09.12.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನಿಮಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ, ಇಂತಹ ಮಧುರ ತಂದೆಯನ್ನು ನೀವು ಪ್ರೀತಿಯಿಂದ
ನೆನಪು ಮಾಡಿ ಆಗ ಪಾವನರಾಗಿ ಬಿಡುತ್ತೀರಿ.”
ಪ್ರಶ್ನೆ:
ವಿನಾಶದ ಸಮಯವು
ಎಷ್ಟು ಸಮೀಪಕ್ಕೆ ಬರುತ್ತಾ ಹೋಗುತ್ತದೆಯೋ ಅದರ ಚಿಹ್ನೆಗಳು ಏನಿರುತ್ತವೆ?
ಉತ್ತರ:
ವಿನಾಶದ ಸಮಯವು
ಸಮೀಪಿಸುತ್ತಿದ್ದಂತೆ 1. ಎಲ್ಲರಿಗೂ ನಮ್ಮ ತಂದೆಯು ಬಂದು ಬಿಟ್ಟಿದ್ದಾರೆ ಎಂಬುದು ಅರ್ಥವಾಗುತ್ತಾ
ಹೋಗುತ್ತದೆ. 2. ಈಗ ಹೊಸ ಪ್ರಪಂಚದ ಸ್ಥಾಪನೆ ಹಳೆಯ ಪ್ರಪಂಚದ ವಿನಾಶವಾಗಲಿದೆ. ಇದು ಅನೇಕರಿಗೆ
ಸಾಕ್ಷಾತ್ಕಾರವಾಗುತ್ತದೆ. 3. ಸನ್ಯಾಸಿಗಳು, ರಾಜರು ಮೊದಲಾದವರಿಗೆ ಜ್ಞಾನವು ಸಿಗುತ್ತದೆ. 4.
ಬೇಹದ್ದಿನ ತಂದೆಯು ಬಂದಿದ್ದಾರೆ, ಅವರೇ ಸದ್ಗತಿಯನ್ನು ಕೊಡುವವರಾಗಿದ್ದಾರೆ ಎಂಬುದನ್ನು ಯಾವಾಗ
ಕೇಳುವರೋ ಆಗ ಅನೇಕರು ಬರುವರು. 5. ವಾರ್ತಾ ಪತ್ರಿಕೆಗಳ ಮೂಲಕ ಅನೇಕರಿಗೆ ಸಂದೇಶ ಸಿಗುವುದು. 6.
ನೀವು ಮಕ್ಕಳು ಆತ್ಮಾಭಿಮಾನಿಯಾಗುತ್ತಾ ಹೋಗುತ್ತೀರಿ. ಒಬ್ಬ ತಂದೆಯ ನೆನಪಿನಲ್ಲಿ ಅತೀಂದ್ರಿಯ
ಸುಖದಲ್ಲಿರುತ್ತೀರಿ.
ಗೀತೆ:
ಈ ಪಾಪದ
ಪ್ರಪಂಚದಿಂದ ನಮ್ಮನ್ನು ದೂರ ಕರೆದುಕೊಂಡು ಹೋಗು...........
ಓಂ ಶಾಂತಿ.
ಆತ್ಮಿಕ ಮಕ್ಕಳೇ ಎಂದು ಯಾರು ಹೇಳುತ್ತಾರೆ ಮತ್ತು ಯಾರಿಗೆ ಹೇಳುತ್ತಾರೆ! ತಂದೆಯು ಪದೇ-ಪದೇ
ಆತ್ಮಿಕ ಮಕ್ಕಳೇ ಎಂದು ಏಕೆ ಹೇಳುತ್ತಾರೆ? ಏಕೆಂದರೆ ಈಗ ಆತ್ಮಗಳು ಹಿಂತಿರುಗಿ ಹೋಗಬೇಕಾಗಿದೆ ಮತ್ತೆ
ಯಾವಾಗ ಈ ಪ್ರಪಂಚದಲ್ಲಿ ಬರುತ್ತೀರೋ ಆಗ ಸುಖವಿರುತ್ತದೆ. ಆತ್ಮಗಳು ಈ ಶಾಂತಿ ಮತ್ತು ಸುಖದ
ಆಸ್ತಿಯನ್ನು ಕಲ್ಪದ ಹಿಂದೆಯೂ ಪಡೆದಿದ್ದಿರಿ, ಈಗ ಮತ್ತೆ ಈ ಆಸ್ತಿಯು ಪುನರಾವರ್ತನೆಯಾಗುತ್ತಿದೆ.
ಇದು ಪುನರಾವರ್ತನೆಯಾದಾಗಲೇ ಸೃಷ್ಟಿಚಕ್ರವೂ ಸಹ ಪುನಃ ಪುನರಾವರ್ತನೆಯಾಗುತ್ತದೆ. ಎಲ್ಲವೂ
ಪುನರಾವರ್ತನೆಯಾಗುತ್ತದೆಯಲ್ಲವೆ. ಏನೆಲ್ಲವೂ ಕಳೆಯಿತೋ ಅದು ಪುನರಾವರ್ತನೆಯಾಗುವುದು. ಹಾಗೆ
ನೋಡಿದರೆ ನಾಟಕವೂ ಪುನರಾವರ್ತನೆಯಾಗುತ್ತದೆ ಆದರೆ ಅದರಲ್ಲಿ ಬದಲಾವಣೆ ಮಾಡಬಹುದು. ಯಾವುದೇ
ಶಬ್ಧಗಳನ್ನು ಮರೆತು ಹೋದರೆ ಅದನ್ನು ಮತ್ತೆ ಸೇರಿಸಬಹುದು ಇದಕ್ಕೆ ಸಿನೆಮಾ ಎಂದು ಹೇಳಲಾಗುತ್ತದೆ.
ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಆ
ನಾಟಕಕ್ಕೆ ಮಾಡಿ-ಮಾಡಲ್ಪಟ್ಟದ್ದು ಎಂದು ಹೇಳುವುದಿಲ್ಲ. ಈ ಡ್ರಾಮಾವನ್ನು ತಿಳಿದುಕೊಳ್ಳುವುದರಿಂದ
ಮತ್ತೆ ಅದರ ಬಗ್ಗೆಯೂ ಅರ್ಥವಾಗುತ್ತದೆ. ಮಕ್ಕಳಿಗೆ ತಿಳಿದಿದೆ - ಯಾವ ನಾಟಕ ಇತ್ಯಾದಿಗಳನ್ನು
ನಾವೀಗ ಮಾಡುತ್ತೇವೆಯೋ ಅದೆಲ್ಲವೂ ಅಸತ್ಯವಾಗಿದೆ. ಕಲಿಯುಗದಲ್ಲಿ ಯಾವ ವಸ್ತುಗಳನ್ನು ನೋಡುತ್ತೀರೋ
ಅದು ಸತ್ಯಯುಗದಲ್ಲಿರುವುದಿಲ್ಲ. ಸತ್ಯಯುಗದಲ್ಲಿ ಏನೆಲ್ಲವೂ ಆಗಿತ್ತೋ ಅದು ಮತ್ತೆ ಸತ್ಯಯುಗದಲ್ಲಿ
ಆಗುವುದು. ಈ ಹದ್ದಿನ ನಾಟಕಗಳು ಪುನಃ ಭಕ್ತಿಮಾರ್ಗದಲ್ಲಿ ರಚಿಸಲ್ಪಡುತ್ತವೆ. ಯಾವ ವಸ್ತು
ಭಕ್ತಿಮಾರ್ಗದಲ್ಲಿ ಇರುತ್ತದೆಯೋ ಅದು ಜ್ಞಾನಮಾರ್ಗ ಅರ್ಥಾತ್ ಸತ್ಯಯುಗದಲ್ಲಿರುವುದಿಲ್ಲ ಅಂದಾಗ ಈಗ
ಬೇಹದ್ದಿನ ತಂದೆಯಿಂದ ನೀವು ಆಸ್ತಿಯನ್ನು ಪಡೆಯುತ್ತಿದ್ದೀರಿ. ತಂದೆಯು ತಿಳಿಸಿದ್ದಾರೆ -
ಮೊದಲನೆಯದಾಗಿ ಲೌಕಿಕ ತಂದೆಯಿಂದ ಮತ್ತು ಎರಡನೆಯದಾಗಿ ಪಾರಲೌಕಿಕ ತಂದೆಯಿಂದ ಆಸ್ತಿಯು ಸಿಗುತ್ತದೆ.
ಬಾಕಿ ಯಾವ ಅಲೌಕಿಕ ಬ್ರಹ್ಮಾ ತಂದೆಯಿದ್ದಾರೆಯೋ ಅವರಿಂದ ಆಸ್ತಿಯು ಸಿಗುವುದಿಲ್ಲ. ಇವರೂ ಸಹ
ಪಾರಲೌಕಿಕ ತಂದೆಯಿಂದಲೇ ಆಸ್ತಿಯನ್ನು ಪಡೆಯುತ್ತಾರೆ. ಈ ಹೊಸ ಪ್ರಪಂಚದ ಆಸ್ತಿಯನ್ನು ಬೇಹದ್ದಿನ
ತಂದೆಯೇ ಕೇವಲ ಇವರ ಮೂಲಕ ಕೊಡುತ್ತಾರೆ. ಇವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ ಆದ್ದರಿಂದ ಇವರಿಗೆ
ತಂದೆಯೆಂದು ಹೇಳುತ್ತೀರಿ. ಭಕ್ತಿಮಾರ್ಗದಲ್ಲಿಯೂ ಲೌಕಿಕ ಮತ್ತು ಪಾರಲೌಕಿಕ ಇಬ್ಬರೂ ನೆನಪಿಗೆ
ಬರುತ್ತಾರೆ, ಈ ಅಲೌಕಿಕ ತಂದೆಯ ನೆನಪು ಬರುವುದಿಲ್ಲ ಏಕೆಂದರೆ ಇವರಿಂದ ಯಾವುದೇ ಆಸ್ತಿಯು
ಸಿಗುವುದಿಲ್ಲ. ತಂದೆ ಎಂಬ ಶಬ್ಧವು ಸರಿಯಾಗಿದೆ ಆದರೆ ಈ ಬ್ರಹ್ಮಾರವರೂ ಸಹ ರಚನೆಯಲ್ಲವೆ. ರಚನೆಗೆ
ರಚಯಿತನಿಂದ ಆಸ್ತಿಯು ಸಿಗುತ್ತದೆ. ನಿಮ್ಮನ್ನೂ ಸಹ ಶಿವ ತಂದೆಯು ರಚಿಸಿದ್ದಾರೆ. ಬ್ರಹ್ಮಾನನ್ನೂ
ಅವರೇ ರಚಿಸಿದ್ದಾರೆ. ಆಸ್ತಿಯು ರಚಯಿತನಿಂದಲೇ ಸಿಗುತ್ತದೆ, ಅವರು ಬೇಹದ್ದಿನ ತಂದೆಯಾಗಿದ್ದಾರೆ.
ಬ್ರಹ್ಮಾರವರ ಬಳಿ ಬೇಹದ್ದಿನ ಆಸ್ತಿಯಿದೆಯೇ? ತಂದೆಯು ಇವರ ಮೂಲಕ ಕುಳಿತು ತಿಳಿಸುತ್ತಾರೆ - ಇವರಿಗೂ
ಆಸ್ತಿಯು ಸಿಗುತ್ತದೆ. ಆಸ್ತಿಯನ್ನು ಪಡೆದುಕೊಂಡು ನಿಮಗೆ ಕೊಡುತ್ತಾರೆಂದಲ್ಲ. ನೀವು ಇವರನ್ನೂ
ನೆನಪು ಮಾಡಬೇಡಿ, ಈ ಬೇಹದ್ದಿನ ತಂದೆಯಿಂದ ನಿಮಗೆ ಆಸ್ತಿಯು ಸಿಗುತ್ತದೆ. ಲೌಕಿಕ ತಂದೆಯಿಂದ
ಹದ್ದಿನ ಆಸ್ತಿ, ಪಾರಲೌಕಿಕ ತಂದೆಯಿಂದ ಬೇಹದ್ದಿನ ಆಸ್ತಿ ಎರಡೂ ನಿಗಧಿಯಾಗಿ ಬಿಟ್ಟಿದೆ. ಶಿವ
ತಂದೆಯಿಂದ ಆಸ್ತಿ ಸಿಗುತ್ತದೆಯೆಂಬುದು ಬುದ್ಧಿಯಲ್ಲಿ ಬರುತ್ತದೆ ಬಾಕಿ ಬ್ರಹ್ಮಾ ತಂದೆಯ
ಆಸ್ತಿಯೆಂದು ಹೇಳುವುದಿಲ್ಲ. ಬುದ್ಧಿಯಲ್ಲಿ ಆಸ್ತಿಯ ನೆನಪು ಬರುತ್ತದೆಯಲ್ಲವೆ. ತಂದೆಯಿಂದ ನಿಮಗೆ
ಬೇಹದ್ದಿನ ರಾಜ್ಯಭಾಗ್ಯವು ಸಿಗುತ್ತದೆ. ಅವರು ದೊಡ್ಡ ತಂದೆಯಾಗಿದ್ದಾರೆ. ಇವರು (ಬ್ರಹ್ಮಾ) ನಿಮಗೆ
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಬೇಡಿ. ನಿಮಗೆ ಆಸ್ತಿಯು ಸಿಗಲು ನನ್ನ ಬಳಿ ಏನೂ ಇಲ್ಲ.
ಯಾರಿಂದ ಆಸ್ತಿಯು ಸಿಗಬೇಕಾಗಿದೆಯೋ ಅವರನ್ನು ನೆನಪು ಮಾಡಿ. ಅವರೇ ಹೇಳುತ್ತಾರೆ - ಮಕ್ಕಳೇ,
ನನ್ನೊಬ್ಬನನ್ನೇ ನೆನಪು ಮಾಡಿ. ಲೌಕಿಕ ತಂದೆಯ ಆಸ್ತಿಗಾಗಿ ಎಷ್ಟೊಂದು ಜಗಳವು ನಡೆಯುತ್ತದೆ.
ಇಲ್ಲಂತೂ ಯಾವುದೇ ಜಗಳದ ಮಾತಿಲ್ಲ. ತಂದೆಯನ್ನು ನೆನಪು ಮಾಡದಿದ್ದರೆ ಬೇಹದ್ದಿನ ಆಸ್ತಿಯೂ ಸಹ
ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ. ನೀವು ತಮ್ಮನ್ನು
ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದರೆ ವಿಶ್ವದ ರಾಜ್ಯಭಾಗ್ಯ ಸಿಗುತ್ತದೆಯೆಂದು ಈ ರಥಕ್ಕೂ
(ಬ್ರಹ್ಮಾ) ಹೇಳುತ್ತಾರೆ. ಇದಕ್ಕೆ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ. ದೇಹದ ಎಲ್ಲಾ
ಸಂಬಂಧಗಳನ್ನು ಬಿಟ್ಟು ತಮ್ಮನ್ನು ಅಶರೀರಿ ಆತ್ಮನೆಂದು ತಿಳಿಯಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಿದೆ.
ವಿದ್ಯೆಗಾಗಿ ಏನಾದರೂ ಪರಿಶ್ರಮ ಪಡಬೇಕಲ್ಲವೆ. ಈ ನೆನಪಿನ ಯಾತ್ರೆಯಿಂದ ನೀವು ಪತಿತರಿಂದ
ಪಾವನರಾಗುತ್ತೀರಿ. ಆ ಯಾತ್ರೆಯನ್ನು ಶರೀರದಿಂದ ಮಾಡುತ್ತಾರೆ. ಇದು ಆತ್ಮದ ಯಾತ್ರೆಯಾಗಿದೆ. ನಿಮ್ಮ
ಯಾತ್ರೆಯು ಪರಮಧಾಮಕ್ಕೆ ಹೋಗುವುದಕ್ಕಾಗಿ ಇದೆ. ಪರಮಧಾಮ ಆಥವಾ ಮುಕ್ತಿಧಾಮಕ್ಕೆ ಈ
ಪುರುಷಾರ್ಥವಿಲ್ಲದೆ ಯಾರೂ ಹೋಗಲು ಸಾಧ್ಯವಿಲ್ಲ. ಯಾರು ಚೆನ್ನಾಗಿ ನೆನಪು ಮಾಡುವರೋ ಅವರೇ
ಹೋಗುತ್ತಾರೆ ಮತ್ತು ಶ್ರೇಷ್ಠ ಪದವಿಯನ್ನೂ ಅವರೇ ಪಡೆಯುತ್ತಾರೆ. ಎಲ್ಲರೂ ಅವಶ್ಯವಾಗಿ ಹೋಗುತ್ತಾರೆ
ಆದರೆ ಅವರು ಪತಿತರಲ್ಲವೆ ಆದ್ದರಿಂದ ಕೂಗುತ್ತಾರೆ. ಆತ್ಮವು ನೆನಪು ಮಾಡುತ್ತದೆ.
ತಿನ್ನುವುದು-ಕುಡಿಯುವುದು ಎಲ್ಲವನ್ನೂ ಆತ್ಮವೇ ಮಾಡುತ್ತದೆಯಲ್ಲವೆ. ಈ ಸಮಯದಲ್ಲಿ ನೀವು
ದೇಹೀ-ಅಭಿಮಾನಿಗಳಾಗಬೇಕಾಗಿದೆ. ಇದೇ ಪರಿಶ್ರಮವಿದೆ. ಪರಿಶ್ರಮವಿಲ್ಲದೆ ಏನೂ ಸಿಗುವುದಿಲ್ಲ. ಇದು
ಸಹಜವೂ ಆಗಿದೆ ಆದರೆ ಮಾಯೆಯ ವಿರೋಧವಾಗುತ್ತದೆ. ಯಾರ ಅದೃಷ್ಟವು ಚೆನ್ನಾಗಿರುವುದೋ ಅವರು ಇದರಲ್ಲಿ
ಬಹಳ ಬೇಗನೆ ತೊಡಗುತ್ತಾರೆ. ಕೆಲವರು ತಡವಾಗಿಯೂ ಬರುತ್ತಾರೆ. ಒಂದುವೇಳೆ ಬುದ್ಧಿಯಲ್ಲಿ ಇದು
ಸರಿಯಾಗಿ ಕುಳಿತುಕೊಂಡರೆ ನಾನು ಈ ಆತ್ಮಿಕ ಯಾತ್ರೆಯಲ್ಲಿಯೇ ತೊಡಗಿ ಬಿಡುತ್ತೇನೆಂದು ಹೇಳುತ್ತಾರೆ.
ಈ ರೀತಿ ತೀವ್ರ ವೇಗದಿಂದ ತೊಡಗುವುದಾದರೆ ಅಂತಹವರು ಬಹಳ ಚೆನ್ನಾಗಿ ಓಡಬಲ್ಲರು. ಮನೆಯಲ್ಲಿದ್ದರೂ
ಸಹ ಇದು ಬಹಳ ಒಳ್ಳೆಯ ಮಾತೆಂದು ಬುದ್ಧಿಯಲ್ಲಿ ಬರುತ್ತದೆ. ನಾನು ತನ್ನನ್ನು ಆತ್ಮನೆಂದು ತಿಳಿದು
ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತೇನೆ. ತಂದೆಯ ಆದೇಶದಂತೆ ನಡೆದಿದ್ದೇ ಆದರೆ ಪಾವನರಾಗಬಹುದು.
ಅವಶ್ಯವಾಗಿ ಆಗುತ್ತೀರಿ, ಪುರುಷಾರ್ಥದ ಮೇಲೆ ಅವಲಂಭಿಸಿದೆ. ಇದು ಬಹಳ ಸಹಜವೂ ಆಗಿದೆ.
ಭಕ್ತಿಮಾರ್ಗದಲ್ಲಂತೂ ಬಹಳ ಪರಿಶ್ರಮವಿರುತ್ತದೆ. ನಾವೀಗ ಹಿಂತಿರುಗಿ ತಂದೆಯ ಬಳಿ ಹೋಗಬೇಕು ಮತ್ತೆ
ಇಲ್ಲಿ ಬಂದು ವಿಷ್ಣುವಿನ ಮಾಲೆಯಲ್ಲಿ ಪೋಣಿಸಲ್ಪಡಬೇಕೆಂದು ನಿಮ್ಮ ಬುದ್ಧಿಯಲ್ಲಿದೆ. ಮಾಲೆಯು
ಬ್ರಹ್ಮಾನದೂ ಇದೆ, ವಿಷ್ಣುವಿನದೂ ಇದೆ, ರುದ್ರ ಮಾಲೆಯೂ ಇದೆ. ಮೊಟ್ಟ ಮೊದಲು ಇವರು ಹೊಸ
ಸೃಷ್ಟಿಯವರಲ್ಲವೆ. ಉಳಿದೆಲ್ಲರೂ ಕೊನೆಯಲ್ಲಿ ಬರುತ್ತಾರೆ ಅಂದರೆ ಕೊನೆಯಲ್ಲಿ ಪೋಣಿಸಲ್ಪಡುತ್ತಾರೆ.
