10.12.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಚಾರಿಟಿ ಬಿಗಿನ್ಸ್ ಅಟ್ ಹೋಂ ಅರ್ಥಾತ್ ಮೊದಲು ಸ್ವಯಂ ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಿ ನಂತರ ಅನ್ಯರಿಗೆ ಹೇಳಿ, ಆತ್ಮನೆಂದು ತಿಳಿದು ಆತ್ಮಕ್ಕೆ ಜ್ಞಾನ ಕೊಡಿ ಆಗ ಜ್ಞಾನದ ಖಡ್ಗದಲ್ಲಿ ಹೊಳಪು ಬರುವುದು.”

ಪ್ರಶ್ನೆ:
ಸಂಗಮಯುಗದಲ್ಲಿ ಯಾವ ಎರಡು ಮಾತುಗಳ ಪರಿಶ್ರಮ ಪಡುವುದರಿಂದ ಸತ್ಯಯುಗೀ ಸಿಂಹಾಸನಕ್ಕೆ ಮಾಲೀಕರಾಗಿ ಬಿಡುತ್ತೀರಿ?

ಉತ್ತರ:
1. ಸುಖ-ದುಃಖ, ನಿಂದಾ-ಸ್ತುತಿ ಎಲ್ಲದರಲ್ಲಿಯೂ ಸಮಾನ ಸ್ಥಿತಿಯರಲು - ಈ ಪರಿಶ್ರಮ ಪಡಿ. ಯಾರಾದರೂ ಉಲ್ಟಾ-ಸುಲ್ಟಾ ಮಾತನಾಡಿದರೆ, ಕ್ರೋಧ ಮಾಡಿದರೂ ಸಹ ನೀವು ಶಾಂತವಾಗಿ ಬಿಡಿ. ಎಂದೂ ಬಾಯಿಯ ಚಪ್ಪಾಳೆ ತಟ್ಟಬೇಡಿ ಅರ್ಥಾತ್ ಎದುರು ಮಾತನಾಡಬೇಡಿ. 2. ದೃಷ್ಟಿಯನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಿ. ವಿಕಾರಿ ದೃಷ್ಟಿಯು ಸಂಪೂರ್ಣ ಸಮಾಪ್ತಿಯಾಗಲಿ. ನಾವಾತ್ಮರು ಸಹೋದರ -ಸಹೋದರರಾಗಿದ್ದೇವೆ. ಆತ್ಮನೆಂದು ತಿಳಿದು ಜ್ಞಾನವನ್ನು ಕೊಡಿ, ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಿ ಆಗ ಸತ್ಯಯುಗೀ ಸಿಂಹಾಸನಕ್ಕೆ ಮಾಲೀಕರಾಗಿ ಬಿಡುತ್ತೀರಿ. ಸಂಪೂರ್ಣ ಪವಿತ್ರರಾಗುವವರೇ ಸಿಂಹಾಸನಾಧಿಕಾರಿಗಳಾಗುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ಮಾತನಾಡುತ್ತಾರೆ. ನೀವಾತ್ಮರಿಗೆ ಈ ಮೂರನೆಯ ನೇತ್ರವು ಸಿಕ್ಕಿದೆ, ಯಾವುದಕ್ಕೆ ಜ್ಞಾನದ ನೇತ್ರವೆಂದೂ ಹೇಳಲಾಗುತ್ತದೆ. ಅದರ ಮೂಲಕ ನೀವು ತಮ್ಮ ಸಹೋದರರನ್ನು ನೋಡುತ್ತೀರಿ ಅಂದಾಗ ಇದನ್ನು ಬುದ್ಧಿಯಿಂದ ತಿಳಿದುಕೊಳ್ಳುತ್ತೀರಲ್ಲವೆ - ನಾವು ಯಾವಾಗ ಸಹೋದರ-ಸಹೋದರರನ್ನು ನೋಡುತ್ತೇವೆಂದರೆ ಕರ್ಮೇಂದ್ರಿಯಗಳು ಚಂಚಲವಾಗುವುದಿಲ್ಲ. ಹೀಗೆ ಮಾಡುತ್ತಾ-ಮಾಡುತ್ತಾ ವಿಕಾರಿ ದೃಷ್ಟಿಯೂ ಸಹ ನಿರ್ವಿಕಾರಿ ಆಗಿ ಬಿಡುವುದು. ತಂದೆಯು ತಿಳಿಸುತ್ತಾರೆ - ವಿಶ್ವದ ಮಾಲೀಕರಾಗಲು ಪರಿಶ್ರಮವನ್ನಂತೂ ಪಡಬೇಕಾಗುತ್ತದೆಯಲ್ಲವೆ. ಈಗ ಈ ಪರಿಶ್ರಮ ಪಡಿ. ಪರಿಶ್ರಮ ಪಡುವುದಕ್ಕಾಗಿ ತಂದೆಯು ಹೊಸ-ಹೊಸ ಗುಹ್ಯ ಮಾತುಗಳನ್ನು ತಿಳಿಸುತ್ತಾರಲ್ಲವೆ. ಈಗ ತಮ್ಮನ್ನು ಸಹೋದರ-ಸಹೋದರರೆಂದು ತಿಳಿದು ಜ್ಞಾನ ಕೊಡುವ ಹವ್ಯಾಸ ಮಾಡಿಕೊಳ್ಳಬೇಕಾಗಿದೆ. ಆಗ "ನಾವೆಲ್ಲರೂ ಸಹೋದರರಾಗಿದ್ದೇವೆ" ಎಂದು ಯಾವ ಗಾಯನವಿದೆಯೋ ಅದು ಪ್ರತ್ಯಕ್ಷವಾಗಿ ಬಿಡುವುದು. ನೀವೀಗ ಸತ್ಯ-ಸತ್ಯವಾದ ಸಹೋದರರಾಗಿದ್ದೀರಿ ಏಕೆಂದರೆ ತಂದೆಯನ್ನು ತಿಳಿದುಕೊಂಡಿದ್ದೀರಿ. ತಂದೆಯು ನೀವು ಮಕ್ಕಳ ಜೊತೆ ಸರ್ವೀಸ್ ಮಾಡುತ್ತಿದ್ದಾರೆ. ಸಾಹಸ ಮಕ್ಕಳದು ಸಹಯೋಗ ತಂದೆಯದು ಆದ್ದರಿಂದ ತಂದೆಯು ಬಂದು ಸರ್ವೀಸ್ ಮಾಡುವ ಸಾಹಸ ತರಿಸುತ್ತಾರೆ. ಆದ್ದರಿಂದ ಇದು ಸಹಜವಾಯಿತಲ್ಲವೆ. ಅಂದಾಗ ಪ್ರತಿನಿತ್ಯವೂ ಈ ಅಭ್ಯಾಸ ಮಾಡಬೇಕು. ಸುಸ್ತಾಗಬಾರದು. ಈ ಹೊಸ-ಹೊಸ ವಿಚಾರಗಳು ಮಕ್ಕಳಿಗೆ ಸಿಗುತ್ತವೆ. ಮಕ್ಕಳಿಗೆ ಗೊತ್ತಿದೆ - ನಾವು ಸಹೋದರರಿಗೆ ತಂದೆಯು ಓದಿಸುತ್ತಿದ್ದಾರೆ. ಆತ್ಮಗಳೇ ಓದುತ್ತೀರಿ. ಇದು ಆತ್ಮಿಕ ಜ್ಞಾನವಾಗಿದೆ, ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದೂ ಹೇಳಲಾಗುತ್ತದೆ. ಕೇವಲ ಈ ಸಮಯದಲ್ಲಿಯೇ ಆತ್ಮಿಕ ಜ್ಞಾನವು ಆತ್ಮಿಕ ತಂದೆಯಿಂದ ಸಿಗುತ್ತದೆ ಏಕೆಂದರೆ ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ ಯಾವಾಗ ಸೃಷ್ಟಿ ಪರಿವರ್ತನೆಯಾಗುತ್ತದೆ. ಯಾವಾಗ ಸೃಷ್ಟಿ ಪರಿವರ್ತನೆಯಾಗಬೇಕೋ ಆಗಲೇ ಈ ಆತ್ಮಿಕ ಜ್ಞಾನವು ಸಿಗುತ್ತದೆ. ತಂದೆಯು ಬಂದು ಇದೇ ಆತ್ಮಿಕ ಜ್ಞಾನವನ್ನು ಕೊಡುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮವು ಅಶರೀರಿಯಾಗಿ ಬಂದಿತು, ಇಲ್ಲಿ ಮತ್ತೆ ಶರೀರವನ್ನು ಧಾರಣೆ ಮಾಡುತ್ತದೆ. ಆರಂಭದಿಂದ ಹಿಡಿದು ಇಲ್ಲಿಯವರೆಗೆ ಆತ್ಮವು 84 ಜನ್ಮಗಳನ್ನು ತೆಗೆದುಕೊಂಡಿದೆ. ಆದರೆ ನಂಬರ್ವಾರ್ ಯಾರು ಹೇಗೆ ಬಂದಿದ್ದರೋ ಅವರು ಅದೇರೀತಿ ಜ್ಞಾನ-ಯೋಗದ ಪರಿಶ್ರಮ ಪಡುತ್ತಾರೆ ಮತ್ತು ಅವರಿಂದ ಕಾಣುತ್ತದೆ - ಯಾರು ಹೇಗೆ ಕಲ್ಪದ ಹಿಂದೆ ಪುರುಷಾರ್ಥ ಮಾಡಿದರೋ, ಪರಿಶ್ರಮ ಪಟ್ಟರೋ ಅವರು ಈಗಲೂ ಸಹ ಅದೇರೀತಿ ಪರಿಶ್ರಮ ಪಡುತ್ತಿರುತ್ತಾರೆ. ತನಗಾಗಿ ಪರಿಶ್ರಮ ಪಡಬೇಕಾಗಿದೆ. ಬೇರೆ ಯಾರಿಗಾಗಿಯೂ ಅಲ್ಲ. ಆದ್ದರಿಂದ ತನ್ನನ್ನು ಆತ್ಮನೆಂದು ತಿಳಿದು ತನ್ನ ಜೊತೆ ಪರಿಶ್ರಮ ಪಡಬೇಕಾಗಿದೆ. ಅನ್ಯರು ಏನೇ ಮಾಡುತ್ತಾರೆಂದರೆ ಅದರಲ್ಲಿ ನಮದೇನು ಹೋಗುತ್ತದೆ! ದಾನವು ಮನೆಯಿಂದಲೇ ಪ್ರಾರಂಭವಾಗುತ್ತದೆ ಅರ್ಥಾತ್ ಮೊದಲು ಸ್ವಯಂ ಪರಿಶ್ರಮ ಪಡಬೇಕಾಗುತ್ತದೆ. ನಂತರ ಅನ್ಯರಿಗೆ ತಿಳಿಸಬೇಕಾಗಿದೆ. ಯಾವಾಗ ನೀವು ತಮ್ಮನ್ನು ಆತ್ಮನೆಂದು ತಿಳಿದು ಆತ್ಮಕ್ಕೆ ಜ್ಞಾನ ಕೊಡುತ್ತೀರೋ ಆಗ ನಿಮ್ಮ ಜ್ಞಾನ ಖಡ್ಗದಲ್ಲಿ ಹೊಳಪಿರುವುದು. ಪರಿಶ್ರಮವಂತೂ ಇದೆಯಲ್ಲವೆ. ಅವಶ್ಯವಾಗಿ ಸಹನೆ ಮಾಡಲೂಬೇಕಾಗುತ್ತದೆ. ಈ ಸಮಯದಲ್ಲಿ ದುಃಖ-ಸುಖ, ನಿಂದಾ-ಸ್ತುತಿ, ಮಾನ-ಅಪಮಾನ ಇದೆಲ್ಲವನ್ನೂ ಅಲ್ಪಸ್ವಲ್ಪ ಸಹನೆ ಮಾಡಲೇಬೇಕಾಗುತ್ತದೆ. ಯಾರಾದರೂ ಉಲ್ಟಾ-ಸುಲ್ಟಾ ಮಾತನಾಡುತ್ತಾರೆಂದರೆ ಮೌನವಾಗಿರಿ ಎಂದು ಹೇಳುತ್ತಾರೆ. ಯಾವಾಗ ಒಬ್ಬರು ಮೌನವಾಗಿ ಬಿಟ್ಟರೆ ಕ್ರೋಧ ಮಾಡುವವರು ಏನು ಮಾಡುತ್ತಾರೆ? ಯಾವಾಗ ಒಬ್ಬರು ಮಾತನಾಡುವರೋ ಆಗ ಇನ್ನೊಬ್ಬರೂ ಮಾತನಾಡುತ್ತಾರೆ ಆಗ ಬಾಯಿಯ ಚಪ್ಪಾಳೆಯಾಗುತ್ತದೆ. ಒಂದುವೇಳೆ ಒಬ್ಬರು ಮಾತನಾಡಿದರು, ಇನ್ನೊಬ್ಬರು ಶಾಂತವಾದರೆಂದರೆ ಅಲ್ಲಿಗೆ ನಿಂತು ಹೋಗುತ್ತದೆ. ತಂದೆಯು ಇದನ್ನೇ ಕಲಿಸುತ್ತಾರೆ. ಯಾರಾದರೂ ಕ್ರೋಧದಲ್ಲಿ ಬಂದಿದ್ದಾರೆಂಬುದನ್ನು ನೋಡಿದರೆ ಶಾಂತವಾಗಿ ಬಿಡಿ. ತಾನಾಗಿಯೇ ಅವರ ಕ್ರೋಧವು ಶಾಂತವಾಗಿ ಬಿಡುವುದು. ಅವರು ಮಾತನಾಡುವುದಿಲ್ಲ. ಒಂದುವೇಳೆ ಇಬ್ಬರು ಮಾತನಾಡುತ್ತಿದ್ದರೆ ಅಲ್ಲಿ ಗಡಿ ಬಿಡಿಯಾಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಂದೂ ಈ ಮಾತುಗಳಲ್ಲಿ ಬಾಯಿಯ ಚಪ್ಪಾಳೆ ತಟ್ಟಬೇಡಿ. ವಿಕಾರದ, ಕಾಮ-ಕ್ರೋಧದ ಚಪ್ಪಾಳೆ ತಟ್ಟಬೇಡಿ.

ಮಕ್ಕಳು ಪ್ರತಿಯೊಬ್ಬರ ಕಲ್ಯಾಣ ಮಾಡಲೇಬೇಕಾಗಿದೆ. ಇಷ್ಟೊಂದು ಸೇವಾಕೇಂದ್ರಗಳು ಏತಕ್ಕಾಗಿ ಆಗಿವೆ. ಕಲ್ಪದ ಹಿಂದೆಯೂ ಸಹ ಇದೇರೀತಿ ಸೇವಾಕೇಂದ್ರಗಳು ತೆರೆದಿದ್ದವು. ದೇವರ ದೇವ ತಂದೆಯು ನೋಡುತ್ತಿರುತ್ತಾರೆ - ಅನೇಕ ಮಕ್ಕಳಿಗೆ ನಾನು ಸೇವಾಕೇಂದ್ರವನ್ನು ತೆರೆಯಬೇಕು, ಸೇವಾಕೇಂದ್ರವನ್ನು ಸಂಭಾಲನೆ ಮಾಡಬೇಕು ಎಂದು ಆಸಕ್ತಿಯಿರುತ್ತದೆ. ಇದರಿಂದ ದಿನ-ಪ್ರತಿದಿನ ಹೆಚ್ಚಾಗುತ್ತಾ ಹೋಗುತ್ತದೆ ಏಕೆಂದರೆ ಎಷ್ಟು ವಿನಾಶದ ದಿನವು ಸಮೀಪಿಸುತ್ತಾ ಹೋಗುವುದೋ ಅಷ್ಟು ಇನ್ನೊಂದು ಕಡೆ ಸರ್ವೀಸಿನ ಉಮ್ಮಂಗವೂ ಹೆಚ್ಚುತ್ತಾ ಹೋಗುವುದು. ಈಗ ಬಾಪ್ದಾದಾ ಇಬ್ಬರೂ ಒಟ್ಟಿಗೆ ಇರುವುದರಿಂದ ಪ್ರತಿಯೊಬ್ಬರನ್ನೂ ಏನು ಪುರುಷಾರ್ಥ ಮಾಡುತ್ತಾರೆ, ಏನು ಪದವಿ ಪಡೆಯುತ್ತಾರೆಂದು ನೋಡುತ್ತಾರೆ. ಯಾರ ಪುರುಷಾರ್ಥ ಉತ್ತಮ, ಯಾರದು ಮಧ್ಯಮ, ಯಾರದು ಕನಿಷ್ಟವಾಗಿದೆ ಎಂಬುದನ್ನು ನೋಡುತ್ತಿರುತ್ತಾರೆ. ಶಿಕ್ಷಕರೂ ಸಹ ಶಾಲೆಯಲ್ಲಿ ಯಾವ ವಿದ್ಯಾರ್ಥಿಯು ಯಾವ ಸಬ್ಜೆಕ್ಟ್ನಲ್ಲಿ ಮೇಲೆ ಕೆಳಗಾಗುತ್ತಾರೆಂಬುದನ್ನು ನೋಡುತ್ತಾರೆ. ಇಲ್ಲಿಯೂ ಅದೇರೀತಿ ತಂದೆಯು ನೋಡುತ್ತಿರುತ್ತಾರೆ. ಕೆಲವು ಮಕ್ಕಳು ಬಹಳ ಚೆನ್ನಾಗಿ ಗಮನ ಕೊಡುತ್ತಾರೆಂದರೆ ತಮ್ಮನ್ನು ಉತ್ತಮರೆಂದು ತಿಳಿಯುತ್ತಾರೆ. ಇನ್ನೂ ಕೆಲವೊಮ್ಮೆ ಮರೆತು ಹೋಗುತ್ತಾರೆ. ನೆನಪಿನಲ್ಲಿರುವುದಿಲ್ಲ ಆಗ ತಮ್ಮನ್ನು ಕನಿಷ್ಟರೆಂದು ತಿಳಿಯುತ್ತಾರೆ. ಇದು ಶಾಲೆಯಲ್ಲವೆ. ಮಕ್ಕಳು ಹೇಳುತ್ತಾರೆ - ಬಾಬಾ, ನಾವು ಕೆಲಕೆಲವೊಮ್ಮೆ ಬಹಳ ಖುಷಿಯಲ್ಲಿರುತ್ತೇವೆ, ಕೆಲವೊಮ್ಮೆ ಖುಷಿಯು ಕಡಿಮೆಯಾಗಿ ಬಿಡುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಿರುತ್ತಾರೆ - ಒಂದುವೇಳೆ ಖುಷಿಯಲ್ಲಿರಲು ಬಯಸುತ್ತೀರೆಂದರೆ ಮನ್ಮನಾಭವ. ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನೂ ನೆನಪು ಮಾಡಿ. ಸನ್ಮುಖದಲ್ಲಿ ಪರಮಾತ್ಮನನ್ನು ನೋಡಿ ಅವರು ಅಕಾಲ ಸಿಂಹಾಸನದಲ್ಲಿ ಕುಳಿತಿದ್ದಾರೆ. ಹೀಗೆ ಸಹೋದರರ ಕಡೆಯೂ ನೋಡಿ, ತಮ್ಮನ್ನು ಆತ್ಮನೆಂದು ತಿಳಿದು ಮತ್ತೆ ಸಹೋದರನೊಂದಿಗೆ ಮಾತನಾಡಿ. ನಾವು ಸಹೋದರನಿಗೆ ಜ್ಞಾನ ಕೊಡುತ್ತೇನೆ, ಸಹೋದರಿಯಲ್ಲ. ಸಹೋದರ-ಸಹೋದರರಾಗಿದ್ದಾರೆ ಎಂದು ತಿಳಿಯಿರಿ. ನಾವು ಆತ್ಮರಿಗೆ ಜ್ಞಾನ ಕೊಡುತ್ತೇವೆ ಎಂಬುದು ಒಂದುವೇಳೆ ಹವ್ಯಾಸವಾಗಿ ಬಿಟ್ಟರೆ ಯಾವ ವಿಕಾರಿ ದೃಷ್ಟಿಯು ನಿಮಗೆ ಮೋಸ ಮಾಡುತ್ತದೆಯೋ ಅದು ನಿಧಾನ-ನಿಧಾನವಾಗಿ ನಿಂತುಹೋಗುವುದು. ಆತ್ಮವು ಆತ್ಮಕ್ಕೆ ಏನು ಮಾಡುವುದು? ಯಾವಾಗ ದೇಹಾಭಿಮಾನವು ಬರುವುದೋ ಆಗ ಕೆಳಗೆ ಬೀಳುತ್ತಾರೆ. ಬಾಬಾ, ನಮ್ಮ ದೃಷ್ಟಿಯು ವಿಕಾರಿಯಾಗಿದೆ ಎಂದು ಅನೇಕರು ಹೇಳುತ್ತಾರೆ. ಮಕ್ಕಳೇ, ವಿಕಾರಿ ದೃಷ್ಟಿಯನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಿ. ತಂದೆಯು ಆತ್ಮಕ್ಕೆ ಮೂರನೆಯ ನೇತ್ರವನ್ನು ಕೊಟ್ಟಿದ್ದಾರೆ. ಮೂರನೆಯ ನೇತ್ರದಿಂದ ನೋಡುತ್ತೀರೆಂದರೆ ಮತ್ತೆ ನಿಮಗೆ ದೇಹವನ್ನು ನೋಡುವ ಹವ್ಯಾಸವು ಬಿಟ್ಟು ಹೋಗುವುದು. ತಂದೆಯು ಮಕ್ಕಳಿಗೆ ಆದೇಶ ನೀಡುತ್ತಿರುತ್ತಾರೆ. ಇವರಿಗೂ (ಬ್ರಹ್ಮಾ) ಸಹ ಇದೇ ರೀತಿ ಹೇಳುತ್ತಾರೆ. ಇವರೂ ಸಹ ದೇಹದಲ್ಲಿರುವ ಆತ್ಮವನ್ನೇ ನೋಡುತ್ತಾರೆ ಆದ್ದರಿಂದ ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ನೋಡಿ, ನೀವು ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇದು ಬಹಳ ಭಾರಿ ಪದವಿಯಾಗಿದೆ ಅಂದಾಗ ಅದೇರೀತಿ ಪುರುಷಾರ್ಥವನ್ನೂ ಮಾಡಬೇಕಾಗಿದೆ. ತಂದೆಯೂ ಸಹ ತಿಳಿಯುತ್ತಾರೆ - ಕಲ್ಪದ ಹಿಂದಿನ ತರಹ ಎಲ್ಲರ ಪುರುಷಾರ್ಥವು ನಡೆಯುವುದು. ಕೆಲವರು ರಾಜ-ರಾಣಿಯಾಗುತ್ತಾರೆ, ಕೆಲವರು ಪ್ರಜೆಗಳಲ್ಲಿ ಬರುತ್ತಾರೆ ಅಂದಾಗ ಯಾವಾಗ ಇಲ್ಲಿ ಕುಳಿತು ಯೋಗವನ್ನು ಮಾಡಿಸುತ್ತೀರೋ ಆಗ ತಮ್ಮನ್ನು ಆತ್ಮನೆಂದು ತಿಳಿದು ಅನ್ಯರ ಭೃಕುಟಿಯಲ್ಲಿಯೂ ಸಹ ಆತ್ಮವನ್ನು ನೋಡುತ್ತಿದ್ದರೆ ಮತ್ತೆ ಅವರ ಸೇವೆ ಚೆನ್ನಾಗಿ ಆಗುವುದು. ಯಾರು ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳುವರೋ ಅವರು ಆತ್ಮವನ್ನೆ ನೋಡುತ್ತಿರುತ್ತಾರೆ. ಈಗ ಇದನ್ನು ಹೆಚ್ಚು-ಹೆಚ್ಚು ಅಭ್ಯಾಸ ಮಾಡಿ. ಅರೆ! ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಸ್ವಲ್ಪ ಪರಿಶ್ರಮ ಪಡಬೇಕಲ್ಲವೆ. ಈಗ ಆತ್ಮಗಳಿಗಾಗಿ ಇದೇ ಪರಿಶ್ರಮವಾಗಿದೆ - ಈ ಆತ್ಮಿಕ ಜ್ಞಾನವು ಒಂದೇ ಬಾರಿ ಸಿಗುತ್ತದೆ ಮತ್ತೆಂದೂ ಸಿಗುವುದಿಲ್ಲ. ಕಲಿಯುಗದಲ್ಲಾಗಲಿ, ಸತ್ಯಯುಗದಲ್ಲಾಗಲಿ ಸಿಗುವುದಿಲ್ಲ. ಕೇವಲ ಸಂಗಮಯುಗದಲ್ಲಿ ಅದರಲ್ಲಿಯೂ ಬ್ರಾಹ್ಮಣರಿಗೇ ಸಿಗುತ್ತದೆ. ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ. ಯಾವಾಗ ಬ್ರಾಹ್ಮಣರಾಗುವಿರೋ ಆಗ ದೇವತೆಗಳಾಗುತ್ತೀರಿ. ಬ್ರಾಹ್ಮಣರೇ ಆಗಲಿಲ್ಲವೆಂದರೆ ಹೇಗೆ ದೇವತೆಗಳಾಗುತ್ತೀರಿ? ಈ ಸಂಗಮಯುಗದಲ್ಲಿಯೇ ಈ ಪರಿಶ್ರಮ ಪಡುತ್ತೀರಿ, ಮತ್ತ್ಯಾವ ಸಮಯದಲ್ಲಿಯೂ ತಮ್ಮನ್ನು ಆತ್ಮನೆಂದು ತಿಳಿದು ಅನ್ಯರನ್ನು ಆತ್ಮನೆಂದು ತಿಳಿದು ಅವರಿಗೆ ಜ್ಞಾನ ಕೊಡಿ ಎಂದು ಹೇಳುವುದಿಲ್ಲ. ತಂದೆಯು ಏನನ್ನು ತಿಳಿಸುವರೋ ಅದನ್ನು ವಿಚಾರ ಸಾಗರ ಮಂಥನ ಮಾಡಿ. ಪರಿಶೀಲನೆ ಮಾಡಿಕೊಳ್ಳಿ - ಇದು ಸರಿಯೇ? ಇದು ನಮಗೆ ಲಾಭದ ಮಾತಾಗಿದೆಯೇ? ಆಗ ತಂದೆಯ ಯಾವ ಶಿಕ್ಷಣವಿದೆಯೋ ಅದನ್ನು ನಮ್ಮ ಸಹೋದರರಿಗೆ ಕೊಡಬೇಕಾಗಿದೆ. ಸ್ತ್ರೀಯರಿಗೂ ಕೊಡಬೇಕು ಮತ್ತು ಪುರುಷರಿಗೂ ಕೊಡಬೇಕೆಂದು ಅಭ್ಯಾಸವಾಗಿ ಬಿಡುವುದು. ವಾಸ್ತವದಲ್ಲಿ ಜ್ಞಾನವನ್ನು ಆತ್ಮಗಳಿಗೇ ತಿಳಿಸಲಾಗುತ್ತದೆ. ಆತ್ಮವೇ ಸ್ತ್ರೀ, ಆತ್ಮವೇ ಪುರುಷನಾಗಿದೆ. ಸಹೋದರ-ಸಹೋದರಿಯಾಗಿದೆ.

ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಜ್ಞಾನವನ್ನು ಕೊಡುತ್ತೇನೆ. ನಾನು ಮಕ್ಕಳ ಕಡೆ ಅರ್ಥಾತ್ ಆತ್ಮಗಳನ್ನು ನೋಡುತ್ತೇನೆ ಮತ್ತು ಆತ್ಮಗಳೂ ಸಹ ತಿಳಿದುಕೊಳ್ಳುತ್ತೀರಿ - ನಮಗೆ ಪರಮಾತ್ಮ ತಂದೆಯು ಜ್ಞಾನ ಕೊಡುತ್ತಾರೆ. ಇವರು ಆತ್ಮಾಭಿಮಾನಿಯಾಗಿದ್ದಾರೆಂದು ಇದಕ್ಕೇ ಹೇಳಲಾಗುತ್ತದೆ ಮತ್ತು ಪರಮಾತ್ಮನ ಜೊತೆ ಆತ್ಮದ ಜ್ಞಾನದ ವಾರ್ತಾಲಾಪವೆಂದೂ ಹೇಳಲಾಗುತ್ತದೆ. ತಂದೆಯು ಈ ಶಿಕ್ಷಣ ಕೊಡುತ್ತಾರೆ - ಯಾರೇ ಹೊಸಬರು ಬಂದರೆ ಅವರಿಗೂ ಸಹ ತಮ್ಮನ್ನು ಆತ್ಮನೆಂದು ತಿಳಿದು ಆ ಆತ್ಮಕ್ಕೆ ತಂದೆಯ ಪರಿಚಯ ಕೊಡಬೇಕಾಗಿದೆ. ಆತ್ಮದಲ್ಲಿ ಜ್ಞಾನವಿದೆ, ಶರೀರದಲ್ಲಲ್ಲ ಅಂದಾಗ ಅವರೂ ಸಹ ಆತ್ಮನೆಂದೇ ತಿಳಿದು ಜ್ಞಾನ ಕೊಡಬೇಕು, ಇದರಿಂದ ಅವರಿಗೂ ಇಷ್ಟವಾಗುವುದು. ಹೀಗೆ ತಿಳಿಸುವುದೆಂದರೆ ಹೇಗೆ ನಿಮ್ಮ ಬಾಯಲ್ಲಿ ಜ್ಞಾನದ ಹೊಳಪಿದೆ ಎಂದರ್ಥ. ಈ ಜ್ಞಾನದ ಖಡ್ಗದಲ್ಲಿ ಹೊಳಪು ತುಂಬುವುದು ಏಕೆಂದರೆ ಆತ್ಮಾಭಿಮಾನಿಯಾಗುತ್ತೀರಲ್ಲವೆ ಅಂದಾಗ ಇದನ್ನೂ ಅಭ್ಯಾಸ ಮಾಡಿ ನೋಡಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ಸರಿಯೇ ಎಂದು ನಿರ್ಣಯ ಮಾಡಿ ಮತ್ತು ಮಕ್ಕಳಿಗೂ ಸಹ ಇದೇನು ಹೊಸ ಮಾತಲ್ಲ ಏಕೆಂದರೆ ತಂದೆಯು ಬಹಳ ಸಹಜ ಮಾಡಿ ತಿಳಿಸುತ್ತಾರೆ. ಚಕ್ರವನ್ನು ಸುತ್ತಿದಿರಿ, ಈಗ ನಾಟಕವು ಪೂರ್ಣವಾಗುತ್ತದೆ. ತಂದೆಯ ನೆನಪಿನಲ್ಲಿರುತ್ತೀರಿ. ತಮೋಪ್ರಧಾನರಿಂದ ಸತೋಪ್ರಧಾನರಾಗಿ, ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ ಮತ್ತೆ ಅದೇ ರೀತಿಯಾಗಿ ಏಣಿಯನ್ನು ಕೆಳಗಿಳಿಯುತ್ತೀರಿ. ಹೀಗೆ ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ. ಪ್ರತೀ 5000 ವರ್ಷಗಳ ನಂತರ ನಾನು ಬರಬೇಕಾಗುತ್ತದೆ. ಡ್ರಾಮಾದ ಯೋಜನೆಯನುಸಾರ ನಾನು ಬಂಧಿತನಾಗಿದ್ದೇನೆ. ಬಂದು ಮಕ್ಕಳಿಗೆ ಬಹಳ ಸಹಜ ನೆನಪಿನ ಯಾತ್ರೆಯನ್ನು ಕಲಿಸುತ್ತೇನೆ. ತಂದೆಯ ನೆನಪಿನಲ್ಲಿ ಅಂತ್ಯಮತಿ ಸೋ ಗತಿಯಾಗುವುದು, ಇದು ಈ ಸಮಯಕ್ಕಾಗಿಯೇ ಇದೆ. ಇದು ಅಂತ್ಯಕಾಲವಾಗಿದೆ. ಈಗ ಈ ಸಮಯದಲ್ಲಿ ತಂದೆಯು ಕುಳಿತು ಯುಕ್ತಿಯನ್ನು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ಸದ್ಗತಿಯಾಗಿ ಬಿಡುವುದು. ಈ ವಿದ್ಯೆಯಿಂದ ನಾನು ಈ ರೀತಿಯಾಗುತ್ತೇನೆ, ದೇವತೆಯಾಗುತ್ತೇನೆ ಎಂದು ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ. ನಾನು ಹೋಗಿ ಹೊಸ ಪ್ರಪಂಚದಲ್ಲಿ ದೇವಿ-ದೇವತೆಯಾಗುತ್ತೇನೆ ಎಂಬುದು ಈ ಬ್ರಹ್ಮಾರವರಲ್ಲಿಯೂ ಇದೆ. ಇದೇನು ಹೊಸ ಮಾತಲ್ಲ. ತಂದೆಯು ಪದೇ-ಪದೇ ಹೇಳುತ್ತಾರೆ - ನತಿಂಗ್ ನ್ಯೂ. ಇಲ್ಲಂತೂ ಏಣಿಯನ್ನು ಹತ್ತಬೇಕು ಮತ್ತು ಇಳಿಯಬೇಕಾಗಿದೆ. ಜಿನ್ಹ್ನ ಕಥೆಯಿದೆಯಲ್ಲವೆ. ಜಿನ್ಹ್ನಿಗೆ ಹತ್ತುವ ಮತ್ತು ಇಳಿಯುವ ಕೆಲಸ ಕೊಡಲಾಯಿತು. ಈ ನಾಟಕವೇ ಹತ್ತುವ ಮತ್ತು ಇಳಿಯವುದಾಗಿದೆ. ನೆನಪಿನ ಯಾತ್ರೆಯಿಂದ ಬಹಳ ಶಕ್ತಿಶಾಲಿಗಳಾಗಿ ಬಿಡುತ್ತೀರಿ. ಆದ್ದರಿಂದ ತಂದೆಯು ಮಕ್ಕಳಿಗೆ ಭಿನ್ನ-ಭಿನ್ನ ರೀತಿಯಿಂದ ಕಲಿಸಿ ಕೊಡುತ್ತಾರೆ. ಮಕ್ಕಳೇ, ಈಗ ಆತ್ಮಾಭಿಮಾನಿಯಾಗಿ. ಎಲ್ಲರೂ ಈಗ ಹಿಂತಿರುಗಿ ಹೋಗಬೇಕಾಗಿದೆ. ನೀವಾತ್ಮರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಭಾರತವಾಸಿಗಳೇ ಸತೋ, ರಜೋ, ತಮೋ ಆಗುತ್ತೀರಿ. ಮತ್ತ್ಯಾವುದೇ ಖಂಡದವರಿಗೆ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಂದು ಹೇಳುವುದಿಲ್ಲ. ತಂದೆಯು ಬಂದು ತಿಳಿಸಿದ್ದಾರೆ – ಸೃಷ್ಟಿ ನಾಟಕದಲ್ಲಿ ಪ್ರತಿಯೊಬ್ಬರ ಪಾತ್ರವು ತನ್ನತನ್ನದೇ ಆಗಿದೆ. ಆತ್ಮವು ಎಷ್ಟು ಸೂಕ್ಷ್ಮವಾಗಿದೆ! ಇಷ್ಟು ಸೂಕ್ಷ್ಮ ಆತ್ಮದಲ್ಲಿ ಈ ಅವಿನಾಶಿ ಪಾತ್ರವು ಅಡಕವಾಗಿದೆ ಎಂಬುದು ವಿಜ್ಞಾನಿಗಳಿಗೆ ಅರ್ಥವಾಗುವುದೇ ಇಲ್ಲ. ಇದು ಎಲ್ಲದಕ್ಕಿಂತ ಅದ್ಭುತ ಮಾತಾಗಿದೆ. ಇಷ್ಟು ಚಿಕ್ಕ ಆತ್ಮವು ಎಷ್ಟು ದೊಡ್ಡ ಪಾತ್ರವನ್ನು ಅಭಿನಯಿಸುತ್ತದೆ. ಆತ್ಮವೂ ಅವಿನಾಶಿ, ಈ ನಾಟಕವೂ ಅವಿನಾಶಿಯಾಗಿದೆ ಮತ್ತು ಮಾಡಿ-ಮಾಡಲ್ಪಟ್ಟಿದೆ. ಇದು ಯಾವಾಗ ಆಯಿತು ಎಂದು ಯಾರೂ ಹೇಳುವಂತಿಲ್ಲ. ಇದು ಸೃಷ್ಟಿಯಾಗಿದೆ. ಈ ಜ್ಞಾನವು ಬಹಳ ಅದ್ಭುತವಾಗಿದೆ. ಇದನ್ನು ಎಂದೂ ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಜ್ಞಾನವನ್ನು ತಿಳಿಸುವ ಶಕ್ತಿಯು ಯಾರಿಗೂ ಇಲ್ಲ.

