03.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ತಮಗೆ ರಾಜತಿಲಕವನ್ನು ಕೊಟ್ಟುಕೊಳ್ಳಲು ಯೋಗ್ಯರನ್ನಾಗಿ ಮಾಡಿಕೊಳ್ಳಿ, ಎಷ್ಟು ವಿದ್ಯೆಯನ್ನು ಓದುತ್ತೀರಿ, ಶ್ರೀಮತದಂತೆ ನಡೆಯುತ್ತೀರಿ ಅಷ್ಟು ರಾಜತಿಲಕವು ಸಿಗುವುದು”

ಪ್ರಶ್ನೆ:
ಯಾವ ಸ್ಮೃತಿಯಲ್ಲಿದ್ದಾಗ ರಾವಣತನದ ಸ್ಮೃತಿಯು ವಿಸ್ಮೃತಿಯಾಗುವುದು?

ಉತ್ತರ:
ಸದಾ ಸ್ಮೃತಿಯಿರಲಿ- ನಾವು ಸ್ತ್ರೀ-ಪುರುಷರಲ್ಲ, ಆತ್ಮಗಳಾಗಿದ್ದೇವೆ. ನಾವು ದೊಡ್ಡತಂದೆ(ಶಿವತಂದೇ) ಯಿಂದ ಚಿಕ್ಕತಂದೆ(ಬ್ರಹ್ಮ)ಯ ಮೂಲಕ ಆಸ್ತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಈ ಸ್ಮೃತಿಯು ರಾವಣತನದ ಸ್ಮೃತಿಯನ್ನು ಮರೆಸಿಬಿಡುವುದು. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆಂದು ನಿಮಗೆ ಸ್ಮೃತಿಯು ಬಂದಿತೆಂದರೆ ರಾವಣನ ಸ್ಮೃತಿಯು ಸಮಾಪ್ತಿಯಾಗಿಬಿಡುತ್ತದೆ ಇದೂ ಸಹ ಪವಿತ್ರರಾಗಿರುವ ಬಹಳ ಒಳ್ಳೆಯ ಯುಕ್ತಿಯಾಗಿದೆ ಆದರೆ ಇದರಲ್ಲಿ ಪರಿಶ್ರಮಪಡಬೇಕು.

ಗೀತೆ:
ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು...........

ಓಂ ಶಾಂತಿ.
ಆತ್ಮೀಯ ತಂದೆಯು ಕುಳಿತು ಆತ್ಮೀಯ ಮಕ್ಕಳಿಗೆ ತಿಳಿಸುತ್ತಾರೆ. ನೋಡಿ, ಎಲ್ಲರೂ ಇಲ್ಲಿ (ಭೃಕುಟಿ) ತಿಲಕವನ್ನಿಟ್ಟುಕೊಳ್ಳುತ್ತಾರೆ. ಈ ಜಾಗವು ಮೊದಲನೆಯದಾಗಿ ಆತ್ಮದ ನಿವಾಸಸ್ಥಾನವಾಗಿದೆ. ಎರಡನೆಯದಾಗಿ ರಾಜತಿಲಕವನ್ನು ಇಲ್ಲಿಯೇ ಇಡಲಾಗುತ್ತದೆ. ಇದು ಆತ್ಮದ ಸಂಕೇತವಾಗಿದೆ. ಈಗ ಆತ್ಮಕ್ಕೆ ತಂದೆಯಿಂದ ಸ್ವರ್ಗದ ಆಸ್ತಿಯು ಬೇಕು. ವಿಶ್ವದ ರಾಜ್ಯತಿಲಕವೂ ಬೇಕು. ಸೂರ್ಯವಂಶಿ, ಚಂದ್ರವಂಶಿ ಮಹಾರಾಜ-ಮಹಾರಾಣಿ ಆಗುವುದಕ್ಕಾಗಿಯೇ ಓದುತ್ತೀರಿ. ಈ ವಿದ್ಯೆಯನ್ನು ಓದುವುದೆಂದರೆ ತಮಗೆ ತಾವು ರಾಜತಿಲಕವನ್ನು ಕೊಟ್ಟುಕೊಳ್ಳುವುದಾಗಿದೆ. ನೀವಿಲ್ಲಿ ಓದುವುದಕ್ಕಾಗಿಯೇ ಬಂದಿದ್ದೀರಿ. ಭೃಕುಟಿಯಲ್ಲಿ ನಿವಾಸ ಮಾಡುವ ಆತ್ಮವೂ ಹೇಳುತ್ತದೆ- ಬಾಬಾ, ನಾವು ತಮ್ಮಿಂದ ವಿಶ್ವದ ಸ್ವರಾಜ್ಯವನ್ನು ಅವಶ್ಯವಾಗಿ ಪ್ರಾಪ್ತಿ ಮಾಡಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ತಮಗಾಗಿ ಪುರುಷಾರ್ಥ ಮಾಡಬೇಕಾಗಿದೆ. ಮಕ್ಕಳು ಹೇಳುತ್ತಾರೆ- ಬಾಬಾ, ನಾವು ಇಂತಹ ಸುಪುತ್ರರಾಗಿ ತೋರಿಸುತ್ತೇವೆ. ನಾವು ಹೇಗೆ ನಡೆಯುತ್ತೇವೆಂದು ತಾವು ನೋಡುತ್ತಾ ಇರಿ. ನಾವು ನಮಗೆ ರಾಜತಿಲಕವನ್ನು ಇಟ್ಟುಕೊಳ್ಳಲು