05.06.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಮಾಲೀಕನ ಮಕ್ಕಳು ರಾಜ ಕುಮಾರ ಕುಮಾರಿಯರಾಗುವವರಿದ್ದೀರಿ, ನೀವು ಯಾವುದೇ ವಸ್ತುವಿನ
ಇಚ್ಛೆಯನ್ನಿಟ್ಟುಕೊಳ್ಳಬಾರದು, ಯಾರನ್ನೂ ಏನೂ ಬೇಡಬಾರದು”
ಪ್ರಶ್ನೆ:
ಆರೋಗ್ಯವನ್ನು
ಸರಿಯಾಗಿಟ್ಟುಕೊಳ್ಳಲು ಯಾವ ಆಧಾರವನ್ನಿಟ್ಟುಕೊಳ್ಳಬಾರದು?
ಉತ್ತರ:
ವೈಭವಗಳ
ಆಧಾರದಿಂದ ಆರೋಗ್ಯ ಸರಿಯಾಗಿರುತ್ತದೆ ಎಂದು ಕೆಲವು ಮಕ್ಕಳು ತಿಳಿಯುತ್ತಾರೆ. ಆದರೆ ತಂದೆ
ತಿಳಿಸುತ್ತಾರೆ, ಮಕ್ಕಳೇ ನೀವು ಇಲ್ಲಿ ವೈಭವಗಳ ಆಧಾರವನ್ನಿಟ್ಟುಕೊಳ್ಳಬಾರದು. ವೈಭವಗಳಿಂದ
ಆರೋಗ್ಯವು ಸರಿಯಾಗಿರುವುದಿಲ್ಲ. ಆರೋಗ್ಯವನ್ನು ಸರಿಯಾಗಿಡಲು ನೆನಪಿನ ಯಾತ್ರೆಯಲ್ಲಿರಬೇಕು.
ಖುಷಿಯಂತಹ ಔಷಧಿಯಿಲ್ಲವೆಂದು ಹೇಳುತ್ತಾರೆ, ನೀವು ಖುಷಿಯಾಗಿರಿ, ನಶೆಯಲ್ಲಿರಿ, ಯಜ್ಞದಲ್ಲಿ ದಧೀಚಿ
ಋಷಿಯ ಸಮಾನ ಮೂಳೆ ಮೂಳೆಯನ್ನು ಸವೆಸಿ ಆಗ ಆರೋಗ್ಯವು ಸರಿಯಾಗಿಬಿಡುತ್ತದೆ.
ಓಂ ಶಾಂತಿ.
ತಂದೆಗೆ ಮಾಡಿ ಮಾಡಿಸುವವರು ಎಂದು ಹೇಳಲಾಗುತ್ತದೆ. ನೀವು ಮಾಲೀಕನ ಮಕ್ಕಳಾಗಿದ್ದೀರಿ. ಈ
ಸೃಷ್ಟಿಯಲ್ಲಿ ನಿಮ್ಮದು ಶ್ರೇಷ್ಠಾತಿ ಶ್ರೇಷ್ಠ ಸ್ಥಾನವಿದೆ. ನೀವು ಮಕ್ಕಳಿಗೆ ನಶೆಯಿರಬೇಕು ನಾವು
ಮಾಲೀಕನ ಮಕ್ಕಳು, ಅವರ ಮತದಂತೆ ಈಗ ಪುನಃ ನಮ್ಮ ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ.
ಅದೂ ಸಹ ಯಾರ ಬುದ್ಧಿಯಲ್ಲಿ ನೆನಪಿರುವುದಿಲ್ಲ. ಪ್ರತಿಯೊಂದು ಸೇವಾಕೇಂದ್ರದ ಮಕ್ಕಳಿಗಾಗಿ
ಹೇಳುತ್ತಾರೆ - ಅನೇಕ ಸೇವಾಕೇಂದ್ರಗಳಿವೆ, ಅನೇಕ ಮಕ್ಕಳು ಬರುತ್ತಾರೆ. ಪ್ರತಿಯೊಬ್ಬರ ಬುದ್ಧಿಯಲ್ಲಿ
ಸದಾ ನೆನಪಿರಲಿ - ನಾವು ತಂದೆಯ ಶ್ರೀಮತದಂತೆ ಪುನಃ ವಿಶ್ವದಲ್ಲಿ ಶಾಂತಿ ಸುಖದ ರಾಜ್ಯವನ್ನು
ಸ್ಥಾಪನೆ ಮಾಡುತ್ತಿದ್ದೇವೆ. ಸುಖ ಮತ್ತು ಶಾಂತಿ – ಇವೆರಡು ಶಬ್ದಗಳನ್ನೇ ನೆನಪು ಮಾಡಬೇಕಾಗಿದೆ.
ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವು ಸಿಗುತ್ತದೆ ಅಂದಮೇಲೆ ನಿಮ್ಮ ಬುದ್ಧಿಯಲ್ಲಿ ಎಷ್ಟೊಂದು
ವಿಶಾಲವಾಗಿರಬೇಕು. ಇದರಲ್ಲಿ ಮಂದ ಬುದ್ಧಿಯು ಕೆಲಸ ಮಾಡುವುದಿಲ್ಲ. ತಮ್ಮನ್ನು ಪ್ರಭುವಿನ
ಸಂತಾನರೆಂದು ತಿಳಿದಾಗ ಪಾಪವು ಸಮಾಪ್ತಿಯಾಗುತ್ತದೆ. ಅನೇಕರಿಗೆ ಇಡೀ ದಿನದಲ್ಲಿ ತಂದೆಯ ನೆನಪೇ
ಇರುವುದಿಲ್ಲ. ತಂದೆಯು ಕೇಳುತ್ತಾರೆ - ನಿಮ್ಮ ಬುದ್ಧಿಯು ಏಕೆ ಮಂದವಾಗುತ್ತದೆ? ಸೇವಾಕೇಂದ್ರಗಳಲ್ಲಿ
ಇಂತಿಂತಹ ಮಕ್ಕಳು ಬರುತ್ತಾರೆ, ನಾವು ಶ್ರೀಮತದನುಸಾರ ವಿಶ್ವದಲ್ಲಿ ದೈವೀ ರಾಜ್ಯವನ್ನು ಸ್ಥಾಪನೆ
ಮಾಡುತ್ತಿದ್ದೇವೆಂದು ಅವರ ಬುದ್ಧಿಯಲ್ಲಿರುವುದೇ ಇಲ್ಲ. ಆಂತರ್ಯದಲ್ಲಿ ಈ ಖುಷಿ ನಶೆಯಿರಬೇಕು.
