06.06.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ಭವಿಷ್ಯದಲ್ಲಿ ಉತ್ತಮ ಮನೆತನದಲ್ಲಿ ಬರುವ ಆಧಾರವು ವಿದ್ಯೆಯಾಗಿದೆ, ಈ ವಿದ್ಯೆಯಿಂದ ನೀವು
ಭಿಕಾರಿಗಳಿಂದ ರಾಜಕುಮಾರರಾಗುತ್ತೀರಿ”
ಪ್ರಶ್ನೆ:
ಗೋಲ್ಡನ್ ಸ್ಪೂನ್
ಇನ್ ದಿ ಮೌತ್ (ಬಾಯಲ್ಲಿ ಚಿನ್ನದ ಚಮಚ ಅರ್ಥಾತ್ ಉನ್ನತವಾದ ಸುಖ) ಎರಡು ಪ್ರಕಾರದಿಂದ
ಪ್ರಾಪ್ತವಾಗುತ್ತದೆ- ಹೇಗೆ?
ಉತ್ತರ:
ಒಂದನೆಯದಾಗಿ
ಭಕ್ತಿಯಲ್ಲಿ ದಾನ-ಪುಣ್ಯ ಮಾಡುವುದರಿಂದ, ಎರಡನೆಯದಾಗಿ ಜ್ಞಾನದಲ್ಲಿ ವಿದ್ಯೆಯಿಂದ ಭಕ್ತಿಯಲ್ಲಿ
ದಾನ-ಪುಣ್ಯ ಮಾಡುತ್ತಾರೆಂದರೆ ರಾಜ ಅಥವಾ ಸಾಹುಕಾರರ ಬಳಿ ಜನ್ಮಪಡೆಯುತ್ತಾರೆ ಆದರೆ ಅದು ಅಲ್ಪಕಾಲದ
ಸುಖವಾಯಿತು. ನೀವು ಜ್ಞಾನದಲ್ಲಿ ವಿದ್ಯೆಯಿಂದ ಅಷ್ಟು ಶ್ರೇಷ್ಠಸುಖವನ್ನು ಪಡೆಯುತ್ತೀರಿ. ಇದು
ಬೇಹದ್ದಿನ ಮಾತಾಗಿದೆ. ಭಕ್ತಿಯಲ್ಲಿ ವಿದ್ಯೆಯಿಂದ ರಾಜ್ಯವು ಸಿಗುವುದಿಲ್ಲ. ಇಲ್ಲಿ ಯಾರೆಷ್ಟು
ಚೆನ್ನಾಗಿ ಓದುವರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತಾರೆ.
ಓಂ ಶಾಂತಿ.
ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸಿಕೊಡುತ್ತಾರೆ,
ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ತಂದೆಯು ಬಂದು ಭಾರತವಾಸಿ ಮಕ್ಕಳಿಗೇ ತಿಳಿಸುತ್ತಾರೆ.
ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ. ತಂದೆಯು ಈ ವಿಶೇಷವಾದ
ಆದೇಶವನ್ನು ನೀಡಿದ್ದಾರೆಂದಮೇಲೆ ಅದನ್ನು ಪಾಲಿಸಬೇಕಲ್ಲವೆ. ಸರ್ವಶ್ರೇಷ್ಠ ತಂದೆಯ ಶ್ರೀಮತವು
ಪ್ರಸಿದ್ಧವಾಗಿದೆ, ಇದೂ ಸಹ ನೀವು ಮಕ್ಕಳಿಗೆ ಜ್ಞಾನವಿದೆ- ಕೇವಲ ಶಿವತಂದೆಗೆ ಶ್ರೀ ಶ್ರೀ ಎಂದು
ಹೇಳಬಹುದಾಗಿದೆ. ಅವರೇ ಸರ್ವಶ್ರೇಷ್ಠರನ್ನಾಗಿ ಮಾಡುತ್ತಾರೆ. ಶ್ರೀ ಎಂದರೆ ಶ್ರೇಷ್ಠ. ನೀವು
ಮಕ್ಕಳಿಗೆ ಈಗ ಅರ್ಥವಾಗಿದೆ- ಇವರನ್ನು ತಂದೆಯೇ ಈ ರೀತಿ ಮಾಡಿದರು, ನಾವೀಗ ಹೊಸ ಪ್ರಪಂಚಕ್ಕಾಗಿ
ಓದುತ್ತಿದ್ದೇವೆ. ಹೊಸ ಪ್ರಪಂಚದ ಹೆಸರೇ ಆಗಿದೆ- ಸ್ವರ್ಗ, ಅಮರಪುರಿ. ಮಹಿಮೆಗಾಗಿ ಬಹಳಷ್ಟು
ಹೆಸರುಗಳಿವೆ. ಸ್ವರ್ಗ ಮತ್ತು ನರಕವೆಂದು ಹೇಳುತ್ತಾರೆ. ಸ್ವರ್ಗಸ್ಥರಾದರೆಂದರೆ ಇದುವರೆಗೂ
ನರಕವಾಸಿಗಳಾಗಿದ್ದರಲ್ಲವೆ. ಆದರೆ ಮನುಷ್ಯರಲ್ಲಿ ಅಷ್ಟು ತಿಳುವಳಿಕೆಯಿಲ್ಲ. ಸ್ವರ್ಗ-ನರಕ,
ಹೊಸಪ್ರಪಂಚ ಮತ್ತು ಹಳೆಯ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದೇನೂ ತಿಳಿದಿಲ್ಲ.