ನಿಮ್ಮ ಕುಲ ಯಾವುದೆಂದು ಕೇಳುತ್ತಾರೆ ಆಗ ವಿಷ್ಣುವಿನ ಕುಲವೆಂದು ಹೇಳಿರಿ. ನಾವು ಮೂಲತಃ ವಿಷ್ಣು
ಕುಲದವರಾಗಿದ್ದೆವು ನಂತರ ಕ್ಷತ್ರಿಯ ಕುಲದವರಾದೆವು ಮತ್ತೆ ಅದರಿಂದ ಶಾಖೆಗಳು (ಮನೆತನ) ಹೊರಡುತ್ತವೆ.
ಅದು ಹೇಗೆ ಎಂಬುದನ್ನು ಈ ಜ್ಞಾನದಿಂದ ನೀವು ತಿಳಿದುಕೊಳ್ಳುತ್ತೀರಿ. ಮೊಟ್ಟ ಮೊದಲು ರುದ್ರ
ಮಾಲೆಯಾಗುತ್ತದೆ. ಇದು ಉತ್ತಮ ವಂಶಾವಳಿಯಾಗಿದೆ. ತಂದೆಯು ತಿಳಿಸಿದ್ದಾರೆ - ನಿಮ್ಮದು ಬಹಳ
ಶ್ರೇಷ್ಠ ಕುಲವಾಗಿದೆ. ಇದೂ ಸಹ ನಿಮಗೆ ತಿಳಿದಿದೆ - ಇಡೀ ಪ್ರಪಂಚಕ್ಕೆ ಖಂಡಿತ ಸಂದೇಶ ತಲುಪುವುದು.
ಹೇಗೆ ಕೆಲವರು ಹೇಳುತ್ತಾರೆ - ಭಗವಂತನು ಎಲ್ಲಿಯೋ ಖಂಡಿತ ಬಂದಿದ್ದಾರೆ ಆದರೆ ಅರ್ಥವಾಗುತ್ತಿಲ್ಲ.
ಕೊನೆಗೊಂದು ದಿನ ಎಲ್ಲರಿಗೆ ಅರ್ಥವಾಗುವುದು. ವಾರ್ತಾ ಪತ್ರಿಕೆಗಳಲ್ಲಿ ಬರುವುದು. ಈಗಿನ್ನೂ ಬಹಳ
ಸ್ವಲ್ಪವೇ ಹಾಕುತ್ತಾರೆ. ಒಂದು ಪತ್ರಿಕೆಯನ್ನು ಎಲ್ಲರೂ ಓದುತ್ತಾರೆಂದಲ್ಲ. ಗ್ರಂಥಾಲಯದಲ್ಲಿ
ಓದಬಹುದು, ಕೆಲವರು ಎರಡು-ಮೂರು ಪತ್ರಿಕೆಗಳನ್ನೂ ಓದುತ್ತಾರೆ, ಕೆಲವರು ಓದುವುದೇ ಇಲ್ಲ. ಇದು
ಎಲ್ಲರಿಗೂ ಅರ್ಥವಾಗಲೇಬೇಕಾಗಿದೆ - ತಂದೆಯು ಬಂದಿದ್ದಾರೆ, ವಿನಾಶದ ಸಮಯವು ಸಮೀಪವಾದಾಗ ಎಲ್ಲವೂ
ಅರ್ಥವಾಗುವುದು. ಹೊಸ ಪ್ರಪಂಚದ ಸ್ಥಾಪನೆ ಹಳೆಯದರ ವಿನಾಶವಾಗುತ್ತದೆ. ಅನೇಕರಿಗೆ ಸಾಕ್ಷಾತ್ಕಾರವೂ
ಆಗಬಹುದು. ನೀವು ಸನ್ಯಾಸಿಗಳು ರಾಜರು ಮೊದಲಾದವರಿಗೆ ಜ್ಞಾನ ಕೊಡಬೇಕಾಗಿದೆ. ಅನೇಕರಿಗೆ ಸಂದೇಶ
ಸಿಗಬೇಕಾಗಿದೆ. ಯಾವಾಗ ಬೇಹದ್ದಿನ ತಂದೆಯು ಬಂದಿದ್ದಾರೆ ಅವರೇ ಸದ್ಗತಿಯನ್ನು ಕೊಡುವವರಾಗಿದ್ದಾರೆ
ಎಂಬುದನ್ನು ಕೇಳುವರೋ ಆಗ ಅನೇಕರು ಬರುವರು. ಈಗಿನ್ನೂ ಅಷ್ಟು ಇಷ್ಟವಾಗುವ ತರಹ ಪತ್ರಿಕೆಗಳಲ್ಲಿ
ಹಾಕಿಲ್ಲ. ಕೆಲವರು ಇಂತಹವರು ತಯಾರಾಗುತ್ತಾರೆ ಎಲ್ಲವನ್ನೂ ಕೇಳಿ ಬರೆಯುತ್ತಾರೆ. ಮಕ್ಕಳಿಗೆ
ತಿಳಿದಿದೆ - ನಾವು ಶ್ರೀಮತದಂತೆ ಸತ್ಯಯುಗದ ಸ್ಥಾಪನೆ ಮಾಡುತ್ತಿದ್ದೇವೆ. ನಿಮ್ಮದು ಇದು ಹೊಸ ಮಿಷನ್
ಆಗಿದೆ. ನೀವು ಈಶ್ವರೀಯ ಮೆಷಿನ್ನ ಈಶ್ವರೀಯ ಸಂಬಂಧಿಯಾಗಿದ್ದೀರಿ. ಹೇಗೆ ಕ್ರಿಶ್ಚಿಯನ್ ಮೆಷಿನ್ನ
ಕ್ರಿಶ್ಚಿಯನ್ ಸಂಬಂಧಿಗಳಾಗಿ ಬಿಡುತ್ತಾರೆ. ನೀವು ಈಶ್ವರನ ಸಂಬಂಧಿಯಾಗಿದ್ದೀರಿ ಆದ್ದರಿಂದ
ಅತೀಂದ್ರಿಯ ಸುಖವನ್ನು ಗೋಪ-ಗೋಪಿಕೆಯರಿಂದ ಕೇಳಿ ಎಂಬ ಗಾಯನವಿದೆ ಅಂದರೆ ಯಾರು
ಆತ್ಮಾಭಿಮಾನಿಯಾಗಿದ್ದಾರೆ ಅವರಿಂದ ಕೇಳಿ ಎಂದು. ಒಬ್ಬ ತಂದೆಯನ್ನು ನೆನಪು ಮಾಡಬೇಕು, ಬೇರೆ ಯಾರೂ
ಇಲ್ಲ. ಈ ರಾಜಯೋಗವನ್ನು ಒಬ್ಬ ತಂದೆಯೇ ಕಲಿಸುತ್ತಾರೆ. ಅವರು ಗೀತೆಯ ಭಗವಂತನಾಗಿದ್ದಾರೆ. ಎಲ್ಲರಿಗೆ