ಮುರಳಿಯನ್ನು ಕೇಳಿ ರೋಮಾಂಚನವಾಗಬೇಕು. ಇಲ್ಲಿಯಂತೂ ತಂದೆ ನೋಡುತ್ತಾರೆ ಮಕ್ಕಳಲ್ಲಿ ಇನ್ನೂ ಇನ್ನೂ
ರೋಮಾಂಚನ ಇರುವುದೇ ಇಲ್ಲ, ಅನೇಕರಿಗೆ ಬುದ್ಧಿಯಲ್ಲಿ ನಾವು ಶ್ರೀಮತದಂತೆ ತಂದೆಯ ನೆನಪಿನಿಂದ
ವಿಕರ್ಮ ವಿನಾಶ ಮಾಡಿಕೊಂಡು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೆನಪಿರುವುದೇ
ಇಲ್ಲ. ಪ್ರತಿನಿತ್ಯವೂ ತಂದೆ ತಿಳಿಸುತ್ತಾರೆ - ಮಕ್ಕಳೇ, ನೀವು ಯೋಧರಾಗಿದ್ದೀರಿ, ರಾವಣನ ಮೇಲೆ
ಜಯಗಳಿಸುವವರಿದ್ದೀರಿ. ತಂದೆಯು ನಿಮ್ಮನ್ನು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ ಆದರೆ
ಮಕ್ಕಳಿಗೆ ಇಷ್ಟೊಂದು ನಶೆ ಹಾಗೂ ಖುಷಿ ಇರುವುದೇ ಇಲ್ಲ, ಯಾವುದೇ ವಸ್ತು ಸಿಗಲಿಲ್ಲವೆಂದರೆ
ಮುನಿಸಿಕೊಳ್ಳುತ್ತಾರೆ. ಮಕ್ಕಳ ಸ್ಥಿತಿಯನ್ನು ನೋಡಿ ತಂದೆಗೆ ಆಶ್ಚರ್ಯವೆನಿಸುತ್ತದೆ. ಮಾಯೆಯ
ಜಂಜಾಟದಲ್ಲಿ ಸಿಕ್ಕಿಕೊಳ್ಳುತ್ತಾರೆ. ನಿಮ್ಮ ಗೌರವ, ನಿಮ್ಮ ಕಾರ್ಯವ್ಯವಹಾರ, ನಿಮ್ಮ ಖುಷಿ
ಅದ್ಭುತವಾಗಿರಬೇಕು. ಯಾರು ಮಿತ್ರ ಸಂಬಂಧಿಗಳನ್ನು ಮರೆಯುವುದಿಲ್ಲವೋ ಅವರೆಂದೂ ತಂದೆಯನ್ನು ನೆನಪು
ಮಾಡಲು ಸಾಧ್ಯವಿಲ್ಲ. ಅವರೇನು ಪದವಿ ಪಡೆಯುತ್ತಾರೆ! ಆಶ್ಚರ್ಯವೆನಿಸುತ್ತದೆ.
ತಾವು ಮಕ್ಕಳಲ್ಲಂತೂ ಬಹಳ ನಶೆಯಿರಬೇಕು. ತಮ್ಮನ್ನು ಮಾಲೀಕನ ಸಂತಾನರೆಂದು ತಿಳಿದರೆ ಏನನ್ನೂ ಬೇಡುವ
ಇಚ್ಛೆ ಇರುವುದಿಲ್ಲ. ತಂದೆ ನಮಗೆ ಅಪಾರ ಖಜಾನೆ ಕೊಡುತ್ತಾರೆ, ಅದರಿಂದ 21 ಜನ್ಮಗಳವರೆಗೆ ಏನನ್ನೂ
ಬೇಡಬೇಕಾಗಿಲ್ಲ. ಇಷ್ಟೊಂದು ನಶೆಯಿರಬೇಕು. ಆದರೆ ಸಂಪೂರ್ಣ ಮಂದ ಬುದ್ಧಿಯವರಾಗಿದ್ದಾರೆ. ನೀವು
ಮಕ್ಕಳ ಬುದ್ಧಿಯಂತೂ 7 ಅಡಿ ಎತ್ತರವಿರಬೇಕು. ಮನುಷ್ಯರ ಎತ್ತರ ಹೆಚ್ಚೆಂದರೆ 6-7 ಅಡಿಯಿರುತ್ತದೆ.
ತಂದೆ ಮಕ್ಕಳನ್ನು ಎಷ್ಟು ಉಲ್ಹಾಸದಲ್ಲಿ ತರುತ್ತಾರೆ. ಮಕ್ಕಳೇ, ನೀವು ಪ್ರಭುವಿನ ಸಂತಾನರಾಗಿದ್ದೀರಿ,
ಪ್ರಪಂಚದವರು ಏನನ್ನೂ ತಿಳಿದುಕೊಂಡಿಲ್ಲ, ಅವರಿಗೆ ನೀವು ತಿಳಿಸುತ್ತೀರಿ. ನೀವು ಕೇವಲ ಇಷ್ಟನ್ನು
ತಿಳಿದುಕೊಳ್ಳಿ, ನಾವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ತಂದೆಯನ್ನು ನೆನಪು ಮಾಡುತ್ತಿದ್ದರೆ
ವಿಕರ್ಮ ವಿನಾಶವಗುತ್ತದೆ. ಮಕ್ಕಳೇ ಮಾಯೆಯು ನಿಮ್ಮ ಬಹಳ ಕಠಿಣ ಶತ್ರುವಾಗಿದೆ. ನಿಮಗೆ
ಶತ್ರುವಾದಷ್ಟು ಅನ್ಯರಿಗೆ ಆಗಿಲ್ಲ. ಮನುಷ್ಯರಂತೂ ಅರಿತುಕೊಂಡಿಲ್ಲ. ತುಚ್ಛ ಬುದ್ಧಿಯವರಾಗಿದ್ದಾರೆ.
