08.06.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ,
ನೆನಪಿನಿಂದ ವಿಕರ್ಮ ವಿನಾಶವಾಗುವುದು, ಟ್ರಾನ್ಸ್ ನಲ್ಲಿ(ಧ್ಯಾನದಲ್ಲಿ) ಹೋಗುವುದರಿಂದ ಅಲ್ಲ.
ಟ್ರಾನ್ಸ್ ಎನ್ನುವುದು ನಯಾಪೈಸೆಗೂ ಬರದ ಆಟವಾಗಿದೆ, ಆದ್ದರಿಂದ ಟ್ರಾನ್ಸ್ ನಲ್ಲಿ ಹೋಗುವ ಆಸೆ
ಇಟ್ಟುಕೊಳ್ಳಬೇಡಿ.”
ಪ್ರಶ್ನೆ:
ಮಾಯೆಯ
ಬಿನ್ನ-ಬಿನ್ನ ರೂಪಗಳಿಂದ ತಪ್ಪಿಸಿಕೊಳ್ಳಲು ತಂದೆ ಎಲ್ಲಾ ಮಕ್ಕಳಿಗೆ ಯಾವ ಒಂದು ಎಚ್ಚರಿಕೆ
ಕೊಡುತ್ತಾರೆ?
ಉತ್ತರ:
ಮಧುರ ಮಕ್ಕಳೇ,
ಟ್ರಾನ್ಸ್ ನಲ್ಲಿ ಹೋಗುವ ಆಸೆ ಇಟ್ಟುಕೊಳ್ಳಬೇಡಿ. ಜ್ಞಾನ-ಯೋಗ ಕ್ಕೂ ಟ್ರಾನ್ಸ್ ಗೂ ಯಾವುದೇ ಸಂಬಂಧ
ವಿಲ್ಲ. ಮುಖ್ಯವಾಗಿರುವುದು ವಿಧ್ಯೆಯಾಗಿದೆ. ಯಾರಾದರೂ ಟ್ರಾನ್ಸ್ನಲ್ಲಿ ಹೋಗಿ ನನ್ನಲ್ಲಿ ಮಮ್ಮಾ
ಬಂದರು, ಬಾಬಾ ಬಂದರು ಎಂದು ಹೇಳುತ್ತಾರೆ, ಇದೆಲ್ಲಾ ಸೂಕ್ಷ್ಮ ಮಾಯೆಯ ಸಂಕಲ್ಪವಾಗಿದೆ. ಇವರಿಂದ
ಬಹಳ ಎಚ್ಚರಿಕೆಯಿಂದಿರಿ. ಮಾಯೆ ಬಹಳ ಮಕ್ಕಳಲ್ಲಿ ಪ್ರವೇಶಮಾಡಿ ಉಲ್ಟಾ ಕೆಲಸ ಮಾಡಿಸಿಬಿಡುತ್ತದೆ
ಆದ್ದರಿಂದ ಟ್ರಾನ್ಸ್ ನ ಆಸೆ ಇಟ್ಟುಕೊಳ್ಳಬೇಡಿ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳೇ ಇದನ್ನು ತಿಳಿದುಕೊಂಡಿರುವಿರಿ ಒಂದು ಕಡೆ ಭಕ್ತಿ. ಇನ್ನೊಂದು ಕಡೆ
ಜ್ಞಾನ. ಭಕ್ತಿಯಂತೂ ಅಪಾರವಾಗಿದೆ ಮತ್ತು ಕಲಿಸುವಂತಹವರು ಅನೇಕರಿದ್ದಾರೆ. ಶಾಸ್ತ್ರವನ್ನೂ
ಕಲಿಸುತ್ತಾರೆ, ಮನುಷ್ಯರು ಕಲಿಯುತ್ತಾರೆ. ಇಲ್ಲಿ ಶಾಸ್ತ್ರವೂ ಇಲ್ಲಾ, ಮನುಷ್ಯರೂ ಇಲ್ಲ. ಇಲ್ಲಿ
ಕಲಿಸುವಂತಹವರು ಆತ್ಮೀಯ ತಂದೆ ಒಬ್ಬರೇ ಯಾರು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮವೇ ಧಾರಣೆ
ಮಾಡುತ್ತದೆ. ಪರಮಪಿತ ಪರಮಾತ್ಮನಲ್ಲಿ ಈ ಇಡೀ ಜ್ಞಾನ ಇದೆ, 84 ಚಕ್ರದ ಜ್ಞಾನ ಅವರಲ್ಲಿದೆ,
ಆದ್ದರಿಂದ ಅವರನ್ನೂ ಸ್ವದರ್ಶನ ಚಕ್ರಧಾರಿ ಎಂದು ಹೇಳಬಹುದು. ನಾವು ಮಕ್ಕಳನ್ನೂ ಅವರು ಸ್ವದರ್ಶನ
ಚಕ್ರಧಾರಿಗಳನ್ನಾಗಿ ಮಾಡುತ್ತಿದ್ದಾರೆ. ಬಾಬಾ ಕೂಡ ಬ್ರಹ್ಮಾರವರ ತನುವಿನ್ನಲ್ಲಿದ್ದಾರೆ,
ಆದ್ದರಿಂದ ಅವರನ್ನು ಬ್ರಾಹ್ಮಣ ಎಂದೂ ಹೇಳಬಹುದಾಗಿದೆ. ನಾವೂ ಅವರ ಮಕ್ಕಳು ಬ್ರಾಹ್ಮಣರಿಂದ
ದೇವತೆಗಳಾಗುತ್ತೇವೆ. ಈಗ ತಂದೆ ಕುಳಿತು ನೆನಪಿನಯಾತ್ರೆ ಯನ್ನು ಕಲಿಸುತ್ತಿದ್ದಾರೆ,ಇದರಲ್ಲಿ
ಹಠಯೋಗ ಮುಂತಾದುವುಗಳ ಮಾತಿಲ್ಲ. ಅವರು ಹಠಯೋಗದಿಂದ ಟ್ರಾನ್ಸ್ ಮುಂತಾದುವಲ್ಲಿ ಹೋಗುತ್ತಾರೆ. ಇದೇನು
ದೊಡ್ಡಮಾತಲ್ಲ. ಟ್ರಾನ್ಸ್ ನಿಂದ ಯಾವುದೇ ಹೆಚ್ಚುಗಾರಿಕೆ ಇಲ್ಲ. ಟ್ರಾನ್ಸ್ ಅಂತೂ ನಯಾಪೈಸೆಗೂ ಬರದ
