01.06.25 Avyakt Bapdada
Kannada
Murli 21.10.2000 Om Shanti Madhuban
“ಸಂಪೂರ್ಣ ಮತ್ತು
ಸಂಪನ್ನರಾಗುವ ದಿನಾಂಕವನ್ನು ನಿಗಧಿಗೊಳಿಸಿ, ಸಮಯ ಪ್ರಮಾಣ ಈಗ ಸದಾ ಸಿದ್ಧರಾಗಿ”
ಇಂದು ಬಾಪ್ದಾದಾ
ನಾಲ್ಕೂಕಡೆಯ ಮಕ್ಕಳ ಮೂರು ರೂಪವನ್ನು ನೋಡುತ್ತಿದ್ದಾರೆ. ಹೇಗೆ ತಂದೆಯ ವಿಶೇಷ ಮೂರುಸಂಬಂಧ
ನೆನಪಿರುತ್ತದೆಯೋ ಹಾಗೆಯೇ ಮಕ್ಕಳದೂ ಸಹ ಮೂರು ರೂಪವನ್ನು ನೋಡಿ ಸಂತೋಷ ಪಡುತ್ತಿದ್ದಾರೆ. ನಿಮ್ಮ
ಮೂರು ರೂಪವನ್ನು ತಿಳಿದಿದ್ದೀರಲ್ಲವೆ! ಈ ಸಮಯದಲ್ಲಿ ಎಲ್ಲಾ ಮಕ್ಕಳು ಬ್ರಾಹ್ಮಣ ರೂಪದಲ್ಲಿ ಇದ್ದೀರಿ
ಮತ್ತು ಬ್ರಾಹ್ಮಣರ ಕೊನೆಯ ಹಂತವಾಗಿದೆ, ಬ್ರಾಹ್ಮಣರೇ ಸೂಕ್ಷ್ಮದೇವತೆಗಳಾಗಿ ನಂತರ
ಸೂಕ್ಷ್ಮದೇವತೆಗಳೇ ದೇವತೆಗಳಾಗುತ್ತೀರಿ. ಎಲ್ಲದಕ್ಕಿಂತ ವಿಶೇಷವಾದದ್ದು ವರ್ತಮಾನ ಬ್ರಾಹ್ಮಣ
ಜೀವನವಾಗಿದೆ. ಬ್ರಾಹ್ಮಣ ಜೀವನ ಅಮೂಲ್ಯವಾದುದಾಗಿದೆ. ಬ್ರಾಹ್ಮಣ ಜೀವನದ ವಿಶೇಷತೆ ಪವಿತ್ರತೆಯಾಗಿದೆ.
ಪವಿತ್ರತೆಯೇ ಬ್ರಾಹ್ಮಣ ಜೀವನದ ಸತ್ಯತೆಯಾಗಿದೆ. ಪವಿತ್ರತೆಯೇ ಬ್ರಾಹ್ಮಣ ಜೀವನದ
ವ್ಯಕ್ತಿತ್ವವಾಗಿದೆ. ಪವಿತ್ರತೆಯೇ ಸುಖ-ಶಾಂತಿಯ ಜನನಿಯಾಗಿದೆ. ಎಷ್ಟು ಪವಿತ್ರತೆಯಿರುತ್ತದೆಯೋ
ಅಷ್ಟು ಸುಖ-ಶಾಂತಿ ಜೀವನದಲ್ಲಿ ಸ್ವಾಭಾವಿಕ ಮತ್ತು ಸ್ವಭಾವವಾಗಿರುತ್ತದೆ ಮತ್ತು ಪವಿತ್ರ ಆತ್ಮರ
ಲಕ್ಷ್ಯ- ಬ್ರಾಹ್ಮಣರಿಂದ ದೇವತೆಗಳಾಗುವುದಲ್ಲ ಆದರೆ ಮೊದಲು ಸೂಕ್ಷ್ಮದೇವತೆಗಳಾಗುವುದು ಮತ್ತು
ಸೂಕ್ಷ್ಮದೇವತೆಗಳಿಂದ ದೇವತೆಗಳಾಗುವುದಾಗಿದೆ. ಅಂದಾಗ ಬ್ರಾಹ್ಮಣರಿಂದ ಸೂಕ್ಷ್ಮದೇವತೆ,
ಸೂಕ್ಷ್ಮದೇವತೆಯಿಂದ ದೇವತೆ - ಈ ಮೂರುರೂಪವನ್ನು ಬಾಪ್ದಾದಾ ಎಲ್ಲಾ ಮಕ್ಕಳಲ್ಲಿ ನೋಡುತ್ತಿದ್ದಾರೆ.
ತಮ್ಮೆಲ್ಲರಿಗೂ ಸಹ ತಮ್ಮ ಮೂರು ರೂಪ ಸನ್ಮುಖದಲ್ಲಿ ಬಂದಿದೆಯೇ? ಬಂದಿತೆ? ಬ್ರಾಹ್ಮಣರೇನೋ
ಆಗಿದ್ದೀರಿ, ಈಗ ಸೂಕ್ಷ್ಮದೇವತೆಗಳಾಗುವ ಗುರಿಯಿದೆಯಲ್ಲವೆ! ಇದೇ ಗುರಿಯಲ್ಲವೆ!
ಸೂಕ್ಷ್ಮದೇವತೆಗಳಾಗಲೇಬೇಕು. ಪರಿಶೀಲನೆ ಮಾಡಿಕೊಳ್ಳಿ - ಸೂಕ್ಷ್ಮದೇವತೆಯ ವಿಶೇಷತೆಯು ಜೀವನದಲ್ಲಿ
ಎಷ್ಟು ಕಂಡುಬರುತ್ತಿದೆ? ಸೂಕ್ಷ್ಮದೇವತಾ ಅರ್ಥಾತ್ ಯಾವ ಹಳೆಯ ಪ್ರಪಂಚ, ಹಳೆಯ ಸಂಸ್ಕಾರಗಳೊಂದಿಗೆ
ಯಾವುದೇ ಸಂಬಂಧವಿಲ್ಲ. ಸೂಕ್ಷ್ಮದೇವತೆ ಅರ್ಥಾತ್ ಕೇವಲ ಸಮಸ್ಯೆಯ ಸಮಯದಲ್ಲಿ ಡಬಲ್ಲೈಟ್ ಆಗುವುದಲ್ಲ
ಆದರೆ ಸದಾ ಮನಸ್ಸಾ-ವಾಚಾ, ಸಂಬಂಧ-ಸಂಪರ್ಕದಲ್ಲಿ ಡಬಲ್ಲೈಟ್ ಆಗುವುದು, ಹಗುರವಾಗಿರುವುದು.
ಹಗುರವಾದ ವಸ್ತು ಇಷ್ಟವಾಗುತ್ತದೆಯೋ ಅಥವಾ ಭಾರವಾಗಿರುವ ಇಷ್ಟವಾಗುತ್ತದೆಯೋ? ಯಾವುದು
ಇಷ್ಟವಾಗುತ್ತದೆ? ಹಗುರವಾಗಿರುವುದು ಇಷ್ಟವಾಗುತ್ತದೆಯಲ್ಲವೆ. ಸೂಕ್ಷ್ಮದೇವತೆ ಅರ್ಥಾತ್ ಎಲ್ಲರಿಗೂ
ಇಷ್ಟವಾಗುತ್ತಾರೆ, ಕೆಲವರಿಗಷ್ಟೇ ಅಲ್ಲ. ಅವರು ಸರ್ವರಿಗೂ ಪ್ರಿಯರು ಮತ್ತು ಅಲಿಪ್ತರಾಗಿರುತ್ತಾರೆ.
ಕೇವಲ ಪ್ರಿಯರಲ್ಲ, ಎಷ್ಟು ಪ್ರಿಯರೋ ಅಷ್ಟೇ ಅಲಿಪ್ತರು. ಸೂಕ್ಷ್ಮದೇವತೆಗಳ ಗುರುತಾಗಿದೆ - ಅವರು
ಸರ್ವರ ಪ್ರಿಯರಾಗಿರುತ್ತಾರೆ, ಯಾರೇ ನೋಡುತ್ತಾರೆ, ಯಾರೇ ಮಿಲನ ಮಾಡುತ್ತಾರೆ, ಸಂಬಂಧದಲ್ಲಿ
ಬರುತ್ತಾರೆ, ಸಂಪರ್ಕದಲ್ಲಿ ಬರುತ್ತಾರೆಂದರೆ ಇವರು ನನ್ನವರು ಎಂಬ ಅನುಭವ ಮಾಡುತ್ತಾರೆ. ಹೇಗೆ
ತಂದೆಯನ್ನು ಎಲ್ಲರೂ ನನ್ನವರೆಂದು ಅನುಭವ ಮಾಡುತ್ತಾರೆ. ಅನುಭವ ಮಾಡುತ್ತೀರಲ್ಲವೆ! ಹಾಗೆಯೇ
ಸೂಕ್ಷ್ಮದೇವತೆ ಅರ್ಥಾತ್ ಪ್ರತಿಯೊಬ್ಬರೂ ಇವರು ನನ್ನವರೆಂದು ಅನುಭವ ಮಾಡಲಿ. ತಮ್ಮತನದ ಅನುಭವವಾಗಲಿ
ಏಕೆಂದರೆ ಹಗುರರಾಗಿರುತ್ತಾರಲ್ಲವೆ ಅಂದಾಗ ಹಗುರತೆಯು ಸರ್ವರಿಗೂ ಪ್ರಿಯರನ್ನಾಗಿ ಮಾಡಿಬಿಡುತ್ತದೆ.
ಇಡೀ ಬ್ರಾಹ್ಮಣ ಪರಿವಾರವೇ ಇವರು ನನ್ನವರೆಂದು ಅನುಭವ ಮಾಡಲಿ, ಭಾರಿತನವಿರಬಾರದು. ಸೂಕ್ಷ್ಮದೇವತೆಯ
ಅರ್ಥವೇ ಆಗಿದೆ - ಡಬಲ್ಲೈಟ್. ಸೂಕ್ಷ್ಮದೇವತಾ ಅರ್ಥಾತ್ ಸಂಕಲ್ಪ, ಮಾತು, ಕರ್ಮ,
ಸಂಬಂಧ-ಸಂಪರ್ಕದಲ್ಲಿ ಬೇಹದ್ದಿನದಾಗಿರಲಿ, ಮಿತವಾಗಿರಬಾರದು. ಎಲ್ಲರೂ ನಮ್ಮವರೇ ಮತ್ತು ನಾನು
ಎಲ್ಲವರನಾಗಿದ್ದೇನೆ. ಎಲ್ಲಿ ಹೆಚ್ಚು ನಮ್ಮದು, ನಮ್ಮವರು ಎನ್ನುವುದಿರುತ್ತದೆಯೋ ಅಲ್ಲಿ
ಹಗುರತೆಯಿರುತ್ತದೆ. ಸಂಸ್ಕಾರವೂ ಸಹ ಹಗುರತೆಯಿರುತ್ತದೆ ಅಂದಾಗ ಸೂಕ್ಷ್ಮದೇವತಾ ಸ್ಥಿತಿಯನ್ನು
ಎಷ್ಟು ಪರ್ಸೆಂಟ್ನಲ್ಲಿ ತಲುಪಿದ್ದೇನೆ? ಎಂದು ಪರಿಶೀಲನೆ ಮಾಡಿಕೊಳ್ಳಿ. ಪರಿಶೀಲನೆ
ಮಾಡಿಕೊಳ್ಳುವವರೂ ಆಗಿದ್ದೀರಿ, ಪರಿವರ್ತನೆ ಮಾಡಿಕೊಳ್ಳುವವರೂ ಆಗಿದ್ದೀರಿ. ಶುಭಾಷಯಗಳು.
ಬಾಪ್ದಾದಾರವರ ಶುಭ ಆಸೆಯಾಗಿದೆ - ಈಗ ಸಮಯವನ್ನು ನೋಡುತ್ತಾ ಯಾರು ತನ್ನನ್ನು ಮಹಾರಥಿಯೆಂದು
ತಿಳಿದಿದ್ದೀರಿ ಅವರ ಸ್ಥಿತಿಯು ಶೇ.95ರಷ್ಟು ಇರಬೇಕು (ಯಾರೋ ಶೇ.98ರಷ್ಟು ಆಗುತ್ತೇವೆಂದು
ಹೇಳಿದ್ದಾರೆ) ಶುಭಾಷಯಗಳು- ತಮ್ಮ ಬಾಯಲ್ಲಿ ಗುಲಾಬ್ ಜಾಮೂನ್ ತಿನ್ನಿ ಏಕೆಂದರೆ
ನೋಡುತ್ತಿದ್ದೀರಲ್ಲವೆ, ಆಗಲೇಬೇಕಾಗಿದೆ ಎಂದು ತಿಳಿದಿದ್ದೀರಲ್ಲವೆ. ಆಗುತ್ತದೆ ಎಂದಲ್ಲ
ಆಗಲೇಬೇಕಾಗಿದೆ. ಗೆ ಗೆ ಎಂದಲ್ಲ, ಆಗುತ್ತದೆ, ನೋಡುತ್ತೇವೆ.... ಪ್ರಯತ್ನಪಡುತ್ತೇವೆ...... ಈ
ಭಾಷೆಯನ್ನು ಈಗ ಪರಿವರ್ತನೆ ಮಾಡಿಕೊಳ್ಳಿ. ಏನೆಲ್ಲಾ ಸಂಕಲ್ಪ ಮಾಡುತ್ತೀರೋ, ಶೇ.ಎಷ್ಟು ಮತ್ತು
ಸಫಲತಾಪೂರ್ವಕವಾಗಿದೆ?ಎಂದು ಪರಿಶೀಲನೆ ಮಾಡಿಕೊಳ್ಳಿ. ಈಗ ಪರಿಶೀಲನೆ ಮಾಡಿಕೊಳ್ಳುವುದರ
ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ. ಮೊದಲು ಪರಿಶೀಲಿಸಿ ನಂತರ ಕರ್ಮದಲ್ಲಿ ತನ್ನಿ. ಏನೇ ಸಂಕಲ್ಪ
ಬಂದಿತು, ಯಾವ ಮಾತು ಬಂದಿತು, ಸಂಬಂಧ-ಸಂಪರ್ಕದಲ್ಲಿ ಏನು ನಡೆಯಿತು ಹಾಗೆ ಇರಬಾರದು. ಯಾರು
ವಿ.ವಿ.ವಿ.ಐ.ಪಿ.,ಗಳಿರುತ್ತಾರೆ ಅವರದು ಎಷ್ಟೊಂದು ಚೆಕಿಂಗ್ ಇರುತ್ತದೆ ಎಂದು ತಿಳಿದಿದೆಯಲ್ಲವೆ.