ತಂದೆಯ ಇದೇ ನಿಮಂತ್ರಣ ಅಥವಾ ಸಂದೇಶವನ್ನು ಕೊಡಬೇಕಾಗಿದೆ, ಉಳಿದೆಲ್ಲವೂ ಜ್ಞಾನ ಶೃಂಗಾರ
ಮಾತುಗಳಾಗಿವೆ. ಈ ಚಿತ್ರಗಳೆಲ್ಲವೂ ಜ್ಞಾನದ ಶೃಂಗಾರವಾಗಿದೆ, ಭಕ್ತಿಯದಲ್ಲ. ಇವನ್ನು ಮನುಷ್ಯರಿಗೆ
ತಿಳಿಸುವುದಕ್ಕಾಗಿ ಮಾಡಿಸಿದ್ದಾರೆ. ಈ ಚಿತ್ರಗಳೆಲ್ಲವೂ ಪ್ರಾಯಲೋಪವಾಗಿ ಬಿಡುತ್ತವೆ. ಕೇವಲ
ಜ್ಞಾನವು ಆತ್ಮದಲ್ಲಿ ಉಳಿಯುತ್ತದೆ. ತಂದೆಗೂ ಈ ಜ್ಞಾನವಿದೆ, ಡ್ರಾಮಾದಲ್ಲಿ ನಿಗಧಿಯಾಗಿದೆ.
ನೀವೀಗ ಭಕ್ತಿಮಾರ್ಗವನ್ನು
ಪಾರು ಮಾಡಿ ಜ್ಞಾನ ಮಾರ್ಗದಲ್ಲಿ ಬಂದಿದ್ದೀರಿ. ನಿಮಗೆ ತಿಳಿದಿದೆ - ನಾವಾತ್ಮರಲ್ಲಿ ಈ ಪಾತ್ರವು
ನಡೆಯುತ್ತಿದೆ. ನಿಗಧಿಯಾಗಿತ್ತು, ಈಗ ಪುನಃ ನಾವು ತಂದೆಯಿಂದ ರಾಜಯೋಗವನ್ನು ಕಲಿಯುತ್ತಿದ್ದೇವೆ.
ತಂದೆಯೇ ಬಂದು ಈ ಜ್ಞಾನವನ್ನು ಕೊಡಬೇಕಾಗಿತ್ತು, ಆತ್ಮದಲ್ಲಿ ನಿಗಧಿಯಾಗಿದೆ. ಅಲ್ಲಿ ಹೋಗಿ
ತಲುಪುತ್ತೇವೆ ನಂತರ ಹೊಸ ಪ್ರಪಂಚದ ಪಾತ್ರವು ಪುನರಾವರ್ತನೆಯಾಗುವುದು. ಆತ್ಮದ ಇಡೀ ರೆಕಾರ್ಡನ್ನು
ಈ ಸಮಯದಲ್ಲಿ ಆದಿಯಿಂದ ಅಂತ್ಯದವರೆಗೆ ನೀವು ಅರಿತುಕೊಂಡಿದ್ದೀರಿ ಮತ್ತೆ ಇದೆಲ್ಲವೂ ನಿಂತು
ಹೋಗುತ್ತದೆ. ಭಕ್ತಿಮಾರ್ಗದ ಪಾತ್ರವೂ ನಿಂತು ಹೋಗುವುದು ನಂತರ ಸತ್ಯಯುಗದಲ್ಲಿ ನಿಮ್ಮದು ಯಾವ
ಪಾತ್ರ ನಡೆದಿತ್ತೋ ಅದೇ ನಡೆಯುವುದು. ಏನಾಗುವುದು ಎಂಬುದನ್ನು ತಂದೆಯು ತಿಳಿಸುವುದಿಲ್ಲ. ಏನೆಲ್ಲವೂ
ಹಿಂದೆ ಆಗಿತ್ತೋ ಅದೇ ಆಗುವುದು. ಸತ್ಯಯುಗವು ಹೊಸ ಪ್ರಪಂಚವಾಗಿದೆ, ಅವಶ್ಯವಾಗಿ ಅಲ್ಲಿ ಎಲ್ಲವೂ
ಹೊಸ ಸತೋಪ್ರಧಾನ ಮತ್ತು ಸಸ್ತಾ ಆಗಿರುವುದು. ಕಲ್ಪದ ಹಿಂದೆ ಏನೆಲ್ಲವೂ ಇತ್ತೋ ಅದೇ ಇರುವುದು.
ನೋಡುತ್ತೀರಿ - ಈ ಲಕ್ಷ್ಮೀ-ನಾರಾಯಣರಿಗೆ ಎಷ್ಟೊಂದು ಸುಖವಿದೆ, ಹಣ-ವಜ್ರರತ್ನಗಳು
ಎಷ್ಟೊಂದಿರುತ್ತದೆ. ಹಣವಿದ್ದರೆ ಸುಖವೂ ಇರುತ್ತದೆ. ಅದನ್ನು ಇಲ್ಲಿ ನೀವು ಹೋಲಿಸಿ ನೋಡಬಹುದು.
ಸತ್ಯಯುಗದಲ್ಲಿ ಇದು ಸಾಧ್ಯವಿಲ್ಲ. ಇಲ್ಲಿಯ ಮಾತುಗಳೆಲ್ಲವೂ ಅಲ್ಲಿ ಮರೆತು ಹೋಗುತ್ತದೆ. ಇವು ಹೊಸ
ಮಾತುಗಳಾಗಿವೆ. ಇವನ್ನು ತಂದೆಯೇ ಮಕ್ಕಳಿಗೆ ತಿಳಿಸುತ್ತಾರೆ. ಆತ್ಮಗಳು ಅಲ್ಲಿಗೆ ಹೋಗಬೇಕಾಗಿದೆ
ಎಲ್ಲಿ ಕಾರೋಬಾರ್ ಎಲ್ಲವೂ ನಿಂತು ಹೋಗುತ್ತದೆ, ಲೆಕ್ಕಾಚಾರಗಳೆಲ್ಲವೂ ಮುಗಿಯುತ್ತದೆ, ರೆಕಾರ್ಡ್
ಪೂರ್ಣವಾಗುತ್ತದೆ. ಒಂದೇ ರೆಕಾರ್ಡ್ ಬಹಳ ದೊಡ್ಡದಾಗಿರುತ್ತದೆ ಆದ್ದರಿಂದ ಆತ್ಮವೂ ಸಹ ಇಷ್ಟೇ
ದೊಡ್ಡದಿರಬೇಕು ಎಂದು ಹೇಳುತ್ತಾರೆ ಆದರೆ ಇಲ್ಲ. ಇಷ್ಟು ಚಿಕ್ಕ ಆತ್ಮನಲ್ಲಿ 84 ಜನ್ಮಗಳ ಪಾತ್ರವಿದೆ.
