02.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೆನಪಿನಲ್ಲಿ ಇರುತ್ತೀರೆಂದರೆ ದೂರದಲ್ಲಿದ್ದರೂ ಜೊತೆಯಲ್ಲಿರುತ್ತೀರಿ, ನೆನಪಿನಿಂದ ಜೊತೆಯ ಅನುಭವವೂ ಆಗುತ್ತದೆ ಮತ್ತು ವಿಕರ್ಮಗಳೂ ವಿನಾಶವಾಗುತ್ತವೆ”

ಪ್ರಶ್ನೆ:
ದೂರದೇಶಿ ತಂದೆಯು ಮಕ್ಕಳನ್ನು ದೂರಾಂದೇಶಿಗಳನ್ನಾಗಿ ಮಾಡಲು ಯಾವ ಜ್ಞಾನವನ್ನು ಕೊಡುತ್ತಾರೆ?

ಉತ್ತರ:
ಆತ್ಮವು ಚಕ್ರದಲ್ಲಿ ಹೇಗೆ ಭಿನ್ನ-ಭಿನ್ನ ವರ್ಣಗಳಲ್ಲಿ ಬರುತ್ತದೆ, ಇದರ ಜ್ಞಾನವನ್ನು ದೂರಾಂದೇಶಿ ತಂದೆಯು ಕೊಡುತ್ತಾರೆ. ನಿಮಗೆ ತಿಳಿದಿದೆ- ನಾವೀಗ ಬ್ರಾಹ್ಮಣವರ್ಣದವರಾಗಿದ್ದೇವೆ, ಇದಕ್ಕೆ ಮೊದಲು ಜ್ಞಾನವಿಲ್ಲದಿದ್ದಾಗ ಶೂದ್ರವರ್ಣದವರಾಗಿದ್ದೆವು, ಅದಕ್ಕೆ ಮೊದಲು ವೈಶ್ಯ.......... ವರ್ಣದವರಾಗಿದ್ದೆವು. ದೂರದೇಶದಲ್ಲಿರುವ ತಂದೆಯು ಈ ದೂರಾಂದೇಶಿಗಳಾಗುವ ಪೂರ್ಣಜ್ಞಾನವನ್ನು ಮಕ್ಕಳಿಗೆ ಕೊಡುತ್ತಾರೆ.

ಗೀತೆ:
ಯಾರು ತಂದೆಯ ಜೊತೆಯಿರುತ್ತಾರೆಯೋ ಅವರಿಗೆ ಜ್ಞಾನದ ಸುರಿಮಳೆ................

ಓಂ ಶಾಂತಿ.
ಯಾರು ಜ್ಞಾನಸಾಗರನ ಜೊತೆಯಿದ್ದಾರೆಯೋ ಅವರಿಗಾಗಿ ಜ್ಞಾನದ ಮಳೆಯಾಗಿದೆ. ನೀವು ತಂದೆಯ ಜೊತೆಯಲ್ಲಿದ್ದೀರಲ್ಲವೆ. ಭಲೆ ವಿದೇಶದಲ್ಲಿರಬಹುದು ಅಥವಾ ಎಲ್ಲಿಯೇ ಇರಬಹುದು ಬುದ್ಧಿಯಿಂದ ತಂದೆಯ ಜೊತೆಯಲ್ಲಿದ್ದೀರಿ. ನೆನಪು ಮಾಡುತ್ತೀರಲ್ಲವೆ. ಯಾರೆಲ್ಲಾ ಮಕ್ಕಳು ನೆನಪಿನಲ್ಲಿರುವರೋ ಅವರು ಸದಾ ಜೊತೆಯಲ್ಲಿರುತ್ತಾರೆ. ನೆನಪಿನಲ್ಲಿರುವುದರಿಂದ ಜೊತೆಯೂ ಇರುತ್ತಾರೆ ಮತ್ತು ವಿಕರ್ಮಗಳೂ ವಿನಾಶವಾಗುತ್ತವೆ ನಂತರ ವಿಕರ್ಮಾಜೀತ ಸಂವತ್ಸರವೂ ಆರಂಭವಾಗುತ್ತದೆ ಮತ್ತೆ ರಾವಣರಾಜ್ಯವು ಆರಂಭವಾದಾಗ ರಾಜಾವಿಕ್ರಮ ಸಂವತ್ಸರ ಎಂದು ಹೇಳುತ್ತಾರೆ. ಅದು ವಿಕರ್ಮಾಜೀತ ಸಂವತ್ಸರ, ಇದು ವಿಕ್ರಮಿ ಸಂವತ್ಸರ. ನೀವೀಗ ವಿಕರ್ಮಾಜೀತರಾಗುತ್ತಿದ್ದೀರಿ ನಂತರ ನೀವೇ ವಿಕರ್ಮಿಗಳಾಗುತ್ತೀರಿ. ಈ ಸಮಯದಲ್ಲಿ ಎಲ್ಲರೂ ಅತಿವಿಕರ್ಮಿಗಳಾಗಿದ್ದಾರೆ, ಯಾರಿಗೂ ತಮ್ಮ ಧರ್ಮದ ಬಗ್ಗೆ ತಿಳಿದಿಲ್ಲ. ಇಂದು ತಂದೆಯು ಒಂದು ಚಿಕ್ಕದಾದ ಪ್ರಶ್ನೆಯನ್ನು ಕೇಳುತ್ತಾರೆ- ಸತ್ಯಯುಗದಲ್ಲಿ ನಾವು ಆದಿಸನಾತನ ದೇವಿ-ದೇವತಾ ಧರ್ಮದವರೆಂದು ನಿಮಗೆ ತಿಳಿದಿದೆ, ನಾವು ಕ್ರಿಶ್ಚಿಯನ್ ಧರ್ಮದವರೆಂದು ತಿಳಿಯುತ್ತಾರೆಯೇ? ಇದು ವಿಚಾರ ಮಾಡುವ ಮಾತಲ್ಲವೆ. ನಾವು ಇಂತಹ ಧರ್ಮದವರೆಂದು ತಿಳಿದುಕೊಳ್ಳಲು ಅಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಇಲ್ಲಿ ಬಹಳಷ್ಟು ಧರ್ಮಗಳಿವೆ. ಆದ್ದರಿಂದ ಪರಿಚಯಕ್ಕಾಗಿ ಬೇರೆ-ಬೇರೆ ಹೆಸರುಗಳನ್ನಿಟ್ಟಿದ್ದಾರೆ. ಅಲ್ಲಿರುವುದೇ ಒಂದು ಧರ್ಮ ಆದ್ದರಿಂದ ನಾವು ಇಂತಹ ಧರ್ಮದವರೆಂದು ಹೇಳುವ ಅವಶ್ಯಕತೆಯಿಲ್ಲ. ಯಾವ-ಯಾವ ಧರ್ಮವಿರುತ್ತದೆ ಎಂಬುದು ಅವರಿಗೆ ತಿಳಿದಿರುವುದೇ ಇಲ್ಲ. ಅವರದೇ ರಾಜ್ಯವಿರುತ್ತದೆ, ನಾವು ಆದಿಸನಾತನ ದೇವಿ-ದೇವತಾ ಧರ್ಮದವರು ಆಗಿದ್ದೇವೆಂದು ನಿಮಗೀಗ ತಿಳಿದಿದೆ. ದೇವಿ-ದೇವತೆಗಳೆಂದು ಮತ್ತ್ಯಾರಿಗೂ ಹೇಳಲು ಸಾಧ್ಯವಿಲ್ಲ. ಪತಿತರಾಗುವ ಕಾರಣ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಪವಿತ್ರರಿಗೇ ದೇವತೆಗಳೆಂದು ಹೇಳಲಾಗುವುದು. ಇಲ್ಲಿ ಇಂತಹ ಯಾವುದೇ ಮಾತಿರುವುದಿಲ್ಲ. ಯಾರೊಂದಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ನೀವೀಗ ಸಂಗಮಯುಗದಲ್ಲಿದ್ದೀರಿ, ನಿಮಗೀಗ ತಿಳಿದಿದೆ- ಆದಿಸನಾತನ ದೇವಿ-ದೇವತಾ ಧರ್ಮವು ಪುನಃ ಸ್ಥಾಪನೆಯಾಗುತ್ತಿದೆ. ಸತ್ಯಯುಗದಲ್ಲಿ ಧರ್ಮದ ಮಾತೇ ಇರುವುದಿಲ್ಲ, ಅಲ್ಲಿ ಒಂದೇ ಧರ್ಮವಿರುತ್ತದೆ. ಇದನ್ನು ಮಕ್ಕಳಿಗೆ ತಿಳಿಸಿದ್ದಾರೆ, ಮಹಾಪ್ರಳಯವಾಗುತ್ತದೆ ಅರ್ಥಾತ್ ಏನೂ ಉಳಿಯುವುದಿಲ್ಲವೆಂದು ಮನುಷ್ಯರು ಹೇಳುವ ಮಾತು ತಪ್ಪಾಗಿದೆ. ಯಾವುದು ಸರಿಯೆಂಬುದನ್ನು ತಂದೆಯೇ ತಿಳಿಸುತ್ತಾರೆ. ಶಾಸ್ತ್ರಗಳಂತೂ ಜಲಮಯವಾಯಿತೆಂದು ತೋರಿಸುತ್ತಾರೆ. ತಂದೆಯು ತಿಳಿಸುತ್ತಾರೆ- ಭಾರತವನ್ನು ಬಿಟ್ಟು ಉಳಿದೆಲ್ಲವೂ ಜಲಮಯವಾಗುತ್ತದೆ. ಒಂದು ಭಾರತದಲ್ಲಿಯೇ ನೋಡಿ, ಎಷ್ಟೊಂದು ಹಳ್ಳಿಗಳಿವೆ! ಮೊದಲು ಕಾಡಾಗಿರುತ್ತದೆ, ಮತ್ತೆ ಅದರಿಂದ ವೃದ್ಧಿಹೊಂದುತ್ತಾ ಹೋಗುತ್ತದೆ. ಅಲ್ಲಂತೂ ಕೇವಲ ನೀವು ಆದಿಸನಾತನ ದೇವಿ-ದೇವತಾಧರ್ಮದವರೇ ಇರುತ್ತೀರಿ. ನೀವು ಬ್ರಾಹ್ಮಣರ ಬುದ್ಧಿಯಲ್ಲಿ ತಂದೆಯು ಇದನ್ನು ಧಾರಣೆ ಮಾಡಿಸುತ್ತಿದ್ದಾರೆ. ನಿಮಗೀಗ ತಿಳಿದಿದೆ- ಶ್ರೇಷ್ಠಾತಿಶ್ರೇಷ್ಠ ಶಿವತಂದೆಯು ಯಾರು? ಅವರ ಪೂಜೆಯನ್ನೇಕೆ ಮಾಡಲಾಗುತ್ತದೆ? ಎಕ್ಕದ ಹೂವನ್ನೇಕೆ ಹಾಕುತ್ತಾರೆ? ಅವರು ನಿರಾಕಾರನಾಗಿದ್ದಾರಲ್ಲವೆ. ನಾಮ-ರೂಪದಿಂದ ಭಿನ್ನವೆಂದು ಹೇಳುತ್ತಾರೆ ಆದರೆ ನಾಮ-ರೂಪದಿಂದ ಭಿನ್ನವಾದ ವಸ್ತುವು ಯಾವುದೂ ಇರುವುದಿಲ್ಲ. ನಾಮ-ರೂಪದಿಂದ ಭಿನ್ನವಾದ ವಸ್ತುವೆಂದು ಹೇಳಿದಮೇಲೆ ಯಾವುದಕ್ಕೆ ಹೂವನ್ನಿಡುತ್ತಾರೆ! ಮೊಟ್ಟಮೊದಲಿಗೆ ಶಿವತಂದೆಯ ಪೂಜೆಯಾಗುತ್ತದೆ. ಅವರ ಮಂದಿರಗಳನ್ನು ಕಟ್ಟುತ್ತಾರೆ ಏಕೆಂದರೆ ತಂದೆಯು ಭಾರತ ಮತ್ತು ಇಡೀ ಪ್ರಪಂಚದ ಮಕ್ಕಳ ಸೇವೆ ಮಾಡುತ್ತಾರೆ. ಮಕ್ಕಳ ಸೇವೆಯನ್ನೇ ಮಾಡಲಾಗುತ್ತದೆಯಲ್ಲವೆ. ಈ ಸಮಯದಲ್ಲಿ ನೀವು ತಮ್ಮನ್ನು ದೇವಿ-ದೇವತಾ ಧರ್ಮದವರೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವು