10.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ದೇಹಾಭಿಮಾನವು ಎಲ್ಲದಕ್ಕಿಂತ ದೊಡ್ಡ ಖಾಯಿಲೆಯಾಗಿದೆ, ಇದರಿಂದಲೇ ಅವನತಿಯಾಗಿದೆ ಆದ್ದರಿಂದ ಈಗ ದೇಹೀ
– ಅಭಿಮಾನಿಯಾಗಿ”
ಪ್ರಶ್ನೆ:
ನೀವು ಮಕ್ಕಳ
ಕರ್ಮಾತೀತ ಸ್ಥಿತಿಯು ಯಾವಾಗ ಆಗುವುದು?
ಉತ್ತರ:
ಯಾವಾಗ ಯೋಗ
ಬಲದಿಂದ ಕರ್ಮ ಭೋಗದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರೋ, ಸಂಪೂರ್ಣ
ದೇಹಿ-ಅಭಿಮಾನಿಗಳಾಗುತ್ತೀರೋ ಆಗ ನಿಮ್ಮದು ಕರ್ಮಾತೀತ ಸ್ಥಿತಿಯಾಗುವುದು. ಈ ದೇಹಾಭಿಮಾನದ ರೋಗವೇ
ಎಲ್ಲದಕ್ಕಿಂತ ದೊಡ್ಡದಾಗಿದೆ. ಇದರಿಂದಲೇ ಪ್ರಪಂಚವು ಪತಿತವಾಗಿದೆ. ನೀವೀಗ ಆತ್ಮಾಭಿಮಾನಿಗಳಾಗಿ ಆಗ
ಆ ಖುಷಿ, ಆ ನಶೆಯೂ ಇರುವುದು. ಚಲನೆಯೂ ಸುಧಾರಣೆಯಾಗುವುದು.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ...
ಓಂ ಶಾಂತಿ.
ಪ್ರಯಾಣಿಕನ ಅರ್ಥವನ್ನು ಮಕ್ಕಳು ಕೇಳಿದಿರಿ, ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರ ವಿನಃ
ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಯಾರು ದೇವಿ-ದೇವತೆಗಳಾಗಿದ್ದಿರೋ ವಾಸ್ತವದಲ್ಲಿ
ಮನುಷ್ಯರೇ ಆಗಿದ್ದಿರಿ ಆದರೆ ನಿಮ್ಮ ಗುಣಗಳು ಬಹಳ ಒಳ್ಳೆಯದಾಗಿತ್ತು, ನೀವು ಸರ್ವಗುಣ ಸಂಪನ್ನರು,
16 ಕಲಾ ಸಂಪೂರ್ಣರಾಗಿದ್ದೀರಿ, ನೀವು ವಿಶ್ವದ ಮಾಲೀಕರಾಗಿದ್ದೀರಿ. ವಜ್ರದಿಂದ ಕವಡೆಯ ತರಹ
ಹೇಗಾದಿರಿ ಎಂಬುದನ್ನು ಯಾವ ಮನುಷ್ಯರೂ ತಿಳಿದುಕೊಂಡಿಲ್ಲ. ನೀವೂ ಸಹ ನಂಬರ್ವಾರ್
ಪುರುಷಾರ್ಥದನುಸಾರ ಪರಿವರ್ತನೆಯಾಗಿದ್ದೀರಿ. ನೀವಿನ್ನೂ ದೇವತೆಗಳಾಗಿಲ್ಲ, ಬದಲಾಗುತ್ತಿದ್ದೀರಿ.
ಕೆಲವರು ಸ್ವಲ್ಪ ಬದಲಾಗಿದ್ದಾರೆ, ಕೆಲವರು 5%, ಇನ್ನೂ ಕೆಲವರು 10%.... ಹೀಗೆ ಗುಣಗಳು
ಬದಲಾಗುತ್ತಾ ಹೋಗುತ್ತವೆ. ಭಾರತವೇ ಸ್ವರ್ಗವಾಗಿತ್ತು ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಇದನ್ನೂ
ಹೇಳುತ್ತಾರೆ - ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತದಲ್ಲಿ ದೇವಿ - ದೇವತೆಗಳಿದ್ದರು,
ಅವರಲ್ಲಿ ಇಂತಹ ಗುಣಗಳಿತ್ತು ಆ ಕಾರಣದಿಂದ ಅವರಿಗೆ ಭಗವಾನ್-ಭಗವತಿ ಎಂದು ಹೇಳುತ್ತಿದ್ದರು. ಈಗಂತೂ
ಆ ಗುಣಗಳಿಲ್ಲ. ಯಾವ ಭಾರತವು ಇಷ್ಟು ಸಾಹುಕಾರನಾಗಿತ್ತೋ, ಹೇಗೆ ಅದರ ಅವನತಿಯಾಯಿತು ಎಂಬುದು
ಮನುಷ್ಯರಿಗೆ ಅರ್ಥವೇ ಆಗುವುದಿಲ್ಲ. ಅದನ್ನೂ ಸಹ ತಂದೆಯೇ ತಿಳಿಸುತ್ತಾರೆ. ನಿಮ್ಮಲ್ಲಿ ಯಾರ ಚಲನೆಯು
ಸುಧಾರಣೆಯಾಗಿದೆಯೋ ಅವರೂ ಸಹ ತಿಳಿಸುತ್ತೀರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು
ದೇವಿ-ದೇವತೆಗಳಾಗಿದ್ದಿರಿ ಆತ್ಮಾಭಿಮಾನಿಯಾಗಿದ್ದಿರಿ, ನಂತರ ರಾವಣ ರಾಜ್ಯವು ಆರಂಭವಾಯಿತು
ಆಗಿನಿಂದ ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ. ಈ ದೇಹಾಭಿಮಾನದ ಎಲ್ಲದಕ್ಕಿಂತ ದೊಡ್ಡ ಖಾಯಿಲೆಯು
ನಿಮಗೆ ಅಂಟಿದೆ. ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಗಳಾಗಿದ್ದಿರಿ, ಬಹಳ ಸುಖಿಯಾಗಿದ್ದಿರಿ, ಯಾರು
ನಿಮ್ಮನ್ನು ಈ ರೀತಿ ಮಾಡಿದರು ಎಂಬುದು ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ,
ನಿಮ್ಮದು ಏಕೆ ಅವನತಿಯಾಯಿತು? ತಮ್ಮ ಧರ್ಮವನ್ನು ಮರೆತು ಬಿಟ್ಟಿದ್ದೀರಿ. ಭಾರತವು ಬಹಳ
ಕನಿಷ್ಟವಾಯಿತು, ಅದಕ್ಕೆ ಮೂಲ ಕಾರಣವೇನು? ದೇಹಾಭಿಮಾನ. ಡ್ರಾಮಾದಲ್ಲಿ ಇದೂ ಸಹ ಮಾಡಲ್ಪಟ್ಟಿದೆ.
