06.04.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಬಳಿ ಯಾವ ಸಾಮಾನುಗಳಿವೆಯೋ ಅವು ಸಂಪೂರ್ಣವಾಗಿ ಅಂತ್ಯದಲ್ಲಿ ಸಿಗುವುದು, ಅದನ್ನು ಧಾರಣೆ ಮಾಡಿ ಮತ್ತು ಮಾಡಿಸಿ”

ಪ್ರಶ್ನೆ:
ತ್ರಿಕಾಲದರ್ಶಿ ತಂದೆಯು ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದರೂ ಸಹ ನಾಳೆಯ ಮಾತನ್ನು ಇಂದು ತಿಳಿಸುವುದಿಲ್ಲ - ಏಕೆ?

ಉತ್ತರ:
ಮಕ್ಕಳೇ, ಒಂದುವೇಳೆ ನಾಳೆಯ ಮಾತನ್ನು ಇಂದೇ ತಿಳಿಸಿದರೆ ಡ್ರಾಮಾದಲ್ಲಿರುವ ಮಜಾ ಹೊರಟು ಹೋಗುತ್ತದೆ. ಇದಕ್ಕೆ ಕಾಯಿದೆ ಎನ್ನುವುದಿಲ್ಲ. ಎಲ್ಲವನ್ನೂ ತಿಳಿದಿದ್ದರೂ ಸಹ ನಾನೂ ಸಹ ಡ್ರಾಮಾದಲ್ಲಿ ಬಂಧಿತನಾಗಿದ್ದೇನೆ, ಮೊದಲೇ ತಿಳಿಸಲು ಸಾಧ್ಯವಿಲ್ಲ. ಆದ್ದರಿಂದ ಏನಾಗುತ್ತದೆಯೋ ಎಂಬ ಯೋಚನೆಯನ್ನು ಬಿಟ್ಟು ಬಿಡಿ ಎಂದು ತಂದೆಯು ತಿಳಿಸುತ್ತಾರೆ.

ಗೀತೆ:
ಸತ್ತರೂ ನಿನ್ನ ಮಡಿಲಿನಲ್ಲಿಯೇ..............

ಓಂ ಶಾಂತಿ.
ಇವರು ಪಾರಲೌಕಿಕ ಆತ್ಮಗಳ ತಂದೆಯಾಗಿದ್ದಾರೆ. ಆತ್ಮಗಳೊಂದಿಗೇ ಮಾತನಾಡುತ್ತಾರೆ. ಮಕ್ಕಳೇ ಮಕ್ಕಳೇ ಎನ್ನುವ ಅಭ್ಯಾಸವಾಗಿ ಬಿಟ್ಟಿದೆ. ಶರೀರವಂತೂ ಸ್ತ್ರೀಯಾಗಿರಬಹುದು ಆದರೆ ಆತ್ಮಗಳೆಲ್ಲರೂ ಪುರುಷರೇ ಆಗಿದ್ದಾರೆ. ಪ್ರತಿಯೊಂದು ಆತ್ಮವು ವಾರಸುಧಾರರಾಗಿದ್ದಾರೆ ಅರ್ಥಾತ್ ಆಸ್ತಿಗೆ ಹಕ್ಕುದಾರರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಪ್ರತಿಯೊಂದು ಮಗುವು ಆಸ್ತಿಯನ್ನು ತೆಗೆದುಕೊಳ್ಳುವ ಅಧಿಕಾರವಿದೆ. ಬೇಹದ್ದಿನ ತಂದೆಯನ್ನು ಬಹಳ ನೆನಪು ಮಾಡಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ಪರಮಧಾಮದಿಂದ ಬಂದು ನಮಗೆ ಓದಿಸುತ್ತಾರೆ. ಸಾಧು-ಸಂತರು ತಮ್ಮ ಮನೆಯನ್ನು ಬಿಟ್ಟು ಅಥವಾ ಯಾವುದೇ ಹಳ್ಳಿಯಿಂದ ಬರುತ್ತಾರೆ. ತಂದೆಯಂತೂ ಪರಮಧಾಮದಿಂದ ನಮಗೆ ಓದಿಸಲು ಬರುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಬೇಹದ್ದಿನ ತಂದೆಯು ಪತಿತ-ಪಾವನ, ಗಾಡ್ ಫಾದರ್ ಆಗಿದ್ದಾರೆ. ಅವರನ್ನು ಜ್ಞಾನಸಾಗರ ಎಂದು ಕರೆಯುತ್ತಾರೆ, ಅಥಾರಿಟಿಯಲ್ಲವೆ. ಇದು ಯಾವ ಜ್ಞಾನವಾಗಿದೆ? ಈಶ್ವರೀಯ ಜ್ಞಾನವಾಗಿದೆ. ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ, ಸತ್ಚಿತ್ ಆನಂದ ಸ್ವರೂಪನಾಗಿದ್ದಾರೆ. ಅವರದು ಬಹಳ ದೊಡ್ಡ ಮತ್ತು ಭಾರಿ ಮಹಿಮೆಯಿದೆ. ಅವರ ಬಳಿ ಸಾಮಾನುಗಳಿವೆ, ಯಾರ ಬಳಿಯಾದರೂ ಅಂಗಡಿಯಿದ್ದರೆ ನಮ್ಮ ಬಳಿ ವಿಧ ವಿಧವಾದ ಸಾಮಾನುಗಳಿವೆ ಎಂದು ಹೇಳುತ್ತಾರಲ್ಲವೆ. ತಂದೆಯೂ ಸಹ ಹೇಳುತ್ತಾರೆ - ನಾನು ಆನಂದ ಸಾಗರ, ಜ್ಞಾನ ಸಾಗರ, ಶಾಂತಿಯ ಸಾಗರ ಆಗಿದ್ದೇನೆ, ನನ್ನಬಳಿ ಈ ಸಾಮಾನುಗಳು ಇವೆ. ನಾನು ಸಂಗಮ ಯುಗದಲ್ಲಿ ಕೊಡಲು ಬರುತ್ತೇನೆ. ನನ್ನ ಬಳಿ ಇರುವುದೆಲ್ಲವನ್ನೂ ಕೊಡಲು ಬರುತ್ತೇನೆ. ಯಾರೆಷ್ಟಾದರೂ ಧಾರಣೆ ಮಾಡಬಹುದು ಅಥವಾ ಎಷ್ಟಾದರೂ ಪುರುಷಾರ್ಥ ಮಾಡಬಹುದು. ತಂದೆಯ ಬಳಿ ಏನೇನು ಸಾಮಾನುಗಳಿವೆ ಎಂದು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇತ್ತೀಚೆಗೆ ಬೇರೆ ಯಾರಿಗೂ ಅವರ ಅಂತ್ಯವನ್ನು ತಿಳಿಸುವುದಿಲ್ಲ. ಗಾಯನವೂ ಇದೆ - ಕೆಲವರದು ಮಣ್ಣಿನ ಪಾಲಾಗುತ್ತದೆ..... ಇವೆಲ್ಲಾ ಮಾತುಗಳು ಈಗಿನದ್ದಾಗಿದೆ. ಬೆಂಕಿ ಬಿದ್ದಿತೆಂದರೆ ಇವೆಲ್ಲವೂ ಸಮಾಪ್ತಿಯಾಗುವುದು. ರಾಜರುಗಳ ಬಳಿ ಬಹಳ ದೊಡ್ಡ ಗುಹೆಗಳಿರುತ್ತವೆ, ಭೂಕಂಪವಾಯಿತೆಂದರೂ ಸಹ, ಜೋರಾಗಿ ಬೆಂಕಿ ಬಿದ್ದಿತೆಂದರೂ ಸಹ ಹೊರಗೆ ಬಂದು ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇಲ್ಲಿನ ಯಾವ ವಸ್ತುಗಳೂ ಸಹ ಅಲ್ಲಿಯ ಕೆಲಸಕ್ಕೆ ಬರುವುದಿಲ್ಲ. ಗಣಿಗಳೆಲ್ಲವೂ ಹೊಸದಾಗಿ ಸಂಪನ್ನವಾಗಿರುತ್ತದೆ. ವಿಜ್ಞಾನವು ಮುಂದುವರೆಯುತ್ತಿರುವುದೂ ಸಹ ನಿಮ್ಮ ಕೆಲಸಕ್ಕೆ ಬರುವುದು. ನೀವು ಮಕ್ಕಳ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ನೀವು ಮಕ್ಕಳು ಈಗ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ, ಉಳಿದ ಕೆಲವು ಭಾಗಗಳಿವೆ ಅದನ್ನೂ ತಿಳಿದುಕೊಳ್ಳುತ್ತೀರಿ. ತಂದೆಯು ಮೊದಲೇ ಹೇಗೆ ತಿಳಿಸುತ್ತಾರೆ, ನಾನು ಡ್ರಾಮಾದಲ್ಲಿ ಬಂಧಿತನಾಗಿದ್ದೇನೆ. ಇಲ್ಲಿಯವರೆಗೆ ಯಾವ ಜ್ಞಾನವು ಸಿಕ್ಕಿದೆಯೋ ಅದು ಡ್ರಾಮಾದಲ್ಲಿ ನೊಂದಾವಣೆಯಾಗಿದೆ. ಯಾವ ಸೆಕೆಂಡ್ ಪಾಸ್ ಆಯಿತು, ಅದಕ್ಕೆ ಡ್ರಾಮಾ ಎಂದು ತಿಳಿದುಕೊಳ್ಳಬೇಕಾಗಿದೆ. ಬಾಕಿ ಯಾವುದು ನಾಳೆ ಆಗುವುದಿದೆ ಅದನ್ನು ನೋಡಬಹುದು. ನಾಳೆಯ ಮಾತನ್ನು ಇಂದು ತಿಳಿಸುವುದಿಲ್ಲ. ಈ ಡ್ರಾಮಾದ ರಹಸ್ಯವನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ, ಕಲ್ಪದ ಆಯಸ್ಸನ್ನು ಎಷ್ಟೊಂದು ಉದ್ದಗಲವಾಗಿ ಮಾಡಿ ಬಿಟ್ಟಿದ್ದಾರೆ! ಈ ಡ್ರಾಮಾವನ್ನೂ ತಿಳಿದುಕೊಳ್ಳಲು ಸಾಹಸ ಬೇಕಾಗಿದೆ. ಅಮ್ಮ ಸತ್ತರೂ ಹಲ್ವ ತಿನ್ನಿ..... ಸತ್ತು ಹೋದರೆಂದರೆ ಮತ್ತೆ ಜನ್ಮ ಪಡೆಯುತ್ತಾರೆಂದು ತಿಳಿಯುತ್ತಾರೆ. ನಾವೇಕೆ ಅಳಬೇಕು? ಪತ್ರಿಕೆಗಳಲ್ಲಿ ಬರೆಯಬಹುದು - ಈ ಪ್ರದರ್ಶನಿಯು 5000 ವರ್ಷಗಳ ಮೊದಲಿನಂತೆ ಇದೇ ದಿನಾಂಕದಂದು, ಇದೇ ಸ್ಥಾನದಲ್ಲಿ, ಇದೇ ರೀತಿ ನಡೆದಿತ್ತು, ಈ ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತಿದೆ ಎಂದು ತಂದೆಯು ತಿಳಿಸುತ್ತಾರೆ. ಈ ಪ್ರಪಂಚವು ಸ್ವಲ್ಪ ದಿನದ್ದಾಗಿದೆ, ಇನ್ನೇನು ಸಮಾಪ್ತಿಯಾಗುವುದು ಎಂದು ತಿಳಿದುಕೊಂಡಿದ್ದೀರಿ. ಈಗ ನಾವು ಪುರುಷಾರ್ಥ ಮಾಡಿ ವಿಕರ್ಮಾಜೀತರಾಗುತ್ತೇವೆ ನಂತರ ದ್ವಾಪರದಿಂದ ವಿಕ್ರಮ ಸಂವತ್ಸರ ಅರ್ಥಾತ್ ವಿಕರ್ಮಗಳನ್ನು ಮಾಡುವ ಸಂವತ್ಸರವು ಪ್ರಾರಂಭವಾಗುತ್ತದೆ. ನೀವು ವಿಕರ್ಮದ ಮೇಲೆ ಜಯ ಗಳಿಸುತ್ತೀರಿ, ವಿಕರ್ಮಾಜೀತ ಆಗಿ ಹೋಗುತ್ತೀರಿ. ಪಾಪಕರ್ಮಗಳನ್ನು ಶ್ರೀ ಮತದಿಂದ ಜಯ ಗಳಿಸಿ ವಿಕರ್ಮಾಜೀತರಾಗುತ್ತೀರಿ. ಅಲ್ಲಿ ನೀವು ಆತ್ಮಾಭಿಮಾನಿಯಾಗುತ್ತೀರಿ, ದೇಹಾಭಿಮಾನವಿರುವುದಿಲ್ಲ. ಕಲಿಯುಗದಲ್ಲಿ ದೇಹಾಭಿಮಾನವು ಇದೆ. ಸಂಗಮಯುಗದಲ್ಲಿ ನೀವು ದೇಹೀ ಅಭಿಮಾನಿಯಾಗುತ್ತೀರಿ, ಪರಮಪಿತ ಪರಮಾತ್ಮನನ್ನೂ ತಿಳಿದಿದ್ದೀರಿ. ಇದು ಶುದ್ಧ ಅಭಿಮಾನವಾಗಿದೆ. ನೀವು ಎಲ್ಲರಿಗಿಂತ ಶ್ರೇಷ್ಠರಾಗಿರುವ ಬ್ರಾಹ್ಮಣರಾಗಿದ್ದೀರಿ. ನೀವು ಸರ್ವೋತ್ತಮರಾದ ಬ್ರಾಹ್ಮಣಕುಲಭೂಷಣರು. ನಿಮ್ಮ ವಿನಃ ಬೇರೆ ಯಾರಿಗೂ ಜ್ಞಾನ ಸಿಗುವುದಿಲ್ಲ, ನಿಮ್ಮದು ಸರ್ವೋತ್ತಮ ಕುಲವಾಗಿದೆ. ಗಾಯನವೂ ಇದೆ - ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪಿ ವಲ್ಲಭನ ಮಕ್ಕಳೊಂದಿಗೆ ಕೇಳಿ. ನಿಮಗೆ ಈಗ ಲಾಟರಿಯು ಸಿಕ್ಕಿದೆ, ಯಾವಾಗ ಬಡವರಿಂದ ಸಾಹುಕಾರರಾಗುತ್ತೀರಿ ಅಷ್ಟು ಖುಷಿಯು ಯಾವುದೇ ವಸ್ತು ಸಿಕ್ಕಿದರೆ ಇಷ್ಟು ಖುಷಿಯಾಗುವುದಿಲ್ಲ. ಎಷ್ಟು ಪುರುಷಾರ್ಥ ಮಾಡುತ್ತೇವೆಯೋ ಅಷ್ಟು ತಂದೆಯಿಂದ ರಾಜಧಾನಿಯ ಆಸ್ತಿಯು ಸಿಗುತ್ತದೆ ಎಂದು ತಿಳಿದುಕೊಂಡಿದ್ದೀರಿ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟೇ ಸಿಗುವುದು. ಮುಖ್ಯ ಮಾತು ಅತಿ ಪ್ರಿಯ ತಂದೆಯನ್ನು ನೆನಪು ಮಾಡುವುದಾಗಿದೆ. ಅವರು ಎಲ್ಲರ ಅತಿ ಪ್ರಿಯ ತಂದೆಯಾಗಿದ್ದಾರೆ. ತಂದೆಯು ಬಂದು ಎಲ್ಲರಿಗೂ ಸುಖ-ಶಾಂತಿಯನ್ನು