12.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಯಾರು ಮೊಟ್ಟಮೊದಲು ಭಕ್ತಿಯನ್ನು ಪ್ರಾರಂಭಿಸಿದರೋ, ಯಾರು ನಂಬರ್ವನ್ ಪೂಜ್ಯರಾಗಿದ್ದವರು ನಂತರ ಪೂಜಾರಿಯಾಗಿದ್ದಾರೆಯೋ ಆ ರಥದಲ್ಲಿಯೇ ತಂದೆಯು ಬರುತ್ತಾರೆ, ಈ ರಹಸ್ಯವನ್ನು ಎಲ್ಲರಿಗೆ ಸ್ಪಷ್ಟ ಮಾಡಿ ತಿಳಿಸಿ”

ಪ್ರಶ್ನೆ:
ತಂದೆಯು ತಮ್ಮ ವಾರಸುಧಾರ ಮಕ್ಕಳಿಗೆ ಯಾವ ಆಸ್ತಿಯನ್ನು ಕೊಡಲು ಬಂದಿದ್ದಾರೆ?

ಉತ್ತರ:
ತಂದೆಯು ಸುಖ-ಶಾಂತಿ ಮತ್ತು ಪ್ರೇಮದ ಸಾಗರನಾಗಿದ್ದಾರೆ. ಪೂರ್ಣ ಖಜಾನೆಗಳನ್ನು ವ್ಹಿಲ್ (ಉಯಿಲು) ಮಾಡುತ್ತಾರೆ, ಈ ರೀತಿ ವ್ಹಿಲ್ ಮಾಡುತ್ತಾರೆ ಅದನ್ನು 21 ಜನ್ಮಗಳವರೆಗೆ ತಾವು ತಿನ್ನುತ್ತಾ ಇರುತ್ತೀರಿ, ಆದರೂ ಸಹ ಅದು ಮುಗಿಯುವುದಿಲ್ಲ. ನಿಮ್ಮನ್ನು ಕವಡೆಯಿಂದ ವಜ್ರಸಮಾನರನ್ನಾಗಿ ಮಾಡುತ್ತಾರೆ. ನೀವು ತಂದೆಯ ಪೂರ್ಣಖಜಾನೆಗಳನ್ನು ಯೋಗಬಲದಿಂದ ಪಡೆಯುತ್ತೀರಿ. ಯೋಗದ ವಿನಹ ಖಜಾನೆಯು ಪ್ರಾಪ್ತಿಯಾಗಲು ಸಾಧ್ಯವಿಲ್ಲ.

ಓಂ ಶಾಂತಿ.
ಶಿವಭಗವಾನುವಾಚ. ಈಗ ಶಿವಭಗವಂತನನ್ನು ಎಲ್ಲರೂ ಮಾನ್ಯ ಮಾಡುತ್ತಾರೆ. ಒಬ್ಬರೇ ನಿರಾಕಾರ ಶಿವನಾಗಿದ್ದಾರೆ, ಎಲ್ಲರೂ ಅವರನ್ನು ಪೂಜಿಸುತ್ತಾರೆ ಉಳಿದಂತೆ ಯಾರೆಲ್ಲಾ ದೇಹಧಾರಿಗಳಾಗಿದ್ದಾರೆಯೋ ಅವರಿಗೆ ಸಾಕಾರರೂಪವಿದೆ. ಮೊದಲು ಆತ್ಮವು ನಿರಾಕಾರವಾಗಿತ್ತು ನಂತರ ಸಾಕಾರಿ ರೂಪವನ್ನು ಧರಿಸುತ್ತದೆ ಸಾಕಾರವಾಗುತ್ತದೆ ಅಂದರೆ ಶರೀರದಲ್ಲಿ ಪ್ರವೇಶ ಮಾಡಿದಾಗ ಅದರ ಪಾತ್ರವು ನಡೆಯುತ್ತದೆ. ಮೂಲವತನದಲ್ಲಂತೂ ಯಾವುದೇ ಪಾತ್ರವು ನಡೆಯುವುದಿಲ್ಲ. ಹೇಗೆ ಪಾತ್ರಧಾರಿಗಳು ಮನೆಯಲ್ಲಿದ್ದಾಗ ನಾಟಕದ ಪಾತ್ರವಿರುವುದಿಲ್ಲ, ಸ್ಟೇಜಿನ ಮೇಲೆ ಬಂದಾಗ ಪಾತ್ರವನ್ನಭಿನಯಿಸುತ್ತಾರೆ. ಎಲ್ಲವೂ ಪಾತ್ರದ ಮೇಲೆ ಆಧಾರಿತವಾಗಿದೆ. ಆತ್ಮಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೇಗೆ ನೀವು ಮಕ್ಕಳು ಆತ್ಮಗಳೋ ಹಾಗೆಯೇ ಇವರೂ ಆತ್ಮನಾಗಿದ್ದಾರೆ. ತಂದೆ ಪರಮ್ ಆತ್ಮ ಏನು ಮಾಡುತ್ತಾರೆ, ಅವರ ಕರ್ತವ್ಯವೇನು- ಅದನ್ನು ಅರಿತುಕೊಳ್ಳಬೇಕಾಗಿದೆ. ಕೆಲವರು ರಾಷ್ಟ್ರಪತಿಯಾಗಿರುತ್ತಾರೆ, ರಾಜರಾಗಿರುತ್ತಾರೆ ಇದು ಆತ್ಮದ ವೃತ್ತಿಯಾಗಿದೆಯಲ್ಲವೆ. ಹಾಗೆಯೇ ಇವರು ಪವಿತ್ರ ದೇವತೆಗಳಾಗಿದ್ದಾರೆ ಆದ್ದರಿಂದ ಇವರನ್ನು ಪೂಜಿಸಲಾಗುತ್ತದೆ. ಈಗ ನೀವೂ ಸಹ ತಿಳಿಯುತ್ತೀರಿ- ಈ ವಿದ್ಯೆಯನ್ನು ಓದಿ ಲಕ್ಷ್ಮಿನಾರಾಯಣರು ವಿಶ್ವಕ್ಕೆ ಮಾಲಿಕರಾದರು, ಯಾರು ಮಾಡಿದರು? ಪರಮಾತ್ಮನು. ನೀವು ಆತ್ಮರೂಸಹ ಓದಿಸುತ್ತೀರಿ ಆದರೆ ಹೆಮ್ಮೆಯ ಮಾತೇನೆಂದರೆ ತಂದೆಯು ಬಂದು ನೀವು ಮಕ್ಕಳಿಗೆ ಓದಿಸುತ್ತಾರೆ ಮತ್ತು ರಾಜಯೋಗವನ್ನು ಕಲಿಸುತ್ತಾರೆ. ಇದು ಎಷ್ಟು ಸಹಜವಾಗಿದೆ. ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ನಾವು ಸತೋಪ್ರಧಾನರಾಗಿಬಿಡುತ್ತೇವೆ. ತಂದೆಯಂತೂ ಸತೋಪ್ರಧಾನರಾಗಿಯೇ ಇದ್ದಾರೆ. ಅವರಿಗೆ ಎಷ್ಟೊಂದು ಮಹಿಮೆ ಮಾಡುತ್ತಾರೆ! ಭಕ್ತಿಮಾರ್ಗದಲ್ಲಿ ಹಾಲು-ಹೂಗಳನ್ನು ಅರ್ಪಿಸುತ್ತಾರೆ, ಏನೂ ಪರಿಚಯವಿಲ್ಲ. ದೇವತೆಗಳನ್ನು ಪೂಜಿಸುತ್ತಾರೆ, ಶಿವಲಿಂಗದ ಮೇಲೂ ಸಹ ಹಾಲನ್ನು ಎರೆಯುತ್ತಾರೆ ಆದರೆ ಅವರಿಗೆ ಏನೂ ಗೊತ್ತಿಲ್ಲ. ದೇವತೆಗಳಾದರೂ ರಾಜ್ಯಭಾರ ಮಾಡಿದರು ಮತ್ತೆ ಶಿವನ ಮೇಲೆ ಹೂಗಳನ್ನು ಏಕೆ ಹಾಕುತ್ತಾರೆ? ಅವರು ಯಾವ ಕರ್ತವ್ಯವನ್ನು ಮಾಡಿದಕಾರಣ ಇಷ್ಟೊಂದು ಪೂಜೆ ಮಾಡುತ್ತೀರಿ ದೇವತೆಗಳ ಬಗ್ಗೆಯಂತೂ, ಅವರು ಸ್ವರ್ಗದ ಮಾಲಿಕರಾಗಿದ್ದರೆಂದು ತಿಳಿದಿದೆ, ಆದರೆ ಅವರನ್ನು ಈ ರೀತಿ ಮಾಡಿದವರು ಯಾರು ಎಂಬುದನ್ನು ತಿಳಿದುಕೊಂಡಿಲ್ಲ. ಶಿವನ ಪೂಜೆಯನ್ನೂ ಮಾಡುತ್ತಾರೆ ಆದರೆ ಇವರು ಭಗವಂತ ಎಂದು ಅವರ ಬುದ್ಧಿಯಲ್ಲಿಲ್ಲ. ಭಗವಂತನು ಈ ದೇವತೆಗಳನ್ನು ಈ ರೀತಿ ಮಾಡಿದ್ದಾರೆ. ಎಷ್ಟೊಂದು ಭಕ್ತಿ ಮಾಡುತ್ತಾರೆ ಆದರೆ ಏನೂ ಗೊತ್ತಿಲ್ಲ. ತಾವೂ ಸಹ ಶಿವನ ಪೂಜೆಯನ್ನು ಮಾಡಿರುತ್ತೀರಿ. ಈಗ ನಿಮಗೆ ತಿಳುವಳಿಕೆಯಿದೆ. ಮೊದಲು ಏನೂ ಸಹ ತಿಳಿದಿರಲಿಲ್ಲ- ಅವರ ಕರ್ತವ್ಯವೇನು? ಯಾವ ಸುಖವನ್ನು ಕೊಡುತ್ತಾರೆ? ಎಂಬುದೇನೂ ತಿಳಿದಿರಲಿಲ್ಲ. ಈ ದೇವತೆಗಳು ಸುಖ ಕೊಡುತ್ತಾರೆಯೇ? ಭಲೆ ರಾಜ-ರಾಣಿ, ಪ್ರಜೆಗಳಿಗೆ ಸುಖ ಕೊಡುತ್ತಾರೆ ಆದರೆ ಅವರನ್ನೂ ಸಹ ಶಿವತಂದೆಯೇ ಆ ರೀತಿ ಮಾಡಿದ್ದರಲ್ಲವೆ ಆದ್ದರಿಂದ ಬಲಿಹಾರಿಯು ತಂದೆಯದಾಗಿದೆ. ಈ ದೇವತೆಗಳು ಕೇವಲ ರಾಜ್ಯಭಾರ ಮಾಡುತ್ತಾರೆ, ಪ್ರಜೆಗಳೂ ಆಗಿಬಿಡುತ್ತಾರೆ ಆದರೆ ಇವರು ಯಾರ ಕಲ್ಯಾಣವನ್ನೂ ಮಾಡುವುದಿಲ್ಲ. ಒಂದುವೇಳೆ ಮಾಡಿದರೂ ಸಹ ಅಲ್ಪಕಾಲಕ್ಕಾಗಿ. ಈಗ ತಂದೆ ತಮ್ಮ ಪರಿಚಯವನ್ನು ಕೊಡುತ್ತಾರೆ- ನೀವು ನನ್ನ ಲಿಂಗಕ್ಕೆ ಪೂಜೆ ಮಾಡುತ್ತಿದ್ದಿರಿ, ಅದಕ್ಕೆ ಪರಮ ಆತ್ಮನೆಂದು ಹೇಳುತ್ತಿದ್ದಿರಿ, ಪರಮ ಆತ್ಮನಿಂದ ಪರಮಾತ್ಮನಾಗಿಬಿಡುತ್ತದೆ ಆದರೆ ಪರಮಾತ್ಮನು