ತಂದೆ ಪ್ರತಿನಿತ್ಯವೂ ಮಕ್ಕಳಿಗೆ ತಿಳಿಸುತ್ತಾರೆ - ತಾವು ಮಾಲೀಕನ ಸಂತಾನರಾಗಿದ್ದಿರಿ, ತಂದೆಯನ್ನು
ನೆನಪು ಮಾಡಿರಿ ಹಾಗೂ ಅನ್ಯರನ್ನು ನಿಮ್ಮ ಸಮಾನ ಮಾಡಿಕೊಳ್ಳಿ. ನೀವು ಎಲ್ಲರಿಗೂ ಇದನ್ನು ತಿಳಿಸಿ -
ಭಗವಂತನು ಸತ್ಯ ಸಾಹೇಬರಾಗಿದ್ದಾರೆ. ಅಂದ ಮೇಲೆ ಅವರ ಮಕ್ಕಳಾದ ನಾವು ಸಾಹೇಬನ ಸಂತಾನರಾದೆವು.
ಇದನ್ನು ನೀವು ಮಕ್ಕಳು ನಡೆದಾಡುತ್ತಾ ತಿರುಗಾಡುತ್ತಾ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು.
ಸೇವೆಯಲ್ಲಿ ದಧೀಚಿ ಋಷಿಯ ಸಮಾನ ಮೂಳೆ ಮೂಳೆಯನ್ನು ಸವೆಸಬೇಕು. ಇಲ್ಲಿ ಮೂಳೆಗಳನ್ನು ಸವೆಸುವುದೇನು,
ಇನ್ನೂ ಅಪಾರ ಸುಖ-ವೈಭವ ಬೇಕು. ಈ ವಸ್ತು ವೈಭವಗಳಿಂದ ಆರೋಗ್ಯ ಸರಿಹೋಗುವುದಿಲ್ಲ. ಆರೋಗ್ಯಕ್ಕಾಗಿ
ನೆನಪಿನ ಯಾತ್ರೆ ಬೇಕು. ಆ ಖುಷಿಯೂ ಇರಬೇಕು, ಅರೆ! ನಾವಂತೂ ಕಲ್ಪ-ಕಲ್ಪವೂ ಮಾಯೆಯಿಂದ ಸೋಲುತ್ತಾ
ಬಂದೆವು, ಈಗ ಜಯಗಳಿಸುತ್ತೇವೆ. ತಂದೆ ಬಂದು ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಈಗ ಭಾರತದಲ್ಲಿ
ಎಷ್ಟೊಂದು ದುಃಖವಿದೆ, ಹೆಚ್ಚಿನ ದುಃಖ ಕೊಡುವವನು ರಾವಣನಾಗಿದ್ದಾನೆ. ವಿಮಾನವಿದೆ, ಮಹಲುಗಳಿವೆ,
ವಾಹನವಿದೆ ನಮಗೆ ಇದೇ ಸ್ವರ್ಗವೆಂದು ಮನುಷ್ಯರು ತಿಳಿಯುತ್ತಾರೆ. ಆದರೆ ಈಗ ಈ ಪ್ರಪಂಚವೇ ಸಮಾಪ್ತಿ
ಆಗುತ್ತದೆ ಎಂದು ಅವರಿಗೆ ತಿಳಿದಿಲ್ಲ. ಲಕ್ಷಾಂತರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ,
ಆಣೆಕಟ್ಟು ಮೊದಲಾದುದನ್ನು ಕಟ್ಟಿಸುತ್ತಾರೆ. ಎಷ್ಟೊಂದು ಯುದ್ಧದ ಸಾಮಾನುಗಳನ್ನು ಖರೀದಿಸುತ್ತಾರೆ,
ಇವು ಪರಸ್ಪರ ಸಮಾಪ್ತಿ ಮಾಡುವಂತಹದಾಗಿದೆ. ಧಣಿಯಿಲ್ಲದವರಾಗಿದ್ದಾರೆ! ಎಷ್ಟು ಜಗಳ ಕಲಹ ಮಾಡುತ್ತಾರೆ,
ಮಾತೇ ಕೇಳಬೇಡಿ! ಎಷ್ಟು ಕೊಳಕಾಗಿದೆ, ಇದಕ್ಕೆ ನರಕವೆಂದು ಹೇಳುತ್ತಾರೆ. ಸ್ವರ್ಗದ ಮಹಿಮೆ ಎಷ್ಟಿದೆ.
ಬಡೋದಾ ಮಹಾರಾಣಿಯನ್ನು ಕೇಳಿ- ಮಹಾರಾಜ ಎಲ್ಲಿಗೆ ಹೋದರು? ಸ್ವರ್ಗವಾಸಿ ಆದರು ಎಂದು ಹೇಳುತ್ತಾರೆ.