ಯಾವ ಭಾರತವು ಇಷ್ಟು ಸಾಹುಕಾರನಾಗಿತ್ತೋ ಅದು ಹೇಗೆ ಬಡ ದೇಶವಾಯಿತು? ಆದಿ ಸನಾತನ ದೇವಿ-ದೇವತಾ
ಧರ್ಮದವರಾಗಿದ್ದ ನಾವು ಹೇಗೆ ಧರ್ಮ ಭ್ರಷ್ಟ, ಕರ್ಮ ಭ್ರಷ್ಟರಾದೆವು ಎಂಬುದನ್ನು ಮನುಷ್ಯರು
ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ರಾವಣ ರಾಜ್ಯವಾದಾಗಿನಿಂದ ನೀವು ದೇಹಾಭಿಮಾನಿಗಳಾದಿರಿ
ಆದ್ದರಿಂದ ನಿಮ್ಮದು ಈ ಗತಿಯಾಗತೊಡಗಿತು. ಹೇಗೆ ಅವನತಿಯಾಯಿತೆಂದು ಏಣಿಯ ಚಿತ್ರದಲ್ಲಿಯೂ
ತೋರಿಸಿದ್ದಾರೆ. ಕನಿಷ್ಟರಾಗುವುದಕ್ಕೂ ಮುಖ್ಯ ಕಾರಣ ದೇಹಾಭಿಮಾನವಾಗಿದೆ. ಇದನ್ನೂ ಸಹ ತಂದೆಯು -
ತಿಳಿಸುತ್ತಾರೆ, ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ಈಗಿನ
ಬುದ್ಧಿವಂತರು ಕ್ರಿಶ್ಚಿಯನ್ನರಾಗಿದ್ದಾರೆ. ಅವರೂ ಸಹ ಹೇಳುತ್ತಾರೆ - ಕ್ರಿಸ್ತನಿಗೆ 3000 ವರ್ಷಗಳ
ಮೊದಲು ಸ್ವರ್ಗವಿತ್ತು. ಪ್ರಾಚೀನ ಭಾರತವೇ ಆಗಿತ್ತು, ಯಾವುದಕ್ಕೆ ಸ್ವರ್ಗ, ಹೆವೆನ್ ಎಂದು
ಹೇಳಲಾಗುತ್ತದೆ ಎಂಬುದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ. ಈಗಂತೂ ಭಾರತದ ಪೂರ್ಣ ಚರಿತ್ರೆ
ಭೂಗೋಳವನ್ನು ತಿಳಿದುಕೊಂಡೇ ಇಲ್ಲ. ಕೆಲವು ಮಕ್ಕಳಲ್ಲಿ ಸ್ವಲ್ಪ ಜ್ಞಾನವಿದ್ದರೂ ಸಹ ದೇಹಾಭಿಮಾನವು
ಬಂದು ಬಿಡುತ್ತದೆ. ನಮ್ಮ ಹಾಗೆ ಯಾರೂ ಇಲ್ಲವೆಂದು ತಿಳಿದುಕೊಳ್ಳುತ್ತಾರೆ. ಭಾರತದ ಇಂತಹ ದುರ್ದೆಶೆ
ಏಕಾಯಿತು ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಪತಿತ - ಪಾವನ ಬನ್ನಿ, ಬಂದು ರಾಮ ರಾಜ್ಯವನ್ನು
ಸ್ಥಾಪನೆ ಮಾಡಿ ಎಂದು ಬಾಪೂಜಿಯೂ ಸಹ ಹೇಳುತ್ತಿದ್ದರು. ಆತ್ಮಕ್ಕೆ ಅವಶ್ಯವಾಗಿ ತಂದೆಯಿಂದ ಎಂದಾದರೂ
ಸುಖ ಸಿಕ್ಕಿದೆ, ಆದ್ದರಿಂದಲೇ ಪತಿತ-ಪಾವನನನ್ನು ನೆನಪು ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ
- ನನ್ನ ಮಕ್ಕಳು ಯಾರು ಶೂದ್ರರಿಂದ ಬ್ರಾಹ್ಮಣರಾಗುವರೋ ಅವರೂ ಸಹ ಪೂರ್ಣ
ಆತ್ಮಾಭಿಮಾನಿಗಳಾಗುವುದಿಲ್ಲ. ಪದೇ-ಪದೇ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಇದು ಎಲ್ಲದಕ್ಕಿಂತ
ಹಳೆಯ ರೋಗವಾಗಿದೆ. ಇದರಿಂದಲೇ ಈ ಗತಿಯುಂಟಾಗಿದೆ. ದೇಹೀ-ಅಭಿಮಾನಿಗಳಾಗುವುದರಲ್ಲಿ ಬಹಳ
ಪರಿಶ್ರಮವಿದೆ. ಎಷ್ಟು ದೇಹೀ-ಅಭಿಮಾನಿಗಳಾಗುತ್ತೀರೋ ಅಷ್ಟು ತಂದೆಯನ್ನು ನೆನಪು ಮಾಡುತ್ತೀರಿ ಮತ್ತು
ಅಪಾರ ಖಷಿಯಿರಬೇಕು. ಗಾಯನವೂ ಇದೆ - ಪರಬ್ರಹ್ಮದಲ್ಲಿರುವ ಪರಮಾತ್ಮನನ್ನು ಪಡೆಯುವ ಇಚ್ಛೆಯಿತ್ತು,
ಅವರು ಸಿಕ್ಕಿ ಬಿಟ್ಟರು, ಅವರಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ ಅಂದಮೇಲೆ ಇನ್ನೇನು ಬೇಕು.
ನೀವು ಕೇವಲ ದೇಹೀ - ಅಭಿಮಾನಿಯಾಗಿ, ನನ್ನೊಬ್ಬನನ್ನೇ ನೆನಪು ಮಾಡಿ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ.
