08.04.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ದೇಹಾಭಿಮಾನದ ದ್ವಾರವನ್ನು ಬಂಧ್ ಮಾಡಿ ಬಿಡುತ್ತೀರೆಂದರೆ, ಮಾಯೆಯ ಬಿರುಗಾಳಿಗಳು ಬರುವುದು ಬಂಧ್ ಆಗಿ ಬಿಡುತ್ತದೆ”

ಪ್ರಶ್ನೆ:
ಯಾವ ಮಕ್ಕಳಲ್ಲಿ ವಿಶಾಲ ಬುದ್ಧಿಯಿದೆ, ಅವರ ಲಕ್ಷಣಗಳನ್ನು ತಿಳಿಸಿರಿ!

ಉತ್ತರ:
1. ಅವರಿಗೆ ಇಡೀದಿನದಲ್ಲಿ ಸೇವೆಯ ವಿಚಾರಗಳೇ ನಡೆಯುತ್ತಿರುತ್ತದೆ. 2. ಅವರು ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. 2. ಅವರ ಬುದ್ಧಿಯಲ್ಲಿರುತ್ತದೆ - ಇಡೀವಿಶ್ವದಲ್ಲಿ ಹೇಗೆ ಮುತ್ತಿಗೆಯನ್ನು ಹಾಕಿ, ಎಲ್ಲರನ್ನೂ ಪತಿತರಿಂದ ಪಾವನ ಮಾಡೋಣ! ಅವರು ವಿಶ್ವವನ್ನು ದುಃಖಧಾಮದಿಂದ ಸುಖಧಾಮವನ್ನಾಗಿ ಮಾಡುವ ಸೇವೆಯನ್ನು ಮಾಡುತ್ತಿರುತ್ತಾರೆ. 4. ಅವರು ಅನೇಕರನ್ನು ತನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತಿರುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದುಕೊಂಡು, ನಾನು ತಂದೆಯನ್ನು ನೆನಪು ಮಾಡುತ್ತೀರೆಂದರೆ, ನಿಮ್ಮ ಎಲ್ಲಾ ದುಃಖಗಳು ಸದಾಕಾಲಕ್ಕಾಗಿ ಸಮಾಪ್ತಿಯಾಗಿ ಬಿಡುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಎಲ್ಲರನ್ನೂ ಸಹೋದರ-ಸಹೋದರನ ದೃಷ್ಟಿಯಿಂದ ನೋಡುತ್ತೀರೆಂದರೆ, ಆನಂತರ ದೇಹದ ದೃಷ್ಟಿಯ ವೃತ್ತಿಯು ಪರಿವರ್ತನೆಯಾಗಿ ಬಿಡುತ್ತದೆ. ತಂದೆಯೂ ಸಹ ಅಶರೀರಿಯಾಗಿದ್ದಾರೆ, ನೀವು ಆತ್ಮವೂ ಅಶರೀರಿಯಾಗಿದ್ದೀರಿ. ತಂದೆಯು ಆತ್ಮರನ್ನೇ ನೋಡುತ್ತಾರೆ, ಎಲ್ಲರೂ ಅಕಾಲ ಸಿಂಹಾಸನದ ಮೇಲೆ ಕುಳಿತಿರುವ ಆತ್ಮನಾಗಿದ್ದಾರೆ. ನೀವೂ ಆತ್ಮ ಸಹೋದರ-ಸಹೋದರನ ದೃಷ್ಟಿಯಿಂದ ನೋಡಿರಿ, ಇದರಲ್ಲಿ ಬಹಳ ಪರಿಶ್ರಮವಿದೆ. ದೇಹದ ಭಾನದಲ್ಲಿ ಬರುವುದರಿಂದಲೇ ಮಾಯೆಯ ಬಿರುಗಾಳಿಗಳು ಬರುತ್ತವೆ. ಈ ದೇಹಾಭಿಮಾನದ ದ್ವಾರವನ್ನು ಬಂಧ್ ಮಾಡಿ ಬಿಡುತ್ತೀರೆಂದರೆ, ಮಾಯೆಯ ಬಿರುಗಾಳಿಗಳು ಬರುವುದು ಬಂಧ್ ಆಗಿ ಬಿಡುತ್ತದೆ. ಇಡೀ ಕಲ್ಪದಲ್ಲಿ ದೇಹೀ-ಅಭಿಮಾನಿಯಾಗುವ ಈ ಶಿಕ್ಷಣವು ಈ ಪುರುಷೋತ್ತಮ ಸಂಗಮ ಯುಗದಲ್ಲಿ ತಂದೆಯೇ ನೀವು ಮಕ್ಕಳಿಗೆ ಕೊಡುತ್ತಾರೆ.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ನೀವು ತಿಳಿದಿದ್ದೀರಿ - ಈಗ ನಾವು ನರಕದ ದಡವನ್ನು ಬಿಟ್ಟು ಮುಂದೆ ಹೋಗುತ್ತಿದ್ದೇವೆ, ಮಧ್ಯದಲ್ಲಿರುವ ಈ ಪುರುಷೋತ್ತಮ ಸಂಗಮ ಯುಗವು ಸಂಪೂರ್ಣವಾಗಿ ಭಿನ್ನವಾಗಿದೆ. ಸಮುದ್ರದ ಮಧ್ಯದಲ್ಲಿ ನಿಮ್ಮ ದೋಣಿಯಿದೆ. ನೀವು ಸತ್ಯಯುಗದವರೂ ಆಗಿಲ್ಲ, ಕಲಿಯುಗದವರೂ ಆಗಿಲ್ಲ. ನೀವು ಪುರುಷೋತ್ತಮ ಸಂಗಮಯುಗಿ ಸರ್ವೋತ್ತಮ ಬ್ರಾಹ್ಮಣರಾಗಿದ್ದೀರಿ. ಸಂಗಮಯುಗವಾಗುವುದೇ ಬ್ರಾಹ್ಮಣರದು. ಬ್ರಾಹ್ಮಣರು ಶಿಖೆಯವರಾಗಿದ್ದಾರೆ. ಈ ಬ್ರಾಹ್ಮಣರದು ಬಹಳ ಚಿಕ್ಕದಾದ ಯುಗವಾಗಿದೆ. ಇದು ಒಂದೇ ಜನ್ಮದ ಯುಗವಾಗುತ್ತದೆ, ಇದು ನಿಮ್ಮ ಖುಷಿಯ ಯುಗವಾಗಿದೆ. ಖುಷಿಯು ಯಾವ ಮಾತಿನದಾಗಿದೆ? ಭಗವಂತನು ನಮಗೆ ಓದಿಸುತ್ತಾರೆ! ಇಂತಹ ವಿದ್ಯಾರ್ಥಿಗೆ ಎಷ್ಟೊಂದು ಖುಷಿಯಾಗುತ್ತದೆ! ನಿಮಗೆ ಈಗ ಇಡೀ ಚಕ್ರದ ಜ್ಞಾನವು ಬುದ್ಧಿಯಲ್ಲಿದೆ. ಈಗ ನಾವೇ ಬ್ರಾಹ್ಮಣರಾಗಿದ್ದೇವೆ, ನಂತರ ನಾವೇ ದೇವತೆಯಾಗುತ್ತೇವೆ. ಮೊದಲು ನಮ್ಮ ಮನೆ ಮಧುರಮನೆಗೆ ಹೋಗುತ್ತೇವೆ, ನಂತರ ಹೊಸ ಪ್ರಪಂಚದಲ್ಲಿ ಬರುತ್ತೇವೆ. ನಾವು ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಯಾಗಿದ್ದೇವೆ. ನಾವೇ ಈ ಬಾಜೋಲಿ ಆಡುತ್ತೇವೆ. ಈ ವಿರಾಟ ರೂಪವನ್ನೂ ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ, ಇಡೀದಿನದಲ್ಲಿ ಬುದ್ಧಿಯಲ್ಲಿ ಇದೇ ಮಾತಿನ ಸ್ಮರಣೆಯಾಗುತ್ತಿರಬೇಕು.