ಯಾವುದಕ್ಕೆ ಸ್ವರ್ಗ ಎಂದು ಹೇಳುತ್ತಾರೆ ಎನ್ನುವುದು ಗೊತ್ತಿಲ್ಲ. ಎಷ್ಟು ಘೋರ ಅಂಧಕಾರವಿದೆ, ನೀವೂ
ಸಹ ಘೋರ ಅಂಧಕಾರದಲ್ಲಿದ್ದಿರಿ. ಈಗ ನಿಮಗೆ ಈಶ್ವರೀಯ ಬುದ್ಧಿಯನ್ನು ಕೊಡುತ್ತೇನೆ. ತಮ್ಮನ್ನು
ಈಶ್ವರೀಯ ಸಂತಾನಮಾಲಿಕನ ಮಕ್ಕಳೆಂದು ತಿಳಿಯಿರಿ, ಸಾಹೇಬ ತಂದೆಯು ರಾಜಕುಮಾರ ರಾಜಕುಮಾರಿ ಮಾಡಲು
ಓದಿಸುತ್ತಿದ್ದಾರೆ. ತಂದೆಯು ಗಾದೆ ಮಾತನ್ನು ತಿಳಿಸುತ್ತಾರೆ- ಕುರಿಗಳಿಗೇನು ತಿಳಿಯುತ್ತದೆ.. . .
ಈಗ ನೀವು ತಿಳಿಯುತ್ತೀರಿ. ಮನುಷ್ಯರೆಲ್ಲರೂ ಕುರಿ ಮೇಕೆಗಳ ತರಹ ಇದ್ದಾರೆ. ಏನನ್ನೂ
ತಿಳಿದುಕೊಂಡಿಲ್ಲ. ಕುಳಿತು ಏನೋ ಉಪಮೆ ಮಾಡುತ್ತಾರೆ. ನಿಮ್ಮ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ
ರಹಸ್ಯವಿದೆ. ನಾವು ವಿಶ್ವದಲ್ಲಿ ಸುಖ ಶಾಂತಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ಬಹಳ ಚೆನ್ನಾಗಿ
ನೆನಪು ಮಾಡಿ. ಇದರಲ್ಲಿ ಯಾರು ಸಹಯೋಗಿಗಳಾಗುವರೋ ಅವರೇ ಶ್ರೇಷ್ಠ ಪದವಿ ಪಡೆಯುತ್ತಾರೆ. ಯಾರ್ಯಾರು
ಸಹಯೋಗಿಗಳಾಗುತ್ತಾರೆ ಎನ್ನುವುದನ್ನು ನೀವು ನೋಡುತ್ತೀರಿ. ಪ್ರತಿಯೊಬ್ಬರು ನಿಮ್ಮನ್ನು ನೀವು
ಕೇಳಿಕೊಳ್ಳಿ - ನಾನೇನು ಮಾಡುತ್ತಿದ್ದೇನೆ? ನಾನು ಕುರಿ ಮೇಕೆ ಅಂತೂ ಅಲ್ಲ ತಾನೆ? ನೋಡಿ
ಮನುಷ್ಯರಲ್ಲಿ ಎಷ್ಟು ಅಹಂಕಾರ ಇರುತ್ತದೆ. ಗುರ್ ಗುರ್ ಎನ್ನುತ್ತಾರೆ. ನಿಮಗೆ ತಂದೆಯ ನೆನಪು
ಇರಬೇಕು. ಸೇವೆಯಲ್ಲಿ ಮೂಳೆಗಳನ್ನು ಸವೆಸಬೇಕು. ಯಾರನ್ನೂ ಬೇಸರಪಡಿಸಬಾರದು, ನೀವೂ ಆಗಬಾರದು. ಮತ್ತು
ಅಹಂಕಾರವೂ ಬರಬಾರದು. ನಾವಿದನ್ನು ಮಾಡುತ್ತೇವೆ, ನಾವು ಬುದ್ಧಿವಂತರಾಗಿದ್ದೇವೆ, ಈ ಸಂಕಲ್ಪ
ಬರುವುದೂ ದೇಹಾಭಿಮಾನವಾಗಿದೆ. ಅವರ ಚಲನೆಯೇ ಈ ರೀತಿ ಆಗಿಬಿಡುತ್ತದೆ, ನಾಚಿಕೆಯಾಗುತ್ತದೆ
ಇಲ್ಲವಾದರೆ ನಿಮ್ಮಂತಹ ಸುಖ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಬುದ್ಧಿಯಲ್ಲಿ ನೆನಪಿದ್ದರೆ ನೀವು
ಬಹಳ ಹೊಳೆಯುತ್ತಿರುತ್ತೀರಿ. ಸೇವಾಕೇಂದ್ರಗಳಲ್ಲಿ ಕೆಲವರು ಒಳ್ಳೆಯ ಮಹಾರಥಿಗಳು,ಕೆಲವರು ಕುದುರೆ
ಸವಾರರು ಹಾಗೂ ಕಾಲಾಳುಗಳೂ ಇದ್ದಾರೆ. ಇದರಲ್ಲಿ ಬಹಳ ವಿಶಾಲ ಬುದ್ಧಿ ಬೇಕು. ಎಂಥೆಂಥಹ
ಬ್ರಾಹ್ಮಣಿಯರಿದ್ದಾರೆ ಕೆಲವು ಬ್ರಾಹ್ಮಣಿಯರು ಬಹಳ ಸಹಯೋಗಿಗಳಾಗಿದ್ದಾರೆ, ಸೇವೆಯಲ್ಲಿ ಎಷ್ಟು
ಖುಷಿಯಿರುತ್ತದೆ. ನಿಮಗೆ ನಶೆಯಿರಬೇಕು - ಸೇವೆ ಮಾಡದಿದ್ದರೆ ಯಾವ ಪದವಿ ಪಡೆಯುತ್ತೀರಿ! ತಂದೆ
ತಾಯಿಗೆ ಮಕ್ಕಳ ಪ್ರತಿ ಗೌರವವಿರುತ್ತದೆ ಆದರೆ ಅವರು (ಮಕ್ಕಳು) ತಮಗೆ ತಾವೇ
ಗೌರವವನ್ನಿಟ್ಟುಕೊಳ್ಳುವುದಿಲ್ಲವಾದರೆ ಅದಕ್ಕೆ ತಂದೆ ಏನು ಹೇಳುತ್ತಾರೆ!
