬಿಡುತ್ತಾರೆ. ಮುಖ್ಯವಾಗಿ ಮೂರು ಧರ್ಮಗಳಿವೆ, ದೇವಿ-ದೇವತಾ ಧರ್ಮವಂತೂ ಅರ್ಧಕಲ್ಪ ನಡೆಯುತ್ತದೆ.
ನೀವು ತಿಳಿದುಕೊಂಡಿದ್ದೀರಿ, ತಂದೆಯು ಬ್ರಾಹ್ಮಣ-ದೇವತಾ-ಕ್ಷತ್ರಿಯ ಧರ್ಮವನ್ನು ಸ್ಥಾಪನೆ
ಮಾಡುತ್ತಾರೆ. ಇದನ್ನು ಪ್ರಪಂಚವು ತಿಳಿದುಕೊಂಡಿಲ್ಲ. ಅವರಂತೂ ಸತ್ಯಯುಗಕ್ಕೇ ಲಕ್ಷಾಂತರ
ವರ್ಷಗಳೆಂದು ಹೇಳುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ.
ಇವರು ತಮ್ಮ ಧರ್ಮವನ್ನು ಮರೆತು ಧರ್ಮಭ್ರಷ್ಟರಾಗಿಬಿಡುತ್ತಾರೆ. ಕ್ರಿಶ್ಚಿಯನ್ನರು ತಮ್ಮ ಧರ್ಮವನ್ನು
ಬಿಡುವುದಿಲ್ಲ, ಕ್ರಿಸ್ತನು ನಮ್ಮ ಧರ್ಮ ಸ್ಥಾಪನೆ ಮಾಡಿದ್ದರೆಂದು ಅವರಿಗೆ ತಿಳಿದಿದೆ. ಇಸ್ಲಾಮಿ,
ಬೌದ್ಧಿ ಮತ್ತು ಕ್ರಿಶ್ಚಿಯನ್ - ಇವು ಮುಖ್ಯ ಧರ್ಮಗಳಾಗಿವೆ. ಉಳಿದಂತೆ ಚಿಕ್ಕ-ಚಿಕ್ಕ ಧರ್ಮಗಳು
ಬಹಳಷ್ಟಿವೆ, ಎಲ್ಲಿಂದ ವೃದ್ದಿಯಾಯಿತು ಇದನ್ನು ಯಾರೂ ತಿಳಿದುಕೊಂಡಿಲ್ಲ. ಮಹಮ್ಮದ್ನಿಗೆ ಇನ್ನೂ
ಸ್ವಲ್ಪ ಸಮಯವಾಗಿದೆ. ಇಸ್ಲಾಮಿಗಳು ಹಳಬರಾಗಿದ್ದಾರೆ, ಕ್ರಿಶ್ಚಿಯನ್ನರು ಪ್ರಸಿದ್ಧರಾಗಿದ್ದಾರೆ,
ಉಳಿದಂತೆ ಅನೇಕರಿದ್ದಾರೆ. ಎಲ್ಲರದೂ ತಮ್ಮ-ತಮ್ಮ ಧರ್ಮವಿದೆ. ತಮ್ಮ ಭಿನ್ನ-ಭಿನ್ನ ಧರ್ಮ,
ಭಿನ್ನ-ಭಿನ್ನ ಹೆಸರುಗಳೇ ಇರುವ ಕಾರಣ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ಮುಖ್ಯ ಧರ್ಮ
ಶಾಸ್ತ್ರಗಳಿರುವುದೇ ನಾಲ್ಕು, ಅದರಲ್ಲಿ ದೇವತಾ ಧರ್ಮ, ಬ್ರಾಹ್ಮಣ ಧರ್ಮವು ಬಂದು ಬಿಡುತ್ತದೆ.
ಬ್ರಾಹ್ಮಣರಿಂದ ದೇವತೆ, ದೇವತೆಗಳಿಂದ ಕ್ಷತ್ರಿಯರು, ಇದು ಯಾರಿಗೂ ತಿಳಿದಿಲ್ಲ. ಬ್ರಾಹ್ಮಣ ದೇವತಾಯ
ನಮಃ ಎಂದು ಹಾಡುತ್ತಾರೆ, ಪರಮಪಿತನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆ ಮಾಡಿದರು. ಈ
ಶಬ್ಧಗಳಿವೆ ಆದರೆ ಕೇವಲ ಗಿಳಿಯ ಪಾಠದಂತೆ ಓದುತ್ತಾರೆ.