ಹೊರಗಿನ ಆಡಂಬರವು ಎಷ್ಟೊಂದಿದೆ! ನೀವು ಮಕ್ಕಳಲ್ಲಿಯೂ ಸಹ ತಂದೆಯೇ ಓದಿಸುತ್ತಾರೆ ಎಂಬುದನ್ನು
ಕೆಲವರೇ ಯಥಾರ್ಥವಾಗಿ ತಿಳಿದುಕೊಂಡಿದ್ದಾರೆ. ನಾವು ಈ ಲಕ್ಷ್ಮೀ-ನಾರಾಯಣರಾಗಲು ಬಂದಿದ್ದೇವೆ, ನಾವು
ಭಿಕಾರಿಗಳಿಂದ ರಾಜಕುಮಾರರಾಗುತ್ತೇವೆ. ಮೊಟ್ಟಮೊದಲು ನಾವು ಹೋಗಿ ರಾಜಕುಮಾರರಾಗುತ್ತೇವೆ. ಇದು
ವಿದ್ಯೆಯಾಗಿದೆ, ಹೇಗೆ ವಕೀಲವಿದ್ಯೆಯನ್ನು ಓದುತ್ತಾರೆಂದರೆ ನಾವು ಹೋಗಿ ಮನೆ ಕಟ್ಟಿಸುತ್ತೇವೆ,
ಇದನ್ನು ಮಾಡುತ್ತೇವೆ, ಅದನ್ನು ಮಾಡುತ್ತೇವೆ ಎಂದು ಬುದ್ಧಿಯಲ್ಲಿರುತ್ತದೆ. ಪ್ರತಿಯೊಬ್ಬರಿಗೆ
ತಮ್ಮ ಕರ್ತವ್ಯವು ಸ್ಮೃತಿಯಲ್ಲಿರುತ್ತದೆ. ಈ ವಿದ್ಯೆಯನ್ನು ನೀವು ಮಕ್ಕಳು ಹೋಗಿ ಬಹಳ ಉತ್ತಮವಾದ
ಮನೆತನದಲ್ಲಿ ಜನ್ಮಪಡೆಯಬೇಕಾಗಿದೆ. ಯಾರೆಷ್ಟು ಹೆಚ್ಚು ಓದುವರೋ ಅಷ್ಟು ಒಳ್ಳೆಯ ಮನೆಯಲ್ಲಿ
ಜನ್ಮಪಡೆಯುವರು. ರಾಜನ ಮನೆಯಲ್ಲಿ ಜನ್ಮಪಡೆದು ಮತ್ತೆ ರಾಜ್ಯಭಾರ ಮಾಡಬೇಕಾಗಿದೆ. ಗೋಲ್ಡನ್ ಸ್ಪೂನ್
ಇನ್ ದಿ ಮೌತ್ ಎಂದು ಗಾಯನವೂ ಇದೆ. ಮೊದಲನೆಯದಾಗಿ ಜ್ಞಾನದ ಮೂಲಕ ಈ ಸುಖವು ಪ್ರಾಪ್ತಿಯಾಗುತ್ತದೆ.
ಎರಡನೆಯದಾಗಿ ಒಂದುವೇಳೆ ದಾನ-ಪುಣ್ಯವನ್ನು ಚೆನ್ನಾಗಿ ಮಾಡಿದ್ದರೂ ಸಹ ರಾಜನ ಬಳಿ ಜನ್ಮ ಸಿಗುವುದು
ಆದರೆ ಅದು ಹದ್ದಿನ ಸುಖವಾಯಿತು, ಇದು ಬೇಹದ್ದಿನ ಮಾತಾಗಿದೆ. ಪ್ರತಿಯೊಂದು ಮಾತನ್ನು ಚೆನ್ನಾಗಿ
ಅರಿತುಕೊಳ್ಳಿ. ಏನಾದರೂ ಅರ್ಥವಾಗದಿದ್ದರೆ ನೀವು ಕೇಳಬಹುದು, ಇಂತಿಂತಹ ಮಾತುಗಳನ್ನು ತಂದೆಯೊಂದಿಗೆ
ಕೇಳಬೇಕೆಂದು ಬರೆದಿಟ್ಟುಕೊಳ್ಳಿ. ಮುಖ್ಯವಾದುದು ತಂದೆಯ ನೆನಪಿನ ಮಾತಾಗಿದೆ. ಬಾಕಿ ಯಾವುದೇ
ಸಂಶಯವಿದ್ದರೆ ಅದನ್ನು ತಂದೆಯು ಸರಿಪಡಿಸುತ್ತಾರೆ. ಭಕ್ತಿಮಾರ್ಗದಲ್ಲಿ ಎಷ್ಟು ದಾನ-ಪುಣ್ಯವನ್ನು
ಮಾಡುವರೋ ಅಷ್ಟು ಸಾಹುಕಾರರ ಬಳಿ ಜನ್ಮಪಡೆಯುತ್ತಾರೆ. ಯಾವುದೇ ಕೆಟ್ಟಕರ್ಮವನ್ನು ಮಾಡಿದರೆ ಮತ್ತೆ
ಅಂತಹ ಜನ್ಮವೇ ಸಿಗುತ್ತದೆ. ತಂದೆಯ ಬಳಿ ಬರುತ್ತಾರೆ, ಕೆಲವರಿಗಂತೂ ಇಂತಹ ಕರ್ಮಬಂಧನಗಳಿವೆ ಅದರ
ಮಾತೇ ಕೇಳಬೇಡಿ. ಇವೆಲ್ಲವೂ ಹಿಂದಿನ ಕರ್ಮಬಂಧನಗಳಾಗಿವೆ. ರಾಜರೂ ಸಹ ಕೆಲವರು ಈ ರೀತಿಯವರಿರುತ್ತಾರೆ,
ಕರ್ಮಬಂಧನವು ಬಹಳ ಕಠಿಣವಾಗಿರುತ್ತದೆ. ಈ ಲಕ್ಷ್ಮೀ-ನಾರಾಯಣರಿಗಂತೂ ಯಾವುದೇ ಬಂಧನವಿಲ್ಲ. ಅಲ್ಲಿ