ನೀವು ಮಕ್ಕಳು ಬಹಳ ಸರಳವಾಗಿ ತಂದೆಯ ಸಂದೇಶ ಎಲ್ಲರಿಗೂ ಕೊಡಬೇಕು. ತಿಳಿಸಿ- ತಂದೆ ಹೇಳುತ್ತಾರೆ -
ಮನ್ಮನಾಭವ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಕೆಲವು ಶಬ್ದಗಳು ಸತ್ಯವಾಗಿವೆ. ಈ ಪ್ರಪಂಚವು
ಎಷ್ಟು ದೊಡ್ಡದಾಗಿದೆ. ಅನೇಕ ಮನುಷ್ಯರಿದ್ದಾರೆ ಆದರೆ ಕೊನೆಗೆ ಇವರ್ಯಾರೂ ಇರುವುದಿಲ್ಲ. ಯಾವುದೇ
ಖಂಡದ ಹೆಸರು ಗುರುತು ಇರುವುದಿಲ್ಲ. ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಹಗಲು-ರಾತ್ರಿ ಈ
ಖುಷಿಯಿರಬೇಕು. ಜ್ಞಾನವಂತೂ ಬಹಳ ಸಹಜವಾಗಿದೆ, ಇದನ್ನು ತಿಳಿಸಿಕೊಡುವವರೂ ಸಶ ಬಹಳ ರಮಣೀಕರಾಗಿರಬೇಕು.
ಅನೇಕ ಪ್ರಕಾರದ ಯುಕ್ತಿಗಳಿವೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಬಹಳ
ಕುಶಲತೆಯುಳ್ಳವರನ್ನಾಗಿ ಮಾಡುತ್ತೇನೆ. ಅಂದಾಗ ಮಕ್ಕಳ ಬುದ್ಧಿಯಲ್ಲಿ ನೆನಪಿರಬೇಕು - ಓಹೋ!
ಬೇಹದ್ದಿನ ತಂದೆಯು ನಮಗೆ ಸಲಹೆ ನೀಡುತ್ತಾರೆ. ನೀವು ಧಾರಣೆ ಮಾಡಿ ಅನ್ಯರಿಗೂ ತಂದೆಯ ಪರಿಚಯ
ಕೊಡತ್ತೀರಿ. ನಿಮ್ಮ ಹೊರತು ಇಡೀ ಪ್ರಪಂಚದವರೆಲ್ಲರೂ ನಾಸ್ತಿಕರಾಗಿದ್ದಾರೆ. ನಿಮ್ಮಲ್ಲಿಯೂ
ನಂಬರ್ವಾರ್ ಇದ್ದಾರೆ. ಕೆಲವರು ನಾಸ್ತಿಕರೂ ಇದ್ದಾರಲ್ಲವೆ. ತಂದೆಯನ್ನು ನೆನಪೇ ಮಾಡುವುದಿಲ್ಲ.
ಬಾಬಾ, ನಮಗೆ ನೆನಪು ಮರೆತುಹೋಗುತ್ತದೆ ಎಂದು ತಾವೇ ಹೇಳುತ್ತಾರೆ ಅಂದ ಮೇಲೆ ನಾಸ್ತಿಕರಾದರಲ್ಲವೆ!
ಇಂತಹ ತಂದೆ ಯಾರು ಮಾಲೀಕರಮಕ್ಕಳನ್ನಾಗಿ ಮಾಡುತ್ತಾರೆ, ಅವರ ನೆನಪೇ ಬರುವುದಿಲ್ಲವೆ! ಇದನ್ನು
ತಿಳಿದುಕೊಳ್ಳುವವರಲ್ಲಿಯೂ ಬಹಳ ವಿಶಾಲ ಬುದ್ಧಿಯು ಬೇಕು. ತಂದೆ ತಿಳಿಸುತ್ತಾರೆ - ನಾನು ಪ್ರತಿ
5ಂಂಂ ವರ್ಷಗಳ ನಂತರ ಬರುತ್ತೇನೆ. ನಿಮ್ಮ ಮೂಲಕವೇ ಕಾರ್ಯ ಮಾಡಿಸುತ್ತೇನೆ. ನೀವು ಎಷ್ಟು ಒಳ್ಳೆಯ
ಹೋವಾಗಿದ್ದೀರಿ. ವಂದೇ ಮಾತರಂ ಎಂದು ನಿಮ್ಮ ಗಾಯನವಿದೆ. ನೀವೇ ಪೂಜ್ಯರಾಗಿದ್ದಿರಿ, ಈಗ
ಪೂಜಾರಿಗಳಾಗಿರುವಿರಿ. ಈಗ ಶ್ರಿಮತದನುಸಾರ ಪುನಃ ಪೂಜ್ಯರಾಗುತ್ತೀರಿ. ಅಂದ ಮೇಲೆ ನೀವು ಮಕ್ಕಳು
ಬಹಳ ಶಾಂತಿಯಿದ ಸೇವೆ ಮಾಡಬೇಕು. ನೀವು ಅಶಾಂತರಾಗಬಾರದು. ಯಾರಪ್ರತೀ ನರ ನಾಡಿಗಳಲ್ಲಿ ಭೂತ
ತುಂಬಿದೆಯೋ ಅವರೇನು ಪದವಿ ಪಡೆಯುತ್ತಾರೆ? ಲೋಭವು ಬಹಳ ದೊಡ್ಡ ಭೂತವಾಗಿದೆ. ಪ್ರತಿಯೊಬ್ಬರ ನಡವಳಿಕೆ
ಹೇಗಿದೆ ಎಂದು ತಂದೆಯು ನೋಡುತ್ತಿರುತ್ತಾರೆ. ತಂದೆಯು ಎಷ್ಟು ನಶೆ ಏರಿಸುತ್ತಾರೆ ಆದರೆ ಕೆಲವರು
ಏನೂಸೇವೆ ಮಾಡುವುದಿಲ್ಲ, ಕೇವಲ ತಿನ್ನುತ್ತಾ ಕುಡಿಯುತ್ತಾ ಇದ್ದರೆ ನಂತರ ಅವರು 21 ಜನ್ಮಗಳ ಕಾಲ
ಸೇವೆ ಮಾಡಬೇಕಾಗುತ್ತದೆ, ದಾಸ ದಾಸಿಯರಂತೂ ಆಗುತ್ತಾರಲ್ಲವೆ. ಅಂತ್ಯದಲ್ಲಿ ಎಲ್ಲರಿಗೂ