ಯೋಗ್ಯರಾಗಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನೂ ಸಹ ಮಕ್ಕಳು ಅರಿತುಕೊಳ್ಳಬಹುದಾಗಿದೆ. ನೀವು ಮಕ್ಕಳು ತಂದೆಯ ಸುಪುತ್ರರಾಗಿ ಮಾಡಿ ತೋರಿಸಬೇಕಾಗಿದೆ. ಬಾಬಾ, ನಾವು ತಮ್ಮ ಹೆಸರನ್ನು ಪ್ರಖ್ಯಾತಗೊಳಿಸುತ್ತೇವೆ. ನಾವು ತಮ್ಮ ಸಹಯೋಗಿಗಳು ಸೋ ನಮ್ಮ ಸಹಯೋಗಿಗಳಾಗಿ ಭಾರತದಲ್ಲಿ ರಾಜ್ಯ ಮಾಡುತ್ತೇವೆ. ನಮ್ಮ ರಾಜ್ಯವೆಂದು ಭಾರತವಾಸಿಗಳು ಹೇಳುತ್ತಾರಲ್ಲವೆ ಆದರೆ ನಾವೀಗ ವಿಷಯವೈತರಣೀ ನದಿಯಲ್ಲಿ ಮುಳುಗುತ್ತಿದ್ದೇವೆ. ನಾವಾತ್ಮಗಳಿಗೆ ರಾಜ್ಯವಿಲ್ಲ ಎಂಬುದು ಪಾಪ! ಅವರಿಗೆ ಗೊತ್ತಿಲ್ಲ. ಈಗಂತೂ ಆತ್ಮವು ತಲೆಕೆಳಕಾಗಿದೆ, ತಿನ್ನುವುದಕ್ಕೂ ಸಿಗುತ್ತಿಲ್ಲ, ಯಾವಾಗ ಈ ಸ್ಮೃತಿಯನ್ನು ತಲುಪುವರೋ ಆಗ ತಂದೆಯು ಹೇಳುತ್ತಾರೆ- ಈಗಂತೂ ನನ್ನ ಮಕ್ಕಳಿಗೆ ತಿನ್ನುವುದಕ್ಕೂ ಸಿಗುತ್ತಿಲ್ಲ, ಈಗ ನಾನು ಅವರಿಗೆ ರಾಜಯೋಗವನ್ನು ಕಲಿಸೋಣವೇ ಎಂದು ಹೇಳಿ ರಾಜಯೋಗವನ್ನು ಕಲಿಸಲು ಬರುತ್ತಾರೆ. ಬೇಹದ್ದಿನ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ. ಅವರು ಹೊಸ ಪ್ರಪಂಚವನ್ನು ರಚಿಸುವವರಾಗಿದ್ದಾರೆ. ತಂದೆಯು ಪತಿತ-ಪಾವನನು, ಜ್ಞಾನಸಾಗರನೂ ಆಗಿದ್ದಾರೆ. ಇದು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಲ್ಲ. ಅವಶ್ಯವಾಗಿ ನಮ್ಮ ತಂದೆಯು ಜ್ಞಾನಸಾಗರ, ಸುಖದ ಸಾಗರನಾಗಿದ್ದಾರೆ ಎಂಬುದನ್ನು ಕೇವಲ ನೀವು ಮಕ್ಕಳೇ ಅರಿತುಕೊಂಡಿದ್ದೀರಿ. ಈ ಮಹಿಮೆಯನ್ನೂ ಚೆನ್ನಾಗಿ ನೆನಪು ಮಾಡಿಕೊಳ್ಳಿ, ಮರೆಯಬೇಡಿ. ತಂದೆಯ ಮಹಿಮೆಯಿದೆಯಲ್ಲವೆ. ಅವರು ಪುನರ್ಜನ್ಮರಹಿತ ಆಗಿದ್ದಾರೆ, ಕೃಷ್ಣನ ಮಹಿಮೆಯು ಸಂಪೂರ್ಣ ಭಿನ್ನವಾಗಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿಯ ಮಹಿಮೆಯು ಬೇರೆ-ಬೇರೆಯಾಗಿರುತ್ತದೆ. ತಂದೆಯು ತಿಳಿಸುತ್ತಾರೆ- ನನಗೂ ಈ ನಾಟಕದಲ್ಲಿ ಬಹಳ ಶ್ರೇಷ್ಠವಾದ ಪಾತ್ರವು ಸಿಕ್ಕಿದೆ. ಇದು ಬೇಹದ್ದಿನ ನಾಟಕವಾಗಿದೆ, ಇದರ ಕಾಲಾವಧಿ ಎಷ್ಟೆಂಬುದು ನಾಟಕದಲ್ಲಿ ಪಾತ್ರಧಾರಿಗಳಿಗೆ ತಿಳಿದಿರಬೇಕಲ್ಲವೆ. ಒಂದುವೇಳೆ ತಿಳಿದುಕೊಂಡಿಲ್ಲವೆಂದರೆ ಅವರಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ ಆದರೆ ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ಇದರ ಅಂತರವನ್ನು ತಿಳಿಸುತ್ತಾರೆ. ಮನುಷ್ಯರು ಹೇಗಿದ್ದವರು ಹೇಗಾಗಿದ್ದಾರೆ! ಈಗ ನೀವು