ಯೋಗಬಲದ ರಚನೆಯಾಗಿರುತ್ತದೆ. ಯಾವಾಗ ನಾವು ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು
ತೆಗೆದುಕೊಳ್ಳುತ್ತೇವೆ ಅಂದಮೇಲೆ ಯೋಗಬಲದಿಂದ ಮಕ್ಕಳಾಗಲು ಸಾಧ್ಯವಿಲ್ಲವೆ! ಮೊದಲೇ
ಸಾಕ್ಷಾತ್ಕಾರವಾಗಿಬಿಡುತ್ತದೆ, ಅಲ್ಲಂತೂ ಇದು ಸಾಮಾನ್ಯ ಮಾತಾಗಿರುತ್ತದೆ. ಖುಷಿಯಲ್ಲಿ
ಮಂಗಳವಾದ್ಯಗಳು ಮೊಳಗುತ್ತಿರುತ್ತವೆ. ವೃದ್ಧರಿಂದ ಚಿಕ್ಕಮಗುವಾಗಿಬಿಡುತ್ತಾರೆ. ಮಕ್ಕಳಿಗೆ
ಮಹಾತ್ಮರಿಗಿಂತಲೂ ಹೆಚ್ಚು ಮಾನ್ಯತೆಯನ್ನು ಕೊಡಲಾಗುತ್ತದೆ ಏಕೆಂದರೆ ಆ ಮಹಾತ್ಮರಂತೂ ಇಡೀ
ಜೀವನವನ್ನು ಕಳೆದು ದೊಡ್ಡವರಾಗಿದ್ದಾರೆ, ವಿಕಾರಗಳೇನೆಂದು ಅವರಿಗೆ ತಿಳಿದಿದೆ. ಚಿಕ್ಕಮಕ್ಕಳಿಗೆ
ಏನೂ ತಿಳಿದಿರುವುದಿಲ್ಲ ಆದ್ದರಿಂದ ಮಕ್ಕಳು ಮಹಾತ್ಮರಿಗಿಂತಲೂ ಉತ್ತಮರೆಂದು ಹೇಳಲಾಗುತ್ತದೆ.
ಅಲ್ಲಂತೂ ಎಲ್ಲರೂ ಮಹಾತ್ಮರಿರುತ್ತಾರೆ. ಕೃಷ್ಣನಿಗೂ ಮಹಾತ್ಮನೆಂದು ಹೇಳುತ್ತಾರೆ, ಕೃಷ್ಣನು
ಸತ್ಯಮಹಾತ್ಮನಾಗಿದ್ದಾನೆ, ಸತ್ಯಯುಗದಲ್ಲಿಯೇ ಮಹಾನ್ ಆತ್ಮರಿರುತ್ತಾರೆ. ಅವರ ತರಹ ಇಲ್ಲಿ ಯಾರೂ
ಇರಲು ಸಾಧ್ಯವಿಲ್ಲ.
ನೀವು ಮಕ್ಕಳಿಗೆ ಬಹಳ
ಖುಷಿಯಿರಬೇಕು- ನಾವೀಗ ಹೊಸಪ್ರಪಂಚದಲ್ಲಿ ಜನ್ಮ ತೆಗೆದುಕೊಳ್ಳುತ್ತೇವೆ. ಈ ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ. ಮನೆಯು ಹಳೆಯದಾದಾಗ ಹೊಸಮನೆಯ ಖುಷಿಯಿರುತ್ತದೆಯಲ್ಲವೆ. ಎಷ್ಟು ಒಳ್ಳೊಳ್ಳೆಯ
ಮಾರ್ಬಲ್ನಿಂದ ಕೂಡಿದ ಮನೆಗಳನ್ನು ಕಟ್ಟುತ್ತೀರಿ. ಹೇಗೆ ಜೈನರ ಬಳಿ ಬಹಳಷ್ಟು ಹಣವಿರುತ್ತದೆ. ಅವರು
ತಮ್ಮನ್ನು ಉತ್ತಮಕುಲದವರೆಂದು ಹೇಳುತ್ತಾರೆ. ವಾಸ್ತವದಲ್ಲಿ ಇಲ್ಲಿ ಯಾವುದೂ ಉತ್ತಮಕುಲವಿಲ್ಲ.
ಉತ್ತಮಕುಲದಲ್ಲಿ ವಿವಾಹ ಮಾಡಿಕೊಳ್ಳುವುದಕ್ಕಾಗಿ ಮನೆಯನ್ನು ಹುಡುಕುತ್ತಾರೆ. ಅಲ್ಲಿ ಕುಲ,
ಇತ್ಯಾದಿಗಳ ಮಾತೇ ಇರುವುದಿಲ್ಲ. ಅಲ್ಲಿ ಒಂದೇ ದೇವತಾಕುಲವಿರುತ್ತದೆ ಮತ್ತ್ಯಾವುದೂ ಇಲ್ಲ.
ಇದಕ್ಕಾಗಿ ನಾವೆಲ್ಲಾ ಆತ್ಮಗಳು ಒಬ್ಬ ತಂದೆಯ ಮಕ್ಕಳೆಂದು ನೀವು ಸಂಗಮದಲ್ಲಿ ಅಭ್ಯಾಸ ಮಾಡುತ್ತೀರಿ.
ಮೊದಲು ಆತ್ಮ ನಂತರ ಈ ಶರೀರವು ಸಿಗುವುದು. ಪ್ರಪಂಚದಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿರುತ್ತಾರೆ.