ಇದು ಮುಳ್ಳುಗಳ ಕಾಡಾಗಿದೆ.
ಭಾರತವು ಉದ್ಯಾನವನವಾಗಿತ್ತು, ಇದನ್ನೂ ಒಪ್ಪುತ್ತಾರೆ ಆದರೆ ಅದು ಹೇಗೆ, ಯಾವಾಗ, ಯಾರು ಸ್ಥಾಪನೆ
ಮಾಡಿದರು? ಪರಮಾತ್ಮ ಯಾರು? ಎಂಬುದೇನನ್ನೂ ತಿಳಿದುಕೊಂಡಿಲ್ಲ. ಅಂದಮೇಲೆ ಅನಾಥರಾದರಲ್ಲವೆ
ಆದ್ದರಿಂದಲೇ ಜಗಳ, ಕಲಹ ಇತ್ಯಾದಿಗಳಿವೆ. ಭಕ್ತಿಯಲ್ಲಿ ಕೇವಲ ಖುಷಿ ಪಡುತ್ತಿರುತ್ತಾರೆ, ಈಗ ತಂದೆಯು
ಪುನಃ ಬೆಳಕು ನೀಡಲು ಬಂದಿದ್ದಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತರನ್ನಾಗಿ ಮಾಡಿ ಬಿಡುತ್ತಾರೆ.
ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ನೀವು
ತಿಳಿದುಕೊಂಡಿದ್ದೀರಿ - ನಾವು ಬೆಳಕಿನಲ್ಲಿದ್ದೇವೆ, ತಂದೆಯು ಮೂರನೇ ನೇತ್ರವನ್ನು ಕೊಟ್ಟಿದ್ದಾರೆ.
ಭಲೆ ದೇವತೆಗಳಿಗೆ ಮೂರನೇ ನೇತ್ರವನ್ನು ತೋರಿಸುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ.
ವಾಸ್ತವದಲ್ಲಿ ಮೂರನೇ ನೇತ್ರವು ನಿಮಗಿದೆ. ಇದನ್ನು ಅವರು ದೇವತೆಗಳಿಗೆ ತೋರಿಸಿದ್ದಾರೆ. ಗೀತೆಯಲ್ಲಿ
ಬ್ರಾಹ್ಮಣರ ಯಾವುದೇ ಮಾತಿಲ್ಲ ಅದರಲ್ಲಿ ಕೌರವರು, ಪಾಂಡವರು ಮೊದಲಾದವರ ಯುದ್ಧ, ಕುದುರೆ ಗಾಡಿ
ಇತ್ಯಾದಿಗಳನ್ನು ಬರೆದು ಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವು ಇದನ್ನು
ತಿಳಿಸಿದರೆ ನೀವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆಂದು ಹೇಳುತ್ತಾರೆ. ನೀವು ಹೇಳಬಹುದು -
ಶಾಸ್ತ್ರಗಳನ್ನು ನಾವೇಕೆ ಒಪ್ಪುವುದಿಲ್ಲ! ನಮಗೆ ತಿಳಿದಿದೆ - ಇದೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಯಾಗಿದೆ. ಜ್ಞಾನ ಮತ್ತು ಭಕ್ತಿಯ ಗಾಯನವಾಗಿದೆ, ಯಾವಾಗ ರಾವಣ ರಾಜ್ಯವಾಗುತ್ತದೆಯೋ ಆಗ
ಭಕ್ತಿಯು ಪ್ರಾರಂಭವಾಗುತ್ತದೆ. ಭಾರತವಾಸಿಗಳು ವಾಮ ಮಾರ್ಗದಲ್ಲಿ ಹೋಗಿ ಧರ್ಮ ಭ್ರಷ್ಟರು, ಕರ್ಮ
ಭ್ರಷ್ಟರಾಗಿ ಬಿಡುತ್ತಾರೆ ಆದ್ದರಿಂದ ಈಗ ಹಿಂದೂಗಳೆಂದು ಕರೆಸಿಕೊಂಡಿದ್ದಾರೆ, ಪತಿತರಾಗಿ