ತಂದೆಯು ಮಕ್ಕಳಿಗೆ ದಿನ-ಪ್ರತಿದಿನ ತಿಳಿಸುತ್ತಲೇ ಇರುತ್ತಾರೆ. ಈಗ ಅಭ್ಯಾಸ ಮಾಡಿ - ನಾನು ನಮ್ಮ ಸಹೋದರ ಆತ್ಮನಿಗೆ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಲು ಜ್ಞಾನವನ್ನು ಕೊಡುತ್ತೇನೆ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ಜ್ಞಾನ ಕೊಡುತ್ತೇನೆ ಏಕೆಂದರೆ ಎಲ್ಲಾ ಆತ್ಮರಿಗೂ ಹಕ್ಕಿದೆ. ತಂದೆಯು ಎಲ್ಲಾ ಆತ್ಮರಿಗೆ ತಮ್ಮ-ತಮ್ಮ ಶಾಂತಿ-ಸುಖದ ಆಸ್ತಿಯನ್ನು ಕೊಡಲು ಬರುತ್ತಾರೆ. ನಾವು ರಾಜಧಾನಿಯಲ್ಲಿದ್ದಾಗ ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಕೊನೆಯಲ್ಲಿ ಜಯ ಜಯಕಾರವಾಗುವುದು. ಇಲ್ಲಿ ಸುಖವೇ ಸುಖವಿರುವುದು ಆದ್ದರಿಂದ ತಂದೆಯು ತಿಳಿಸುತ್ತಾರೆ - ಪಾವನರಾಗಬೇಕಾಗಿದೆ. ಎಷ್ಟೆಷ್ಟು ನೀವು ಪವಿತ್ರರಾಗುತ್ತೀರೋ ಅಷ್ಟು ನಿಮ್ಮಲ್ಲಿ ಆಕರ್ಷಣೆಯಿರುತ್ತದೆ. ಯಾವಾಗ ನೀವು ಸಂಪೂರ್ಣ ಪವಿತ್ರರಾಗಿ ಬಿಡುತ್ತೀರೋ ಆಗ ಸಿಂಹಾಸನಾಧಿಕಾರಿಗಳಾಗುತ್ತೀರಿ ಆದ್ದರಿಂದ ಈ ಅಭ್ಯಾಸ ಮಾಡಿ. ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ತೆಗೆದು ಹಾಕಿದೆವು, ಈ ರೀತಿ ತಿಳಿಯಬೇಡಿ. ಈ ಅಭ್ಯಾಸವಿಲ್ಲದೆ ನೀವು ನಡೆಯಲು ಸಾಧ್ಯವಿಲ್ಲ. ತಮ್ಮನ್ನು ಆತ್ಮನೆಂದು ತಿಳಿಯಿರಿ. ಅವರೂ ಸಹ ಆತ್ಮ ಸಹೋದರನೆಂದು ತಿಳಿದು ತಿಳಿಸಿಕೊಡಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಆತ್ಮಿಕ ತಂದೆಯೇ ಕೊಡುವವರಾಗಿದ್ದಾರೆ. ಎಲ್ಲಾ ಮಕ್ಕಳು ಪೂರ್ಣ ಆತ್ಮಾಭಿಮಾನಿಯಾಗಿ ಬಿಡುತ್ತೀರಿ, ಪವಿತ್ರರಾಗಿ ಬಿಡುತ್ತೀರಿ ಆಗ ಹೋಗಿ ಸತ್ಯಯುಗೀ ಸಿಂಹಾಸನಕ್ಕೆ ಮಾಲೀಕರಾಗುತ್ತೀರಿ. ಯಾರು ಪವಿತ್ರವಾಗುವುದಿಲ್ಲವೋ ಅವರು ಮಾಲೆಯಲ್ಲಿಯೂ ಬರುವುದಿಲ್ಲ. ಮಾಲೆಗೂ ಯಾವುದೋ ಅರ್ಥವಿರಬೇಕಲ್ಲವೆ. ಮಾಲೆಯ ರಹಸ್ಯವನ್ನು ಬೇರೆ ಯಾರೂ ತಿಳಿದುಕೊಂಡಿಲ್ಲ. ಮಾಲೆಯನ್ನು ಏಕೆ ಸ್ಮರಣೆ ಮಾಡುತ್ತಾರೆ? ಏಕೆಂದರೆ ತಂದೆಗೆ ಬಹಳ ಸಹಯೋಗ ಕೊಟ್ಟಿದ್ದಾರೆ ಅಂದಮೇಲೆ ಅವರ ಸ್ಮರಣೆ ಏಕೆ ನಡೆಯಬಾರದು! ನೀವು ಎಲ್ಲರಿಂದ ಸ್ಮರಣೆ ಮಾಡಲ್ಪಡುತ್ತೀರಿ. ನಿಮ್ಮ ಪೂಜೆಯೂ ಆಗುತ್ತದೆ ಮತ್ತು ನಿಮ್ಮ ಶರೀರಕ್ಕೂ ಪೂಜೆ ನಡೆಯುತ್ತದೆ. ನನಗಂತೂ ಕೇವಲ ಆತ್ಮಕ್ಕೆ ಪೂಜೆಯಾಗುತ್ತದೆ. ನೀವು ನನಗಿಂತಲೂ ಹೆಚ್ಚು ಡಬಲ್ ಪೂಜೆಗೆ ಅರ್ಹರಾಗುತ್ತೀರಿ. ನೀವು ಯಾವಾಗ ದೇವತೆಗಳಾಗುತ್ತೀರೋ ಆಗ ದೇವತೆಗಳ ಪೂಜೆ ಮಾಡುತ್ತಾರೆ ಆದ್ದರಿಂದ ಪೂಜೆಯಲ್ಲಿಯೂ ಮುಂದೆ, ನೆನಪಾರ್ಥದಲ್ಲಿಯೂ ಮುಂದೆ ಮತ್ತು ರಾಜ್ಯಭಾಗ್ಯದಲ್ಲಿಯೂ ಮುಂದೆ ಹೋಗುತ್ತೀರಿ. ನೋಡಿ, ನಾನು ನಿಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತೇನೆ! ನೋಡಿ, ಹೇಗೆ ಮಕ್ಕಳು ಪ್ರಿಯರಾಗುತ್ತಾರೆ, ಬಹಳ ಪ್ರೀತಿಯಿರುತ್ತದೆ ಎಂದರೆ ಮಕ್ಕಳನ್ನು ಹೆಗಲ ಮೇಲೆ, ತಲೆಯ ಮೇಲೂ ಕೂರಿಸಿಕೊಳ್ಳುತ್ತಾರೆ. ತಂದೆಯು ಒಮ್ಮೆಲೆ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗಾಯನ ಮತ್ತು ಪೂಜೆಗೆ ಯೋಗ್ಯರಾಗಲು ಆತ್ಮೀಯರಾಗಬೇಕಾಗಿದೆ. ಆತ್ಮವನ್ನು ಪವಿತ್ರ ಮಾಡಿಕೊಳ್ಳಬೇಕಾಗಿದೆ. ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ.