ಏನು ಮಾಡುತ್ತಾರೆಂದು ನಿಮಗೆ ತಿಳಿದಿರಲಿಲ್ಲ. ಕೇವಲ ಅವರು ಸರ್ವವ್ಯಾಪಿ, ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳಿಬಿಡುತ್ತೀರಿ ಅಂದಮೇಲೆ ಅವರ ಮೇಲೆ ಹಾಲನ್ನೆರೆಯುವುದು ಶೋಭಿಸುವುದಿಲ್ಲವಲ್ಲವೆ! ಅವರಿಗೂ ಆಕಾರವಿದೆ, ಆದ್ದರಿಂದಲೇ ಪೂಜಿಸುತ್ತೀರಲ್ಲವೆ. ಅವರಿಗೆ ನಿರಾಕಾರ (ನಾಮ-ರೂಪವಿಲ್ಲ) ನಾಗಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯರು ನಿಮ್ಮೊಂದಿಗೆ ಬಹಳ ವಾದ-ವಿವಾದ ಮಾಡುತ್ತಾರೆ. ತಂದೆಯ ಬಳಿಯೂ ವಾದವನ್ನೇ ಮಾಡುತ್ತಾರೆ, ವ್ಯರ್ಥವಾಗಿ ತಲೆಕೆಡಿಸಿಕೊಳ್ಳುತ್ತಾರೆ. ಪ್ರಯೋಜನವೇನೂ ಇಲ್ಲ. ಇದನ್ನು ತಿಳಿಸುವುದಂತೂ ನೀವು ಮಕ್ಕಳ ಕೆಲಸವಾಗಿದೆ. ನಿಮಗೆ ಗೊತ್ತಿದೆ- ನಮ್ಮನ್ನು ತಂದೆಯು ಎಷ್ಟು ಶ್ರೇಷ್ಠರನ್ನಾಗಿ ಮಾಡಿದ್ದಾರೆ. ಇದು ವಿದ್ಯೆಯಾಗಿದೆ, ಇಲ್ಲಿ ತಂದೆಯೇ ಶಿಕ್ಷಕರಾಗಿ ಓದಿಸುತ್ತಾರೆ. ನೀವು ಮನುಷ್ಯರಿಂದ ದೇವತೆಗಳಾಗಲು ಓದುತ್ತಿದ್ದೀರಿ. ದೇವಿ-ದೇವತೆಗಳು ಸತ್ಯಯುಗದಲ್ಲಿರುತ್ತಾರೆ, ಕಲಿಯುಗದಲ್ಲಿಲ್ಲ. ಪವಿತ್ರರಾಗಿರಲು ರಾಮರಾಜ್ಯವೂ ಸಹ ಇಲ್ಲ. ದೇವಿ-ದೇವತೆಗಳಿದ್ದರು ನಂತರ ವಾಮಮಾರ್ಗದಲ್ಲಿ ಹೊರಟುಹೋಗುತ್ತಾರೆ. ಬಾಕಿ ಅಲ್ಲಿ ಹೇಗೆ ಚಿತ್ರಗಳನ್ನು ತೋರಿಸಿದ್ದಾರೆಯೋ ಆ ರೀತಿಯಂತೂ ಇಲ್ಲ. ಜಗನ್ನಾಥಪುರಿಯಲ್ಲಿ ನೀವು ನೋಡುತ್ತೀರಿ, ಕಪ್ಪುಚಿತ್ರಗಳಿವೆ ತಂದೆಯು ತಿಳಿಸುತ್ತಾರೆ- ಮಾಯಾಜೀತೇ ಜಗತ್ಜೀತರಾಗಿ. ಇದಕ್ಕೆ ಅವರು ಜಗನ್ನಾಥ ಎಂದು ಹೆಸರನ್ನಿಟ್ಟು ಬಿಟ್ಟಿದ್ದಾರೆ. ಮೇಲೆ ಎಲ್ಲಾ ಕೆಟ್ಟಚಿತ್ರಗಳನ್ನು ತೋರಿಸಿದ್ದಾರೆ. ದೇವತೆಗಳು ವಾಮಮಾರ್ಗದಲ್ಲಿ ಹೋಗಿದ್ದರಿಂದ ಕಪ್ಪಾಗಿಬಿಟ್ಟರು, ಆ ಚಿತ್ರಗಳ ಪೂಜೆಯನ್ನು ಮಾಡುತ್ತಿರುತ್ತಾರೆ. ಮನುಷ್ಯರಿಗೆ ಏನೂ ಗೊತ್ತಿಲ್ಲ- ನಾವು ಯಾವಾಗ ಪೂಜ್ಯರಾಗಿದ್ದೆವು, 84 ಜನ್ಮಗಳ ಪರಿಚಯವು ಯಾರ ಬುದ್ಧಿಯಲ್ಲಿಯೂ ಇಲ್ಲ. ಮೊದಲು ಪೂಜ್ಯ ಸತೋಪ್ರಧಾನರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನ, ಪೂಜಾರಿಗಳಾಗಿಬಿಡುತ್ತಾರೆ. ರಘುನಾಥ ಮಂದಿರದಲ್ಲಿಯೂ ಕಪ್ಪುಚಿತ್ರಗಳನ್ನು ತೋರಿಸಿದ್ದಾರೆ. ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ತಾವು ಮಕ್ಕಳಿಗೆ ತಂದೆಯು ಕುಳಿತು ತಿಳಿಸಿಕೊಡುತ್ತಾರೆ- ನೀವು ಜ್ಞಾನಚಿತೆಯ ಮೇಲೆ ಕುಳಿತು ಸುಂದರರಾಗುತ್ತೀರಿ ಕಾಮಚಿತೆಯ ಮೇಲೆ ಕುಳಿತುಕಪ್ಪಾಗಿಬಿಡುತ್ತೀರಿ, ದೇವತೆಗಳು ವಾಮಮಾರ್ಗದಲ್ಲಿ ಹೋಗಿ ವಿಕಾರಿಗಳಾದರು ನಂತರ ಅವರ ಹೆಸರನ್ನು ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ವಾಮಮಾರ್ಗದಲ್ಲಿ ಹೋಗುವುದರಿಂದಲೇ ಕಪ್ಪಾಗಿಬಿಡುತ್ತೀರಿ. ಇದರಚಿನ್ಹೆಯನ್ನೂ ತೋರಿಸಿದ್ದಾರೆ. ಕೃಷ್ಣ, ರಾಮ ಮತ್ತು ಶಿವನನ್ನೂ ಕೂಡ ಕಪ್ಪಾಗಿ ಮಾಡಿಬಿಡುತ್ತಾರೆ ಆದರೆ ನೀವು ಮಕ್ಕಳಿಗೆ ತಿಳಿದಿದೆ- ಶಿವತಂದೆಯಂತೂ ಎಂದೂ ಕಪ್ಪಾಗುವುದಿಲ್ಲ, ಅವರಂತೂ ವಜ್ರವಾಗಿದ್ದಾರೆ. ನಿಮ್ಮನ್ನೂ ಸಹ ವಜ್ರಸಮಾನರನ್ನಾಗಿ ಮಾಡುತ್ತಾರೆ. ಅವರಂತೂ ಎಂದೂ ಕಪ್ಪಾಗುವುದಿಲ್ಲ. ಅಂದಮೇಲೆ ಅವರನ್ನು ಏಕೆ ಕಪ್ಪು ಮಾಡಿಬಿಟ್ಟಿದ್ದಾರೆ! ಯಾರೋ ಕಪ್ಪಾಗಿರುವವರು