ನೀವಂತೂ ಈಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ತಮ್ಮ ಸ್ಥಿತಿಯನ್ನು
ಜಮಾ ಮಾಡಿಕೊಳ್ಳಬೇಕಾಗಿದೆ. ತಂದೆಗೆ ಎಷ್ಟೊಂದು ಮಂದಿ ಮಕ್ಕಳಿದ್ದಾರೆ! ಎಷ್ಟು ದೊಡ್ಡ ಗೃಹಸ್ಥವಿದೆ!
ಎಷ್ಟೊಂದು ಜವಾಬ್ದಾರಿಯಿರುತ್ತದೆ! ಇವರೂ ಸಹ ಪರಿಶ್ರಮಪಡಬೇಕಾಗುತ್ತದೆ. ನಾನೇನು ಸನ್ಯಾಸಿಯಲ್ಲ,
ತಂದೆಯು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿದ್ದಾರೆ, ಬ್ರಹ್ಮ-ವಿಷ್ಣು-ಶಂಕರನಿಗೂ
ಚಿತ್ರವಿದೆಯಲ್ಲವೆ. ಬ್ರಹ್ಮನು ಎಲ್ಲರಿಗಿಂತ ಉತ್ತಮನಾಗಿದ್ದಾರೆ ಅಂದಮೇಲೆ ಅವರನ್ನು ಬಿಟ್ಟು
ತಂದೆಯು ಮತ್ತೆ ಯಾರಲ್ಲಿ ಬರುತ್ತಾರೆ? ಬ್ರಹ್ಮನು ಹೊಸದಾಗಿ ಹುಟ್ಟುವುದಿಲ್ಲ, ನಾನು ಇವರನ್ನು (ಬ್ರಹ್ಮಾ)
ದತ್ತು ಮಾಡಿಕೊಳ್ಳುತ್ತೇನೆ, ನೀವು ಹೇಗೆ ಬ್ರಾಹ್ಮಣರಾಗುತ್ತೀರಿ ಎಂದು ನೋಡುತ್ತೀರಲ್ಲವೆ. ಈ
ಮಾತುಗಳು ನಿಮಗೇ ತಿಳಿದಿದೆ ಮತ್ತ್ಯಾರಿಗೂ ತಿಳಿದಿಲ್ಲ. ಇವರು ಇಷ್ಟುಮಂದಿ
ಬ್ರಾಹ್ಮಣ-ಬ್ರಾಹ್ಮಿಣಿಯರು ಹೇಗೆ ಜನ್ಮಪಡೆಯುತ್ತಾರೆಂದು ಅವರಿಗೇನು ಗೊತ್ತು? ಒಂದೊಂದು ಮಾತಿನಲ್ಲಿ
ಎಷ್ಟೊಂದು ತಿಳಿಸಬೇಕಾಗುತ್ತದೆ. ಇವು ಬಹಳ ಗುಹ್ಯಮಾತುಗಳಾಗಿವೆ. ಇವರು
ವ್ಯಕ್ತಬ್ರಹ್ಮಾ(ಸಾಕಾರಬ್ರಹ್ಮಾ) ಅವರು ಅವ್ಯಕ್ತ ಬ್ರಹ್ಮಾ. ಇವರು ಪವಿತ್ರರಾಗಿ ನಂತರ
ಅವ್ಯಕ್ತರಾಗಿಬಿಡುತ್ತಾರೆ. ಇವರೂ ಸಹ ಹೇಳುತ್ತಾರೆ- ನಾನು ಈ ಸಮಯದಲ್ಲಿ ಪವಿತ್ರನಿಲ್ಲ, ನಾನೀಗ ಆ
ರೀತಿ ಪವಿತ್ರನಾಗುತ್ತಿದ್ದೇನೆ. ಪ್ರಜಾಪಿತನು ಇಲ್ಲಿಯೇ ಬೇಕಲ್ಲವೆ ಇಲ್ಲದಿದ್ದರೆ ಮತ್ತೆಲ್ಲಿಂದ
ಬರುವರು? ತಂದೆ ಸ್ವತಃ ತಿಳಿಸುತ್ತಾರೆ, ನಾನು ಪತಿತ ಶರೀರದಲ್ಲಿ ಬರುತ್ತೇನೆ, ಖಂಡಿತವಾಗಿ ಇವರಿಗೆ
ಪ್ರಜಾಪಿತ ಎನ್ನುವರು. ಇಂಡಿಪೆಂಡೆಂಟ್- ಸೂಕ್ಷ್ಮವತನದಲ್ಲಿದ್ದರೆ ಪ್ರಜಾಪಿತನೆಂದು ಹೇಳುವುದಿಲ್ಲ.
ಅಲ್ಲಿ ಪ್ರಜೆಗಳೇನು ಮಾಡುವರು! ಇವರು ಸ್ವಯಂ ಇಂಡಿಪೆಂಡೆಂಟ್ ಪವಿತ್ರರಾಗಿಬಿಡುತ್ತಾರೆ. ಹೇಗೆ ಇವರೂ
ಪುರುಷಾರ್ಥ ಮಾಡುತ್ತಾರೆಯೋ ಹಾಗೆಯೇ ನೀವೂ ಪುರುಷಾರ್ಥ ಮಾಡಿ ಸ್ವಯಂ ಪವಿತ್ರರಾಗಿಬಿಡುತ್ತೀರಿ.
