12.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಬಹಳ ದೊಡ್ಡ ವಜ್ರವ್ಯಾಪಾರಿಗಳಾಗಿದ್ದೀರಿ, ನೀವು ಅವಿನಾಶಿ ಜ್ಞಾನರತ್ನರೂಪಿ ವಜ್ರಗಳನ್ನು ಕೊಟ್ಟು ಎಲ್ಲರನ್ನೂ ಸಾಹುಕಾರರನ್ನಾಗಿ ಮಾಡಬೇಕಾಗಿದೆ”

ಪ್ರಶ್ನೆ:
ತಮ್ಮ ಜೀವನವನ್ನು ವಜ್ರಸಮಾನ ಮಾಡಿಕೊಳ್ಳಲು ಯಾವ ಮಾತಿನ ಮೇಲೆ ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕು?

ಉತ್ತರ:
ಸಂಗದಿಂದ ಸಂಭಾಲನೆ ಮಾಡಿಕೊಳ್ಳಬೇಕು. ಯಾರು ಜ್ಞಾನದ ಮಳೆಯನ್ನು ಚೆನ್ನಾಗಿ ಸುರಿಸುವರೋ ಅವರ ಸಂಗವನ್ನು ಮಕ್ಕಳು ಮಾಡಬೇಕಾಗಿದೆ. ಯಾರು ಸುರಿಸುವುದಿಲ್ಲವೋ ಅವರ ಸಂಗ ಮಾಡುವುದರಿಂದ ಲಾಭವಾದರೂ ಏನು! ಸಂಗದೋಷದ ಪ್ರಭಾವವು ಬಹಳ ಬೇಗ ಬೀರುತ್ತದೆ. ಕೆಲವರು ಅನ್ಯರ ಸಂಗದಿಂದ ವಜ್ರಸಮಾನರಾಗುತ್ತಾರೆ, ಇನ್ನೂ ಕೆಲವರು ಸಂಗದಿಂದ ಕಲ್ಲುಗಳಂತಾಗಿಬಿಡುತ್ತಾರೆ. ಯಾರು ಜ್ಞಾನವಂತರಿರುವರೋ ಅವರು ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ, ಮತ್ತು ಸಂಗದಿಂದ ತಮ್ಮ ಸಂಭಾಲನೆ ಮಾಡಿಕೊಳ್ಳುತ್ತಾರೆ ಅರ್ಥಾತ್ ರಕ್ಷಣೆ ಮಾಡಿಕೊಳ್ಳುತ್ತಾರೆ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳಿಗೆ ಇಡೀ ಸೃಷ್ಟಿ, ಇಡೀ ನಾಟಕವು ಬಹಳ ಚೆನ್ನಾಗಿ ಬುದ್ಧಿಯಲ್ಲಿ ನೆನಪಿದೆ. ಬುದ್ಧಿಯಲ್ಲಿ ವ್ಯತ್ಯಾಸದ ಅರಿವಿದೆ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠಾಚಾರಿಗಳು, ನಿರ್ವಿಕಾರಿಗಳು, ಪಾವನರಿದ್ದರು, ಸಾಹುಕಾರರಾಗಿದ್ದರು ಎಂಬುದೆಲ್ಲವೂ ಬುದ್ಧಿಯಲ್ಲಿ ಪಕ್ಕಾ ಇರಬೇಕು. ಈಗಂತೂ ಪ್ರಪಂಚವು ಭ್ರಷ್ಟಾಚಾರಿ, ವಿಕಾರಿ, ಪತಿತ ಮತ್ತು ಬಡರಾಷ್ಟ್ರವಾಗಿದೆ. ಈಗ ನೀವು ಮಕ್ಕಳು ಸಂಗಮಯುಗದಲ್ಲಿದ್ದೀರಿ, ನೀವು ಈ ತೀರದಿಂದ ಆ ತೀರಕ್ಕೆ ಹೋಗುತ್ತಿದ್ದೀರಿ. ಹೇಗೆ ನದಿ ಮತ್ತು ಸಾಗರದ ಮೇಳವಾಗುತ್ತದೆ, ಅದಕ್ಕೆ ಸಂಗಮವೆಂದು ಹೇಳುತ್ತಾರೆ. ಒಂದುಕಡೆ ಸಿಹಿನೀರು, ಇನ್ನೊಂದು ಕಡೆ ಉಪ್ಪುನೀರಿರುತ್ತದೆ, ಈಗ ಇದರ ಸಂಗಮವಾಗುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ನಂತರ ಈ ರೀತಿಯಾಗಿ ಚಕ್ರವು ಸುತ್ತುತ್ತಾ ಹೋಯಿತು. ಈಗ ಸಂಗಮವಾಗಿದೆ. ಕಲಿಯುಗದ ಅಂತ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ, ಇದಕ್ಕೆ ಕಾಡು ಎಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ಉದ್ಯಾನವನವೆಂದು ಹೇಳಲಾಗುತ್ತದೆ, ಈಗ ನೀವು ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ - ಈ ಸ್ಮೃತಿಯು ನೀವು ಮಕ್ಕಳಿಗಿರಬೇಕಾಗಿದೆ. ನಾವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇದನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕಾಗಿದೆ. 