03.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಸಮಾನ ದಯಾಹೃದಯಿಗಳಾಗಿ ಅನೇಕರಿಗೆ ಮಾರ್ಗವನ್ನು ತಿಳಿಸಿ, ಯಾವ ಮಕ್ಕಳು ಹಗಲು-ರಾತ್ರಿ
ಸರ್ವೀಸಿನಲ್ಲಿ ತೊಡಗಿರುವರೋ ಅವರೇ ಬಹದ್ದೂರರಾಗಿದ್ದಾರೆ”
ಪ್ರಶ್ನೆ:
ಶ್ರೇಷ್ಠ
ಅದೃಷ್ಟದ ಮುಖ್ಯ ಆಧಾರವು ಯಾವ ಮಾತಿನ ಮೇಲಿದೆ?
ಉತ್ತರ:
ನೆನಪಿನ
ಯಾತ್ರೆಯ ಮೇಲೆ. ಯಾರೆಷ್ಟು ನೆನಪು ಮಾಡುವರೋ ಅಷ್ಟು ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ.
ಶರೀರ ನಿರ್ವಹಣಾರ್ಥ ಕರ್ಮವನ್ನೂ ಮಾಡುತ್ತಾ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ ಆಗ
ಅದೃಷ್ಟವು ಶ್ರೇಷ್ಠವಾಗುವುದು.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ..........
ಓಂ ಶಾಂತಿ.
ಮಕ್ಕಳು ಜನ್ಮ ಪಡೆಯುವಾಗ ತಮ್ಮ ಜೊತೆ ಕರ್ಮಗಳನುಸಾರ ಅದೃಷ್ಟವನ್ನು ತೆಗೆದುಕೊಂಡು ಬರುತ್ತಾರೆ.
ಕೆಲವರು ಸಾಹುಕಾರರ ಬಳಿ, ಕೆಲವರು ಬಡವರ ಬಳಿ ಜನ್ಮ ಪಡೆಯುತ್ತಾರೆ. ವಾರಸುಧಾರ ಹುಟ್ಟಿದನೆಂದು
ತಂದೆಯು ತಿಳಿದುಕೊಳ್ಳುತ್ತಾರೆ. ಎಂತೆಂತಹ ದಾನ ಪುಣ್ಯಗಳನ್ನು ಮಾಡಿರುವರೋ ಅದರನುಸಾರ ಜನ್ಮ
ಸಿಗುತ್ತದೆ. ನೀವೀಗ ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೇ ತಂದೆಯು ಕಲ್ಪದ
ನಂತರ ಬಂದು ಪುನಃ ತಿಳಿಸಿದ್ದಾರೆ. ಮಕ್ಕಳಿಗೂ ತಿಳಿದಿದೆ - ನಾವು ನಮ್ಮ ಅದೃಷ್ಟವನ್ನು
ತೆಗೆದುಕೊಂಡು ಬಂದಿದ್ದೇವೆ. ಸ್ವರ್ಗದ ರಾಜ್ಯಭಾಗ್ಯವನ್ನು ತಂದಿದ್ದೇವೆ ಯಾರು ಚೆನ್ನಾಗಿ
ಅರಿತುಕೊಂಡಿದ್ದೀರಿ ಮತ್ತು ತಂದೆಯನ್ನು ನೆನಪು ಮಾಡುತ್ತಿದ್ದೀರಿ. ನೆನಪಿನ ಜೊತೆಗೆ ಅದೃಷ್ಟದ
ಸಂಬಂಧವಿದೆ, ಜನ್ಮ ಪಡೆದಿದ್ದೀರೆಂದರೆ ತಂದೆಯ ನೆನಪೂ ಇರಬೇಕಲ್ಲವೆ. ಎಷ್ಟು ನೆನಪು ಮಾಡುತ್ತೀರೋ
ಅಷ್ಟು ಅದೃಷ್ಟವು ಶ್ರೇಷ್ಠವಾಗುತ್ತಿರುವುದು. ಎಷ್ಟು ಸಹಜ ಮಾತಾಗಿದೆ, ಸೆಕೆಂಡಿನಲ್ಲಿ
ಜೀವನ್ಮುಕ್ತಿ ಸಿಗುತ್ತದೆ. ನೀವು ಸುಖಧಾಮದ ಅದೃಷ್ಟವನ್ನು ಪ್ರಾಪ್ತಿ ಮಾಡಿಕೊಳ್ಳಲು ಬಂದಿದ್ದೀರಿ.
ಈಗ ಪ್ರತಿಯೊಬ್ಬರೂ ಪುರುಷಾರ್ಥ ಮಾಡುತ್ತಿದ್ದೀರಿ. ಪ್ರತಿಯೊಬ್ಬರೂ ತಮ್ಮನ್ನು
ನೋಡಿಕೊಳ್ಳುತ್ತಿದ್ದಾರೆ - ನಾವು ಹೇಗೆ ಪುರುಷಾರ್ಥ ಮಾಡುತ್ತಿದ್ದೇವೆ ಎಂದು. ಹೇಗೆ ಮಮ್ಮಾ-ಬಾಬಾ
ಮತ್ತು ಸೇವಾಧಾರಿ ಮಕ್ಕಳು ಪುರುಷಾರ್ಥ ಮಾಡುತ್ತಾರೆ. ಅವರನ್ನು ಫಾಲೋ ಮಾಡಬೇಕು. ಎಲ್ಲರಿಗೆ ತಂದೆಯ
ಪರಿಚಯ ಕೊಡಬೇಕಾಗಿದೆ. ತಂದೆಯ ಪರಿಚಯ ಕೊಟ್ಟರೆ ರಚನೆಯ ಆದಿ-ಮಧ್ಯ-ಅಂತ್ಯವು ಬಂದು ಬಿಡುವುದು.