ಮಧುರ ಮಕ್ಕಳೇ, ನಿಮ್ಮ ಈ ಪರಿವಾರವು ಲವಲೀಯಾಗಿದೆ ಅಂದಮೇಲೆ ನೀವು ಪ್ರತಿಯೊಬ್ಬರಿಗೂ ಬಹಳ-ಬಹಳ ಲವಲೀಯಾಗಿರಬೇಕಾಗಿದೆ. ತಂದೆಯೂ ಸಹ ಮಧುರವಾಗಿದ್ದಾರೆ ಅಂದಮೇಲೆ ಮಕ್ಕಳನ್ನೂ ಸಹ ಈ ರೀತಿ ಮಧುರರನ್ನಾಗಿ ಮಾಡುತ್ತಾರೆ. ಎಂದೂ ಯಾರ ಮೇಲೂ ಕೋಪಿಸಿಕೊಳ್ಳಬಾರದು. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ತಂದೆಯು ಎಂದೂ ಯಾರಿಗೂ ದುಃಖವನ್ನು ಕೊಡುವುದಿಲ್ಲ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ, ಅಷ್ಟು ಮಧುರವಾಗುತ್ತಾ ಹೋಗುತ್ತೀರಿ. ಇಷ್ಟೇ, ಈ ನೆನಪಿನಿಂದಲೇ ದೋಣಿಯು ಪಾರಾಗುತ್ತದೆ - ಇದು ನೆನಪಿನ ಯಾತ್ರೆಯಾಗಿದೆ. ನೆನಪು ಮಾಡುತ್ತಾ-ಮಾಡುತ್ತಾ ಶಾಂತಿಧಾಮದಿಂದ ಸುಖಧಾಮದಲ್ಲಿ ಹೋಗಬೇಕಾಗಿದೆ. ತಂದೆಯು ಬಂದಿರುವುದೇ ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡುವುದಕ್ಕಾಗಿ. ಭೂತಗಳನ್ನು ಓಡಿಸುವ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ, ಈ ಭೂತಗಳು ಹೊರಟು ಹೋಗುತ್ತವೆ. ಯಾವುದೇ ಭೂತವನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬಾರದು. ಯಾರಲ್ಲಿಯೇ ಭೂತವಿದೆಯೆಂದರೆ ನನ್ನಬಳಿ ಬಿಟ್ಟು ಹೋಗಿರಿ. ನೀವು ಹೇಳುತ್ತಲೇ ಇರುತ್ತೀರಿ - ಬಾಬಾ, ತಾವು ಬಂದು ನಮ್ಮ ಭೂತಗಳನ್ನು ತೆಗೆದು, ಪತಿತರಿಂದ ಪಾವನರನ್ನಾಗಿ ಮಾಡಿರಿ. ಅಂದಮೇಲೆ ತಂದೆಯು ಎಷ್ಟೊಂದು ಸುಂದರರನ್ನಾಗಿ ಮಾಡುತ್ತಾರೆ. ಬಾಪ್ ಮತ್ತು ದಾದಾ ಇಬ್ಬರೂ ಸೇರಿ ನೀವು ಮಕ್ಕಳ ಶೃಂಗಾರವನ್ನು ಮಾಡುತ್ತಾರೆ. ಮಾತಾಪಿತರೇ ಮಕ್ಕಳ ಶೃಂಗಾರ ಮಾಡುತ್ತಾರಲ್ಲವೆ. ಅವರು ಅಲ್ಪಕಾಲದ ತಂದೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ಅಂದಮೇಲೆ ಮಕ್ಕಳು ಬಹಳ ಪ್ರೀತಿಯಿಂದ ನಡೆಯಬೇಕು ಮತ್ತು ನಡೆಸಬೇಕಾಗಿದೆ. ಎಲ್ಲಾವಿಕಾರಗಳನ್ನು ದಾನ ಕೊಡಬೇಕಾಗಿದೆ, ದಾನ ಕೊಟ್ಟರೆ ಗ್ರಹಣ ಬಿಡುವುದು. ಇದರಲ್ಲಿ ನೆಪ ಮುಂತಾದ ಯಾವುದೇ ಮಾತುಗಳಿಲ್ಲ. ನೀವು ಯಾರನ್ನಾದರೂ ಪ್ರೀತಿಯಿಂದ ವಶ ಮಾಡಿಕೊಳ್ಳಬಹುದು. ಪ್ರೀತಿಯಿಂದ ತಿಳುವಳಿಕೆಯನ್ನು ಕೊಡಿ, ಪ್ರೀತಿಯು ಬಹಳ ಮಧುರವಾದ ವಸ್ತುವಾಗಿದೆ - ಮನುಷ್ಯರು ಸಿಂಹವನ್ನು, ಆನೆಯನ್ನು, ಪ್ರಾಣಿಗಳನ್ನೂ ಸಹ ಪ್ರೀತಿಯಿಂದ ವಶ ಪಡಿಸಿಕೊಂಡು ಬಿಡುತ್ತಾರೆ. ಆದರೂ ಅವರಂತು ಆಸುರೀ ಮನುಷ್ಯರು, ನೀವೀಗ ದೇವತೆಯಾಗುತ್ತಿದ್ದೀರಿ. ಅಂದಮೇಲೆ ದೈವೀ ಗುಣಗಳ ಧಾರಣೆಯನ್ನು ಮಾಡಿ ಬಹಳ-ಬಹಳ ಮಧುರರಾಗಬೇಕು. ಒಬ್ಬರಿನ್ನೊಬ್ಬರಿಗೆ ಸಹೋದರ-ಸಹೋದರ ಅಥವಾ ಸಹೋದರ-ಸಹೋದರಿಯ ದೃಷ್ಟಿಯಿಂದ ನೋಡಿರಿ. ಆತ್ಮ-ಆತ್ಮಕ್ಕೆ ಎಂದೂ ಸಹ ದುಃಖವನ್ನು ಕೊಡಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ- ಮಧುರ ಮಕ್ಕಳೇ, ನಾನು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುವುದಕ್ಕಾಗಿ ಬಂದಿದ್ದೇನೆ. ಆದರೆ ನೀವು ಪರಿಶ್ರಮ ಪಡಬೇಕಾಗಿದೆ. ನಾನು ಯಾರ ಮೇಲೂ ಕಿರೀಟವನ್ನಿಡುವುದಿಲ್ಲ, ನೀವು ನಿಮ್ಮ ಪುರುಷಾರ್ಥದಿಂದಲೇ ತಮಗೆ ರಾಜ ತಿಲಕವನ್ನು ಕೊಡಬೇಕಾಗಿದೆ. ತಂದೆಯು ಪುರುಷಾರ್ಥದ ಯುಕ್ತಿಯನ್ನು ತಿಳಿಸುತ್ತಾರೆ - ಹೀಗೀಗೆ ವಿಶ್ವದ ಮಾಲೀಕ, ಡಬಲ್ ಕಿರೀಟಧಾರಿಯನ್ನಾಗಿ ತಮ್ಮನ್ನು ಮಾಡಿಕೊಳ್ಳಬಹುದು. ವಿದ್ಯೆಯ ಮೇಲೆ ಗಮನ ಕೊಡಿ. ಎಂದಿಗೂ ವಿದ್ಯೆಯನ್ನು ಬಿಡಬಾರದು. ಯಾವುದೇ ಕಾರಣದಿಂದ ಮುನಿಸಿಕೊಂಡು ವಿದ್ಯೆಯನ್ನು ಬಿಡುತ್ತೀರೆಂದರೆ ಬಹಳ-ಬಹಳ ನಷ್ಟವಾಗಿ ಬಿಡುತ್ತದೆ, ಲಾಭವನ್ನು ನೋಡುತ್ತಾ ಇರಿ ಎಂದು ತಿಳಿಸುತ್ತೇವೆ. ನೀವು ಈಶ್ವರೀಯ ವಿಶ್ವ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದೀರಿ, ಈಶ್ವರ ತಂದೆಯಿಂದ ಓದುತ್ತಿದ್ದೀರಿ, ಓದಿಕೊಂಡು ಪೂಜ್ಯ ದೇವತೆ ಆಗುತ್ತಿದ್ದೀರಿ. ಅಂದಮೇಲೆ ವಿದ್ಯಾರ್ಥಿಯೂ ಸಹ ಈ ರೀತಿ ರೆಗ್ಯುಲರ್ ಆಗಬೇಕಾಗಿದೆ. ವಿದ್ಯಾರ್ಥಿ ಜೀವನವು ಉತ್ತಮ ಜೀವನವಾಗಿದೆ. ಎಷ್ಟು ಓದುತ್ತೀರಿ, ಓದಿಸುತ್ತೀರಿ ಮತ್ತು ಗುಣವನ್ನು ಸುಧಾರಣೆ ಮಾಡುತ್ತೀರಿ ಅಷ್ಟೇ ಉತ್ತಮವಾಗುತ್ತೀರಿ.

ಮಧುರ ಮಕ್ಕಳೇ, ಈಗ ನಿಮ್ಮದು ರಿಟರ್ನ್ ಜರ್ನಿಯಾಗಿದೆ, ಹೇಗೆ ಸತ್ಯಯುಗದಿಂದ ತ್ರೇತಾ, ದ್ವಾಪರ, ಕಲಿಯುಗದವರೆಗೂ ಕೆಳಗಿಳಿಯುತ್ತಾ ಬಂದಿದ್ದೀರಿ, ಹಾಗೆಯೇ ಈಗ ನೀವು ಕಬ್ಬಿಣದ ಯುಗದಿಂದ ಸ್ವರ್ಣೀಮ ಯುಗದವರೆಗೆ ಹೋಗಬೇಕಾಗಿದೆ. ಯಾವಾಗ ಬೆಳ್ಳಿಯ ಯುಗದವರೆಗೆ ತಲುಪುತ್ತೀರಿ, ಮತೆ ಈ ಕರ್ಮೇಂದ್ರಿಯಗಳ ಚಂಚಲತೆಯು ಸಮಾಪ್ತಿಯಾಗಿ ಬಿಡುತ್ತದೆ ಆದ್ದರಿಂದ ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ ಅಷ್ಟೂ ನೀವು ಆತ್ಮರಿಂದ ರಜೋ, ತಮೋದ ತುಕ್ಕು ಬಿಟ್ಟು ಹೋಗುತ್ತದೆ ಮತ್ತು ತುಕ್ಕು ಎಷ್ಟು ಬಿಟ್ಟು ಹೋಗುತ್ತದೆಯೋ ಅಷ್ಟು ಅಯಸ್ಕಾಂತವಾದ ತಂದೆಯ ಕಡೆಗೆ ಆಕರ್ಷಣೆಯು ಹೆಚ್ಚಾಗುತ್ತಾ ಹೋಗುತ್ತದೆ. ಆಕರ್ಷಣೆಯಾಗುವುದಿಲ್ಲವೆಂದರೆ ಖಂಡಿತವಾಗಿಯೂ ತುಕ್ಕು ಹಿಡಿದು ಬಿಟ್ಟಿದೆ - ತುಕ್ಕು ಬಿಟ್ಟು ಹೋಗಿ ಅಪ್ಪಟ ಚಿನ್ನವಾಗಿ ಬಿಡುವುದಾಗಿದೆ - ಅಂತಿಮ ಕರ್ಮಾತೀತ ಸ್ಥಿತಿ.