ಕೊಡುತ್ತಾರೆ. ಈಗ ದೇವಿ-ದೇವತೆಗಳ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅಲ್ಲಿ ರಾಜ-ರಾಣಿಯಿರುವುದಿಲ್ಲ, ಅಲ್ಲಿರುವವರನ್ನು ಮಹಾರಾಜ-ಮಹಾರಾಣಿ ಎಂದು ಕರೆಯುತ್ತಾರೆ. ಒಂದುವೇಳೆ ಭಗವಾನ್-ಭಗವತಿ ಎಂದು ಕರೆದರೆ ನಂತರ ಯಥಾರಾಜ-ರಾಣಿ ತಥಾ ಪ್ರಜಾ ಎಲ್ಲರೂ ಭಗವಾನ್-ಭಗವತಿಯರಾಗಿ ಬಿಡುತ್ತಾರೆ, ಆದ್ದರಿಂದ ಭಗವಾನ್-ಭಗವತಿ ಎಂದು ಕರೆಯುವುದಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಕರೆಯುವುದಿಲ್ಲ. ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರರಿಗೂ ಸಹ ದೇವತೆಯೆಂದು ಕರೆಯುತ್ತಾರೆ. ಸೂಕ್ಷ್ಮವತನವಾಸಿಯನ್ನು ಭಗವಾನ್-ಭಗವತಿ ಎಂದು ಹೇಗೆ ಕರೆಯುವುದು? ಶ್ರೇಷ್ಠಾತಿ ಶ್ರೇಷ್ಠವಾದುದು ಮೂಲವತನವಾಗಿದೆ ನಂತರ ಸೂಕ್ಷ್ಮವತನ, ಈ ಲೋಕವು ಮೂರನೇ ನಂಬರಿನದಾಗಿದೆ. ಇದು ನಿಮ್ಮ ಬುದ್ಧಿಯಲ್ಲಿರಬೇಕಾಗಿದೆ. ನಾವಾತ್ಮಗಳ ತಂದೆ ಶಿವ ತಂದೆಯು ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ, ಚಿನ್ನದ ಆಚಾರಿಯೂ ಆಗಿದ್ದಾರೆ, ವಕೀಲರೂ ಆಗಿದ್ದಾರೆ. ಎಲ್ಲರನ್ನೂ ರಾವಣ ಜೈಲಿನಿಂದ ಬಿಡಿಸುತ್ತಾರೆ. ಶಿವ ತಂದೆಯು ದೊಡ್ಡ ವಕೀಲರಾಗಿದ್ದಾರೆ, ಅಂತಹ ತಂದೆಯನ್ನು ಏಕೆ ಮರೆಯುತ್ತೀರಿ? ಬಾಬಾ ಮರೆತು ಹೋಗುತ್ತೇವೆಂದು ಏಕೆ ಮರೆಯುತ್ತೀರಿ. ಮಾಯೆಯು ಬಿರುಗಾಳಿಗಳು ಬಹಳ ಬರುತ್ತವೆ ಎನ್ನುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ಆಗಲೇಬೇಕಾಗಿದೆ, ಸ್ವಲ್ಪವಂತೂ ಪರಿಶ್ರಮ ಪಡಲೇಬೇಕು. ಇದು ಮಾಯೆಯೊಂದಿಗಿನ ಯುದ್ಧವಾಗಿದೆ. ನೀವು ಪಾಂಡವರು ಯಾವುದೇ ಕೌರವರರೊಂದಿಗೆ ಯುದ್ಧ ಮಾಡುವುದಿಲ್ಲ. ಪಾಂಡವರು ಯುದ್ಧ ಮಾಡಲು ಹೇಗೆ ಸಾಧ್ಯ! ಹಾಗೆಂದು ಹೇಳಿದರೆ ಹಿಂಸಾತ್ಮಕ ಯುದ್ಧವಾಗಿ ಬಿಡುತ್ತದೆ. ತಂದೆಯು ಯಾವುದೇ ಹಿಂಸೆಯನ್ನು ಕಲಿಸುವುದಿಲ್ಲ, ಸ್ವಲ್ಪವೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ನಮ್ಮದು ಯಾವುದೇ ಯುದ್ಧವಲ್ಲ. ಕೇವಲ ನೆನಪು ಮಾಡಿ, ಮಾಯೆಯಿಂದ ಸೋಲಬೇಡಿ ಎಂದು ತಂದೆಯು ತಿಳಿಸುತ್ತಾರೆ. ಇದರ ಮೇಲೆಯೂ ಒಂದು ಕಥೆಯಿದೆ - ಮೊದಲು ಸುಖ ಬೇಕೋ ಅಥವಾ ದುಃಖವು ಬೇಕೋ ಎಂದು ಕೇಳಿದರೆ ಸುಖವು ಬೇಕೆಂದು ಹೇಳಿದರು. ಸತ್ಯಯುಗದಲ್ಲಿ ದುಃಖವಿರಲು ಸಾಧ್ಯವಿಲ್ಲ.