ಋಷಿ-ಮುನಿ ಮೊದಲಾದವರು ಯಾರೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡಲು
ಸಾಧ್ಯವಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರವು ಸ್ಮೃತಿಯಲ್ಲಿರುತ್ತದೆ. ಪ್ರಪಂಚದಲ್ಲಿ ಯಾರೂ
ಸಹ ತಂದೆ ಮತ್ತು ಆಸ್ತಿಯನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಂದೆ ಮತ್ತು ಅದೃಷ್ಟವನ್ನು
ತಿಳಿದುಕೊಂಡಿದ್ದೀರಿ ಆದ್ದರಿಂದ ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ನಿರ್ವಹಣಾರ್ಥ
ಕರ್ಮವನ್ನೂ ಮಾಡಬೇಕು. ಮನೆಯನ್ನೂ ಸಂಭಾಲನೆ ಮಾಡಬೇಕಾಗಿದೆ. ಯಾರು ನಿರ್ಬಂಧನರಿದ್ದಾರೆಯೋ ಅವರು
ಬಹಳ ಚೆನ್ನಾಗಿ ಸರ್ವೀಸ್ ಮಾಡಬಹುದು. ಮಕ್ಕಳು ಮರಿಯಿಲ್ಲವೆಂದರೆ ಅವರಿಗೆ ಸರ್ವೀಸ್ ಮಾಡಲು ಒಳ್ಳೆಯ
ಅವಕಾಶವಿದೆ. ಸ್ತ್ರೀಗೆ ಪತಿ ಹಾಗೂ ಮಕ್ಕಳ ಬಂಧನವಿರುತ್ತದೆ. ಒಂದುವೇಳೆ ಮಕ್ಕಳಿಲ್ಲವೆಂದರೆ ಬಂಧನ
ಮುಕ್ತರಾದರಲ್ಲವೆ. ಅವರು ಹೇಗೆ ವಾನಪ್ರಸ್ಥಿಗಳಿದ್ದಂತೆ. ಮತ್ತೆ ಮುಕ್ತಿಧಾಮದಲ್ಲಿ ಹೋಗುವುದಕ್ಕಾಗಿ
ಸಂಗ ಬೇಕು. ಭಕ್ತಿಮಾರ್ಗದಲ್ಲಂತು ಸಾಧು ಮೊದಲಾದವರ ನಿವೃತ್ತಿ ಮಾರ್ಗದವರ ಸಂಗ ಸಿಗುತ್ತದೆ. ಆ
ನಿವೃತ್ತಿ ಮಾರ್ಗದವರು ಪ್ರವೃತ್ತಿ ಮಾರ್ಗದ ಆಸ್ತಿಯನ್ನು ಕೊಡಿಸಲು ಸಾಧ್ಯವಿಲ್ಲ, ನೀವು ಮಕ್ಕಳೇ
ಕೊಡಿಸಬಲ್ಲಿರಿ. ನಿಮಗೆ ತಂದೆಯು ಮಾರ್ಗವನ್ನು ತಿಳಿಸಿದ್ದಾರೆ, ಭಾರತದ 84 ಜನ್ಮಗಳ
ಚರಿತ್ರೆ-ಭೂಗೋಳವನ್ನು ತಿಳಿಸಿ. ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಒಬ್ಬರ
ಮಾತಲ್ಲ, ಸೂರ್ಯವಂಶಿಯರಿಂದ ಮತ್ತೆ ಚಂದ್ರವಂಶಿ ಮನೆತನದಲ್ಲಿ ಬರುತ್ತಾರೆ ಮತ್ತೆ
ವೈಶ್ಯವಂಶಿಯಾಗುತ್ತಾರೆ... ನಂಬರ್ವಾರಂತೂ ಇರುತ್ತಾರಲ್ಲವೆ. ಭಾರತದ ಮೊಟ್ಟ ಮೊದಲನೇ ರಾಜಕುಮಾರನು
ಶ್ರೀ ಕೃಷ್ಣನಾಗಿದ್ದಾನೆ ಯಾರನ್ನು ಉಯ್ಯಾಲೆಯಲ್ಲಿ ತೂಗುತ್ತಾರೆ. ಎರಡನೆಯವರನ್ನು ತೂಗುವುದೇ ಇಲ್ಲ
ಏಕೆಂದರೆ ಕಲೆಯು ಕಡಿಮೆಯಾಯಿತು. ಯಾರು ಮೊದಲನೆಯವರಾಗಿದ್ದಾರೆಯೋ ಅವರ ಪೂಜೆ ನಡೆಯುತ್ತದೆ, ಕೃಷ್ಣನು
ಒಬ್ಬನಾಗಿದ್ದಾನೆಯೇ ಅಥವಾ ಇಬ್ಬರು, ಮೂವರಿದ್ದಾರೆಯೇ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ.
