10.04.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಭಾರತವನ್ನು ರಕ್ಷಣೆ ಮಾಡಲು ತಂದೆಯು ಬಂದಿದ್ದಾರೆ, ನೀವು ಮಕ್ಕಳು ಈ ಸಮಯದಲ್ಲಿ ತಂದೆಗೆ ಸಹಯೋಗಿಗಳಾಗುತ್ತೀರಿ, ಭಾರತವೇ ಪ್ರಾಚೀನ ಖಂಡವಾಗಿದೆ”

ಪ್ರಶ್ನೆ:
ಶ್ರೇಷ್ಠ ಗುರಿಯಲ್ಲಿ ಅಡಚಣೆ ಮಾಡುವಂತಹ ಚಿಕ್ಕ-ಚಿಕ್ಕ ಮಾತುಗಳು ಯಾವುವು?

ಉತ್ತರ:
ಒಂದುವೇಳೆ ಯಾವುದೇ ಆಸಕ್ತಿಯಿದೆ, ಅನಾಸಕ್ತ ವೃತ್ತಿಯಿಲ್ಲ. ಒಳ್ಳೆಯದನ್ನು ತೊಡುವುದರಲ್ಲಿ -ತಿನ್ನುವುದರಲ್ಲಿ ಬುದ್ಧಿಯು ಅಲೆದಾಡುತ್ತಿರುತ್ತದೆ.... ಎಂದರೆ ಈ ಮಾತುಗಳು ಶ್ರೇಷ್ಠ ಗುರಿಯನ್ನು ತಲುಪುವುದರಲ್ಲಿ ಅಡಚಣೆ ಮಾಡುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ವನವಾಸದಲ್ಲಿರಿ. ನೀವಂತೂ ಎಲ್ಲವನ್ನೂ ಮರೆಯಬೇಕಾಗಿದೆ. ಈ ಶರೀರವೂ ಸಹ ನೆನಪಿರಬಾರದು.

ಓಂ ಶಾಂತಿ.
ಮಕ್ಕಳಿಗೆ ಇದನ್ನು ತಿಳಿಸಲಾಗಿದೆ - ಈ ಭಾರತವೇ ಅವಿನಾಶಿ ಖಂಡವಾಗಿದೆ ಮತ್ತು ಇದರ ಮೂಲ ಹೆಸರಾಗಿದೆ – ಭಾರತ ಖಂಡ. ಹಿಂದೂಸ್ತಾನವೆಂಬ ಹೆಸರು ನಂತರದಲ್ಲಿ ಬಂದಿದೆ, ಭಾರತಕ್ಕೆ ಆಧ್ಯಾತ್ಮಿಕ ಖಂಡವೆಂದೂ ಹೇಳಲಾಗುತ್ತದೆ. ಇದು ಪ್ರಾಚೀನ ಖಂಡವಾಗಿದೆ, ಹೊಸ ಪ್ರಪಂಚದಲ್ಲಿ ಭಾರತ ಖಂಡವಿದ್ದಾಗ ಮತ್ತ್ಯಾವುದೇ ಖಂಡವಿರಲಿಲ್ಲ, ಮುಖ್ಯವಾದವರು ಇಸ್ಲಾಮಿಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರು. ಈಗಂತೂ ಬಹಳಷ್ಟು ಖಂಡಗಳಾಗಿ ಬಿಟ್ಟಿವೆ ಆದರೆ ಭಾರತವೇ ಅವಿನಾಶಿ ಖಂಡವಾಗಿದೆ. ಅದಕ್ಕೆ ಸ್ವರ್ಗ, ಹೆವೆನ್ ಎಂದು ಹೇಳುತ್ತಾರೆ. ಹೊಸ ಪ್ರಪಂಚದಲ್ಲಿ ಹೊಸ ಖಂಡವು ಭಾರತವೊಂದೇ ಆಗಿದೆ, ಹೊಸ ಪ್ರಪಂಚವನ್ನು ರಚಿಸುವವರು ಪರಮಪಿತ ಪರಮಾತ್ಮ, ಸ್ವರ್ಗದ ರಚಯಿತನಾಗಿದ್ದಾರೆ. ಭಾರತವಾಸಿಗಳಿಗೆ ತಿಳಿದಿದೆ - ಈ ಭಾರತವು ಅವಿನಾಶಿ ಖಂಡವಾಗಿದೆ. ಭಾರತವೇ ಸ್ವರ್ಗವಾಗಿತ್ತು, ಯಾರಾದರೂ ಮರಣ ಹೊಂದಿದರೆ ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ. ಸ್ವರ್ಗವು ಎಲ್ಲಿಯೋ ಮೇಲಿರಬೇಕೆಂದು ತಿಳಿಯುತ್ತಾರೆ. ದಿಲ್ವಾಡಾ ಮಂದಿರದಲ್ಲಿ ವೈಕುಂಠದ ಚಿತ್ರವನ್ನು ಮೇಲೆ ತೋರಿಸಿದ್ದಾರೆ. ಭಾರತವೇ ಸ್ವರ್ಗವಾಗಿತ್ತು, ಈಗ ಇಲ್ಲ. ಈಗಂತೂ ನರಕವಾಗಿದೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಅಂದಮೇಲೆ ಇದು ಅಜ್ಞಾನವಾಯಿತಲ್ಲವೆ. ಜ್ಞಾನ ಮತ್ತು ಅಜ್ಞಾನ, ಎರಡು ಮಾತುಗಳಿರುತ್ತವೆ. ಜ್ಞಾನಕ್ಕೆ ದಿನ, ಅಜ್ಞಾನಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಘೋರ ಪ್ರಕಾಶ ಮತ್ತು ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಪ್ರಕಾಶವೆಂದರೆ ಉತ್ಥಾನ, ಅಂಧಕಾರವೆಂದರೆ ಪಥನ. ಮನುಷ್ಯರು ಸೂರ್ಯಾಸ್ತವನ್ನು ನೋಡಲು ಸನ್ಸೆಟ್ಗೆ ಹೋಗುತ್ತಾರೆ, ಅದಂತೂ ಹದ್ದಿನ ಮಾತಾಗಿದೆ. ಇಲ್ಲಿ ಬಹ್ಮಾನ ದಿನ, ಬ್ರಹ್ಮಾನ ರಾತ್ರಿಯೆಂದು ಹೇಳಲಾಗುತ್ತದೆ. ಬ್ರಹ್ಮಾನು ಪ್ರಜಾಪಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಪ್ರಜೆಗಳಿಗೆ ಪಿತನಾದರು. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು, ಈ ಮಾತುಗಳನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದು ಹೊಸ ಪ್ರಪಂಚಕ್ಕಾಗಿ ಹೊಸ ಜ್ಞಾನವಾಗಿದೆ, ಸ್ವರ್ಗಕ್ಕಾಗಿ ಸ್ವರ್ಗದ ರಚಯಿತ ತಂದೆಯ ಜ್ಞಾನವು ಬೇಕು. ತಂದೆಯು ಜ್ಞಾನಸಾಗರನೆಂದೂ ಹಾಡುತ್ತಾರೆ ಅಂದಮೇಲೆ ಅವರು ಶಿಕ್ಷಕರಾದರು, ಆ ತಂದೆಗೇ ಪತಿತ-ಪಾವನ ಎಂದು ಹೇಳಲಾಗುತ್ತದೆ, ಮತ್ತ್ಯಾರಿಗೂ ಪತಿತ-ಪಾವನರೆಂದು ಹೇಳಲು ಸಾಧ್ಯವಿಲ್ಲ. ಶ್ರೀ ಕೃಷ್ಣನಿಗೂ ಹೇಳುವಂತಿಲ್ಲ. ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ, ಶ್ರೀ ಕೃಷ್ಣನು ಎಲ್ಲರಿಗೆ ತಂದೆಯಲ್ಲ. ಶ್ರೀ ಕೃಷ್ಣನು ಯಾವಾಗ ಬೆಳೆದು ದೊಡ್ಡವನಾಗಿ ವಿವಾಹವಾಗುವುದೋ ಆಗ ಒಬ್ಬರು ಅಥವಾ ಇಬ್ಬರು ಮಕ್ಕಳಿಗೆ ತಂದೆಯಾಗುವರು. ರಾಧೆ-ಕೃಷ್ಣರನ್ನು ರಾಜಕುಮಾರ-ರಾಜಕುಮಾರಿಯೆಂದು ಹೇಳಲಾಗುತ್ತದೆ. ಅವರಿಗೆ ನಂತರ ಸ್ವಯಂವರವೂ ಆಗಿರಬೇಕು. ವಿವಾಹದ ನಂತರವೇ ತಂದೆ-ತಾಯಿಯಾಗುತ್ತಾರೆ. ಅವರಿಗೆಂದೂ ವಿಶ್ವ ಪಿತನೆಂದು ಹೇಳಲು ಸಾಧ್ಯವಿಲ್ಲ. ಕೇವಲ ಒಬ್ಬ ನಿರಾಕಾರ ತಂದೆಗೇ ವಿಶ್ವ ಪಿತನೆಂದು ಹೇಳಲಾಗುತ್ತದೆ. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಶಿವ ತಂದೆಗೆ ಹೇಳಲು ಸಾಧ್ಯವಿಲ್ಲ. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಪ್ರಜಾಪಿತ ಬ್ರಹ್ಮಾನಾಗಿದ್ದಾರೆ, ಅವರಿಂದ ವಂಶಾವಳಿಯಾಗುತ್ತದೆ. ಶಿವ ತಂದೆಯು ನಿರಾಕಾರ ಪರಮಾತ್ಮನಾಗಿದ್ದಾರೆ, ಅವರು ನಿರಾಕಾರ ಆತ್ಮರ ತಂದೆಯಾಗಿದ್ದಾರೆ. ನಿರಾಕಾರಿ ಆತ್ಮರು ಇಲ್ಲಿ ಶರೀರದಲ್ಲಿದ್ದಾಗ ಭಕ್ತಿ ಮಾರ್ಗದಲ್ಲಿ ತಂದೆಯನ್ನು ಕರೆಯುತ್ತಾರೆ, ಇವೆಲ್ಲಾ ಹೊಸ ಮಾತುಗಳನ್ನು ನೀವು ಹೇಳುತ್ತೀರಿ. ಯಥಾರ್ಥ ರೀತಿಯಿಂದ ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸನ್ಮುಖದಲ್ಲಿ ಕುಳಿತು ನೀವು ಮಕ್ಕಳಿಗೆ ತಿಳಿಸುತ್ತೇನೆ, ನಂತರ ಈ ಜ್ಞಾನವೆಲ್ಲವೂ ಪ್ರಾಯಲೋಪವಾಗಿ ಬಿಡುತ್ತದೆ. ತಂದೆಯು ಬಂದಾಗಲೇ ಯಥಾರ್ಥ ಜ್ಞಾನವನ್ನು ತಿಳಿಸುವರು. ಮಕ್ಕಳಿಗೇ ಸನ್ಮುಖದಲ್ಲಿ ತಿಳಿಸಿ ಆಸ್ತಿಯನ್ನು ಕೊಡುತ್ತಾರೆ ನಂತರ ಶಾಸ್ತ್ರಗಳು ರಚಿಸಲ್ಪಡುತ್ತವೆ, ಅವೂ ಸಹ ಯಥಾರ್ಥವಾಗಿ ರಚಿಸಲ್ಪಡುವುದಿಲ್ಲ ಏಕೆಂದರೆ ಸತ್ಯದ ಪ್ರಪಂಚವೇ ಸಮಾಪ್ತಿಯಾಗಿ ಅಸತ್ಯ ಖಂಡವಾಗಿ ಬಿಡುತ್ತದೆ ಅಂದಮೇಲೆ ಅಸತ್ಯ ವಸ್ತುಗಳೇ ಇರುವುದು ಏಕೆಂದರೆ ಇಳಿಯುವ ಕಲೆಯಾಗುತ್ತದೆ. ಸತ್ಯದಿಂದ ಏರುವ ಕಲೆಯಾಗಿದೆ. ಭಕ್ತಿಯು ರಾತ್ರಿಯಾಗಿದೆ, ಅಂಧಕಾರದಲ್ಲಿ ಮೋಸ ಹೋಗುತ್ತಿರುತ್ತಾರೆ. ತಲೆ ಬಾಗುತ್ತಾ ಇರುತ್ತಾರೆ, ಇಂತಹ ಘೋರ ಅಂಧಕಾರವಿದೆ. ಮನುಷ್ಯರಿಗೆ ಏನೂ ಗೊತ್ತಾಗುವುದೇ ಇಲ್ಲ, ಅಲ್ಲಿ-ಇಲ್ಲಿ ಅಲೆಯುತ್ತಿರುತ್ತಾರೆ. ಸ್ಥೂಲ ಸೂರ್ಯನಿಗೂ ಉದಯ ಮತ್ತು ಹಸ್ತವಾಗುತ್ತದೆ. ಅದನ್ನು ಮಕ್ಕಳು ಹೋಗಿ ನೋಡುತ್ತಾರೆ. ಈಗಂತೂ ನೀವು ಮಕ್ಕಳು ಜ್ಞಾನ ಸೂರ್ಯನ ಉದಯವನ್ನು ನೋಡಬೇಕಾಗಿದೆ. ಭಾರತದ ಉತ್ಥಾನ ಮತ್ತು ಪಥನ, ಭಾರತವು ಸೂರ್ಯನು ಮುಳುಗಿದಂತೆ ಮುಳುಗಿ ಹೋಗುತ್ತದೆ. ಸತ್ಯ ನಾರಾಯಣನ ಕಥೆಯಲ್ಲಿ ಇದನ್ನು ತೋರಿಸುತ್ತಾರೆ - ಭಾರತದ ದೋಣಿಯು ಕೆಳಗಡೆ ಹೊರಟು ಹೋಗುತ್ತದೆ ಮತ್ತು ತಂದೆಯು ಬಂದು ಅದನ್ನು ರಕ್ಷಣೆ ಮಾಡುತ್ತಾರೆ. ನೀವು ಈ ಭಾರತವನ್ನು ಪುನಃ ರಕ್ಷಣೆ ಮಾಡುತ್ತೀರಿ, ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ನೀವು ನಿಮಂತ್ರಣ ಕೊಡುತ್ತೀರಿ, ನವ ನಿರ್ಮಾಣ ಪ್ರದರ್ಶನಿ ಎಂಬ ಹೆಸರು ಸರಿಯಾಗಿದೆ. ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ - ಅದರ ಪ್ರದರ್ಶನಿಯಾಗಿದೆ. ಹೀಗೆ ಚಿತ್ರಗಳ ಮೂಲಕ ತಿಳುವಳಿಕೆ ನೀಡಲಾಗುತ್ತದೆ ಆದ್ದರಿಂದ ಅದೇ ಹೆಸರು ನಡೆದುಬಂದರೆ ಒಳ್ಳೆಯದು. ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ ಹಾಗೂ ಹೇಗೆ ಉತ್ಥಾನವಾಗುತ್ತದೆ ಎಂಬುದನ್ನು ನೀವು ತೋರಿಸುತ್ತೀರಿ. ಅವಶ್ಯವಾಗಿ ಹಳೆಯ ಪ್ರಪಂಚವು ಅವನತಿಯಾಗುತ್ತದೆ ಆದ್ದರಿಂದಲೇ ಹೇಗೆ ಉನ್ನತಿಯಾಗುತ್ತದೆ ಎಂಬುದನ್ನು ತೋರಿಸುತ್ತೇವೆ. ರಾಜ್ಯವನ್ನು ಪಡೆಯುವುದು ಮತ್ತು ಪಡೆದುಕೊಳ್ಳುವುದು - ಇದೂ ಸಹ ಒಂದು ಕಥೆಯಾಗಿದೆ. 5000 ವರ್ಷಗಳ ಮೊದಲು ಏನಿತ್ತು? ಸೂರ್ಯವಂಶಿಯರ ರಾಜ್ಯವಿತ್ತು ಮತ್ತೆ ಚಂದ್ರವಂಶಿಯರ ರಾಜ್ಯವು ಸ್ಥಾಪನೆಯಾಯಿತೆಂದು ಹೇಳುತ್ತಾರೆ. ಅವರು ಒಬ್ಬರು ಇನ್ನೊಬ್ಬರಿಂದ ರಾಜ್ಯವನ್ನು ತೆಗೆದುಕೊಳ್ಳುತ್ತಾರೆ. ಇಂತಹವರು ರಾಜ್ಯ ಪಡೆದರು ಎಂದು ತೋರಿಸುತ್ತಾರೆ. ಅವರು ಏಣಿಯ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ - ನೀವು ಸತ್ಯಯುಗದಿಂದ ತ್ರೇತಾಯುಗಕ್ಕೆ ಬಂದಿರಿ, ಏಣಿಯನ್ನು ಇಳಿಯುತ್ತಾ ಬಂದಿರಿ. ಇದು 84 ಜನ್ಮಗಳ ಏಣಿಯಾಗಿದೆ. ಏಣಿಯನ್ನು ಇಳಿಯಲಾಗುತ್ತದೆ ಮತ್ತೆ ಹತ್ತಲಾಗುತ್ತದೆ. ಅವನತಿಯ ರಹಸ್ಯವನ್ನೂ ತಿಳಿಸಬೇಕಾಗಿದೆ. ಭಾರತದ ಅವನತಿಯು ಎಷ್ಟು ಸಮಯ ಮತ್ತು ಉನ್ನತಿ ಎಷ್ಟು ಸಮಯ? ಭಾರತವಾಸಿಗಳ ಉತ್ಥಾನ ಹಾಗೂ ಪಥನ. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ - ಮನುಷ್ಯರನ್ನು ಈ ಕಾತುರತೆಯಲ್ಲಿ ಹೇಗೆ ತರುವುದು ಎಂದು. ಅವರಿಗೆ ನಿಮಂತ್ರಣವನ್ನೂ ಕೊಡಬೇಕಾಗಿದೆ - ಸಹೋದರ-ಸಹೋದರಿಯರೇ ಬಂದು ತಿಳಿದುಕೊಳ್ಳಿ. ಮೊದಲು ತಂದೆಯ ಮಹಿಮೆಯನ್ನು ತಿಳಿಸಬೇಕಾಗಿದೆ. ಶಿವ ತಂದೆಯ ಮಹಿಮೆಯ ಒಂದು ಪಲಕವಿರಲಿ. ಪತಿತ-ಪಾವನ, ಜ್ಞಾನ ಸಾಗರ, ಪವಿತ್ರತೆ-ಸುಖ,ಶಾಂತಿಯ ಸಾಗರ, ಸಂಪತ್ತಿನ ಸಾಗರ, ಸರ್ವರ ಸದ್ಗತಿದಾತ, ಜಗತ್ಪಿತ, ಜಗತ್ಶಿಕ್ಷಕ, ಜಗದ್ಗುರು ಶಿವ ತಂದೆಯಿಂದ ಬಂದು ತಮ್ಮ ಸೂರ್ಯವಂಶಿ-ಚಂದ್ರವಂಶಿ ಆಸ್ತಿಯನ್ನು ತೆಗೆದುಕೊಳ್ಳಿ ಎಂಬ ಬರವಣಿಗೆಯಿದ್ದಾಗ ಮನುಷ್ಯರಿಗೆ ತಂದೆಯ ಬಗ್ಗೆ ಅರ್ಥವಾಗುವುದು. ತಂದೆ ಮತ್ತು ಶ್ರೀಕೃಷ್ಣನ ಮಹಿಮೆಯು ಬೇರೆ-ಬೇರೆಯಾಗಿದೆ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಂಡಿದೆ. ಸೇವಾಧಾರಿ ಮಕ್ಕಳು ಇಡೀ ದಿನ ಸೇವೆಗಾಗಿ ಓಡುತ್ತಿರುತ್ತಾರೆ. ತಮ್ಮ ಲೌಕಿಕ ಸೇವೆಯಿದ್ದರೂ ಸಹ ರಜಾ ತೆಗೆದುಕೊಂಡು ಸರ್ವೀಸಿನಲ್ಲಿ ತೊಡಗುತ್ತಾರೆ. ಇದು ಈಶ್ವರೀಯ ಸರ್ಕಾರವಾಗಿದೆ. ವಿಶೇಷವಾಗಿ ಕನ್ಯೆಯರು ಒಂದುವೇಳೆ ಇಂತಹ ಸರ್ವೀಸಿನಲ್ಲಿ ತೊಡಗಿದರೆ ಹೆಸರನ್ನು ಬಹಳ ಪ್ರಸಿದ್ಧ ಮಾಡಬಲ್ಲರು. ಸೇವಾಧಾರಿ ಮಕ್ಕಳ ಪಾಲನೆಯು ಚೆನ್ನಾಗಿ ನಡೆಯುತ್ತಿರುತ್ತದೆ ಏಕೆಂದರೆ ಶಿವ ತಂದೆಯ ಭಂಡಾರವು ಬರ್ಫೂರ್ ಆಗಿದೆ. ಯಾವ ಭಂಡಾರದಿಂದ ತಿಂದರು ಆ ಭಂಡಾರವು ಬರ್ಪೂರ್, ಕಾಲ ಕಂಟಕ ದೂರವಾಗುವುದು.

ನೀವು ಶಿವವಂಶಿಯರಾಗಿದ್ದೀರಿ, ಅವರು ರಚಯಿತ, ನೀವು ರಚನೆಯಾಗಿದ್ದೀರಿ. ಬಬುಲ್ನಾಥ ಎಂಬ ಹೆಸರು ಬಹಳ ಮಧುರವಾಗಿದೆ, ಶಿವನು ಪ್ರಿಯತಮನೂ ಆಗಿದ್ದಾರಲ್ಲವೆ. ಶಿವ ತಂದೆಯ ಮಹಿಮೆಯೇ ಬೇರೆಯಾಗಿದೆ, ನಿರಾಕಾರ ಎಂಬ ಅಕ್ಷರವನ್ನು ಬರೆಯುವುದರಿಂದ ಅವರಿಗೆ ಯಾವುದೇ ಆಕಾರವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಪ್ರಿಯಾತಿ ಪ್ರಿಯ ಶಿವ ತಂದೆಯಾಗಿದ್ದಾರೆ. ಪರಮಪ್ರಿಯ ಎಂಬ ಶಬ್ಧವನ್ನು ಬರೆಯಲೇಬೇಕಾಗಿದೆ. ಈ ಸಮಯದಲ್ಲಿ ಅವರಿಗೂ ಯುದ್ಧದ ಮೈದಾನವಾಗಿದೆ, ನಿಮಗೂ ಆಗಿದೆ. ಶಿವ ಶಕ್ತಿಯರು ಅಹಿಂಸಕರೆಂದು ಗಾಯನ ಮಾಡಲಾಗುತ್ತದೆ ಆದರೆ ಚಿತ್ರಗಳಲ್ಲಿ ದೇವಿಯರಿಗೂ ಸಹ ಆಯುಧಗಳನ್ನು ಕೊಟ್ಟು ಹಿಂಸೆಯನ್ನು ತೋರಿಸಿ ಬಿಟ್ಟಿದ್ದಾರೆ. ವಾಸ್ತವದಲ್ಲಿ ನೀವು ಯೋಗ ಅಥವಾ ನೆನಪಿನ ಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಆಯುಧಗಳ ಮಾತಿಲ್ಲ. ಗಂಗೆಯ ಪ್ರಭಾವವು ಬಹಳಷ್ಟಿದೆ, ಅನೇಕರಿಗೆ ಸಾಕ್ಷಾತ್ಕಾರವೂ ಆಗುವುದು. ಭಕ್ತಿಮಾರ್ಗದಲ್ಲಿ ಗಂಗಾಜಲವು ಸಿಕ್ಕಿದರೆ ಆಗ ಉದ್ಧಾರವಾಗುವುದೆಂದು ತಿಳಿಯುತ್ತಾರೆ ಆದ್ದರಿಂದ ಗುಪ್ತ ಗಂಗೆಯೆಂದು ಹೇಳುತ್ತಿರುತ್ತಾರೆ. ಬಾಣವು ಹೊಡೆದರು, ಗಂಗೆಯು ಹೊರ ಬಂದಿತೆಂದು ಹೇಳುತ್ತಾರೆ. ಗೋ ಮುಖದಿಂದಲೂ ಗಂಗೆಯನ್ನು ತೋರಿಸುತ್ತಾರೆ. ನೀವು ಕೇಳಿದರೆ ಗುಪ್ತ ಗಂಗೆಯು ಹೊರ ಬರುತ್ತಿದೆ ಎಂದು ಹೇಳುತ್ತಾರೆ. ಏಣಿಯಲ್ಲಿಯೂ ಸರಸ್ವತಿಯನ್ನು