ಆಟವಾಗಿದೆ. ನೀವು ಈರೀತಿ ಯಾರಿಗೂ ಎಂದೂ ಹೇಳಬಾರದಾಗಿದೆ ನಾವು ಟ್ರಾನ್ಸ್ ನಲ್ಲಿ ಹೋಗುತ್ತೇವೆ ಎಂದು
ಏಕೆಂದರೆ ಇತ್ತೀಚೆಗೆ ವಿದೇಶ ಮುಂತಾದಕಡೆ ಅಲ್ಲಿ-ಇಲ್ಲಿ ಬಹಳಷ್ಟು ಜನ ಟ್ರಾನ್ಸ್ ನಲ್ಲಿ
ಹೋಗುವವರಿದ್ದಾರೆ. ಟ್ರಾನ್ಸ್ ನಲ್ಲಿ ಹೋಗುವುದರಿಂದ ಅವರಿಗೂ ಏನೂ ಪ್ರಯೋಜನವಿಲ್ಲ, ನಿಮಗೂ ಏನೂ
ಪ್ರಯೋಜನವಿಲ್ಲ. ಬಾಬಾ ತಿಳುವಳಿಕೆ ಕೊಟ್ಟಿದ್ದಾರೆ.ಟ್ರಾನ್ಸ್ನಲ್ಲಿ ನೆನಪಿನಯಾತ್ರೆಯೂ ಇಲ್ಲಾ
ಜ್ಞಾನವೂ ಇಲ್ಲ. ಧ್ಯಾನ ಅಥವಾ ಟ್ರಾನ್ಸ್ ನಲ್ಲಿ ಹೋಗುವವರು ಎಂದೂ ಸ್ವಲ್ಪವೂ ಜ್ಞಾನವನ್ನು
ಕೇಳುವುದಿಲ್ಲ, ಇದರಿಂದ ಪಾಪವೂ ಭಸ್ಮ ವಾಗುವುದಿಲ್ಲ.ಟ್ರಾನ್ಸ್ ನ ಮಹತ್ವಿಕೆ ಏನೂ ಇಲ್ಲ. ಮಕ್ಕಳು
ಯೋಗವನ್ನಿಡುತ್ತಾರೆ, ಅದನ್ನು ಟ್ರಾನ್ಸ್ ಎಂದು ಹೇಳಲಾಗುವುದಿಲ್ಲ. ನೆನಪಿನಿಂದ ವಿಕರ್ಮ ವಿನಾಶ
ವಾಗುವುದು. ಟ್ರಾನ್ಸ್ ನಲ್ಲಿ ವಿಕರ್ಮ ವಿನಾಶವಾಗುವುದಿಲ್ಲ. ಬಾಬಾ ಎಚ್ಚರಿಕೆ ಕೊಡುತ್ತಾರೆ,
ಮಕ್ಕಳೇ ಟ್ರಾನ್ಸ್ ನ ಆಸೆ ಇಟ್ಟಕೊಳ್ಳಬೇಡಿ ಎಂದು.
ನೀವು ತಿಳಿದಿರುವಿರಿ ಈ
ಸನ್ಯಾಸಿಗಳು ಮುಂತಾದವರಿಗೆ ಜ್ಞಾನ ಯಾವಾಗ ಸಿಗುವುದೆಂದರೆ ಯಾವಾಗ ವಿನಾಶದ ಸಮಯ ವಾಗುತ್ತದೆ ಆಗ.
ಭಲೆ ಆದರೂ ನೀವು ಹೀಗೇ ನಿಮಂತ್ರಣ ಕೊಡುತ್ತಿರಿ ಆದರೆ ಈ ಜ್ಞಾನ ಅವರ ಕಳಷದಲ್ಲಿ ಬೇಗನೆ
ಬರುವುದಿಲ್ಲ.ಯಾವಾಗ ವಿನಾಶ ಎದುರಲ್ಲಿ ನೋಡುತ್ತಾರೆ ಆಗ ಬರುತ್ತದೆ, ತಿಳಿಯುತ್ತಾರೆ ಈಗ ಮೃತ್ಯು
ಇನ್ನೇನು ಬಂದಿತು. ಯಾವಾಗ ಸಮೀಪದಿಂದ ನೋಡುತ್ತಾರೆ ಆಗ ಒಪ್ಪುತ್ತಾರೆ. ಅವರ ಪಾತ್ರವೇ
ಅಂತ್ಯದಲ್ಲಿದೆ. ನೀವು ಹೇಳುವಿರಿ ಈಗ ವಿನಾಶ ಇನ್ನೇನು ಬಂದಿತು, ಮೃತ್ಯು ಬರುವುದಿದೆ. ಆದರೆ ಅವರು
ತಿಳಿಯುತ್ತಾರೆ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು.
ನಿಮ್ಮ ವೃಕ್ಷ ನಿಧಾನವಾಗಿ
ಬೆಳೆಯುತ್ತಿದೆ. ಸನ್ಯಾಸಿಗಳಿಗೆ ಹೇಳಬೇಕುಕೇವಲ ತಂದೆಯನ್ನು ನೆನಪುಮಾಡಿ ಎಂದು. ತಂದೆ ಇದನ್ನೂ
ತಿಳಿಸುತ್ತಾರೆ ನೀವು ಕಣ್ಣನ್ನು ಮುಚ್ಚಿಕೊಳ್ಳಬಾರದು ಎಂದು. ಕಣ್ಣನ್ನು ಮುಚ್ಚಿಕೊಂಡರೆ ತಂದೆಯನ್ನು
ಹೇಗೆ ನೋಡುವಿರಿ. ನಾನು ಆತ್ಮ ಆಗಿದ್ದೇನೆ, ಪರಮಪಿತ ಮರಮಾತ್ಮನ ಎದುರು ಕುಳಿತಿದ್ದೇನೆ. ಅವರನ್ನು
ನೋಡಲಾಗುವುದಿಲ್ಲ, ಅದರೆ ಈ ಜ್ಞಾನ ಬುದ್ಧಿಯಲ್ಲಿದೆ. ನೀವು ಮಕ್ಕಳು ತಿಳಿಯುತ್ತೀರಿ ಪರಮಪಿತ
ಪರಮಾತ್ಮ ನಮಗೆ ಓದಿಸುತ್ತಿದ್ದಾರೆ-ಈ ಶರೀರದ ಆಧಾರ ಪಡೆದು. ಧ್ಯಾನ ಮುಂತಾದುವುಗಳ ಮಾತೇ ಇಲ್ಲ.