ತಿಳಿದುಕೊಳ್ಳುತ್ತೀರಿ- ಮನುಷ್ಯರಿಗೆ ಏನೂ ಗೊತ್ತಿಲ್ಲ, 84 ಜನ್ಮಗಳನ್ನು ನಾವು ಹೇಗೆ ಪಡೆದಿದ್ದೇವೆ, ಭಾರತವು ಎಷ್ಟು ಶ್ರೇಷ್ಠವಾಗಿತ್ತು, ಇದರ ಚಿತ್ರವೂ ಇದೆಯಲ್ಲವೆ. ಸೋಮನಾಥ ಮಂದಿರದಿಂದ ಎಷ್ಟೊಂದು ಲೂಟಿ ಮಾಡಿದರು, ಎಷ್ಟೊಂದು ಸಂಪತ್ತಿತ್ತು. ಈಗ ನೀವು ಮಕ್ಕಳು ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೀರಿ. ತಂದೆಯಿಂದ ರಾಜತಿಲಕವನ್ನು ಶ್ರೀಮತದಂತೆ ಪಡೆಯಲು ಬಂದಿದ್ದೇವೆಂದು ಮಕ್ಕಳಿಗೆ ಗೊತ್ತಿದೆ, ಪವಿತ್ರರಂತೂ ಆಗಲೇಬೇಕೆಂದು ತಂದೆಯು ತಿಳಿಸುತ್ತಾರೆ. ಜನ್ಮ-ಜನ್ಮಾಂತರ ವಿಷಯವೈತರಣೀ ನದಿಯಲ್ಲಿ ಮುಳುಗಿ ಸುಸ್ತಾಗಿಲ್ಲವೆ! ಸ್ವಯಂ ಹೇಳುತ್ತಾರೆ- ನಾವು ಪಾಪಿಯಾಗಿದ್ದೇವೆ, ನಾವು ನಿರ್ಗುಣರು ನಮ್ಮಲ್ಲಿ ಯಾವುದೇ ಗುಣವಿಲ್ಲ ಅಂದಾಗ ಒಮ್ಮೆಯಂತೂ ಆ ಗುಣಗಳು ಇದ್ದವು ಅಲ್ಲವೆ! ಆದರೆ ಇಂದು ಇಲ್ಲ.

ಈಗ ನೀವು ತಿಳಿದುಕೊಂಡಿದ್ದೀರಿ- ನಾವು ವಿಶ್ವಕ್ಕೆ ಮಾಲೀಕ, ಸರ್ವಗುಣ ಸಂಪನ್ನರಾಗಿದ್ದೆವು, ಈಗ ಯಾವುದೇ ಗುಣವಿಲ್ಲ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ. ಮಕ್ಕಳ ರಚಯಿತ ತಂದೆಯಾಗಿದ್ದಾರೆ ಅಂದಾಗ ಎಲ್ಲಾ ಮಕ್ಕಳ ಮೇಲೆ ತಂದೆಗೆ ಬಹಳ ದಯೆಬರುತ್ತದೆ. ದಯೆಯಿದೆಯಲ್ಲವೆ! ತಂದೆಯು ತಿಳಿಸುತ್ತಾರೆ- ಈ ಡ್ರಾಮಾದಲ್ಲಿ ನನ್ನದೂ ಸಹ ಪಾತ್ರವಿದೆ. ಎಷ್ಟೊಂದು ತಮೋಪ್ರಧಾನರಾಗಿದ್ದೀರಿ, ಅಸತ್ಯ-ಪಾಪ, ಜಗಳ ಏನೆಲ್ಲಾ ಇದೆ. ನಾವು ಒಂದು ಸಮಯದಲ್ಲಿ ವಿಶ್ವದ ಮಾಲೀಕರು, ಡಬಲ್ ಕಿರೀಟಧಾರಿಗಳಾಗಿದ್ದೆವೆಂದು ಭಾರತವಾಸಿಗಳೆಲ್ಲರೂ ಮರೆತಿದ್ದಾರೆ. ಅಂತಹ ಮಕ್ಕಳಿಗೆ ತಂದೆಯು ಸ್ಮೃತಿ ತರಿಸುತ್ತಿದ್ದಾರೆ- ನೀವೇ ವಿಶ್ವದ ಮಾಲೀಕರಾಗಿದ್ದಿರಿ, ಈಗ ನೀವು 84 ಜನ್ಮಗಳನ್ನು ಪಡೆದಿದ್ದೀರಿ. ನೀವು ನಿಮ್ಮ 84 ಜನ್ಮಗಳನ್ನು ಮರೆತಿದ್ದೀರಿ, ಅದ್ಭುತವಾಗಿದೆ! 84 ಜನ್ಮಗಳ ಬದಲಾಗಿ 84 ಲಕ್ಷಜನ್ಮಗಳೆಂದು ಹೇಳಿದಿರಿ ಮತ್ತು ಕಲ್ಪದ ಆಯಸ್ಸನ್ನೂ ಸಹ ಲಕ್ಷಾಂತರ ವರ್ಷಗಳೆಂದು ಹೇಳಿದಿರಿ. ಘೋರ ಅಂಧಕಾರದಲ್ಲಿದ್ದೀರಲ್ಲವೆ. ಎಷ್ಟೊಂದು ಅಸತ್ಯವಿದೆ. ಭಾರತವೇ ಸತ್ಯಖಂಡವಾಗಿತ್ತು, ಇಂದು ಭಾರತವೇ ಅಸತ್ಯಖಂಡವಾಗಿದೆ. ಅಸತ್ಯಖಂಡವನ್ನಾಗಿ ಯಾರು ಮಾಡಿದರು? ಸತ್ಯಖಂಡವನ್ನಾಗಿ ಯಾರು ಮಾಡಿದರು? ಇದು ಯಾರಿಗೂ ಸಹ ಗೊತ್ತಿಲ್ಲ. ರಾವನನ್ನು ಯಾರೂ ಸಹ ತಿಳಿದಿಲ್ಲ. ಭಕ್ತರು ರಾವಣನನ್ನು ಸುಡುತ್ತಾರೆ. ಮನುಷ್ಯರು ಇದೇನೆಲ್ಲವನ್ನೂ ಏಕೆ ಮಾಡುತ್ತಾರೆಂದು ಯಾರಾದರೂ ಧಾರ್ಮಿಕ ವ್ಯಕ್ತಿಗಳಿದ್ದರೆ ಅವರಿಗೆ ನೀವು ತಿಳಿಸಿ. ಯಾವುದಕ್ಕೆ ಸತ್ಯಯುತ, ಹೆವೆನ್, ಪ್ಯಾರಡೈಸ್ ಎಂದು ಹೇಳುತ್ತಾರೆಯೋ ಅಲ್ಲಿ ಶತ್ರುವಾದ ರಾವಣ ಎಲ್ಲಿಂದ ಬಂದನು! ನರಕದ ಮನುಷ್ಯರು ಅಲ್ಲಿರಲು ಹೇಗೆ ಸಾಧ್ಯ! ಅಂದಾಗ ಇದು ತಪ್ಪೆಂದು ಖಂಡಿತವಾಗಿ ಅರ್ಥಮಾಡಿಕೊಳ್ಳುತ್ತಾರೆ. ನೀವು ರಾಮರಾಜ್ಯದ ಚಿತ್ರದ ಬಗ್ಗೆ ತಿಳಿಸಿಕೊಡಬಹುದು. ಇಲ್ಲಿ ರಾವಣನು ಎಲ್ಲಿಂದ ಬಂದನು? ನೀವು ತಿಳಿಸಿದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ, ಕೆಲವರಷ್ಟೇ ತಿಳಿದುಕೊಳ್ಳುತ್ತಾರೆ. ನೀವು ಬಹಳ ಸ್ವಲ್ಪಮಂದಿ ಇದ್ದೀರಿ, ಇನ್ನು ಮುಂದೆ ಎಷ್ಟು ಮಂದಿ ನಿಲ್ಲುತ್ತಾರೆಂದು ನೋಡಬೇಕು.

ಅಂದಾಗ ತಂದೆಯು ತಿಳಿಸುತ್ತಾರೆ- ಆತ್ಮದ ಚಿಕ್ಕ ಚಿಹ್ನೆಯನ್ನೂ ಸಹ ಇಲ್ಲಿಯೇ ತೋರಿಸುತ್ತಾರೆ. ದೊಡ್ಡ ಚಿಹ್ನೆ ರಾಜತಿಲಕವಾಗಿದೆ. ಈಗ ತಂದೆಯು ಬಂದಿದ್ದಾರೆ. ನೀವು ನಿಮಗೆ ಶ್ರೇಷ್ಠ ತಿಲಕವನ್ನು ಹೇಗೆ ಕೊಟ್ಟುಕೊಳ್ಳುವುದು, ನೀವು ಸ್ವರಾಜ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳಬಹುದು? ಇದರ ದಾರಿಯನ್ನು ತಿಳಿಸುತ್ತಾರೆ. ಅದಕ್ಕೆ ರಾಜಯೋಗವೆಂದು ಹೆಸರನ್ನಿಡಲಾಗಿದೆ. ಕಲಿಸುವವರು ತಂದೆಯಾಗಿದ್ದಾರೆ, ಕೃಷ್ಣನೆಂದಾದರೂ ತಂದೆಯಾಗಲು ಸಾಧ್ಯವೇ? ಅವನಾದರೂ ಮಗುವಾಗಿದ್ದಾನೆ ನಂತರ ರಾಧೆಯ ಜೊತೆ ಸ್ವಯಂವರ ನಡೆಯುತ್ತದೆ ಅನಂತರ ಒಂದು ಮಗುವು ಜನ್ಮ ಪಡೆಯುತ್ತದೆ. ಬಾಕಿ ಇಷ್ಟೊಂದು ಮಂದಿ ರಾಣಿಯರನ್ನು ತೋರಿಸುತ್ತಾರೆ, ಇದು ಅಸತ್ಯವಾಗಿದೆ. ಆದರೆ ಇದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ, ಇಂತಹ ಮಾತುಗಳನ್ನು ಮತ್ತೆ ಕೇಳುತ್ತೇವೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ- ಹೇಗೆ ನಾವಾತ್ಮಗಳು ಮೇಲಿಂದ ಪಾತ್ರವನ್ನಭಿನಯಿಸಲು ಬರುತ್ತೇವೆ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತೇವೆ. ಇದಂತೂ ಬಹಳ ಸಹಜವಾಗಿದೆಯಲ್ಲವೆ. ಮಕ್ಕಳು ಜನ್ಮಪಡೆದ ಕೂಡಲೇ ಮಾತನಾಡುವುದನ್ನು ಕಲಿಸುತ್ತಾರೆ. ಕಲಿಸಿದಾಗ ಅದು ಕಲಿಯುತ್ತದೆ. ನಿಮಗೆ ತಂದೆಯು ಏನನ್ನು ಕಲಿಸುತ್ತಾರೆ? ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕೆಂದು ತಿಳಿಸುತ್ತಾರೆ. ನೀವು ಮಾತಾಪಿತಾ...... ಆಗಿದ್ದೀರೆಂದು ಹಾಡುತ್ತೀರಲ್ಲವೆ. ಮಕ್ಕಳಿಗೆ ತಿಳಿದಿದೆ- ಇಲ್ಲಿ ನೀವು ಶಿವತಂದೆಯ ಬಳಿಗೆ ಬಂದಿದ್ದೀರಿ. ಭಗೀರಥ ಎಂಬುದು ಮನುಷ್ಯನ ರಥವಾಗಿದೆ. ಇವರಲ್ಲಿ (ಬ್ರಹ್ಮಾ) ಪರಮಪಿತ ಪರಮಾತ್ಮ ತಂದೆಯು ವಿರಾಜಮಾನನಾಗಿದ್ದಾರೆ, ಆದರೆ ರಥದ ಹೆಸರೇನಾಗಿದೆ? ಈಗ ನಿಮಗೆ ತಿಳಿದಿದೆ- ಇವರ ಹೆಸರು ಬ್ರಹ್ಮಾ ಎಂದಾಗಿದೆ ಏಕೆಂದರೆ ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸಲಾಗುತ್ತದೆ. ಮೊದಲು ಬ್ರಾಹ್ಮಣರ ಶಿಖೆ ನಂತರ ದೇವತಾ. ಮೊದಲಂತೂ ಬ್ರಾಹ್ಮಣರು ಬೇಕಾಗಿದ್ದಾರೆ ಆದ್ದರಿಂದ ವಿರಾಟರೂಪವನ್ನೂ ತೋರಿಸಲಾಗಿದೆ. ನೀವು ಬ್ರಾಹ್ಮಣರೇ ಮತ್ತೆ ದೇವತೆಯಾಗುತ್ತೀರಿ, ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೂ ಸಹ ಮಕ್ಕಳು ಮರೆತುಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸದಾ ಸ್ಮೃತಿಯಿಟ್ಟುಕೊಳ್ಳಿ- ನಾವು ಆತ್ಮರಾಗಿದ್ದೇವೆ, ಸ್ತ್ರೀ-ಪುರುಷರಲ್ಲ. ನಾವು ದೊಡ್ಡತಂದೆ (ಶಿವತಂದೆ) ಯಿಂದ ಚಿಕ್ಕತಂದೆಯ ಮೂಲಕ ಆಸ್ತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಅಂದಾಗ ರಾವಣತನದ ಸ್ಮೃತಿಯು ವಿಸ್ಮೃತಿಯಾಗಿಬಿಡುತ್ತದೆ. ಇದು ಪವಿತ್ರರಾಗಿರಲು ಬಹಳ ಒಳ್ಳೆಯ ಯುಕ್ತಿಯಾಗಿದೆ. ತಂದೆಯ ಬಳಿ ಬಹಳಷ್ಟು ದಂಪತಿಗಳು ಬರುತ್ತಾರೆ, ಇಬ್ಬರೂ ಬಾಬಾ ಎಂದು ಹೇಳುತ್ತಾರೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೆವೆಂದು ಯಾವಾಗ ಸ್ಮೃತಿಯು ಬರುತ್ತದೆಯೋ ಆಗ ರಾವಣತನದ ಸ್ಮೃತಿಯು ವಿಸ್ಮೃತಿಯಾಗಿಬಿಡಬೇಕು. ಇದರಲ್ಲಿಯೇ ಪರಿಶ್ರಮವಿದೆ. ಪರಿಶ್ರಮವಿಲ್ಲದೆ ಏನೂ ಸಹ ನಡೆಯುವುದಿಲ್ಲ. ನಾವು ತಂದೆಯ ಮಕ್ಕಳಾಗಿದ್ದೇವೆ. ಅವರನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. 84 ಜನ್ಮಗಳ ಕಥೆಯೂ ಸಹ ಬಹಳ ಸಹಜವಾಗಿದೆ. ಬಾಕಿ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ. ತಂದೆಯು ಹೇಳುತ್ತಾರೆ- ಕೊನೆಪಕ್ಷ 8 ಗಂಟೆಯಾದರೂ ನೆನಪು ಮಾಡುವ ಪುರುಷಾರ್ಥ ಮಾಡಿ. ಒಂದುಗಂಟೆ, ಅರ್ಧಗಂಟೆ..... ಕ್ಲಾಸಿಗೆ ಬರುವಾಗ ಸ್ಮೃತಿಯಿರಬೇಕು- ತಂದೆಯು ನಮಗೆ ಓದಿಸುತ್ತಿದ್ದಾರೆ. ಈಗ ನೀವು ತಂದೆಯ ಸನ್ಮುಖದಲ್ಲಿದ್ದೀರಲ್ಲವೆ. ತಂದೆಯು ಮಕ್ಕಳೇ, ಮಕ್ಕಳೇ ಎಂದು ತಿಳಿಸುತ್ತಾರೆ. ನೀವು ಮಕ್ಕಳು ಕೇಳುತ್ತೀರಿ. ತಂದೆಯು ತಿಳಿಸುತ್ತಾರೆ- ಹಿಯರ್ ನೋ ಈವಿಲ್....... ಇದೂ ಸಹ ಈಗಿನ ಮಾತಾಗಿದೆ.

ಈಗ ನೀವು ಮಕ್ಕಳಿಗೆ ಗೊತ್ತಿದೆ- ನಾವು ಜ್ಞಾನಸಾಗರ ತಂದೆಯ ಸನ್ಮುಖದಲ್ಲಿ ಬಂದಿದ್ದೇವೆ. ಜ್ಞಾನಸಾಗರ ತಂದೆಯು ನಿಮಗೆ ಇಡೀ ಸೃಷ್ಟಿಯ ಜ್ಞಾನವನ್ನು ತಿಳಿಸುತ್ತಿದ್ದಾರೆ. ಮತ್ತೆ ಯಾರಾದರೂ ಸ್ವೀಕರಿಸಲಿ ಅಥವಾ ಬಿಡಲಿ ಅದು ಅವರ ಮೇಲೆ ಆಧಾರಿತವಾಗಿದೆ. ತಂದೆಯು ಬಂದು ಈಗ ಜ್ಞಾನವನ್ನು ಕೊಡುತ್ತಿದ್ದಾರೆ. ನಾವೀಗ ರಾಜಯೋಗವನ್ನು ಕಲಿಯುತ್ತೇವೆ. ನಂತರ ಯಾವುದೇ ಶಾಸ್ತ್ರ ಇತ್ಯಾದಿ ಭಕ್ತಿಯ ಅಂಶವೂ ಇರುವುದಿಲ್ಲ. ಭಕ್ತಿಮಾರ್ಗದಲ್ಲಿ ಜ್ಞಾನವು ಅಂಶಮಾತ್ರವೂ ಸಹ ಇರುವುದಿಲ್ಲ. ಜ್ಞಾನಮಾರ್ಗದಲ್ಲಿ ಮತ್ತೆ ಭಕ್ತಿಯ ಅಂಶವೇ ಇರುವುದಿಲ್ಲ. ಜ್ಞಾನಸಾಗರ ಯಾವಾಗ ಬರುತ್ತಾರೆಯೋ ಆಗಲೇ ಜ್ಞಾನವನ್ನು ತಿಳಿಸುತ್ತಾರೆ. ಅವರ ಜ್ಞಾನವು ಸದ್ಗತಿಗಾಗಿಯೇ ಇರುತ್ತದೆ. ಸದ್ಗತಿದಾತ ಒಬ್ಬರೇ ಆಗಿದ್ದಾರೆ, ಯಾರಿಗೆ ಭಗವಂತನೆಂದು ಹೇಳಲಾಗುತ್ತದೆ. ಎಲ್ಲರೂ ಒಬ್ಬನೇ ಪತಿತ-ಪಾವನನೆಂದು ಕರೆಯುತ್ತಾರೆ ಅಂದಾಗ ಬೇರೆ ಯಾರಾದರೂ ಇರಲು ಹೇಗೆ ಸಾಧ್ಯ! ಈಗ ತಂದೆಯ ಮೂಲಕ ನೀವು ಮಕ್ಕಳು ಸತ್ಯವಾದ ಮಾತುಗಳನ್ನು ಕೇಳುತ್ತಿದ್ದೀರಿ. ತಂದೆಯು ತಿಳಿಸಿದ್ದಾರೆ- ಮಕ್ಕಳೇ, ನಾನು ನಿಮ್ಮನ್ನು ಎಷ್ಟೊಂದು ಸಾಹುಕಾರನನ್ನಾಗಿ ಮಾಡಿ ಹೋಗಿದ್ದೆನು, ಇದು 5000 ವರ್ಷಗಳ ಮಾತಾಗಿದೆ. ನೀವು ಡಬಲ್ ಕಿರೀಟಧಾರಿಗಳಾಗಿದ್ದಿರಿ, ಪವಿತ್ರತೆಯ ಕಿರೀಟವೂ ಇತ್ತು ನಂತರ ಯಾವಾಗ ರಾವಣರಾಜ್ಯವು ಬಂದಿತು ಆಗ ಪೂಜಾರಿಯಾದಿರಿ. ಈಗ ತಂದೆಯು ಓದಿಸಲು ಬಂದಿದ್ದಾರೆ ಅಂದಾಗ ಅವರ ಶ್ರೀಮತದಂತೆ ನಡೆಯಬೇಕು, ಅನ್ಯರಿಗೂ ತಿಳಿಸಿಕೊಡಬೇಕು. ನನಗೆ ಈ ಶರೀರದ ಲೋನ್ ತೆಗೆದುಕೊಳ್ಳಬೇಕಾಗಿ ಬರುತ್ತದೆಯೆಂದು ತಂದೆಯು ತಿಳಿಸುತ್ತಾರೆ. ಮಹಿಮೆಯೆಲ್ಲವೂ ಆ ಒಬ್ಬ ತಂದೆಯದೇ ಆಗಿದೆ, ನಾನಂತೂ (ಬ್ರಹ್ಮಾ) ಅವರ ರಥವಾಗಿದ್ದೇನೆ ಅಷ್ಟೆ, ಎತ್ತಿನ ಮಾತಲ್ಲ. ಬಲಿಹಾರಿಯೆಲ್ಲವೂ ಆ ಒಬ್ಬ ತಂದೆಯದೇ ಆಗಿದೆ, ತಂದೆಯು ನಿಮಗೆ ತಿಳಿಸುತ್ತಾರೆ- ನಾನು