ಆತ್ಮವು ಅವಿನಾಶಿಯಾಗಿದೆ. ಇದಕ್ಕೆ ಕೇವಲ ಅದ್ಭುತವೆಂದೇ ಹೇಳಬಹುದು. ಹೀಗೆ ಆಶ್ಚರ್ಯಕರವಾದ ವಸ್ತು
ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ತಂದೆಯ ಪ್ರತಿಯೂ ಹೇಳುತ್ತಾರೆ - ತಂದೆಯು ಸತ್ಯ-ತ್ರೇತಾಯುಗದ
ಸಮಯದಲ್ಲಿ ವಿಶ್ರಾಂತಿಯಲ್ಲಿರುತ್ತಾರೆ, ನಾವು ಆಲ್ರೌಂಡ್ ಪಾತ್ರವನ್ನಭಿನಯಿಸುತ್ತೇವೆ. ನಮ್ಮದು
ಎಲ್ಲರಿಗಿಂತ ಹೆಚ್ಚಿನ ಪಾತ್ರವಿದೆ ಆದ್ದರಿಂದ ತಂದೆಯು ಉತ್ತಮ ಆಸ್ತಿಯನ್ನು ಕೊಡುತ್ತಾರೆ. 84
ಜನ್ಮಗಳೂ ಸಹ ನೀವೇ ತೆಗೆದುಕೊಳ್ಳುತ್ತೀರಿ ಎಂದು ಹೇಳುತ್ತಾರೆ. ನಮ್ಮ ಪಾತ್ರವಂತೂ ಈ ರೀತಿಯಿದೆ
ಅದನ್ನು ಮತ್ತ್ಯಾರೂ ಅಭಿನಯಿಸಲು ಸಾಧ್ಯವಿಲ್ಲ. ಅದ್ಭುತ ಮಾತುಗಳಲ್ಲವೆ. ಇದೂ ಸಹ ಅದ್ಭುತವಾಗಿದೆ
ಆತ್ಮಗಳಿಗೆ ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ಆತ್ಮವು ಸ್ತ್ರೀ-ಪುರುಷನಲ್ಲ. ಯಾವಾಗ ಶರೀರ
ಧಾರಣೆ ಮಾಡುತ್ತದೆಯೋ ಆಗ ಸ್ತ್ರೀ-ಪುರುಷನೆಂದು ಹೇಳಲಾಗುತ್ತದೆ. ಆತ್ಮರೆಲ್ಲರೂ
ಮಕ್ಕಳಾಗಿರುವುದರಿಂದ ಸಹೋದರ-ಸಹೋದರರಾಗುತ್ತೀರಿ. ಅವಶ್ಯವಾಗಿ ಆಸ್ತಿಯನ್ನು ಪಡೆಯಲು
ಸಹೋದರ-ಸಹೋದರರಾಗಿದ್ದಿರಿ, ಆತ್ಮವು ತಂದೆಯ ಮಗುವಲ್ಲವೆ! ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ
ಆದ್ದರಿಂದ ಆತ್ಮಕ್ಕೆ ಪುರುಷನೆಂದು ಹೇಳುತ್ತಾರೆ. ತಂದೆಯಿಂದ ಆಸ್ತಿಯನ್ನು ಪಡೆಯಲು ಎಲ್ಲಾ
ಆತ್ಮಗಳಿಗೂ ಅಧಿಕಾರವಿದೆ ಅದಕ್ಕಾಗಿ ತಂದೆಯನ್ನು ನೆನಪು ಮಾಡಬೇಕು, ತಮ್ಮನ್ನು ಆತ್ಮನೆಂದು
ತಿಳಿಯಬೇಕಾಗಿದೆ. ನಾವೆಲ್ಲರೂ ಸಹೋದರರಾಗಿದ್ದೇವೆ, ಆತ್ಮ ಆತ್ಮವೇ ಆಗಿದೆ ಅದು ಎಂದೂ
ಬದಲಾಗುವುದಿಲ್ಲ. ಕೇವಲ ಒಮ್ಮೆ ಪುರುಷ, ಕೆಲವೊಮ್ಮೆ ಸ್ತ್ರೀಯ ಶರೀರವನ್ನು ತೆಗೆದುಕೊಳ್ಳುತ್ತದೆ.
ಇವು ತಿಳಿದುಕೊಳ್ಳುವಂತಹ ಬಹಳ ಕಷ್ಟ ಮಾತುಗಳಾಗಿವೆ. ಇವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.
ಇವನ್ನು ತಂದೆಯಿಂದ ಅಥವಾ ನೀವು ಮಕ್ಕಳಿಂದಲೇ ಕೇಳಬಹುದಾಗಿದೆ. ತಂದೆಯು ನೀವು ಮಕ್ಕಳೊಂದಿಗೇ
ಮಾತನಾಡುತ್ತಾರೆ. ಮೊದಲು ಎಲ್ಲರೊಂದಿಗೆ ಮಿಲನ ಮಾಡುತ್ತಿದ್ದರು, ಎಲ್ಲರೊಂದಿಗೆ ಮಾತನಾಡುತ್ತಿದ್ದರು.
ಹೀಗೆ ಮಾಡುತ್ತಾ-ಮಾಡುತ್ತಾ ಕೊನೆಗೆ ಯಾರೊಂದಿಗೂ ಮಾತನಾಡುವುದಿಲ್ಲ. ಮಕ್ಕಳು ತಂದೆಯನ್ನು
ಪ್ರತ್ಯಕ್ಷ ಮಾಡುವರಲ್ಲವೆ. ಮಕ್ಕಳೇ ಓದಿಸಬೇಕಾಗಿದೆ, ನೀವು ಮಕ್ಕಳೇ ಅನೇಕರಿಗೆ ಸರ್ವೀಸ್ ಮಾಡಿ ಕರೆ
ತರುತ್ತೀರಿ. ಇವರು ಅನೇಕರನ್ನು ತಮ್ಮ ಸಮಾನ ಮಾಡಿ ಕರೆ ತರುತ್ತಾರೆ. ಇವರು ದೊಡ್ಡ ರಾಜನಾಗುತ್ತಾರೆ,
ಇವರು ಚಿಕ್ಕ ರಾಜನಾಗುತ್ತಾರೆ ಎಂದು ತಂದೆಯು ತಿಳಿದುಕೊಳ್ಳುತ್ತಾರೆ. ನೀವು ಆತ್ಮಿಕ ಸೇನೆಯೂ
ಆಗಿದ್ದೀರಿ, ಎಲ್ಲರನ್ನೂ ರಾವಣನ ಬಂಧನಗಳಿಂದ ಬಿಡಿಸಿ ತಮ್ಮ ಕಡೆ ಕರೆ ತರುತ್ತೀರಿ. ಯಾರೆಷ್ಟು ಸೇವೆ
ಮಾಡುವರೋ ಅಷ್ಟು ಫಲ ಸಿಗುತ್ತದೆ. ಯಾರು ಹೆಚ್ಚು ಭಕ್ತಿ ಮಾಡಿದ್ದಾರೆಯೋ ಅವರೇ ಹೆಚ್ಚು
ಬುದ್ಧಿವಂತರಾಗಿ ಬಿಡುತ್ತಾರೆ ಮತ್ತು ಆಸ್ತಿಯನ್ನು ಪಡೆಯುತ್ತಾರೆ. ಇದು ವಿದ್ಯೆಯಾಗಿದೆ.