ನೀವು ಗೃಹಸ್ಥ ವ್ಯವಹಾರದಲ್ಲಿ, ಪ್ರವೃತ್ತಿಯಲ್ಲಿರುತ್ತಿದ್ದರೂ ಕಮಲ ಪುಷ್ಫ ಸಮಾನವಾಗಬೇಕು. ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಮನೆ ಗೃಹಸ್ಥವನ್ನೂ ಸಂಭಾಲನೆ ಮಾಡಿರಿ, ಶರೀರ ನಿರ್ವಹಣೆಗಾಗಿ ಕಾರ್ಯ ವ್ಯವಹಾರವನ್ನೂ ಮಾಡಿರಿ. ಜೊತೆ ಜೊತೆಗೆ ಈ ವಿದ್ಯೆಯನ್ನೂ ಓದುತ್ತಾ ಇರಬೇಕು. ಗಾಯನವೂ ಇದೆ - ಕೈ ಕೆಲಸ ಮಾಡುತ್ತಿರಲಿ, ಹೃದಯವು ತಂದೆಯನ್ನು ನೆನಪು ಮಾಡಲಿ. ಕಾರ್ಯ ವ್ಯವಹಾರಗಳನ್ನು ಮಾಡುತ್ತಾ, ಒಬ್ಬ ಪ್ರಿಯತಮ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ನೌಧಾಭಕ್ತಿಯಲ್ಲಿಯೂ ನೋಡಿರಿ - ಕೃಷ್ಣ ಮುಂತಾದವರನ್ನು ಎಷ್ಟೊಂದು ಪ್ರೀತಿಯಿಂದ ನೆನಪು ಮಾಡುತ್ತಾರೆ. ಅದು ನೌಧಾಭಕ್ತಿ, ಅಟಲ ಭಕ್ತಿಯಾಗಿದೆ. ಕೃಷ್ಣನ ಅಟಲನೆನಪು ಇರುತ್ತದೆ ಆದರೆ ಅದರಿಂದಂತು ಯಾರಿಗೂ ಮುಕ್ತಿಯು ಸಿಗುವುದಿಲ್ಲ. ಇದು ನಿರಂತರ ನೆನಪು ಮಾಡುವ ಜ್ಞಾನವಾಗಿದೆ. ತಂದೆಯು ಹೇಳುತ್ತಾರೆ - ನಾನು ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತೀರೆಂದರೆ, ನಿಮ್ಮ ಪಾಪಗಳು ನಾಶವಾಗಿ ಬಿಡುತ್ತದೆ ಆದರೆ ಮಾಯೆಯೂ ಬಹಳ ಶಕ್ತಿಶಾಲಿಯಾಗಿದೆ. ಯಾರನ್ನೂ ಬಿಡುವುದಿಲ್ಲ. ಮಾಯೆಯಿಂದ ಮತ್ತೆ-ಮತ್ತೆ ಸೋಲನ್ನನುಭವಿಸುವುದಕ್ಕಿಂತಲೂ ಕತ್ತನ್ನು ಕೆಳ ಮುಖ ಮಾಡಿ ಪಶ್ಚಾತ್ತಾಪ ಪಡಬೇಕಾಗಿದೆ. ತಂದೆಯು ಮಧುರ ಮಕ್ಕಳಿಗೆ ಶ್ರೇಷ್ಠ ಮತವನ್ನು ಕೊಡುವುದೇ ಶ್ರೇಷ್ಠರಾಗುವುದಕ್ಕಾಗಿ. ಬಾಬಾರವರು ನೋಡುತ್ತಾರೆ - ಮಕ್ಕಳು ಇಷ್ಟೊಂದು ಪರಿಶ್ರಮ ಪಡುತ್ತಿಲ್ಲ ಆದ್ದರಿಂದ ತಂದೆಗೆ ದಯೆಬರುತ್ತದೆ. ಒಂದುವೇಳೆ ಈಗ ಈ ಅಭ್ಯಾಸವನ್ನು ಮಾಡಲಿಲ್ಲವೆಂದರೆ, ಮತ್ತೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಕಲ್ಪ ಕಲ್ಪವೂ ನಯಾಪೈಸೆಯ ಪದವಿಯನ್ನು ಪಡೆಯುತ್ತಿರುತ್ತೀರಿ.

ಮೂಲ ಮಾತನ್ನು ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿ ಆಗಿರಿ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿರಿ, ಖಂಡಿತವಾಗಿ ಪಾವನರೂ ಆಗಬೇಕಾಗಿದೆ. ಕುಮಾರಿಯು ಯಾವಾಗ ಪವಿತ್ರವಾಗಿರುತ್ತಾಳೆ, ಆಗ ಎಲ್ಲರೂ ಅವಳಿಗೆ ತಲೆ ಬಾಗಿಸುತ್ತಾರೆ. ವಿವಾಹ ಮಾಡಿಕೊಂಡ ನಂತರ ಪೂಜಾರಿಯಾಗಬೇಕಾಗುತ್ತದೆ. ಎಲ್ಲರ ಮುಂದೆ ತಲೆ ಬಾಗಿಸಬೇಕಾಗುತ್ತದೆ. ಕನ್ಯೆಯು ಮೊದಲು ತಂದೆಯ ಮನೆಯಲ್ಲಿರುತ್ತಾಳೆ, ಆಗ ಮಿತ್ರ ಸಂಬಂಧಿಗಳ ನೆನಪು ಇಷ್ಟೊಂದು ಬರುತ್ತಿರಲಿಲ್ಲ. ವಿವಾಹದ ನಂತರ ದೇಹದ ಸಂಬಂಧವೂ ಹೆಚ್ಚಾಗುತ್ತದೆ, ನಂತರ ಪತಿ-ಮಕ್ಕಳಲ್ಲಿ ಮೋಹವೂ ಹೆಚ್ಚಾಗಿ ಬಿಡುತ್ತದೆ. ಅತ್ತೆ-ಮಾವ ಮುಂತಾದವರೆಲ್ಲರ ನೆನಪು ಬರುತ್ತಿರುತ್ತದೆ. ಮೊದಲಂತು ಕೇವಲ ತಂದೆ-ತಾಯಿಯಲ್ಲಿಯೇ ಮೋಹವಿರುತ್ತದೆ, ಇಲ್ಲಂತು