ಕೃಷ್ಣನ ರಾಜಧಾನಿಯು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಕೇವಲ ಪೂಜೆಯು ಮೊಟ್ಟ ಮೊದಲನೆಯವರದೇ
ಆಗುತ್ತದೆ. ಅಂಕಗಳಂತೂ ನಂಬರ್ವಾರ್ ಆಗಿ ಸಿಗುತ್ತದೆ ಅಂದಮೇಲೆ ಪುರುಷಾರ್ಥ ಮಾಡಿ ನಾವೇಕೆ
ಮೊದಲನಂಬರಿನಲ್ಲಿ ಬರಬಾರದು! ಮಮ್ಮಾ-ಬಾಬಾರವರನ್ನು ಫಾಲೋ ಮಾಡಿ ಅವರ ರಾಜಧಾನಿಯನ್ನು
ಪಡೆದುಕೊಳ್ಳಬಾರದು! ಯಾರು ಒಳ್ಳೆಯ ಸರ್ವೀಸ್ ಮಾಡುವರೋ ಅವರು ಒಳ್ಳೆಯ ಮಹಾರಾಜನ ಮನೆಯಲ್ಲಿ ಜನ್ಮ
ಪಡೆಯುವರು. ಅಲ್ಲಂತೂ ಇರುವುದೇ ಮಹಾರಾಜ-ಮಹಾರಾಣಿ, ಆ ಸಮಯದಲ್ಲಿ ಯಾವುದೇ ರಾಜ-ರಾಣಿಯ ಬಿರುದು
ಇರುವುದಿಲ್ಲ, ಅದು ನಂತರ ಆರಂಭವಾಗುತ್ತದೆ. ದ್ವಾಪರದಿಂದ ಯಾವಾಗ ಪತಿತರಾಗುತ್ತಾರೋ ಆಗ ಅವರಲ್ಲಿ
ಹೆಚ್ಚು ಸಂಪತ್ತು ಇರುವವರಿಗೂ ರಾಜ ಎಂದು ಹೇಳಲಾಗುತ್ತದೆ. ಮತ್ತೆ ಮಹಾರಾಜನ ಹೆಸರು ಕಡಿಮೆಯಾಗಿ
ಬಿಡುತ್ತದೆ, ಪ್ರಾಯಾಲೋಪವಾಗಿ ಬಿಡುತ್ತದೆ. ಯಾವಾಗ ಭಕ್ತಿ ಮಾರ್ಗವಾಗುವುದೋ ಬಡವರು, ಸಾಹುಕಾರರಲ್ಲಿ
ಅಂತರವಂತೂ ಇರುತ್ತದೆಯಲ್ಲವೆ. ಈಗ ನೀವು ಮಕ್ಕಳೇ ಶಿವ ತಂದೆಯನ್ನು ನೆನಪು ಮಾಡುತ್ತೀರಿ ಮತ್ತು
ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಅನ್ಯ ಸತ್ಸಂಗಗಳಲ್ಲಿ ಮನುಷ್ಯರು ಕುಳಿತು
ಕಥೆಯನ್ನು ಓದಿ ತಿಳಿಸುತ್ತಾರೆ, ಮನುಷ್ಯರು ಮನುಷ್ಯರಿಗೆ ಭಕ್ತಿ ಕಲಿಸುತ್ತಾರೆ. ಅವರು ಜ್ಞಾನವನ್ನು
ಕೊಟ್ಟು ಸದ್ಗತಿ ಮಾಡಲು ಸಾಧ್ಯವಿಲ್ಲ. ವೇದ ಶಾಸ್ತ್ರ ಮೊದಲಾದುವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ.
ಸದ್ಗತಿಯಂತೂ ಜ್ಞಾನದಿಂದಲೇ ಆಗುತ್ತದೆ. ಪುನರ್ಜನ್ಮವನ್ನೂ ಒಪ್ಪುತ್ತಾರೆ, ಮಧ್ಯದಲ್ಲಿ ಯಾರೂ
ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅಂತಿಮದಲ್ಲಿಯೇ ತಂದೆಯು ಬಂದು ಎಲ್ಲರನ್ನೂ ಕರೆದುಕೊಂಡು
ಹೋಗುತ್ತಾರೆ. ಅಂದಮೇಲೆ ಇಷ್ಟೆಲ್ಲಾ ಆತ್ಮಗಳು ಎಲ್ಲಿ ಹೋಗುವರು? ಎಲ್ಲಾ ಧರ್ಮದವರ ವಿಭಾಗಗಳು
ಬೇರೆ-ಬೇರೆಯಲ್ಲವೆ ಅಂದಾಗ ಇದನ್ನೂ ತಿಳಿಸಬೇಕಾಗಿದೆ. ಆತ್ಮಗಳದೂ ಸಹ ಒಂದು ವೃಕ್ಷವಾಗಿದೆ ಎಂಬುದು
ಯಾರಿಗೂ ತಿಳಿದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇಡೀ ವೃಕ್ಷದ ಜ್ಞಾನವಿರುತ್ತದೆ. ಆತ್ಮರ ವೃಕ್ಷವೂ
ಇದೆ, ಜೀವಾತ್ಮರ ವೃಕ್ಷವೂ ಇದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಈ ಹಳೆಯ ಶರೀರವನ್ನು
ಬಿಟ್ಟು ಮನೆಗೆ ಹೋಗುತ್ತಿದ್ದೇವೆ “ನಾನಾತ್ಮ” ಈ ಶರೀರದಿಂದ ಭಿನ್ನನಾಗಿದ್ದೇನೆ - ಈ ರೀತಿ
ತಿಳಿದುಕೊಳ್ಳುವುದು ಎಂದರೆ ಜೀವಿಸಿದ್ದಂತೆಯೇ ಸಾಯುವುದು. ತಾನು ಸತ್ತರೆ ತನ್ನಪಾಲಿಗೆ ಜಗತ್ತೇ
ಸತ್ತಂತೆ. ಮಿತ್ರ ಸಂಬಂಧಿ ಮೊದಲಾದವರೆಲ್ಲರನ್ನೂ ಬಿಟ್ಟು ಬಿಟ್ಟರೆ ಮೊದಲು ಪೂರ್ಣ ಶಿಕ್ಷಣವನ್ನು
ತೆಗೆದುಕೊಂಡು ಪದವಿಗೆ ಅಧಿಕಾರಿಯಾಗಿ ನಂತರ ಹೋಗಬೇಕಾಗಿದೆ. ತಂದೆಯನ್ನು ನೆನಪು ಮಾಡುವುದು ಅತಿ
ಸಹಜವಾಗಿದೆ. ಭಲೆ ಯಾರಾದರೂ ರೋಗಿಯಾಗಿದ್ದರೂ ಸಹ ಅವರಿಗೂ ಹೇಳುತ್ತಿರಬೇಕು – ಶಿವ ತಂದೆಯನ್ನು
ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದು. ಯಾರು ಪಕ್ಕಾ ಯೋಗಿಗಳಿದ್ದಾರೆಯೋ ಅವರು ಬೇಗನೆ ಶರೀರ
ಬಿಡುವುದು ಒಳ್ಳೆಯದಲ್ಲ ಏಕೆಂದರೆ ಅವರು ಯೋಗದಲ್ಲಿದ್ದು ಆತ್ಮಿಕ ಸೇವೆ ಮಾಡುತ್ತಾರೆ. ಶರೀರ
ಬಿಟ್ಟರೂ ಸಹ ಅವರು ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಸೇವೆ ಮಾಡುವುದರಿಂದ ತಮ್ಮ ಶ್ರೇಷ್ಠ
ಪದವಿಯನ್ನು ಮಾಡಿಕೊಳ್ಳುತ್ತಾ ಇರುತ್ತಾರೆ ಮತ್ತು ಸಹೋದರ-ಸಹೋದರಿಯರ ಸೇವೆಯೂ ಆಗುವುದು. ಅವರೂ
ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುತ್ತಾರೆ. ನಾವು ಪರಸ್ಪರ ಸಹೋದರರಾಗಿದ್ದೇವೆ, ಒಬ್ಬ ತಂದೆಯ
ಮಕ್ಕಳಾಗಿದ್ದೇವೆ.