ಇಡೀ ಪ್ರಪಂಚವು ದೇಹಾಭಿಮಾನದಲ್ಲಿದೆ. ಯಾವ ಭಾರತವು ಇಷ್ಟು ಶ್ರೇಷ್ಠವಾಗಿತ್ತೋ ಅದರ ಅವನತಿ
ಹೇಗಾಯಿತು? ಚರಿತ್ರೆ, ಭೂಗೋಳವೇನು ಎಂಬುದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಮಾತುಗಳು ಯಾವುದೇ
ಶಾಸ್ತ್ರಗಳಲ್ಲಿಲ್ಲ. ದೇವತೆಗಳು ಆತ್ಮಾಭಿಮಾನಿಗಳಾಗಿದ್ದರು. ಅವರಿಗೆ ತಿಳಿದಿತ್ತು - ಒಂದು
ದೇಹವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕು ಎಂದು. ಆದರೆ ಅವರು ಪರಮಾತ್ಮಾಭಿಮಾನಿ
ಆಗಿರಲಿಲ್ಲ, ಎಷ್ಟು ನೀವು ತಂದೆಯನ್ನು ನೆನಪು ಮಾಡುತ್ತೀರೋ, ದೇಹೀ ಅಭಿಮಾನಿಯಾಗಿರುತ್ತೀರೋ ಅಷ್ಟು
ಮಧುರರಾಗಿರುತ್ತೀರಿ. ದೇಹಾಭಿಮಾನವು ಬಂದಾಗಲೇ ಹೊಡೆದಾಡುವುದು, ಜಗಳವಾಡುವುದು, ಕೋತಿಯ ಗುಣಗಳು
ಬಂದು ಬಿಡುತ್ತವೆ. ಇದನ್ನು ತಂದೆಯು ತಿಳಿಸುತ್ತಾರೆ. ಈ ಬ್ರಹ್ಮಾ ತಂದೆಯೂ
ತಿಳಿದುಕೊಳ್ಳುತ್ತಿದ್ದಾರೆ. ಮಕ್ಕಳು ದೇಹಾಭಿಮಾನದಲ್ಲಿ ಬಂದು ಶಿವ ತಂದೆಯನ್ನು ಮರೆತು ಹೋಗುತ್ತಾರೆ.
ಒಳ್ಳೊಳ್ಳೆಯ ಮಕ್ಕಳು ದೇಹಾಭಿಮಾನದಲ್ಲಿರುತ್ತಾರೆ, ದೇಹೀ-ಅಭಿಮಾನಿಗಳಾಗುವುದೇ ಇಲ್ಲ. ನೀವು ಯಾರಿಗೇ
ಬೇಕಾದರೂ ಈ ಬೇಹದ್ದಿನ ಚರಿತ್ರೆ- ಭೂಗೋಳವನ್ನು ತಿಳಿಸಬಲ್ಲಿರಿ. ಅವಶ್ಯವಾಗಿ ಸೂರ್ಯವಂಶಿ,
ಚಂದ್ರವಂಶಿ ರಾಜಧಾನಿಯಿತ್ತು, ಡ್ರಾಮಾದ ಬಗ್ಗೆ ಯಾರಿಗೂ ತಿಳಿದಿಲ್ಲ. ಯಾವ ಭಾರತವು ಇಷ್ಟೊಂದು
ಕೆಳಗಿಳಿಯಿತೋ ಅವನತಿಯಾಯಿತೋ ಅದಕ್ಕೆ ಮೂಲವು ದೇಹಾಭಿಮಾನವಾಗಿದೆ. ಮಕ್ಕಳಲ್ಲಿಯೂ ದೇಹಾಭಿಮಾನ ಬಂದು
ಬಿಡುತ್ತದೆ. ನಮಗೆ ಯಾರು ಆದೇಶ ನೀಡುತ್ತಾರೆ ಎಂಬುದೂ ಸಹ ತಿಳಿದುಕೊಳ್ಳುವುದಿಲ್ಲ. ಯಾವಾಗಲೂ ಶಿವ
ತಂದೆಯು ಹೇಳುತ್ತಾರೆಂದೇ ತಿಳಿಯಿರಿ. ಶಿವ ತಂದೆಯನ್ನು ನೆನಪು ಮಾಡದೇ ಇರುವುದರಿಂದಲೇ
ದೇಹಾಭಿಮಾನಿದಲ್ಲಿ ಬಂದು ಬಿಡುತ್ತಾರೆ. ಇಡೀ ಪ್ರಪಂಚವು ದೇಹಾಭಿಮಾನಿ ಆಗಿ ಬಿಟ್ಟಿದೆ. ಆದ್ದರಿಂದ
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ತಮ್ಮನ್ನು ಆತ್ಮನೆಂದು
ತಿಳಿಯಿರಿ. ಆತ್ಮವು ಈ ದೇಹದ ಮೂಲಕ ಕೇಳಿಸಿಕೊಳ್ಳುತ್ತದೆ, ಪಾತ್ರವನ್ನಭಿನಯಿಸುತ್ತದೆ. ತಂದೆಯು
ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಭಲೆ ಭಾಷಣವನ್ನಂತೂ ಬಹಳ ಚೆನ್ನಾಗಿ ಮಾಡಿ ಬಿಡುತ್ತಾರೆ. ಆದರೆ
ಚಲನೆಯೂ ಸಹ ಚೆನ್ನಾಗಿರಬೇಕಲ್ಲವೆ, ದೇಹಾಭಿಮಾನ ಇರುವ ಕಾರಣ ಅನುತ್ತೀರ್ಣರಾಗಿ ಬಿಡುತ್ತಾರೆ. ಆ
ಖುಷಿ ಅಥವಾ ನಶೆಯಿರುವುದಿಲ್ಲ ಮತ್ತೆ ಅವರಿಂದ ದೊಡ್ಡ ವಿಕರ್ಮಗಳೂ ಆಗುತ್ತವೆ. ಯಾವ ಕಾರಣ ಬಹಳ
ದೊಡ್ಡ ಶಿಕ್ಷೆಗೆ ಭಾಗಿಗಳಾಗಿ ಬಿಡುತ್ತಾರೆ. ದೇಹಾಭಿಮಾನಿಗಳಾಗುವುದರಿಂದ ಬಹಳ ನಷ್ಟ ಹೊಂದುತ್ತಾರೆ.
ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ಇದು ಈಶ್ವರೀಯ
ಸರ್ಕಾರವಲ್ಲವೆ. ಪರಮಾತ್ಮನಾದ ನನ್ನ ಸರ್ಕಾರದ ಬಲ ಭುಜವು ಧರ್ಮ ರಾಜನಾಗಿದ್ದಾರೆ. ನೀವು ಒಳ್ಳೆಯ
ಕರ್ಮ ಮಾಡುತ್ತೀರೆಂದರೆ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ. ಕೆಟ್ಟ ಕರ್ಮ ಮಾಡಿದರೆ ಅದರ
ಶಿಕ್ಷೆಯನ್ನನುಭವಿಸುತ್ತೀರಿ. ಎಲ್ಲರೂ ಗರ್ಭ ಜೈಲಿನಲ್ಲಿಯೂ ಶಿಕ್ಷೆಗಳನ್ನನುಭವಿಸುತ್ತಾರೆ. ಅದರ
ಮೇಲೆ ಒಂದು ಕಥೆಯೂ ಇದೆ. ಇವೆಲ್ಲಾ ಮಾತುಗಳು ಈ ಸಮಯದ್ದಾಗಿದೆ. ಮಹಿಮೆಯೂ ಸಹ ಒಬ್ಬ ತಂದೆಯದಾಗಿದೆ.