ಆ ಎಲ್ಲಾ ಸಂಬಂಧಗಳನ್ನು ಮರೆಯಬೇಕಾಗುತ್ತದೆ ಏಕೆಂದರೆ ಇವರೊಬ್ಬರೇ ನಿಮ್ಮ ಸತ್ಯ-ಸತ್ಯವಾದ ಮಾತಾಪಿತನಲ್ಲವೆ. ಇದು ಈಶ್ವರೀಯ ಸಂಬಂಧವಾಗಿದೆ. ಗಾಯನವೂ ಇದೆ - ತ್ವಮೇವ ಮಾತಾಶ್ಚ ಪಿತಾ ತ್ವಮೇವ....... ಈ ಮಾತಾಪಿತರಂತು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಬೇಹದ್ದಿನ ತಂದೆಯನ್ನು ನಿರಂತರವಾಗಿ ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಗಳೊಂದಿಗೆ ಮಮತ್ವವನ್ನಿಡಬಾರದು. ಸ್ತ್ರೀಗೆ ಕಲಿಯುಗದಲ್ಲಿರುವ ಪತಿಯು ಎಷ್ಟೊಂದು ನೆನಪಿರುತ್ತಾರೆ, ಅವರಂತು ಗುಂಡಿ (ನರಕ) ಯಲ್ಲಿ ಬೀಳಿಸುತ್ತಾರೆ. ಇವರು ಬೇಹದ್ದಿನ ತಂದೆ ಅಂದಮೇಲೆ ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಇಂತಹ ಮಧುರ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡುತ್ತಾ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇರಬೇಕು. ಇದೇ ನೆನಪಿನ ಬಲದಿಂದಲೇ ನಿಮ್ಮ ಆತ್ಮವು ಕಂಚನವಾಗಿ ಸ್ವರ್ಗದ ಮಾಲೀಕರನ್ನಾಗಿ ಮಾಡಿ ಬಿಡುತ್ತದೆ. ಸ್ವರ್ಗದ ಹೆಸರನ್ನು ಕೇಳಿಯೇ ಹೃದಯವು ಖುಷಿಯಾಗಿ ಬಿಡುತ್ತದೆ. ಯಾರು ನಿರಂತರ ನೆನಪು ಮಾಡುತ್ತಾರೆ ಮತ್ತು ಅನ್ಯರಿಗೂ ನೆನಪು ತರಿಸುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈ ಪುರುಷಾರ್ಥವನ್ನು ಮಾಡುತ್ತಾ-ಮಾಡುತ್ತಾ ಅಂತ್ಯದಲ್ಲಿ ಆ ಸ್ಥಿತಿಯು ನಿಮ್ಮದಾಗಿ ಬಿಡುತ್ತದೆ. ಇದಂತು ಪ್ರಪಂಚವೂ ಹಳೆಯದಾಗಿದೆ, ದೇಹವೂ ಹಳೆಯದಾಗಿದೆ, ದೇಹ ಸಹಿತ ದೇಹದ ಎಲ್ಲಾ ಸಂಬಂಧವೂ ಹಳೆಯದಾಗಿದೆ. ಅದೆಲ್ಲದರಿಂದ ಬುದ್ಧಿಯೋಗವನ್ನು ಸರಿದು, ಒಬ್ಬ ತಂದೆಯ ಸಂಗದೊಂದಿಗೆ ಜೋಡಿಸಬೇಕಾಗಿದೆ. ಅದರಿಂದ ಅಂತ್ಯಕಾಲದಲ್ಲಿಯೂ ಆ ಒಬ್ಬ ತಂದೆಯೇ ನೆನಪಿರಬೇಕು, ಮತ್ತ್ಯಾವುದೇ ಸಂಬಂಧದ ನೆನಪಿದೆಯೆಂದರೆ ಅಂತ್ಯದಲ್ಲಿಯೂ ಅವರ ನೆನಪು ಬಂದು ಬಿಡುತ್ತದೆ ಮತ್ತು ಪದವಿ ಭ್ರಷ್ಟ ಆಗಿ ಬಿಡುತ್ತದೆ. ಅಂತ್ಯ ಕಾಲದಲ್ಲಿ ಯಾರು ಬೇಹದ್ದಿನ ತಂದೆಯ ನೆನಪಿನಲ್ಲಿರುತ್ತಾರೆಯೋ, ಅವರೇ ನರನಿಂದ ನಾರಾಯಣನಾಗುವರು. ತಂದೆಯ ನೆನಪಿದೆಯೆಂದರೆ, ಮತ್ತೆ ಅವರಿಗಾಗಿ ಶಿವಾಲಯವು ದೂರವಿಲ್ಲ.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ಬೇಹದ್ದಿನ ತಂದೆಯ ಬಳಿ ಬರುವುದೇ ರಿಫ್ರೆಜ್ ಆಗುವುದಕ್ಕಾಗಿ, ಏಕೆಂದರೆ ಮಕ್ಕಳಿಗೆ ಗೊತ್ತಿದೆ - ಬೇಹದ್ದಿನ ತಂದೆಯಿಂದ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಇದನ್ನೆಂದಿಗೂ ಮರೆಯಬಾರದು. ಅದು ಸದಾ ನೆನಪಿದ್ದರೆ ಮಕ್ಕಳೂ ಸಹ ಅಪಾರ ಖುಷಿಯಲ್ಲಿರುತ್ತೀರಿ. ಈ ಬ್ಯಾಡ್ಜ್ ನಡೆಯುತ್ತಾ-ತಿರುಗಾಡುತ್ತಾ ಗಳಿಗೆ-ಗಳಿಗೆಗೂ ನೋಡುತ್ತಾ ಇರಿ - ಸಂಪೂರ್ಣವಾಗಿ ಹೃದಯಕ್ಕೆ ನಾಟಿ ಬಿಡಬೇಕು. ಓಹೋ! ಭಗವಂತನ ಶ್ರೀಮತದಿಂದ ನಾವು ಹೀಗಾಗುತ್ತಿದ್ದೇವೆ. ಬ್ಯಾಡ್ಜ್ನ್ನು ನೋಡುತ್ತಾ, ಅದನ್ನು ಪ್ರೀತಿ ಮಾಡುತ್ತಾ ಇರಿ ಅಷ್ಟೇ. ಬಾಬಾ, ಬಾಬಾ ಎನ್ನುತ್ತಾ ಇರುತ್ತೀರೆಂದರೆ ಸದಾ ಸ್ಮೃತಿಯಿರುತ್ತದೆ - ನಾವು ತಂದೆಯ ಮೂಲಕ ಹೀಗಾಗುತ್ತಿದ್ದೇವೆ. ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಮಧುರ ಮಕ್ಕಳದು ಬಹಳ ವಿಶಾಲ ಬುದ್ಧಿಯಿರಬೇಕು. ಇಡೀ ದಿನದಲ್ಲಿ ಸರ್ವೀಸಿನ ವಿಚಾರಗಳೇ ನಡೆಯುತ್ತಿರಲಿ. ಬಾಬಾರವರಿಗಂತು ಅಂತಹ ಮಕ್ಕಳು ಬೇಕು, ಯಾರು ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ನೀವು ಮಕ್ಕಳು ಇಡೀ ವಿಶ್ವದ ಮೇಲೆ ಮುತ್ತಿಗೆಯನ್ನು ಹಾಕಬೇಕು ಅರ್ಥಾತ್ ಪತಿತ ಪ್ರಪಂಚವನ್ನು ಪಾವನ ಮಾಡಬೇಕಾಗಿದೆ. ಇಡೀ ವಿಶ್ವವನ್ನು ದುಃಖಧಾಮದಿಂದ ಸುಖಧಾಮವನ್ನಾಗಿ ಮಾಡಬೇಕಾಗಿದೆ. ಶಿಕ್ಷಕನಿಗೂ ಸಹ ಓದಿಸುವುದರಲ್ಲಿ ಮಜಾ ಬರುತ್ತದೆಯಲ್ಲವೆ. ನೀವಂತು ಈಗ ಬಹಳ ಶ್ರೇಷ್ಠವಾದ ಟೀಚರ್ ಆಗಿದ್ದೀರಿ. ಎಷ್ಟು ಒಳ್ಳೆಯ ಟೀಚರ್, ಅವರು ಅನೇಕನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ, ಎಂದಿಗೂ ಸುಸ್ತಾಗುವುದಿಲ್ಲ. ಈಶ್ವರನ ಸೇವೆಯಲ್ಲಿ ಬಹಳ ಖುಷಿಯಿರುತ್ತದೆ. ತಂದೆಯ ಸಹಯೋಗವು ಸಿಗುತ್ತದೆ. ಇದು ದೊಡ್ಡ ಬೇಹದ್ದಿನ ವ್ಯಾಪಾರವೂ ಆಗಿದೆ, ವ್ಯಾಪಾರಿ ಜನರೇ ಹಣವಂತರಾಗುತ್ತಾರೆ. ಅವರು ಈ ಜ್ಞಾನ ಮಾರ್ಗದಲ್ಲಿಯೂ ಹೆಚ್ಚು ಉತ್ಸುಕರಾಗಿರುತ್ತಾರೆ. ತಂದೆಯೂ ಸಹ ಬೇಹದ್ದಿನ ವ್ಯಾಪಾರಿಯಲ್ಲವೆ. ವ್ಯಾಪಾರವು ಬಹಳ ಫಸ್ಟ್ಕ್ಲಾಸ್ ಆಗಿದೆ ಆದರೆ ಇದರಲ್ಲಿ ಬಹಳ ಸಾಹಸದ ಗುಣವನ್ನು ಧಾರಣೆ ಮಾಡಬೇಕಾಗುತ್ತದೆ. ಹೊಸ-ಹೊಸ ಮಕ್ಕಳು ಪುರುಷಾರ್ಥದಲ್ಲಿ ಹಳಬರಿಗಿಂತಲೂ ಮುಂದೆ ಹೋಗಬಹುದು. ಪ್ರತಿಯೊಬ್ಬರದೂ ಅವರವರ ಅದೃಷ್ಟವಿದೆ, ಅಂದಮೇಲೆ ಪುರುಷಾರ್ಥವೂ ಸಹ ಪ್ರತಿಯೊಬ್ಬರೂ ಮಾಡಬೇಕಾಗಿದೆ. ತಮ್ಮ ಪರಿಶೀಲನೆಯನ್ನು ಸಂಪೂರ್ಣವಾಗಿ ಮಾಡಿಕೊಳ್ಳಬೇಕಾಗಿದೆ. ಈ ರೀತಿ ಪರಿಶೀಲನೆ ಮಾಡುವವರು, ಹಗಲು-ರಾತ್ರಿ ಪುರುಷಾರ್ಥದಲ್ಲಿ ತೊಡಗಿ ಬಿಡುತ್ತಾರೆ. ಹೇಳುತ್ತಾರೆ - ನಾವು ನಮ್ಮ ಸಮಯವನ್ನೇಕೆ ವ್ಯರ್ಥ ಮಾಡುವುದು! ಸ್ಕಾಲರ್ಶಿಪ್ನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ. ಇಂತಹ ಮಕ್ಕಳಿಗೆ ನಂತರ ಸಹಯೋಗವೂ ಸಿಗುತ್ತದೆ. ಇದೇರೀತಿ ಹೊಸ-ಹೊಸ ಪುರುಷಾರ್ಥಿ ಮಕ್ಕಳು ನಿಮ್ಮನ್ನು ನೋಡುತ್ತಾರೆ. ಸಾಕ್ಷಾತ್ಕಾರವನ್ನು ಮಾಡುತ್ತಿರುತ್ತಾರೆ. ಹೇಗೆ ಪ್ರಾರಂಭದಲ್ಲಿ ಆಯಿತು, ಅದನ್ನೇ ನಂತರ ಅಂತ್ಯದಲ್ಲಿ ನೋಡುತ್ತೀರಿ. ಎಷ್ಟು ಸಮೀಪವಾಗುತ್ತಾ ಸಾಗುತ್ತದೆಯೋ, ಅಷ್ಟು ಖುಷಿಯಲ್ಲಿ ನರ್ತಿಸುತ್ತಿರುತ್ತೀರಿ. ಆ ಕಡೆ ರಕ್ತದ ಕೋಡಿಯ ಹರಿಯುವ ಆಟವೂ ನಡೆಯುತ್ತಿರುತ್ತದೆ.