ಗುಪ್ತವಾಗಿ ತೋರಿಸಿದ್ದಾರೆ. ಮನುಷ್ಯರಂತೂ ಅನೇಕ ಮಾತುಗಳನ್ನು ಬರೆದು ಬಿಟ್ಟಿದ್ದಾರೆ, ಇಲ್ಲಂತೂ ಒಂದೇ ಮಾತಾಗಿದೆ. ಕೇವಲ ತಂದೆ ಅಷ್ಟೇ. ಅಲ್ಲಾನು ಬಂದು ಬಹಿಶ್ತ್ನ್ನು ಸ್ಥಾಪನೆ ಮಾಡುತ್ತಾರೆ, ಖುದನು ಹೆವೆನ್ ಸ್ಥಾಪನೆ ಮಾಡುತ್ತಾರೆ, ಈಶ್ವರನು ಸ್ವರ್ಗ ಸ್ಥಾಪನೆ ಮಾಡುತ್ತಾರೆ. ವಾಸ್ತವದಲ್ಲಿ ಈಶ್ವರನು ಒಬ್ಬರೇ ಆಗಿದ್ದಾರೆ. ಇವರು ತಮ್ಮ-ತಮ್ಮ ಭಾಷೆಗಳಲ್ಲಿ ಭಿನ್ನ-ಭಿನ್ನ ಹೆಸರುಗಳನ್ನಿಟ್ಟುಕೊಂಡಿದ್ದಾರೆ ಆದರೆ ಇದನ್ನು ತಿಳಿದುಕೊಳ್ಳುತ್ತಾರೆ - ಅಲ್ಲಾನಿಂದ ಅವಶ್ಯವಾಗಿ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಇಲ್ಲಂತೂ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಖಂಡಿತ ನೆನಪಿಗೆ ಬರುವುದು. ರಚಯಿತನ ರಚನೆಯೇ ಸ್ವರ್ಗವಾಗಿದೆ. ರಾಮನು ನರಕವನ್ನು ರಚಿಸಿದರೆಂದು ಹೇಳುವುದಿಲ್ಲ. ಭಾರತವಾಸಿಗಳಿಗೆ ನಿರಾಕಾರ ರಚಯಿತನು ಯಾರೆಂಬುದು ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನರಕದ ರಚಯಿತನು ರಾವಣನಾಗಿದ್ದಾನೆ, ಅವನನ್ನು ಸುಡುತ್ತಾರೆ. ರಾವಣ ರಾಜ್ಯದಲ್ಲಿ ಭಕ್ತಿಮಾರ್ಗದ ನಾಟಿಯು ಎಷ್ಟು ದೊಡ್ಡದಾಗಿದೆ! ರಾವಣನ ರೂಪವನ್ನೂ ಸಹ ಎಷ್ಟು ಭಯಂಕರವಾಗಿ ತೋರಿಸಿದ್ದಾರೆ. ರಾವಣನು ನಮ್ಮ ಶತ್ರುವೆಂದು ಹೇಳುತ್ತಾರೆ. ತಂದೆಯು ಅರ್ಥವನ್ನು ತಿಳಿಸಿದ್ದಾರೆ - ವಿಸ್ತಾರವು ದೊಡ್ಡದಾಗಿರುವುದರಿಂದ ರಾವಣನ ಶರೀರವನ್ನೂ ದೊಡ್ಡದನ್ನಾಗಿ ಮಾಡುತ್ತಾರೆ. ಶಿವ ತಂದೆಯಂತೂ ಬಿಂದುವಾಗಿದ್ದಾರೆ ಆದರೆ ತಂದೆಯ ಚಿತ್ರವನ್ನು ದೊಡ್ಡ ರೂಪದಲ್ಲಿ ಮಾಡಿದ್ದಾರೆ ಇಲ್ಲದಿದ್ದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಪೂಜಾರಿಗಳಂತೂ ಆಗಬೇಕಲ್ಲವೆ. ಆತ್ಮವನ್ನು ಕುರಿತು ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವ ನಕ್ಷತ್ರವೆಂದು ಹೇಳುತ್ತಾರೆ ಮತ್ತೆ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ ಅಂದಮೇಲೆ ತಂದೆಯು ಕೋಟಿ ಸೂರ್ಯನಿಗಿಂತಲೂ ಹೆಚ್ಚು ತೇಜೋಮಯನು ಹೇಗಾಗುವನು! ಆತ್ಮದ ವರ್ಣನೆ ಮಾಡುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ಪರಮಾತ್ಮನು ಕೋಟಿ ಸೂರ್ಯ ತೇಜೋಮಯನಾಗಿದ್ದರೆ ಪ್ರತಿಯೊಬ್ಬರಲ್ಲಿಯೂ ಹೇಗೆ ಪ್ರವೇಶ ಮಾಡುವರು? ಎಷ್ಟು ಅಯಥಾರ್ಥ ಮಾತುಗಳಾಗಿವೆ! ಯಾವುದನ್ನು ಕೇಳಿ ಮನುಷ್ಯರು ಏನಾಗಿ ಬಿಟ್ಟಿದ್ದಾರೆ. ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ ಅಂದಮೇಲೆ ತಂದೆಯ ರೂಪವೂ ಇದೇ ರೀತಿಯಿರಬೇಕಲ್ಲವೆ ಆದರೆ ಪೂಜೆಗಾಗಿ ದೊಡ್ಡ ರೂಪವನ್ನು ಮಾಡಿದ್ದಾರೆ. ಕಲ್ಲಿನಿಂದ ಎಷ್ಟು ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿಸುತ್ತಾರೆ. ಹೇಗೆ ಗುಹೆಯಲ್ಲಿ ದೊಡ್ಡ-ದೊಡ್ಡ ರೂಪದಲ್ಲಿ ಪಾಂಡವರನ್ನು ತೋರಿಸಿದ್ದಾರೆ, ಏನನ್ನೂ ಅರಿತುಕೊಂಡಿಲ್ಲ. ಇದು ವಿದ್ಯೆಯಾಗಿದೆ. ವ್ಯಾಪಾರ ಮತ್ತು ವಿದ್ಯೆಯು ಬೇರೆ-ಬೇರೆಯಾಗಿದೆ. ತಂದೆಯು ಓದಿಸುತ್ತಾರೆ ಹಾಗೂ ವ್ಯಾಪಾರವನ್ನೂ ಕಲಿಸುತ್ತಾರೆ. ಬೋರ್ಡಿನ ಮೇಲೂ ಮೊದಲು ತಂದೆಯ ಮಹಿಮೆಯಿರಬೇಕು. ತಂದೆಯ ಪೂರ್ಣ ಮಹಿಮೆಯನ್ನು ಬರೆಯಬೇಕಾಗಿದೆ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಬರುತ್ತದೆ ಆದ್ದರಿಂದ ಮಹಾರಥಿ, ಕುದುರೆ ಸವಾರರೆಂದು ಹೇಳಲಾಗುತ್ತದೆ. ಆಯುಧ ಇತ್ಯಾದಿಗಳ ಮಾತಿಲ್ಲ. ತಂದೆಯು ಬುದ್ಧಿಯ ಬೀಗವನ್ನು ತೆರೆಯುತ್ತಾರೆ. ಈ ಗೊಡ್ರೇಜ್ನ ಬೀಗವನ್ನು ಯಾರೂ ತೆರೆಯಲು ಸಾಧ್ಯವಿಲ್ಲ. ತಂದೆಯ ಬಳಿ ಮಿಲನ ಮಾಡಲು ಬಂದಾಗ ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ - ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಈ ಸ್ಥಾನದಲ್ಲಿ, ಈ ದಿನದಂದು ಯಾವಾಗ ಮಿಲನ ಮಾಡಿದ್ದಿರಿ? ಆಗ ಮಕ್ಕಳು ಹೇಳುತ್ತಾರೆ - ಹೌದು ಬಾಬಾ, 5000 ವರ್ಷಗಳ ಮೊದಲು ಮಿಲನ ಮಾಡಿದ್ದೆವು, ಇಂತಹ ಮಾತುಗಳನ್ನು ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ಇವು ತಿಳಿದುಕೊಳ್ಳುವ ಎಷ್ಟೊಂದು ಗುಹ್ಯ ಮಾತುಗಳಾಗಿವೆ! ಎಷ್ಟೊಂದು ಜ್ಞಾನದ ಯುಕ್ತಿಗಳನ್ನು ತಂದೆಯು ತಿಳಿಸುತ್ತಾರೆ ಆದರೆ ಧಾರಣೆಯು ನಂಬರ್ವಾರ್ ಆಗುತ್ತದೆ. ಶಿವ ತಂದೆಯ ಮಹಿಮೆಯು ಬೇರೆಯಾಗಿದೆ. ಬ್ರಹ್ಮಾ-ವಿಷ್ಣು-ಶಂಕರನ ಮಹಿಮೆಯೇ ಬೇರೆಯಾಗಿದೆ. ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ. ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದು ಅನಾದಿ ನಾಟಕವಾಗಿದೆ. ಇದೇ ಮತ್ತೆ ಪುನರಾವರ್ತನೆಯಾಗುವುದು. ನಾವು ಹೇಗೆ ಮೂಲವತನಕ್ಕೆ ಹೋಗುತ್ತೇವೆ ಮತ್ತೆ ಪಾತ್ರವನ್ನಭಿನಯಿಸಲು ಬರುತ್ತೇವೆ ಎಂಬುದು ಈಗ ನಿಮ್ಮ ಬುದ್ಧಿಯಲ್ಲಿ ಕುಳಿತುಕೊಂಡಿದೆ. ಸೂಕ್ಷ್ಮವತನದ ಮೂಲಕ ಹೋಗುತ್ತೀರಿ, ಬರುವ ಸಮಯದಲ್ಲಿ ಸೂಕ್ಷ್ಮವತನವಿರುವುದಿಲ್ಲ. ಎಂದೂ ಯಾರಿಗೂ ಸೂಕ್ಷ್ಮವತನದ ಸಾಕ್ಷಾತ್ಕಾರವಾಗುವುದಿಲ್ಲ. ಸೂಕ್ಷ್ಮವತನದ ಸಾಕ್ಷಾತ್ಕಾರಕ್ಕಾಗಿ ಯಾರೂ ತಪ್ಪಸ್ಸು ಮಾಡುವುದಿಲ್ಲ ಏಕೆಂದರೆ ಅದನ್ನು ಯಾರೂ ತಿಳಿದುಕೊಂಡಿಲ್ಲ. ಯಾರು ಸೂಕ್ಷ್ಮವತನದ ಭಕ್ತರಿರುವುದಿಲ್ಲ, ಸೂಕ್ಷ್ಮವತನವನ್ನು ಈಗಲೇ ರಚಿಸಲಾಗುತ್ತದೆ. ಸೂಕ್ಷ್ಮವತನದ ಮೂಲಕ ಹೋಗಿ ನಂತರ ಹೊಸ ಪ್ರಪಂಚದಲ್ಲಿ ಬರುತ್ತೀರಿ. ಈ ಸಮಯದಲ್ಲಿ ನೀವು ಅಲ್ಲಿಗೆ ಬಂದು ಹೋಗುತ್ತಾ ಇರುತ್ತೀರಿ. ನಿಮ್ಮದು ನಿಶ್ಚಿತಾರ್ಥವಾಗಿದೆ, ಇದು ತಂದೆಯ ಮನೆಯಾಗಿದೆ. ವಿಷ್ಣುವಿಗೆ ಪಿತನೆಂದು ಹೇಳುವುದಿಲ್ಲ. ವಿಷ್ಣು ಪುರಿಯು