ದೇವಿ-ದೇವತೆಗಳಾಗಿದ್ದೇವೆ, ಈಗ ಪುನಃ ಆಗುತ್ತಿದ್ದೇವೆಂದು ತಿಳಿದಿರಲೇ ಇಲ್ಲ. ಈಗ ತಂದೆಯು ತಿಳಿಸುತ್ತಿದ್ದಾರೆ ಅಂದಮೇಲೆ ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಅವರಿಗೆ ಜ್ಞಾನಸಾಗರ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿಸಿಕೊಡಬೇಕು. ಗಾಯನವಿದೆ- ರಚಯಿತ ಮತ್ತು ರಚನೆಯನ್ನು ಋಷಿ-ಮುನಿ ಮೊದಲಾದವರೂ ಸಹ ತಿಳಿದುಕೊಂಡಿಲ್ಲ. ನೇತಿ-ನೇತಿ ಎಂದು ಹೇಳಿಹೋಗಿದ್ದಾರೆ. ಹೇಗೆ ಚಿಕ್ಕಮಕ್ಕಳಿಗೆ ಜ್ಞಾನವಿರುತ್ತದೆಯೇ? ದೊಡ್ಡದಾಗುತ್ತಾ ಹೋದಂತೆ ಬುದ್ಧಿಯು ಬೆಳವಣಿಗೆಯಾಗುತ್ತಾ ಹೋಗುತ್ತದೆ. ವಿದೇಶದವೆಲ್ಲಿದೆ, ಅದೆಲ್ಲಿದೆ, ಇದೆಲ್ಲಿದೆ ಎಂಬುದು ಬುದ್ಧಿಯಲ್ಲಿ ಬರುತ್ತಾ ಹೋಗುವುದು. ಹಾಗೆಯೇ ನೀವು ಮಕ್ಕಳೂ ಸಹ ಮೊದಲು ಬೇಹದ್ದಿನ ಜ್ಞಾನವನ್ನು ತಿಳಿದುಕೊಂಡಿರಲಿಲ್ಲ. ಇವರೂ (ಬ್ರಹ್ಮಾ) ಹೇಳುತ್ತಾರೆ- ಭಲೆ ನಾನು ಶಾಸ್ತ್ರ ಮೊದಲಾದವುಗಳನ್ನು ಓದುತ್ತಿದ್ದೆನು ಆದರೆ ಏನೂ ಅರ್ಥವಾಗುತ್ತಿರಲಿಲ್ಲ. ಮನುಷ್ಯರೇ ಈ ನಾಟಕದಲ್ಲಿ ಪಾತ್ರಧಾರಿಗಳಲ್ಲವೇ!

ಇಡೀ ಆಟವೇ ಎರಡು ಮಾತುಗಳ ಮೇಲೆ ಮಾಡಲ್ಪಟ್ಟಿದೆ. ಭಾರತದ ಸೋಲು ಮತ್ತು ಗೆಲುವು. ಭಾರತದಲ್ಲಿ ಸತ್ಯಯುಗದ ಆದಿಯ ಸಮಯದಲ್ಲಿ ಪವಿತ್ರಧರ್ಮವಿತ್ತು, ಈ ಸಮಯದಲ್ಲಿ ಅಪವಿತ್ರಧರ್ಮವಾಗಿದೆ. ಅಪವಿತ್ರತೆಯಕಾರಣ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ ಆದರೂ ಸಹ ಶ್ರೀ ಶ್ರೀ ಎಂದು ಹೆಸರಿಟ್ಟುಕೊಳ್ಳುತ್ತಾರೆ ಆದರೆ ಶ್ರೀ ಎಂದರೆ ಶ್ರೇಷ್ಠ. ಪವಿತ್ರ ದೇವತೆಗಳಿಗೇ ಶ್ರೇಷ್ಠರೆಂದು ಹೇಳಲಾಗುತ್ತದೆ. ಶ್ರೀಮದ್ಭಗವಾನುವಾಚ ಎಂದು ಹೇಳುತ್ತಾರಲ್ಲವೆ ಅಂದಮೇಲೆ ಈಗ ಶ್ರೀ ಯಾರದರು? ತಂದೆಯ ಸನ್ಮುಖದಲ್ಲಿ ಕೇಳಿ ಶ್ರೇಷ್ಠರಾಗುವವರೇ ಅಥವಾ ತಮ್ಮನ್ನು ಶ್ರೀ ಶ್ರೀ ಎಂದು ಕರೆಸಿಕೊಳ್ಳುವವರೇ? ತಂದೆಯ ಕರ್ತವ್ಯದನುಸಾರ ಯಾವ ಹೆಸರು ಬಂದಿದೆ ಅದನ್ನು ತಮ್ಮಮೇಲೆ ಇಟ್ಟುಕೊಳ್ಳುತ್ತಾರೆ. ಇವೆಲ್ಲವೂ ಚಿಕ್ಕಪುಟ್ಟ ಮಾತುಗಳಾಗಿವೆ. ಆದರೂ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಒಬ್ಬ ತಂದೆಯನ್ನು ನೆನಪು ಮಾಡುತ್ತಾ ಇರಿ. ಇದೇ ವಶೀಕರಣ ಮಂತ್ರವಾಗಿದೆ. ನೀವು ರಾವಣನ ಮೇಲೆ ಜಯಗಳಿಸಿ ಜಗಜ್ಜೀತರಾಗುತ್ತೀರಿ. ಪದೇ-ಪದೇ ನಿಮ್ಮನ್ನು ನೀವು ಆತ್ಮನೆಂದು ತಿಳಿಯಿರಿ, ಈ ಶರೀರವಂತೂ ಇಲ್ಲಿ ಪಂಚತತ್ವಗಳಿಂದ ಆಗುತ್ತದೆ, ಮತ್ತೆ ಪಂಚತತ್ವಗಳಲ್ಲಿಯೇ ಲೀನವಾಗುತ್ತದೆ. ಮತ್ತೆ ತಯಾರಾಗುತ್ತದೆ ಆದರೆ ಆತ್ಮವು ಅವಿನಾಶಿಯಾಗಿದೆ, ಅವಿನಾಶಿ ಆತ್ಮಗಳಿಗೇ ಈಗ ಅವಿನಾಶಿ ತಂದೆಯು ಸಂಗಮಯುಗದಲ್ಲಿ ಓದಿಸುತ್ತಾರೆ. ಭಲೆ ಎಷ್ಟಾದರೂ ವಿಘ್ನಗಳು ಬರಲಿ, ಮಾಯೆಯ ಬಿರುಗಾಳಿಗಳು ಬರಲಿ ನೀವು ತಂದೆಯ ನೆನಪಿನಲ್ಲಿರಿ. ನಿಮಗೆ ತಿಳಿದಿದೆ- ನಾವೇ ಸತೋಪ್ರಧಾನರಾಗಿದ್ದೆವು, ಈಗ ತಮೋಪ್ರಧಾನರಾಗಿದ್ದೇವೆ. ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದೀರಿ. ನೀವೇ ಮೊಟ್ಟಮೊದಲು ಭಕ್ತಿ ಮಾಡಿದ್ದೀರಿ. ಅವಶ್ಯವಾಗಿ ಯಾರು ಮೊಟ್ಟಮೊದಲು ಭಕ್ತಿ ಮಾಡಿರುವರೋ ಅವರೇ ಶಿವನ ಮಂದಿರವನ್ನು ಕಟ್ಟಿಸಿದರು ಏಕೆಂದರೆ ಅವರೇ ಧನವಂತರಾಗಿರುತ್ತಾರಲ್ಲವೆ. ದೊಡ್ಡರಾಜರನ್ನು ನೋಡಿ ಅನ್ಯರಾಜರು ಮತ್ತು ಪ್ರಜೆಗಳೂ ಮಾಡುತ್ತಾರೆ. ಇವೆಲ್ಲವೂ ವಿಸ್ತಾರದ ಮಾತುಗಳಾಗಿವೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ ಆದರೆ ತಿಳಿಸಿಕೊಡುವುದರಲ್ಲಿ ಎಷ್ಟೊಂದು ವರ್ಷಗಳವರೆಗೆ ತಿಳಿಸಿಕೊಡುತ್ತಾರೆ. ಜ್ಞಾನವು ಸಹಜವಾಗಿದೆ. ಎಷ್ಟು ನೆನಪಿನ ಯಾತ್ರೆಯಲ್ಲಿ ಸಮಯ ಹಿಡಿಸುತ್ತದೆಯೋ ಅಷ್ಟು ಜ್ಞಾನದಲ್ಲಿ ಸಮಯ ಹಿಡಿಸುವುದಿಲ್ಲ. ಬಾಬಾ, ಬಂದು ಪತಿತರನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿ ಎಂದು ಹೇಳುವುದಿಲ್ಲ. ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಎಲ್ಲರೂ ಹೇಳುತ್ತಾರೆ. ಸತ್ಯಯುಗಕ್ಕೆ ಪಾವನಪ್ರಪಂಚವೆಂದು ಕರೆಯಲಾಗುತ್ತದೆ. ಇದಕ್ಕೆ ಪತಿತಪ್ರಪಂಚವೆಂದು ಹೇಳುತ್ತಾರೆ. ಪತಿತಪ್ರಪಂಚವೆಂದು ಹೇಳುತ್ತಿದ್ದರೂ ತಮ್ಮನ್ನು ಪತಿತರೆಂದು ತಿಳಿದುಕೊಳ್ಳುವುದಿಲ್ಲ, ನೀವು ಯಾರ ಕೈಯಿಂದಲೂ ತಿನ್ನುವುದಿಲ್ಲ. ಅದಕ್ಕೆ ನಾವೇನು ಅಸ್ಪೃಶ್ಯರೇ ಎಂದು ಹೇಳುತ್ತಾರೆ. ಅರೆ! ನೀವೇ ಹೇಳುತ್ತೀರಲ್ಲವೆ. ಎಲ್ಲರೂ ಪತಿತರಾಗಿದ್ದಾರೆ, ನಾವು ಪತಿತರು ಈ ದೇವತೆಗಳು ಪಾವನರೆಂದು ನೀವೂ ಹೇಳುತ್ತೀರಿ ಅಂದಾಗ ಪತಿತರಿಗೆ ಏನು ಹೇಳುತ್ತಾರೆ! ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುವಿರಿ ಎಂದು ಗಾಯನವಿದೆಯಲ್ಲವೆ. ವಿಷವಂತೂ ಕೆಟ್ಟದ್ದಲ್ಲವೆ. ಈ ವಿಷವು ನಿಮಗೆ ಆದಿ-ಮಧ್ಯ-ಅಂತ್ಯದಲ್ಲಿ ದುಃಖವನ್ನೇ ಕೊಡುತ್ತದೆ ಆದರೆ ಇದನ್ನು ಯಾರೂ ವಿಷವೆಂದು ತಿಳಿದುಕೊಳ್ಳುವುದೇ ಇಲ್ಲ. ಹೇಗೆ ಮಧ್ಯಪಾನದ ಚಟವಿರುವವರು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ಯುದ್ಧದ ಸಮಯದಲ್ಲಿ ಅವರಿಗೆ ಸರಾಯಿಯನ್ನು ಕುಡಿಸಿ, ನಶೆಯೇರಿಸಿ ಯುದ್ಧಕ್ಕೆ ಕಳುಹಿಸುತ್ತಾರೆ. ನಶೆಯೇರಿತೆಂದರೆ ನಾವು ಹೀಗೆ ಮಾಡಲೇಬೇಕೆಂದು ಹಣ ಕೊಡುತ್ತಾರೆ, ಅವರಿಗೆ ಸಾಯುವ ಭಯವೂ ಇರುವುದಿಲ್ಲ. ಎಲ್ಲಿಗಾದರೂ ಬಾಂಬುಗಳನ್ನು ತೆಗೆದುಕೊಂಡು