ಈ ಸಮಯದಲ್ಲಿ ಎಲ್ಲಾ ಸೀತೆಯರು ಶೋಕವಾಟಿಕೆಯಲ್ಲಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚವೆಂಬ ಸಾಗರದ ಮಧ್ಯೆ ಲಂಕೆಯಿದೆ, ಈಗ ಎಲ್ಲರೂ ರಾವಣನ ಜೈಲಿನಲ್ಲಿದ್ದಾರೆ. ಎಲ್ಲರ ಸದ್ಗತಿಯನ್ನು ಮಾಡಲು ತಂದೆಯು ಬಂದಿದ್ದಾರೆ, ಎಲ್ಲರೂ ಶೋಕವಾಟಿಕೆಯಲ್ಲಿದ್ದಾರೆ. ಸ್ವರ್ಗದಲ್ಲಿ ಸುಖವಿದೆ, ನರಕದಲ್ಲಿ ದುಃಖವಿದೆ. ಇದನ್ನು ಶೋಕವಾಟಿಕೆ, ಅದು ಅಶೋಕವಾಟಿಕೆ ಸ್ವರ್ಗವಾಗಿದೆ. ಇದರಲ್ಲಿ ಬಹಳ ದೊಡ್ಡ ಅಂತರವಿದೆ. ನೀವು ಮಕ್ಕಳು ಪ್ರಯತ್ನ ಪಟ್ಟು ನೆನಪು ಮಾಡಿದಿರೆಂದರೆ ಖುಷಿಯ ನಶೆಯೇರುತ್ತದೆ. ತಂದೆಯ ಮತದಂತೆ ನಡೆಯದಿದ್ದರೆ ಅವರು ಮಲ ತಾಯಿ ಮಕ್ಕಳಾಗಿದ್ದಾರೆ, ಮತ್ತೆ ಪ್ರಜೆಗಳಲ್ಲಿ ಹೊರಟು ಹೋಗುತ್ತಾರೆ. ಸ್ವಂತ ಮಕ್ಕಳು ರಾಜಧಾನಿಯಲ್ಲಿ ಹೊರಟು ಹೋಗುತ್ತಾರೆ. ರಾಜಧಾನಿಯಲ್ಲಿ ಬರಬೇಕೆಂದರೆ ಶ್ರೀಮತದಂತೆ ನಡೆಯಬೇಕು. ಕೃಷ್ಣನ ಮತವು ಇಲ್ಲಿ ಸಿಗುವುದಿಲ್ಲ, ಮತವಿರುವುದೇ ಎರಡು ರೀತಿಯಿದೆ. ಈಗ ನೀವು ಶ್ರೀಮತವನ್ನು ಪಡೆದು ನಂತರ ಅದರ ಫಲವನ್ನು ಸತ್ಯಯುಗದಲ್ಲಿ ಭೋಗಿಸುತ್ತೀರಿ. ನಂತರ ದ್ವಾಪರದಲ್ಲಿ ರಾವಣನ ಮತವು ಸಿಗುತ್ತದೆ. ಎಲ್ಲರೂ ರಾವಣನ ಮತದಂತೆ ಅಸುರರಾಗಿ ಬಿಟ್ಟಿದ್ದಾರೆ, ಈಗ ಎಲ್ಲರೂ ರಾವಣನ ಮತದಂತೆ ಅಸುರರಾಗಿ ಬಿಟ್ಟಿದ್ದಾರೆ. ನಿಮಗೆ ಈಶ್ವರೀಯ ಮತವು ಸಿಗುತ್ತದೆ. ಮತವನ್ನು ಕೊಡುವವರು ಒಬ್ಬರೇ ತಂದೆ, ಈಶ್ವರನಾಗಿದ್ದಾರೆ. ನೀವು ಈಶ್ವರೀಯ ಮತದಂತೆ ಎಷ್ಟೊಂದು ಪವಿತ್ರರಾಗುತ್ತಿದ್ದೀರಿ. ವಿಷಯ ಸಾಗರದಲ್ಲಿ ಮುಳುಗುವುದು ಮೊದಲ ಪಾಪವಾಗಿದೆ. ದೇವತೆಗಳು ವಿಷಯ ಸಾಗರದಲ್ಲಿ ಮುಳುಗುವುದಿಲ್ಲ. ಅಲ್ಲಿ ಮಕ್ಕಳಾಗುವುದಿಲ್ಲವೇ? ಎಂದು ಕೇಳುತ್ತಾರೆ. ಮಕ್ಕಳು ಏಕೆ ಆಗುವುದಿಲ್ಲ! ಆದರೆ ಅದು ನಿರ್ವಿಕಾರಿ ಪ್ರಪಂಚ, ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ಅಲ್ಲಿ ಯಾವುದೇ ವಿಕಾರವಿರುವುದಿಲ್ಲ. ದೇವತೆಗಳು ಆತ್ಮಾಭಿಮಾನಿಗಳಾಗಿರುತ್ತಾರೆ, ಪರಮಾತ್ಮಾಭಿಮಾನಿಗಳಲ್ಲ ಎಂದು ತಿಳಿಸುತ್ತಾರೆ. ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ಮೊದಲು ಎರಡೂ ಆಗಿರಲಿಲ್ಲ. ಸತ್ಯಯುಗದಲ್ಲಿ ಪರಮಾತ್ಮನನ್ನು ತಿಳಿದುಕೊಂಡಿರಲಿಲ್ಲ. ಆತ್ಮವೇ ತಿಳಿದುಕೊಂಡಿರುತ್ತದೆ - ನಾನು ಈ ಶರೀರವನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳುತ್ತೇನೆ. ಈಗ ಹಳೆಯದನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮೊದಲೇ ತಿಳಿದುಕೊಂಡು ಬಿಡುತ್ತದೆ. ಮಕ್ಕಳ ಜನ್ಮವಾಗುತ್ತದೆಯೆಂದರೆ ಮೊದಲೇ ಸಾಕ್ಷಾತ್ಕಾರವಾಗುತ್ತದೆ. ಯೋಗ ಬಲದಿಂದ ನೀವು ಇಡೀ ವಿಶ್ವದ ಮೇಲೆ ಮಾಲೀಕರಾಗುತ್ತೀರಿ ಅಂದಮೇಲೆ ಯೋಗ ಬಲದಿಂದ ಮಕ್ಕಳಾಗುವುದಿಲ್ಲವೆ! ಯೋಗ ಬಲದಿಂದ ಯಾವುದೇ ವಸ್ತುವನ್ನು ನೀವು ಪಾವನ ಮಾಡಬಹುದು ಆದರೆ ನೆನಪನ್ನು ನೀವು ಮರೆತು ಹೋಗುತ್ತೀರಿ. ಕೆಲವರಿಗೆ ಅಭ್ಯಾಸವಾಗಿ ಬಿಡುತ್ತದೆ, ಬಹಳ ಸನ್ಯಾಸಿಗಳೂ ಇರುತ್ತಾರೆ ಯಾರಿಗೆ ಭೋಜನದ ಮೇಲೆ ಗಮನವಿರುತ್ತದೆಯೋ ಅವರು ಊಟದ ಸಮಯದಲ್ಲಿ ಮಂತ್ರ ಪಠಿಸಿ ನಂತರ ಸ್ವೀಕಾರ ಮಾಡುತ್ತಾರೆ. ನಿಮಗೂ ಸಹ ಪತ್ಯೆಯನ್ನು ತಿಳಿಸಲಾಗಿದೆ. ಯಾವುದೇ ರೀತಿಯ ಮಾಂಸ ಇತ್ಯಾದಿಗಳನ್ನು ಸ್ವೀಕರಿಸಬಾರದು ಏಕೆಂದರೆ ನೀವು ದೇವತೆಗಳಾಗುತ್ತಿದ್ದೀರಿ. ದೇವತೆಗಳು ಎಂದೂ ಕೊಳಕನ್ನು ತಿನ್ನುವುದಿಲ್ಲ. ಅಂತಹ ಪವಿತ್ರರಾಗಬೇಕಾಗಿದೆ. ನನ್ನ ಮೂಲಕ ನನ್ನನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಳ್ಳುತ್ತೀರಿ, ಮತ್ತ್ಯಾವುದೇ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ವಿದ್ಯೆಯೂ ಸಹ ಭಿನ್ನವಾಗಿರುತ್ತದೆ, ಈ ಮೃತ್ಯುಲೋಕದ ವಿದ್ಯೆಯು ಇಲ್ಲಿಯೇ ಅಂತ್ಯವಾಗುತ್ತದೆ. ಮೃತ್ಯುಲೋಕದ ಎಲ್ಲಾ ಕೆಲಸ ಕಾರ್ಯಗಳು ಸಮಾಪ್ತಿಯಾಗಿ ಅಮರಲೋಕವು ಪ್ರಾರಂಭವಾಗುತ್ತದೆ. ಮಕ್ಕಳಿಗೆ ಇಷ್ಟೊಂದು ನಶೆಯೇರಬೇಕಾಗಿದೆ. ನೀವು ಮಕ್ಕಳಿಗೆ ಅತೀಂದ್ರಿಯ ಸುಖ, ಪರಮ ಸುಖದಲ್ಲಿರಬೇಕಾಗಿದೆ. ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಾ ಅಥವಾ ವಿದ್ಯಾರ್ಥಿಗಳಾಗಿದ್ದೀರಾ. ಪರಮಪಿತ ಪರಮಾತ್ಮನು ನಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಪರಮಾನಂದ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಈ ಮಾತುಗಳು ಇರುವುದಿಲ್ಲ. ಈಗ ನೀವು ಇದನ್ನು ಕೇಳುತ್ತೀರಿ - ನೀವು ಈ ಸಮಯದಲ್ಲಿ ಈಶ್ವರೀಯ ಪರಿವಾರದವರಾಗಿದ್ದೀರಾ? ಈಗಿನ ಗಾಯನವು ಇದೆ - ಅತೀಂದ್ರಿಯ ಸುಖದ ಗಾಯನವನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರನ್ನು ಕೇಳಿ. ಪರಮಧಾಮದಲ್ಲಿರುವ ತಂದೆಯು ಬಂದು ನಮ್ಮ ತಂದೆ, ಶಿಕ್ಷಕ, ಗುರುವಾಗುತ್ತಾರೆ. ಮೂವರೂ ಸೇವಾಧಾರಿಗಳಲ್ಲವೆ. ಯಾರೂ ಸಹ ಅಭಿಮಾನವನ್ನಿಟ್ಟುಕೊಳ್ಳುವುದಿಲ್ಲ. ನಿಮ್ಮ ಸೇವೆಯನ್ನು ಮಾಡಿ ನಿಮಗೆ ಎಲ್ಲವನ್ನೂ ಕೊಟ್ಟು ನಿರ್ವಾಣಧಾಮದಲ್ಲಿ ಕುಳಿತುಕೊಳ್ಳುತ್ತೇನೆ ಎಂದರೆ ಸೇವಾಧಾರಿ ಆದೆನಲ್ಲವೆ ಎಂದು ತಿಳಿಸುತ್ತಾರೆ. ವೈಸರಾಯರು ಯಾವಾಗಲೂ ವಿಧೇಯ ಸೇವಾಧಾರಿಗಳೆಂದು ಸಹಿಯನ್ನು ಹಾಕುತ್ತಾರೆ. ತಂದೆಯೂ ಸಹ ನಿರಾಕಾರಿ, ನಿರಹಂಕಾರಿಯಾಗಿದ್ದಾರೆ, ಹೇಗೆ ಕುಳಿತು ಓದಿಸುತ್ತಾರೆ. ಈ ಶ್ರೇಷ್ಠ ವಿದ್ಯೆಯನ್ನು ಯಾರೂ ಓದಿಸಲು ಸಾಧ್ಯವಿಲ್ಲ, ಇಷ್ಟೊಂದು ವಿಷಯವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯರಿಗಂತೂ ಈ ಮಾತುಗಳು ಗೊತ್ತಿಲ್ಲ. ಇವರಿಗೆ ಯಾವುದೇ ಗುರು ಕಲಿಸಿ ಕೊಟ್ಟಿಲ್ಲ. ಗುರುಗಳಂತೂ ಅನೇಕರಿದ್ದಾರೆ, ಒಬ್ಬರಿರುತ್ತಾರೆಯೇ? ಈ ತಂದೆಯು ಪತಿತರನ್ನು ಪಾವನ ಮಾಡುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯೇ ನಾವು ಕಲ್ಪದ ಹಿಂದೆಯೂ ಮಿಲನ ಮಾಡಿದ್ದೆವೆಂದು ಹೇಳುತ್ತಾರಲ್ಲವೆ. ತಂದೆಯೇ ಬಂದು ಪತಿತರನ್ನು ಪಾವನ ಮಾಡುತ್ತಾರೆ. ನೀವು ಮಕ್ಕಳನ್ನು 21 ಜನ್ಮಗಳಿಗಾಗಿ ಪಾವನರನ್ನಾಗಿ ಮಾಡುತ್ತೇನೆ. ಇವೆಲ್ಲವನ್ನೂ ಧಾರಣೆ ಮಾಡಿ ತಂದೆಯು ಏನು ತಿಳಿಸದರೆಂದು ನೀವು ತಿಳಿಸಬೇಕು. ತಂದೆಯಿಂದ ನಾವು ಮುಂದೆ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೇವೆ. ಇದು ನೆನಪಿದ್ದರೆ ಖುಷಿಯಿರುತ್ತದೆ. ಇದೇ ಪರಮಾನಂದವಾಗಿದೆ. ಮಾ|| ಜ್ಞಾನ ಸಾಗರ, ಆನಂದ ಸಾಗರ, ಇದೆಲ್ಲವೂ ತಂದೆಯಿಂದ ವರದಾನವಾಗಿ ಸಿಗುತ್ತದೆ. ಸತ್ಯಯುಗದಲ್ಲಂತೂ ನೀವು ಬುದ್ಧುಗಳಾಗಿರುತ್ತೀರಿ. ಈ ಲಕ್ಷ್ಮೀ-ನಾರಾಯಣರಿಗೆ ಸ್ವಲ್ಪವೂ ಜ್ಞಾನವಿರುವುದಿಲ್ಲ. ಇವರಿಗೆ ಇದ್ದಿದ್ದರೆ ಪರಂಪರೆಯಾಗಿ ನಡೆದು ಬರುತ್ತಿತ್ತು. ನಿಮ್ಮಷ್ಟು ಪರಮಾನಂದವು ಈ ದೇವತೆಗಳಿಗೂ ಇರಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ದೇವತೆಗಳಾಗಲು ಆಹಾರ-ಪಾನೀಯಗಳಲ್ಲಿ ಬಹಳ ಶುದ್ಧವಾಗಿರಬೇಕಾಗಿದೆ, ಬಹಳ ಪತ್ಯೆಯಲ್ಲಿ ನಡೆಯಬೇಕಾಗಿದೆ. ಯೋಗಬಲದಿಂದ ಭೋಜನಕ್ಕೆ ದೃಷ್ಟಿಕೊಟ್ಟು ನಂತರ ಸ್ವೀಕಾರ ಮಾಡಬೇಕಾಗಿದೆ.