ವಿಶ್ವದ ಮಾಲೀಕರಾಗುತ್ತೀರಲ್ಲವೆ. ಸ್ವರ್ಗವೇ ಬೇರೆ, ನರಕವೇ ಬೇರೆಯಾಗಿದೆ. ಈಗಂತೂ ಎಷ್ಟೊಂದು
ತುಂಡು-ತುಂಡುಗಳಾಗಿಬಿಟ್ಟಿದೆ. ಇದು 5000 ವರ್ಷಗಳ ಮೊದಲಿನ ಮಾತಾಗಿದೆ ಯಾವಾಗ ಇವರ ರಾಜ್ಯವಿತ್ತು,
ಇದಕ್ಕೆ ಅವರು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಯಾರು ಕಲ್ಪದ ಹಿಂದೆ ತಿಳಿದುಕೊಂಡಿರುವರೋ
ಅವರೇ ಈ ಮಾತುಗಳನ್ನು ಈಗಲೂ ತಿಳಿದುಕೊಳ್ಳುತ್ತಾರೆ. ನೀವು ನೋಡುತ್ತೀರಿ, ಇಲ್ಲಿ ಮುಸಲ್ಮಾನರು,
ಪಾರಸಿಗಳು ಮೊದಲಾದವರೆಲ್ಲರು ಬರುತ್ತಾರೆ. ಕೆಲವರು ಮುಸಲ್ಮಾನರೇ ಇಲ್ಲಿ ಹಿಂದೂಗಳಿಗೆ ಜ್ಞಾನವನ್ನು
ಕೊಡುತ್ತಿದ್ದಾರೆ. ಆಶ್ಚರ್ಯವಲ್ಲವೆ. ತಿಳಿದುಕೊಳ್ಳಿ- ಯಾರಾದರೂ ಸಿಖ್ಖ್ ಧರ್ಮದವರಾಗಿದ್ದರೆ ಅವರೂ
ಸಹ ಇಲ್ಲಿ ರಾಜಯೋಗವನ್ನು ಅನ್ಯರಿಗೆ ಕಲಿಸುತ್ತಾರೆ. ಯಾರು ಮತಾಂತರಗೊಂಡಿದ್ದಾರೆಯೋ ಅವರು ಮತ್ತೆ
ವರ್ಗಾಯಿತರಾಗಿ ದೇವತಾಕುಲದಲ್ಲಿ ಬಂದುಬಿಡುತ್ತಾರೆ. ಸಸಿಯು ನಾಟಿಯಾಗುತ್ತದೆ, ತಮ್ಮ ಬಳಿ
ಕ್ರಿಶ್ಚಿಯನ್ನರು, ಪಾರಸಿಗಳು ಬರುತ್ತಾರೆ. ಬೌದ್ಧಿಯರೂ ಬರುತ್ತಾರೆ. ನಿಮಗೆ ತಿಳಿದಿದೆ- ಸಮಯವು
ಸಮೀಪ ಬಂದಾಗ ನಾಲ್ಕಾರುಕಡೆ ನಮ್ಮ ಹೆಸರು ಪ್ರಸಿದ್ಧವಾಗುವುದು. ನಿಮ್ಮ ಒಂದು ಭಾಷಣದಿಂದಲೇ ಅನೇಕರು
ನಿಮ್ಮ ಬಳಿ ಬಂದುಬಿಡುತ್ತಾರೆ, ಇದು ನಮ್ಮ ಸತ್ಯವಾದ ಧರ್ಮವೆಂದು ಎಲ್ಲರಿಗೂ ಸ್ಮೃತಿ ಬರುತ್ತದೆ.
ಯಾರು ನಮ್ಮ ಧರ್ಮದವರಾಗಿರುವರೋ ಅವರೆಲ್ಲರೂ ಬರುವುದು ಖಚಿತವಲ್ಲವೆ. ಲಕ್ಷಾಂತರ ವರ್ಷಗಳ ಮಾತಿಲ್ಲ.
ತಂದೆಯು ತಿಳಿಸುತ್ತಾರೆ- ನೀವು ನೆನ್ನೆಯ ದಿನ ದೇವತೆಗಳಾಗಿದ್ದಿರಿ ಈಗ ಮತ್ತೆ ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ.
ನೀವು ಸತ್ಯ-ಸತ್ಯವಾದ
ಪಾಂಡವರಾಗಿದ್ದೀರಿ. ಪಾಂಡವರು ಎಂದರೆ ಪಂಡರು (ಮಾರ್ಗದರ್ಶಕರು) ಅವರು
ಸ್ಥೂಲಮಾರ್ಗದರ್ಶಕರಾಗಿರುತ್ತಾರೆ. ನೀವು ಬ್ರಾಹ್ಮಣರು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ. ನೀವೀಗ
ಬೇಹದ್ದಿನ ತಂದೆಯಿಂದ ಓದುತ್ತಿದ್ದೀರಿ. ಈ ನಶೆಯು ನಿಮಗೆ ಬಹಳ ಇರಬೇಕು. ನಾವು ತಂದೆಯ ಬಳಿ
ಹೋಗುತ್ತೇವೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅವರು ನಮ್ಮ ತಂದೆ, ಶಿಕ್ಷಕನೂ ಆಗಿದ್ದಾರೆ.