ತಂದೆಯು ತಿಳಿಸುತ್ತಾರೆ
- ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವವು. ಮೊದಲೂ ಸಹ ಇದೇ ರೀತಿ
ತಿಳಿಸಿದ್ದೇನೆ. ನೀವು ಯಾರಿಗೆ ಬೇಕಾದರೂ ಇದನ್ನು ತಿಳಿಸಬಹುದು - ಸಹೋದರ-ಸಹೋದರಿಯರೇ, ನಿಮ್ಮ
ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ, ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ಪುನಃ
ತಮೋಪ್ರಧಾನರಿಂದ ಸತೋಪ್ರಧಾನರಾಗಿ ಸತೋಪ್ರಧಾನ ಪ್ರಪಂಚಕ್ಕೆ ಹೋಗಬೇಕಾಗಿದೆ. ಆತ್ಮವನ್ನು ನೆನಪಿನ
ಯಾತ್ರೆಯಿಂದ ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ. ನೆನಪಿನಪೂರ್ಣ ಚಾರ್ಟ್ ಇಡಬೇಕು. ಜ್ಞಾನದ
ಚಾರ್ಟನ್ನು ಇಡಲು ಸಾಧ್ಯವಿಲ್ಲ. ತಂದೆಯಂತೂ ಜ್ಞಾನವನ್ನು ಕೊಡುತ್ತಿರುತ್ತಾರೆ. ಪರಿಶೀಲನೆ
ಮಾಡಿಕೊಳ್ಳಿ - ನಮ್ಮ ಮೇಲೆ ಯಾವ ವಿಕರ್ಮಗಳ ಹೊರೆಯಿದೆಯೋ ಅದು ಹೇಗೆ ಇಳಿಯುವುದು ಆದ್ದರಿಂದ
ನೆನಪಿನ ಚಾರ್ಟ್ ಇಡಬೇಕಾಗಿದೆ - ನಾವು ಎಷ್ಟು ಗಂಟೆಗಳ ಕಾಲ ನೆನಪು ಮಾಡಿದೆವು? ಮೂಲವತನವನ್ನೂ
ನೆನಪು ಮಾಡುತ್ತೀರಿ ಮತ್ತು ಹೊಸ ಪ್ರಪಂಚವನ್ನೂ ನೆನಪು ಮಾಡುತ್ತೀರಿ. ಅಲ್ಲೋಲ-ಕಲ್ಲೋಲವಾಗಲಿದೆ
ಅದಕ್ಕಾಗಿ ತಯಾರಿ ನಡೆಯುತ್ತಿದೆ. ಬಾಂಬುಗಳೂ ತಯಾರಾಗುತ್ತಾ ಹೋಗುತ್ತವೆ. ಒಂದು ಕಡೆ ನಾವು
ಮೃತ್ಯುವಿಗಾಗಿ ಇಂತಿಂತಹ ಸಾಮಗ್ರಿಗಳನ್ನು ತಯಾರು ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಮತ್ತು
ಇನ್ನೊಂದು ಕಡೆ ಹೇಳುತ್ತಾರೆ - ಮೃತ್ಯುವಿನ ಸಾಮಗ್ರಿಗಳನ್ನು ತಯಾರು ಮಾಡಬೇಡಿ. ಸಮುದ್ರದ ತಳದಲ್ಲಿ
ವಿನಾಶ ಮಾಡುವ ಸಾಮಗ್ರಿಗಳನ್ನಿಟ್ಟಿದ್ದಾರೆ, ಮೇಲೆ ಬಂದು ಬಾಂಬುಗಳನ್ನು ಹಾಕಿ ಮತ್ತೆ ಸಮುದ್ರದೊಳಗೆ
ಹೊರಟು ಹೋಗುತ್ತಾರೆ. ಇಂತಿಂತಹ ವಸ್ತುಗಳನ್ನು ತಯಾರು ಮಾಡುತ್ತಿರುತ್ತಾರೆ. ತಮ್ಮದೇ ವಿನಾಶಕ್ಕಾಗಿ
ತಯಾರು ಮಾಡುತ್ತಿದ್ದಾರೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ಇಷ್ಟು ದೊಡ್ಡ-ದೊಡ್ಡ ಮಹಲುಗಳನ್ನು
ಕಟ್ಟಿಸುತ್ತಿದ್ದಾರೆ ಆದರೆ ನಿಮಗೆ ತಿಳಿದಿದೆ - ಇದೆಲ್ಲವೂ ಮಣ್ಣು ಪಾಲಾಗಲಿದೆ. ಕೆಲವರದು ಮಣ್ಣು
ಪಾಲಾಯಿತು, ಕೆಲವರದು.... ಅವಶ್ಯವಾಗಿ ಆಗುವುದು. ಪ್ರಯತ್ನಪಟ್ಟು ಎಲ್ಲರ ಜೇಬುಗಳನ್ನು ಖಾಲಿ