ಪ್ರತಿಯೊಂದು ವಸ್ತುವನ್ನು ಮೊದಲು ಪರಿಶೀಲಿಸುತ್ತಾರೆ ನಂತರ ಮುಂದೆ ಹೆಜ್ಜೆಯನ್ನಿಡುತ್ತಾರೆ. ಈಗ
ಎರಡು ಗಂಟೆಯ ನಂತರ, ನಾಲ್ಕು ಗಂಟೆಯ ನಂತರ ಪರಿಶೀಲನೆ ಮಾಡಿಕೊಳ್ಳುವುದು ನಡೆಯುವುದಿಲ್ಲ. ಮೊದಲು
ಪರಿಶೀಲನೆ ಮಾಡಿಕೊಳ್ಳಬೇಕು ನಂತರ ಹೆಜ್ಜೆಯನ್ನಿಡಬೇಕು ಏಕೆಂದರೆ ತಾವು ಈ ಸೃಷ್ಟಿನಾಟಕದಲ್ಲಿದ್ದೀರಿ.
ಇತ್ತೀಚಿನ ವಿ.ವಿ.ಐ.ಪಿ.,ಗಳು ಯಾರಿದ್ದಾರೆ ಅವರು ಒಂದು ಜನ್ಮದವರಾಗಿದ್ದಾರೆ, ಅದರಲ್ಲಿಯೂ
ಸ್ವಲ್ಪಸಮಯಕ್ಕಾಗಿ ಇರುತ್ತಾರೆ ಆದರೆ ತಾವು ಬ್ರಾಹ್ಮಣರು, ಬ್ರಾಹ್ಮಣರಿಂದ ಸೂಕ್ಷ್ಮದೇವತೆಗಳಿಗೆ
ಎಷ್ಟೇ ವಿ.ವಿ.ವಿ ಜೋಡಿಸಿದರೂ ಅಷ್ಟೇ ಆಗುವುದು. ನೋಡಿ, ನೀವು ನಿಮ್ಮ ಮುಂದೆ ವಿ.ವಿ.ವಿ. ಹಾಕುತ್ತಾ
ಹೋಗಿ, ತಾವು ತಮ್ಮ ಚಿತ್ರವನ್ನಂತೂ ನೋಡುತ್ತೀರಲ್ಲವೆ! ಯಾವುದನ್ನು ಪೂಜೆ ಮಾಡುತ್ತಿದ್ದಾರೆ ಅದನ್ನು
ನೋಡಿದ್ದೀರಲ್ಲವೆ? ಮಂದಿರವನ್ನು ನೋಡದಿದ್ದರೂ ಫೋಟೊವನ್ನಂತೂ ನೋಡಿದ್ದೀರಲ್ಲವೆ? ಈಗಲೂ ಸಹ ಅದಕ್ಕೆ
ಎಷ್ಟು ಬೆಲೆಯಿದೆ! ಎಷ್ಟು ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸುತ್ತಾರೆ! ಮತ್ತು ತಮ್ಮ ಚಿತ್ರಗಳು
ಮೂರು ಅಡಿ ಎತ್ತರವಿರುತ್ತದೆ ಆದರೆ ನಿಮ್ಮದು ಎಷ್ಟೊಂದು ಬೆಲೆಯಿದೆ! ನಿಮ್ಮ ಜಡಚಿತ್ರಕ್ಕೂ ಸಹ
ಎಷ್ಟು ಬೆಲೆಯಿದೆ. ಇದೆಯಲ್ಲವೆ! ಬೆಲೆಯಿದೆಯಲ್ಲವೆ! ತಮ್ಮ ಚಿತ್ರದ ದರ್ಶನವನ್ನು ಮಾಡಲು ಎಷ್ಟೊಂದು
ಕ್ಯೂ (ಸಾಲು) ಇರುತ್ತದೆ. ತಾವು ಚೈತನ್ಯದಲ್ಲಿ ಎಂತಹ ವಿ.ವಿ.ಐ.ಪಿ., ಆಗಿದ್ದೀರಿ. ಅಂದಾಗ
ಹೆಜ್ಜೆಯನ್ನಿಡುವುದಕ್ಕೆ ಮೊದಲು ಪರಿಶೀಲನೆ ಮಾಡಿಕೊಳ್ಳಿ, ಮಾಡಿದ ನಂತರ ಪರಿಶೀಲನೆ ಮಾಡಿಕೊಂಡರೆ ಆ
ಹೆಜ್ಜೆ ಹೊರಟುಹೋಯಿತು. ಆ ಹೆಜ್ಜೆಯು ನಿಮ್ಮ ಹಿಡಿತದಲ್ಲಿ ಬರಲು ಸಾಧ್ಯವಿಲ್ಲ. ಅಜ್ಞಾನಕಾಲದಲ್ಲಿಯೂ
ಸಹ ಯೋಚಿಸಿ, ಕಾರ್ಯವನ್ನು ಮಾಡಿ ಎಂದು ಹೇಳುತ್ತಾರೆ. ಕೆಲಸ ಮಾಡಿ ನಂತರ ಯೋಚಿಸಬೇಡಿ, ಮೊದಲು
ಯೋಚಿಸಿ ನಂತರ ಕಾರ್ಯ ಮಾಡಿ ಅಂದಾಗ ತನ್ನ ಸ್ವಮಾನದ ಸೀಟ್ನಲ್ಲಿ ಸ್ಥಿತರಾಗಿ. ಶೇ. ಸ್ವಮಾನಾಲ್ಲಿ
ಎಷ್ಟಿರುತ್ತೀರೋ ಅಷ್ಟು ವಿರೋಧವಿರುವುದಿಲ್ಲ. ಯಾವಾಗ ಸೀಟ್ನಲ್ಲಿ ಸ್ಥಿತರಾಗಿರುವುದಿಲ್ಲವೋ ಆಗ
ಮಾಯೆಯ ವಿರೋಧ ಬರುತ್ತದೆ. ಈಗ ಬಾಪ್ದಾದಾರವರ ಪ್ರಶ್ನೆಯಾಗಿದೆ, ಎಲ್ಲರ ಲಕ್ಷ್ಯ
ಸಂಪೂರ್ಣವಾಗುವುದಾಗಿದೆ, ಸಂಪನ್ನರಾಗುವುದಾಗಿದೆ. ಸಂಪೂರ್ಣರಾಗುವ ಗುರಿಯಿದೆಯೇ ಅಥವಾ
ಸ್ವಲ್ಪ-ಸ್ವಲ್ಪ ಆಗುವುದಿದೆಯೇ? ಗುರಿಯಿದೆಯೇ? ಎಲ್ಲರಿಗೂ ಗುರಿಯಿದೆಯೆಂದರೆ ಕೈಯನ್ನೆತ್ತಿ.