2) ಪರಮಪಿತ ಪರಮಾತ್ಮನ ಮಕ್ಕಳು ಅಥವಾ ವಿದ್ಯಾರ್ಥಿಗಳಾಗಿದ್ದೇವೆ. ಅವರು ನಮ್ಮನ್ನು ಹಿಂತಿರುಗಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ - ಇದೇ ನಶೆಯಲ್ಲಿ ಪರಮಸುಖ, ಪರಮ ಆನಂದದ ಅನುಭವ ಮಾಡಬೇಕಾಗಿದೆ.

ವರದಾನ:
ಸೇವೆಯ ಲಗನ್ನಿನ ಮೂಲಕ ಲೌಕಿಕವನ್ನು ಅಲೌಕಿಕ ಪ್ರವೃತ್ತಿಯಲ್ಲಿ ಪರಿವರ್ತನೆ ಮಾಡುವಂತಹ ನಿರಂತರ ಸೇವಾಧಾರಿ ಭವ.

ಸೇವಾಧಾರಿಯ ಕರ್ತವ್ಯವಾಗಿದೆ - ನಿರಂತರ ಸೇವೆಯಲ್ಲಿರುವುದು. ಭಲೆ ಮನಸಾ ಸೇವೆಯಾಗಿರಬಹುದು, ಭಲೆ ವಾಚಾ-ಕರ್ಮಣಾ ಸೇವೆಯಾಗಿರಬಹುದು. ಸೇವಾಧಾರಿಯು ಎಂದಿಗೂ ಸಹ ಸೇವೆಯನ್ನು ತನ್ನಿಂದ ಬೇರೆ ಎಂದು ತಿಳಿಯುವುದಿಲ್ಲ. ಯಾರ ಬುದ್ಧಿಯಲ್ಲಿ ಸದಾ ಸೇವೆಯ ಲಗನ್ನಿರುತ್ತದೆಯೋ ಅವರ ಲೌಕಿಕ ಪ್ರವೃತ್ತಿಯು ಬದಲಾಗಿ ಈಶ್ವರೀಯ ಪ್ರವೃತ್ತಿಯಾಗಿ ಬಿಡುತ್ತದೆ. ಸೇವಾಧಾರಿಯು ಮನೆಯನ್ನು ಮನೆ ಎಂದು ತಿಳಿಯುವುದಿಲ್ಲ ಆದರೆ ಸೇವಾ ಸ್ಥಾನವೆಂದು ತಿಳಿದುಕೊಂಡು ನಡೆಯುತ್ತಾರೆ. ಸೇವಾಧಾರಿಯ ಮುಖ್ಯ ಗುಣವೆಂದರೆ ತ್ಯಾಗ ಆಗಿದೆ. ತ್ಯಾಗ ವೃತ್ತಿಯಿರುವವರು ಪ್ರವೃತ್ತಿಯಲ್ಲಿ ತಪಸ್ವಿಮೂರ್ತಿ ಆಗಿರುತ್ತಾರೆ, ಇದರಿಂದ ಸೇವೆಯು ಸ್ವತಹವಾಗಿ ಆಗುತ್ತದೆ.

ಸ್ಲೋಗನ್:
ತನ್ನ ಸಂಸ್ಕಾರಗಳನ್ನು ದಿವ್ಯವನ್ನಾಗಿ ಮಾಡಿಕೊಳ್ಳಬೇಕೆಂದರೆ, ಮನಸ್ಸು-ಬುದ್ಧಿಯನ್ನು ತಂದೆಯ ಮುಂದೆ ಸಮರ್ಪಣೆ ಮಾಡಿ ಬಿಡಿ.

ಅವ್ಯಕ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಯಾವುದೇ ಆತ್ಮಕ್ಕೆ ಎರಡು ಕ್ಷಣದ ಮಧುರ ದೃಷ್ಟಿಯನ್ನು ಕೊಡಿ. ಮಧುರ ಮಾತು ಮಾತನಾಡಿ ಆಗ ಆ ಆತ್ಮವನ್ನು ಸದಾ ಕಾಲಕ್ಕೆ ಸಂಪನ್ನರನ್ನಾಗಿ ಮಾಡಿ ಬಿಡುವಿರಿ. ಈ ಎರಡು ಕ್ಷಣದ ಮಧುರ ದೃಷ್ಟಿ, ಮಾತು ಆತ್ಮರ ಸೃಷ್ಟಿ ಬದಲಾಗುವುದು. ಎರಡು ಮಧುರ ಮಾತು ಸದಾ ಕಾಲಕ್ಕಾಗಿ ಬದಲಾಗಲು ನಿಮಿತ್ತವಾಗಿ ಬಿಡುವುದು.