ಧ್ಯಾನದಲ್ಲಿ ಹೋಗುವುದೇನು ದೊಡ್ಡಮಾತಲ್ಲ. ಈ ಭೋಗ ಮುಂತಾದುವುಗಳೆಲ್ಲಾ ಡ್ರಾಮದಲ್ಲಿ ನಿಗಧಿಯಾಗಿದೆ.
ಸರ್ವೆಂಟ್ ಆಗಿ ಭೋಗವಿಟ್ಟು ಬರುವಿರಿ. ಹೇಗೆ ನೌಕರರು ದೊಡ್ಡ ಮನುಷ್ಯರಿಗೆ ಊಟ ಮಾಡಿಸುತ್ತಾರೆ ಹಾಗೆ.
ನೀವೂ ಸಹ ನೌಕರರಾಗಿರುವಿರಿ ದೇವತೆಗಳಿಗೆ ಭೋಗವಿಡಲು ಹೋಗುವಿರಿ. ಅವರು ಫರಿಷ್ತಾ ಆಗಿದ್ದಾರೆ. ಅವರು
ಮಮ್ಮಾ-ಬಾಬಾರವರನ್ನು ನೋಡುತ್ತಾರೆ. ಆ ಸಂಪೂರ್ಣ ಮೂರ್ತಿ ಕೂಡ ನಮ್ಮ ಗುರಿ ಉದ್ಧೇಶವಾಗಿದೆ.
ಅವರನ್ನು ಇಂತಹ ಫರಿಷ್ತಾ ಯಾರು ಮಾಡಿದರು? ಬಾಕಿ ಧ್ಯಾನದಲ್ಲಿ ಹೋಗುವುದಂತೂ ದೊಡ್ಡಮಾತಲ್ಲ. ಹೇಗೆ
ಇಲ್ಲಿ ಶಿವಬಾಬಾರವರು ನಿಮಗೆ ಓದಿಸುತ್ತಾರೆ ಅದೇರೀತಿ ಶಿವಬಾಬಾ ಇವರ (ಬ್ರಹ್ಮಾ) ಮುಖಾಂತರ ಅವರಿಗೂ
ಸ್ವಲ್ಪ ತಿಳಿಸುತ್ತಾರೆ. ಸೂಕ್ಷ್ಮವತನದಲ್ಲಿ ಏನಾಗುತ್ತದೆ,ಇದನ್ನು ಕೇವಲ ತಿಳಿಯಬೇಕಾಗುತ್ತದೆ.
ಬಾಕಿ ಟ್ರಾನ್ಸ್ ಮುಂತಾದುವಕ್ಕೆ ಏನೂ ಮಹತ್ವಿಕೆ ಕೊಡಬಾರದು. ಯಾರಿಗಾದರೂ ಟ್ರಾನ್ಸ್
ತೋರಿಸುವುದೂ-ಇದೂ ಸಹ ಹುಡುಗಾಟಿಕೆಯಾಗಿದೆ. ಬಾಬಾ ಎಲ್ಲರಿಗೂ ಎಚ್ಚರಿಕೆ ಕೊಡುತ್ತಾರೆ-ಟ್ರಾನ್ಸ್
ನಲ್ಲಿ ಹೋಗಬೇಡಿ, ಇದರಲ್ಲೂ ಎಷ್ಟೋಬಾರಿ ಮಾಯೆ ಪ್ರವೇಶವಾಗಿ ಬಿಡುತ್ತದೆ.
ಇದು ವಿಧ್ಯೆಯಾಗಿದೆ,
ಕಲ್ಪ-ಕಲ್ಪ ತಂದೆ ಬಂದು ನಿಮಗೆ ಓದಿಸುತ್ತಾರೆ. ಈಗ ಸಂಗಮಯುಗವಾಗಿದೆ. ನೀವು ಟ್ರಾನ್ಸ್ಫರ್
ಆಗಬೇಕಾಗಿದೆ. ಡ್ರಾಮಾದ ಪ್ಲಾನ್ ಅನುಸಾರ ನೀವು ಪಾತ್ರವನ್ನಭಿನಯಿಸುತ್ತಿರುವಿರಿ, ಪಾತ್ರದ ಮಹಿಮೆ
ಇದೆ. ತಂದೆ ಬಂದು ಡ್ರಾಮಾನುಸಾರ ಓದಿಸುತ್ತಾರೆ. ನೀವು ತಂದೆಯಿಂದ ಒಂದು ಬಾರಿ ಓದಿ ಮನುಷ್ಯರಿಂದ
ದೇವತೆ ಖಂಡಿತ ಆಗಬೇಕು. ಇದರಿಂದ ಮಕ್ಕಳಿಗಂತು ಖುಶಿಯಾಗುತ್ತದೆ. ಈಗ ನಾವು ತಂದೆಯನ್ನು ಮತ್ತು
ರಚನೆಯ ಆದಿ ಮಧ್ಯೆ ಅಂತ್ಯವನ್ನೂ ತಿಳಿದಿರುವಿರಿ. ತಂದೆಯ ಶಿಕ್ಷಣ ಪಡೆದು ಬಹಳ ಹರ್ಷಿತರಾಗಬೇಕಾಗಿದೆ.