ಸಂಪೂರ್ಣರಾಗುವುದು ಒಳ್ಳೆಯದು. ಎಲ್ಲಿಯತನಕ? ನಿಮ್ಮ ಲಕ್ಷ್ಯವೇನು? ಎಂದು ತಾವು ಜನರಿಗೆ
ಪ್ರಶ್ನಿಸುತ್ತೀರಲ್ಲವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುತ್ತಾರಲ್ಲವೆ? ಇಂದು
ಬಾಪ್ದಾದಾ ವಿಶೇಷವಾಗಿ ಶಿಕ್ಷಕಿಯರನ್ನು ಕೇಳುತ್ತೇವೆ. 30 ವರ್ಷದವರು ಕುಳಿತಿದ್ದೀರಲ್ಲವೆ? 30
ವರ್ಷದವರು ನಾಳೆಯೇ ಕುಳಿತು ಪರಸ್ಪರ ಕಾರ್ಯಕ್ರಮವನ್ನು ಮಾಡಿಕೊಳ್ಳಬೇಕು. ಮೀಟಿಂಗ್ ಬಹಳಷ್ಟು
ಮಾಡುತ್ತೀರಿ. ಬಾಪ್ದಾದಾ ನೋಡುತ್ತೇವೆ - ಮೀಟಿಂಗ್-ಸೀಟಿಂಗ್, ಮೀಟಿಂಗ್-ಸೀಟಿಂಗ್. ಆದರೆ ಈಗ ಇಂತಹ
ಮೀಟಿಂಗ್ ಮಾಡಿ - ಯಾವಾಗ ಸಂಪನ್ನರಾಗುವುದು? ಮತ್ತೆಲ್ಲಾ ಸಮಾರಂಭಗಳನ್ನು ಮಾಡುತ್ತೀರಿ,
ದಿನಾಂಕವನ್ನು ನಿಗಧಿ ಪಡಿಸುತ್ತೀರಿ, ಇಂತಹ ಕಾರ್ಯಕ್ರಮ, ಇಂತಹ ದಿನಾಂಕವೆಂದು ನಿಗಧಿಪಡಿಸುತ್ತೀರಿ
ಹಾಗೆಯೇ ಇದರ ದಿನಾಂಕವನ್ನೂ ಸಹ ನಿಗಧಿಗೊಳಿಸಿ. ಇದರ ದಿನಾಂಕವಿಲ್ಲವೆ? ಎಷ್ಟು ವರ್ಷಗಳು ಬೇಕು,
ಹೇಳಿ? ಏಕೆ? ಬಾಪ್ದಾದಾ ಏಕೆ ಕೇಳುತ್ತೇವೆ? ಏಕೆಂದರೆ ಯಾವಾಗ ವಿನಾಶ ಮಾಡಲಿ ಎಂದು ಪ್ರಕೃತಿಯು
ತಂದೆಯನ್ನು ಕೇಳುತ್ತದೆ. ಅಂದಾಗ ಬಾಪ್ದಾದಾ ಏನು ಉತ್ತರವನ್ನು ಕೊಡುವುದು? ಬಾಪ್ದಾದಾ ಮಕ್ಕಳನ್ನೇ
ಕೇಳುತ್ತೇವೆ. ಎಲ್ಲಿಯತನಕ? ಈ ದಿನದ ವಿಶೇಷ ಟಾಪಿಕ್ ಆಗಿದೆ - ಎಲ್ಲಿಯತನಕ? ಡಬಲ್ ವಿದೇಶಿಗಳು
ಕುಳಿತಿದ್ದೀರಲ್ಲವೆ ಅಂದಾಗ ಡಬಲ್ ಪುರುಷಾರ್ಥವಾಗುತ್ತದೆಯಲ್ಲವೆ. ಕಮಾಲ್ ಮಾಡಿ. ವಿದೇಶಿಯರು
ಮಾದರಿಯಾಗಿ. ಬ್ರಾಹ್ಮಣ ಪರಿವಾರದ ಮುಂದೆ, ವಿಶ್ವದ ಮುಂದೆ ಸಂಪನ್ನ ಮತ್ತು ಸಂಪೂರ್ಣರಾಗಿ ಅಷ್ಟೆ.
ಸರ್ವಶಕ್ತಿಗಳು, ಸರ್ವಗುಣಗಳಿಂದ ಸಂಪನ್ನರು ಅರ್ಥಾತ್ ಸಂಪೂರ್ಣರು. ಮನಸ್ಸಾ-ವಾಚಾ, ಸಂಬಂಧ-ಸಂಪರ್ಕ
ನಾಲ್ಕರಲ್ಲಿಯೂ, ನಾಲ್ಕರಲ್ಲಿ ಒಂದುವೇಳೆ ಒಂದರಲ್ಲಿಯಾದರೂ ಬಲಹೀನರಾಗಿಬಿಟ್ಟಿರೆಂದರೆ ಸಂಪನ್ನರೆಂದು
ಕರೆಯುವುದಿಲ್ಲ. ನಾಲ್ಕು ಮಾತುಗಳು ನೆನಪಿದೆಯಲ್ಲವೆ? ಮನಸ್ಸಾ-ವಾಚಾ, ಸಂಬಂಧ-ಸಂಪರ್ಕದಲ್ಲಿ ಕರ್ಮ
ಬಂದುಬಿಡುತ್ತದೆ. ನಾಲ್ಕೂ ಮಾತುಗಳಲ್ಲಿ ಬಂದುಬಿಡುತ್ತದೆ. ಮನಸ್ಸಾ-ವಾಚಾದಲ್ಲಂತೂ ಸರಿಯಿದ್ದೇವೆ,
ಸಂಬಂಧ-ಸಂಪರ್ಕದಲ್ಲಿ ಸ್ವಲ್ಪ ಇದ್ದೇವೆ ಎಂದಲ್ಲ. ಯಾರ ಬಳಿಯೇ ಹೋಗಲಿ, ಯಾರ ಸಂಪರ್ಕದಲ್ಲಿಯೇ ಹೋಗಲಿ
ಇವರು ನನ್ನವರೆಂದು ಅನುಭವ ಮಾಡಲಿ ಎಂದು ಈ ಮೊದಲೇ ಹೇಳಿದ್ದೇವಲ್ಲವೆ. ಅನ್ಯರಬಗ್ಗೆ ಇಷ್ಟೊಂದು
ಹಗುರತೆ ಬರುವುದಿಲ್ಲ, ಸ್ವಲ್ಪ ಭಾರಿಯಾಗುತ್ತದೆ ಆದರೆ ತನ್ನ ಬಗ್ಗೆ ಹಗುರತೆಯಿರುತ್ತದೆ. ಅಂದಾಗ
ಎಲ್ಲರೊಂದಿಗೂ ಹಗುರವಾಗಿರಬೇಕು, ಕೇವಲ ತಮ್ಮ ಜೋನ್ಗೆ ಹೊಂದಿಕೊಳ್ಳುವುದು ಅಥವಾ ತಮ್ಮ
ಸೇವಾಕೇಂದ್ರದಲ್ಲಿ ಹಗುರವಾಗಿರುವುದಲ್ಲ. ಒಂದುವೇಳೆ ಕೇವಲ ತಮ್ಮ ಜೋನ್ನಲ್ಲಿ ಮಾತ್ರ ಹೊಂದಿಕೊಂಡರೆ
ಅಥವಾ ಸೇವಾಕೇಂದ್ರದಲ್ಲಿ ಹೊಂದಿಕೊಂಡರೆ ವಿಶ್ವದ ರಾಜರುಗಳು ಹೇಗಾಗುತ್ತೀರಿ?