ಮಾವನ ಮನೆಯಾಗಿದೆ. ಕನ್ಯೆಯು ಮಾವನ ಮನೆಗೆ ಹೋಗುವಾಗ ಹಳೆಯ ವಸ್ತ್ರಗಳೆಲ್ಲವನ್ನೂ ಬಿಟ್ಟು ಹೋಗುತ್ತಾರೆ, ನೀವು ಹಳೆಯ ಪ್ರಪಂಚವನ್ನೇ ಬಿಟ್ಟು ಬಿಡುತ್ತೀರಿ. ನಿಮ್ಮ ಹಾಗೂ ಅವರ ವನವಾಸದಲ್ಲಿ ಎಷ್ಟೊಂದು ಅಂತರವಿದೆ. ನೀವೂ ಸಹ ಬಹಳ ಅನಾಸಕ್ತರಾಗಿರಬೇಕು, ದೇಹಾಭಿಮಾನವನ್ನು ಬಿಡಬೇಕಾಗಿದೆ. ಹೆಚ್ಚು ಬೆಲೆಯ ಸೀರೆಯನ್ನು ಧರಿಸುತ್ತೀರೆಂದರೆ ಕೂಡಲೇ ದೇಹಾಭಿಮಾನವು ಬಂದು ಬಿಡುವುದು, ನಾನಾತ್ಮನಾಗಿದ್ದೇನೆ ಎಂಬುದೇ ಮರೆತು ಹೋಗುತ್ತದೆ. ಈ ಸಮಯದಲ್ಲಿ ನೀವು ವನವಾಸದಲ್ಲಿದ್ದೀರಿ. ವನವಾಸ ಮತ್ತು ವಾನಪ್ರಸ್ಥ ಒಂದೇ ಮಾತಾಗಿದೆ. ಶರೀರವನ್ನೂ ಬಿಡಬೇಕಾಗಿದೆ ಅಂದಮೇಲೆ ಸೀರೆಯನ್ನು ಬಿಡುವುದಿಲ್ಲವೆ! ಕಡಿಮೆ ಬೆಲೆಯ ಸೀರೆ ಸಿಕ್ಕಿದರೆ ಹೃದಯವೇ ಚಿಕ್ಕದಾಗಿ ಬಿಡುತ್ತದೆ. ಇದರಲ್ಲಿ ಇನ್ನೂ ಖುಷಿಯಾಗಬೇಕು - ಕಡಿಮೆ ಬೆಲೆಯ ವಸ್ತ್ರ ಸಿಕ್ಕಿರುವುದು ಒಳ್ಳೆಯದೇ ಆಯಿತು ಎಂದು. ಹೆಚ್ಚು ಬೆಲೆಯ ವಸ್ತುವನ್ನಂತೂ ಬಹಳ ಸಂಭಾಲನೆ ಮಾಡಬೇಕಾಗುತ್ತದೆ. ಈ ಧರಿಸುವ, ತಿನ್ನುವ ಚಿಕ್ಕ-ಚಿಕ್ಕ ಮಾತುಗಳೂ ಸಹ ಶ್ರೇಷ್ಠ ಗುರಿಯನ್ನು ತಲುಪುವುದರಲ್ಲಿ ಅಡಚಣೆ ಮಾಡುತ್ತವೆ, ಗುರಿಯು ಬಹಳ ದೊಡ್ಡದಾಗಿದೆ. ಕಥೆಯಲ್ಲಿಯೂ ಸಹ ಹೇಳುತ್ತಾರಲ್ಲವೆ - ಈ ಲಾಠಿಯನ್ನು ಬಿಟ್ಟು ಬಿಡಿ ಎಂದು ಪತಿಗೆ ಹೇಳಿದಳು. ತಂದೆಯು ತಿಳಿಸುತ್ತಾರೆ - ಈ ಹಳೆಯ ವಸ್ತ್ರ, ಹಳೆಯ ಪ್ರಪಂಚ ಎಲ್ಲವೂ ಸಮಾಪ್ತಿಯಾಗುವುದು ಆದ್ದರಿಂದ ಈ ಹಳೆಯ ಪ್ರಪಂಚದಿಂದ ಬುದ್ಧಿ ಯೋಗವನ್ನು ತೆಗೆಯಬೇಕಾಗಿದೆ. ಇದಕ್ಕೆ ಬೇಹದ್ದಿನ ಸನ್ಯಾಸವೆಂದು ಹೇಳಲಾಗುತ್ತದೆ. ಸನ್ಯಾಸಿಗಳು ಹದ್ದಿನ ಸನ್ಯಾಸ ಮಾಡಿದ್ದಾರೆ, ಈಗಂತೂ ಅವರೂ ಸಹ ಮತ್ತೆ ಗ್ರಾಮಗಳಿಗೆ ಬಂದು ಬಿಟ್ಟಿದ್ದಾರೆ. ಮೊದಲು ಅವರಲ್ಲಿ ಬಹಳ ಶಕ್ತಿಯಿರುತ್ತಿತ್ತು. ಇಳಿಯುವವರ ಮಹಿಮೆಯೇನಿರುತ್ತದೆ. ಹೊಸ-ಹೊಸ ಆತ್ಮಗಳೂ ಸಹ ಕೊನೆಯವರೆಗೆ ಪಾತ್ರವನ್ನಭಿನಯಿಸಲು ಬರುತ್ತಾ ಇರುತ್ತಾರೆ. ಅವರಲ್ಲಿ ಶಕ್ತಿಯು ಏನಿರುತ್ತದೆ! ನೀವಂತೂ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಇದೆಲ್ಲವನ್ನೂ ತಿಳಿದುಕೊಳ್ಳಲು ಎಷ್ಟು ಒಳ್ಳೆಯ ಬುದ್ಧಿಯು ಬೇಕು. ಸೇವಾಧಾರಿ ಮಕ್ಕಳು ಸರ್ವೀಸಿನಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಜ್ಞಾನ ಸಾಗರನ ಮಕ್ಕಳು ಹೀಗೆ ಭಾಷಣ ಮಾಡಬೇಕು ಹೇಗೆ ತಂದೆಯು ಉಮ್ಮಂಗದಲ್ಲಿರುತ್ತಾರೆ. ಇದರಲ್ಲಿ ಅವಕ್ಕಾಗಬಾರದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಬುದ್ಧಿಯಿಂದ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ. ಹಿಂತಿರುಗಿ ಮನೆಗೆ ಹೋಗುವ ಸಮಯವಾಗಿದೆ, ಆದ್ದರಿಂದ ಹಳೆಯ ಪ್ರಪಂಚ ಮತ್ತು ಹಳೆಯ ಶರೀರದಿಂದ ಅನಾಸಕ್ತರಾಗಿರಬೇಕಾಗಿದೆ.