ಹೋಗಿ ಬಾಂಬುಗಳ ಸಮೇತವಾಗಿ ಬೀಳುತ್ತಾರೆ. ಅಣ್ವಸ್ತ್ರಗಳ ಯುದ್ಧವಾಯಿತೆಂದು ಗಾಯನವೂ ಇದೆ. ಈ ಸತ್ಯವಾದ ಮಾತನ್ನು ಈಗ ಪ್ರತ್ಯಕ್ಷ ರೂಪದಲ್ಲಿ ನೋಡುತ್ತಿದ್ದೀರಿ. ಹೊಟ್ಟೆಯಿಂದ ಒನಕೆಯು ಬಂದಿತು, ಇದಾಯಿತು, ಅದಾಯಿತೆಂದು ನೀವು ಕೇವಲ ಮೊದಲು ಓದುತ್ತಿದ್ದಿರಿ, ಆದರೆ ಈಗ ಪಾಂಡವರು ಯಾರು, ಕೌರವರು ಯಾರು ಎಂಬುದೆಲ್ಲವೂ ನಿಮಗೆ ಅರ್ಥವಾಗಿದೆ. ಸ್ವರ್ಗವಾಸಿಗಳಾಗಲು ಪಾಂಡವರು ಜೀವಿಸಿದ್ದಂತೆಯೇ ದೇಹಾಭಿಮಾನದಿಂದ ಕರಗುವ ಪುರುಷಾರ್ಥ ಮಾಡಿದರು. ಅಂದರೆ ನೀವೀಗ ಈ ಹಳೆಯ ಪಾದರಕ್ಷೆ(ಶರೀರ)ಯನ್ನು ಬಿಡುವ ಪುರುಷಾರ್ಥ ಮಾಡುತ್ತೀರಿ. ಹಳೆಯ ಪಾದರಕ್ಷೆಯನ್ನು ಬಿಟ್ಟು ಹೊಸದನ್ನು ಪಡೆಯಬೇಕೆಂದು ಹೇಳುತ್ತೀರಲ್ಲವೆ. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ- ನಾನು ಕಲ್ಪ-ಕಲ್ಪವೂ ಬರುತ್ತೇನೆ, ನನ್ನ ಹೆಸರಾಗಿದೆ- ಶಿವ. ಶಿವಜಯಂತಿಯನ್ನು ಆಚರಿಸುತ್ತಾರೆ. ಭಕ್ತಿಮಾರ್ಗಕ್ಕಾಗಿ ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ, ಬಹಳಷ್ಟು ಹೆಸರುಗಳನ್ನಿಟ್ಟಿದ್ದಾರೆ, ದೇವಿಯರಿಗೂ ಸಹ ಹೀಗೆ ಬಹಳ ಹೆಸರನ್ನಿಟ್ಟಿದ್ದಾರೆ. ಈ ಸಮಯದಲ್ಲಿ ನಿಮ್ಮ ಪೂಜೆಯು ನಡೆಯುತ್ತಿದೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಯಾರ ಪೂಜೆಯನ್ನು ನಾವು ಮಾಡುತ್ತಿದ್ದೆವೋ ಅವರೀಗ ನಮಗೆ ಓದಿಸುತ್ತಿದ್ದಾರೆ. ನಾವು ಯಾವ ಲಕ್ಷ್ಮೀ-ನಾರಾಯಣರ ಪೂಜಾರಿಗಳಾಗಿದ್ದೆವೋ ಅವರಂತೆಯೇ ನಾವೀಗ ಆಗುತ್ತಿದ್ದೇವೆ. ಈ ಜ್ಞಾನವು ಬುದ್ಧಿಯಲ್ಲಿದೆ. ಇದನ್ನು ಸ್ಮರಣೆ ಮಾಡುತ್ತಾ ಇರಿ. ಮತ್ತೆ ಅನ್ಯರಿಗೂ ತಿಳಿಸಿ. ಅನೇಕ ಮಕ್ಕಳು ಇದನ್ನು ಧಾರಣೆ ಮಾಡುವುದೇ ಇಲ್ಲ. ತಂದೆಯು ತಿಳಿಸುತ್ತಾರೆ- ನಿಮಗೆ ಹೆಚ್ಚಿನದಾಗಿ ಧಾರಣೆ ಮಾಡಲಿಲ್ಲವೆಂದರೂ ಪರವಾಗಿಲ್ಲ, ನೆನಪು ಮಾಡುತ್ತಾ ಇರಿ. ಯಾರಿಗೆ ಮುರುಳಿಯನ್ನು ಹೇಳಲು ಬರುವುದಿಲ್ಲವೋ ಅವರು ಇಲ್ಲಿ ಕುಳಿತು ಸ್ಮರಣೆ ಮಾಡಿ. ಇಲ್ಲಿ ಯಾವುದೇ ಜಂಜಾಟವಿಲ್ಲ. ಮನೆಯಲ್ಲಿ ಮಕ್ಕಳು-ಮರಿಗಳ ವಾತಾವರಣವನ್ನು ನೋಡಿ ಆ ನಶೆಯು ಮಾಯವಾಗಿಬಿಡುತ್ತದೆ. ಇಲ್ಲಿ ಚಿತ್ರಗಳನ್ನು ಇಟ್ಟಿದ್ದೇವೆ. ಇದರಿಂದ ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗುತ್ತದೆ. ಅವರಂತೂ ಗೀತೆ ಇತ್ಯಾದಿಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡುತ್ತಾರೆ. ಸಿಖ್ಖರಿಗೂ ಸಹ ತಮ್ಮ ಗ್ರಂಥವು ಕಂಠಪಾಠವಾಗಿರುತ್ತದೆಯಲ್ಲವೆ. ಅಂದಾಗ ಇಲ್ಲಿ ನೀವೇನು ಕಂಠಪಾಠ ಮಾಡಿಕೊಳ್ಳಬೇಕು? ಬಾಬಾ, ಇದು ಹೊಸಮಾತಾಗಿದೆ ಎಂದು ತಂದೆಗೆ ನೀವು ಹೇಳುತ್ತೀರಿ. ಇದೊಂದೇ ಸಮಯದಲ್ಲಿ ನೀವು ಆತ್ಮನೆಂದು ತಿಳಿದು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. 