ವಿಶ್ವಕಲ್ಯಾಣಕಾರಿಗಳಾಗಲೂ ಸಾಧ್ಯವಿಲ್ಲ, ವಿಶ್ವದ ರಾಜರೂ ಆಗಲು ಸಾಧ್ಯವಿಲ್ಲ. ರಾಜ ಎಂದರೆ
ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ಎಂದಲ್ಲ ರಾಯಲ್ ಕುಟುಂಬದಲ್ಲಿಯೂ ಸಹ ರಾಜ್ಯದ
ರಾಜ್ಯಾಧಿಕಾರವಿರುತ್ತದೆ, ಅಂದಾಗ ಏನು ಮಾಡುತ್ತೀರಿ? ಎಲ್ಲಿಯತನಕ ಎಂಬ ಈ ಪ್ರಶ್ನೆಗೆ ಉತ್ತರವನ್ನು
ಕೊಡುತ್ತೀರಲ್ಲವೆ. ಮೀಟಿಂಗ್ ಮಾಡುತ್ತೀರಲ್ಲವೆ? ಮೀಟಿಂಗ್ ಮಾಡಿ ಫೈನಲ್ ಮಾಡಿ. ಸರಿಯೇ? ಒಳ್ಳೆಯದು.
ಎಲ್ಲರೂ ಚೆನ್ನಾಗಿದ್ದೀರಾ. ಮಾಡಲೇಬೇಕು, ಆಗಲೇಬೇಕು ಎಂಬ ಉಮ್ಮಂಗ ಬರುತ್ತದೆಯಲ್ಲವೆ.
ಬಾಪ್ದಾದಾರವರು ಒಲವು-ಉತ್ಸಾಹವನ್ನು ತರುತ್ತಾರಲ್ಲವೆ. ಒಲವು-ಉತ್ಸಾಹದಲ್ಲಿರುವುದನ್ನು ನೋಡಿ ಮಾಯೆ
ಒಂದಲ್ಲಒಂದು ರೀತಿ ಮಾಡಿಬಿಡುತ್ತದೆ ಏಕೆಂದರೆ ಅದರದೂ ಸಹ ಈಗ ಅಂತಿಮ ಸಮಯ ಸಮೀಪ ಬಂದಿದೆ. ಅದು
ತನ್ನಲ್ಲಿರುವಂತಹ ಎಲ್ಲಾ ಅಸ್ತ್ರ-ಶಸ್ತ್ರಗಳನ್ನು ಉಪಯೋಗಿಸುತ್ತದೆ ಮತ್ತು ಈ ರೀತಿ ಪಾಲನೆ
ಕೊಡುತ್ತದೆ ಆದರೆ ಅದು ಮಾಯೆಯ ಪಾಲನೆಯೆಂಬುದು ತಿಳಿಯುವುದೇ ಇಲ್ಲ. ಮಾಯೆಯ ಮತವೋ ಅಥವಾ ತಂದೆಯ ಮತವೋ
ತಿಳಿಯುವುದಿಲ್ಲ. ತಂದೆಯ ಮತದೊಂದಿಗೆ ತನ್ನಮತವನ್ನು ಸೇರಿಸಿಬಿಡುತ್ತದೆ. ಈ ಸೂಕ್ಷ್ಮದೇವತಾತನದಲ್ಲಿ
ಅಥವಾ ಪುರುಷಾರ್ಥದಲ್ಲಿ ವಿಶೇಷವಾಗಿ ಎರಡು ಶಬ್ಧಗಳಿಂದ ಕೂಡಿದಂತಹ ಅಡಚಣೆಯು ಬರುತ್ತದೆ, ಅದೂ
ಸಾಧಾರಣ ಶಬ್ಧದಲ್ಲಿ, ಕಷ್ಟವೇನಿಲ್ಲ. ಆ ಶಬ್ಧವನ್ನು ಎಲ್ಲರೂ ಅನೇಕಬಾರಿ ಬಳಸುತ್ತೀರಿ. ಅದೇನಾಗಿದೆ?
ನಾನು ಮತ್ತು ನನ್ನದು. ಬಾಪ್ದಾದಾರವರು ಬಹಳ ಸಹಜವಾದ ವಿಧಿಯನ್ನು ಮೊದಲೇ ತಿಳಿಸಿದ್ದೇವೆ - ನಾನು
ಮತ್ತು ನನ್ನದನ್ನು ಪರಿವರ್ತನೆ ಮಾಡಿಕೊಳ್ಳಿ. ನೆನಪಿದೆಯೇ? ನೋಡಿ, ಯಾವ ಸಮಯದಲ್ಲಿ ತಾವು “ನಾನು”
ಶಬ್ಧವನ್ನು ಹೇಳುತ್ತೀರಲ್ಲವೆ, ಆ ಸಮಯದಲ್ಲಿ ನಾನು ಆತ್ಮನೇ ಆಗಿದ್ದೇನೆ ಎಂಬುದು ಮುಂದೆಬರಲಿ. ನಾನು
ಶಬ್ಧ ಹೇಳುವಾಗ ತಮ್ಮ ಮುಂದೆ ಆತ್ಮದರೂಪವನ್ನು ಮುಂದೆ ತನ್ನಿ. ನಾನು ಆತ್ಮ, ಈ ರೀತಿ ಹೇಳಬೇಡಿ,
ಸ್ವಾಭಾವಿಕವಾಗಿ ಸ್ವರೂಪದಲ್ಲಿ ಬನ್ನಿ. ನಾನು ಎಂಬ ಶಬ್ಧದ ಸ್ಥಳದಲ್ಲಿ ಆತ್ಮ ಎಂದು ಹಾಕಿ. ನಾನು
ಆತ್ಮ. ಯಾವಾಗ ನನ್ನದು ಎಂಬ ಶಬ್ಧವನ್ನು ಹೇಳುತ್ತೀರೋ ಆಗ ನನ್ನ ಬಾಬಾ ಎಂದು ಹೇಳಿ. ನನ್ನ ರುಮಾಲು,
ನನ್ನ ಸೀರೆ, ನನ್ನದು...... ಆದರೆ ಮೊದಲು ನನ್ನ ಬಾಬಾ. ನನ್ನದು ಎಂಬ ಶಬ್ಧ ಹೇಳಿದಾಗ ಬಾಬಾ
ಮುಂದೆಬರಲಿ. ನಾನು ಎಂಬ ಶಬ್ಧ ಬಂದಾಗ ಆತ್ಮದ ರೂಪ ಮುಂದೆಬರಲಿ, ಇದನ್ನು ಸ್ವಭಾವ ಮತ್ತು
ಸ್ವಾಭಾವಿಕವನ್ನಾಗಿ ಮಾಡಿಕೊಳ್ಳಿ. ಸಹಜವಲ್ಲವೆ ಅಥವಾ ಕಷ್ಟವೆ? ನಾನು ಆತ್ಮನಾಗಿದ್ದೇನೆ ಎಂಬುದನ್ನು
ತಿಳಿದಿದ್ದೀರಿ, ಕೇವಲ ಆ ಸಮಯದಲ್ಲಿ ಒಪ್ಪುವುದಿಲ್ಲ, ತಿಳಿದುಕೊಳ್ಳುವುದು ಎಂದರೆ 100%,