ನೀವು ಹೊಸ ಪ್ರಪಂಚಕ್ಕಾಗಿ ಓದುತ್ತಿರುವಿರಿ. ಅದು ದೇವತೆಗಳ ರಾಜ್ಯ ಅಂದರೆ ಖಂಡಿತ ಪುರುಷೋತ್ತಮ
ಸಂಗಮಯುಗದಲ್ಲೇ ಓದಬೇಕಾಗುತ್ತದೆ. ನೀವು ಈ ದುಃಖದಿಂದ ಬಿಡಿಸಿಕೊಂಡು ಸುಖದಲ್ಲಿ ಹೋಗುವಿರಿ. ಇಲ್ಲಿ
ತಮೋಪ್ರದಾನರಾಗಿರುವ ಕಾರಣ ಕಾಯಿಲೆ ಮುಂತಾದುವುಗಳಲ್ಲಿ ಬರುವಿರಿ. ಈ ಎಲ್ಲಾ ರೋಗಗಳು ಅಳಿಸಿ
ಹೋಗಬೇಕು. ಮುಖ್ಯವಾಗಿ ವಿಧ್ಯೆ ಆಗಿದೆ, ಇದರಲ್ಲಿ ಟ್ರಾನ್ಸ್ ಮುಂತಾದುವುಗಳ ಸಂಬಂಧವಿಲ್ಲ.ಇದು
ದೊಡ್ಡ ಮಾತಲ್ಲ. ಬಹಳ ಜಾಗಗಳಲ್ಲಿ ಈ ರೀತಿ ಧ್ಯಾನದಲ್ಲಿ ಹೋಗುತ್ತಾರೆ ನಂತರ ಹೇಳುತ್ತಾರೆ ಮಮ್ಮಾ
ಬಂದಿದ್ದರು, ಬಾಬಾ ಬಂದಿದ್ದರು ಎಂದು. ತಂದೆ ಹೇಳುತ್ತಾರೆ ಇದು ಯಾವುದೂ ಇಲ್ಲ. ತಂದೆಯಂತೂ ಒಂದೇ
ಮಾತಲ್ಲಿ ತಿಳಿಸುತ್ತಾರೆ-ನೀವು ಏನು ಅರ್ಧ ಕಲ್ಪ ದೇಹ-ಅಭಿಮಾನಿಗಳಾಗಿದ್ದಿರಿ, ಈಗ
ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪುಮಾಡಿ ಆಗ ವಿಕರ್ಮ ವಿನಾಶ ವಾಗುತ್ತೆ, ಇದಕ್ಕೆ ನೆನಪಿನ
ಯಾತ್ರೆ ಎಂದು ಹೇಳಲಾಗುತ್ತದೆ. ಯೋಗ ಎಂದು ಹೇಳುವುದರಿಂದ ಯಾತ್ರೆ ಎಂದು ಸಿದ್ಧವಾಗುವುದಿಲ್ಲ. ನೀವು
ಆತ್ಮಗಳು ಇಲ್ಲಿಂದ ಹೋಗಬೇಕಾಗಿದೆ, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ನೀವು ಈಗ ಯಾತ್ರೆ
ಮಾಡುತ್ತಿರುವಿರಿ. ಅವರು ಮಾಡುವ ಯೋಗದಲ್ಲಿ ಯಾತ್ರೆಯ ಮಾತಿಲ್ಲ, ಹಠಯೋಗಿ ಗಳಂತೂ ಬಹಳಷ್ಟಿದ್ದಾರೆ,
ಅದಾಗಿದೆ ಹಠಯೋಗ, ಇದಾಗಿದೆ ತಂದೆಯನ್ನು ನೆನಪು ಮಾಡುವುದು. ತಂದೆ ಹೇಳುತ್ತಾರೆ ಮಧುರ-ಮಧುರ ಮಕ್ಕಳೇ
ತಮ್ಮನ್ನು ಆತ್ಮ ಎಂದು ತಿಳಿಯಿರಿ. ಈ ರೀತಿ ಬೇರೆ ಯಾರೂ ಎಂದೂ ತಿಳಿಸುವುದಿಲ್ಲ. ಇದು
ವಿದ್ಯೆಯಾಗಿದೆ. ತಂದೆಗೆ ಮಕ್ಕಳಾದ ನಂತರ ತಂದೆಯಿಂದ ಓದಬೇಕು ಮತ್ತು ಓದಿಸಬೇಕು. ಬಾಬಾ ಹೇಳುತ್ತಾರೆ
ನೀವು ಮ್ಯೂಜಿಯಂ ತೆರೆಯಿರಿ, ತಮಷ್ಟಕ್ಕೆ ತಾವೇ ನಿಮ್ಮ ಬಳಿ ಬರುತ್ತಾರೆ. ಕರೆಯವ ಗೊಡವೆಯೆ
ಇರುವುದಿಲ್ಲ. ಈ ಜ್ಞಾನ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ,ಎಂದೂ ಕೇಳಿರಲಿಲ್ಲ ಎನ್ನುತ್ತಾರೆ.
ಇದರಿಂದ ಚಾರಿತ್ರ್ಯೆ ಸುಧಾರಣೆಯಾಗುತ್ತದೆ. ಪವಿತ್ರತೆ ಮುಖ್ಯವಾಗಿದೆ, ಯಾವುದರ ಮೇಲೆ ಗಲಾಟೆ
ಮುಂತಾದುವುಗಳಾಗುತ್ತದೆ. ಬಹಳ ಮಂದಿ ಫೇಲ್ ಕೂಡ ಆಗುತ್ತಾರೆ. ನಿಮ್ಮ ಅವಸ್ಥೆ ಈ ರೀತಿಯಾಗಿ
ಬಿಡುತ್ತದೆ ಏನು ಈ ಪ್ರಪಂಚದಲ್ಲಿದ್ದರೂ ಅದನ್ನು ನೋಡುವುದಿಲ್ಲ. ತಿನ್ನುತ್ತಾ-ಕುಡಿಯುತ್ತಾ ನಿಮ್ಮ
ಬುದ್ಧಿ ಆಕಡೆಯಿರುತ್ತದೆ. ಹೇಗೆ ಅಪ್ಪ ಹೊಸ ಮನೆ ಕಟ್ಟುತ್ತಿದ್ದರೆ ಎಲ್ಲರ ಬುದ್ಧಿ ಹೊಸ ಮನೆಯಕಡೆ
ಹೋಗಿಬಿಡುತ್ತದೆ ಯಲ್ಲವೇ. ಈಗ ಹೊಸ ಪ್ರಪಂಚ ತಯಾರಾಗುತ್ತಿದೆ. ಬೇಹದ್ದಿನ ತಂದೆ ಬೇಹದ್ದಿನ ಮನೆ
ತಯಾರಿಸುತ್ತಿದ್ದಾರೆ. ನೀವು ತಿಳಿದಿದ್ದೀರಿ ನಾವುಸ್ವರ್ಗವಾಸಿಗಳಾಗಲು ಪುರುಷಾರ್ಥ
ಮಾಡುತ್ತಿದ್ದೇವೆ ಎಂದು. ಈಗ ಚಕ್ರ ಪೂರ್ಣವಾಯಿತು. ಈಗ ನಮಗೆ ಮನೆ ಮತ್ತು ಸ್ವರ್ಗಕ್ಕೆ
ಹೋಗಬೇಕಾಗಿದೆ ಮತ್ತು ಅದಕ್ಕಾಗಿ ಖಂಡಿತ ಪಾವನರೂ ಆಗಬೇಕಿದೆ. ನೆನಪಿನ ಯಾತ್ರೆಯಿಂದ ಪಾವನರಾಗಬೇಕು.