ಮಧ್ಯದಲ್ಲಿ ಕೇಳಿಸಿಕೊಳ್ಳುತ್ತೇವೆ. ನನ್ನೊಬ್ಬನಿಗೇ ಹೇಗೆ ತಿಳಿಸುತ್ತಾರೆ! ನಿಮಗೆ ತಿಳಿಸಿದಾಗ ನಾನೂ ಕೇಳಿಸಿಕೊಳ್ಳುತ್ತೇನೆ. ಇವರೂ (ಬ್ರಹ್ಮಾ) ಸಹ ಪುರುಷಾರ್ಥಿ ವಿದ್ಯಾರ್ಥಿಯಾಗಿದ್ದಾರೆ, ನೀವೂ ಸಹ ವಿದ್ಯಾರ್ಥಿಗಳಾಗಿದ್ದೀರಿ. ಇವರು ಓದುತ್ತಾರೆ, ತಂದೆಯ ನೆನಪಿನಲ್ಲಿರುತ್ತಾರೆ, ಎಷ್ಟೊಂದು ಖುಷಿಯಲ್ಲಿರುತ್ತಾರೆ. ಲಕ್ಷ್ಮೀ-ನಾರಾಯಣರನ್ನು ನೋಡಿ ಖುಷಿಪಡುತ್ತಾರೆ- ನಾನು ಈ ರೀತಿ ಆಗುವವನಾಗಿದ್ದೇನೆ. ಸ್ವರ್ಗದ ರಾಜಕುಮಾರ-ರಾಜಕುಮಾರಿಯಾಗಲು ನೀವಿಲ್ಲಿ ಬಂದಿದ್ದೀರಿ. ಇದು ರಾಜಯೋಗವಾಗಿದೆ, ಗುರಿ-ಉದ್ದೇಶವೂ ಇದೆ, ಓದಿಸುವವರು ಕುಳಿತಿದ್ದಾರೆ ಅಂದಾಗ ಅಷ್ಟೊಂದು ಖುಷಿಯೇಕೆ ಇರುವುದಿಲ್ಲ. ಆಂತರ್ಯದಲ್ಲಿ ಬಹಳ ಖುಷಿಯಿರಬೇಕಾಗಿದೆ. ತಂದೆಯಿಂದ ಕಲ್ಪ-ಕಲ್ಪವೂ ಆಸ್ತಿಯನ್ನು ಪಡೆದಿದ್ದೇವೆ, ಇಲ್ಲಿ ಜ್ಞಾನಸಾಗರನ ಬಳಿ ಬರುತ್ತೇವೆ, ನೀರಿನ ಮಾತೇನೂ ಇಲ್ಲ. ಇದಂತೂ ತಂದೆಯು ಸನ್ಮುಖದಲ್ಲಿ ತಿಳಿಸಿದ್ದಾರೆ. ನೀವೂ ಸಹ ದೇವತೆಗಳಾಗಲು ಓದುತ್ತಿದ್ದೀರಿ. ಮಕ್ಕಳಿಗೆ ಬಹಳ ಖುಷಿಯಾಗಬೇಕಾಗಿದೆ- ನಾವೀಗ ಮನೆಗೆ ಹೋಗುತ್ತೇವೆ. ಈಗ ಯಾರೆಷ್ಟು ಓದುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಹೃದಯವಿಧೀರ್ಣರಾಗಬೇಡಿ. ಬಹಳ ದೊಡ್ಡ ಲಾಟರಿಯಾಗಿದೆ. ತಿಳಿದುಕೊಳ್ಳುತ್ತಿದ್ದರೂ ಸಹ ಆಶ್ಚರ್ಯವಾಗಿ ಓಡಿಹೋಗುತ್ತಾರೆ, ವಿದ್ಯೆಯನ್ನು ಬಿಟ್ಟುಬಿಡುತ್ತಾರೆ. ಮಾಯೆಯು ಎಷ್ಟು ಪ್ರಬಲವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತನಗೆ ತಾನು ರಾಜತಿಲಕವನ್ನು ಕೊಟ್ಟುಕೊಳ್ಳಲು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಸುಪುತ್ರ ಮಗುವಾಗಿ ಪ್ರತ್ಯಕ್ಷ ಪ್ರಮಾಣವನ್ನು ಕೊಡಬೇಕು. ನಡತೆಯು ಬಹಳ ರಾಯಲ್ ಆಗಿ ಇಟ್ಟುಕೊಳ್ಳಬೇಕಾಗಿದೆ. ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕು.