ಒಪ್ಪುವುದು ಪರ್ಸೆಂಟೇಜಿನಲ್ಲಿದೆ. ದೇಹಾಭಿಮಾನ ಸ್ವಾಭಾವಿಕವಾಗಿದೆ, ನಾನು ಶರೀರ ಎಂಬುದನ್ನು ನೆನಪು
ಮಾಡಬೇಕೇನು? ಸಹಜವಾಗಿ ನೆನಪಿದೆಯಲ್ಲವೆ? ನಾನು ಎಂಬ ಶಬ್ಧವು ಹೇಳುವ ಮೊದಲು ಮನಸ್ಸಿನಲ್ಲಿ
ಬರುತ್ತದೆ, ಸಂಕಲ್ಪದಲ್ಲಿಯೂ ನಾನು ಎಂಬ ಶಬ್ಧ ಬಂದಾಗ ತಕ್ಷಣವೇ ಆತ್ಮಸ್ವರೂಪ ಮುಂದೆಬರಲಿ. ಇದು
ಸಹಜವಿಲ್ಲ, ಅಭ್ಯಾಸ ಮಾಡಬೇಕು. ಕೇವಲ ನಾನು ಎಂಬ ಶಬ್ಧವನ್ನು ಹೇಳುವುದಲ್ಲ, ಆತ್ಮನಾಗಿ ಹೇಳಬೇಕು
ಆಗ ಪಕ್ಕಾ ಆಗಿಬಿಡುತ್ತದೆ. ಪಕ್ಕಾ ಇದೆಯಲ್ಲವೆ. ಬೇರೆಯವರನ್ನು ಕರೆದಾಗ ತಾವು ಆಕಡೆ ಈಕಡೆ
ನೋಡುತ್ತೀರಲ್ಲವೆ. ನಾನು ಆತ್ಮನಾಗಿದ್ದೇನೆ, ಆತ್ಮನ ಪ್ರಪಂಚವೇ ಬಾಪ್ದಾದಾ. ಆತ್ಮನ ಸಂಸ್ಕಾರ
ಬ್ರಾಹ್ಮಣನಿಂದ ಸೂಕ್ಷ್ಮದೇವತೆ, ಸೂಕ್ಷ್ಮದೇವತೆಯಿಂದ ದೇವತೆ ಅಂದಾಗ ಏನು ಮಾಡುತ್ತೀರಿ? ಇದು
ಮನಸ್ಸಿನ ಡ್ರಿಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಡಾಕ್ಟರ್ ಸಹ ವ್ಯಾಯಾ ಮಾಡಿ ಎಂದು ಹೇಳುತ್ತಾರೆ
ಅಂದಾಗ ಈಗ ಈ ವ್ಯಾಯಾಮವನ್ನು ಮಾಡಿ - ನಾನು ಆತ್ಮ, ನನ್ನ ಬಾಬಾ. ಏಕೆಂದರೆ ಸಮಯದ ತೀವ್ರತೆಯನ್ನು
ಡ್ರಾಮಾನುಸಾರ ನಿಧಾನ ಮಾಡಬೇಕಾಗುತ್ತದೆ. ರಚಯಿತರು ತೀವ್ರವಾಗಿ ಮುಂದೆ ಇರಬೇಕು, ರಚನೆಯಲ್ಲ ಆದರೆ
ವರ್ತಮಾನದಲ್ಲಿ ಸಮಯ ತೀವ್ರವಾಗಿ ಹೋಗುತ್ತಿದೆ. ಪ್ರಕೃತಿ ಎವರೆಡಿಯಿದೆ ಕೇವಲ ಆದೇಶಕ್ಕಾಗಿ ನಿಂತಿದೆ.
ಡ್ರಾಮಾದಲ್ಲಿ ಸಮಯವೇ ಆದೇಶ ಕೊಡುತ್ತದೆಯಲ್ಲವೆ. ಸ್ಥಾಪನೆ ಮಾಡುವಂತಹವರು ಒಂದುವೇಳೆ ಸದಾ
ಎವರೆಡಿಯಿಲ್ಲದಿದ್ದರೆ ವಿನಾಶದ ನಂತರ ಪ್ರಳಯವಾಗುತ್ತದೆಯೇನು? ಪ್ರಳಯವಾಗಬೇಕೇನು? ಅಥವಾ ವಿನಾಶದ
ನಂತರ ಸ್ಥಾಪನೆಯಾಗಬೇಕೆ? ಯಾರು ಸ್ಥಾಪನೆಗೆ ನಿಮಿತ್ತರಾಗಿದ್ದೀರಿ, ಈಗ ಸಮಯಪ್ರಮಾಣ ಸದಾ
ಸಿದ್ಧರಾಗಬೇಕು. ಬಾಪ್ದಾದಾ ಇದನ್ನೇ ಬಯಸುತ್ತೇವೆ - ಹೇಗೆ ಬ್ರಹ್ಮಾತಂದೆಯು ಅರ್ಜುನನಾದರಲ್ಲವೆ.
ಉದಾಹರಣೆಯಾದರಲ್ಲವೆ ಹಾಗೆಯೇ ಬ್ರಹ್ಮಾತಂದೆಯನ್ನು ಅನುಸರಿಸುವಂತಹವರು ಏನಾಗುತ್ತಾರೆ? ತನ್ನನ್ನು
ನೋಡಿಕೊಳ್ಳಿ, ಸಮಯವನ್ನೂ ನೋಡಿ.
ವರ್ತಮಾನ ಸಮಯದಲ್ಲಿ ತಾವೆಲ್ಲರೂ ಬ್ರಾಹ್ಮಣರಿಂದ ಸೂಕ್ಷ್ಮದೇವತೆಗಳಾದ ಆತ್ಮರಿಗೆ ನಿಮಿತ್ತಭಾವ
ಮತ್ತು ನಿರ್ಮಾಣಭಾವ - ಈ ಎರಡೂ ಶಬ್ಧಗಳನ್ನು ಅಂಡರ್ಲೈನ್ ಮಾಡಬೇಕೆಂದು ಬಾಪ್ದಾದಾ ಈ ಮೊದಲೇ
ತಿಳಿಸಿದ್ದರು. ಇದರಿಂದ ದೇಹಾಭಿಮಾನದಿಂದ ಕೂಡಿದ ನನ್ನತನವೂ ಸಹ ಸಮಾಪ್ತಿಯಾಗುತ್ತದೆ.
ನಿಮಿತ್ತನಾಗಿದ್ದೇನೆ ಮತ್ತು ನಿರ್ಮಾಣ ಸ್ವಭಾವದವನಾಗಿದ್ದೇನೆ, ಎಷ್ಟು ನಿಮಿತ್ತರಾಗಿದ್ದೇವೆ ಅಷ್ಟು
ಮಾನ್ಯತೆ ಸಿಗುತ್ತದೆ ಏಕೆಂದರೆ ಯಾರು ನಿರ್ಮಾಣರಾಗಿರುತ್ತಾರೋ ಅವರು ಎಲ್ಲರಿಗೂ
ಪ್ರಿಯರಾಗಿರುತ್ತಾರೆ ಮತ್ತು ಯಾವಾಗ ಪ್ರಿಯರಾಗುತ್ತಾರೋ ಆಗ ತಾನಾಗಿಯೇ ಗೌರವ ಸಿಗುತ್ತದೆ.