ನೆನಪಿನಲ್ಲೆ ವಿಘ್ನ ಬರುತ್ತದೆ, ಇದರಲ್ಲೇ ನಿಮ್ಮ ಯುದ್ದವಾಗಿದೆ. ವಿಧ್ಯಯಲ್ಲಿ ಯುದ್ಧದ
ಮಾತಿರುವುದಿಲ್ಲ. ವಿಧ್ಯೆಯಂತೂ ಬಹಳ ಸರಳವಾಗಿದೆ. 84 ರ ಚಕ್ರದ ಜ್ಞಾನವಂತೂ ಬಹಳ ಸಹಜವಾಗಿದೆ. ಬಾಕಿ
ನಿಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪುಮಾಡಿ, ಇದರಲ್ಲೇ ಪರಿಶ್ರಮವಿದೆ. ತಂದೆ
ಹೇಳುತ್ತಾರೆ ನೆನಪಿನಯಾತ್ರೆಯನ್ನು ಮರೆಯಬೇಡಿ. ಕಡೇ ಪಕ್ಷ 8 ಗಂಟೆಯಾದರೂ ಖಂಡಿತ ನೆನಪು ಮಾಡಬೇಕು.
ಶರೀರ ನಿರ್ವಹಣೆಗೆ ಕೆಲಸವನ್ನೂ ಮಾಡಬೇಕು. ನಿದ್ರೆಯನ್ನೂ ಮಾಡಬೇಕು. ಸಹಜ ಮಾರ್ಗವಾಗಿದೆಯಲ್ಲವೇ.
ಒಂದುವೇಳೆ ನಿದ್ರೆ ಮಾಡಬೇಡಿ ಎಂದರೆ ಅದು ಹಠಯೋಗವಾಗಿಬಿಡುತ್ತದೆ. ಹಠಯೋಗಿಗಳಂತೂ ಬಹಳಷ್ಟಿದ್ದಾರೆ
ತಂದೆ ಹೇಳುತ್ತಾರೆ ಆ ಕಡೆ ಏನನ್ನೂ ನೋಡಬೇಡಿ, ಅದರಿಂದ ಏನೂ ಲಾಭವಿಲ್ಲ. ಹಠಯೋಗ ಮುಂತಾದುವನ್ನು
ಎಷ್ಟು ಕಲಿಸುತ್ತಾರೆ. ಇದೆಲ್ಲ ಮನುಷ್ಯಮತವಾಗಿದೆ. ನೀವು ಅತ್ಮಗಳಾಗಿರುವಿರಿ, ಆತ್ಮವೇ ಶರೀರ ಪಡೆದು
ಪಾತ್ರವನ್ನಭಿನಯಿಸುತ್ತದೆ, ಡಾಕ್ಟರ್ ಇತ್ಯಾದಿ ಆಗುತ್ತದೆ. ಆದರೆ ಮನುಷ್ಯ
ದೇಹ-ಅಭಿಮಾನಿಯಾಗಿಬಿಟ್ಟಿದ್ದಾನೆ- ನಾನು ಇಂತಹವನು.......
ಈಗ ನಿಮ್ಮ
ಬುದ್ಧಿಯಲ್ಲಿದೆ- ನಾನು ಆತ್ಮನಾಗಿದ್ದೇನೆ. ತಂದೆಯೂ ಆತ್ಮ ಆಗಿದ್ದಾರೆ ಈ ಸಮಯದಲ್ಲಿ ನೀವು
ಆತ್ಮಗಳಿಗೆ ಓದಿಸುತ್ತಿದ್ದಾರೆ ಆದ್ದರಿಂದ ಗಾಯನ ಇದೆ- ಆತ್ಮಗಳು ಮತ್ತು ಪರಮಾತ್ಮ ಬಹಳಕಾಲದಿಂದ
ಅಗಲಿಹೋಗಿದ್ದರು.... ಎಂದು, ಕಲ್ಪ-ಕಲ್ಪ ಮಿಲನ ಮಾಡುತ್ತಿರುತ್ತಾರೆ. ಬಾಕಿ ಯಾವುದು ಇಡೀ ಪ್ರಪಂಚ
ಇದೆ, ಅವರೆಲ್ಲ ದೇಹ-ಅಭಿಮಾನದಲ್ಲಿ ಬಂದು ದೇಹವೆಂದು ತಿಳಿದೇ ಒದುತ್ತಾರೆ ಹಾಗೂ ಓದಿಸುತ್ತಾರೆ.
ತಂದೆ ಹೇಳುತ್ತಾರೆ ನಾನು ಆತ್ಮಗಳಿಗೆ ಓದಿಸುತ್ತೇನೆ. ಜಡ್ಜ್, ಬ್ಯಾರಿಸ್ಟರ್ ಮುಂತಾದವರು ಸಹ
ಆತ್ಮವೇ ಆಗುತ್ತದೆ. ನೀವು ಆತ್ಮ ಸತೋಪ್ರಧಾನ ಪವಿತ್ರರಾಗಿದ್ದಿರಿ ನಂತರ ಪಾತ್ರ ಮಾಡುತ್ತಾ
ಮಾಡುತ್ತಾ ಪತಿತರಾದಿರಿ ಆಗ ಕರೆಯುತ್ತೀರಿ ಬಾಬಾ ಬಂದು ನಮ್ಮನ್ನು ಪಾವನ ಆತ್ಮರನ್ನಾಗಿ ಮಾಡಿ ಎಂದು.