ಇದರಲ್ಲಿ ಯಾವುದೇ ಟೇಬಲ್-ಕುರ್ಚಿ ಇತ್ಯಾದಿಗಳ ಅವಶ್ಯಕತೆಯಿಲ್ಲ. ನೀವು ಬರೆಯುತ್ತೀರೆಂದರೂ ಸಹ
ನಿಮ್ಮ ಪುರುಷಾರ್ಥಕ್ಕಾಗಿ. ವಾಸ್ತವದಲ್ಲಿ ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಶಿವತಂದೆಯು
ಪೆನ್ನಿನಿಂದ ಬರೆಯುತ್ತಾರೆಯೇ? ನಿಮಗೆ ಪತ್ರವನ್ನು ಬರೆಯಲು ಪೆನ್ಸಿಲ್ ಇತ್ಯಾದಿಗಳನ್ನು
ತೆಗೆದುಕೊಳ್ಳುತ್ತಾರೆ. ಶಿವತಂದೆಯ ಕೆಂಪು ಅಕ್ಷರಗಳು ಬಂದಿದೆಯೆಂದು ತಿಳಿಯುತ್ತೀರಿ. ತಂದೆಯು
ಆತ್ಮೀಯ ಮಕ್ಕಳೇ ಎಂದು ಬರೆಯುತ್ತಾರೆ, ಆತ್ಮೀಯ ತಂದೆಯೇ ಎಂದು ಮಕ್ಕಳೂ ತಿಳಿಯುತ್ತೀರಿ. ಅವರು ಬಹಳ
ಶ್ರೇಷ್ಠಾತಿಶ್ರೇಷ್ಠ ಆಗಿದ್ದಾರೆ. ಇವರ ಮತದಂತೆ ನಡೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ-
ಕಾಮಮಹಾಶತ್ರುವಾಗಿದೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುವುದಾಗಿದೆ. ಈ ಭೂತಕ್ಕೆ ವಶವಾಗಬೇಡಿ,
ಪವಿತ್ರರಾಗಿರಿ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ, ಈಗ ನೀವು ಮಕ್ಕಳಿಗೆ ರಾಜ್ಯಭಾರ ಮಾಡುವ ಬಹಳ
ದೊಡ್ಡಶಕ್ತಿಯು ಸಿಗುತ್ತದೆ ಅದನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ನೀವು ಎಷ್ಟೊಂದು
ಸುಖಿಯಾಗುತ್ತೀರಿ ಅಂದಾಗ ಈ ವಿದ್ಯಾಭ್ಯಾಸದ ಮೇಲೆ ಎಷ್ಟೊಂದು ಗಮನವಿರಬೇಕು. ನಮಗೆ ರಾಜ್ಯಭಾಗ್ಯವು
ಸಿಗುತ್ತದೆ, ನಾವು ಹೇಗಿದ್ದವರು ಏನಾಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ಭಗವಾನುವಾಚ ಇದೆಯಲ್ಲವೆ-
ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಯಾರಿಗೆ
ಭಗವಂತನೆಂದು ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಓ ಬಾಬಾ ಎಂದು ಆತ್ಮವೇ ಕರೆಯುತ್ತದೆ.
ಅಂದಮೇಲೆ ಅವರು ಯಾವಾಗ ಮತ್ತು ಹೇಗೆ ಬರುತ್ತಾರೆಂದು ತಿಳಿದಿರಬೇಕಲ್ಲವೆ. ಮನುಷ್ಯರೇ ನಾಟಕದ
ಆದಿ-ಮಧ್ಯ-ಅಂತ್ಯದ ಕಾಲಾವಧಿಯನ್ನು ತಿಳಿದುಕೊಳ್ಳಬೇಕಾಗಿದೆಯಲ್ಲವೆ. ಇದನ್ನು ತಿಳಿಯುವುದರಿಂದ ನೀವು
ದೇವತೆಗಳಾಗಿಬಿಡುತ್ತೀರಿ. ಜ್ಞಾನವಿರುವುದೇ ಸದ್ಗತಿಗಾಗಿ, ಈ ಸಮಯವು ಕಲಿಯುಗದ ಅಂತ್ಯವಾಗಿದೆ.
ಎಲ್ಲರೂ ದುರ್ಗತಿಯಲ್ಲಿದ್ದಾರೆ. ಸತ್ಯಯುಗದಲ್ಲಿ ಸದ್ಗತಿಯಿರುತ್ತದೆ, ಸರ್ವರ ಸದ್ಗತಿ ಮಾಡಲು
ತಂದೆಯು ಬಂದಿದ್ದಾರೆ. ಎಲ್ಲರನ್ನು ಜಾಗೃತ ಮಾಡಲು ಬಂದಿದ್ದಾರೆಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಇದೇನು ಸ್ಮಶಾನವಲ್ಲ ಆದರೆ ಘೋರ ಅಂಧಕಾರದಲ್ಲಿ ಮಲಗಿದ್ದಾರೆ. ಅವರನ್ನು
ಜಾಗೃತ ಮಾಡಲು ಬರುತ್ತಾರೆ. ಯಾವ ಮಕ್ಕಳು ಘೋರ ಅಂಧಕಾರದ ನಿದ್ರೆಯಿಂದ ಎಚ್ಚರವಾಗುತ್ತಾರೆಯೋ
ಅವರಲ್ಲಿ ಬಹಳ ಖುಷಿಯಿರುತ್ತದೆ. ನಾವು ಶಿವತಂದೆಯ ಮಕ್ಕಳಾಗಿದ್ದೇವೆ, ಯಾವುದೇ ಪ್ರಕಾರದ
ಚಿಂತೆಯಿಲ್ಲ. ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅಳುವ ಮಾತೇ
ಇರುವುದಿಲ್ಲ. ಈಗ ಇದು ದುಃಖದ ಪ್ರಪಂಚವಾಗಿದೆ, ಅದು ಸದಾ ಹರ್ಷಿತವಾಗಿರುವ ಪ್ರಪಂಚವಾಗಿರುತ್ತದೆ.