ಮಾಡುತ್ತಾರೆ, ಕಳ್ಳರೂ ಸಹ ಮನೆಗಳಿಗೆ ನುಗ್ಗುತ್ತಾರೆ. ಯುದ್ಧದಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ,
ಇದೆಲ್ಲವೂ ಮಣ್ಣು ಪಾಲಾಗುವುದು. ಕಟ್ಟಡಗಳೆಲ್ಲವೂ ಬೀಳುತ್ತದೆ, ಬಾಂಬುಗಳು ಬಿದ್ದರೆ ಸೃಷ್ಟಿಯ ಮೂರು
ಭಾಗವು ಸಮಾಪ್ತಿಯಾಗುತ್ತದೆ. ಇನ್ನು ಒಂದು ಭಾಗವು ಮಾತ್ರವೇ ಉಳಿಯುತ್ತದೆ. ಭಾರತವು ಒಂದು
ಭಾಗದಲ್ಲಿದೆಯಲ್ಲವೆ. ಉಳಿದೆಲ್ಲರೂ ನಂತರದಲ್ಲಿ ಬಂದಿದ್ದಾರೆ, ಈಗ ಭಾರತದ ಭಾಗವೇ ಉಳಿಯುವುದು,
ಎಲ್ಲರ ಮೃತ್ಯುವಾಗಲೇಬೇಕಾಗಿದೆ ಅಂದಮೇಲೆ ನಾವೇಕೆ ತಂದೆಯಿಂದ ಪೂರ್ಣ ಆಸ್ತಿಯನ್ನು
ತೆಗೆದುಕೊಳ್ಳಬಾರದು! ಆದ್ದರಿಂದ ತಂದೆಯು ತಿಳಿಸುತ್ತಾರೆ - ಲೌಕಿಕ ಸಂಬಂಧಿಗಳೊಂದಿಗೂ ಸಂಬಂಧವನ್ನು
ನಿಭಾಯಿಸಬೇಕಾಗಿದೆ. ಬಾಕಿ ಯಾವುದೇ ಬಂಧನವಿಲ್ಲದಿದ್ದರೆ ಅಂತಹವರಿಗೆ ಸರ್ವೀಸಿನಲ್ಲಿ ತೊಡಗಿರಿ ಎಂದು
ತಂದೆಯು ಸಲಹೆ ಕೊಡುತ್ತಾರೆ. ಸ್ವತಂತ್ರರಾಗಿದ್ದರೆ ಅನೇಕರ ಕಲ್ಯಾಣ ಮಾಡಬಲ್ಲರು. ಎಲ್ಲಿಯೋ ಹೊರಗೆ
ಹೋಗದಿದ್ದರೂ ತಮ್ಮ ಮಿತ್ರ ಸಂಬಂಧಿಗಳ ಮೇಲಾದರೂ ದಯೆ ತೋರಿಸಬೇಕಾಗಿದೆ. ಬಾಬಾ, ದಯೆ ತೋರಿಸಿ ಎಂದು
ಮೊದಲು ಹೇಳುತ್ತಿದ್ದರಲ್ಲವೆ. ಈಗಂತೂ ನಿಮಗೆ ಮಾರ್ಗವು ಸಿಕ್ಕಿದೆಯೆಂದ ಮೇಲೆ ಹೇಗೆ ತಂದೆಯು ದಯೆ
ತೋರಿಸುತ್ತಾರೆ ಹಾಗೆಯೇ ನೀವು ಅನ್ಯರ ಮೇಲೂ ದಯೆ ತೋರಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ -
ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ. ಸನ್ಯಾಸಿಗಳು ಹಠಯೋಗ ಇತ್ಯಾದಿಗಳಲ್ಲಿ
ಎಷ್ಟೊಂದು ಪರಿಶ್ರಮ ಪಡುತ್ತಾರೆ. ಇಲ್ಲಂತೂ ಅದೇನೂ ಇಲ್ಲ, ಕೇವಲ ನೆನಪು ಮಾಡಿದರೆ ಪಾಪಗಳು
ಭಸ್ಮವಾಗಿ ಬಿಡುತ್ತದೆ. ಇದರಲ್ಲಿ ಯಾವುದೇ ಕಷ್ಟವಿಲ್ಲ, ಕೇವಲ ನೆನಪಿನ ಯಾತ್ರೆಯ ಮಾತಾಗಿದೆ.
ಎದ್ದೇಳಿ, ಕುಳಿತುಕೊಳ್ಳಿ, ಕರ್ಮೇಂದ್ರಿಯಗಳಿಂದ ಭಲೆ ಕರ್ಮವನ್ನೂ ಮಾಡಿ, ಕೇವಲ ಬುದ್ಧಿಯೋಗವನ್ನು
ತಂದೆಯೊಂದಿಗೆ ಜೋಡಿಸಿ. ಆ ಪ್ರಿಯತಮನಿಗೆ ಸತ್ಯ-ಸತ್ಯವಾದ ಪ್ರಿಯತಮೆಯರಾಗಬೇಕಾಗಿದೆ. ಹೇ
ಪ್ರಿಯತಮೆಯರೇ, ಹೇ ಮಕ್ಕಳೇ! ಭಕ್ತಿಮಾರ್ಗದಲ್ಲಿ ಬಹಳ ನೆನಪು ಮಾಡಿದಿರಿ ಆದರೆ ಈಗ ನಾನು
ಪ್ರಿಯತಮನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತದೆ, ನಾನು ಗ್ಯಾರಂಟಿ ಕೊಡುತ್ತೇನೆ
ಎಂದು ಸ್ವಯಂ ಅವರೇ ತಿಳಿಸುತ್ತಾರೆ. ಕೆಲ ಕೆಲವು ಮಾತುಗಳು ಶಾಸ್ತ್ರಗಳಲ್ಲಿ ಬಂದು ಬಿಟ್ಟಿವೆ.