84 ಜನ್ಮಗಳ ಕಥೆಯಂತೂ ಸಾಮಾನ್ಯವಾಗಿದೆ, ಈಗ 84 ಜನ್ಮಗಳು ಮುಕ್ತಾಯವಾಯಿತೆಂಬುದನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಸತ್ಯಯುಗೀ ಹೂದೋಟದಲ್ಲಿ ಹೋಗುತ್ತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿ ಕಾತುರವಿದೆ. ನಮ್ಮ ಇನ್ನೊಂದು ಜನ್ಮವು ಇದೇ ಮೃತ್ಯುಲೋಕದಲ್ಲಾಗುವುದಿಲ್ಲ, ನಿಮ್ಮದು ಅಮರಲೋಕದಲ್ಲಿ ಜನ್ಮವಾಗುವುದು. ಶಿವತಂದೆಗೆ ಅಮರನಾಥನೆಂದೂ ಹೇಳುತ್ತಾರೆ, ಅವರು ನಮಗೆ ಅಮರಕಥೆಯನ್ನು ತಿಳಿಸುತ್ತಿದ್ದಾರೆ, ಅಲ್ಲಿ ನಾವು ಶರೀರದಲ್ಲಿದ್ದರೂ ಸಹ ಅಮರರಾಗಿರುತ್ತೇವೆ. ಸಮಯದಲ್ಲಿ ತನ್ನ ಶರೀರವನ್ನು ಖುಷಿಯಿಂದ ಬಿಡುತ್ತೇವೆ, ಅದಕ್ಕೆ ಮೃತ್ಯುಲೋಕವೆಂದು ಹೇಳಲಾಗುವುದಿಲ್ಲ. ನೀವು ಯಾರಿಗೆ ತಿಳಿಸಿದರೂ ಸಹ ಅವಶ್ಯವಾಗಿ ಇವರಲ್ಲಿ ಸಂಪೂರ್ಣ ಜ್ಞಾನವಿದೆಯೆಂದು ತಿಳಿಯುತ್ತಾರೆ. ಸೃಷ್ಟಿಯ ಆದಿ ಮತ್ತು ಅಂತ್ಯವಂತೂ ಇದೆಯಲ್ಲವೆ. ಚಿಕ್ಕಮಗುವೂ ಸಹ ಬೆಳೆದಂತೆ ಯುವಕ ಮತ್ತು ವೃದ್ಧನಾಗುತ್ತಾನೆ ನಂತರ ಅಂತ್ಯವು ಬಂದುಬಿಡುತ್ತದೆ. ಅದಾದನಂತರ ಮತ್ತೆ ಶರೀರವನ್ನು ಬಿಟ್ಟುಹೋಗಿ ಮಗುವಾಗುತ್ತಾನೆ, ಅದೇ ರೀತಿ ಸೃಷ್ಟಿಯೂ ಸಹ ಹೊಸದಾಗುತ್ತದೆ ನಂತರ ಸ್ವಲ್ಪ ಹಳೆಯದು, ಅರ್ಧ ಹಳೆಯದು ನಂತರ ಸಂಪೂರ್ಣವಾಗಿ ಹಳೆಯದಾಗಿಬಿಡುತ್ತದೆ ಪುನಃ ಹೊಸದಾಗುತ್ತದೆ, ಇವೆಲ್ಲಾ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈ ರೀತಿಯ ಚರ್ಚೆಯನ್ನು ಯಾರೂ ಮಾಡಲು ಸಾಧ್ಯವಿಲ್ಲ. ನೀವು ಬ್ರಾಹ್ಮಣರ ವಿನಃ ಮತ್ತ್ಯಾರಿಗೂ ಆತ್ಮಿಕ ಜ್ಞಾನವು ಸಿಗುವುದಿಲ್ಲ. ಬ್ರಾಹ್ಮಣ ವರ್ಣದಲ್ಲಿ ಬಂದಾಗಲೇ ಜ್ಞಾನವನ್ನು ಕೇಳುವರು ಆದ್ದರಿಂದಲೇ ಕೇವಲ ಬ್ರಾಹ್ಮಣರಿಗೇ ಗೊತ್ತಿದೆ. ಬ್ರಾಹ್ಮಣರಲ್ಲಿಯೂ ನಂಬರ್ವಾರ್ ಇದ್ದೀರಿ, ಕೆಲವರು ಯಥಾರ್ಥವಾಗಿ ತಿಳಿಸುತ್ತಾರೆ, ಕೆಲವರು ತಿಳಿಸುವುದಿಲ್ಲ ಅಂದಾಗ ಅವರಿಗೆ ಏನೂ ಸಿಗುವುದಿಲ್ಲ. ವಜ್ರವ್ಯಾಪಾರಿಗಳ ಬಳಿಯೂ ನೋಡುತ್ತೀರಿ, ಕೆಲವರ ಬಳಿ ಕೋಟ್ಯಾಂತರ ರೂಪಾಯಿಗಳ ವಸ್ತುಗಳಿರುತ್ತವೆ, ಇನ್ನು ಕೆಲವರ ಬಳಿಯಂತೂ 10 ಸಾವಿರ ರೂಪಾಯಿಗಳ ವಸ್ತುಗಳು ಸಹ ಇರುವುದಿಲ್ಲ. ನಿಮ್ಮಲ್ಲಿಯೂ ಹಾಗೆಯೆ. ಹೇಗೆ ನೋಡಿ, ಈ ಜಾನಕಿ ಇದ್ದಾರೆ, ಇವರು ಬಹಳ ಒಳ್ಳೆಯ ವಜ್ರವ್ಯಾಪಾರಿಗಳಾಗಿದ್ದಾರೆ, ಇವರ ಬಳಿ ಎಷ್ಟು ಅಮೂಲ್ಯರತ್ನಗಳಿವೆ. ಅನ್ಯರಿಗೂ ನೀಡಿ ಒಳ್ಳೆಯ ಸಾಹುಕಾರರನ್ನಾಗಿ ಮಾಡುತ್ತಾರೆ. ಯಾರಾದರೂ ಚಿಕ್ಕ ವ್ಯಾಪಾರಿಯಾಗಿದ್ದರೆ ಹೆಚ್ಚಿನದಾಗಿ ಕೊಡುವುದಿಲ್ಲವೆಂದರೆ ಅವರ ಪದವಿಯೂ ಕಡಿಮೆಯಾಗುತ್ತದೆ. ನೀವೆಲ್ಲರೂ ವಜ್ರವ್ಯಾಪಾರಿಗಳಾಗಿದ್ದೀರಿ, ಇವು ಅವಿನಾಶಿ ಜ್ಞಾನರತ್ನಗಳ ವಜ್ರಗಳಾಗಿವೆ. ಯಾರ ಬಳಿ ಒಳ್ಳೆಯ ರತ್ನಗಳಿವೆಯೋ ಅವರೂ ಸಾಹುಕಾರರಾಗಿದ್ದಾರೆ, ಅನ್ಯರನ್ನೂ ಸಾಹುಕಾರರನ್ನಾಗಿ ಮಾಡುತ್ತಾರೆ. ಎಲ್ಲರೂ ಒಳ್ಳೆಯ ವ್ಯಾಪಾರಿಗಳಿರುತ್ತಾರೆಂದಲ್ಲ. ಒಳ್ಳೊಳ್ಳೆಯ ವ್ಯಾಪಾರಿಗಳನ್ನು ದೊಡ್ಡ-ದೊಡ್ಡ ಸೇವಾಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ. ದೊಡ್ಡವ್ಯಕ್ತಿಗಳಿಗೆ ಒಳ್ಳೆಯ ವಜ್ರಗಳನ್ನು ಕೊಡಲಾಗುತ್ತದೆ. ದೊಡ್ದ-ದೊಡ್ದ ಅಂಗಡಿಗಳಲ್ಲಿ ಅನುಭವಿಗಳಿರುತ್ತಾರೆ. ತಂದೆಗೂ ಸಹ ರತ್ನಾಗರ, ಸೌಧಾಗರನೆಂದು ಹೇಳಲಾಗಿದೆ. ರತ್ನಗಳ ವ್ಯಾಪಾರ ಮಾಡುತ್ತಾರೆ ಮತ್ತು ಜಾದುಗರನೂ ಆಗಿದ್ದಾರೆ ಏಕೆಂದರೆ ಅವರ ಬಳಿಯೇ ದಿವ್ಯದೃಷ್ಟಿಯ ಬೀಗದ ಕೈ ಇದೆ. ಯಾರಾದರೂ ನೌಧಾಭಕ್ತಿ ಮಾಡುತ್ತಾರೆಂದರೆ ಅವರಿಗೆ ಸಾಕ್ಷಾತ್ಕಾರವಾಗಿಬಿಡುತ್ತದೆ. ಇಲ್ಲಿ ಆ ಮಾತಿಲ್ಲ, ಇಲ್ಲಂತೂ ಸಹಜವಾಗಿ ಮನೆಯಲ್ಲಿ ಕುಳಿತಿದ್ದಂತೆಯೇ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ದಿನ-ಪ್ರತಿದಿನ ಸಹಜವಾಗುತ್ತಾ ಹೋಗುತ್ತದೆ. ಕೆಲವರಿಗೆ ಬ್ರಹ್ಮನ ಮತ್ತು ಕೃಷ್ಣನ ಸಾಕ್ಷಾತ್ಕಾರವೂ ಆಗುತ್ತದೆ. ಬ್ರಹ್ಮನ ಬಳಿ ಹೋಗಿ, ಅವರ ಬಳಿ ರಾಜಕುಮಾರರಾಗುವ ವಿದ್ಯೆಯನ್ನು ಓದಿ ಎಂದು ತಿಳಿಸುತ್ತಾರೆ. ಈ ಪವಿತ್ರ ರಾಜಕುಮಾರ-ಕುಮಾರಿಯರು ಮೊದಲಿನಿಂದಲೂ ನಡೆದುಬಂದಿದ್ದಾರಲ್ಲವೆ. ರಾಜಕುಮಾರರಿಗೆ ಪವಿತ್ರರೆಂದು ಹೇಳಬಹುದಾಗಿದೆ. ಪವಿತ್ರತೆಯಿಂದ ಜನ್ಮವಾಗುತ್ತದೆಯಲ್ಲವೆ. ಪತಿತರಿಗೆ ಭ್ರಷ್ಟಾಚಾರಿಗಳೆಂದು ಹೇಳುತ್ತಾರೆ. ಈಗ ಪತಿತರಿಂದ ಪಾವನರಾಗಬೇಕಾಗಿದೆ ಎಂಬುದು ಬುದ್ಧಿಯಲ್ಲಿರಬೇಕು. ಇದನ್ನು ಅನ್ಯರಿಗೂ ತಿಳಿಸಿಕೊಡಿ, ಇದರಿಂದ ಇವರು ಬಹಳ ಬುದ್ಧಿವಂತರಾಗಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ. ಆಗ ನೀವು ತಿಳಿಸಿ, ನಮ್ಮ ಬಳಿ ಯಾವುದೇ ಶಾಸ್ತ್ರಗಳ ಜ್ಞಾನವಿಲ್ಲ, ಇದು ಆತ್ಮಿಕ ಜ್ಞಾನವಾಗಿದೆ, ಯಾವುದನ್ನು ಆತ್ಮಿಕ ತಂದೆಯು ತಿಳಿಸಿಕೊಡುತ್ತಾರೆ. ಇವರು ತ್ರಿಮೂರ್ತಿ ಬ್ರಹ್ಮಾ-ವಿಷ್ಣು-ಶಂಕರನಾಗಿದ್ದಾರೆ. ಇವರು ರಚನೆಯಾಗಿದ್ದಾರೆ. ರಚಯಿತ ಒಬ್ಬರೇ ತಂದೆಯಾಗಿದ್ದಾರೆ. ಹೇಗೆ ಇಲ್ಲಿ ಹದ್ದಿನ ರಚಯಿತರಿರುತ್ತಾರೆ, ಇವರು ಬೇಹದ್ದಿನ ತಂದೆ- ಬೇಹದ್ದಿನ ರಚಯಿತನಾಗಿದ್ದಾರೆ, ತಂದೆಯು ಕುಳಿತು ಓದಿಸುತ್ತಾರೆ ಅಂದಮೇಲೆ ಪರಿಶ್ರಮಪಡಬೇಕಾಗಿದೆ. ತಂದೆಯು ಈಗ ಸುಂದರ ಹೂಗಳನ್ನಾಗಿ ಮಾಡುತ್ತಾರೆ, ನೀವು ಈಶ್ವರೀಯ ಕುಲದವರಾಗಿದ್ದೀರಿ. ನಿಮ್ಮನ್ನು ತಂದೆಯು ಪವಿತ್ರರನ್ನಾಗಿ ಮಾಡುತ್ತಾರೆ. ಒಂದುವೇಳೆ ಅಪವಿತ್ರರಾಗುತ್ತೀರೆಂದರೆ ಕುಲಕಳಂಕಿತರಾಗುವಿರಿ. ತಂದೆಗೆ ಗೊತ್ತಿದೆಯಲ್ಲವೆ! ಮತ್ತೆ ಧರ್ಮರಾಜನ ಮೂಲಕ ಬಹಳ ಶಿಕ್ಷೆಗಳನ್ನು ಕೊಡಿಸುತ್ತಾರೆ. ತಂದೆಯ ಜೊತೆ ಧರ್ಮರಾಜನೂ ಇದ್ದಾರೆ, ಧರ್ಮರಾಜನ ಕರ್ತವ್ಯವು ಈಗ ಪೂರ್ಣವಾಗುತ್ತದೆ. ಸತ್ಯಯುಗದಲ್ಲಿ ಇರುವುದೇ ಇಲ್ಲ ಮತ್ತೆ ದ್ವಾಪರದಿಂದ ಆರಂಭವಾಗುತ್ತದೆ. ತಂದೆಯು