ವಿದ್ಯೆಯನ್ನು ಚೆನ್ನಾಗಿ ಓದದಿದ್ದರೆ ಅನುತ್ತೀರ್ಣರಾಗಿ ಬಿಡುವರು. ಬಹಳ ಸಹಜ ವಿದ್ಯೆಯಾಗಿದೆ.
ಇದನ್ನು ತಿಳಿದುಕೊಳ್ಳುವುದು ಮತ್ತು ತಿಳಿಸುವುದೂ ಸಹಜವಾಗಿದೆ. ಯಾವುದೇ ಕಷ್ಟದ ಮಾತಿಲ್ಲ ಆದರೆ
ರಾಜಧಾನಿಯು ಸ್ಥಾಪನೆಯಾಗಬೇಕಾಗಿದೆ. ಅದರಲ್ಲಿ ಎಲ್ಲರೂ ಬೇಕಲ್ಲವೆ. ಅದರಲ್ಲಿ ನಾವು ಶ್ರೇಷ್ಠ
ಪದವಿಯನ್ನು ಪಡೆಯಬೇಕೆಂದರೆ ಪುರುಷಾರ್ಥ ಮಾಡಬೇಕಾಗಿದೆ. ಮೃತ್ಯುಲೋಕದಿಂದ ವರ್ಗಾವಣೆಯಾಗಿ
ಅಮರಲೋಕದಲ್ಲಿ ಹೋಗಬೇಕಾಗಿದೆ. ಎಷ್ಟು ಓದುವಿರೋ ಅಷ್ಟು ಅಮರಪುರಿಯಲ್ಲಿ ಶ್ರೇಷ್ಠ ಪದವಿಯನ್ನು
ಪಡೆಯುತ್ತೀರಿ.
ತಂದೆಯನ್ನು ಪ್ರೀತಿಯೂ
ಮಾಡಲಾಗುತ್ತದೆ ಏಕೆಂದರೆ ಇವರು ಬಹಳ ಪ್ರಿಯಾತಿ ಪ್ರಿಯ ವಸ್ತುವಾಗಿದ್ದಾರೆ. ಪ್ರೀತಿಯ ಸಾಗರನೂ
ಆಗಿದ್ದಾರೆ, ಎಲ್ಲರಿಗೆ ಅವರ ಮೇಲೆ ಏಕರಸ ಪ್ರೀತಿಯಿರುವುದಿಲ್ಲ. ಕೆಲವರು ನೆನಪು ಮಾಡುತ್ತಾರೆ,
ಕೆಲವರು ಮಾಡುವುದಿಲ್ಲ. ಕೆಲವರಿಗೆ ತಿಳಿಸಿ ಕೊಡುವ ನಶೆಯಿರುತ್ತದೆಯಲ್ಲವೆ. ಇದು ಒತ್ತುಕೊಟ್ಟು
ಹೇಳುವ ವಿಷಯವಾಗಿದೆ. ಯಾರಿಗೇ ಆಗಲಿ ಇದನ್ನು ತಿಳಿಸಿ - ಇದು ವಿಶ್ವ ವಿದ್ಯಾಲಯವಾಗಿದೆ, ಆತ್ಮಿಕ
ವಿದ್ಯೆಯಾಗಿದೆ. ಇಂತಹ ಚಿತ್ರಗಳನ್ನು ಮತ್ತ್ಯಾವುದೇ ಶಾಲೆಯಲ್ಲಿ ತೋರಿಸಲಾಗುವುದಿಲ್ಲ.
ದಿನ-ಪ್ರತಿದಿನ ಇನ್ನೂ ಚಿತ್ರಗಳು ತಯಾರಾಗುತ್ತಿರುತ್ತವೆ ಯಾವುದನ್ನು ಮನುಷ್ಯರು
ನೋಡುತ್ತಿದ್ದಂತೆಯೇ ಅರ್ಥವಾಗಿ ಬಿಡುವುದು. ಏಣಿಯ ಚಿತ್ರವು ಬಹಳ ಚೆನ್ನಾಗಿದೆ ಆದರೆ ದೇವತಾ
ಧರ್ಮದವರಲ್ಲವೆಂದರೆ ಅವರಿಗೆ ಅರ್ಥವಾಗುವುದಿಲ್ಲ. ಯಾರು ಈ ಕುಲದವರಾಗಿರುವರೋ ಅವರಿಗೆ ಬಾಣವು
ನಾಟುವುದು. ಯಾರು ನಮ್ಮ ದೇವತಾ ಧರ್ಮದ ಎಲೆಗಳಾಗಿರುವರೋ ಅವರೇ ಬರುತ್ತಾರೆ. ನಿಮಗೂ ಸಹ ಇದು
ಅನುಭವವಾಗುತ್ತದೆ - ಇವರು ಬಹಳ ರುಚಿಯಿಂದ ಕೇಳುತ್ತಿದ್ದಾರೆಂದು. ಕೆಲವರಂತೂ ಹಾಗೆಯೇ ಹೊರಟು
ಹೋಗುತ್ತಾರೆ. ದಿನ-ಪ್ರತಿದಿನ ಮಕ್ಕಳಿಗೆ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಿರುತ್ತಾರೆ. ನಿಮಗೆ
ಸರ್ವೀಸಿನ ಉಮ್ಮಂಗವಿರಬೇಕು. ಯಾರು ಸರ್ವೀಸಿನಲ್ಲಿ ತತ್ಫರರಾಗಿರುವರೋ ಅವರೇ ಹೃದಯವನ್ನೇರುತ್ತಾರೆ
ಮತ್ತು ಸಿಂಹಾಸನವನ್ನೇರುತ್ತಾರೆ. ಮುಂದೆ ಹೋದಂತೆ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುತ್ತಿರುತ್ತದೆ.