ಭಗವಂತನ ಮೂಲಕ ಗೀತೆಯನ್ನು ಕೇಳುವುದರಿಂದ ನೀವು ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಮನುಷ್ಯರ
ಮೂಲಕ ಗೀತೆಯನ್ನು ಕೇಳಿದ್ದರಿಂದ ಜೀವನ ಬಂಧನದಲ್ಲಿ ಬಂದಿದ್ದೀರಿ, ಏಣಿಯನ್ನು ಕೆಳಗಿಳಿಯುತ್ತಾ
ಬಂದಿದ್ದೀರಿ. ಪ್ರತಿಯೊಂದು ಮಾತಿನಲ್ಲಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ, ತಮ್ಮ ಬುದ್ಧಿಯನ್ನು
ಓಡಿಸಬೇಕಾಗಿದೆ. ಇದು ನೆನಪಿನ ಯಾತ್ರೆಯಾಗಿದೆ, ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ವೇದ
ಶಾಸ್ತ್ರ, ಯಜ್ಞ, ತಪ ಇತ್ಯಾದಿಗಳನ್ನು ಮಾಡುವುದರಿಂದ ಪಾಪ ನಾಶವಾಗುವುದಿಲ್ಲ. ಕೆಳಗಿಳಿಯುತ್ತಲೇ
ಬಂದಿರಿ, ನೀವೀಗ ಮೇಲೆ ಹೋಗಬೇಕಾಗಿದೆ. ಕೇವಲ ಏಣಿಯ ಚಿತ್ರದಿಂದ ನೀವು ತಿಳಿಸುವವರೆಗೆ ಯಾರಿಗೂ
ಅರ್ಥವಾಗುವುದಿಲ್ಲ. ಹೇಗೆ ಚಿಕ್ಕ ಮಕ್ಕಳಿಗೆ ಚಿತ್ರವನ್ನು ತೋರಿಸಿ - ಇದು ಆನೆಯಾಗಿದೆ.... ಎಂದು
ಕಲಿಸಬೇಕಾಗುತ್ತದೆ. ಯಾವಾಗ ಆನೆಯನ್ನು ನೋಡುವರು ಆಗ ಚಿತ್ರವೂ ನೆನಪಿಗೆ ಬರುವುದು ಹೇಗೆ ನಿಮ್ಮ
ಬುದ್ಧಿಯಲ್ಲಿ ಬಂದು ಬಿಟ್ಟಿದೆ. ಚಿತ್ರದಲ್ಲಿ ಯಾವಾಗಲೂ ಚಿಕ್ಕ ವಸ್ತುವನ್ನು ತೋರಿಸಲಾಗುತ್ತದೆ.
ನಿಮಗೆ ತಿಳಿದಿದೆ - ವೈಕುಂಠವಂತೂ ದೊಡ್ಡದಾಗಿರುತ್ತದೆ, ದೊಡ್ಡ ರಾಜಧಾನಿಯಿರುತ್ತದೆ. ಅಲ್ಲಿ
ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ. ಅವು ಮತ್ತೆ ಪ್ರಾಯಲೋಪವಾಗಿ ಬಿಡುತ್ತದೆ. ಎಲ್ಲಾ ವಸ್ತುಗಳು
ಮಾಯವಾಗಿ ಬಿಡುತ್ತದೆ. ಇಲ್ಲದಿದ್ದರೆ ಈ ಭಾರತವು ಹೇಗೆ ಬಡ ದೇಶವಾಯಿತು? ಸಾಹುಕಾರನಿಂದ ಬಡವ,
ಬಡವನಿಂದ ಸಾಹುಕಾರನಾಗಬೇಕಾಗಿದೆ. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ ಆದ್ದರಿಂದ ಏಣಿಯ ಚಿತ್ರದಲ್ಲಿ
ತಿಳಿಸಲಾಗುತ್ತದೆ, ಹೊಸ-ಹೊಸಬರು ಬರುತ್ತಾರೆಂದರೆ ಅವರಿಗೆ ತಿಳಿಸುವುದರಿಂದ ಅಭ್ಯಾಸವಾಗುವುದು,
ಬಾಯಿ ತೆರೆಯುವುದು. ಮಕ್ಕಳನ್ನು ಸೇವೆಗೆ ಯೋಗ್ಯರನ್ನಾಗಿ ಮಾಡಲಾಗುತ್ತದೆ. ಕೆಲವು
ಸೇವಾಕೇಂದ್ರಗಳಲ್ಲಿ ಅನೇಕ ಮಕ್ಕಳು ಅಶಾಂತಿಯನ್ನು ಹರಡುತ್ತಿರುತ್ತಾರೆ. ಬುದ್ಧಿಯೋಗವು ಹೊರಗೆ
ಅಲೆಯುತ್ತದೆ ಅಂದಮೇಲೆ ನಷ್ಟವನ್ನುಂಟು ಮಾಡುತ್ತಾರೆ, ವಾಯುಮಂಡಲವನ್ನೂ ಹಾಳು ಮಾಡಿ ಬಿಡುತ್ತಾರೆ.
ನಂಬರ್ವಾರಂತೂ ಇರುತ್ತಾರಲ್ಲವೆ. ಮತ್ತೆ ತಂದೆಯು ಹೇಳುತ್ತಾರೆ, ನೀವು ಓದಲಿಲ್ಲ ಆದ್ದರಿಂದ ಈಗ
ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ! ದಿನ-ಪ್ರತಿದಿನ ಹೆಚ್ಚು ಸಾಕ್ಷಾತ್ಕಾರಗಳಾಗುತ್ತಾ ಇರುತ್ತವೆ.