ಸಾಕ್ಷಾತ್ಕಾರ ಆಗುವುದು. ಸೇವಾಧಾರಿ ಮಕ್ಕಳು ತಂದೆಯ ಹೃದಯದವನ್ನೇರುತ್ತಾರೆ. ಅನ್ಯ ಆತ್ಮಗಳನ್ನು
ಅಮರಲೋಕವಾಸಿಗಳನ್ನಾಗಿ ಮಾಡುವುದೇ ನಿಮ್ಮ ಸೇವೆಯಾಗಿದೆ. ಧಾರಣೆ ಮಾಡಿ ಎಂದು ತಂದೆಯು ಎಷ್ಟು ಧೈರ್ಯ
ಕೊಡುತ್ತಾರೆ. ದೇಹಾಭಿಮಾನಿಗಳಿಗೆ ಧಾರಣೆ ಆಗಲು ಸಾಧ್ಯವಿಲ್ಲ. ಮಕ್ಕಳಿಗೂ ಗೊತ್ತಿದೆ, ತಂದೆಯನ್ನು
ನೆನಪು ಮಾಡಿ ನಾವು ವೇಶ್ಯಾಲಯದಿಂದ ಶಿವಾಲಯಕ್ಕೆ ಹೋಗುತ್ತೇವೆ ಅಂದ ಮೇಲೆ ಈ ರೀತಿ ಆಗಿ ತೋರಿಸಬೇಕು.
ತಂದೆ ಪತ್ರಗಳಲ್ಲಿ ಬರೆಯುತ್ತಾರೆ - ಮುದ್ದಾದ ಆತ್ಮೀಯ ಮಾಲೀಕನ ಮಕ್ಕಳೇ, ಈಗ ಶ್ರೀಮತದಂತೆ ನಡೆಯಿರಿ.
ಶ್ರೀಮತದಂತೆ ನಡೆದು ಮಹಾರಥಿಗಳಾದರೆ ಅವಶ್ಯವಾಗಿ ರಾಜ ಕುಮಾರ ಕುಮಾರಿಯಾಗುತ್ತೀರಿ. ನಿಮ್ಮ ಗುರಿ
ಉದ್ದೇಶವೂ ಇದೇ ಆಗಿದೆ. ಒಬ್ಬ ಸತ್ಯ ತಂದೆಯು ನಿಮಗೆ ಎಲ್ಲ ಮಾತುಗಳನ್ನು ಬಹಳ ಚೆನ್ನಾಗಿ
ತಿಳಿಸುತ್ತಾರೆ. ಸೇವೆ ಮಾಡಿ ಅನ್ಯರ ಕಲ್ಯಾಣವನ್ನೂ ಮಾಡಿರಿ. ಯೋಗ ಬಲವಿಲ್ಲದಿದ್ದರೆ ಅದು ಬೇಕು ಇದು
ಬೇಕು ಎಂಬ ಇಚ್ಛೆಗಳು ಉತ್ಪನ್ನವಾಗುತ್ತವೆ ಆ ಖುಷಿ ಇರುವುದಿಲ್ಲ. ಖುಷಿಯಂತಹ ಔಷಧಿಯಿಲ್ಲವೆಂದು
ಹೇಳುತ್ತಾರೆ. ಮಾಲೀಕನ ಸಂತಾನರಿಗೆ ಬಹಳ ಖುಷಿಯಿರಬೇಕು, ಅದು ಇಲ್ಲದಿದ್ದರೆ ಅನೇಕ ಪ್ರಕಾರದ
ಮಾತುಗಳು ಬರುತ್ತವೆ. ಅರೆ! ತಂದೆಯು ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದ ಮೇಲೆ ಮತ್ತೇನು
ಬೇಕು! ಪ್ರತಿಯೊಬ್ಬರೂ ತಮ್ಮ ಹೃದಯವನ್ನು ಕೇಳಿಕೊಳ್ಳಿ - ಇಷ್ಟೊಂದು ಮಧುರ ತಂದೆಗೆ ಯಾವ ಸೇವೆ
ಮಾಡುತ್ತೇವೆ? ತಂದೆ ತಿಳಿಸುತ್ತಾರೆ ಮಕ್ಕಳೇ ಎಲ್ಲರಿಗೂ ಸಂದೇಶ ಕೊಡುತ್ತಾ ಹೋಗಿ - ಪರಮಾತ್ಮ
ಬಂದಿದ್ದಾರೆ, ವಾಸ್ತವದಲ್ಲಿ ನೀವೆಲ್ಲರೂ ಸಹೋದರರಾಗಿದ್ದೀರಿ, ಭಲೇ ಹೇಳುತ್ತಾರೆ - ನಾವೆಲ್ಲರೂ
ಸಹೋದರ ಸಹೋದರರಿಗೆ ಸಹಯೋಗ ಕೊಡಬೇಕು. ಈ ವಿಚಾರದಿಂದ ಸಹೋದರರು ಎಂದು ಹೇಳುತ್ತಾರೆ. ಇಲ್ಲಿ ನೀವು
ಒಬ್ಬ ತಂದೆಯ ಮಕ್ಕಳು ಸಹೋದರ ಸಹೋದರಾಗಿದ್ದೀರಿ. ತಂದೆಯು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ,
ಮಕ್ಕಳ ಮೂಲಕ ಸ್ವರ್ಗವನ್ನಾಗಿ ಮಾಡುತ್ತಾರೆ ಸೇವೆಯ ಅನೇಕ ಯುಕ್ತಿಗಳನ್ನು ತಿಳಿಸುತ್ತಾರೆ ಮಿತ್ರ
ಸಂಬಂಧಿಗಳಿಗೂ ಸಹ ತಿಳಿಸಬೇಕಾಗಿದೆ. ನೋಡಿ, ಮಕ್ಕಳು ವಿದೇಶದಲ್ಲಿಯೂ ಕೂಡ ಸೇವೆ ಮಾಡುತ್ತಿದ್ದಾರೆ,
ದಿನ-ಪ್ರತಿದಿನ ಆಪತ್ತುಗಳನ್ನು ನೋಡಿ ಮನುಷ್ಯರು ತಿಳಿಯುತ್ತಾರೆ- ಸಾಯುವುದಕ್ಕೆ ಮೊದಲು
ಆಸ್ತಿಯನ್ನಾದರೂ ಪಡೆಯೋಣ. ಮಕ್ಕಳು ತಮ್ಮ ಮಿತ್ರ ಸಂಬಂಧಿಗಳನ್ನೂ ಸಹ ಮೇಲೆತ್ತುತ್ತಿದ್ದಾರೆ.