ಬಿಟ್ಟಿದ್ದಾರೆ. ಪತಿತರನ್ನಾಗಿ ಯಾರು ಮಾಡಿದರು? ರಾವಣ. ರಾವಣನನ್ನು ಸುಡುತ್ತಾರೆ, ಇದು
ಪರಂಪರೆಯಿಂದ ನಡೆದು ಬಂದಿದೆ ಎಂದು ತಿಳಿಯುತ್ತಾರೆ ಆದರೆ ಸತ್ಯಯುಗದಲ್ಲಂತೂ ರಾವಣ ರಾಜ್ಯವೇ
ಇರುವುದಿಲ್ಲ. ಮನುಷ್ಯರು ಇದೇನನ್ನೂ ತಿಳಿದುಕೊಳ್ಳುವುದಿಲ್ಲ. ಮಾಯೆಯು ಕಲ್ಲು ಬುದ್ಧಿಯವರನ್ನಾಗಿ
ಮಾಡಿ ಬಿಡುತ್ತದೆ. ಕಲ್ಲಿನಿಂದ ಪಾರಸವನ್ನಾಗಿ ತಂದೆಯೇ ಮಾಡುತ್ತಾರೆ. ಯಾವಾಗ ತಮೋಪ್ರಧಾನತೆಯಲ್ಲಿ
ಬರುವರೋ ಆಗಲೇ ಬಂದು ಸತೋಪ್ರಧಾನತೆಯ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ
ಆದರೂ ಸಹ ಇದು ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ವಿರಳ.
ನೀವು ಕುಮಾರಿಯರಿಗೆ ಈಗ
ನಿಶ್ಚಿತಾರ್ಥವಾಗುತ್ತದೆ. ನಿಮ್ಮನ್ನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳುತ್ತಾರೆ. ನಿಮ್ಮನ್ನು
ಓಡಿಸಿಕೊಂಡು ಹೋದರು ಅರ್ಥಾತ್ ನೀವಾತ್ಮರಿಗೆ ತಂದೆಯು ತಿಳಿಸುತ್ತಾರೆ - ನೀವು ನನ್ನವರಾಗಿದ್ದಿರಿ,
ಮತ್ತೆ ನನ್ನನ್ನೇ ಮರೆತು ಹೋಗಿದ್ದೀರಿ. ದೇಹಾಭಿಮಾನಿಗಳಾಗಿ ಮಾಯೆಗೆ ವಶವಾಗಿ ಬಿಟ್ಟಿದ್ದೀರಿ. ಬಾಕಿ
ಓಡಿಸಿಕೊಂಡು ಹೋಗುವ ಮಾತಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿ. ನೆನಪಿನದೇ ಪರಿಶ್ರಮವಿದೆ. ಬಹಳ
ದೇಹಾಭಿಮಾನದಲ್ಲಿ ಬಂದು ವಿಕರ್ಮ ಮಾಡುತ್ತಾರೆ. ತಂದೆಗೆ ಗೊತ್ತಿದೆ - ಈ ಆತ್ಮವು ನನ್ನನ್ನು ನೆನಪೇ
ಮಾಡುವುದಿಲ್ಲ. ದೇಹಾಭಿಮಾನದಲ್ಲಿ ಬಂದು ಬಹಳ ಪಾಪ ಮಾಡುತ್ತಾರೆ ಆಗ ಪಾಪದ ಕೊಡ ನೂರರಷ್ಟು
ತುಂಬುತ್ತದೆ. ಅನ್ಯರಿಗೆ ಮಾರ್ಗವನ್ನು ತಿಳಿಸುವ ಬದಲಾಗಿ ತಾವೇ ಮರೆತು ಹೋಗುತ್ತಾರೆ. ಇನ್ನೂ
ಹೆಚ್ಚು ದುರ್ಗತಿಯನ್ನು ಹೊಂದುತ್ತಾರೆ. ಇದು ಉನ್ನತ ಗುರಿಯಾಗಿದೆ. ಏರಿದರೆ ವೈಕುಂಠ ರಸ, ಬಿದ್ದರೆ
ಪುಡಿ ಪುಡಿ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ನೋಡಿ, ಎಷ್ಟೊಂದು ಅಂತರವಾಗುತ್ತದೆ!