ಕುಳಿತು ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ಇವರು ಹಿಂದಿನ ಜನ್ಮದಲ್ಲಿ ಇಂತಹ ಪಾಪಕರ್ಮಗಳನ್ನು ಮಾಡಿದ್ದಾರೆ, ಅದಕ್ಕೆ ಪ್ರತಿಯಾಗಿ ಇದನ್ನನುಭವಿಸುತ್ತಿದ್ದಾರೆಂದು ಹೇಳುತ್ತಾರಲ್ಲವೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ, ಅಲ್ಲಿ ಕೆಟ್ಟಕರ್ಮಗಳ ಹೆಸರೇ ಇರುವುದಿಲ್ಲ. ಇಲ್ಲಂತೂ ಒಳ್ಳೆಯದು-ಕೆಟ್ಟದ್ದು ಎರಡೂ ಇದೆ, ಸುಖ-ದುಃಖ ಎರಡೂ ಇವೆ ಆದರೆ ಸುಖವು ಬಹಳ ಕಡಿಮೆಯಿದೆ ಮತ್ತು ಸತ್ಯಯುಗದಲ್ಲಿ ದುಃಖದ ಹೆಸರೇ ಇರುವುದಿಲ್ಲ. ಸತ್ಯಯುಗದಲ್ಲಿ ದುಃಖವೆಲ್ಲಿಂದ ಬರುವುದು! ನೀವು ತಂದೆಯಿಂದ ಹೊಸಪ್ರಪಂಚದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ತಂದೆಯು ದುಃಖಹರ್ತ ಸುಖಕರ್ತನಾಗಿದ್ದಾರೆ, ದುಃಖವು ಯಾವಾಗಿನಿಂದ ಆರಂಭವಾಗುತ್ತದೆ, ಇದನ್ನು ಸಹ ನೀವು ತಿಳಿದುಕೊಂಡಿದ್ದೀರಿ. ಶಾಸ್ತ್ರಗಳಲ್ಲಿ ಕಲ್ಪದ ಆಯಸನ್ನೇ ಬಹಳ ಉದ್ದಗಲವಾಗಿ ಬರೆದುಬಿಟ್ಟಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪಕ್ಕಾಗಿ ತಮ್ಮ ದುಃಖಗಳು ದೂರವಾಗುತ್ತದೆ, ಸುಖವನ್ನು ಪಡೆಯುತ್ತೇವೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು ತಿಳಿಸಿಕೊಡುವುದು ಸಹ ಬಹಳ ಸಹಜವಾಗಿದೆ. ಇವೆಲ್ಲಾ ಮಾತುಗಳು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿರಲು ಸಾಧ್ಯವಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳಿರುವುದರಿಂದ ಎಲ್ಲಾ ಮಾತುಗಳು ಬುದ್ಧಿಯಿಂದ ಹೊರಟುಹೋಗುತ್ತದೆ.

ಈಗ ನೀವು ತಿಳಿದುಕೊಂಡಿದ್ದೀರಿ - ಇದು 5000 ವರ್ಷಗಳ ಚಕ್ರವಾಗಿದೆ, ಇದು ನೆನ್ನೆಯ ಮಾತಾಗಿದೆ ಯಾವಾಗ ಈ ಸೂರ್ಯವಂಶಿ, ಚಂದ್ರವಂಶಿಯರ ರಾಜ್ಯವಿತ್ತು. ಬ್ರಾಹ್ಮಣರ ದಿನವೆಂದು ಹೇಳುತ್ತಾರೆಯೇ ಹೊರತು ಶಿವತಂದೆಯ ದಿನವೆಂದು ಹೇಳುವುದಿಲ್ಲ. ಬ್ರಾಹ್ಮಣರ ದಿನ ಮತ್ತು ಬ್ರಾಹ್ಮಣರ ರಾತ್ರಿಯಾಗಿದೆ. ಬ್ರಾಹ್ಮಣರು ಮತ್ತೆ ಭಕ್ತಿಮಾರ್ಗದಲ್ಲಿಯೂ ನಡೆದುಬರುತ್ತಾರೆ. ಈಗ ಸಂಗಮವಾಗಿದೆ, ದಿನವೂ ಅಲ್ಲ ರಾತ್ರಿಯೂ ಅಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣರೇ ನಂತರ ದೇವತೆಗಳಾಗುತ್ತೇವೆ ಮತ್ತೆ ತ್ರೇತಾಯುಗದಲ್ಲಿ ಕ್ಷತ್ರಿಯರಾಗುತ್ತೇವೆ. ಇದನ್ನು ಬುದ್ಧಿಯಲ್ಲಿ ಪಕ್ಕಾ ನೆನಪಿಟ್ಟುಕೊಳ್ಳಿ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಶಾಸ್ತ್ರಗಳಲ್ಲಿ ಎಷ್ಟೊಂದು ಆಯಸ್ಸನ್ನು ಬರೆದಿದ್ದಾರೆ ಆದರೆ ನೀವು ಈ ಲೆಕ್ಕವನ್ನು ಎಲ್ಲಿಂದ ತಂದಿರಿ ಎಂದು ಮನುಷ್ಯರು ಕೇಳುತ್ತಾರೆ, ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿದೆ, ಅರ್ಧಕಲ್ಪ ಸತ್ಯಯುಗ-ತ್ರೇತಾಯುಗ, ಇನ್ನರ್ಧದಿಂದ ಭಕ್ತಿಯು ಆರಂಭವಾಗುತ್ತದೆ ಅದು ತ್ರೇತಾ ಮತ್ತು ದ್ವಾಪರದ ಸಂಗಮವಾಗುತ್ತದೆ. ದ್ವಾಪರದಲ್ಲಿಯೂ ಈ ಶಾಸ್ತ್ರ ಮೊದಲಾದುವುಗಳು ಕಳೆಯುತ್ತಾ ಹೋದಂತೆ ರಚಿಸಲ್ಪಡುತ್ತವೆ. ಭಕ್ತಿಮಾರ್ಗದ ಸಾಮಗ್ರಿಗಳು ಬಹಳ ವಿಸ್ತಾರವಾಗಿದೆ. ಹೇಗೆ ವೃಕ್ಷವು ಎಷ್ಟು ವಿಸ್ತಾರವಾಗಿದೆ! ಇದರ ಬೀಜವೂ ತಂದೆಯಾಗಿದ್ದಾರೆ, ಇದು ಉಲ್ಟಾವೃಕ್ಷವಾಗಿದೆ. ಮೊಟ್ಟಮೊದಲು ಆದಿಸನಾತನ ದೇವಿ-ದೇವತಾಧರ್ಮವಿರುತ್ತದೆ. ಈ ಮಾತುಗಳನ್ನು ತಂದೆಯು ತಿಳಿಸುತ್ತಾರೆ, ಇವು ಸಂಪೂರ್ಣ ಹೊಸಮಾತುಗಳಾಗಿವೆ. ಈ ದೇವಿ-ದೇವತಾಧರ್ಮದ ಸ್ಥಾಪಕರನ್ನು ಯಾರೂ ತಿಳಿದುಕೊಂಡಿಲ್ಲ. ಕೃಷ್ಣನಂತೂ ಮಗುವಾಗಿದ್ದಾನೆ ಅಂದಾಗ ಜ್ಞಾನವನ್ನು ತಿಳಿಸುವವರು ತಂದೆಯಾಗಿದ್ದಾರೆ ಆದರೆ ತಂದೆಯನ್ನು ಹಾರಿಸಿ ಮಗುವಿನ ಹೆಸರನ್ನು ಹಾಕಿಬಿಟ್ಟಿದ್ದಾರೆ. ಕೃಷ್ಣನ ಚರಿತ್ರೆ ಇತ್ಯಾದಿಯನ್ನೇ ತೋರಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ಲೀಲೆಯು ಕೃಷ್ಣನದಲ್ಲ, ಹೇ ಪ್ರಭು, ನಿನ್ನ ಲೀಲೆಯು ಅಪರಮಪಾರವಾಗಿದೆಯೆಂದು ಹಾಡುತ್ತಾರೆ. ಒಬ್ಬರದೇ ಲೀಲೆಯಿರುತ್ತದೆ. ಶಿವತಂದೆಯ ಮಹಿಮೆಯು ಬಹಳ ಭಿನ್ನವಾಗಿರುತ್ತದೆ. ಅವರು ಸದಾ ಪಾವನನಾಗಿದ್ದಾರೆ, ಆದರೆ ಅವರು ಪಾವನ ಶರೀರದಲ್ಲಂತೂ ಬರುವುದಿಲ್ಲ. ಪತಿತ ಪ್ರಪಂಚವನ್ನು ಬಂದು ಪಾವನ ಮಾಡಿ ಎಂದು ಅವರನ್ನು ಕರೆಯುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನೂ ಸಹ ಪತಿತ ಪ್ರಪಂಚದಲ್ಲಿಯೇ ಬರಬೇಕಾಗುತ್ತದೆ. ಇವರ (ಬ್ರಹ್ಮಾ) ಬಹಳ ಜನ್ಮಗಳ ಅಂತಿಮದಲ್ಲಿ ಬಂದು ಪ್ರವೇಶ ಮಾಡುತ್ತೇನೆ ಅಂದಾಗ ಮುಖ್ಯ ಮಾತನ್ನು ತಂದೆಯು ತಿಳಿಸುತ್ತಾರೆ, ತಂದೆಯನ್ನು ನೆನಪು ಮಾಡಿ. ಉಳಿದೆಲ್ಲವೂ ವಿಸ್ತಾರವಾಗಿದೆ. ಅದನ್ನು ಎಲ್ಲರೂ ಧಾರಣೆ ಮಾಡಲು ಸಾಧ್ಯವಿಲ್ಲ. ಯಾರು ಧಾರಣೆ ಮಾಡುವರೋ ಅವರಿಗೆ ತಿಳಿಸುತ್ತೇನೆ, ಉಳಿದಂತೆ ತಿಳಿಸುತ್ತೇನೆ - ಮನ್ಮನಾಭವ. ನಂಬರ್ವಾರ್ ಬುದ್ಧಿಯಂತೂ ಇರುತ್ತದೆಯಲ್ಲವೆ. ಎಲ್ಲಾ ಮೋಡಗಳು ಹೆಚ್ಚಿನದಾಗಿ ಮಳೆ ಸುರಿಸುವುದಿಲ್ಲ, ಕೆಲವು ಮೋಡಗಳಂತೂ ಸ್ವಲ್ಪವೇ ಮಳೆಯನ್ನು ಸುರಿಸಿ ಹೊರಟುಹೋಗುತ್ತದೆ. ನೀವೂ ಸಹ ಮೋಡಗಳಾಗಿದ್ದೀರಲ್ಲವೆ. ಕೆಲವರಂತೂ ಮಳೆ ಸುರಿಸುವುದೇ ಇಲ್ಲ, ಜ್ಞಾನವನ್ನು ಗ್ರಹಿಸುವ ಶಕ್ತಿಯೇ ಇಲ್ಲ. ಮಮ್ಮಾ-ಬಾಬಾ ಒಳ್ಳೆಯ ಮೋಡಗಳಾಗಿದ್ದಾರಲ್ಲವೆ. ಯಾರು ಚೆನ್ನಾಗಿ ಮಳೆಸುರಿಸುವರೋ ಅವರ ಸಂಗವನ್ನು ಮಕ್ಕಳು ಮಾಡಬೇಕಾಗಿದೆ. ಯಾರು ಸುರಿಸುವುದೇ ಇಲ್ಲವೋ ಅವರ ಸಂಗ ಮಾಡುವುದರಿಂದೇನು ಲಾಭ? ಸಂಗದೋಷದ ಪ್ರಭಾವವು ಬಹಳಬೇಗನೆ ಬೀರುತ್ತದೆ. ಕೆಲವರಂತೂ ಸಂಗದ ಪ್ರಭಾವದಿಂದ ವಜ್ರಸಮಾನರಾಗುತ್ತಾರೆ, ಇನ್ನೂ ಕೆಲವರು ಸಂಗದ ಪ್ರಭಾವದಿಂದ ಕಲ್ಲುಬುದ್ಧಿಯವರಾಗಿಬಿಡುತ್ತಾರೆ. ಯಾವಾಗಲೂ ಒಳ್ಳೆಯವರ ಬೆನ್ನು ಹಿಡಿದುಕೊಳ್ಳಬೇಕು. ಯಾರು