ತಂದೆಯಂತೂ ಪಾವನರಾಗೆ ಇದ್ದಾರೆ. ಈ ಮಾತು ಯಾವಾಗ ಕೇಳುವಿರಿ ಆಗ ಧಾರಣೆಯಾಗುತ್ತದೆ. ನೀವು ಮಕ್ಕಳಿಗೆ
ಧಾರಣೆ ಯಾದಾಗ ನೀವು ದೇವತೆಗಳಾಗುವಿರಿ. ಬೇರೆ ಯಾರ ಬುದ್ಧಿಯಲ್ಲೂ ಕುಳಿತುಕೊಳ್ಳುವುದಿಲ್ಲ ಏಕೆಂದರೆ
ಇದಾಗಿದೆ ಹೊಸಮಾತು. ಇದು ಜ್ಞಾನವಾಗಿದೆ. ಅದು ಭಕ್ತಿಯಾಗಿದೆ. ನೀವೂ ಭಕ್ತಿ ಮಾಡುತ್ತಾ-ಮಾಡುತ್ತಾ
ದೇಹ-ಅಭಿಮಾನಿಗಳಾಗಿಬಿಡುವಿರಿ. ಈಗ ತಂದೆಯು ತಿಳಿಸುತ್ತಾರೆ-ಮಕ್ಕಳೇ, ಆತ್ಮ-ಅಭಿಮಾನಿಗಳಾಗಿ ಎಂದು.
ನಾವು ಆತ್ಮಗಳಿಗೆ ತಂದೆಯು ಈ ಶರೀರದ ಮೂಲಕ ಓದಿಸುತ್ತಾರೆ. ಘಳಿಗೆ-ಘಳಿಗೆ ನೆನಪಿನಲ್ಲಿಟ್ಟುಕೊಳ್ಳಿ
ಇದು ಒಂದೇ ಸಮಯವಾಗಿದೆ ಯಾವುದು ಆತ್ಮಗಳಿಗೆ ಪರಮಪಿತ ತಂದೆ ಓದಿಸುತ್ತಾರೆ. ಬಾಕಿ ಇಡೀ ಡ್ರಾಮದಲ್ಲಿ
ಎಂದೂ ಈ ಪಾತ್ರ ಇರುವುದಿಲ್ಲ. ಈ ಸಂಗಮಯುಗದ ವಿನಹ ಆದ್ದರಿಂದ ತಂದೆ ಮತ್ತೆ ಹೇಳುತ್ತಾರೆ
ಮಧುರ-ಮಧುರ ಮಕ್ಕಳೇ ತಮ್ಮನ್ನು ಆತ್ಮ ಎಂದು ನಿಶ್ಚಯಮಾಡಿಕೊಳ್ಳಿ,ತಂದೆಯನ್ನು ನೆನಪುಮಾಡಿ. ಇದು
ಬಹಳ ಉನ್ನತವಾದ ಯಾತ್ರೆಯಾಗಿದೆ- ಏರಿದರೆ ವೈಕುಂಠರಸವನ್ನು ಹೀರಿ. ವಿಕಾರದಲ್ಲಿ ಬೀಳುವುದರಿಂದ ಏಕದಂ
ಚೂರು ಚೂರಾಗಿಬಿಡುವಿರಿ. ಆದರೂ ಸ್ವರ್ಗದಲ್ಲಿ ಬರುವಿರಿ, ಆದರೆ ಪದವಿ ಬಹಳ ಕಡಿಮೆಯಾಗುತ್ತದೆ.
ಇಲ್ಲಿ ರಾಜಧಾನಿ ಸ್ಥಾಪನೆಯಾಗುತ್ತಿದೆ. ಇದರಲ್ಲಿ ಕಡಿಮೆ ಪದವಿಯವರೂ ಬೇಕಾಗುತ್ತದೆ, ಎಲ್ಲರೂ
ಜ್ಞಾನದಲ್ಲಂತೂ ನಡೆಯುವುದಿಲ್ಲ. ಇಲ್ಲದೇ ಹೋದರೆ ಬಹಳಷ್ಟು ಮಕ್ಕಳು ಬಾಬಾರವರನ್ನು
ಮಿಲನಮಾಡಬೇಕಿತ್ತು. ಒಂದುವೇಳೆ ಮಿಲನ ಮಾಡಿದ್ದರೂ ಸ್ವಲ್ಪ ಸಮಯಕ್ಕಾಗಿ. ನೀವು ಮಾತೆಯರ ಮಹಿಮೆ ಬಹಳ
ಇದೆ. ವಂದೇಮಾತರಂ ಎಂದೂ ಗಾಯನ ಮಾಡಲಾಗುತ್ತದೆ. ಜಗದಂಬ ರ ಎಷ್ಟುದೊಡ್ಡ ಮೇಳಾ ನಡೆಯುತ್ತದೆ ಏಕೆಂದರೇ
ಬಹಳ ಹೆಚ್ಚು ಸೇವೆಮಾಡಿದ್ದಾರೆ. ಯಾರು ಹೆಚ್ಚು ಸೇವೆ ಮಾಡುತ್ತಾರೆ ಅವರು ದೊಡ್ಡ ರಾಜರಾಗುತ್ತಾರೆ.
ದಿಲ್ವಾಡಾ ಮಂದಿರದಲ್ಲೂ ನಿಮ್ಮದೆ ನೆನಪಾರ್ಥ ಇದೆ. ನೀವು ಮಕ್ಕಳಂತೂ ಬಹಳ ಸಮಯ ಕೊಡಬೇಕಾಗುತ್ತದೆ.