2) ಡ್ರಾಮಾದ ಪ್ರತೀ ದೃಶ್ಯವನ್ನು ನೋಡುತ್ತಾ ಸದಾ ಹರ್ಷಿತರಾಗಿರಬೇಕಾಗಿದೆ.

ವರದಾನ:
ಬಾಪ್ದಾದಾರವರನ್ನು ತಮ್ಮ ಸಂಗಾತಿ ಎಂದು ತಿಳಿದು ಡಬಲ್ ಪೋರ್ಸ್ನಿಂದ ಕಾರ್ಯ ಮಾಡುವಂತಹ ಸಹಜಯೋಗಿ ಭವ.

ಯಾವುದೇ ಕಾರ್ಯವನ್ನು ಮಾಡುತ್ತಾ ಬಾಪ್ದಾದಾರವರನ್ನು ತಮ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಡಬಲ್ ಪೋರ್ಸ್ನಿಂದ ಕಾರ್ಯವಾಗುವುದು ಹಾಗೂ ಸ್ಮೃತಿಯೂ ಸಹ ಬಹಳ ಸಹಜವಾಗಿಯೇ ಇರುತ್ತದೆ ಏಕೆಂದರೆ ಯಾರು ಸದಾ ಜೊತೆ ಅಥವಾ ಸಂಗದಲ್ಲಿ ಇರುತ್ತಾರೆಯೋ ಅವರ ನೆನಪುಗಳು ಸ್ವತಹವಾಗಿಯೇ ತಯಾರಾಗಿ ಇರುತ್ತದೆ. ಅಂದಮೇಲೆ ಇಂತಹ ಸಂಗಾತಿಯು ಇರುವುದರಿಂದ ಅಥವಾ ಬುದ್ಧಿಯ ಮೂಲಕ ನಿರಂತರ ಸತ್ಸಂಗ ಮಾಡುವುದರಿಂದ ಸಹಜಯೋಗಿ ಆಗಿ ಬಿಡುತ್ತೀರಿ ಹಾಗೂ ಶಕ್ತಿಶಾಲಿ ಸಂಗವಿರುವ ಕಾರಣದಿಂದ, ತಮ್ಮಲ್ಲಿ ಪ್ರತಿಯೊಂದು ಕರ್ತವ್ಯದಲ್ಲಿ ಡಬಲ್ ಪೋರ್ಸ್ ಇರುವುದು. ಅದರಿಂದ ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯ ಅನುಭೂತಿಯಾಗುವುದು.

ಸ್ಲೋಗನ್:
ಯಾರು ಎಂದಿಗೂ ಮಾಯೆಯ ಪ್ರಭಾವದಲ್ಲಿ ಪರವಶರಾಗುವುದಿಲ್ಲವೋ ಅವರು ಮಹಾರಥಿ ಆಗಿದ್ದಾರೆ.

ಅವ್ಯಕ್ತ ಸೂಚನೆ – “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಮಧುರತೆಯೇ ಬ್ರಾಹ್ಮಣ ಜೀವನದ ಮಹಾನತೆಯಾಗಿದೆ. ಎಲ್ಲಿ ಮಧುರತೆಯಿದೆ ಅಲ್ಲಿ ಪವಿತ್ರತೆಯಿದೆ. ಪವಿತ್ರತೆಯಿಲ್ಲದೆ ಮಧುರತೆ ಬರಲು ಸಾಧ್ಯವಿಲ್ಲ. ಎಷ್ಟು ಬುದ್ಧಿಯಲ್ಲಿ ನಶೆಯಿರುತ್ತದೆ, ಅಷ್ಟು ಕರ್ಮದಲ್ಲಿ ನಮ್ರತೆ ಮತ್ತು ಮಾತಿನಲ್ಲಿ ಮಧುರತೆಯಿರಲಿ. ಇಂತಹ ನಶೆಯಲ್ಲಿರುವುದರಿಂದ ಎಂದೂ ನಷ್ಟವಾಗುವುದಿಲ್ಲ. ಸಿದ್ಧಿಯನ್ನು ಪಡೆಯುವಂತಹ, ಸ್ವಯಂನ್ನು ನಮ್ರಚಿತ್ತ, ನಿರ್ಮಾಣ, ಪ್ರತಿ ಮಾತಿನಲ್ಲಿ ತಮ್ಮ ತಾವು ಗುಣಗ್ರಾಹಕ ಮತ್ತು ಮಧುರತೆ ಸಂಪನ್ನರನ್ನಾಗಿ ಮಾಡಿಕೊಳ್ಳಿ.