ಕೆಲವರು ಓದಿ ಆಕಾಶದೆತ್ತರಕ್ಕೆ ಏರುತ್ತಾರೆ, ಇನ್ನೂ ಕೆಲವರು ನೆಲಹಿಡಿಯುತ್ತಾರೆ. ಬುದ್ಧಿಯು
ಮಂಧವಾಗಿ ಬಿಡುತ್ತದೆ, ಆಗ ಅವರು ಓದಲು ಸಾಧ್ಯವಿಲ್ಲ. ಬಾಬಾ, ನಾವು ಯಾರಿಗೂ ತಿಳಿಸಲು
ಆಗುತ್ತಿಲ್ಲವೆಂದು ಕೆಲವರು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಒಳ್ಳೆಯದು,
ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ನಿಮಗೆ ಸುಖ ಕೊಡುವೆನು, ಆದರೆ
ನೆನಪೇ ಮಾಡುವುದಿಲ್ಲ. ಸ್ವಯಂ ನೆನಪು ಮಾಡುತ್ತಿದ್ದರೆ ಅನ್ಯರಿಗೂ ನೆನಪು ತರಿಸುತ್ತಾ ಇರುವರು.
ತಂದೆಯನ್ನು ನೆನಪು ಮಾಡಿದಾಗಲೇ ಪಾಪ ಕಳೆಯುವುದು. ಅವರ ನೆನಪಿಲ್ಲದೆ ಸುಖಧಾಮದಲ್ಲಿ ಹೋಗಲು
ಸಾಧ್ಯವಿಲ್ಲ. 21 ಜನ್ಮಗಳ ಆಸ್ತಿಯು ನಿರಾಕಾರ ತಂದೆಯಿಂದಲೇ ಸಿಗುತ್ತದೆ, ಉಳಿದೆಲ್ಲರೂ ಅಲ್ಪಕಾಲದ
ಸುಖ ಕೊಡುವವರಾಗಿದ್ದಾರೆ. ಯಾರಿಗಾದರೂ ರಿದ್ಧಿ-ಸಿದ್ಧಿಯಿಂದ ಮಕ್ಕಳಾಗಿ ಬಿಟ್ಟರೆ ಅಥವಾ
ಆಶೀರ್ವಾದದಿಂದ ಲಾಟರಿ ಹೊಡೆದರೆ ಸಾಕು ವಿಶ್ವಾಸ ಕುಳಿತು ಬಿಡುತ್ತದೆ. ಕೆಲವರಿಗೆ 2-4 ಕೋಟಿ
ಲಾಭವಾಗಿ ಬಿಟ್ಟರೆ ಸಾಕು ಬಹಳ ಮಹಿಮೆ ಮಾಡುತ್ತಾರೆ ಆದರೆ ಅದೆಲ್ಲವೂ ಅಲ್ಪಕಾಲಕ್ಕಾಗಿ. ಅದರಿಂದ 21
ಜನ್ಮಗಳಿಗಾಗಿ ಆರೋಗ್ಯಭಾಗ್ಯವಂತೂ ಸಿಗಲು ಸಾಧ್ಯವಿಲ್ಲ ಅಲ್ಲವೆ ಆದರೆ ಮನುಷ್ಯರಿಗೆ ಇದು
ಗೊತ್ತಿಲ್ಲ, ಯಾರ ಮೇಲೂ ದೋಷ ಹೊರಿಸುವಂತಿಲ್ಲ. ಅಲ್ಪಕಾಲದ ಸುಖದಲ್ಲಿಯೇ ಖುಷಿಯಾಗಿ ಬಿಡುತ್ತಾರೆ.
ತಂದೆಯು ನೀವು ಮಕ್ಕಳಿಗೆ
ರಾಜಯೋಗವನ್ನು ಕಲಿಸಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಎಷ್ಟು ಸಹಜವಾಗಿದೆ. ಕೆಲವರಂತೂ
ಯಾರಿಗೂ ತಿಳಿಸುವುದೇ ಇಲ್ಲ. ಕೆಲವರು ತಿಳಿಸಿ ಕೊಡುತ್ತಾರೆ ಆದರೆ ಪೂರ್ಣ ಯೋಗವಿಲ್ಲದ ಕಾರಣ ಯಾರಿಗೂ
ಬಾಣವು ನಾಟುವುದಿಲ್ಲ. ದೇಹಾಭಿಮಾನದಲ್ಲಿ ಬರುವುದರಿಂದ ಒಂದಲ್ಲ ಒಂದು ಪಾಪಗಳಾಗುತ್ತಿರುತ್ತವೆ.
