07.07.24    Avyakt Bapdada     Kannada Murli    11.11.20     Om Shanti     Madhuban


ಸಂಪೂರ್ಣತೆಯ ಸಮೀಪತೆಯ ಮೂಲಕ ಪ್ರತ್ಯಕ್ಷತೆಯ ಶ್ರೇಷ್ಠ ಸಮಯವನ್ನು ಸಮೀಪದಲ್ಲಿ ತೆಗೆದುಕೊಂಡು ಬನ್ನಿ


ಇಂದು ಬಾಪ್ದಾದಾರವರು ತಮ್ಮ ಹೋಲಿಯಸ್ಟ್(ಪವಿತ್ರ). ಹೈಯೆಸ್ಟ(ಶ್ರೇಷ್ಠ), ಲಕ್ಕಿಯಸ್ಟ್ (ಅದೃಷ್ಟವಂತ), ಸ್ವೀಟೆಸ್ಟ್ (ಮಧುರ) ಮಕ್ಕಳನ್ನು ನೋಡುತ್ತಿದ್ದರು. ಇಡೀ ವಿಶ್ವದಲ್ಲಿ ಸಮಯ ಪ್ರತಿ ಸಮಯ ಪವಿತ್ರ ಆತ್ಮಗಳು ಬರುತ್ತಾ ಇರುತ್ತವೆ. ನೀವು ಸಹ ಹೋಲಿಯಸ್ಟ್ ಆಗಿದ್ದೀರಿ ಆದರೆ ನೀವು ಶ್ರೇಷ್ಠ ಆತ್ಮಗಳು ಪ್ರಕೃತಿಯ ಮೇಲೆ ವಿಜಯಿಗಳಾಗಿ, ಪ್ರಕೃತಿಯನ್ನು ಸಹ ಸತೋಪ್ರಧಾನವನ್ನಾಗಿ ಮಾಡಿಬಿಡುತ್ತೀರಿ. ನಿಮ್ಮ ಪವಿತ್ರತೆಯ ಶಕ್ತಿ ಪ್ರಕೃತಿಯನ್ನು ಸಹ ಸತೋ ಪ್ರಧಾನ ಪವಿತ್ರವನ್ನಾಗಿ ಮಾಡುತ್ತದೆ. ಆದ್ದರಿಂದ ನೀವೆಲ್ಲ ಆತ್ಮರು ಪ್ರಕೃತಿಯ ಈ ಶರೀರವನ್ನು ಸಹ ಪವಿತ್ರ ಪಡೆದುಕೊಳ್ಳುತ್ತೀರಿ. ನಿಮ್ಮ ಪವಿತ್ರತೆಯ ಶಕ್ತಿ ವಿಶ್ವದ ಜಡ, ಚೈತನ್ಯ, ಸರ್ವರನ್ನು ಪವಿತ್ರರನ್ನಾಗಿ ಮಾಡಿಬಿಡುತ್ತದೆ ಆದ್ದರಿಂದ ನಿಮಗೆ ಪವಿತ್ರ ಶರೀರವು ಪ್ರಾಪ್ತಿಯಾಗುತ್ತದೆ. ಆತ್ಮವು ಪವಿತ್ರ, ಶರೀರವು ಪವಿತ್ರ ಹಾಗೂ ಪ್ರಕೃತಿಯ ಸಾಧನಗಳು ಪಾವನವಾಗಿರುತ್ತದೆ. ಆದ್ದರಿಂದ ವಿಶ್ವದಲ್ಲಿ ಹೋಲಿಯಸ್ಟ್ ಆತ್ಮಗಳಾಗಿದ್ದೀರಿ. ಹೋಲಿಯಸ್ಟ್ ಆಗಿದ್ದೀರಾ? ತಮ್ಮನ್ನು ತಾವು- ನಾವು ವಿಶ್ವದಲ್ಲಿ ಹೋಲಿಯಸ್ಟ್ ಆತ್ಮಗಳು ಎಂದು ತಿಳಿಯುತ್ತೀರಾ? ಹೈಯೆಸ್ಟ್ ಸಹ ಆಗಿದ್ದೀರಿ, ಏಕೆ ಹೈಯೆಸ್ಟ್ ಆಗಿದ್ದೀರಿ? ಏಕೆಂದರೆ ಶ್ರೇಷ್ಠಾತಿ ಶ್ರೇಷ್ಠ ಭಗವಂತನನ್ನು ಗುರುತಿಸಿದಿರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮೂಲಕ ಶ್ರೇಷ್ಠಾತಿ ಶ್ರೇಷ್ಠ ಆತ್ಮಗಳಾಗಿಬಿಟ್ಟಿರಿ. ಸಾಧಾರಣ ಸ್ಮೃತಿ ವೃತ್ತಿ, ದೃಷ್ಟಿ, ಕೃತಿ ಎಲ್ಲವೂ ಬದಲಾಗಿ ಶ್ರೇಷ್ಠ ಸ್ಮೃತಿ ಸ್ವರೂಪ, ಶ್ರೇಷ್ಠ ವೃತ್ತಿ, ಶ್ರೇಷ್ಠ ದೃಷ್ಟಿ ಆಗಿ ಹೋಯಿತು. ಯಾರನ್ನೇ ಭೇಟಿಯಾಗುತ್ತೀರಿ ಎಂದರೆ ಯಾವ ವೃತ್ತಿಯಿಂದ ಭೇಟಿಯಾಗುತ್ತೀರಿ? ಬ್ರದರ್ ಹುಡ್ (ಸಹೋದರ) ವೃತ್ತಿಯಿಂದ, ಆತ್ಮಿಕ ದೃಷ್ಟಿಯಿಂದ, ಕಲ್ಯಾಣದ ಭಾವನೆಯಿಂದ, ಪ್ರಭು ಪರಿವಾರದ ಭಾವದಿಂದ. ಎಂದ ಮೇಲೆ ಹೈಯೆಸ್ಟ್ ಆಗಿಬಿಟ್ಟಿರಿ ಅಲ್ಲವೇ? ಬದಲಾಗಿ ಬಿಟ್ಟಿರಿ ಅಲ್ಲವೇ! ಹಾಗೂ ಎಷ್ಟು ಅದೃಷ್ಟವಂತರಾಗಿದ್ದೀರಿ? ಯಾವುದೋ ಜ್ಯೋತಿಷಿ ನಿಮ್ಮ ಭಾಗ್ಯದ ಗೆರೆಯನ್ನು ಎಳೆದಿಲ್ಲ, ಆದರೆ ಸ್ವಯಂ ಭಾಗ್ಯವಿಧಾತ ನಿಮ್ಮ ಭಾಗ್ಯದ ಗೆರೆಯನ್ನು ಬರೆದಿದ್ದಾರೆ. ಹಾಗೂ ಎಷ್ಟು ದೊಡ್ಡ ಗ್ಯಾರಂಟಿಯನ್ನು ಕೊಟ್ಟಿದ್ದಾರೆ? 