5000 ವರ್ಷಗಳ ಮೊದಲೂ ಸಹ ಕಲಿಸಿದ್ದೆನು, ಇದನ್ನು ತಿಳಿಸಿಕೊಡಲು ಮತ್ತ್ಯಾರಿಗೂ ಶಕ್ತಿಯಿಲ್ಲ. ಜ್ಞಾನಸಾಗರನು ಒಬ್ಬ ತಂದೆಯಾಗಿದ್ದಾರೆ, ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಜ್ಞಾನಸಾಗರ ತಂದೆಯೇ ನಿಮಗೆ ತಿಳಿಸುತ್ತಾರೆ- ಇತ್ತೀಚೆಗಂತೂ ನಾವು ಅವತಾರವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳುವವರು ಅನೇಕರಿದ್ದಾರೆ ಆದ್ದರಿಂದ ಸತ್ಯದ ಸ್ಥಾಪನೆಯಲ್ಲಿ ಬಹಳಷ್ಟು ವಿಘ್ನಗಳು ಬರುತ್ತವೆ. ಇದಕ್ಕಾಗಿಯೇ ಗಾಯನವಿದೆ- ಸತ್ಯದ ದೋಣಿಯು ಅಲುಗಾಡುವುದು ಆದರೆ ಮುಳುಗುವುದಿಲ್ಲ.

ಈಗ ನೀವು ಮಕ್ಕಳು ತಂದೆಯ ಬಳಿ ಬರುತ್ತೀರಿ ಅಂದಮೇಲೆ ನಿಮ್ಮ ಹೃದಯದಲ್ಲಿ ಎಷ್ಟೊಂದು ಖುಷಿಯಿರಬೇಕು! ಮೊದಲು ತೀರ್ಥಯಾತ್ರೆಗಳಿಗೆ ಹೋಗುತ್ತಿದ್ದಿರಿ, ಆಗ ನಿಮ್ಮ ಮನಸ್ಸಿನಲ್ಲಿ ಏನು ಬರುತ್ತಿತ್ತು? ಈಗ ಗೃಹಸ್ಥವನ್ನು ಬಿಟ್ಟು ಇಲ್ಲಿ ಬರುತ್ತೀರೆಂದರೆ ಯಾವ ವಿಚಾರಗಳು ಬರುತ್ತವೆ? ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆ. ತಂದೆಯು ಇದನ್ನೂ ತಿಳಿಸುತ್ತಾರೆ- ನನ್ನನ್ನು ಕೇವಲ ಶಿವತಂದೆಯೆಂದು ಹೇಳುತ್ತಾರೆ. ನಾನು ಯಾರಲ್ಲಿ ಪ್ರವೇಶ ಮಾಡಿದ್ದೇನೆಯೋ ಅವರು ಬ್ರಹ್ಮನಾಗಿದ್ದಾರೆ. ವಂಶಾವಳಿಗಳು ಇರುತ್ತವೆಯಲ್ಲವೆ. ಮೊಟ್ಟಮೊದಲ ವಂಶಾವಳಿಯು ಬ್ರಾಹ್ಮಣರದ್ದಾಗಿದೆ, ನಂತರ ದೇವತೆಗಳ ವಂಶಾವಳಿಯಾಗುವುದು. ಈಗ ದೂರದೇಶಿ ತಂದೆಯು ದೂರಾಂದೇಶಿಗಳನ್ನಾಗಿ ಮಾಡುತ್ತಾರೆ. ಆತ್ಮವು ಹೇಗೆ ಚಕ್ರದಲ್ಲಿ ಭಿನ್ನ-ಭಿನ್ನ ಧರ್ಮದಲ್ಲಿ ಬಂದಿದೆ ಎಂಬ ಜ್ಞಾನವನ್ನು ದೂರದೇಶಿ ತಂದೆಯು ಕೊಡುತ್ತಾರೆ. ನೀವು ವಿಚಾರ ಮಾಡುತ್ತೀರಿ- ಈಗ ನಾವು ಬ್ರಾಹ್ಮಣ ವರ್ಣದವರಾಗಿದ್ದೇವೆ, ಇದಕ್ಕೆ ಮೊದಲು ಜ್ಞಾನವಿಲ್ಲದಿದ್ದಾಗ ಶೂದ್ರವರ್ಣದವರಾಗಿದ್ದೆವು, ನಮ್ಮ ತಂದೆಯು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಆಗಿದ್ದಾರೆ, ಗ್ರೇಟ್ ಶೂದ್ರರು, ಗ್ರೇಟ್ ವೈಶ್ಯರು, ಗ್ರೇಟ್ ಕ್ಷತ್ರಿಯರು..... ಅದಕ್ಕೆ ಮೊದಲು ಗ್ರೇಟ್ ಬ್ರಾಹ್ಮಣರಾಗಿದ್ದೆವು. ಈ ಮಾತುಗಳನ್ನು ತಂದೆಯ ವಿನಃ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಇದಕ್ಕೆ ದೂರಾಂದೇಶದ ಜ್ಞಾನವೆಂದು ಹೇಳಲಾಗುತ್ತದೆ. ದೂರದೇಶದಲ್ಲಿರುವ ತಂದೆಯು ಬಂದು ಮಕ್ಕಳಿಗೆ ದೂರಾಂದೇಶದ ಜ್ಞಾನವನ್ನು ಕೊಡುತ್ತಾರೆ. ನಮ್ಮ ತಂದೆಯು ದೂರದೇಶದಿಂದ ಇವರಲ್ಲಿ ಬರುತ್ತಾರೆಂದು ನಿಮಗೂ ತಿಳಿದಿದೆ. ಇದು ಪರದೇಶ, ಪರರಾಜ್ಯವಾಗಿದೆ. ಶಿವತಂದೆಗೆ ತಮ್ಮ ಶರೀರವಿಲ್ಲ ಮತ್ತು ಅವರು ಜ್ಞಾನಸಾಗರನಾಗಿದ್ದಾರೆ, ಸ್ವರ್ಗದ ರಾಜ್ಯಭಾಗ್ಯವನ್ನು ಅವರೇ ಕೊಡಬೇಕಾಗಿದೆ, ಕೃಷ್ಣನು ಕೊಡುವುದಿಲ್ಲ ಶಿವತಂದೆಯೇ ಕೊಡುವರು. ಕೃಷ್ಣನಿಗೆ ತಂದೆಯೆಂದು ಹೇಳುವುದಿಲ್ಲ. ತಂದೆಯು ರಾಜ್ಯವನ್ನು ಕೊಡುತ್ತಾರೆ, ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಈಗ ಅಲ್ಪಕಾಲದ ಆಸ್ತಿಯೆಲ್ಲವೂ ಮುಕ್ತಾಯವಾಗುತ್ತದೆ. ಸತ್ಯಯುಗದ 21 ಜನ್ಮಗಳ ಆಸ್ತಿಯನ್ನು ಸಂಗಮಯುಗದಲ್ಲಿ ತೆಗೆದುಕೊಂಡಿದ್ದೆವೆಂದು ನಿಮಗೆ ತಿಳಿದಿರುವುದಿಲ್ಲ. ಇದನ್ನು ಈಗಲೇ ತಿಳಿದುಕೊಂಡಿದ್ದೀರಿ- ನಾವು 21 ಜನ್ಮಗಳ ಆಸ್ತಿಯನ್ನು ಅರ್ಧಕಲ್ಪಕ್ಕಾಗಿ ತೆಗೆದುಕೊಳ್ಳುತ್ತಿದ್ದೇವೆ. 21 ಪೀಳಿಗೆ ಅರ್ಥಾತ್ ಪೂರ್ಣಆಯಸ್ಸು. ಯಾವಾಗ ಶರೀರವು ವೃದ್ಧನಾಗುವುದೋ ಆಗ ಸಕಾಲದಲ್ಲಿ ಶರೀರವನ್ನು ಬಿಡುತ್ತೀರಿ. ಹೇಗೆ ಸರ್ಪವು ಹಳೆಯ ಪೆÇರೆಯನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆಯೋ ಹಾಗೆಯೇ ನಾವೂ ಸಹ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಈ ವಸ್ತ್ರವು ಹಳೆಯದಾಗಿಬಿಟ್ಟಿದೆ.

ನೀವು ಸತ್ಯ-ಸತ್ಯ ಬ್ರಾಹ್ಮಣರಾಗಿದ್ದೀರಿ, ನಿಮಗೆ ಭ್ರಮರಿಯೆಂದು ಹೇಳಲಾಗುತ್ತದೆ. ನೀವು ಕೀಟಗಳನ್ನು ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುತ್ತೀರಿ. ನಿಮಗೆ ಹೇಳಲಾಗುತ್ತದೆ- ಕೀಟಗಳ ಸಮಾನರಾದವರನ್ನು ಕರೆತಂದು ಜ್ಞಾನದ ಧ್ವನಿ ಮಾಡಿ. ಭ್ರಮರಿಯೂ ಸಹ ಭೂ ಭೂ ಮಾಡುತ್ತದೆ. ಅದರಿಂದ ಕೆಲವೊಂದು ಕೀಟಗಳಿಗೆ ರೆಕ್ಕೆಗಳು ಬಂದುಬಿಡುತ್ತವೆ, ಇನ್ನು ಕೆಲವು ಸತ್ತುಹೋಗುತ್ತವೆ ಇವೆಲ್ಲವೂ ಈಗಿನ ದೃಷ್ಟಾಂತವಾಗಿದೆ. ನೀವು ಮುದ್ದು ಮಕ್ಕಳಾಗಿದ್ದೀರಿ. ಮಕ್ಕಳಿಗೆ ಕಣ್ಮಣಿಗಳೆಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ- ಕಣ್ಮಣಿಗಳೇ, ನಿಮ್ಮನ್ನು ನನ್ನವರನ್ನಾಗಿ ಮಾಡಿಕೊಂಡಿದ್ದೇನೆ. ಅಂದಮೇಲೆ ನೀವು ನನ್ನವರಾದಿರಲ್ಲವೆ. ಇಂತಹ ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ಪಾಪಗಳು ಭಸ್ಮವಾಗುವವು. ಮತ್ತ್ಯಾರನ್ನು ನೆನಪು ಮಾಡುವುದರಿಂದಲೂ ಪಾಪಗಳು ಭಸ್ಮವಾಗುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಜೀವಿಸಿದ್ದಂತೆಯೇ ದೇಹಾಭಿಮಾನದಿಂದ ಕರಗುವ ಪುರುಷಾರ್ಥವನ್ನು ಮಾಡಬೇಕಾಗಿದೆ. ಈ ಹಳೆಯ ಪಾದರಕ್ಷೆಯಲ್ಲಿ ಅಂಶಮಾತ್ರವೂ ವ್ಯಾಮೋಹವು ಇರಬಾರದು.