ಯೋಗವೇ ಮುಖ್ಯವಾಗಿದೆ. ನೀವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಪ್ರಾಚೀನ ಯೋಗವನ್ನು
ಭಗವಂತನೇ ಕಲಿಸಿದ್ದರು, ಶ್ರೀಕೃಷ್ಣನಲ್ಲ. ನೆನಪಿನ ಯಾತ್ರೆಯು ಬಹಳ ಒಳ್ಳೆಯದಾಗಿದೆ, ನೀವು
ನಾಟಕವನ್ನು ನೋಡಿ ಬರುತ್ತೀರೆಂದರೆ ಬುದ್ಧಿಯಲ್ಲಿ ಎಲ್ಲವೂ ಸನ್ಮುಖದಲ್ಲಿ ಬಂದು ಬಿಡುತ್ತದೆ.
ಯಾರಿಗಾದರೂ ತಿಳಿಸಲು ಸಮಯ ಹಿಡಿಸುತ್ತದೆ. ಇದು ಹಾಗೆಯೇ ಬೀಜ ಮತ್ತು ವೃಕ್ಷ. ಈ ಚಕ್ರವು ಬಹಳ
ಸ್ಪಷ್ಟವಾಗಿದೆ. ಶಾಂತಿಧಾಮ, ಸುಖಧಾಮ, ದುಃಖಧಾಮ.... ಸೆಕೆಂಡಿನ ಕೆಲಸವಾಗಿದೆ. ಆದರೆ
ನೆನಪಿರಬೇಕಲ್ಲವೆ. ತಂದೆಯ ಪರಿಚಯ ಕೊಡುವುದು ಮುಖ್ಯವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು
ನೆನಪು ಮಾಡುವುದರಿಂದ ಎಲ್ಲವನ್ನೂ ಅರಿತುಕೊಳ್ಳುವಿರಿ. ಒಳ್ಳೆಯದು.
ಶಿವ ತಂದೆಯು ನೀವು
ಮಕ್ಕಳನ್ನು ನೆನಪು ಮಾಡಿಕೊಳ್ಳುತ್ತಾರೆ, ಬ್ರಹ್ಮಾ ತಂದೆಯು ನೆನಪು ಮಾಡಿಕೊಳ್ಳುವುದಿಲ್ಲ. ನನ್ನ
ಸುಪುತ್ರ ಮಕ್ಕಳು ಯಾರು, ಯಾರು ಎಂಬುದನ್ನು ಶಿವ ತಂದೆಯು ತಿಳಿದುಕೊಂಡಿದ್ದಾರೆ. ಸೇವಾಧಾರಿ
ಸುಪುತ್ರರನ್ನು ತಂದೆಯು ನೆನಪು ಮಾಡಿಕೊಳ್ಳುತ್ತಾರೆ. ಈ ಬ್ರಹ್ಮಾರವರು ಯಾರನ್ನಾದರೂ ನೆನಪು
ಮಾಡುವರೇ? ಇವರ ಆತ್ಮಕ್ಕಂತೂ ಶಿವ ತಂದೆಯ ಆದೇಶವಿದೆ - ನನ್ನೊಬ್ಬನನ್ನೇ ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1)
ಅದೃಷ್ಟವಂತರಾಗಲು ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನು ಇಡಬೇಕಾಗಿದೆ. ಪ್ರೀತಿಯನ್ನು
ಇಡುವುದು ಎಂದರೆ ಹೆಜ್ಜೆ-ಹೆಜ್ಜೆಯಲ್ಲಿ ಅವರೊಬ್ಬರ ಶ್ರೀಮತದನುಸಾರವೇ ನಡೆಯುತ್ತಿರುವುದು.
2) ಪ್ರತಿ ನಿತ್ಯವೂ
ಪುಣ್ಯದ ಕಾರ್ಯವನ್ನು ಅವಶ್ಯವಾಗಿ ಮಾಡಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡ ಪುಣ್ಯವಾಗಿದೆ - ಎಲ್ಲರಿಗೆ
ತಂದೆಯ ಪರಿಚಯ ಕೊಡುವುದು. ತಂದೆಯನ್ನು ನೆನಪು ಮಾಡುವುದು ಮತ್ತು ಎಲ್ಲರಿಗೆ ತಂದೆಯ ನೆನಪು
ತರಿಸುವುದು.