ಮತ್ತ್ಯಾರಿಗೂ ಮಹಿಮೆಯಿಲ್ಲ. ಆದ್ದರಿಂದ ಬರೆಯಲಾಗುತ್ತದೆ - ತ್ರಿಮೂರ್ತಿ ಶಿವ ಜಯಂತಿಯು ವಜ್ರ
ಸಮಾನವಾಗಿ ಉಳಿದೆಲ್ಲವೂ ಕವಡೆಯ ಸಮಾನವಾಗಿದೆ. ಶಿವ ತಂದೆಯ ವಿನಃ ಮತ್ತ್ಯಾರೂ ಪಾವನರನ್ನಾಗಿ ಮಾಡಲು
ಸಾಧ್ಯವಿಲ್ಲ. ಪಾವನರಾಗುತ್ತೀರಿ ಮತ್ತೆ ರಾವಣನು ಪತಿತರನ್ನಾಗಿ ಮಾಡುತ್ತಾನೆ, ಆ ಕಾರಣದಿಂದ ಎಲ್ಲರೂ
ದೇಹಾಭಿಮಾನಿಗಳಾಗಿ ಬಿಟ್ಟಿದ್ದಾರೆ. ನೀವೀಗ ದೇಹಿ-ಅಭಿಮಾನಿಗಳಾಗುತ್ತೀರಿ. ಈ ದೇಹೀ-ಅಭಿಮಾನಿ
ಸ್ಥಿತಿಯು 21 ಜನ್ಮಗಳವರೆಗೆ ನಡೆಯುತ್ತದೆ. ಆದ್ದರಿಂದ ಒಬ್ಬ ತಂದೆಯದು ಬಲಿಹಾರಿಯೆಂದು ಗಾಯನವಿದೆ.
ಭಾರತವನ್ನು ಸ್ವರ್ಗವನ್ನಾಗಿ ಮಾಡುವವರು ಶಿವ ತಂದೆ ಆಗಿದ್ದಾರೆ. ಅವರು ಯಾವಾಗ ಬಂದರು ಎಂಬುದು
ಯಾರಿಗೂ ತಿಳಿದಿಲ್ಲ. ಅವರ ಚರಿತ್ರೆಯಂತೂ ಮೊಟ್ಟ ಮೊದಲು ಇರಬೇಕು. ಪರಮಪಿತ ಪರಮಾತ್ಮನಿಗೇ ಶಿವನೆಂದು
ಹೇಳಲಾಗುತ್ತದೆ.
ನೀವು
ತಿಳಿದುಕೊಂಡಿದ್ದೀರಿ, ದೇಹಾಭಿಮಾನದ ಕಾರಣವೇ ಅವನತಿಯಾಗುತ್ತದೆ. ಈ ರೀತಿಯಾದಾಗಲೇ ಮತ್ತೆ
ಉನ್ನತಿಯಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಉತ್ಥಾನ ಮತ್ತು ಪಥನ, ದಿನ ಮತ್ತು
ರಾತ್ರಿ, ಜ್ಞಾನ ಸೂರ್ಯ ಪ್ರಕಟ ಅಜ್ಞಾನ ಅಂಧಕಾರ ವಿನಾಶ. ಎಲ್ಲದಕ್ಕಿಂತ ಹೆಚ್ಚು ಅಜ್ಞಾನವು ಈ
ದೇಹಾಭಿಮಾನವಾಗಿದೆ. ಆತ್ಮದ ಬಗ್ಗೆ ಯಾರಿಗೂ ಗೊತ್ತಿಲ್ಲ ಆತ್ಮವೇ ಪರಮಾತ್ಮನೆಂದು ಹೇಳಿಬಡುತ್ತಾರೆ
ಅಂದಾಗ ಎಷ್ಟು ಪಾಪಾತ್ಮರಾಗಿ ಬಿಟ್ಟಿದ್ದಾರೆ! ಆದ್ದರಿಂದಲೇ ಪಥನವಾಗಿದೆ. 84 ಜನ್ಮಗಳನ್ನು
ತೆಗೆದುಕೊಂಡಿದ್ದೀರಿ, ಏಣಿಯನ್ನು ಕೆಳಗಿಳಿಯುತ್ತಾ ಬಂದಿದ್ದೀರಿ. ಈ ಆಟವು ಮಾಡಲ್ಪಟ್ಟಿದೆ.
ವಿಶ್ವದ ಈ ಚರಿತ್ರೆ-ಭೂಗೋಳವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ ಮತ್ತ್ಯಾರೂ
ತಿಳಿದುಕೊಂಡಿಲ್ಲ. ವಿಶ್ವದ ಅವನತಿ ಹೇಗಾಯಿತು? ವಿಜ್ಞಾನದಿಂದ ಬಹಳಷ್ಟು ಅನ್ವೇಷಣೆ ಆಗಿದೆಯೆಂದು
ಅವರು ತಿಳಿಯುತ್ತಾರೆ. ಆದರೆ ಪ್ರಪಂಚವು ಇನ್ನೂ ಪತಿತ, ನರಕವಾಗಿ ಬಿಟ್ಟಿದೆ. ಎಂಬುದನ್ನು
ತಿಳಿದುಕೊಳ್ಳುವುದಿಲ್ಲ. ದೇಹಾಭಿಮಾನವು ಬಹಳ ಇದೆ, ತಂದೆಯು ತಿಳಿಸುತ್ತಾರೆ - ನೀವೀಗ
ದೇಹೀ-ಅಭಿಮಾನಿಗಳಾಗಬೇಕಾಗಿದೆ. ಒಳ್ಳೊಳ್ಳೆಯ ಮಹಾರಥಿಗಳು ಅನೇಕರಿದ್ದಾರೆ, ಬಹಳ ಚೆನ್ನಾಗಿ
ಜ್ಞಾನವನ್ನು ತಿಳಿಸುತ್ತಾರೆ ಆದರೆ ದೇಹಾಭಿಮಾನವು ಕಳೆದಿಲ್ಲ. ದೇಹಾಭಿಮಾನದ ಕಾರಣ ಕೆಲವರಲ್ಲಿ
ಕ್ರೋಧದ ಅಂಶ, ಕೆಲವರಲ್ಲಿ ಮೋಹದ ಅಂಶ ಒಂದಲ್ಲ ಒಂದು ಇರುತ್ತದೆ. ಗುಣಗಳನ್ನು ಸುಧಾರಣೆ
ಮಾಡಿಕೊಳ್ಳಬೇಕಲ್ಲವೆ. ಬಹಳ-ಬಹಳ ಮಧುರರಾಗಬೇಕು ಆದ್ದರಿಂದಲೇ ಸತ್ಯಯುಗದಲ್ಲಿ ಹಸು-ಹುಲಿ ಒಂದೇ ಕಡೆ
ನೀರು ಕುಡಿಯುತ್ತವೆ ಎಂದು ಉದಾಹರಣೆ ಕೊಡುತ್ತಾರೆ. ಅಲ್ಲಿ ಇಂತಹ ದುಃಖ ಕೊಡುವ ಪ್ರಾಣಿಗಳು ಇರುವುದೇ
ಇಲ್ಲ. ಈ ಮಾತುಗಳನ್ನು ಕೆಲವರೇ ತಿಳಿದುಕೊಳ್ಳುತ್ತಾರೆ. ತಿಳಿದುಕೊಳ್ಳುವವರು ನಂಬರ್ವಾರ್ ಇದ್ದಾರೆ.
ಕರ್ಮ ಭೋಗವು ಕಳೆದು ಕರ್ಮಾತೀತ ಸ್ಥಿತಿಯಾಗುವುದು ಪರಿಶ್ರಮವಿದೆ. ಬಹಳ ದೇಹಾಭಿಮಾನದಲ್ಲಿ
ಬರುತ್ತಾರೆ, ನಮಗೆ ಈ ಮತವನ್ನು ಯಾರು ಕೊಡುತ್ತಾರೆ. ಶ್ರೀಮತವು ಶ್ರೀ ಕೃಷ್ಣನ ಮೂಲಕ ಹೇಗೆ
ಸಿಗುತ್ತದೆ ಎಂಬುದೇ ಅರ್ಥವಾಗುವುದಿಲ್ಲ. ಶಿವ ತಂದೆಯು ತಿಳಿಸುತ್ತಾರೆ - ನಾನು ಈ ಬ್ರಹ್ಮನಿಲ್ಲದೆ
ಶ್ರೀಮತವನ್ನು ಹೇಗೆ ಕೊಡಲಿ? ನನ್ನ ಶಾಶ್ವತ ರಥವು ಇವರಾಗಿದ್ದಾರೆ, ಅಂದಾಗ ದೇಹಾಭಿಮಾನದಲ್ಲಿ ಬಂದು
ಉಲ್ಟಾ-ಸುಲ್ಟಾ ಕಾರ್ಯಗಳನ್ನು ಮಾಡಿ ಸುಮ್ಮನೆ ತಮಗೆ ನಷ್ಟ ಮಾಡಿಕೊಳ್ಳಬೇಡಿ. ಹಾಗಿದ್ದರೆ
ಗತಿಯೇನಾಗುವುದು! ಬಹಳ ಕಡಿಮೆ ಪದವಿ ಪಡೆಯುತ್ತೀರಿ. ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆ
ಬಾಗುತ್ತಾರೆ. ಭಾರತದ ಚರಿತ್ರೆ-ಭೂಗೋಳ ಯಾವುದು ಪೂರ್ಣ ಇರಬೇಕೋ ಅದು ಇಲ್ಲವೆಂದು ಅನೇಕರು
ಹೇಳುತ್ತಾರೆ ಆಗ ಅವರಿಗೆ ತಿಳಿಸಬೇಕಾಗಿದೆ. ನಿಮ್ಮ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ ಆದರೆ
ದೇಹಿ-ಅಭಿಮಾನಿ ಸ್ಥಿತಿಯು ಬೇಕು. ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ.
ಈಗಂತು ಯಾರದೂ ಕರ್ಮಾತೀತ
ಸ್ಥಿತಿಯಾಗಿಲ್ಲ. ಇವರಿಗಂತೂ (ಬ್ರಹ್ಮಾ) ಬಹಳ ಜಂಜಾಟವಿದೆ. ಎಷ್ಟೊಂದು ಚಿಂತೆಯಿರುತ್ತದೆ. ಎಲ್ಲವೂ
ಡ್ರಾಮಾನುಸಾರ ಆಗುತ್ತದೆಯೆಂದು ಭಲೆ ತಿಳಿದುಕೊಳ್ಳುತ್ತಾರೆ. ಆದರೂ ಸಹ ತಿಳಿಸುವುದಕ್ಕಾಗಿ
ಯುಕ್ತಿಗಳನ್ನು ರಚಿಸಬೇಕಲ್ಲವೆ. ಆದ್ದರಿಂದ ಈ ತಂದೆಯು ಹೇಳುತ್ತಾರೆ - ನನಗಿಂತಲೂ ನೀವು ಹೆಚ್ಚು
ದೇಹಿ-ಅಭಿಮಾನಿಗಳಾಗಬಹುದು, ನಿಮಗೆ ಯಾವುದೇ ಹೊರೆಯಿಲ್ಲ. ತಂದೆಯ ಮೇಲಂತೂ ಬಹಳ ಹೊರೆಯಿದೆ, ಈ
ಪ್ರಜಾಪಿತ ಬ್ರಹ್ಮನೇ ಮುಖ್ಯಸ್ಥರಲ್ಲವೆ. ಆದರೆ ಇವರಲ್ಲಿ ಶಿವ ತಂದೆಯು ಕುಳಿತಿದ್ದಾರೆ ಎಂಬುದು
ಯಾರಿಗೂ ಗೊತ್ತಿಲ್ಲ, ನಿಮ್ಮಲ್ಲಿಯೂ ಸಹ ಕೆಲವರೇ ಈ ನಿಶ್ಚಯದಲ್ಲಿರುತ್ತಾರೆ. ಅಂದಮೇಲೆ ವಿಶ್ವದ ಈ
ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳಬೇಕಲ್ಲವೆ. ಭಾರತದಲ್ಲಿ ಸ್ವರ್ಗವು ಯಾವಾಗ ಇತ್ತು, ಮತ್ತೆ
ಎಲ್ಲಿ ಹೋಯಿತು? ಹೇಗೆ ಪಥನವಾಯಿತು? ಇದು ಯಾರಿಗೂ ತಿಳಿದಿಲ್ಲ. ಎಲ್ಲಿಯವರೆಗೆ ನೀವು
ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಯಾರಿಗೂ ಅರ್ಥವಾಗುವುದಿಲ್ಲ, ಆದ್ದರಿಂದ ತಂದೆಯು ಆದೇಶ
ನೀಡುತ್ತಾರೆ. ಶಾಲೆಗಳಲ್ಲಿಯೂ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಬೇಕು ಅವನತಿಯನ್ನು ಕುರಿತು