2) ಸತ್ಯಬ್ರಾಹ್ಮಣರಾಗಿ ಕೀಟಗಳಿಗೆ ಜ್ಞಾನದ ಧ್ವನಿ ಮಾಡಿ ಅವರನ್ನು ತಮ್ಮಸಮಾನ ಬ್ರಾಹ್ಮಣರನ್ನಾಗಿ ಮಾಡಬೇಕಾಗಿದೆ.

ವರದಾನ:
ಅಮೃತವೇಳೆಯ ಮಹತ್ವ ತಿಳಿದು ತೆರೆದ ಭಂಢಾರದಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳುವಂತಹ ಅದೃಷ್ಟಶಾಲಿ ಭವ

ಅಮೃತವೇಳೆ ವರದಾತ, ಭಾಗ್ಯವಿಧಾತನಿಂದ ಯಾವ ಅದೃಷ್ಟದ ರೇಖೆಯನ್ನು ಎಳೆಸಿಕೊಳ್ಳಲು ಇಚ್ಛೆ ಪಡುವಿರೋ ಅದನ್ನು ಎಳೆಸಿಕೊಳ್ಳಿ ಏಕೆಂದರೆ ಆ ಸಮಯ ಭೋಲ ಭಗವಂತನ ರೂಪದಲ್ಲಿ ಪ್ರೀತಿಯ ರೂಪ (ಲವ್ಫುಲ್) ಆಗಿರುತ್ತಾರೆ ಆದ್ದರಿಂದ ಮಾಲೀಕರಾಗಿ ಮತ್ತು ಅಧಿಕಾರವನ್ನು ಪಡೆಯಿರಿ. ಖಜಾನೆಗೆ ಯಾವುದೇ ಬೀಗ-ಕೀಲಿಕೈ ಇಲ್ಲ. ಆ ಸಮಯದಲ್ಲಿ ಕೇವಲ ಮಾಯೆಯ ನೆಪಗಳ ಆಟವನ್ನು ಬಿಟ್ಟು ಒಂದು ಸಂಕಲ್ಪ ಮಾಡಿ ನಾನು ಹೇಗೇ ಇರಲಿ, ಏನೇ ಆಗಿರಲಿ, ಆದರೆ ನಿನ್ನವನಾಗಿದ್ದೇನೆ. ಮನಸ್ಸು, ಬುದ್ಧಿಯನ್ನು ತಂದೆಗೆ ಒಪ್ಪಿಸಿ ಸಿಂಹಾಸನಾಧಿಕಾರಿಯಾಗಿಬಿಡಿ ಆಗ ತಂದೆಯ ಸರ್ವ ಖಜಾನೆ ನಿಮ್ಮ ಖಜಾನೆ ಹಾಗೆ ಅನುಭವವಾಗುವುದು.

ಸ್ಲೋಗನ್:
ಸೇವೆಯಲ್ಲಿ ಒಂದುವೇಳೆ ಸ್ವಾರ್ಥ ಮಿಕ್ಸ್ ಆಗಿದ್ದರೆ ಸಫಲತೆಯಲ್ಲಿಯೂ ಸಹ ಮಿಕ್ಸ್ ಆಗಿಬಿಡುವುದು ಆದ್ದರಿಂದ ನಿಸ್ವಾರ್ಥ ಸೇವಾದಾರಿಗಳಾಗಿ.

ಅವ್ಯಕ್ತ ಸೂಚನೆಗಳು; ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಆತ್ಮ ಅಭಿಮಾನಿ ಆಗಲು ಪುರುಷಾರ್ಥ ಮಾಡದೇ ಇರುವಂತಹ ಯಾವುದೇ ಬ್ರಾಹ್ಮಣ ಇಲ್ಲ. ಆದರೆ ನಿರಂತರ ಆತ್ಮ ಅಭಿಮಾನಿ, ಯಾವುದರಿಂದ ಕಮೇರ್ಂದ್ರಿಯಗಳ ಮೇಲೆ ಸಂಪೂರ್ಣ ವಿಜಯ ಸಿಗುತ್ತದೆ, ಪ್ರತಿಯೊಂದು ಕರ್ಮೇಂದ್ರಿಯ ಸತೋ ಪ್ರಧಾನ ಸ್ವಚ್ಛ ಆಗಿಹೋಗುವುದು , ದೇಹದ ಹಳೆಯ ಸಂಸ್ಕಾರ ಸಂಬಂಧದಿಂದ ಸಂಪೂರ್ಣ ಮರುಜೀವಾ ಆಗಿಹೋಗಬೇಕು , ಇದಕ್ಕಾಗಿ ಅಂತರ್ಮುಖಿ ಆಗಿರಿ.