ಅವರ ಚಿತ್ರಗಳನ್ನು ನೋಡಿ! ಹೇಗೆ ಶೋಭನಿಕ, ಹರ್ಷಿತಮುಖಿಗಳನ್ನಾಗಿ ತೋರಿಸುತ್ತಾರೆ. ಆ
ಮುಖಲಕ್ಷಣಗಳನ್ನು ಇಲ್ಲಿ ರಚಿಸಲು ಸಾಧ್ಯವಿಲ್ಲ. ಇವರ ರೀತಿಯೇ ಮುಖಲಕ್ಷಣಗಳು ಕಾಣುತ್ತವೆ ಎಂದು
ಬುದ್ಧಿಯಿಂದ ತಿಳಿಯುತ್ತಾರೆ. ನೀವು ಮಧುರಾತಿ ಮಧುರ ಮಕ್ಕಳಿಗೆ ಈಗ ಸ್ಮೃತಿ ಬಂದಿದೆ- ಭವಿಷ್ಯದಲ್ಲಿ
ನಾವು ಅಮರಪುರಿಯ ರಾಜರಾಗುತ್ತೇವೆ. ಈ ಮೃತ್ಯುಲೋಕ ಬಿದುರಿನ ಕಾಡಿಗೆ ಬೆಂಕಿ ಬೀಳುವುದಿದೆ.
ಅಂತರ್ಯುದ್ಧದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಹೇಗೆ ಸಾಯಿಸುತ್ತಾರೆ, ನಾವು ಯಾರನ್ನು
ಸಾಯಿಸುತ್ತೇವೆ ಎಂಬುದೂ ಸಹ ಯಾರಿಗೂ ತಿಳಿಯುವುದಿಲ್ಲ. ಹಾಹಾಕಾರದ ನಂತರ ಜಯಜಯಕಾರವಾಗುವುದು.
ನಿಮ್ಮದು ವಿಜಯ ಮತ್ತು ಉಳಿದೆಲ್ಲರ ವಿನಾಶವಾಗಿಬಿಡುತ್ತದೆ. ರುದ್ರಮಾಲೆಯಲ್ಲಿ ಬಹಳಷ್ಟು
ವಿಸ್ತಾರವಾಗಿ ಹರಡಿದೆ. ಜ್ಞಾನವು ಬೀಜವಾಗಿದೆ, ಬೀಜವು ಎಷ್ಟು ಚಿಕ್ಕದಾಗಿದೆ. ಬೀಜರೂಪನು
ತಂದೆಯಾಗಿದ್ದಾರೆ. ಈ ವೃಕ್ಷದ ಪಾಲನೆ, ವಿನಾಶ ಹೇಗಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ.
ಇದು ವಿಭಿನ್ನ ಧರ್ಮಗಳ ತಲೆಕೆಳಗಾದ ವೃಕ್ಷವಾಗಿದೆ. ಪ್ರಪಂಚದಲ್ಲಿ ಇದು ಯಾರೊಬ್ಬರಿಗೂ ತಿಳಿದಿಲ್ಲ.
ಈಗ ಮಕ್ಕಳು ತಂದೆಯನ್ನು ನೆನಪು ಮಾಡುವ ಬಹಳ ಪರಿಶ್ರಮಪಡಬೇಕಾಗಿದೆ. ಆಗಲೇ ವಿಕರ್ಮವು
ವಿನಾಶವಾಗಿಬಿಡುವುದು. ಈ ಗೀತೆಯನ್ನು ಓದುವವರೂ ಸಹ ಮನ್ಮಾನಭವ, ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಮನುಷ್ಯರು ಇದರ
ಅರ್ಥವನ್ನು ತಿಳಿದುಕೊಂಡಿಲ್ಲ. ಅದು ಭಕ್ತಿಮಾರ್ಗವಾಗಿದೆ, ಇದು ಜ್ಞಾನಮಾರ್ಗವಾಗಿದೆ. ಈ ರಾಜಧಾನಿಯು
ಸ್ಥಾಪನೆಯಾಗುತ್ತಿದೆ, ಯಾವುದೇ ಚಿಂತೆಯ ಮಾತಿಲ್ಲ. ಸ್ವಲ್ಪಜ್ಞಾನವನ್ನು ಕೇಳಿರುವವರೂ ಸಹ
ಪ್ರಜೆಗಳಲ್ಲಿ ಬರುತ್ತಾರೆ, ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಬುದ್ಧಿಯಲ್ಲಿ ಈ
ತಿಳುವಳಿಕೆಯಿದೆಯಲ್ಲವೆ. ನಾವು ಹೊಸ ಪ್ರಪಂಚದಲ್ಲಿ ರಾಜಕುಮಾರರಾಗುತ್ತೇವೆ, ಹೇಗೆ ವಿದ್ಯಾರ್ಥಿಗಳು
ಪರೀಕ್ಷೆಯನ್ನು ತೇರ್ಗಡೆ ಮಾಡಿದಾಗ ಅವರಿಗೆ ಎಷ್ಟೊಂದು ಮಾಲೀಕರಾಗುತ್ತೇವೆ. ಯಾವುದೇ ಮಾತಿನಲ್ಲಿ
ಎಂದೂ ಮುನಿಸಿಕೊಳ್ಳಬಾರದು. ಬ್ರಾಹ್ಮಿಣಿಯೊಂದಿಗೆ ಆಗುವುದಿಲ್ಲವೆಂದರೆ ತಂದೆಯೊಂದಿಗೆ
ಮುನಿಸಿಕೊಳ್ಳುತ್ತಾರೆ. ಅರೆ! ನೀವು ತಂದೆಯೊಂದಿಗಾದರೂ ಬುದ್ಧಿಯನ್ನು ಜೋಡಿಸಿ. ಅವರನ್ನು
ಪ್ರೀತಿಯಿಂದ ನೆನಪು ಮಾಡಿ- ಬಾಬಾ, ನಾವು ತಮ್ಮನ್ನೇ ನೆನಪು ಮಾಡುತ್ತಾ-ಮಾಡುತ್ತಾ ಮನೆಗೆ
ಬಂದುಬಿಡುತ್ತೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಅತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಯಾವುದೇ
ಮಾತಿನ ಚಿಂತೆ ಮಾಡಬಾರದು. ಸದಾ ಹರ್ಷಿತರಾಗಿರಬೇಕು. ಸ್ಮೃತಿಯಿರಲಿ- ನಾವು ಶಿವತಂದೆಯ
ಮಕ್ಕಳಾಗಿದ್ದೇವೆ, ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ.