21 ಜನ್ಮದ ಅದೃಷ್ಟದ ಗೆರೆಯ ಅವಿನಾಶಿ ಗ್ಯಾರಂಟಿ ಕೊಟ್ಟಿದ್ದಾರೆ. ಒಂದು ಜನ್ಮದಲ್ಲ, 21 ಜನ್ಮ ಎಂದು ಸಹ ದುಃಖ ಹಾಗೂ ಅಶಾಂತಿಯ ಅನುಭವ ಆಗುವುದಿಲ್ಲ. ಸದಾ ಸುಖಿ ಆಗಿರುವಿರಿ. ಜೀವನದಲ್ಲಿ ಮೂರು ಮಾತುಗಳು ಬೇಕಾಗಿರುತ್ತದೆ- ಹೆಲ್ತ್(ಆರೋಗ್ಯ), ವೆಲ್ತ್(ಸಂಪತ್ತು), ಹಾಗೂ ಹ್ಯಾಪಿ(ಸಂತೋಷ). ಈ ಮೂರು ಸಹ ನಿಮ್ಮೆಲ್ಲರಿಗೂ ತಂದೆಯ ಮೂಲಕ ಆಸ್ತಿಯಲ್ಲಿ ಪ್ರಾಪ್ತಿಯಾಗಿ ಹೋಯಿತು. ಗ್ಯಾರಂಟಿ ಆಗಿದೆ ಅಲ್ಲವೇ, 21 ಜನ್ಮಕ್ಕಾಗಿ? ಎಲ್ಲರೂ ಗ್ಯಾರಂಟಿ ಕೊಂಡಿದ್ದೀರಾ? ಹಿಂದೆ ಕುಳಿತವರಿಗೆ ಗ್ಯಾರಂಟಿ ಸಿಕ್ಕಿದೆಯಾ? ಎಲ್ಲರೂ ಕೈ ಎತ್ತುತ್ತಿದ್ದಾರೆ, ಬಹಳ ಒಳ್ಳೆಯದು. ತಂದೆಗೆ ಮಕ್ಕಳಾಗುವುದು ಎಂದರೆ ತಂದೆಯ ಮೂಲಕ ಆಸ್ತಿ ಸಿಗುವುದು. ಮಕ್ಕಳು ಆಗುತ್ತಿಲ್ಲ, ಆಗುತ್ತಿದ್ದೀರಾ? ಮಕ್ಕಳು ಆಗುತ್ತಿದ್ದೀರಾ? ಅಥವಾ ಆಗಿಬಿಟ್ಟಿದ್ದೀರಾ? ಮಕ್ಕಳು ಆಗಬೇಕಾಗಿಲ್ಲ. ಜನ್ಮ ಪಡೆದಿರಿ ಹಾಗೂ ಮಕ್ಕಳಾದಿರಿ. ಜನ್ಮ ತೆಗೆದುಕೊಳ್ಳುತ್ತಲೇ ತಂದೆಯ ಆಸ್ತಿಗೆ ಅಧಿಕಾರಿಯಾಗಿಬಿಟ್ಟಿರಿ. ಎಂದ ಮೇಲೆ ಇಂತಹ ಶ್ರೇಷ್ಠ ಭಾಗ್ಯವನ್ನು ತಂದೆಯ ಮೂಲಕ ಈಗ ಪ್ರಾಪ್ತಿ ಮಾಡಿಕೊಂಡಿರಿ. ಹಾಗೂ ರಿಚ್ಚೆಸ್ಟ್(ಶ್ರೀಮಂತರು) ಸಹ ಆಗಿದ್ದೀರಿ. ಬ್ರಾಹ್ಮಣ ಆತ್ಮ, ಕ್ಷತ್ರಿಯರಲ್ಲ ಬ್ರಾಹ್ಮಣ. ಬ್ರಾಹ್ಮಣ ಆತ್ಮ ನಿಶ್ಚಯದಿಂದ ಅನುಭವ ಮಾಡುತ್ತಾರೆ- ನಾನು ಶ್ರೇಷ್ಠ ಆತ್ಮ, ನಾನು ಇಂತಹವನು ಅಲ್ಲ, ಆತ್ಮ ರಿಚೆಸ್ಟ್ ಇನ್ ದಿ ವಲ್ರ್ಡ್ ಆಗಿದ್ದೇನೆ (ಪ್ರಪಂಚದಲ್ಲಿ ಎಲ್ಲರಿಗಿಂತ ಶ್ರೀಮಂತ). ಬ್ರಾಹ್ಮಣರಾಗಿದ್ದೀರಿ ಎಂದರೆ ರಿಚೆಸ್ಟ್ ಇನ್ ದಿ ವಲ್ರ್ಡ್ ಆಗಿದ್ದೀರಿ ಏಕೆಂದರೆ ಬ್ರಾಹ್ಮಣ ಆತ್ಮರಿಗಾಗಿ ಪರಮಾತ್ಮ ನೆನಪಿನಿಂದ ಪ್ರತಿಯೊಂದು ಹೆಜ್ಜೆಯಲ್ಲಿ ಪದಮವಿದೆ. ಎಂದ ಮೇಲೆ ಇಡೀ ದಿನದಲ್ಲಿ ಎಷ್ಟು ಹೆಜ್ಜೆಯನ್ನು ಹಾಕುತ್ತೀರಿ? ಯೋಚಿಸಿ. ಪ್ರತಿಯೊಂದು ಹೆಜ್ಜೆಯಲ್ಲಿ ಪದಮ, ಎಂದ ಮೇಲೆ ಇಡೀ ದಿನದಲ್ಲಿ ಎಷ್ಟು ಪದವi ಆಯಿತು? ತಂದೆಯ ಮೂಲಕ ಇಂತಹ ಆತ್ಮಗಳಾಗಿಬಿಟ್ಟಿರಿ. ನಾನು ಬ್ರಾಹ್ಮಣ ಆತ್ಮ ಏನಾಗಿದ್ದೇನೆ. ಇದು ನೆನಪಿರುವುದು ಸಹ ಭಾಗ್ಯವಾಗಿದೆ. ಬಾಪ್ದಾದಾರವರು ಇಂದು ಪ್ರತಿಯೊಬ್ಬರ ಮಸ್ತಕದಲ್ಲಿ ಭಾಗ್ಯದ ಹೊಳೆಯುತ್ತಿರುವ ನಕ್ಷತ್ರವನ್ನು ನೋಡುತ್ತಿದ್ದರು. ನೀವು ಸಹ ತಮ್ಮ ಭಾಗ್ಯದ ನಕ್ಷತ್ರವನ್ನು ನೋಡುತ್ತಿರುವಿರಾ?

ಬಾಪ್ದಾದಾರವರು ಮಕ್ಕಳನ್ನು ನೋಡಿ. ಖುಷಿಯಾಗುತ್ತಾರೆಯೇ ಅಥವಾ ಮಕ್ಕಳು ತಂದೆಯನ್ನು ನೋಡಿ ಖುಷಿಯಾಗುತ್ತಾರೆಯೇ? ಯಾರು ಖುಷಿಯಾಗುತ್ತಾರೆ? ತಂದೆಯೇ ಅಥವಾ ಮಕ್ಕಳೇ? ಯಾರು? (ಮಕ್ಕಳು) ತಂದೆ ಖುಷಿಯಾಗುವುದಿಲ್ಲವೇ? ತಂದೆ ಮಕ್ಕಳನ್ನು ನೋಡಿ ಖುಷಿಯಾಗುತ್ತಾರೆ ಹಾಗೂ ಮಕ್ಕಳು ತಂದೆಯನ್ನು ನೋಡಿ ಖುಷಿಯಾಗುತ್ತಾರೆ. ಇಬ್ಬರೂ ಖುಷಿ ಪಡುತ್ತಾರೆ ಏಕೆಂದರೆ ಮಕ್ಕಳು ತಿಳಿದುಕೊಂಡಿದ್ದಾರೆ- ಈ ಪ್ರಭು ಮಿಲನ, ಈ ಪರಮಾತ್ಮ ಪ್ರೀತಿ, ಈ ಪರಮಾತ್ಮ ಆಸ್ತಿ, ಈ ಪರಮಾತ್ಮ ಪ್ರಾಪ್ತಿಗಳು ಈಗಲೇ ಪ್ರಾಪ್ತಿಯಾಗುತ್ತದೆ." ಈಗಿಲ್ಲದಿದ್ದರೆ ಮತ್ತೆ ಇನ್ನೆಂದಿಗೂ ಇಲ್ಲ". ಹೀಗಿದೆಯಲ್ಲವೇ?

ಬಾಪ್ದಾದಾರವರು ಕೇವಲ ಒಂದು ಮಾತನ್ನು ಮಕ್ಕಳಿಗೆ ರಿವೈಸ್ (ಪುನರಾವರ್ತನೆ) ಮಾಡುತ್ತಿದ್ದಾರೆ- ಯಾವ ಮಾತಿರಬಹುದು? ತಿಳಿದುಕೊಂಡು ಬಿಟ್ಟಿದ್ದೀರಿ. ಬಾಪ್ದಾದಾರವರು ಇದನ್ನೇ ರಿವೈಸ್ ಮಾಡಿಸುತ್ತಿದ್ದಾರೆ- ಈಗ ಶ್ರೇಷ್ಠ ಸಮಯವನ್ನು ಸಮೀಪ ತನ್ನಿ. ಇದು ವಿಶ್ವದ ಆತ್ಮಗಳ ಶಬ್ದವಾಗಿದೆ. ಆದರೆ ತರುವವರು ಯಾರು? ? ನೀವಾಗಿದ್ದೀರಾ ಅಥವಾ ಬೇರೆ ಯಾರಾದರೂ ಇದ್ದಾರೆಯೇ? ಇಂತಹ ಸುಮಧುರ ಶ್ರೇಷ್ಠ ಸಮಯವನ್ನು ಸಮೀಪ ತರುವಂತಹವರು ನೀವೆಲ್ಲರೂ ಆಗಿದ್ದೀರಾ? ಒಳ್ಳೆಯದು ಮತ್ತು ಎರಡನೆಯ ಮಾತು ಸಹ ಇದೆ, ಅದನ್ನು ಸಹ ತಿಳಿದುಕೊಂಡು ಬಿಟ್ಟಿದ್ದೀರಿ ಆದ್ದರಿಂದಲೇ ಎಲ್ಲರೂ ನಗುತ್ತಿರುವಿರಿ? ಒಳ್ಳೆಯದು. ಅದರ ವಿಧಿ ಏನಾಗಿದೆ?? ದಿನಾಂಕವನ್ನಾದರೂ ನಿಗದಿ ಮಾಡಿ. ಈಗ ದಿನಾಂಕ ವನ್ನು ನಿಗದಿ ಮಾಡಿದಿರಿ ಅಲ್ಲವೇ ವಿದೇಶಿಯರ ಟರ್ನ್ ನಡೆಯಬೇಕು ಎಂದು. ಈ ದಿನಾಂಕವನ್ನಂತೂ ನಿಗದಿ ಮಾಡಿಬಿಟ್ಟಿದ್ದೀರಿ. ಈ ಸಮಯವನ್ನು ಸಮೀಪ ತರುವಂತಹ ಆತ್ಮಗಳೇ, ಹೇಳಿ, ಇದರ ದಿನಾಂಕ ಯಾವುದಾಗಿದೆ? ಇದರ ದಿನಾಂಕ ಕಾಣಿಸುತ್ತದೆಯೇ? ಮೊದಲು ನಿಮ್ಮೆಲ್ಲರ ದೃಷ್ಟಿಯಲ್ಲಿ ಬರಲಿ ಆಗ ವಿಶ್ವದಲ್ಲಿ ಬರುವುದು. ಬಾಪ್ದಾದಾರವರು ಯಾವಾಗ ಅಮೃತ ವೇಳೆ ವಿಶ್ವದ ಚಕ್ರ ಹಾಕುತ್ತಾರೆ ಆಗ ನೋಡಿ ನೋಡಿ, ಕೇಳಿ ಕೇಳಿ ದಯೆ ಬರುತ್ತದೆ. ಮೋಜಿನಲ್ಲಿಯೂ ಸಹ ಇದ್ದಾರೆ ಆದರೆ ಮೋಜಿನ ಜೊತೆ ಗೊಂದಲದಲ್ಲಿಯೂ ಇದ್ದಾರೆ. ಎಂದ ಮೇಲೆ ಬಾಪ್ದಾದಾರವರು ಕೇಳುತ್ತಾರೆ- ಹೇ ದಾತಾನ ಮಕ್ಕಳು ಮಾಸ್ಟರ್ ದಾತ ಯಾವಾಗ ತಮ್ಮ ಮಾಸ್ಟರ್ ದಾತಾತನದ ಪಾತ್ರವನ್ನು ತೀವ್ರಗತಿಯಲ್ಲಿ ವಿಶ್ವದ ಮುಂದೆ ಪ್ರತ್ಯಕ್ಷ ಮಾಡುವಿರಿ? ಅಥವಾ ಇನ್ನೂ ಪರದೆಯ ಹಿಂದೆ ತಯಾರಾಗುತ್ತಿರುವಿರೆ? ತಯಾರಿ ಮಾಡುತ್ತಿರುವಿರಾ? ವಿಶ್ವ ಪರಿವರ್ತನೆ ನಿಮಿತ್ತ ಆತ್ಮಗಳು ಈಗ ವಿಶ್ವದ ಆತ್ಮಗಳ ಮೇಲೆ ದಯೆ ತೋರಿಸಿ. ಆಗಲೇಬೇಕು, ಇದಂತೂ ನಿಶ್ಚಿತವಾಗಿದೆ ಹಾಗೂ, ನೀವು ನಿಮಿತ್ತ ಆತ್ಮಗಳ ಮೂಲಕವೇ ಆಗಬೇಕು. ಎಂದ ಮೇಲೆ ಯಾವ ಮಾತಿನ ತಡವಾಗಿದೆ? ಬಾಪ್ದಾದಾರವರು ಈ ಒಂದು ಸೆರೆಮನೆ (ಕಾರ್ಯಕ್ರಮ) ನೋಡಲು ಬಯಸುತ್ತಾರೆ, - ಪ್ರತಿಯೊಂದು ಬ್ರಾಹ್ಮಣ ಮಗುವಿನ ಹೃದಯದಲ್ಲಿ ಸಂಪನ್ನತೆ ಹಾಗೂ ಸಂಪೂರ್ಣತೆಯ ಬಾವುಟ ಹಾರುತ್ತಿರುವುದು ಕಾಣಿಸಲಿ. ಯಾವಾಗ ಪ್ರತಿಯೊಂದು ಬ್ರಾಹ್ಮಣನ ಒಳಗೆ ಸಂಪೂರ್ಣತೆಯ ಬಾವುಟ ಹಾರುವುದು ಆಗಲೇ ವಿಶ್ವದಲ್ಲಿ ತಂದೆಯ ಪ್ರತ್ಯಕ್ಷತೆಯ ಬಾವುಟ ಹಾರುವುದು. ಈ ಬಾವುಟ ಹಾರುವ ಕಾರ್ಯಕ್ರಮವನ್ನು ಬಾಬ್ದಾದ ರವರು ನೋಡಲು ಬಯಸುತ್ತಾರೆ. ಹೇಗೆ ಶಿವರಾತ್ರಿ ಅಂದು ಶಿವ ಅವತಾರಣೆಯ ಬಾವುಟ ಹಾರಿಸುತ್ತೀರಿ, ಅದೇ ರೀತಿ ಈಗ ಶಿವಶಕ್ತಿ ಪಾಂಡವ ಅವತರಣೆಯ ನಗಾರಿ ಮೊಳಗಲಿ. ಒಂದು ಗೀತೆಯನ್ನು ಹಾಕುತ್ತಿರಲ್ಲವೇ-- ಶಿವ ಶಕ್ತಿಯರು ಬಂದರು. ಈಗ ವಿಶ್ವ ಈ ಗೀತೆಯನ್ನು ಹಾಡಲಿ- ಶಿವನ ಜೊತೆಗೆ ಶಕ್ತಿಯರು, ಪಾಂಡವರು ಪ್ರತ್ಯಕ್ಷವಾದರು. ಎಲ್ಲಿಯವರೆಗೂ ಪರದೆಯ ಹಿಂದೆ ಇರುವಿರಿ! ಪರದೆಯಲ್ಲಿ ಇರುವುದು ಇಷ್ಟವಾಗುತ್ತದೆಯೇ? ಸ್ವಲ್ಪ ಸ್ವಲ್ಪ ಇಷ್ಟವಾಗುತ್ತದೆಯೇ! ಇಷ್ಟವಾಗುವುದಿಲ್ಲ ! ಎಂದ ಮೇಲೆ ಪರದೆಯನ್ನು ತೆಗೆಯುವವರು ಯಾರು? ಬಾಪ್ದಾದಾರವರು ತೆಗೆಯಬೇಕೆ? ಯಾರು ತೆಗೆಯುವವರು? ಡ್ರಾಮಾ ತೆಗೆಯುತ್ತದೆಯೇ ಅಥವಾ ನೀವು ತೆಗೆಯುವಿರೆ? ಯಾವಾಗ ನೀವೇ ತೆಗೆಯುತ್ತೀರಿ ಎಂದ ಮೇಲೆ ಏಕೆ ತಡ ಮಾಡುತ್ತೀರಿ? ಎಂದ ಮೇಲೆ ಹೀಗೆ ತಿಳಿಯಿರಿ- ಪರದೆಯ ಹಿಂದೆ ಇರುವುದು ಇಷ್ಟವಾಗುತ್ತದೆ ಎಂದು? ಅಷ್ಟೇ, ಕೇವಲ ಬಾಪ್ದಾದಾರವರಿಗೆ ಈಗ ಇದೊಂದೇ ಶ್ರೇಷ್ಠ ಆಸೆ ಇದೆ, ಎಲ್ಲರೂ ಗೀತೆ ಹಾಡಲಿ- ವಾಹ! ಬಂದರು, ಬಂದುಬಿಟ್ಟರು, ಬಂದುಬಿಟ್ಟರು! ಆಗಬಹುದೇ? ನೋಡಿ ಎಲ್ಲಾ ದಾದಿಯರು ಹೇಳುತ್ತಾರೆ- ಆಗಬಹುದು. ಎಂದ ಮೇಲೆ ಇನ್ನೂ ಏಕೆ ಆಗುತ್ತಿಲ್ಲ? ಕಾರಣ ಏನಾಗಿದೆ? ? ಎಲ್ಲರೂ ಈ ರೀತಿ ಮಾಡುತ್ತಿರುವಿರಿ, ಹಾಗಾದರೆ ಕಾರಣ ಏನಾಗಿದೆ? (ಎಲ್ಲರೂ ಸಂಪನ್ನವಾಗಿಲ್ಲ) ಏಕೆ ಆಗಿಲ್ಲ? ದಿನಾಂಕವನ್ನು ಹೇಳಿ! (ದಿನಾಂಕವನ್ನು ಬಾಬಾ ನೀವೇ ಹೇಳಿ) ಬಾಪ್ದಾದಾರವರ ಮಹಾಮಂತ್ರ ನೆನಪಿದೆಯೇ? ಬಾಪ್ದಾದಾರವರು ಏನು ಹೇಳುತ್ತಾರೆ? "ಯಾವಾಗ ಅಲ್ಲ, ಈಗ". (ದಾದಿಯವರು ಹೇಳುತ್ತಿದ್ದಾರೆ- ಬಾಬಾ ಅಂತಿಮ ದಿನಾಂಕವನ್ನು ನೀವೇ ಹೇಳಿ) ಒಳ್ಳೆಯದು. ಯಾವ ದಿನಾಂಕವನ್ನು ಹೇಳುತ್ತಾರೆ, ಅದರಲ್ಲಿ ತಮ್ಮನ್ನು ಮೋಲ್ಡ್ (ಪರಿವರ್ತನೆ) ಮಾಡಿ ನಿಭಾಯಿಸುತ್ತೀರಾ? ಪಾಂಡವರು ನಿಭಾಯಿಸುತ್ತೀರಾ? ಪಕ್ಕಾ? ಒಂದು ವೇಳೆ ಹೆಚ್ಚು ಕಡಿಮೆ ಮಾಡಿದರೆ ಏನು ಮಾಡುವುದು? (ನೀವು ದಿನಾಂಕವನ್ನು ಕೊಟ್ಟರೆ ಯಾರು ಸಹ ಹೆಚ್ಚು ಕಡಿಮೆ ಮಾಡುವುದಿಲ್ಲ) ಶುಭಾಶಯಗಳು. ಒಳ್ಳೆಯದು. ಈಗ ಡೇಟ್ ಹೇಳುತ್ತೇವೆ, ನೋಡಿ. ನೋಡಿ, ಬಾಪ್ದಾದಾರವರು ದಯಾ ಹೃದಯಿ ಆಗಿದ್ದಾರೆ, ಬಾಪ್ದಾದಾರವರು ದಿನಾಂಕವನ್ನು ಹೇಳುತ್ತಾರೆ, ಗಮನವಿಟ್ಟು ಕೇಳಿ.