ಭಾಷಣ ಮಾಡಬೇಕು. ಭಾರತವು ವಜ್ರ ಸಮಾನವಾಗಿತ್ತು, ಅದು ಹೇಗೆ ಕವಡೆಯಂತೆ ಆಯಿತು? ಎಷ್ಟು ವರ್ಷಗಳು
ಹಿಡಿಸಿತು? ಎಂಬುದನ್ನು ನಾವು ತಿಳಿಸುತ್ತೇವೆ. ಹೀಗೆ ಬಿತ್ತಿ ಪತ್ರಗಳನ್ನು ವಿಮಾನಗಳಿಂದ ನೀವು
ಹಾಕಿಸಬಹುದು. ತಿಳಿಸುವವರು ಬಹಳ ಬುದ್ದಿವಂತರಿರಬೇಕು. ಸರ್ಕಾರವು ಒಪ್ಪಿದರೆ ಸರ್ಕಾರದ
ದೆಹಲಿಯಲ್ಲಿರುವ ವಿಜ್ಞಾನ ಭವನದಲ್ಲಿ ಎಲ್ಲರಿಗೆ ನಿಮಂತ್ರಣ ನೀಡಿ ಕರೆಸಬೇಕು. ಅದು
ಪತ್ರಿಕೆಗಳಲ್ಲಿಯೂ ಬರಲಿ. ಎಲ್ಲರಿಗೆ ಕಾರ್ಡುಗಳನ್ನು ಕಳುಹಿಸಿ - ನಾವು ತಮಗೆ ಇಡೀ ವಿಶ್ವದ
ಚರಿತ್ರೆ-ಭೂಗೋಳವನ್ನು ಆದಿಯಿಂದ ಅಂತ್ಯದವರೆಗೆ ತಿಳಿಸುತ್ತೇವೆ. ಅವರು ತಾವಾಗಿಯೇ ಬರುತ್ತಾರೆ,
ಹೋಗುತ್ತಾರೆ ಹಣದ ಮಾತೇ ಇಲ್ಲ. ತಿಳಿದುಕೊಳ್ಳಿ - ನಮಗೆ ಯಾರಾದರೂ ಸಿಕ್ಕಿದರೆ ಉಡುಗೊರೆ ಕೊಟ್ಟರೆ
ನಾವು ತೆಗೆದುಕೊಳ್ಳುವುದಿಲ್ಲ. ಸರ್ವಿಸ್ ಮಾಡುವುದಕ್ಕಾಗಿ ಅದನ್ನು ಉಪಯೋಗಿಸುತ್ತೇವೆ ಬಾಕಿ ನಾವು
ತೆಗೆದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮಿಂದ ದಾನವನ್ನು ತೆಗೆದುಕೊಂಡು ಏನು
ಮಾಡಲಿ ಏಕೆಂದರೆ ನಾನು ಮತ್ತೆ ಅದಕ್ಕೆ ತುಂಬಿ ಕೊಡಬೇಕಾಗುತ್ತದೆ. ನಾನು ಪಕ್ಕಾ
ಅಕ್ಕಸಾಲಿಗನಾಗಿದ್ದೇನೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ದೇಹಾಭಿಮಾನದಲ್ಲಿ ಬಂದು ಯಾವುದೇ ಉಲ್ಟಾ-ಸುಲ್ಟಾ ಕಾರ್ಯ ಮಾಡಬಾರದು. ದೇಹಿ ಅಭಿಮಾನಿಗಳಾಗುವ
ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳುತ್ತಾ ಇರಬೇಕಾಗಿದೆ.
2. ಬಹಳ-ಬಹಳ ಮಧುರ
ಶೀತಲರಾಗಬೇಕಾಗಿದೆ. ಒಳಗೆ ಕ್ರೋಧ, ಮೋಹದ ಯಾವ ಭೂತವಿದೆಯೋ ಅದನ್ನು ತೆಗೆದು ಹಾಕಬೇಕಾಗಿದೆ.
ವರದಾನ:
ಗೌರವ ಕೊಡುವುದರ
ರೆಕಾರ್ಡ್ನ್ನು ಸರಿಯಾಗಿ ಇಟ್ಟುಕೊಂಡು, ಖುಷಿಯ ಮಹಾದಾನ ಮಾಡುವಂತಹ ಪುಣ್ಯ ಆತ್ಮ ಭವ.
ವರ್ತಮಾನ ಸಮಯದಲ್ಲಿ
ನಾಲ್ಕೂ ಕಡೆಗಳಲ್ಲಿ ಗೌರವ ಕೊಡುವ ರೆಕಾರ್ಡ್ನ್ನು ಸರಿಪಡಿಸಿಕೊಳ್ಳುವ ಅವಶ್ಯಕತೆಯಿದೆ. ನಂತರದಲ್ಲಿ
ಇದೇ ಹಾಡು ನಾಲ್ಕೂ ಕಡೆಗಳಲ್ಲಿ ಮೊಳಗುವುದು. ರಿಗಾರ್ಡ್ (ಗೌರವ) ಕೊಡುವುದು ಮತ್ತು
ತೆಗೆದುಕೊಳ್ಳುವುದು, ಕಿರಿಯರಿಗೂ ಗೌರವ ಕೊಡಿ, ಹಿರಿಯರಿಗೂ ಗೌರವ ಕೊಡಿ. ಈಗ ಈ ರಿಗಾರ್ಡ್ನ
ರೆಕಾರ್ಡ್ ಹೊರಬರಬೇಕಾಗಿದೆ. ಹೀಗಾದಾಗ ಖುಷಿಯ ದಾನ ಮಾಡುವಂತಹ ಮಹಾದಾನಿ ಪುಣ್ಯಾತ್ಮರು
ಆಗಿಬಿಡುತ್ತೀರಿ. ಯಾರಿಗೇ ಆಗಲಿ ಗೌರವ ಕೊಟ್ಟು ಖುಷಿ ಪಡಿಸುವುದು - ಇದು ಅತಿ ಶ್ರೇಷ್ಠವಾದ
ಪುಣ್ಯದ ಕಾರ್ಯವಾಗಿದೆ, ಸೇವೆಯಾಗಿದೆ.