2. ಮನ್ಮನಾಭವದ ಅಭ್ಯಾಸದ ಮೂಲಕ ಅಪಾರ ಖುಷಿಯಲ್ಲಿರಬೇಕಾಗಿದೆ. ಸ್ವಯಂನ್ನು ಆತ್ಮನೆಂದು ತಿಳಿದು ಆತ್ಮನೊಂದಿಗೆ ಮಾತನಾಡಬೇಕಾಗಿದೆ. ದೃಷ್ಟಿಯನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಮಾಸ್ಟರ್ ರಚೈತನ ಸ್ಟೇಜ್ ಮುಖಾಂತರ ಆಪತ್ತುಗಳಲ್ಲಿಯೂ ಸಹಾ ಮನೋರಂಜನೆಯ ಅನುಭವವನ್ನು ಮಾಡುವಂತಹ ಸಂಪೂರ್ಣ ಯೋಗಿ ಭವ.

ಮಾಸ್ಟರ್ ರಚೈತನ ಸ್ಟೇಜ್ ಮೇಲೆ ಸ್ಥಿತ ಆಗುವುದರಿಂದ ದೊಡ್ಡದರಲ್ಲಿ ದೊಡ್ಡ ಆಪತ್ತು ಒಂದು ಮನೋರಂಜನೆಯ ದೃಶ್ಯದ ಅನುಭವವಾಗುವುದು. ಹೇಗೆ ಮಹಾವಿನಾಶದ ಆಪತ್ತನ್ನೂ ಸಹಾ ಸ್ವರ್ಗದ ಧ್ವಾರ ತೆಗೆಯುವ ಸಾಧನ ಎಂದು ಹೇಳುವಿರಿ. ಆ ರೀತಿ ಯಾವುದೇ ಪ್ರಕಾರದ ಚಿಕ್ಕ-ದೊಡ್ಡ ಸಮಸ್ಯೆ ಹಾಗೂ ಆಪತ್ತುಗಳಲ್ಲಿಯೂ ಮನೋರಂಜನೆಯ ರೂಪ ಕಂಡು ಬರುವುದು, ಹಾಯ್-ಹಾಯ್ ಎನ್ನುವ ಬದಲು ಓಹೋ ಶಬ್ಧ ಬರಲಿ-ದುಃಖವೂ ಸಹಾ ಸುಖದ ರೂಪದಲ್ಲಿ ಅನುಭವವಾಗಲಿ ದುಃಖ-ಸುಖದ ಜ್ಞಾನ ಇದ್ದರೂ ಸಹಾ ಅದರ ಫ್ರಭಾವದಲ್ಲಿ ಬರಬಾರದು, ದುಃಖವನ್ನೂ ಸಹಾ ಬಲಿಹಾರಿಯಾಗಿ ಸುಖದ ದಿನಗಳು ಬರುವುದಿದೆ ಎಂದು ತಿಳಿಯಿರಿ - ಆಗ ಹೇಳಲಾಗುವುದು ಸಂಪೂರ್ಣ ಯೋಗಿ.

ಸ್ಲೋಗನ್:
ಹೃದಯ ಸಿಂಹಾಸನವನ್ನು ಬಿಟ್ಟು ಸಾಧಾರಣ ಸಂಕಲ್ಪ ಮಾಡುವುದು ಅರ್ಥಾತ್ ಧರಣಿಯ ಮೇಲೆ ಪಾದವನ್ನಿಡುವುದು.

ಅವ್ಯಕ್ತ ಸೂಚನೆ:- ಈಗ ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.

ಕರ್ಮ ಮಾಡುತ್ತಾ ತನು ಹಗುರ, ಮನಸ್ಸಿನ ಸ್ಥಿತಿಯು ಹಗುರ. ಕರ್ಮದ ಫಲಿತಾಂಶ ಮನಸ್ಸನ್ನು ಸೆಳೆಯಬಾರದು. ಎಷ್ಟೇ ಕಾರ್ಯವು ಹೆಚ್ಚುತ್ತರಲಿ ಅಷ್ಟೇ ಹಗುರತನವೂ ಹೆಚ್ಚುತ್ತಿರಲಿ. ಕರ್ಮ ತನ್ನ ಕಡೆ ಆಕರ್ಷಿತರನ್ನಾಗಿ ಮಾಡಬಾರದು. ಆದರೆ ಮಾಲೀಕರಾಗಿ ಕರ್ಮ ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ಮಾಡುವವರು ನಿಮಿತ್ತರಾಗಿ ಮಾಡುತ್ತಿದ್ದಾರೆ - ಈ ಅಭ್ಯಾಸವನ್ನು ಹೆಚ್ಚಿಸಿ ಆಗ ಸಂಪನ್ನ ಕರ್ಮಾತೀತ ಸಹಜವೇ ಆಗಿ ಬಿಡುತ್ತೀರಿ.