ಜ್ಞಾನವಂತರಿರುವರೋ ಅವರು ತಮ್ಮ ಸಮಾನ ಹೂಗಳನ್ನಾಗಿ ಮಾಡಿಕೊಳ್ಳುವರು. ಸತ್ಯತಂದೆಯಿಂದ ಯಾರು ಜ್ಞಾನವಂತ ಮತ್ತು ಯೋಗಿಗಳಾಗಿರುತ್ತಾರೆ ಅವರ ಸಂಗವನ್ನೇ ಮಾಡಬೇಕು. ನಾವು ಇಂತಹವರ ಬಾಲವನ್ನು ಹಿಡಿದುಕೊಂಡು ಪಾರಾಗಿಬಿಡುತ್ತೇವೆಂದು ತಿಳಿಯಬಾರದು. ಹೀಗೆ ಅನೇಕರು ಹೇಳುತ್ತಾರೆ ಆದರೆ ಇಲ್ಲಿ ಆ ಮಾತಿಲ್ಲ. ವಿದ್ಯಾರ್ಥಿಗಳು ಬೇರೆಯವರ ಬಾಲವನ್ನು ಹಿಡಿದುಕೊಂಡರೆ ತೇರ್ಗಡೆಯಾಗಿಬಿಡುತ್ತಾರೆಯೇ! ಓದಬೇಕಲ್ಲವೆ. ತಂದೆಯೂ ಬಂದು ಜ್ಞಾನವನ್ನು ಕೊಡುತ್ತಾರೆ, ಈ ಸಮಯದಲ್ಲಿ ನಾನು ಜ್ಞಾನವನ್ನು ಕೊಡಬೇಕೆಂದು ಅವರಿಗೆ ತಿಳಿದಿದೆ. ಭಕ್ತಿಮಾರ್ಗದಲ್ಲಿ ನಾನು ಹೋಗಿ ಜ್ಞಾನವನ್ನು ಕೊಡಬೇಕೆಂದು ಅವರ ಬುದ್ಧಿಯಲ್ಲಿರುವುದಿಲ್ಲ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಒಂದುವೇಳೆ ಯಾರಾದರೂ ದೇವಿಯ ಸಾಕ್ಷಾತ್ಕಾರ ಮಾಡಲು ಇಚ್ಛಿಸಿದರೆ ದೇವಿಯಂತೂ ಸಾಕ್ಷಾತ್ಕಾರ ಮಾಡಿಸುವುದಿಲ್ಲ, ಹೇ ಭಗವಂತ ಸಾಕ್ಷಾತ್ಕಾರ ಮಾಡಿಸು ಎಂದೇ ಬೇಡುತ್ತಾರೆ. ಇದಕ್ಕೆ ತಂದೆಯು ಹೇಳುತ್ತಾರೆ - ನಾಟಕದಲ್ಲಿ ನಿಗಧಿಯಾಗಿದ್ದರೆ ಆಗುತ್ತದೆ, ನಾನೂ ಸಹ ನಾಟಕದಲ್ಲಿ ಬಂಧಿತನಾಗಿದ್ದೇನೆ.

ತಂದೆಯು ತಿಳಿಸುತ್ತಾರೆ - ನಾನು ಈ ಸೃಷ್ಟಿಯಲ್ಲಿ ಬಂದಿದ್ದೇನೆ, ಇವರ ಮುಖದಿಂದ ಮಾತನಾಡುತ್ತಿದ್ದೇನೆ, ಇವರ ಕಣ್ಣುಗಳಿಂದ ನೋಡುತ್ತಿದ್ದೇನೆ, ಒಂದುವೇಳೆ ಈ ಶರೀರವಿಲ್ಲವೆಂದರೆ ಹೇಗೆ ನೋಡುವುದು? ನಾನು ಪತಿತಪ್ರಪಂಚದಲ್ಲಿಯೇ ಬರಬೇಕಾಗುತ್ತದೆ, ಸ್ವರ್ಗದಲ್ಲಂತೂ ನನ್ನನ್ನು ಕರೆಯುವುದಿಲ್ಲ, ಸಂಗಮಯುಗದಲ್ಲಿಯೇ ಕರೆಯುತ್ತೀರಿ. ಯಾವಾಗ ಸಂಗಮಯುಗದಲ್ಲಿ ಬಂದು ಶರೀರವನ್ನು ತೆಗೆದುಕೊಳ್ಳುವೆನೋ ಆಗಲೇ ನಿಮ್ಮನ್ನು ನೋಡುತ್ತೇನೆ. ನಿರಾಕಾರರೂಪದಲ್ಲಿ ಏನನ್ನೂ ನೋಡಲು ಸಾಧ್ಯವಿಲ್ಲ, ಕರ್ಮೇಂದ್ರಿಯಗಳಿಲ್ಲದೆ ಆತ್ಮವು ಏನು ಮಾಡಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಹೇಗೆ ನೋಡಲು ಸಾಧ್ಯ, ಶರೀರವಿಲ್ಲದೆ ಅಲುಗಾಡಲು ಹೇಗೆ ಸಾಧ್ಯ. ಈಶ್ವರನು ಎಲ್ಲವನ್ನೂ ನೋಡುತ್ತಾನೆ, ಎಲ್ಲವನ್ನೂ ಮಾಡುತ್ತಾನೆಂದು ಹೇಳುವುದೆಲ್ಲವೂ ಅಂಧಶ್ರದ್ಧೆಯಾಗಿದೆ. ನಾನು ನೋಡುವುದಾದರೂ ಹೇಗೆ? ಕರ್ಮೇಂದ್ರಿಯಗಳು ಸಿಕ್ಕಿದಾಗಲೇ ನೋಡುತ್ತೇನಲ್ಲವೆ. ನಾಟಕದನುಸಾರ ಪ್ರತಿಯೊಬ್ಬರೂ ಒಳ್ಳೆಯ ಅಥವಾ ಕೆಟ್ಟಕರ್ಮಗಳನ್ನು ಮಾಡುತ್ತಾರೆ, ಇದು ನಿಶ್ಚಿತವಾಗಿದೆ. ನಾನು ಕುಳಿತು ಇಷ್ಟು ಕೋಟ್ಯಾಂತರ ಮನುಷ್ಯರ ಲೆಕ್ಕವನ್ನು ಮಾಡುತ್ತೇನೆಯೇ! ನನಗೆ ಶರೀರವಿದ್ದಾಗಲೇ ಎಲ್ಲವನ್ನೂ ಮಾಡುತ್ತೇನೆ ಆದ್ದರಿಂದಲೇ ಮಾಡಿ-ಮಾಡಿಸುವವರೆಂದು ಹೇಳುತ್ತಾರೆ ಇಲ್ಲದಿದ್ದರೆ ಹೇಳುತ್ತಿರಲಿಲ್ಲ. ನಾನು ಇವರಲ್ಲಿ ಬಂದಾಗಲೇ ಪಾವನರನ್ನಾಗಿ ಮಾಡುತ್ತೇನೆ. ಮೇಲೆ ಆತ್ಮವು ಏನು ತಾನೆ ಮಾಡುತ್ತದೆ? ಶರೀರದಿಂದಲೇ ಆತ್ಮವು ಪಾತ್ರವನ್ನಭಿನಯಿಸುತ್ತದೆಯಲ್ಲವೆ. ನಾನು ಸಹ ಇಲ್ಲಿ ಬಂದು ಪಾತ್ರವನ್ನಭಿನಯಿಸುತ್ತೇನೆ, ಸತ್ಯಯುಗದಲ್ಲಿ ನನ್ನ ಪಾತ್ರವಿಲ್ಲ. ಪಾತ್ರವಿಲ್ಲದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ಶರೀರವಿಲ್ಲದೆ ಆತ್ಮವು ಏನನ್ನೂ ಮಾಡಲು ಸಾಧ್ಯವಿಲ್ಲ. ಆತ್ಮವನ್ನು ಕರೆಸಿದಾಗಲೂ ಶರೀರದಲ್ಲಿ ಬಂದೇ ಮಾತನಾಡುತ್ತದೆಯಲ್ಲವೇ? ಅವಯವಗಳಿಲ್ಲದೆ ಏನೂ ಮಾಡಲು ಆಗುವುದಿಲ್ಲ. ಇದು ವಿಸ್ತಾರವಾದ ತಿಳುವಳಿಕೆಯಾಗಿದೆ. ಮುಖ್ಯಮಾತಂತು ಹೇಳಲಾಗುತ್ತದೆ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಬೇಹದ್ದಿನ ತಂದೆಯು ಎಷ್ಟು ದೊಡ್ಡವರಾಗಿದ್ದಾರೆ, ಅವರಿಂದ ಯಾವಾಗ ಆಸ್ತಿಯು ಸಿಗಬಹುದು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬಂದು ನಮ್ಮ ದುಃಖವನ್ನು ದೂರಮಾಡಿ, ಸುಖವನ್ನು ಕೊಡಿ ಎಂದು ಹೇಳುತ್ತಾರೆ ಆದರೆ ಯಾವಾಗ? ಇದನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳೀಗ ಹೊಸ ಮಾತುಗಳನ್ನು ಕೇಳುತ್ತಿದ್ದೀರಿ. ನಿಮಗೆ ತಿಳಿದಿದೆ - ನಾವು ಅಮರರಾಗುತ್ತಿದ್ದೇವೆ, ಅಮರಲೋಕದಲ್ಲಿ ಹೋಗುತ್ತಿದ್ದೇವೆ. ನೀವು ಅಮರಲೋಕಕ್ಕೆ ಎಷ್ಟು ಬಾರಿ ಹೋಗಿದ್ದೀರಿ? ಅನೇಕಬಾರಿ. ಇದರ ಅಂತ್ಯವೆಂದೂ ಆಗುವುದಿಲ್ಲ, ಮೋಕ್ಷವು ಸಿಗುವುದಿಲ್ಲವೆ ಎಂದು ಅನೇಕರು ಕೇಳುತ್ತಾರೆ ಆಗ ತಿಳಿಸಿ, ಮೋಕ್ಷವು ಸಿಗುವುದಿಲ್ಲ, ಇದು ಅನಾದಿ-ಅವಿನಾಶಿ ನಾಟಕವಾಗಿದೆ. ಇದೆಂದೂ ವಿನಾಶವಾಗಲು ಸಾಧ್ಯವಿಲ್ಲ. ಈ ಅನಾದಿಚಕ್ರವು ಸುತ್ತುತ್ತಲೇ ಇರುತ್ತದೆ. ನೀವು ಮಕ್ಕಳು ಈ ಸಮಯದಲ್ಲಿ ಸತ್ಯಸಾಹೇಬನನ್ನು ಅರಿತುಕೊಂಡಿದ್ದೀರಿ. ನೀವು ಸನ್ಯಾಸಿಗಳಾಗಿದ್ದೀರಲ್ಲವೆ. ಆ ಫಕೀರರಲ್ಲ. ಸನ್ಯಾಸಿಗಳಿಗೂ ಫಕೀರರೆಂದು ಹೇಳಲಾಗುತ್ತದೆ. ನೀವು ರಾಜಋಷಿಗಳಾಗಿದ್ದೀರಿ. ಋಷಿಗೆ ಸನ್ಯಾಸಿಯೆಂದು ಹೇಳಲಾಗುತ್ತದೆ, ನೀವೀಗ ಸಾಹುಕಾರರಾಗುತ್ತಿದ್ದೀರಿ. ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಈಗ ಎಷ್ಟು ಫಕೀರ (ಕನಿಷ್ಟ) ಆಗಿಬಿಟ್ಟಿದೆ. ಬೇಹದ್ದಿನ ತಂದೆಯು ಬಂದು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಬಾಬಾ, ತಾವು ಏನನ್ನು ಕೊಡುತ್ತೀರೋ ಅದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಾವು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೀರಿ. ಯಾವುದನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ ಎಂದು ಗೀತೆಯೂ ಇದೆ. ಇಂತಿಂತಹ ಗೀತೆಗಳನ್ನು ರಚಿಸುವವರು ಅರ್ಥವನ್ನು ಯೋಚಿಸುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಯಾವುದೇ ವಿಭಜನೆಯಿರುವುದಿಲ್ಲ, ಇಲ್ಲಂತೂ ಎಷ್ಟೊಂದು