ನಿಮಿತ್ತ ಮತ್ತು ನಿರ್ಮಾಣಭಾವ ಮತ್ತು ಭಾವನೆ, ಶುಭಭಾವನೆ. ಭಾವ ಮತ್ತು ಭಾವನೆ ಎರಡಿರುತ್ತದೆ
ಅಂದಾಗ ನಿಮಿತ್ತಭಾವ ಮತ್ತು ಭಾವನೆ, ಪ್ರತಿಯೊಬ್ಬರ ಪ್ರತಿ ಶುಭಭಾವನೆ-ಶುಭಕಾಮನೆ. ಹೇಗೇ ಇರಲಿ
ತಮ್ಮ ನಿಮಿತ್ತ, ನಿರ್ಮಾಣಭಾವ ಮತ್ತು ಶುಭಭಾವನೆ ವಾಯುಮಂಡಲವನ್ನು ಮುಂದಿರುವವರನ್ನೂ
ವೈಬ್ರೇಷನ್ನಿನಿಂದ ಬದಲಾವಣೆ ಮಾಡಿಬಿಡುತ್ತದೆ. ಕೆಲವು ಮಕ್ಕಳು ಆತ್ಮಿಕ ವಾರ್ತಾಲಾಪದಲ್ಲಿ
ಹೇಳುತ್ತಾರೆ - ನಾವು ಒಂದು ತಿಂಗಳಿನಿಂದ ಶುಭಭಾವನೆಯನ್ನಿಟ್ಟಿದ್ದೇವೆ, ಅವರು ಬದಲಾವಣೆಯಾಗುವುದೇ
ಇಲ್ಲವೆಂದು ನಂತರ ಸುಸ್ತಾಗಿಬಿಡುತ್ತಾರೆ, ಹೃದಯ ವಿಧೀರ್ಣರಾಗಿಬಿಡುತ್ತಾರೆ. ಆ ಬಡಪಾಯಿಗಳ ವೃತ್ತಿ
ಅಥವಾ ದೃಷ್ಟಿ ಕಲ್ಲಿನ ಸಮಾನವಾಗಿರುತ್ತದೆ ಅಂದಮೇಲೆ ಅವರಿಗೆ ಬದಲಾವಣೆಯಾಗಲು ಸಮಯ
ಹಿಡಿಸುತ್ತದೆಯಲ್ಲವೆ. ಒಳ್ಳೆಯದು. ಅವರು ಬದಲಾಗದೇ ಇರಬಹುದು ಆದರೆ, ನೀವಾದರೂ ತಮ್ಮನ್ನು
ಸರಿಪಡಿಸಿಕೊಳ್ಳಿ. ನೀವು ನಿಮ್ಮ ಸ್ಥಿತಿಯಲ್ಲಿ ಸ್ಥಿತರಾಗಿ. ನೀವೇಕೆ ಹೃದಯವಿಧೀರ್ಣರಾಗುತ್ತೀರಿ?
ಹೃದಯವಿಧೀರ್ಣರಾಗಬೇಡಿ. ಒಳ್ಳೆಯದು- ಅವರು ಬದಲಾಗಲಿಲ್ಲವೆಂದರೆ ನಾನೂ ಅವರ ಜೊತೆ ಬದಲಾಗಬಾರದೇ?
ಹೃದಯವಿಧೀರ್ಣರಾದಿರೆಂದರೆ ನಿಮಗಿಂತ ಅವರೇ ಶಕ್ತಿಶಾಲಿಗಳಾದರೆಂದರ್ಥ ಏಕೆಂದರೆ ಅವರು ನಿಮ್ಮನ್ನು
ಬದಲಾವಣೆ ಮಾಡಿದರು. ನೀವು ನಿಮ್ಮ ಸ್ವಮಾನದ ಸೀಟನ್ನು ಏಕೆ ಬಿಡುತ್ತೀರಿ? ವ್ಯರ್ಥಸಂಕಲ್ಪವನ್ನೂ
ಮಾಡಬಾರದು, ಏಕೆ? ‘ಏಕೆ’ ಎಂದು ಹೇಳಿದಿರೆಂದರೆ ವ್ಯರ್ಥಸಂಕಲ್ಪಗಳ ಬಾಗಿಲು ತೆರೆಯಿತೆಂದು ತಿಳಿಯಿರಿ.
ಆ ಬಾಗಿಲನ್ನು ಮುಚ್ಚುವುದು ಬಹಳ ಕಷ್ಟವಾಗುತ್ತದೆ ಆದ್ದರಿಂದ ಏಕೆ ಎಂದು ಯೋಚಿಸಬೇಡಿ.
ದಯಾಹೃದಯಿಗಳಾಗಿ ವೈಬ್ರೇಷನ್ನನ್ನು ಕೊಡುತ್ತಾಹೋಗಿ. ನೀವು ನಿಮ್ಮ ಸೀಟನ್ನು ಬಿಟ್ಟು
ಹೃದಯವಿಧೀರ್ಣರಾಗುತ್ತೀರಿ? ನೆನಪಿಟ್ಟುಕೊಳ್ಳಿ, ತಮ್ಮ ಸ್ಥಾನದಿಂದ ಕೆಳಗಿಳಿಯಬೇಡಿ ನಂತರ ಬಹಳ
ವಿರೋಧವಾಗಿಬಿಡುತ್ತದೆ. ವ್ಯಕ್ತಿ-ವ್ಯಕ್ತಿಗಳೊಡನೆ ವಿರೋಧವಾಗುತ್ತದೆ, ಸ್ವಭಾವ-ಸಂಸ್ಕಾರಗಳಲ್ಲಿ
ವಿರೋಧವುಂಟಾಗುತ್ತದೆ, ವಿಚಾರಗಳಲ್ಲಿ ವಿರೋಧವುಂಟಾಗುತ್ತದೆ ಆದ್ದರಿಂದ ನಿಮ್ಮ ಸೀಟನ್ನು ಬಿಟ್ಟು
ಇಳಿಯಬೇಡಿ ಅಂದಾಗ ನಾಳೆ ಏನು ಮಾಡುತ್ತೀರಿ? ನೆನಪಿದೆಯೇ? ಬಾಪ್ದಾದಾರವರ ಜೊತೆ ಪ್ರೀತಿಯಿದೆಯಲ್ಲವೆ!
ಬಾಪ್ದಾದಾರವರು ಎಲ್ಲಾ ಮಕ್ಕಳು ಬ್ರಹ್ಮಾತಂದೆಯ ಸಮಾನರಾಗಬೇಕೆಂದು ತಿಳಿಯುತ್ತೇವೆ. ಬಾಬಾ (ಬ್ರಹ್ಮಾ)
ರವರ ಮುಂದೆ ವಿರೋಧವುಂಟಾಗಲಿಲ್ಲವೇನು? ಮಾಯೆಯದೂ ಸಹ ವಿರೋಧವಿತ್ತು, ಆತ್ಮರದೂ ವಿರೋಧವಿತ್ತು,
ಪ್ರಕೃತಿಯದೂ ಸಹ ವಿರೋಧವಿತ್ತು ಆದರೆ ಬ್ರಹ್ಮಾತಂದೆಯು ತನ್ನ ಸ್ಥಿತಿಯನ್ನು ಬಿಟ್ಟರೆ?
ಬಿಡಲಿಲ್ಲವಲ್ಲವೆ? ಆಗ ಸೂಕ್ಷ್ಮದೇವತೆಯಾದರಲ್ಲವೆ. ಅಂದಾಗ ಈಗ ಒಬ್ಬರಿಗೊಬ್ಬರು ತಮ್ಮನ್ನು
ಸೂಕ್ಷ್ಮದೇವತೆಗಳೆಂದು ತಿಳಿದು ನಡೆಯಿರಿ. ನಾನು ಸೂಕ್ಷ್ಮದೇವತೆಯಾಗಿದ್ದೇನೆ, ಎಲ್ಲರೂ
ಸೂಕ್ಷ್ಮದೇವತೆಯಾಗಿದ್ದಾರೆ. ಹಳೆಯ ಸಂಸ್ಕಾರ, ಹಳೆಯ ಜಗತ್ತಿನೊಂದಿಗೆ ನನ್ನದ್ಯಾವುದೇ ಸಂಬಂಧವಿಲ್ಲ.