2. ನಾವು ವಿದ್ಯಾರ್ಥಿಯಾಗಿದ್ದೇವೆ, ಭಗವಂತ ನಮಗೆ ಓದಿಸುತ್ತಿದ್ದಾರೆ, ಈ ಖುಷಿಯಿಂದ ವಿದ್ಯೆಯನ್ನು ಓದಬೇಕು. ಎಂದೂ ಸಹ ಪುರುಷಾರ್ಥದಲ್ಲಿ ಹೃದಯವಿಧೀರ್ಣರಾಗಬಾರದು.

ವರದಾನ:
ತಮ್ಮ ಅಧಿಕಾರದ ಶಕ್ತಿಯ ಮೂಲಕ ತ್ರಿಮೂರ್ತಿ ರಚನೆಯನ್ನು ಸಹಯೋಗಿಯನ್ನಾಗಿ ಮಾಡಿಕೊಳ್ಳುವಂತಹ ಮಾಸ್ಟರ್ ರಚೈತ ಭವ

ತ್ರಿಮೂರ್ತಿ ಶಕ್ತಿಗಳು (ಮನಸ್ಸು, ಬುದ್ಧ್ದಿ ಮತ್ತು ಸಂಸ್ಕಾರ) ತಾವು ಮಾಸ್ಟರ್ ರಚೈತನ ರಚನೆಯಾಗಿದೆ. ಇವುಗಳನ್ನು ತಮ್ಮ ಅಧಿಕಾರದ ಶಕ್ತಿಯಿಂದ ಸಹಯೋಗಿಯನ್ನಾಗಿ ಮಾಡಿಕೊಳ್ಳಿರಿ. ಹೇಗೆ ರಾಜನು ಸ್ವಯಂ ಕಾರ್ಯವನ್ನು ಮಾಡುವುದಿಲ್ಲ. ಮಾಡಿಸುತ್ತಾನೆ. ಮಾಡುವಂತಹ ರಾಜ್ಯಕಾರೋಬಾರದವರು ಬೇರೆಯಿರುತ್ತಾರೆ. ಹಾಗೆಯೇ ಆತ್ಮವೂ ಮಾಡಿಸುವವನಾಗಿದ್ದಾನೆ. ಮಾಡುವವರು ವಿಶೇಷವಾಗಿ ಈ ತ್ರಿಮೂರ್ತಿ ಶಕ್ತಿಗಳಾಗಿವೆ. ಅಂದಮೇಲೆ ತ್ರಿಮೂರ್ತಿ ಶಕ್ತಿಗಳನ್ನು ಹಾಗೂ ಸಾಕಾರ ಕಮೇರ್ಂದ್ರಿಯಗಳಿಗೆ ಮಾಸ್ಟರ್ ರಚೈತನ ವರದಾನವನ್ನು ಸ್ಮೃತಿಯಲ್ಲಿಟ್ಟುಕೊಂಡು ಸತ್ಯಮಾರ್ಗದಲ್ಲಿ ನಡೆಸಬೇಕು.

ಸ್ಲೋಗನ್:
ಅವ್ಯಕ್ತಪಾಲನೆಯ ವರದಾನದ ಅಧಿಕಾರದ ಅನುಭವ ಮಾಡುವುದಕ್ಕಾಗಿ ಸ್ಪಷ್ಟವಾದಿಯಾಗಿರಿ.

ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಪವಿತ್ರತೆ ಕೇವಲ ಬ್ರಹ್ಮಚರ್ಯವಲ್ಲ, ಅದಂತು ಫೌಂಡೇಷನ್ ಆಗಿದೆ. ಆದರೆ ಜೊತೆಯಲ್ಲಿ ಬೇರೆ ನಾಲ್ಕು ಇವೆ. ಕ್ರೋಧ ಮತ್ತು ಬೇರೆ ಎಲ್ಲಾ ಜೊತೆಗಾರರು ಯಾರಿದ್ದಾರೆ, ಆ ಮಹಾಭೂತಗಳ ತ್ಯಾಗ, ಜೊತೆ-ಜೊತೆಯಲ್ಲಿ ಅವರ ಮರಿ-ಮಕ್ಕಳು ಚಿಕ್ಕ-ಚಿಕ್ಕ ಅಂಶ ಮಾತ್ರ, ವಂಶ ಮಾತ್ರ, ಅದರದ್ದು ತ್ಯಾಗ ಮಾಡಿ. ಆಗ ಹೇಳಲಾಗುತ್ತದೆ ಪವಿತ್ರತೆಯ ಆತ್ಮಿಕ ಘನತೆಯನ್ನು ಧಾರಣೆ ಮಾಡಿದ್ದಾರೆ.