ವಿಭಜನೆಗಳಾಗಿವೆ. ಅಲ್ಲಿ ಆಕಾಶ, ಭೂಮಿ ಎಲ್ಲವೂ ನಿಮ್ಮದಾಗಿರುತ್ತದೆ ಅಂದಾಗ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕಲ್ಲವೆ. ಯಾವಾಗಲೂ ನಮಗೆ ಶಿವತಂದೆಯೇ ತಿಳಿಸುತ್ತಾರೆಂದು ತಿಳಿಯಿರಿ ಏಕೆಂದರೆ ಅವರೆಂದೂ ರಜೆ ತೆಗೆದುಕೊಳ್ಳುವುದಿಲ್ಲ, ಎಂದೂ ರೋಗಿಯಾಗುವುದಿಲ್ಲ. ಶಿವತಂದೆಯ ನೆನಪೇ ಇರಬೇಕು. ಅವರಿಗೆ ನಿರಹಂಕಾರಿ ಎಂದು ಹೇಳಲಾಗುತ್ತದೆ. ನಾನು ಇದನ್ನು ಮಾಡುತ್ತಿದ್ದೇನೆಂದು ಅಹಂಕಾರವು ಬರಬಾರದು, ಸೇವೆ ಮಾಡುವುದು ಕರ್ತವ್ಯವಾಗಿದೆ, ಇದರಲ್ಲಿ ಅಹಂಕಾರವು ಬರಬಾರದು. ಅಹಂಕಾರವು ಬಂದಿತೆಂದರೆ ಬೀಳುವರು. ಸೇವೆ ಮಾಡುತ್ತಾ ಇರಿ, ಇದು ಆತ್ಮಿಕ ಸೇವೆಯಾಗಿದೆ ಉಳಿದೆಲ್ಲವೂ ಸ್ಥೂಲ, ಕ್ಷಣಿಕ ಸೇವೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಓದಿಸುವುದಕ್ಕೆ ಪ್ರತಿಯಾಗಿ (ರಿಟರ್ನ) ಹೂಗಳಾಗಿ ತೋರಿಸಬೇಕಾಗಿದೆ. ಪರಿಶ್ರಮಪಡಬೇಕಾಗಿದೆ, ಎಂದೂ ಸಹ ಈಶ್ವರೀಯ ಕುಲಕ್ಕೆ ಕಳಂಕ ತರಬಾರದು. ಯಾರು ಜ್ಞಾನಿ ಮತ್ತು ಯೋಗಿಗಳಿದ್ದಾರೆಯೋ ಅವರ ಸಂಗವನ್ನೇ ಮಾಡಬೇಕಾಗಿದೆ.

2. ನಾನು ಎಂಬುದರ ತ್ಯಾಗ ಮಾಡಿ ನಿರಹಂಕಾರಿಗಳಾಗಿ ಆತ್ಮಿಕ ಸೇವೆ ಮಾಡಬೇಕಾಗಿದೆ, ಇದನ್ನು ತಮ್ಮ ಕರ್ತವ್ಯವೆಂದು ತಿಳಿಯಬೇಕು, ಅಹಂಕಾರದಲ್ಲಿ ಬರಬಾರದು.

ವರದಾನ:
ವ್ಯರ್ಥವನ್ನು ಶುಭಭಾವ ಹಾಗೂ ಶ್ರೇಷ್ಠಭಾವನೆಯ ಮೂಲಕ ಪರಿವರ್ತನೆ ಮಾಡುವಂತಹ ಸತ್ಯಮರುಜೀವಾ ಭವ

ಬಾಪ್ದಾದಾರವರ ಶ್ರೀಮತವಿದೆ- ಮಕ್ಕಳೇ, ವ್ಯರ್ಥಮಾತನ್ನು ಕೇಳಬೇಡಿ, ಹೇಳಬೇಡಿ ಮತ್ತು ಯೋಚಿಸಬೇಡಿ.ಸದಾ ಶುಭಭಾವನೆಯಿಂದ ಯೋಚಿಸಿ, ಶುಭಮಾತನ್ನು ಹೇಳಿರಿ. ವ್ಯರ್ಥವನ್ನೂ ಶುಭಭಾವದಿಂದ ಕೇಳಿರಿ. ಶುಭಚಿಂತಕರಾಗಿದ್ದು ಮಾತಿನ ಭಾವವನ್ನು ಪರಿವರ್ತನೆ ಮಾಡಿಬಿಡಿ. ಸದಾ ಭಾವ ಮತ್ತು ಭಾವನೆಯನ್ನು ಶ್ರೇಷ್ಠವಾಗಿಡಿ, ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳಿ ಆದರೆ ಅನ್ಯರ ಪರಿವರ್ತನೆಯನ್ನು ಯೋಚಿಸಬಾರದು. ಸ್ವಯಂನ ಪರಿವರ್ತನೆಯೇ ಅನ್ಯರ ಪರಿವರ್ತನೆಯಾಗಿದೆ. ಇದರಲ್ಲಿ ಮೊದಲು ನಾನು- ಈ ಮರುಜೀವಾ ಆಗುವುದರಲ್ಲಿಯೇ ಮಜಾ ಇದೆ. ಇವರನ್ನೇ ಮಹಾಬಲಿ ಎಂದು ಹೇಳಲಾಗುತ್ತದೆ. ಇದರಲ್ಲಿ ಖುಷಿಯಿಂದ ಸಾಯಬೇಕು, ಈ ಸಾಯುವುದೇ ಬದುಕುವುದಾಗಿದೆ, ಇದೇ ಸತ್ಯಜೀವದಾನವಾಗಿದೆ.

ಸ್ಲೋಗನ್:
ಶ್ರೇಷ್ಠ ಪರಿವರ್ತನೆಯಲ್ಲಿ ಸಂಕಲ್ಪಗಳ ಏಕಾಗ್ರತೆಯು ತೀವ್ರಗತಿಯನ್ನು ತರುತ್ತದೆ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಸಂಘಟನೆಯ ಶಕ್ತಿ ಏನು ಬೇಕೋ ಅದನ್ನು ಮಾಡಬಹುದು. ಸಂಘಟನೆಯ ಲಕ್ಷಣ ನೆನಪಾರ್ಥವಾಗಿದೆ ಪಂಚ ಪಾಂಡವರು. ಏಕತೆಯ ಶಕ್ತಿ, ಹಾಂ ಜೀ, ಹಾಂ ಜೀ, ವಿಚಾರ ಕೊಟ್ಟರು, ನಂತರ ಏಕತೆಯ ಬಂಧನದಲ್ಲಿ ಬಂಧಿತರಾಗಿರಿ. ಇದೇ ಏಕತೆಯ ಸಫಲತೆಯ ಸಾಧನವಾಗಿದೆ.