ಈ ಬ್ರಾಹ್ಮಣರ ಜೊತೆಯೂ ಯಾವುದೇ ಸಂಬಂಧವಿಲ್ಲ. ಇವರು ಸೂಕ್ಷ್ಮದೇವತೆ, ಇವರು ಸೂಕ್ಷ್ಮದೇವತೆ, ಇವರು
ಸೂಕ್ಷ್ಮದೇವತೆ, ಇದೇ ದೃಷ್ಟಿಯಿಂದ ನೋಡಿ. ಈ ವಾತಾವರಣವನ್ನು ಹರಡಿ. ಒಳ್ಳೆಯದು.
ಈಗ ಒಂದು ನಿಮಿಷ ಇಂತಹ ಸರ್ವಶಕ್ತಿಗಳಿಂದ ಸಂಪನ್ನರಾಗಿ ವಿಶ್ವದ ಸರ್ವ ಆತ್ಮಗಳಿಗೆ ಕಿರಣಗಳನ್ನು
ಹರಡಿ. ಇದರಿಂದ ನಾಲ್ಕಾರು ಕಡೆ ತಮ್ಮ ಶಕ್ತಿಗಳ ಪ್ರಕಂಪನಗಳು ಇಡೀ ವಿಶ್ವದಲ್ಲಿ ಹರಡಲಿ. ಒಳ್ಳೆಯದು.
ನಾಲ್ಕಾರು ಕಡೆಯ ಬ್ರಾಹ್ಮಣರಿಂದ ಫರಿಶ್ತಾ ಮಕ್ಕಳಿಗೆ, ಸದಾ ಸ್ವದರ್ಶನದ ಮೂಲಕ ಸ್ವಯಂನ್ನು
ಪರಿಶೀಲನೆ ಮತ್ತು ಪರಿವರ್ತನೆ ಮಾಡಿಕೊಳ್ಳುವಂತಹ, ಬ್ರಹ್ಮಾತಂದೆಯನ್ನು ಫಾಲೋ ಮಾಡುವಂತಹ ಆಜ್ಞಾಕಾರಿ
ಮಕ್ಕಳಿಗೆ ಸದಾ ಡಬಲ್ ಲೈಟ್ ಆಗಿ ಸೇವೆ ಮತ್ತು ಪುರುಷಾರ್ಥ ಮಾಡುವಂತಹ ಫರಿಸ್ಥಾ ಆತ್ಮಗಳಿಗೆ, ಸದಾ
ತಮ್ಮ ಸ್ಥಿತಿಯ (ಪೆÇಸಿಷನ್) ಆಸನದಲ್ಲಿ ಸ್ಥಿತರಾಗಿ ವಿರೋಧವನ್ನು (ಅಪೆÇಸಿಷನ್) ಸಮಾಪ್ತಿ
ಮಾಡಿಕೊಳ್ಳುವಂತಹ ಮಾಸ್ಟರ್ ಸರ್ವ ಶಕ್ತಿವಂತ ಮಕ್ಕಳಿಗೆ, ಸಂಗಮಯುಗದ ಪ್ರತ್ಯಕ್ಷಫಲವನ್ನು ಅನುಭವ
ಮಾಡುವಂತಹ ತಂದೆಯ ಸಮೀಪ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ವರದಾನ:
ಪ್ರತ್ಯಕ್ಷತೆಯ
ಸಮಯವನ್ನು ಸಮೀಪ ತರುವಂತಹ ಸದಾ ಶುಭಚಿಂತಕ ಮತ್ತು ಸ್ವ ಚಿಂತಕ ಭವ
ಸೇವೆಯಲ್ಲಿ ಸಫಲತೆಗೆ
ಆಧಾರವಾಗಿದೆ ಶುಭಚಿಂತಕ ವೃತ್ತಿ ಏಕೆಂದರೆ ತಮ್ಮ ವೃತ್ತಿ ಆತ್ಮಗಳಿಗೆ ಗ್ರಹಣ ಶಕ್ತಿ ಅಥವಾ
ಜಿಜ್ಞಾಸೆಯನ್ನು ಹೆಚ್ಚಿಸುತ್ತದೆ. ಇದರಿಂದ ವಾಣಿಯ ಸೇವೆ ಸಹಜವಾಗಿ ಸಫಲವಾಗಿಬಿಡುವುದು. ಮತ್ತು
ಸ್ವಯಂನ ಪ್ರತಿ ಸ್ವಚಿಂತನೆ ಮಾಡುವಂತಹ ಸ್ವಚಿಂತಕ ಆತ್ಮ ಸದಾ ಮಾಯಾ ಫೂಫ್, ಯಾರದೇ ಬಲಹೀನತೆಗಳನ್ನು
ಗ್ರಹಣಮಾಡುವುದರಿಂದ, ವ್ಯಕ್ತಿ ಮತ್ತು ವೈಭವದ ಆಕರ್ಷಣೆಯಿಂದ ಪೂಫ್ ಆಗಿರುತ್ತಾರೆ. ಆದ್ದರಿಂದ ಈ
ಎರಡೂ ವರದಾನಗಳನ್ನು ನಿಮ್ಮ ಜೀವನದಲ್ಲಿ ಕಾರ್ಯರೂಪದಲ್ಲಿ ತನ್ನಿ ಆಗ ಪ್ರತ್ಯಕ್ಷತೆಯ ಸಮಯ ಸಮೀಪ
ಬರುವುದು.
ಸ್ಲೋಗನ್:
ತಮ್ಮ
ಸಂಕಲ್ಪಗಳನ್ನೂ ಸಹ ಅರ್ಪಣೆ ಮಾಡಿದಾಗ ಸರ್ವ ಬಲಹೀನತೆಗಳು ಸ್ವತಃವಾಗಿ ದೂರವಾಗಿಬಿಡುವುದು
ಅವ್ಯಕ್ತ ಸೂಚನೆಗಳು:
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಪರಮಾತ್ಮ ಪ್ರೀತಿಯ
ಅನುಭವ ಮಾಡುವುದಕ್ಕಾಗಿ ಅಂತರ್ಮುಖಿಯಾಗಿ ಈ ದೇಹದಿಂದ ಭಿನ್ನ, ದೇವಿ( ಆತ್ಮಿಕ) ರೂಪದಲ್ಲಿ
ಸ್ಥಿತರಾಗಿರುವ ಅಭ್ಯಾಸವನ್ನು ಹೆಚ್ಚು ಮಾಡಿಕೊಳ್ಳಿ. ಸದಾ ಅಂತರ್ಮುಖತೆಯ ಗುಹೆಯಲ್ಲಿ ಇರಿ ಆಗ
ಹಳೆಯ ಪ್ರಪಂಚದ ವಾತಾವರಣದಿಂದ ದೂರವಾಗುತ್ತಾ ಹೋಗುವಿರಿ. ವಾತಾವರಣದ ಪ್ರಭಾವದಲ್ಲಿ ಬರುವುದಿಲ್ಲ.