ನೀವು ಮಕ್ಕಳದು ಈಶ್ವರೀಯ ರೇಸ್ ನಡೆಯುತ್ತಿದೆ, ಎಷ್ಟು ಮುಂದೆ ಓಡುತ್ತೀರಿ ಅಷ್ಟೂ ಹೊಸ ಪ್ರಪಂಚವೂ ಸಮೀಪದಲ್ಲಿ ಕಾಣಿಸುತ್ತಿರುತ್ತದೆ, ಖುಷಿಯು ಹೆಚ್ಚುತ್ತಿರುತ್ತದೆ. ಯಾರಿಗೆ ಕಾಣಿಸುವುದೇ ಇಲ್ಲ, ಅವರಿಗೆ ಖುಷಿಯೂ ಆಗುವುದಿಲ್ಲ. ಈಗಂತು ಕಲಿಯುಗಿ ಪ್ರಪಂಚದೊಂದಿಗೆ ವೈರಾಗ್ಯ ಮತ್ತು ಸತ್ಯಯುಗಿ ಹೊಸ ಪ್ರಪಂಚದೊಂದಿಗೆ ಬಹಳ ಪ್ರೀತಿಯಿರಬೇಕು. ಶಿವ ತಂದೆಯ ನೆನಪಿರುತ್ತದೆಯೆಂದರೆ, ಸ್ವರ್ಗದ ಆಸ್ತಿಯೂ ನೆನಪಿರುತ್ತದೆ. ಸ್ವರ್ಗದ ಆಸ್ತಿಯು ನೆನಪಿರುತ್ತದೆಯೆಂದರೆ ಶಿವ ತಂದೆಯೂ ನೆನಪಿರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ನಾವು ಸ್ವರ್ಗದ ಕಡೆ ಹೋಗುತ್ತಿದ್ದೇವೆ, ಕಾಲು ನರಕದ ಕಡೆಯಿದೆ, ಮುಖವು ಸ್ವರ್ಗದ ಕಡೆ ಇದೆ. ಈಗಂತು ಕಿರಿಯರು-ಹಿರಿಯರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಬಾಬಾರವರಿಗೆ ಸದಾ ಈ ನಶೆಯಿರುತ್ತದೆ- ಓಹೋ! ನಾವು ಹೋಗಿ ಈ ಬಾಲಕೃಷ್ಣನಾಗುವೆನು, ಅವರಿಗಾಗಿ ಮುಂಚಿತವಾಗಿಯೇ ಉಡುಗೊರೆಗಳನ್ನು ಕಳುಹಿಸುತ್ತಿರುತ್ತಾರೆ. ಯಾರಿಗೆ ಪೂರ್ಣ ನಿಶ್ಚಯವಿದೆಯೋ ಆ ಗೋಪಿಕೆಯರೇ ಉಡುಗೊರೆಗಳನ್ನು ಕಳುಹಿಸುತ್ತಾರೆ, ಅವರಿಗೆ ಅತೀಂದ್ರಿಯ ಸುಖದ ಅನುಭವವಾಗುತ್ತದೆ. ನಾವೇ ಅಮರ ಲೋಕದಲ್ಲಿ ದೇವತೆಯಾಗುತ್ತೇವೆ. ಕಲ್ಪದ ಮೊದಲೂ ಸಹ ನಾವೇ ಆಗಿದ್ದೆವು, ಮತ್ತೆ ನಾವೇ 84 ಪುನರ್ಜನ್ಮಗಳಾಯಿತು. ಈ ಬಾಜೋಲಿಯು ನೆನಪಿರುತ್ತದೆಯೆಂದರೂ ಅಹೋ ಸೌಭಾಗ್ಯ - ಸದಾ ಅಪಾರಖುಷಿಯಲ್ಲಿರಿ, ಬಹಳ ದೊಡ್ಡ ಲಾಟರಿ ಸಿಗುತ್ತಿದೆ. 5000 ವರ್ಷಗಳ ಮೊದಲೂ ಸಹ ನಾವು ರಾಜ್ಯಭಾಗ್ಯವನ್ನು ಪಡೆದಿದ್ದೆವು, ನಂತರ ನಾಳೆಯೂ ಪಡೆಯುತ್ತೇವೆ. ಡ್ರಾಮಾದಲ್ಲಿ ನೊಂದಿತವಾಗಿದೆ. ಹೇಗೆ ಕಲ್ಪದ ಮೊದಲು ಜನ್ಮವನ್ನು ತೆಗೆದುಕೊಂಡಿದ್ದಿರಿ, ಹಾಗೆಯೇ ತೆಗೆದುಕೊಳ್ಳುತ್ತೀರಿ, ಅವರೇ ನಮ್ಮ ತಂದೆ-ತಾಯಿ ಆಗುತ್ತಾರೆ. ಯಾರು ಕೃಷ್ಣನ ತಂದೆಯಾಗಿದ್ದರು, ಅವರೇ ಮತ್ತೆ ಆಗುವರು. ಯಾರು ಇಡೀ ದಿನದಲ್ಲಿ ಇಂತಿಂತಹ ವಿಚಾರಗಳು ಮಾಡುತ್ತಿರುತ್ತಾರೆಯೋ, ಅವರು ಬಹಳ ರಮಣೀಕತೆಯಲ್ಲಿರುತ್ತಾರೆ. ವಿಚಾರ ಸಾಗರ ಮಂಥನ ಮಾಡುವುದಿಲ್ಲವೆಂದರೆ ಅನಾರೋಗ್ಯವಿದೆ ಎಂದರ್ಥವಾಗಿದೆ. ಹಸು ಭೋಜನ (ಹುಲ್ಲು) ವನ್ನು ತಿನ್ನುತ್ತದೆಯೆಂದರೆ, ಇಡೀ ದಿನದಲ್ಲಿ ಅದನ್ನು ಮೆಲುಕು ಹಾಕುತ್ತಿರುತ್ತದೆ. ಮುಖವು ಮೆಲುಕು ಹಾಕುತ್ತಿಲ್ಲವೆಂದರೆ ರೋಗಿಯಾಗಿದೆ ಎಂದರ್ಥ. ಇದೂ ಸಹ ಹಾಗೆಯೇ ಆಗಿದೆ. ಬೇಹದ್ದಿನ ತಂದೆ ಮತ್ತು ದಾದಾ ಇಬ್ಬರಿಗೂ ಮಧುರಾತಿ ಮಧುರ ಮಕ್ಕಳೊಂದಿಗೆ ಬಹಳ ಪ್ರೀತಿಯಿದೆ, ಎಷ್ಟೊಂದು ಪ್ರೀತಿಯಿಂದ ಓದಿಸುತ್ತಾರೆ. ಕಪ್ಪಾಗಿರುವವರಿಂದ ಸುಂದರರನ್ನಾಗಿ ಮಾಡುತ್ತಾರೆ. ಅಂದಮೇಲೆ ಮಕ್ಕಳೂ ಸಹ ಖುಷಿಯಲ್ಲಿ ನಶೆಯೇರಿರಬೇಕಾಗಿದೆ. ನೆನಪಿನ ಯಾತ್ರೆಯಿಂದ ನಶೆಯೇರುತ್ತದೆ. ತಂದೆಯು ಕಲ್ಪಕಲ್ಪವೂ ಬಹಳ ಪ್ರೀತಿಯಿಂದ ಲವ್ಲೀ ಸೇವೆಯನ್ನು ಮಾಡುತ್ತಾರೆ. 