ಸ್ಲೋಗನ್:
ಪ್ರತೀ
ಗಳಿಗೆಯನ್ನು ಅಂತಿಮ ಗಳಿಗೆಯೆಂದು ತಿಳಿದುಕೊಂಡು ನಡೆಯುತ್ತೀರೆಂದರೆ ಎವರೆಡಿ ಆಗಿರುತ್ತೀರಿ.
ಮಾತೇಶ್ವರೀಜಿಯವರ
ಅಮೂಲ್ಯ ಮಹಾವಾಕ್ಯ:
1) ತಮೋಗುಣಿ ಮಾಯೆಯ
ವಿಸ್ತಾರ:
ಸತೋಗುಣಿ, ರಜೋಗುಣಿ,
ತಮೋಗುಣಿ ಈ ಮೂರು ಶಬ್ಧವನ್ನು ಹೇಳುತ್ತೇವೆ, ಇದನ್ನು ಯಥಾರ್ಥವಾಗಿ ಅರಿತುಕೊಳ್ಳುವುದು ಅವಶ್ಯಕ.
ಮನುಷ್ಯರು ತಿಳಿಯುತ್ತಾರೆ - ಈ ಮೂರು ಗುಣಗಳು ಒಟ್ಟಿಗೆ ನಡೆಯುತ್ತಿರುತ್ತದೆ, ಆದರೆ ವಿವೇಕ ಏನು
ಹೇಳುತ್ತದೆ - ಏನು ಈ ಮೂರೂ ಗುಣಗಳು ಒಟ್ಟೊಟ್ಟಿಗೆ ಬರುತ್ತವೆಯೋ ಅಥವಾ ಮೂರೂ ಗುಣಗಳ ಪಾತ್ರ
ಬೇರೆ-ಬೇರೆ ಯುಗಗಳಲ್ಲಿ ಇರುವುದಾ? ವಿವೇಕವಂತೂ ಹೀಗೆಯೆ ಹೇಳುತ್ತದೆ ಈ ಮೂರೂ ಗುಣಗಳು ಒಟ್ಟೊಟ್ಟಿಗೆ
ನಡೆಯುವುದಿಲ್ಲ ಯಾವಾಗ ಸತ್ಯಯುಗವಿರುತ್ತದೆ ಆಗ ಸತೋ ಗುಣವಿರುತ್ತದೆ, ದ್ವಾಪರ ಯುಗದಲ್ಲಿ ರಜೋ
ಗುಣವಿರುತ್ತದೆ ಮತ್ತು ಕಲಿಯುಗದಲ್ಲಿ ತಮೋ ಗುಣವಿರುತ್ತದೆ. ಯಾವಾಗ ಸತೋ ಇರುತ್ತದೆ ಆಗ ತಮೋ, ರಜೋ
ಇರುವುದಿಲ್ಲ. ಯಾವಾಗ ರಜೋ ಇರುತ್ತದೆ ಆಗ ಸತೋ ಗುಣ ಇಲ್ಲ. ಈ ಮನುಷ್ಯರು ಮೂರೂ ಗುಣಗಳು
ಒಟ್ಟೊಟ್ಟಿಗೆ ನಡೆಯುತ್ತಾ ಬಂದಿದೆ ಎಂದು ಹೀಗೆ ಅರ್ಥ ಮಾಡಿಕೊಂಡು ಕುಳಿತಿದ್ದಾರೆ. ಈ ಮಾತು
ಹೇಳುವುದು ಸಂಪೂರ್ಣ ತಪ್ಪಾಗಿದೆ, ಅವರು ತಿಳಿಯುತ್ತಾರೆ ಯಾವಾಗ ಮನುಷ್ಯ ಸತ್ಯ ಹೇಳುತ್ತಾನೆ, ಪಾಪ
ಕರ್ಮ ಮಾಡಲ್ಲ ಆಗ ಅವನು ಸತೋಗುಣಿಯಾಗುತ್ತಾನೆ. ಆದರೆ ವಿವೇಕ ಹೇಳುತ್ತದೆ ಯಾವಾಗ ನಾವು ಸತೋಗುಣ
ಎಂದು ಹೇಳುತ್ತೇವೆ, ಅಂದಾಗ ಇದರ ಅರ್ಥ ಆಗಿದೆ ಸಂಪೂರ್ಣ ಸುಖ ಅಂದಾಗ ಇಡೀ ಸೃಷ್ಟಿ
ಸತೋಗುಣಿಯಾಗಿರುತ್ತದೆ. ಉಳಿದಂತೆ ಹೀಗೆ ಹೇಳಲಾಗುವುದಿಲ್ಲ ಯಾರು ಸತ್ಯ ಹೇಳುತ್ತಾರೆ ಅವರು ಸತೋಗುಣಿ
ಮತ್ತು ಯಾರು ಸುಳ್ಳನ್ನು ಹೇಳುತ್ತಾರೆ ಅವರು ಕಲಿಯುಗಿ ತಮೋಗುಣಿಯಾಗಿದ್ದಾರೆ, ಪ್ರಪಂಚ ಹೀಗೆ
ನಡೆಯುತ್ತಾ ಬಂದಿದೆ. ಈಗ ಯಾವಾಗ ನಾವು ಸತ್ಯಯುಗ ಎಂದು ಹೇಳುತ್ತೇವೆ. ಆಗ ಇದರ ಅರ್ಥವಾಗಿದೆ ಇಡೀ
ಸೃಷ್ಟಿಯಲ್ಲಿ ಸತೋಗುಣ ಸತೋಪ್ರಧಾನ ಇರಬೇಕು. ಹಾಂ! ಹಿಂದೆ ಒಂದು ಸಮಯದಲ್ಲಿ ಹೀಗೆ ಸತ್ಯಯುಗ ಇತ್ತು
ಎಲ್ಲಿ ಇಡೀ ಸಂಸಾರ ಸತೋಗುಣಿಯಾಗಿತ್ತು. ಈಗ ಆ ಸತ್ಯಯುಗ ಇಲ್ಲ, ಈಗಂತೂ ಕಲಿಯುಗಿ ಪ್ರಪಂಚವಿದೆ ಇಡೀ
ಸೃಷ್ಟಿಯ ಮೇಲೆ ತಮೋಪ್ರಧಾನತೆಯ ರಾಜ್ಯವಿದೆ. ಈ ತಮೋಗುಣಿ ಸಮಯದಲ್ಲಿ ಮತ್ತೆ ಸತೋಗುಣಿ ಎಲ್ಲಿಂದ
ಬಂತು! ಈಗ ಘೋರ ಅಂಧಕಾರವಿದೆ ಯಾವುದಕ್ಕೆ ಬ್ರಹ್ಮನ ರಾತ್ರಿ ಎಂದು ಹೇಳಲಾಗುವುದು. ಬ್ರಹ್ಮನ
ಹಗಲಾಗಿದೆ ಸತ್ಯಯುಗ ಬ್ರಹ್ಮನ ರಾತ್ರಿ ಕಲಿಯುಗವಾಗಿದೆ, ಆದ್ದರಿಂದ ಎರಡನ್ನೂ ಸೇರಿಸಲು
ಸಾಧ್ಯವಿಲ್ಲ.