2) ತಮ್ಮ ಸ್ಥಿತಿಯನ್ನು
ಏಕರಸವಾಗಿಟ್ಟುಕೊಳ್ಳಲು ಆತ್ಮಾಭಿಮಾನಿಗಳಾಗುವ ಪುರುಷಾರ್ಥ ಮಾಡಬೇಕಾಗಿದೆ. ಈ ಹಳೆಯ ಮನೆಯೊಂದಿಗಿನ
ಮಮತ್ವವನ್ನು ಕಳೆಯಬೇಕಾಗಿದೆ.
ವರದಾನ:
ಮನನ ಶಕ್ತಿಯ
ಮುಖಾಂತರ ಬುದ್ಧಿಯನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳುವಂತಹ ಮಸ್ಟರ್ ಸರ್ವ ಶಕ್ತಿಮಾನ್ ಭವ
ಮನನ ಶಕ್ತಿಯೇ ದಿವ್ಯ
ಬುದ್ಧಿಯ ಪೌಷ್ಠಿಕ ಆಹಾರವಾಗಿದೆ. ಹೇಗೆ ಭಕ್ತಿಯಲ್ಲಿ ಸ್ಮರಣೆ ಮಾಡುವ ಅಭ್ಯಾಸಿಯಾಗಿರುತ್ತಾರೆ,
ಹಾಗೆಯೆ ಜ್ಞಾನದಲ್ಲಿ ಸ್ಮೃತಿಯ ಶಕ್ತಿ ಆಗಿದೆ. ಈ ಶಕ್ತಿಯ ಮುಖಾಂತರ ಮಾಸ್ಟರ್ ಸರ್ವ ಶಕ್ತಿಮಾನ್
ಆಗಿ. ಪ್ರತಿದಿನ ಅಮೃತವೇಳೆ ತಮ್ಮ ಒಂದು ಟೈಟಲ್ ಅನ್ನು ಸ್ಮೃತಿಯಲ್ಲಿ ತನ್ನಿ ಮತ್ತು ಮನನ
ಮಾಡುತ್ತಿರಿ ಆಗ ಮನನ ಶಕ್ತಿಯಿಂದ ಬುದ್ಧಿ ಶಕ್ತಿಶಾಲಿಯಾಗಿರುತ್ತದೆ. ಶಕ್ತಿಶಾಲಿ ಬುದ್ಧಿಯ ಮೇಲೆ
ಮಾಯೆಯ ವಾರ್ ಆಗಲು ಸಾಧ್ಯವಿಲ್ಲ, ಪರವಶವಾಗಲು ಸಾಧ್ಯವಿಲ್ಲ ಏಕೆಂದರೆ ಮಾಯೆ ಎಲ್ಲಕ್ಕಿಂತ ಮೊದಲು
ವ್ಯರ್ಥ ಸಂಕಲ್ಪರೂಪಿ ಬಾಣದ ಮೂಲಕ ದಿವ್ಯ ಬುದ್ಧಿಯನ್ನೇ ಬಲಹೀನ ಮಾಡಿಬಿಡುವುದು, ಈ ಬಲಹೀನತೆಯಿಂದ
ತಪ್ಪಿಸಿಕೊಳ್ಳುವ ಸಾಧನವೇ ಆಗಿದೆ ಮನನ ಶಕ್ತಿ.
ಸ್ಲೋಗನ್:
ಆಜ್ಞಾಕಾರಿ
ಮಕ್ಕಳೇ ಆಶಿರ್ವಾದಕ್ಕೆ ಪಾತ್ರರಾಗಿದ್ದಾರೆ, ಆಶೀರ್ವಾದದ ಫ್ರಭಾವ ಹೃದಯವನ್ನು ಸದಾ
ಸಂತುಷ್ಠವಾಗಿಟ್ಟಿರುತ್ತದೆ.
ಅವ್ಯಕ್ತ ಸೂಚನೆಗಳು:
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಸದಾ ಬೇಹದ್ದಿನ ಆತ್ಮಿಕ
ದೃಷ್ಟಿ, ಸಹೋದರ -ಸಹೋದರನ ವೃತ್ತಿಯಿಂದ ಯಾವುದೇ ಆತ್ಮನ ಪ್ರತಿ ಶುಭ ಭಾವನೆ ಇಡುವ ಫಲ ಅವಶ್ಯವಾಗಿ
ಸಿಗುತ್ತದೆ ಆದ್ದರಿಂದ ಪುರುಷಾರ್ಥದಲ್ಲಿ ದಣಿಯಬೇಡಿ, ಹೃದಯವಿಧೀರ್ಣರಾಗಬೇಡಿ. ನಿಶ್ಚಯ ಬುದ್ಧಿ
ವಿಜಯಂತಿ ಆಗಿದ್ದೀರಿ, ನನ್ನತನದ ಸಂಬಂಧದಿಂದ ಭಿನ್ನರಾಗಿ ಶಾಂತಿ ಹಾಗೂ ಶಕ್ತಿಗಳ ಸಹಯೋಗವನ್ನು
ಆತ್ಮರಿಗೆ ನೀಡುತ್ತಿರಿ.