ಪವಿತ್ರರಾಗಿಯೂ ಇರುತ್ತಾರೆ ಬಾಕಿ ನಿರಂತರ ಸಹೋದರತ್ವದ ಸ್ಥಿತಿಯಿರುವುದರಲ್ಲಿ ಪರಿಶ್ರಮವಿದೆ
ತಂದೆಯಂತೂ ಮಕ್ಕಳಿಗೆ ಮಾಲೀಕನ ಸಂತಾನರೆನ್ನುವ ಎಷ್ಟು ಒಳ್ಳೆಯ ಬಿರುದನ್ನು ಕೊಟ್ಟಿದ್ದಾರೆ.
ತಮ್ಮನ್ನು ನೋಡಿಕೊಳ್ಳಬೇಕು- ಸೇವೆ ಮಾಡಲಿಲ್ಲವೆಂದರೆ ನಾವು ಏನಾಗುತ್ತೇವೆ? ಒಂದು ವೇಳೆ ಜಮಾ
ಮಾಡಿಕೊಂಡುದ್ದು ತಿನ್ನುತಾ ತಿನ್ನುತಾ ಸಮಾಪ್ತಿ ಮಾಡಿದರೆ ಇನ್ನೂ ಅವರ ಲೆಕ್ಕದ ಖಾತೆ ಏರುತ್ತ
ಹೋಗುತ್ತದೆ. ಸೇವೆ ಮಾಡುವವರಿಗೆ ನಾವು ಇಷ್ಟು ಕೊಟ್ಟೆವು ಎನ್ನುವ ಸಂಕಲ್ಪ ಎಂದೂ ಬರಬಾರದು ಏಕೆಂದರೆ
ಅದರಿಂದ ಎಲ್ಲರ ಪಾಲನೆಯಾಗುತ್ತದೆ ಆದ್ದರಿಂದ ಸಹಯೋಗ ನೀಡುವವರ ಆತಿಥ್ಯವನ್ನೂ ಮಾಡಲಾಗುತ್ತದೆ. ಅವರು
ತಿನ್ನಿಸುವವರಾಗಿದ್ದಾರೆಂದು ತಿಳಿಸಬೇಕು. ಆತ್ಮಿಕ ಮಕ್ಕಳು ನಿಮಗೆ ತಿನಿಸುತ್ತಾರೆ. ನೀವು ಅವರ
ಸೇವೆ ಮಾಡಿದರೆ ಅದು ದೊಡ್ಡ ಪುಣ್ಯವಾಗುತ್ತದೆ. ಮನಸಾ-ವಾಚಾ-ಕರ್ಮಣಾ ಅವರ ಸೇವೆಯನ್ನೇ
ಮಾಡುವುದಿಲ್ಲವೆಂದರೆ ಆ ಖುಷಿಯು ಹೇಗೆ ಇರಲು ಸಾಧ್ಯ! ಶಿವ ತಂದೆಯನ್ನು ನೆನಪು ಮಾಡಿ ಭೋಜನ
ತಯಾರಿಸಿದರೆ ಅದರ ಶಕ್ತಿಯು ಸಿಗುತ್ತದೆ. ಹೃದಯವನ್ನು ಕೇಳಿಕೊಳ್ಳಬೇಕು - ನಾವು ಎಲ್ಲರನ್ನೂ ಖುಷಿ
ಪಡಿಸುತ್ತಿದ್ದೇವೆಯೇ? ಮಹಾರಥಿ ಮಕ್ಕಳು ಎಷ್ಟೊಂದು ಸೇವೆ ಮಾಡುತ್ತಾರೆ. ತಂದೆಯು ರೆಗ್ಜಿನ್ ಮೇಲೆ
ಚಿತ್ರ ಮಾಡಿಸುತ್ತಿದ್ದಾರೆ. ಈ ಚಿತ್ರಗಳು ಎಂದೂ ಹರಿಯುವುದಿಲ್ಲ. ಇದಕ್ಕಾಗಿ ಮಕ್ಕಳು ತಾವೇ
ಸೇವೆಗಾಗಿ ಹಣ ಕಳುಹಿಸುತ್ತಾರೆ ಇಲ್ಲವಾದರೆ ಶಿವಬಾಬಾ ಎಲ್ಲಿಂದ ತರುವರು? ಈ ಎಲ್ಲ ಸೇವಾಕೇಂದ್ರಗಳು
ಹೇಗೆ ನಡೆಯುತ್ತವೆ. ಮಕ್ಕಳೇ ನಡೆಸುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನನ್ನ ಬಳಿ ಒಂದು
ಕವಡೆಯೂ ಇಲ್ಲ, ಮುಂದೆ ಹೋದಂತೆ ನಿಮ್ಮ ಬಳಿ ತಾವೇ ಬಂದು ಹೇಳುತ್ತಾರೆ - ನಮ್ಮ ಮನೆಯನ್ನು ನೀವು
ಉಪಯೋಗ ಮಾಡಿರಿ. ಆಗ ಬಹಳ ತಡವಾಯಿತು ಎಂದು ನೀವು ಹೇಳುತ್ತೀರಿ. ತಂದೆಯು ಬಡವರ ಬಂಧುವಾಗಿದ್ದಾರೆ.