ನೀವು ಭೋಜನ ಮುಂತಾದುವನ್ನು ಮಾಡುತ್ತೀರೆಂದರೆ ಬಹಳ ಶುದ್ಧ ಭೋಜನ ನೆನಪಿನಲ್ಲಿ ಕುಳಿತು
ಮಾಡಬೇಕಾಗಿದೆ, ಯಾರಿಗೆ ತಿನ್ನಿಸುವಿರಿ ಅವರ ಹೃದಯ ಕೂಡ ಶುದ್ಧವಾಗಿಬಿಡಬೇಕು. ಈ ರೀತಿ ಬಹಳ ಕಡಿಮೆ
ಜನ ಇದ್ದಾರೆ, ಯಾರಿಗೆ ಇಂಥಹ ಬೋಜನ ದೊರಕುತ್ತಿರುವುದು. ನಿಮ್ಮನ್ನು ನೀವು ಕೇಳಿಕೊಳ್ಳಿ- ನಾವು
ಶಿವಬಾಬಾರವರ ನೆನಪಿನಲ್ಲಿದ್ದು ಭೋಜನ ಮಾಡುತ್ತಿರುವೆನಾ?, ಯಾವುದನ್ನು ತಿನ್ನುವುದರಿಂದಲೇ ಅವರ
ಹೃದಯ ಕರಗಿಹೋಗಿಬಿಡಬೇಕು. ಘಳಿಗೆ-ಘಳಿಗೆ ನೆನಪು ಮರೆತುಹೋಗುತ್ತದೆ. ಬಾಬಾ ಹೇಳುತ್ತಾರೆ ಮರೆಯುವುದೂ
ಡ್ರಾಮದಲ್ಲಿ ನಿಗಧಿಯಾಗಿದೆ ಏಕೆಂದರೆ ನೀವು 16 ಕಲೆ ಉಳ್ಳವರು ಇನ್ನೂ ಆಗಿಲ್ಲ. ಸಂಪೂರ್ಣರಂತೂ
ಖಂಡಿತ ಆಗಬೇಕು. ಪೌರ್ಣಮಿಯ ಚಂದ್ರನಲ್ಲಿ ಎಷ್ಟು ಹೊಳಪಿರುತ್ತದೆ. ನಂತರ ಕಡಿಮೆ ಯಾಗುತ್ತಾ ಆಗುತ್ತಾ
ಸಣ್ಣ ಗೆರೆಯಾಗಿ ಉಳಿದುಬಿಡುತ್ತದೆ. ಘೋರ ಅಂಧಕಾರ ಉಳಿದುಬಿಡುತ್ತದೆ ನಂತರ ಘೋರ ಬೆಳಕು. ಈ
ವಿಕಾರಗಳನ್ನು ಬಿಟ್ಟು ತಂದೆಯನ್ನು ನೆನಪು ಮಾಡುತ್ತಿದ್ದರೆ ನಿಮ್ಮ ಆತ್ಮ ಸಂಪೂರ್ಣ ವಾಗಿಬಿಡುತ್ತದೆ.
ನೀವು ಮಹಾರಾಜ ಆಗಬೇಕು ಎಂದು ಇಚ್ಛೆ ಪಡುತ್ತೀರಿ ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ. ಪುರುಷಾರ್ಥ
ಎಲ್ಲರೂ ಮಾಡಬೇಕಾಗಿದೆ. ಕೆಲವರು ಯಾವುದೇ ಪುರುಷಾರ್ಥ ಮಾಡುವುದಿಲ್ಲ ಆದ್ದರಿಂದ ಮಹಾರಥಿ, ಕುದುರೇ
ಸವಾರ, ಕಾಲಾಳು ಎಂದು ಕರೆಸಿಕೊಳ್ಳುವರು. ಮಹಾರಥಿಗಳು ಸ್ವಲ್ಪವೇ ಇರುತ್ತಾರೆ. ಪ್ರಜೆ ಅಥವಾ ಸೇನೆ
ಎಷ್ಟಿರುತ್ತಾರೆ ಅಷ್ಟು ಕಮಾಂಡರ್ಸ್, ಮೇಜರ್ಸ್ ಇರುವುದಿಲ್ಲ. ನಿಮ್ಮಲ್ಲೂ ಕಮಾಂಡರ್ಸ್, ಮೇಜರ್ಸ್,
ಕ್ಯಾಪ್ಟನ್ ಇದ್ದಾರೆ. ಕಾಲಾಳುಗಳೂ ಇದ್ದಾರೆ. ನಿಮ್ಮದೂ ಸಹ ಆತ್ಮೀಯ ಸೇನೆಯಾಗಿದೆಯಲ್ಲವೇ. ಎಲ್ಲದರ
ಆಧಾರ ನೆನಪಿನಯಾತ್ರೆಯ ಮೇಲಿದೆ. ಅದರಲ್ಲೇ ಬಲ ಸಿಗುತ್ತದೆ. ನೀವು ಗುಪ್ತ ಸೈನಿಕರಾಗಿರುವಿರಿ.
ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳ ಏನು ಕೊಳಕಿದೆ ಅದು ಭಸ್ಮವಾಗಿಬಿಡುತ್ತದೆ. ತಂದೆ
ಹೇಳುತ್ತಾರೆ ವ್ಯಾಪಾರ ವ್ಯವಹಾರವನ್ನಂತೂ ಮಾಡಿ. ತಂದೆಯನ್ನು ನೆನಪುಮಾಡಿ. ನೀವು ಓಬ್ಬ
ಪ್ರಿಯತಮನಿಗೆ ಜನ್ಮ-ಜನ್ಮಾಂತರ ಪ್ರಿಯತಮೆಯರಾಗಿರುವಿರಿ. ಈಗ ಆ ಪ್ರಿಯತಮ ಸಿಕ್ಕಿದ್ದಾನೆಂದರೆ ಅವನ
ನೆನಪನ್ನು ಮಾಡಬೇಕಿದೆ. ಹಿಂದೆ ಭಲೇ ನೆನಪು ಮಾಡುತ್ತಿದ್ದಿರಿ ಆದರೆ ವಿಕರ್ಮ ವಿನಾಶ
ಆಗುತ್ತಿರಲಿಲ್ಲ. ತಂದೆ ತಿಳಿಸಿಕೊಟ್ಟಿದ್ದಾರೆ ನಿಮಗೆ ಈಗ ತಮೋಪ್ರದಾನ ರಿಂದ ಸತೋ ಪ್ರದಾನರಾಗಬೇಕು