5 ತತ್ವಗಳ ಸಹಿತವಾಗಿ ಎಲ್ಲರನ್ನೂ ಪಾವನ ಮಾಡುತ್ತಾರೆ. ಎಷ್ಟೊಂದು ದೊಡ್ಡ ಬೇಹದ್ದಿನ ಸೇವೆಯಾಗಿದೆ. ಬಾಬಾರವರು ಬಹಳ ಪ್ರೀತಿಯಿಂದ ಮಕ್ಕಳಿಗೆ ಶಿಕ್ಷಣವನ್ನೂ ಕೊಡುತ್ತಿರುತ್ತಾರೆ ಏಕೆಂದರೆ ಮಕ್ಕಳನ್ನು ಸುಧಾರಣೆ ಮಾಡುವುದು ತಂದೆ ಅಥವಾ ಶಿಕ್ಷಕನದೇ ಕೆಲಸವಾಗಿದೆ. ತಂದೆಯದು ಶ್ರೀಮತವಿದೆ, ಅದರಿಂದಲೇ ಶ್ರೇಷ್ಠರಾಗುತ್ತೀರಿ. ಎಷ್ಟು ಪ್ರೀತಿಯಿಂದ ನೆನಪು ಮಾಡುತ್ತೀರಿ, ಅಷ್ಟೂ ಶ್ರೇಷ್ಠರಾಗುತ್ತೀರಿ. ಇದನ್ನೂ ಚಾರ್ಟ್ನಲ್ಲಿ ಬರೆಯಬೇಕಾಗಿದೆ - ನಾವು ಶ್ರೀಮತದಂತೆ ನಡೆಯುತ್ತೇವೆಯೇ ಅಥವಾ ನನ್ನ ಮತದಂತೆ ನಡೆಯುತ್ತೇನೆಯೇ? ಶ್ರೀಮತದಂತೆ ನಡೆಯುವುದರಿಂದಲೇ ನೀವು ಅಕ್ಯುರೇಟ್ ಆಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಬೇಕಾಗಿದೆ - ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸಂಗಮದ ಪ್ರತೀ ಕ್ಷಣವನ್ನು ಸಫಲ ಮಾಡುತ್ತೇವೆ. ನಾವು ಬಾಬಾರವರನ್ನೆಂದಿಗೂ ಮರೆಯುವುದಿಲ್ಲ. ವಿದ್ಯಾರ್ಥಿವೇತನವನ್ನು ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ.

2. ಸದಾ ಸ್ಮೃತಿಯಿರಲಿ - ಈಗ ನಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ. ಕಾಲು ನರಕದ ಕಡೆ, ಮುಖವು ಸ್ವರ್ಗದ ಕಡೆಯಿದೆ. ಬಾಜೋಲಿಯನ್ನು ನೆನಪು ಮಾಡುತ್ತಾ ಅಪಾರ ಖುಷಿಯಲ್ಲಿರಬೇಕಾಗಿದೆ. ದೇಹೀ-ಅಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ.

ವರದಾನ:
ತಮ್ಮ ಸರ್ವ ಶ್ರೇಷ್ಠ ಸ್ಥಾನದ ನಶೆಯ ಮೂಲಕ ಅನೇಕ ಆತ್ಮರ ಕಲ್ಯಾಣ ಮಾಡುವಂತಹ ಅಧಿಕಾರಿ ಸ್ವರೂಪ ಭವ.

ನಾವು ಸರ್ವ ಶಕ್ತಿವಂತನ ಮಕ್ಕಳಾಗಿದ್ದೇವೆ - ಇದು ಸರ್ವ ಶ್ರೇಷ್ಠ ಸ್ಥಾನವಾಗಿದೆ, ಈ ಸ್ಥಾನದ ನಶೆಯಲ್ಲಿ ಇರುತ್ತೀರೆಂದರೆ ಮಾಯೆಯ ಅಧೀನತೆಯು ಸಮಾಪ್ತಿಯಾಗುವುದು. ಇದೇ ಅಧಿಕಾರ ಸ್ವರೂಪರಾಗುವುದರಿಂದ ಯಾವುದೇ ಆತ್ಮನ ಕಲ್ಯಾಣವನ್ನಾದರೂ ಮಾಡಬಹುದು. ಯಾರು ಸದಾ ಈ ನಶೆಯಲ್ಲಿರುತ್ತಾರೆಯೋ ಅವರು ಸದಾಕಾಲದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವರು. ಇದೇ ಅಧಿಕಾರವನ್ನು ಸದಾ ಸ್ಥಿರವಾಗಿ ಇಟ್ಟುಕೊಳ್ಮ್ಳತ್ತೀರೆಂದರೆ, ವಿಶ್ವವು ತಮ್ಮ ಮುಂದೆ ಬಾಗುವುದು, ತಾವು ಯಾರ ಮುಂದೆಯೂ ಬಾಗಲು ಸಾಧ್ಯವಿಲ್ಲ.

ಸ್ಲೋಗನ್:
ಮಾಡಿಸುವ ತಂದೆಯ ಸ್ಮೃತಿಯಿಂದ ನಾನೆಂಬುದನ್ನು ಸಮಾಪ್ತಿ ಮಾಡಿರಿ.

ಅವ್ಯಕ್ತ ಸೂಚನೆ:– “ ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಮಧುರತೆಯ ಮೂಲಕ ತಂದೆಯ ಸಮೀಪತೆಯ ಸಾಕ್ಷಾತ್ಕಾರವನ್ನು ಮಾಡಿಸಿ. ನಿಮ್ಮ ಸಂಕಲ್ಪದಲ್ಲಿಯು ಸಹ ಮಧುರತೆ, ಮಾತಿನಲ್ಲಿಯೂ ಮಧುರತೆ, ಕರ್ಮದಲ್ಲಿಯೂ ಮಧುರತೆಯಿರಲಿ - ಇದೇ ತಂದೆಯ ಸಮೀಪತೆಯಾಗಿದೆ ಅದಕ್ಕಾಗಿ ತಂದೆಯು ಸಹ ಪ್ರತಿ ದಿನ ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ ಮತ್ತು ಮಕ್ಕಳು ಸಹ ಪ್ರತ್ಯುತ್ತರ ಕೊಡುತ್ತಾರೆ ಮಧುರಾತಿ ಮಧುರ ಬಾಬಾ. ಇದೇ ಪ್ರತಿ ದಿನದ ಮಧುರತೆಯ ಮಾತು ಮಧುರರನ್ನಾಗಿ ಮಾಡಿ ಬಿಡುತ್ತದೆ.