ಬಡವರ ಬಳಿ ಎಲ್ಲಿಂದ ಬರುತ್ತದೆ! ಕೆಲವರಂತೂ ಕೊಟ್ಯಾಧಿಪತಿ ಪದಮಾಪತಿಗಳಿದ್ದಾರೆ. ಅವರಿಗೆ ಇಲ್ಲಿಯೇ
ಸ್ವರ್ಗವಿದೆ. ಇದು ಮಾಯೆಯ ಆಡಂಭರವಾಗಿದೆ ಅದರ ಪತನವಾಗುತ್ತಿದೆ. ತಂದೆಯು ತಿಳಿಸುತ್ತಾರೆ - ನೀವು
ಮೊದಲು ಮಾಲೀಕನ ಸಂತಾನರಾಗಿದ್ದಿರಿ ನಂತರ ನೀವೇ ಹೋಗಿ ರಾಜಕುಮಾರರಾಗುತ್ತಿರಿ ಆದರೆ ಇಷ್ಟೊಂದು ಸೇವೆ
ಮಾಡಿ ತೋರಿಸಿ ಬಹಳ ಖುಷಿಯಲ್ಲಿರಬೇಕು. ನಾವು ಪ್ರಭುವಿನ ಸಂತಾನರಾಗಿದ್ದೇವೆ. ಪುನಃ ನಾವೇ
ರಾಜಕುಮಾರರಾಗುತ್ತೇವೆ. ಯಾವಾಗ ಅನೇಕರ ಸೇವೆ ಮಾಡುತ್ತೀರೋ ಆಗ ರಾಜಕುಮಾರರಾಗುತ್ತೀರಿ. ಅಂದಾಗ
ಎಷ್ಟು ಖುಷಿ ನಶೆಯಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಂದೂ ಯಾರಿಗೂ
ಬೇಸರ ಪಡಿಸಲೂಬಾರದು, ಬೇಸರವಾಗಲೂಬಾರದು. ತಮ್ಮ ಬುದ್ಧಿವಂತಿಕೆಯ ಅಥವಾ ಸೇವೆ ಮಾಡುವ ಅಹಂಕಾರ
ತೋರಿಸಬಾರದು. ಹೇಗೆ ತಂದೆಯು ಮಕ್ಕಳಿಗೆ ಗೌರವ ಕೊಡುತ್ತಾರೆ ಹಾಗೆಯೇ ತಾವೇ ತಮ್ಮ
ಗೌರವವನ್ನಿಟ್ಟುಕೊಳ್ಳಬೇಕು.
2. ಯೋಗ ಬಲದಿಂದ ತಮ್ಮ
ಎಲ್ಲ ಇಚ್ಛೆಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಸದಾ ಇದೇ ಖುಷಿ ನಶೆಯಲ್ಲಿರಬೇಕು - ನಾವು ಮಾಲೀಕನ
ಸಂತಾನರಿಂದ ರಾಜಕುಮಾರರಾಗುತ್ತೇವೆ. ಸದಾ ಶಾಂತಿಯಲ್ಲಿದ್ದು ಸೇವೆ ಮಾಡಬೇಕು. ನರ-ನಾಡಿಯಲ್ಲಿಯೂ
ಯಾವ ಭೂತಗಳು ತುಂಬಿವೆಯೋ ಅವುಗಳನ್ನು ತೆಗೆಯಬೇಕು.
ವರದಾನ:
ಬ್ರಾಹ್ಮಣ
ಜೀವನದಲ್ಲಿ ತಂದೆಯ ಮೂಲಕ ಬೆಳಕಿನ ಕಿರೀಟ ಪ್ರಾಪ್ತಿ ಮಾಡಿಕೊಳ್ಳುವಂತಹ ಮಹಾನ್ ಭಾಗ್ಯವಾನ್ ಭವ.
ಸಂಗಮಯುಗೀ ಬ್ರಾಹ್ಮಣ
ಜೀವನದ ವಿಶೇಷತೆಯಾಗಿದೆ “ಪವಿತ್ರತೆ”. ಪವಿತ್ರತೆಯ ನಿಶಾನಿ-ಬೆಳಕಿನ ಕಿರೀಟವಾಗಿದೆ ಯಾವುದು ಎಲ್ಲಾ
ಬ್ರಾಹ್ಮಣ ಆತ್ಮಗಳಿಗೆ ತಂದೆಯ ಮೂಲಕ ಪ್ರಾಪ್ತಿಯಾಗುತ್ತದೆ. ಪವಿತ್ರತೆಯ ಬೆಳಕಿನ ಈ ಕಿರೀಟ ಆ
ರತ್ನಜಡಿತ ಕಿರೀಟಗಳಿಗಿಂತ ಅತೀ ಶ್ರೇಷ್ಠವಾಗಿದೆ. ಪ್ರತಿಯೊಬ್ಬ ಮಕ್ಕಳಿಗೆ ಜನ್ಮದಿಂದ
“ಪವಿತ್ರಭವ”ದ ವರದಾನ ಕೊಡುತ್ತಾರೆ, ಅದರ ಸೂಚಕ ಬೆಳಕಿನ ಕಿರೀಟವಾಗಿದೆ.
ಸ್ಲೋಗನ್:
ಬೇಹದ್ದಿನ
ವೈರಾಗ್ಯ ವೃತ್ತಿಯ ಮೂಲಕ ಇಚ್ಛೆಗಳಿಗೆ ವಶವಾಗಿ ಬೇಸರವಾಗಿರುವ ಆತ್ಮಗಳ ಬೇಸರತೆಯನ್ನು ದೂರ ಮಾಡಿ.