ವರದಾನ:
ತಮ್ಮ ದೃಷ್ಟಿ
ಹಾಗೂ ವೃತ್ತಿಯ ಪರಿವರ್ತನೆಯ ಮೂಲಕ ಸೃಷ್ಟಿಯನ್ನು ಪರಿವರ್ತಿಸುವ ಸಾಕ್ಷಾತ್ಕಾರಮೂರ್ತಿ ಭವ.
ತಮ್ಮ ವೃತ್ತಿಯ
ಪರಿವರ್ತನೆಯ ದೃಷ್ಟಿಯನ್ನು ದಿವ್ಯ ದೃಷ್ಟಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಅನೇಕ ಆತ್ಮರು
ತಮ್ಮ ಯಥಾರ್ಥ ರೂಪ, ಯಥಾರ್ಥವಾದ ಮನೆ ಹಾಗೂ ಯಥಾರ್ಥವಾದ ರಾಜಧಾನಿಯನ್ನೂ ನೋಡುವಿರಿ. ಇಂತಹ
ಯಥಾರ್ಥವಾದ ಸಾಕ್ಷಾತ್ಕಾರವನ್ನು ಮಾಡಿಸುವುದಕ್ಕಾಗಿ ವೃತ್ತಿಯಲ್ಲಿ ಅಂಶದಷ್ಟೂ ದೇಹಾಭಿಮಾನದ
ಚಂಚಲನೆಯಿರಬಾರದು. ಅಂದಮೇಲೆ ವೃತ್ತಿಯ ಸುಧಾರಣೆಯಿಂದ ದೃಷ್ಠಿಯನ್ನು ದಿವ್ಯ ದೃಷ್ಟಿಯನ್ನಾಗಿ
ಮಾಡಿಕೊಂಡಾಗ, ಈ ಸೃಷ್ಟಿಯ ಪರಿವರ್ತನೆ ಆಗುವುದು. ಇದನ್ನು ನೋಡುವವರೂ ಅನುಭವ ಮಾಡುವರು - ಇದು
ನಯನಗಳಲ್ಲ ಆದರೆ ಇದೊಂದು ಜಾದುವಿನ ಡಬ್ಬಿಯಾಗಿದೆ. ಈ ನಯನಗಳು ಸಾಕ್ಷಾತ್ಕಾರದ ಸಾಧನವಾಗಿ ಬಿಡುವುದು.
ಸ್ಲೋಗನ್:
ಸೇವೆಯ
ಉಮ್ಮಂಗ-ಉತ್ಸಾಹದ ಜೊತೆ, ಬೇಹದ್ದಿನ ವೈರಾಗ್ಯ ವೃತ್ತಿಯೇ ಸಫಲತೆಗೆ ಆಧಾರವಾಗಿದೆ.
ಅವ್ಯಕ್ತ ಸೂಚನೆ:–
“ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”
ಮಧುರತೆಯ ಗುಣವನ್ನು
ಧಾರಣೆ ಮಾಡುವವರು ಇಲ್ಲೊಯೂ ಮಹಾನ್ರಾಗುತ್ತಾರೆ ಮತ್ತು ಅಲ್ಲಿಯು ಪದವಿಯನ್ನು ಪಡೆದುಕೊಳ್ಳುತ್ತಾರೆ.
ಮಧುರತೆಯುಳ್ಳವರನ್ನು ಎಲ್ಲರೂ ಮಹಾನ ರೂಪದಿಂದ ನೋಡುತ್ತಾರೆ. ಮಧುರತೆಯ ವಿಶೇಷ ಗುಣ ಪ್ರತಿ
ಮಕ್ಕಳಲ್ಲಿರಬೇಕಾಗಿದೆ. ಮಧುರತೆಯ ಮಧು ಯಾರ ಜೊತೆಯಲ್ಲಿರುತ್ತದೆ ಅವರಿಗೆ ಪ್ರತಿ ಕಾರ್ಯದಲ್ಲಿ
ಸಫಲತೆಯೇ ಸಫಲತೆ ಸಿಗುತ್ತದೆ. ಅವರ ಜೀವನದಿಂದ ಅಸಫಲತೆ ಸಮಾಪ್ತಿಯಾಗುತ್ತದೆ.