ಬಾಪ್ದಾದಾರವರು ಎಲ್ಲಾ ಮಕ್ಕಳಿಂದ ಈ ಶ್ರೇಷ್ಠ ಭಾವನೆಯನ್ನು ಇಡುತ್ತಾರೆ, ಆಸೆಯನ್ನು ಇಡುತ್ತಾರೆ- ಕಡಿಮೆ ಎಂದರೆ ಕಡಿಮೆ ಆರು ತಿಂಗಳಿನಲ್ಲಿ, ಆರು ತಿಂಗಳು ಎಲ್ಲಿಯವರೆಗೂ ಪೂರ್ತಿಯಾಗುವುದು? (ಮೇ ತಿಂಗಳಿಗೆ) ಮೇ ತಿಂಗಳಿನವರೆಗೂ- ಮೇ, ಮೇ (ನಾನು, ನಾನು) ಸಮಾಪ್ತಿ. ಬಾಪ್ದಾದಾರವರು ಆದರೂ ಸಹ ಮಾರ್ಜಿನ್ ಕೊಡುತ್ತಾರೆ ಕಡಿಮೆ ಎಂದರೆ ಕಡಿಮೆ ಈ ಆರು ತಿಂಗಳಿನಲ್ಲಿ, ಯಾವುದನ್ನು ಬಾಪ್ದಾದಾರವರು ಮೊದಲು ಸಹ ಹೇಳಿದ್ದರು ಹಾಗೂ ನಂತರದ ಸೀಸನ್ ನಲ್ಲಿಯೂ ಸಹ ಕೆಲಸವನ್ನು ಕೊಟ್ಟಿದ್ದರು- ತಮ್ಮನ್ನು ತಾವು ಜೀವನ್ ಮುಕ್ತ ಸ್ಥಿತಿಯ ಅನುಭವದಲ್ಲಿ ತನ್ನಿ. ಸತ್ಯುಗದ ಸೃಷ್ಟಿಯ ಜೀವನ ಮುಕ್ತಿ ಅಲ್ಲ, ಸಂಗಮ ಯುಗದ ಜೀವನ್ ಮುಕ್ತಿಯ ಸ್ಟೇಜ್. ಯಾವುದೇ ವಿಘ್ನ, ಪರಿಸ್ಥಿತಿಗಳು, ಸಾಧನಗಳು ಹಾಗೂ ನಾನು ಮತ್ತು ನನ್ನತನ, ನಾನು ದೇಹ ಅಭಿಮಾನದ ಹಾಗೂ ನನ್ನ ದೇಹ ಅಭಿಮಾನದ ಸೇವೆಯ, ಈ ಎಲ್ಲಾ ಪ್ರಭಾವಗಳಿಂದ ಮುಕ್ತರಾಗಿರಿ. ಹೀಗೆ ಹೇಳಬೇಡಿ ನಾನಂತೂ ಮುಕ್ತನಾಗಿರಲು ಬಯಸುತ್ತೇನೆ ಆದರೆ ಈ ವಿಘ್ನ ಬಂದು ಬಿಟ್ಟಿತು , ಮಾತೇ ಇಷ್ಟು ದೊಡ್ಡದಾಗಿತ್ತು. ಚಿಕ್ಕ ಮಾತಂತೂ ನಡೆದು ಹೋಗುತ್ತದೆ, ಇದು ಬಹಳ ದೊಡ್ಡ ಮಾತಾಗಿತ್ತು, ಇದು ಬಹಳ ದೊಡ್ಡ ಪೇಪರ್ ಆಗಿತ್ತು, ದೊಡ್ಡ ವಿಘ್ನವಾಗಿತ್ತು, ದೊಡ್ಡ ಪರಿಸ್ಥಿತಿಯಾಗಿತ್ತು. ಎಷ್ಟೇ ದೊಡ್ಡದಕ್ಕಿಂತ ದೊಡ್ಡ ಪರಿಸ್ಥಿತಿ, ವಿಘ್ನ, ಸಾಧನಗಳ ಆಕರ್ಷಣೆ ಎದುರಿಸಲು ಬರಲಿ, ಎದುರಿಸುತ್ತದೆ ಇದನ್ನು ಮೊದಲೆ ಹೇಳಿಬಿಡುತ್ತೇವೆ ಆದರೆ ಕಡಿಮೆ ಎಂದರೆ ಕಡಿಮೆ ಆರು ತಿಂಗಳಿನಲ್ಲಿ 75% ಮುಕ್ತರಾಗಲು ಸಾಧ್ಯವೇ? ಬಾಪ್ದಾದಾರವರು 100 ಪಸೆರ್ಂಟ್ ಎಂದು ಹೇಳುತ್ತಿಲ್ಲ, 75% ಮುಕ್ಕಾಲು ಭಾಗ ಬಂದರೆ ಆಗ ಸಂಪೂರ್ಣತೆಯವರೆಗೂ ತಲುಪುವಿರಿ ಅಲ್ಲವೇ! ಹಾಗಾದರೆ ಆರು ತಿಂಗಳಿನಲ್ಲಿ, ಒಂದು ತಿಂಗಳು ಅಲ್ಲ ಆರು ತಿಂಗಳನ್ನು ಕೊಡುತ್ತಿದ್ದೇವೆ, ಅರ್ಧ ವರ್ಷ. ಈ ಡೇಟನ್ನು ನಿಗದಿ ಮಾಡಲು ಸಾಧ್ಯವೇ? ನೋಡಿ ದಾದಿಯರು ಹೇಳುತ್ತಿದ್ದಾರೆ - ಫಿಕ್ಸ್ ಮಾಡಿ, ದಾದಿಯರ ಆದೇಶವನ್ನಂತು ಪಾಲಿಸಬೇಕಲ್ಲವೇ! ಫಲಿತಾಂಶವನ್ನು ನೋಡಿ ಬಾಪ್ದಾದಾರವರು ಸ್ವತಹವಾಗಿಯೇ ಆಕರ್ಷಣೆಯಲ್ಲಿ ಬರುತ್ತಾರೆ, ಹೇಳುವ ಅವಶ್ಯಕತೆಯೂ ಬರುವುದಿಲ್ಲ. ಎಂದ ಮೇಲೆ ಆರು ತಿಂಗಳು ಹಾಗೂ 75%, 100% ಅಲ್ಲ ಅದಕ್ಕಾಗಿ ನಂತರ ಮುಂದೆ ಸಮಯವನ್ನು ಕೊಡುತ್ತೇವೆ. ಹಾಗಾದರೆ ಇದರಲ್ಲಿ ಸದಾ ಸಿದ್ದರಾಗಿದ್ದೀರಾ? ಸದಾ ಸಿದ್ಧ ಅಲ್ಲ ಆರು ತಿಂಗಳಿನಲ್ಲಿ ರೆಡಿ. ಇಷ್ಟವಿದೆಯೇ ಅಥವಾ ಸ್ವಲ್ಪ ಸಾಹಸ ಕಡಿಮೆ ಇದೆಯೇ, ಏನಾಗುವುದು ಗೊತ್ತಿಲ್ಲ? ಹುಲಿಯು ಬರುವುದು, ಬೆಕ್ಕು ಬರುವುದು, ಎಲ್ಲವೂ ಬರುವುದು ವಿಘ್ನಗಳು ಬರುವುದು, ಪರಿಸ್ಥಿತಿಗಳು ಬರುವುದು, ಸಾಧನಗಳು ವೃದ್ಧಿಯಾಗುವುದು ಆದರೆ ಸಾಧನಗಳ ಪ್ರಭಾವದಿಂದ ಮುಕ್ತರಾಗಿರಬೇಕು. ಒಪ್ಪಿಗೆ ಇದೆ ಎಂದರೆ ಕೈಯೆತ್ತಿ., ಟಿವಿಯನ್ನು ತಿರುಗಿಸಿ. ಚೆನ್ನಾಗಿ ಕೈ ಎತ್ತಿ, ಕೈ ಇಳಿಸಬೇಡಿ. ಒಳ್ಳೆಯ ದೃಶ್ಯವಾಗಿದೆ. ಒಳ್ಳೆಯದು. ಇನ್ ಅಡ್ವಾನ್ಸ್ (ಮುಂಚಿತವಾಗಿ) ಶುಭಾಶಯಗಳು.