2) ಕಲಿಯುಗೀ ಅಸಾರ
ಸಂಸಾರದಿಂದ ಸತ್ಯಯುಗಿ ಸಾರ ಯುಕ್ತ ಪ್ರಪಂಚಕ್ಕೆ ಕರೆದೊಯ್ಯುವುದು, ಒಬ್ಬ ಪರಮಾತ್ಮನದೇ
ಕರ್ತವ್ಯವಾಗಿದೆ:
ಈ ಕಲಿಯುಗಿ ಸಂಸಾರವನ್ನು
ನಿಸ್ಸಾರ, ಅಸಾರ ಸಂಸಾರವೆಂದು ಏಕೆ ಹೇಳುತ್ತಾರೆ? ಏಕೆಂದರೆ ಈ ಪ್ರಪಂಚದಲ್ಲಿ ಯಾವುದೇ ಸಾರವಿಲ್ಲ
ಅಂದರೆ ಯಾವುದೇ ವಸ್ತುವಿನಲ್ಲಿ ಆ ಶಕ್ತಿ ಉಳಿದಿಲ್ಲ ಅರ್ಥಾತ್ ಸುಖ, ಶಾಂತಿ, ಪವಿತ್ರತೆ ಇಲ್ಲ,
ಯಾವುದು ಇದೇ ಸೃಷ್ಟಿಯಲ್ಲಿ ಒಂದು ಸಮಯದಲ್ಲಿ ಸುಖ, ಶಾಂತಿ, ಪವಿತ್ರತೆ ಇತ್ತು. ಈಗ ಆ ಶಕ್ತಿ ಇಲ್ಲ
ಏಕೆಂದರೆ ಈ ಸೃಷ್ಟಿಯಲ್ಲಿ 5 ಭೂತಗಳ ಪ್ರವೇಶತೆಯಾಗಿದೆ. ಇದರಿಂದಲೇ ಈ ಸೃಷ್ಟಿಯನ್ನು ಭಯದ ಸಾಗರ
ಅಥವಾ ಕರ್ಮ ಬಂಧನದ ಸಾಗರ ಎಂದು ಹೇಳುತ್ತಾರೆ ಇದರಿಂದಲೇ ಮನುಷ್ಯ ದುಃಖಿಯಾಗಿ ಪರಮಾತ್ಮನನ್ನು
ಕರೆಯುತ್ತಿದ್ದಾನೆ, ಪರಮಾತ್ಮ ನಮ್ಮನ್ನು ಭವ ಸಾಗರದಿಂದ ಪಾರು ಮಾಡಿ ಎಂದು ಇದರಿಂದ
ಸಿದ್ಧವಾಗುತ್ತದೆ. ಖಂಡಿತ ಯಾವುದೋ ಅಭಯ ಅರ್ಥಾತ್ ನಿರ್ಭಯತೆಯ ಜಗತ್ತು ಇದೆ, ಯಾವುದರಲ್ಲಿ ಹೋಗಲು
ಇಚ್ಚೆ ಪಡುತ್ತಾರೆ. ಆದ್ದರಿಂದ ಈ ಸಂಸಾರವನ್ನು ಪಾಪದ ಸಾಗರ ಎಂದು ಹೇಳುತ್ತಾರೆ. ಅದರಿಂದ ಪಾರು
ಮಾಡಿ ಪುಣ್ಯ ಆತ್ಮಗಳ ಪ್ರಪಂಚಕ್ಕೆ ಹೋಗಲು ಇಚ್ಛೆ ಪಡುತ್ತಾರೆ. ಅಂದಾಗ ಎರಡು ಪ್ರಪಂಚಗಳಿವೆ, ಒಂದು
ಸತ್ಯಯುಗಿ ಸಾರಯುಕ್ತ ಪ್ರಪಂಚ. ಎರಡನೆಯದಾಗಿದೆ ಕಲಿಯುಗಿ ನಿಸ್ಸಾರ, ಅಸಾರ ಪ್ರಪಂಚ. ಎರಡೂ
ಪ್ರಪಂಚಗಳು ಇದೇ ಸೃಷ್ಟಿಯಲ್ಲಿ ಇರುತ್ತದೆ. ಈಗ ಪರಮಾತ್ಮ ಆ ಸಾರಯುಕ್ತ ಪ್ರಪಂಚದ ಸ್ಥಾಪನೆ
ಮಾಡುತ್ತಿದ್ದಾರೆ. ಒಳ್ಳೆಯದು. ಓಂ ಶಾಂತಿ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”
ಹೇಗೆ ಜ್ಞಾನದ ವಿಷಯವಿದೆ,
ಹಾಗೆಯೇ ಸೇವೆಯದ್ದು ವಿಷಯವಿದೆ, ಯಾರು ಇದರಲ್ಲಿ ನಂಬಿಗಸ್ತರಾಗಿದ್ದಾರೆ ಅವರೇ ನಂಬರ್
ತೆಗೆದುಕೊಳ್ಳಬಹುದು. ಬೆಳಗ್ಗೆಯಿಂದ ರಾತ್ರಿಯವರೆಗೆ ತಮ್ಮ ಕಾರ್ಯಕ್ರಮಗಳನ್ನು ನಿಗಧಿಗೊಳಿಸಿ,
ಪ್ರತಿನಿತ್ಯದ ಡೈರಿ ಮಾಡಿ, ಏಕೆಂದರೆ ಜವಾಬ್ದಾರಿಯುಳ್ಳ ಆತ್ಮರಾಗಿದ್ದೀರಿ, ನಿಯಮದ ಆತ್ಮಗಳಲ್ಲ,
ವಿಶ್ವ ಕಲ್ಯಾಣಕಾರಿ ಆತ್ಮರಾಗಿದ್ದೀರಿ. ಯಾರು ಎಷ್ಟು ದೊಡ್ಡ ಆತ್ಮರಿದ್ದಾರೆ, ಅವರದ್ದು ದಿನಚರ್ಯ
ಸೆಟ್ ಆಗಿರುತ್ತದೆ.