ನೀವು ಆ ಖುಷಿಯಲ್ಲಿ ಇರುತ್ತೀರಿ. ಪ್ರಪಂಚದಲ್ಲಂತೂ ಬಹಳ ಹಾಹಾಕಾರವಾಗಲಿದೆ. ರಕ್ತದ ನದಿಗಳು
ಹರಿಯುವವು. ಸಾಹಸವಂತರಾಗಿ ಸರ್ವೀಸ್ ಮಾಡುವವರು ಎಂದೂ ಹಸಿವಿನಿಂದ ಸಾಯುವುದಿಲ್ಲ ಆದರೆ ಇಲ್ಲಂತೂ
ನೀವು ವನವಾಸದಲ್ಲಿರಬೇಕಾಗಿದೆ. ಸತ್ಯಯುಗದಲ್ಲಿ ಸುಖ ಸಿಗುವುದು. ಕನ್ಯೆಯನ್ನು ವನವಾಸದಲ್ಲಿ
ಕೂರಿಸುತ್ತಾರಲ್ಲವೆ. ಮಾವನ ಮನೆಗೆ ಹೋಗಿ ಹೆಚ್ಚು ಶೃಂಗರಿತವಾಗುತ್ತಾಳೆ, ನೀವೂ ಸಹ ಮಾವನ ಮನೆಗೆ (ಸ್ವರ್ಗ)
ಹೋಗುತ್ತೀರಿ ಆದ್ದರಿಂದ ಆ ನಶೆಯಿರುತ್ತದೆ, ಅದು ಸುಖಧಾಮವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮಾಲೆಯಲ್ಲಿ
ಪೋಣಿಸಲ್ಪಡಲು ಆತ್ಮಾಭಿಮಾನಿಯಾಗಿ ತೀವ್ರ ವೇಗದಿಂದ ನೆನಪಿನ ಯಾತ್ರೆ ಮಾಡಬೇಕಾಗಿದೆ. ತಂದೆಯ
ಆದೇಶದಂತೆ ನಡೆದು ಪಾವನರಾಗಬೇಕಾಗಿದೆ.
2. ತಂದೆಯ ಪರಿಚಯ ಕೊಟ್ಟು
ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಇಲ್ಲಿ ವನವಾಸದಲ್ಲಿರಬೇಕು. ಅಂತಿಮ
ಹಾಹಾಕಾರದ ದೃಶ್ಯವನ್ನು ನೋಡಲು ಮಹಾವೀರರಾಗಬೇಕಾಗಿದೆ.
ವರದಾನ:
ಬಂಧನಗಳ
ಪಂಜರವನ್ನು ಮುರಿದುಕೊಂಡು ಜೀವನ್ ಮುಕ್ತ ಸ್ಥಿತಿಯ ಅನುಭವ ಮಾಡುವಂತಹ ಸತ್ಯವಾದ ಟ್ರಸ್ಟಿ ಭವ.
ಶರೀರದ ಹಾಗೂ ಸಂಬಂಧದ
ಬಂಧನವೇ ಪಂಜರವಾಗಿದೆ. ಜವಾಬ್ದಾರಿ ನಿಭಾಯಿಸುವುದನ್ನೂ ಸಹಾ ನಿಮಿತ್ತ ಮಾತ್ರ ನಿಭಾಯಿಸಬೇಕು,
ಸೆಳೆತದಿಂದಲ್ಲ ಆಗ ಹೇಳಲಾಗುವುದು ನಿರ್ಬಂಧನ್. ಯಾರು ಟ್ರಸ್ಟಿ ಯಾಗಿರುತ್ತಾ ನಡೆಯುತ್ತಾರೆ ಅವರೇ
ನಿರ್ಬಂಧನರಾಗಿದ್ದಾರೆ ಒಂದುವೇಳೆ ಯಾವುದಾದರೂ ನನ್ನತನವಿದ್ದಲ್ಲಿ ಪಂಜರದೊಳಗಿರುವಿರಿ. ಈಗ ಪಂಜರದ
ಮೈನಾ ಹಕ್ಕಿಯಿಂದ ಫರಿಸ್ತಾ ಆಗಿದ್ದೀರಿ ಆದ್ದರಿಂದ ಎಲ್ಲೂ ಸ್ವಲ್ಪವೂ ಸಹಾ ಬಂಧನ ಇರಬಾರದು.
ಮನಸ್ಸಿನ ಬಂಧನವೂ ಇಲ್ಲಾ. ಏನು ಮಾಡುವುದು, ಹೇಗೆ ಮಾಡುವುದು, ಇಚ್ಛೆಪಡುವೆ ಆದರೂ ಆಗುತ್ತಿಲ್ಲ-ಇದೂ
ಸಹಾ ಮನಸ್ಸಿನ ಬಂಧನವಾಗಿದೆ. ಯಾವಾಗ ಮರುಜೀವಾ ಆದಿರಿ ಆಗ ಎಲ್ಲಾ ಪ್ರಕಾರದ ಬಂಧನ ಸಮಾಪ್ತಿ, ಸದಾ
ಜೀವನ್ಮುಕ್ತ ಸ್ಥಿತಿಯ ಅನುಭವ ಆಗುತ್ತಿರಬೇಕು.
ಸ್ಲೋಗನ್:
ಸಂಕಲ್ಪಗಳ
ಉಳಿತಾಯ ಮಾಡಿ ಆಗ ಸಮಯ, ಮಾತು ಎಲ್ಲವೂ ಸ್ವತಃವಾಗಿ ಉಳಿತಾಯವಾಗುವುದು.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಕರ್ಮಾತೀತ ಅರ್ಥಾತ್
ಕರ್ಮದ ಯಾವುದೇ ಬಂಧನದ ಸ್ಪರ್ಶದಿಂದ ಭಿನ್ನ. ಇದೇ ರೀತಿ ಅನುಭವ ಹೆಚ್ಚಿಸುತ್ತಾ ಹೋಗಿ. ಯಾವುದೇ
ಕಾರ್ಯ ಸ್ಪರ್ಶ ಮಾಡದಿರಲಿ ಮತ್ತು ಮಾಡಿದ ನಂತರ ಏನು ಫಲಿತಾಂಶ ಬರುತ್ತದೆ ಅದರ ಸ್ಪರ್ಶವೂ ಆಗದಿರಲಿ,
ಸಂಪೂರ್ಣ ಭಿನ್ನತನದ ಅನುಭವವಾಗುತ್ತಿರಲಿ. ಹೇಗೆ ಬೇರೆಯವರು ಮಾಡಿಸಿದರು ಮತ್ತು ನಾನು ಮಾಡಿದೆ.
ನಿಮಿತ್ತರಾಗುವುದರಲ್ಲಿಯೂ ಭಿನ್ನತನದ ಅನುಭವವಾಗಲಿ. ಏನೆಲ್ಲಾ ನಡೆಯಿತೋ, ಅದಕ್ಕೆ ಬಿಂದುವಿಟ್ಟು
ಭಿನ್ನರಾಗಿರಿ.