ಪಾಪ ಮಾಡುವವರಿಗೆ ಶಿಕ್ಷೆಗಳೂ ಸಿಗುತ್ತಿರುತ್ತವೆ ಆಗ ಅಯ್ಯೊ! ನಾವು ಸುಮ್ಮನೆ ಪಾಪ ಮಾಡಿದೆವು ಎಂದು
ಹೇಳುತ್ತಾರೆ. ತಂದೆಗೆ ತಿಳಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಸ್ವಲ್ಪ ಕಡಿಮೆಯಾಗುತ್ತದೆ
ಇಲ್ಲದಿದ್ದರೆ ಅದು ಇನ್ನೂ ವೃದ್ಧಿಯಾಗುತ್ತಾ ಇರುವುದು. ಈ ರೀತಿಯಾಗುತ್ತಿರುತ್ತದೆ. ಇವನ್ನು ಸ್ವಯಂ
ಅನುಭವ ಮಾಡುತ್ತಾರೆ ಆದರೆ ಮತ್ತೆ ಹೇಳುತ್ತಾರೆ - ಏನು ಮಾಡುವುದು? ನಮ್ಮ ಈ ಹವ್ಯಾಸವು
ಕಳೆಯುತ್ತಿಲ್ಲ. ಇದಕ್ಕಿಂತಲೂ ಮನೆಗೆ ಹೋಗಿ ಇರುತ್ತೇನೆ ಎಂದು. ಕೆಲವರಂತೂ ಚೆನ್ನಾಗಿ ಸರ್ವೀಸ್
ಮಾಡುತ್ತಾರೆ, ಕೆಲವರು ಸೇವಾಭಂಗವನ್ನೂ ಮಾಡುತ್ತಾರೆ. ನಮ್ಮ ಸೈನ್ಯದಲ್ಲಿ ಯಾರ್ಯಾರು
ಬಹದ್ದೂರರಿದ್ದಾರೆ ಎಂದು ತಂದೆಯು ಹೆಸರುಗಳನ್ನು ತಿಳಿಸುತ್ತಾರೆ ಬಾಕಿ ಯಾವುದೇ ಯುದ್ಧ ಇತ್ಯಾದಿಗಳ
ಮಾತಿಲ್ಲ. ಇವು ಬೇಹದ್ದಿನ ಮಾತುಗಳಾಗಿವೆ. ಒಳ್ಳೆಯ ಮಕ್ಕಳಾಗಿದ್ದರೆ ತಂದೆಯು ಅವಶ್ಯವಾಗಿ ಅವರ
ಮಹಿಮೆ ಮಾಡುತ್ತಾರೆ. ಮಕ್ಕಳು ಬಹಳ ದಯಾಹೃದಯಿಗಳು, ಕಲ್ಯಾಣಕಾರಿಗಳಾಗಬೇಕಾಗಿದೆ. ಅಂಧರಿಗೆ
ಊರುಗೋಲಾಗಬೇಕಾಗಿದೆ. ಎಲ್ಲರಿಗೆ ಮಾರ್ಗವನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು
ವಿನಾಶವಾಗುವುದು. ಪಾಪಾತ್ಮ ಮತ್ತು ಪುಣ್ಯಾತ್ಮನೆಂದು ಹೇಳುತ್ತಾರಲ್ಲವೆ. ಒಳಗಡೆ ಪರಮಾತ್ಮನಿದ್ದಾರೆ
ಅಥವಾ ಆತ್ಮವು ಪರಮಾತ್ಮನಾಗಿ ಬಿಡುತ್ತದೆ ಎಂದು ಹೇಳುವುದಿಲ್ಲ. ಇದೆಲ್ಲವೂ ತಪ್ಪಾಗಿದೆ.
ಪರಮಾತ್ಮನಿಗೆ ಪಾಪವು ಅಂಟುವುದಿಲ್ಲ. ಡ್ರಾಮಾದಲ್ಲಿ ಅವರದು ಸೇವೆ ಮಾಡುವ ಪಾತ್ರವಿದೆ. ಮನುಷ್ಯರೇ
ಪಾಪಾತ್ಮ, ಪುಣ್ಯಾತ್ಮನಾಗುತ್ತಾರೆ. ಯಾರು ಸತೋಪ್ರಧಾನರಾಗಿದ್ದರೋ ಅವರೇ ತಮೋಪ್ರಧಾನರಾಗಿದ್ದಾರೆ,
ಅವರ ತನುವಿನಲ್ಲಿ ತಂದೆಯು ಕುಳಿತು ಸತೋಪ್ರಧಾನರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಮತದಂತೆ
ನಡೆಯಬೇಕಲ್ಲವೆ.
ಈಗ ತಂದೆಯು ನೀವು
ಮಕ್ಕಳನ್ನು ವಿಶಾಲ ಬುದ್ಧಿಯವರನ್ನಾಗಿ ಮಾಡಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ರಾಜಧಾನಿಯು
ಹೇಗೆ ಸ್ಥಾಪನೆಯಾಗುತ್ತಿದೆ, ತಂದೆಯೇ ಬ್ರಹ್ಮಾರವರ ತನುವಿನಲ್ಲಿ ಬಂದು ಬ್ರಹ್ಮಾ ಮುಖ ವಂಶಾವಳಿ
ಬ್ರಾಹ್ಮಣರಿಗೆ ರಾಜಯೋಗವನ್ನು ಕಲಿಸಿ ದೇವಿ-ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ಪುನರ್ಜನ್ಮವನ್ನು
ತೆಗೆದುಕೊಂಡು ಕೆಳಗಿಳಿಯುತ್ತೀರಿ. ಈಗ ಪುನಃ ಎಲ್ಲವನ್ನೂ ಪುನರಾವರ್ತಿಸಬೇಕಾಗಿದೆ. ತಂದೆಯು ಪುನಃ
ಬ್ರಹ್ಮಾರವರ ಮೂಲಕ ಸ್ಥಾಪನಾ ಕಾರ್ಯವನ್ನು ಮಾಡಿಸುತ್ತಿದ್ದಾರೆ. ಯೋಗಬಲದಿಂದ ನೀವು ಪಂಚ
ವಿಕಾರಗಳನ್ನು ಗೆದ್ದು ಜಗತ್ಜೀತರಾಗುತ್ತೀರಿ. ಬಾಕಿ ಯಾವುದೆ ಯುದ್ಧ ಇತ್ಯಾದಿಗಳ ಮಾತಿಲ್ಲ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಬಂಧನ
ಮುಕ್ತರಾಗಿ ತಂದೆಯ ಸೇವೆಯಲ್ಲಿ ತೊಡಗಬೇಕಾಗಿದೆ, ಆಗಲೇ ಶ್ರೇಷ್ಠ ಅದೃಷ್ಟವಾಗುವುದು.