ಆತ್ಮವೇ ಆಗಬೇಕಿದೆ. ಆತ್ಮವೇ ಪರಿಶ್ರಮ ಪಡುತ್ತಿದೆ. ಈ ಜನ್ಮದಲ್ಲಿ ನೀವು ಜನ್ಮ-ಜನ್ಮಾಂತರದ
ಮೈಲಿಗೆಯನ್ನು ತೆಗೆಯಬೇಕಾಗಿದೆ. ಇದಾಗಿದೆ ಮೃತ್ಯುಲೋಕದ ಅಂತಿಮ ಜನ್ಮ ನಂತರ ಅಮರಲೋಕಕ್ಕೆ
ಹೋಗಬೇಕಾಗಿದೆ. ಆತ್ಮ ಪಾವನವಾಗದ ಹೊರತು ಹೋಗಲು ಸಾಧ್ಯವಿಲ್ಲ. ಎಲ್ಲರ ಲೆಕ್ಕಾ-ಚಾರ ಚುಕ್ತು
ಆಗಿಬಿಡಬೇಕು. ನಂತರ ಒಂದುವೇಳೆ ಸಜೆಗಳನ್ನು ಬೋಗಿಸಿದರೆ ಪದವಿ ಕಡಿಮೆಯಾಗಿಬಿಡುತ್ತದೆ. ಯಾರು ಸಜೆ
ತಿನ್ನುವುದಿಲ್ಲ ಅವರನ್ನುಮಾಲೆಯ 8 ಮಣಿ ಗಳೆಂದು ಕರೆಯಲಾಗುತ್ತದೆ. 9 ರತ್ನಗಳ ಉಂಗುರ
ಮುಂತಾದುವನ್ನು ಮಾಡಿಸುತ್ತಾರೆ. ಹೀಗಾಗಬೇಕಾದರೆ ತಂದೆಯನ್ನು ನೆನಪುಮಾಡುವ ಬಹಳ ಪರಿಶ್ರಮ
ಮಾಡಬೇಕಾಗುತ್ತದೆ. ಒಳ್ಳೆಯದು!.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸಂಗಮಯುಗದಲ್ಲಿ ಸ್ವಯಂ ಅನ್ನು ಟ್ರಾನ್ಸ್ ಫರ್ ಮಡಿಕೊಳ್ಳಬೇಕು. ವಿಧ್ಯೆ ಮತ್ತು ಪವಿತ್ರತೆಯ
ಧಾರಣೆಯಿಂದ ತಮ್ಮ ಚಾರಿತ್ರ್ಯೆ ಸುದಾರಣೆ ಮಾಡಿಕೊಳ್ಳಬೇಕು. ಟ್ರಾನ್ಸ್ ಮುಂತಾದುವುಗಳಲ್ಲಿ ಹೋಗುವ
ಆಸೆ ಇಟ್ಟುಕೊಳ್ಳಬಾರದು.
2. ಶರೀರ ನಿರ್ವಾಹಾರ್ಥ
ಕರ್ಮವನ್ನೂ ಮಾಡಬೇಕು, ನಿದ್ರೆಯೂ ಮಾಡಬೇಕು, ಹಠಯೋಗವಲ್ಲ, ಆದರೆ ನೆನಪಿನ ಯಾತ್ರೆಯನ್ನು ಎಂದೂ
ಮರೆಯಬಾರದು. ಯೋಗಯುಕ್ತರಾಗಿ ಇಂತಹ ಶುದ್ದ ಭೋಜನವನ್ನು ತಯಾರಿಸಿ ಮತ್ತು ಬಡಿಸಿ ಯಾರು
ತಿನ್ನುತ್ತಾರೆ ಅವರ ಹೃದಯ ಶುದ್ಧವಾಗಿ ಬಿಡಬೇಕು.
ವರದಾನ:
ತಮ್ಮ ಸೂಕ್ಷ್ಮ
ಶಕ್ತಿಗಳ ಮೇಲೆ ವಿಜಯಿಯಾಗುವಂತಹವರೆ ರಾಜಋಷಿ, ಸ್ವರಾಜ್ಯ ಅಧಿಕಾರಿ ಆತ್ಮ ಭವ
ಕರ್ಮೇಂದ್ರಿಯ ಜೀತ್
ಆಗಬೇಕಾದರೆ ಸಹಜವಾಗಿದೆ ಆದರೆ ಮನಸ್ಸು-ಬುದ್ಧಿ-ಸಂಸ್ಕಾರ-ಈ ಸೂಕ್ಷ್ಮ ಶಕ್ತಿಗಳ ಮೇಲೆ
ವಿಜಯಿಯಾಗುವುದು-ಇದು ಸೂಕ್ಷ್ಮ ಅಭ್ಯಾಸವಾಗಿದೆ. ಯಾವ ಸಮಯ ಎಂತಹ ಸಂಕಲ್ಪ, ಎಮತಹ ಸಂಸ್ಕಾರ ಇಮರ್ಜ್
ಮಾಡಲು ಇಚ್ಛಿಸಿದರೆ ಅದೇ ಸಂಕಲ್ಪ, ಅದೇ ಸಂಸ್ಕಾರ ಸಹಜವಾಗಿ ತಮ್ಮದನ್ನಾಗಿಸಿಕೊಳ್ಳುವುದು- ಇದಕ್ಕೆ
ಹೇಳಲಾಗುವುದು ಸೂಕ್ಷ್ಮ ಶಕ್ತಿಗಳ ಮೇಲೆ ವಿಜಯ ಅರ್ಥಾತ್ ರಾಜಋಷಿ ಸ್ಥಿತಿ. ಒಂದುವೇಳೆ ಸಂಕಲ್ಪ
ಶಕ್ತಿಗೆ ಆದೇಶಮಾಡಿ ಈಗೀಗ ಏಕಾಗ್ರಚಿತ್ತ ಆಗಿಬಿಡಿ, ಆಗ ರಾಜನ ಆದೇಶ ಅದೇ ಘಳಿಗೆ ಅದೇ ಪ್ರಕಾರದಲ್ಲಿ
ಒಪ್ಪವುದು ಇದೆ ಆಗಿದೆ-ರಾಜ್ಯ ಅಧಿಕಾರದನಿಶಾಲಿ. ಇದೇ ಅಭ್ಯಾಸದಿಂದ ಅಂತಿಮ ಪೇಪರ್ ನಲ್ಲಿ ಪಾಸ್
ಆಗುತ್ತಾರೆ.
ಸ್ಲೋಗನ್:
ಸೇವೆಯಿಂದ ಏನು
ಆಶೀರ್ವಾದಗಳು ಸಿಗುತ್ತವೆ ಇವೇ ಎಲ್ಲಕ್ಕಿಂತ ದೊಡ್ಡದರಲ್ಲಿ ದೊಡ್ಡ ಕೊಡುಗೆಯಾಗಿದೆ.