ಹೀಗೆ ಹೇಳಬೇಡಿ ನಾವಂತೂ ಬಹಳ ಸಾಯಬೇಕಾಗುತ್ತದೆ, ಸಾಯಿರಿ ಅಥವಾ ಬದುಕಿರಿ ಆದರೆ ಆಗಲೇಬೇಕು. ಇಲ್ಲಿ ಸಾಯುವುದು ಮಧುರ ಸಾವಾಗಿದೆ, ಇಲ್ಲಿ ಸಾಯುವುದರಲ್ಲಿ ದುಃಖ ಬರುವುದಿಲ್ಲ, ಇಲ್ಲಿ ಸಾಯುವುದು ಅನೇಕರ ಕಲ್ಯಾಣಕ್ಕಾಗಿ ಸಾಯುವುದು, ಆದ್ದರಿಂದ ಈ ಸಾವಿನಲ್ಲಿ ಮಜಾ ಇದೆ. ದುಃಖವಿಲ್ಲ, ಸುಖವಿದೆ ಯಾವುದೇ. ಯಾವುದೇ ನೆಪವನ್ನು ಹೇಳಬಾರದು, ಹೀಗಾಯಿತಲ್ಲವೇ, ಆದ್ದರಿಂದ ಹೀಗಾಯಿತು. ನೆಪ ಹೇಳುವುದು ಇಲ್ಲಿ ನಡೆಯುವುದಿಲ್ಲ. ನೆಪ ಹೇಳುತ್ತೀರಾ? ಹೇಳುವುದಿಲ್ಲ ಅಲ್ಲವೇ. ಹಾರುವ ಕಲೆಯ ಆಟವನ್ನು ಆಡಿ ಬೇರೆ ಯಾವ ಆಟವನ್ನು ಆಡಬೇಡಿ. ಬೀಳುವ ಕಲೆಯ ಆಟವನ್ನು, ನೆಪ ಹೇಳುವ ಆಟ, ಬಲಹೀನತೆಗಳ ಆಟ ಇದೆಲ್ಲವೂ ಸಮಾಪ್ತಿಯಾಗಬೇಕು. ಹಾರುವ ಕಲೆಯ ಆಟ, ಸರಿಯಾಗಿದೆ! ಎಲ್ಲರ ಮುಖ ಅರಳಿದೆ. ಯಾವಾಗ 6 ತಿಂಗಳ ನಂತರ ಮಿಲನ ಮಾಡಲು ಬರುವಿರಿ ಆಗ ಮುಖ ಹೇಗಿರುವುದು. ಅಂದು ಸಹ ಫೆÇೀಟೋ ತೆಗೆಯುತ್ತೇವೆ.

ಡಬಲ್ ವಿದೇಶಿಯರು ಬಂದಿದ್ದೀರಲ್ಲವೇ, ಡಬಲ್ ಪ್ರತಿಜ್ಞೆ ಮಾಡುವ ದಿನ ಬಂದು ಬಿಟ್ಟಿದೆ ಅನ್ಯ ಯಾರನ್ನು ನೋಡಬೇಡಿ, ತಂದೆಯನ್ನು ನೋಡಿ, ಬ್ರಹ್ಮಾ ತಾಯಿಯನ್ನು ನೋಡಿ. ಅನ್ಯರು ಮಾಡಲಿ ಮಾಡದಿರಲಿ, ಮಾಡಿದರು ಸಹ ಅವರ ಪ್ರತಿಯು ಧಯೆಯ ಭಾವನೆಯನ್ನು ಇಟ್ಟುಕೊಳ್ಳಿ. ಬಲಹೀನರಿಗೆ ಶುಭ ಭಾವನೆಯ ಬಲವನ್ನು ಕೊಡಿ, ಬಲಹೀನತೆಯನ್ನು ನೋಡಬೇಡಿ. ಇಂತಹ ಆತ್ಮರನ್ನು ತಮ್ಮ ಸಾಹಸದ ಕೈಯಿಂದ ಎದ್ದೇಳಿಸಿ, ಶ್ರೇಷ್ಠರನ್ನಾಗಿ ಮಾಡಿ. ಸಾಹಸದ ಜೊತೆ ಸದಾ ಸ್ವಯಂನ ಪ್ರತಿ ಹಾಗೂ ಸರ್ವರ ಪ್ರತಿ ಬೆಳೆಯುತ್ತಾ ಇರಲಿ. ಸಾಹಸದ ಕೈ ಬಹಳ ಶಕ್ತಿಶಾಲಿಯಾಗಿದೆ. ಹಾಗೂ ಬಾಪ್ದಾದಾರವರ ವರದಾನವಾಗಿದೆ- ಸಾಹಸದ ಒಂದು ಹೆಜ್ಜೆ ಮಕ್ಕಳದ್ದು ಹಾಗೂ ಸಾವಿರ ಹೆಜ್ಜೆ ತಂದೆಯ ಸಹಯೋಗ. ನಿಸ್ವಾರ್ಥ ಪುರುಷಾರ್ಥದಲ್ಲಿ ಮೊದಲು ನಾನು. ನಿಸ್ವಾರ್ಥ ಪುರುಷಾರ್ಥ, ಸ್ವಾರ್ಥದ ಪುರುಷಾರ್ಥವಲ್ಲ, ನಿಸ್ವಾರ್ಥ ಪುರುಷಾರ್ಥ ಯಾರು ಇದರಲ್ಲಿ ಮೊದಲು ಅವರೇ ಬ್ರಹ್ಮಾ ತಂದೆಯ ಸಮಾನ.

ಬ್ರಹ್ಮಾ ತಂದೆಯೊಂದಿಗೆ ಪ್ರೀತಿ ಇದೆ ಅಲ್ಲವೇ! ಆದ್ದರಿಂದಲೇ ಬ್ರಹ್ಮಾಕುಮಾರ ಹಾಗೂ ಬ್ರಹ್ಮಾಕುಮಾರಿ ಎಂದು ಕರೆಸಿಕೊಳ್ಳುತ್ತೀರಿ ಅಲ್ಲವೇ! ಯಾವಾಗ ಚಾಲೆಂಜ್ ಮಾಡುತ್ತೀರಿ, ಕ್ಷಣದಲ್ಲಿ ಜೀವನ್ ಮುಕ್ತಿಯ ಆಸ್ತಿಯನ್ನು ತೆಗೆದುಕೊಳ್ಳಿ ಎಂದ ಮೇಲೆ ಈಗ ಕ್ಷಣದಲ್ಲಿ ತಮ್ಮನ್ನು ಮುಕ್ತರನ್ನಾಗಿ ಮಾಡಿಕೊಳ್ಳುವ ಗಮನ, ಈಗ ಸಮಯವನ್ನು ಸಮೀಪ ತನ್ನಿ. ನಿಮ್ಮ ಸಂಪೂರ್ಣತೆಯ ಸಮೀಪತೆ, ಶ್ರೇಷ್ಠ ಸಮಯವನ್ನು ಸಮೀಪ ತರುವುದು. ಮಾಲೀಕರಾಗಿದ್ದೀರಿ ಅಲ್ಲವೇ, ರಾಜರಾಗಿದ್ದೀರಿ ಅಲ್ಲವೇ, ಸ್ವರಾಜ್ಯ ಅಧಿಕಾರಿಯಾಗಿದ್ದೀರಿ ಅಲ್ಲವೇ? ಎಂದ ಮೇಲೆ ಆರ್ಡರ್ ಮಾಡಿ. ಈಗ ತಮ್ಮ ಮನಸ್ಸನ್ನು ನೋಡಿಕೊಳ್ಳಿ, ಏಕೆಂದರೆ ಮನಸ್ಸು ಮುಖ್ಯಮಂತ್ರಿಯಾಗಿದೆ ಎಂದ ಮೇಲೆ ರಾಜ ಮನಸ್ಸು ಮಂತ್ರಿಗೆ ಒಂದು ಸೆಕೆಂಡಿನಲ್ಲಿ ಆರ್ಡರ್ ಮಾಡಿ ಅಶರೀರಿ, ವಿದೇಶಿ ಸ್ಥಿತಿಯಲ್ಲಿ ಸ್ಥಿತ ಮಾಡಲು ಸಾಧ್ಯವೇ? ಒಂದು ಸೆಕೆಂಡಿನಲ್ಲಿ ಆರ್ಡರ್ ಮಾಡಿ. (ಐದು ನಿಮಿಷ ಡ್ರಿಲ್) ಒಳ್ಳೆಯದು.

ಸದಾ ಲವಲೀನ ಹಾಗೂ ಲಕ್ಕಿ ಆತ್ಮಗಳಿಗೆ ಬಾಪ್ದಾದಾರವರ ಮೂಲಕ ಪ್ರಾಪ್ತಿ ಆಗಿರುವ ಸರ್ವಪ್ರಾಪ್ತಿಗಳ ಅನುಭವಿ ಆತ್ಮಗಳಿಗೆ ಸ್ವರಾಜ್ಯ ಅಧಿಕಾರಿಯಾಗಿ ಅಧಿಕಾರದ ಮೂಲಕ ಸ್ವರಾಜ್ಯ ಮಾಡುವಂತಹ ಶಕ್ತಿಶಾಲಿ ಆತ್ಮಗಳಿಗೆ ಸದಾ ಜೀವನ್ ಮುಕ್ತಿ ಸ್ಥಿತಿಯನ್ನು ಅನುಭವ ಮಾಡುವಂತಹ ಶ್ರೇಷ್ಠ ಆತ್ಮಗಳಿಗೆ, ಭಾಗ್ಯ ವಿಧಾತನ ಮೂಲಕ ಶ್ರೇಷ್ಠ ಭಾಗ್ಯದ ಗೆರೆಯ ಮೂಲಕ ಅದೃಷ್ಟವಂತ ಆತ್ಮಗಳಿಗೆ, ಸದಾ ಪವಿತ್ರತೆಯ ದೃಷ್ಟಿ ವೃತ್ತಿಯ ಮೂಲಕ ಸ್ವಪರಿವರ್ತನೆ ವಿಶ್ವ ಪರಿವರ್ತನೆ ಮಾಡುವಂತಹ ಅತಿ ಪವಿತ್ರ ಆತ್ಮರಿಗೆ ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

ಡಬಲ ವಿದೇಶಿ ಅತಿಥಿಗಳೊಂದಿಗೆ (ಸಮಯದ ಕರೆಯ ಪ್ರೋಗ್ರಾಮ್ ನಲ್ಲಿ ಬಂದಿರುವಂತಹ ಅತಿಥಿಗಳೊಂದಿಗೆ): ಎಲ್ಲರೂ ತಮ್ಮ ಸ್ವೀಟ್ ಹೋಂನಲ್ಲಿ, ಮಧುರ ಪರಿವಾರದಲ್ಲಿ ತಲುಪಿದ್ದೀರಿ ಅಲ್ಲವೇ! ಈ ಚಿಕ್ಕ ಮಧುರ ಪರಿವಾರ ಇಷ್ಟವಾಗುತ್ತದೆ ಅಲ್ಲವೇ! ಹಾಗೂ ನೀವು ಸಹ ಎಷ್ಟು ಮಧುರರಾಗಿದ್ದೀರಿ! ಎಲ್ಲಕ್ಕಿಂತ ಮೊದಲು ಪರಮಾತ್ಮ ಪ್ರಿಯರಾಗಿದ್ದೀರಿ! ಆಗಿದ್ದೀರಿ ಅಲ್ಲವೇ! ಆಗಿದ್ದೀರಾ ಅಥವಾ ಇನ್ನೂ ಆಗಬೇಕಾಗಿದೆಯಾ? ನೋಡಿ, ನಿಮ್ಮೆಲ್ಲರನ್ನು ನೋಡಿ ಎಲ್ಲರೂ ಎಷ್ಟು ಖುಷಿಯಾಗುತ್ತಿದ್ದಾರೆ. ಏಕೆ ಖುಷಿಯಾಗುತ್ತಿದ್ದಾರೆ? ಎಲ್ಲರ ಚಹರೆಯನ್ನು ನೋಡಿ ಎಲ್ಲರೂ ಖುಷಿಯಾಗುತ್ತಿದ್ದಾರೆ. ಏಕೆ ಖುಷಿಯಾಗುತ್ತಿದ್ದಾರೆ? ಏಕೆಂದರೆ ಅವರು ತಿಳಿದಿದ್ದಾರೆ ಇವರೆಲ್ಲರೂ ಭಗವಂತನ ಸಂದೇಶ ವಾಹಕರಾಗಿ ಆತ್ಮಗಳಿಗೆ ಸಂದೇಶವನ್ನು ತಲುಪಿಸುವ ನಿಮಿತ್ತ ಆತ್ಮಗಳಾಗಿದ್ದಾರೆ. (ಐದು ಖಂಡ ದವರು ಇದ್ದಾರೆ) ಎಂದ ಮೇಲೆ ಐದು ಖಂಡಗಳಲ್ಲಿ ಸಂದೇಶ ತಲುಪಿ ಬಿಡುವುದು, ಸಹಜವಾಗಿದೆ ಅಲ್ಲವೇ. ಬಹಳ ಒಳ್ಳೆಯ ಯೋಜನೆ ತಯಾರಿಸಿದ್ದೀರಿ. ಇದರಲ್ಲಿ ಪರಮಾತ್ಮನ ಶಕ್ತಿಯನ್ನು ತುಂಬಿ ಹಾಗೂ ಪರಿವಾರದ ಸಹಾಯಕವನ್ನು ತೆಗೆದುಕೊಂಡು ಮುಂದುವರೆಯುತ್ತಾ ಇರಿ. ಎಲ್ಲರ ಸಂಕಲ್ಪಗಳು ಬಾಪ್ದಾದಾರವರ ಬಳಿ ತಲುಪುತ್ತಿದೆ. ಬಹಳ ಒಳ್ಳೊಳ್ಳೆಯ ಸಂಕಲ್ಪಗಳು ನಡೆಯುತ್ತಿದೆ ಅಲ್ಲವೇ! ಯೋಜನೆಗಳು ತಯಾರಾಗುತ್ತಿವೆ ಯೋಜನೆಗಳನ್ನು ಪ್ರತ್ಯಕ್ಷವಾಗಿ ತರುವುದರಲ್ಲಿ ಸಾಹಸ ನಿಮ್ಮದು ಹಾಗೂ ಸಹಯೋಗ ತಂದೆಯದು ಮತ್ತು ಬ್ರಾಹ್ಮಣ ಪರಿವಾರದವರದ್ದು. ಕೇವಲ ನಿಮಿತ್ತರಾಗಬೇಕು ಅಷ್ಟೇ ಬೇರೆ ಯಾವುದೇ ಪರಿಶ್ರಮ ಪಡಬೇಕಾಗಿಲ್ಲ. ನಾನು ಪರಮಾತ್ಮ ಕಾರ್ಯದಲ್ಲಿ ನಿಮಿತ್ತನಾಗಿದ್ದೇನೆ. ಯಾವುದೇ ಕಾರ್ಯದಲ್ಲಿ ಬಂದರೂ ಸಹ ಬಾಬಾ ನಾನು ನಿಮಿತ್ತ ಸೇವೆಯ ಅರ್ಥ ತಯಾರಾಗಿದ್ದೇನೆ, ನಾನು ಇನ್ಸಟ್ರ್ರುಮೆಂಟ್ ಆಗಿದ್ದೇನೆ ನಡೆಸುವವರು ಸ್ವತಹವಾಗಿ ನಡೆಸುತ್ತಾರೆ. ಈ ನಿಮಿತ್ತ ಭಾವ ನಿಮ್ಮ ಚಹರೆಯಲ್ಲಿ ನಿರ್ಮಾಣ ಹಾಗೂ ನಿರ್ಮಾಣ ಭಾವವನ್ನು ಪ್ರತ್ಯಕ್ಷ ಮಾಡುವುದು. ಮಾಡಿಸುವವರು ನಿಮಿತ್ತರನ್ನಾಗಿ ಮಾಡಿ ಕಾರ್ಯವನ್ನು ಮಾಡಿಸುತ್ತಾರೆ. ಮೈಕ್ ನೀವು ಹಾಗೂ ಶಕ್ತಿ ತಂದೆಯದ್ದು. ಎಂದ ಮೇಲೆ ಸಹಜವಾಗಿದೆ ಅಲ್ಲವೇ. ನಿಮಿತ್ತರಾಗಿ ನೆನಪಿನಲ್ಲಿ ಹಾಜೀರ್ ಆಗಿಬಿಡಿ, ಅಷ್ಟೇ ನಿಮ್ಮ ಮುಖ, ನಿಮ್ಮ ಚಲನೆ ಸ್ವತಹವಾಗಿಯೇ ಸೇವೆಯ ನಿಮಿತ್ತ ಆಗಿ ಬಿಡುವುದು ಕೇವಲ ಮಾತಿನ ಮೂಲಕ ಸೇವೆ ಅಲ್ಲ ಆದರೆ ಚಲನೆಯ ಮೂಲಕವೂ ನಿಮ್ಮ ಆಂತರಿಕ ಖುಷಿ ಚೆರೆಯಿಂದ ಕಾಣಿಸುತ್ತದೆ. ಇದಕ್ಕೆ ಹೇಳಲಾಗುತ್ತದೆ ಅಲೌಕಿಕತೆ. ಈಗ ಅಲೌಕಿಕತೆ ಆಗಿಬಿಟ್ಟಿರಿ ಅಲ್ಲವೇ. ಲೌಕಿಕತನವಂತು ಸಮಾಪ್ತಿಯಾಯಿತು ಅಲ್ಲವೇ. ನಾನು ಆತ್ಮನಾಗಿದ್ದೇನೆ- ಇದು ಅಲೋಕಿಕವಾಗಿದೆ. ನಾನು ಇಂತಹವನಾಗಿದ್ದೇನೆ- ಇದು ಲೌಕಿಕತೆ. ಹಾಗಾದರೆ ಯಾರಾಗಿದ್ದೇನೆ? ಅಲೋಕಿಕನೇ ಅಥವಾ ಲೌಕಿಕನೇ? ಅಲೋಕಿಕ ಆಗಿದ್ದೀರಿ ಅಲ್ಲವೇ! ಒಳ್ಳೆಯದು. ಬಾಪ್ದಾದಾರವರ ಹಾಗೂ ಪರಿವಾರದ ಸಮ್ಮುಖದಲ್ಲಿ ತಲುಪಿಬಿಟ್ಟಿರಿ, ಇದು ಬಹಳ ಒಳ್ಳೆಯ ಸಾಹಸವನ್ನು ಇಟ್ಟುಕೊಂಡಿದ್ದೀರಿ. ನೋಡಿ, ನೀವು ಸಹ ಕೋಟಿಯಲ್ಲಿ ಕೆಲವರು ಬಂದಿದ್ದೀರಿ ಅಲ್ಲವೇ. ಎಷ್ಟು ಗುಂಪು ಇತ್ತು, ಅದರಲ್ಲಿ ಎಷ್ಟು ಗುಂಪು ಬಂದಿದ್ದೀರಿ. ಎಂದ ಮೇಲೆ ಕೋಟೆಯಲ್ಲಿ ಕೆಲವರು ಬಂದಿದ್ದೀರಿ ಅಲ್ಲವೇ. ಒಳ್ಳೆಯದು ಬಾಪ್ದಾದಾರವರಿಗೆ ಗುಂಪು ಇಷ್ಟವಾಗಿದೆ. ಹಾಗೂ ಇಲ್ಲಿ ನೋಡಿ ಎಷ್ಟು ಖುಷಿಯಾಗುತ್ತಿದ್ದಾರೆ. ನಿಮಗಿಂತ ಹೆಚ್ಚು ಇವರು ಖುಷಿಪಡುತ್ತಿದ್ದಾರೆ ಏಕೆಂದರೆ ಸೇವೆಯ ರಿಟರ್ನ್ ಸಮ್ಮುಖದಲ್ಲಿ ನೋಡಿ ಖುಷಿಪಡುತ್ತಿದ್ದಾರೆ. ಖುಷಿಪಡುತ್ತಿರುವಿರಿ ಅಲ್ಲವೇ. ಪರಿಶ್ರಮದ ಫಲ ಸಿಕ್ಕಿಬಿಟ್ಟಿತ್ತು. ಒಳ್ಳೆಯದು. ಈಗಂತೂ ಬಾಲಕ ಸೋಮಲೀಕರಾಗಿದ್ದೀರಿ. ಬಾಲಕ ಮಾಸ್ಟರ್ ಆಗಿದ್ದಾರೆ. ಮಕ್ಕಳಿಗೆ ಸದಾ ಮಾಸ್ಟರ್ ಎಂದು ಹೇಳಲಾಗುತ್ತದೆ. ಒಳ್ಳೆಯದು.

ವರದಾನ:
ಸಫಲ ಮಾಡಿಕೊಳ್ಳುವ ವಿಧಿಯಿಂದ ಸಫಲತೆಯ ವರದಾನ ಪ್ರಾಪ್ತಿ ಮಾಡಿಕೊಳ್ಳುವಂತಹ ವರದಾನೀ ಮೂರ್ತಿ ಭವ.

ಸಂಗಮಯುಗದಲ್ಲಿ ತಾವು ಮಕ್ಕಳಿಗೆ ಆಸ್ತಿಯೂ ಇದೆ ಹಾಗೂ ವರದಾನವೂ ಇದೆ ಅದನ್ನು "ಸಫಲ ಮಾಡಿಕೊಳ್ಳಿ ಮತ್ತು ಸಫಲತೆಯನ್ನು ಪಡೆಯಿರಿ" ಸಫಲ ಮಾಡುವುದು ಬೀಜವಾಗಿದೆ ಮತ್ತು ಸಫಲತೆಯಾಗಿದೆ ಫಲ. ಓಂದುವೇಳೆ ಬೀಜ ಚೆನ್ನಾಗಿದ್ದರೆ ಒಳ್ಳೆಯ ಫಲ ಸಿಗದೇ ಇರಲು ಸಾಧ್ಯವೇ ಇಲ್ಲ. ಹಾಗಾದರೆ ಹೇಗೆ ಅನ್ಯರಿಗೆ ಹೇಳುವಿರಿ ಸಮಯ, ಸಂಕಲ್ಪ, ಸಂಪತ್ತು ಎಲ್ಲವನ್ನು ಸಫಲಮಾಡಿ ಎಂದು. ಹಾಗೇ ತಮ್ಮ ಸರ್ವ ಖಜಾನೆಯ ಲಿಸ್ಟ್ ನ್ನು ಚೆಕ್ ಮಾಡಿಕೊಳ್ಳಿ ಯಾವ ಖಜಾನೆ ಸಫಲವಾಯಿತು ಮತ್ತು ಯಾವುದು ವ್ಯರ್ಥ. ಸಫಲ ಮಾಡುತ್ತಿದ್ದಾಗ ಸರ್ವ ಖಜಾನೆಗಳಿಂದ ಸಂಪನ್ನ ವರದಾನೀ ಮೂರ್ತಿ ಆಗಿಬಿಡುವಿರಿ.

ಸ್ಲೋಗನ್:
ಪರಮಾತ್ಮನಿಂದ ಪ್ರಶಸ್ತಿ ಪಡೆಯಬೇಕಾದರೆ ವ್ಯರ್ಥ ಮತ್ತು ನಕಾರಾತ್ಮಕತೆಯಿಂದ ದೂರವಿರಿ.