ದಯಾಹೃದಯಿಗಳಾಗಿ ಅನೇಕರಿಗೆ ಮಾರ್ಗ ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.
2) ಈ ಶರೀರದಿಂದ
ಮಮತ್ವವನ್ನು ತೆಗೆದು ಜೀವಿಸಿದ್ದಂತೆಯೇ ಸಾಯಬೇಕಾಗಿದೆ ಏಕೆಂದರೆ ಈಗ ಮರಳಿ ಮನೆಗೆ ಹೋಗಬೇಕಾಗಿದೆ.
ಕಾಯಿಲೆಯ ಸಮಯದಲ್ಲಿಯೂ ಒಬ್ಬ ತಂದೆಯ ನೆನಪಿರಲಿ ಆಗ ವಿಕರ್ಮಗಳು ವಿನಾಶವಾಗುವವು.
ವರದಾನ:
ಕಲ್ಯಾಣದ
ಭಾವನೆಯ ಮೂಲಕ ಪ್ರತಿಯೊಂದು ಆತ್ಮನ ಸಂಸ್ಕಾರಗಳನ್ನು ಪರಿವರ್ತನೆ ಮಾಡುವಂತಹ ನಿಶ್ಚಯ ಬುದ್ಧಿ ಭವ.
ಹೇಗೆ ತಂದೆಯಲ್ಲಿ 100%
ನಿಶ್ಚಯ ಬುದ್ಧಿಯವರು ಆಗಿದ್ದೀರಿ, ಯಾರೆಷ್ಟೇ ಏರುಪೇರು ಮಾಡುವಂತಹ ಪ್ರಯತ್ನದಲ್ಲಿರಲಿ ಆದರೆ
ಅದಾಗಲು ಸಾಧ್ಯವಿಲ್ಲ. ಇಂತಹ ದೈವೀ ಪರಿವಾರ ಅಥವ ಸಂಸಾರಿ ಆತ್ಮರುಗಳ ಮೂಲಕ ಭಲೆ ಯಾರೆಷ್ಟಾದರೂ
ಪರೀಕ್ಷೆಯನ್ನೇ ತೆಗೆದುಕೊಳ್ಳಲಿ, ಕ್ರೋಧಿಯಾಗಿ ಎದುರಿಸಲಿ ಅಥವಾ ಯಾರೇ ಟೀಕೆ ಮಾಡಲಿ, ನಿಂದನೆ
ಮಾಡಬಹುದು, ಅದರಲ್ಲಿಯೂ ಏರುಪೇರಾಗಲು ಸಾಧ್ಯವಿಲ್ಲ. ಇದರಲ್ಲಿ ಕೇವಲ ಪ್ರತಿಯೊಂದು ಆತ್ಮನ ಬಗ್ಗೆ
ಕಲ್ಯಾಣದ ಭಾವನೆಯಿರಲಿ, ಈ ಭಾವನೆಯು ಅವರ ಸಂಸ್ಕಾರಗಳನ್ನು ಪರಿವರ್ತಿಸುತ್ತದೆ. ಇದರಲ್ಲಿ ಕೇವಲ
ಧೈರ್ಯವನ್ನು ಕಳೆದುಕೊಳ್ಳಬಾರದು, ಸಮಯದನುಸಾರ ಅವಶ್ಯವಾಗಿ ಫಲವು ಹೊರ ಬರುತ್ತದೆ - ಇದು
ಡ್ರಾಮಾದಲ್ಲಿ ನೊಂದಣಿಯಾಗಿದೆ.
ಸ್ಲೋಗನ್:
ಪವಿತ್ರತೆಯ
ಶಕ್ತಿಯಿಂದ ತನ್ನ ಸಂಕಲ್ಪಗಳನ್ನು ಶುದ್ಧ, ಜ್ಞಾನ ಸ್ವರೂಪರನ್ನಾಗಿ ಮಾಡಿ ಬಲಹೀನತೆಗಳನ್ನು ಸಮಾಪ್ತಿ
ಮಾಡಿರಿ.
ಅವ್ಯಕ್ತ ಸೂಚನೆ:–
ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ.
ವಾಚಾದಲ್ಲಿ ಸದಾ ಸತ್ಯತೆ
ಮತ್ತು ಮಧುರತೆಯಿದ್ದರೆ ವಾಣಿಯ ಮಾರ್ಕ್ಸ್ ಜಮಾವಾಗುತ್ತಿರುವುದು. ಮಧುರತೆಯ ಗುಣ ಜೀವನದಲ್ಲಿದ್ದರೆ
ಪ್ರತಿ ಮಾತು ಮುತ್ತು ಸಮಾನವಾಗಿರುತ್ತದೆ. ಈ ರೀತಿ ಅನಿಸುತ್ತದೆ ಹೇಗೆ ಮಾತನಾಡುತ್ತಿಲ್ಲ,
ಮುತ್ತುಗಳ ವರ್ಷ (ಮಳೆ) ಸುರಿಯುತ್ತಿದೆ. ಅವರು ಇಂತಹ ಮಾತುಗಳನ್ನು ಮಾತನಾಡುತ್ತಾರೆ, ಕೇಳುವವರು
ಯೋಚಿಸುವವರು ಯೋಚಿಸುವರು ನಾವು ಸಹ ಇಂತಹ ಮಾತುಗಳನ್ನು ಮಾತನಾಡಬೇಕು. ಎಲ್ಲರು ಕೇಳಿ ಕಲಿಯುವ, ಫಾಲೋ
ಮಾಡುವ ಪ್ರೇರಣೆ ಸಿಗುವುದು. ಇಂತಹ ಮಧುರ ಮಾತಿನ ವೈಬ್ರೇಷನ್ ಸರ್ವರನ್ನು ಸ್ವತಃವೇ ಸೆಳೆಯುತ್ತದೆ.