ಶಿವಲಿಂಗವನ್ನೂ ಸಹ ಕಪ್ಪಾಗಿ ಮಾಡಿರಬಹುದು. ಶಿವತಂದೆಯು ತಿಳಿಸುತ್ತಾರೆ- ನಾನೇನು ದೋಷ ಮಾಡಿದೆ, ನನ್ನನ್ನು ಕಪ್ಪಾಗಿ ತೋರಿಸಿಬಿಟ್ಟಿದ್ದಾರೆ. ನಾನಂತೂ ಎಲ್ಲರನ್ನೂ ಸುಂದರ (ಪಾವನ) ರನ್ನಾಗಿ ಮಾಡಲು ಬರುತ್ತೇನೆ. ನಾನಂತೂ ಸದಾ ಸುಂದರನಾಗಿದ್ದೇನೆ. ಮನುಷ್ಯರ ಬುದ್ಧಿಯು ಈ ರೀತಿಯಾಗಿಬಿಟ್ಟಿದೆ. ಏನನ್ನೂ ತಿಳಿದುಕೊಳ್ಳುವುದೇ ಇಲ್ಲ. ಶಿವತಂದೆಯು ಎಲ್ಲರನ್ನೂ ವಜ್ರವನ್ನಾಗಿ ಮಾಡುವವರಾಗಿದ್ದಾರೆ. ತಿಳಿಸುತ್ತಾರೆ, ನಾನಂತೂ ಸದಾ ಸುಂದರ ಯಾತ್ರಿಕನಾಗಿದ್ದೇನೆ. ನಾನೇನು ಮಾಡಿದೆ, ನನ್ನನ್ನೂ ಕಪ್ಪಾಗಿ ಮಾಡಿಬಿಟ್ಟಿದ್ದಾರೆ. ಈಗ ಶ್ರೇಷ್ಠಪದವಿಯನ್ನು ಪಡೆಯುವುದಕ್ಕಾಗಿ ನೀವು ಸುಂದರ (ಪಾವನ) ರಾಗಬೇಕಾಗಿದೆ. ಶ್ರೇಷ್ಠಪದವಿಯನ್ನು ಹೇಗೆ ಪಡೆಯುವುದು? ಅದನ್ನಂತೂ ತಂದೆಯು ತಿಳಿಸಿದ್ದಾರೆ-ಫಾಲೋ ಫಾದರ್ (ತಂದೆಯನ್ನು ಅನುಸರಿಸಿ) ಹೇಗೆ ಬ್ರಹ್ಮಾತಂದೆಯು ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿಬಿಟ್ಟರು. ನೋಡಿ, ಹೇಗೆ ಸರ್ವಸ್ವವನ್ನೂ ಕೊಟ್ಟುಬಿಟ್ಟರು. ಭಲೆ ಸಾಧಾರಣರಾಗಿದ್ದರು, ಬಹಳ ಬಡವರೂ ಅಲ್ಲ ಬಹಳ ಸಾಹುಕಾರರೂ ಅಲ್ಲ. ತಂದೆಯು ಈಗಲೂ ತಿಳಿಸುತ್ತಾರೆ- ನಿಮ್ಮ ಆಹಾರ-ಪಾನೀಯ, ಮಧ್ಯಮ ಸ್ಥಿತಿಯದು ಅಂದರೆ ಸಾಧಾರಣವಾಗಿರಬೇಕು. ಬಹಳ ಉನ್ನತವೂ ಅಲ್ಲ, ಬಹಳ ಕನಿಷ್ಠವೂ ಅಲ್ಲ, ತಂದೆಯೇ ಎಲ್ಲಾ ಶಿಕ್ಷಣವನ್ನು ಕೊಡುತ್ತಾರೆ ಇವರು ಸಾಧಾರಣರಾಗಿಯೇ ಕಾಣಿಸುತ್ತಾರೆ ಆದ್ದರಿಂದ ಮನುಷ್ಯರು ನಿಮ್ಮನ್ನು ಕೇಳುತ್ತಾರೆ- ಭಗವಂತನು ಎಲ್ಲಿದ್ದಾರೆ ತಿಳಿಸಿ. ಅರೆ! ಆತ್ಮವು ಬಿಂದುವಾಗಿದೆ, ಅದನ್ನು ನೋಡುತ್ತೀರೇನು! ಇದಂತೂ ತಿಳಿದಿದೆ- ಸ್ಥೂಲಕಣ್ಣುಗಳಿಂದ ಆತ್ಮವನ್ನು ನೋಡಲು ಸಾಧ್ಯವಿಲ್ಲ. ಭಗವಂತನೇ ಓದಿಸುತ್ತಾರೆಂದು ನೀವು ಹೇಳುತ್ತೀರಿ ಅಂದಮೇಲೆ ಅವಶ್ಯವಾಗಿ ಶರೀರಧಾರಿಯಾಗಿರಬೇಕು. ನಿರಾಕಾರನು ಹೇಗೆ ಓದಿಸುತ್ತಾರೆಂದು ಕೇಳುತ್ತಾರೆ ಏಕೆಂದರೆ ಮನುಷ್ಯರಿಗಂತೂಏನೂ ತಿಳಿದಿಲ್ಲ. ಹೇಗೆ ನೀವು ಆತ್ಮಗಳಾಗಿದ್ದೀರಿ, ಶರೀರದಿಂದ ಪಾತ್ರವನ್ನಭಿನಯಿಸುತ್ತೀರಿ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ, ಆತ್ಮವೇ ಶರೀರದ ಮೂಲಕ ಮಾತನಾಡುತ್ತದೆ. ಆತ್ಮವಾಚವಾಗಿದೆ ಆದರೆ ಆತ್ಮವಾಚಎನ್ನುವುದು ಶೋಭಿಸುವುದಿಲ್ಲ. ಆತ್ಮವು ವಾನಪ್ರಸ್ಥ, ವಾಣಿಯಿಂದ ದೂರವಿದೆ, ಅದು ಮಾತನಾಡಬೇಕೆಂದರೆ ಶರೀರದಿಂದಲೇ ಮಾತನಾಡುತ್ತದೆ. ಕೇವಲ ಆತ್ಮವೇ ವಾಣಿಯಿಂದ ದೂರವಿರುತ್ತದೆ. ವಾಣಿಯಲ್ಲಿ ಬರಬೇಕೆಂದರೆ ಅದಕ್ಕೆ ಶರೀರವು ಅವಶ್ಯವಾಗಿ ಬೇಕು. ತಂದೆಯು ಜ್ಞಾನಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಯಾರ ಶರೀರವನ್ನಾದರೂ ಆಧಾರವಾಗಿ ತೆಗೆದುಕೊಳ್ಳುತ್ತಾರಲ್ಲವೆ. ಅದಕ್ಕೆ ರಥವೆಂದು ಹೇಳಲಾಗುತ್ತದೆ. ಇಲ್ಲದಿದ್ದರೆ ಅವರು ಹೇಗೆ ತಿಳಿಸುವುದು? ತಂದೆಯು ಪತಿತರಿಂದ ಪಾವನರಾಗುವುದಕ್ಕಾಗಿ ಶಿಕ್ಷಣ ಕೊಡುತ್ತಾರೆ ಇದರಲ್ಲಿ ಪ್ರೇರಣೆಯ ಮಾತಿಲ್ಲ, ಇದು ಜ್ಞಾನದ ಮಾತಾಗಿದೆ. ಅವರು ಹೇಗೆ ಬರುತ್ತಾರೆ? ಯಾರ ಶರೀರದಲ್ಲಿ ಬರುತ್ತಾರೆ? ಬರುವುದಂತೂ ಅವಶ್ಯವಾಗಿ ಮನುಷ್ಯನಲ್ಲಿಯೇ ಅಂದಾಗ ಯಾವ ಮನುಷ್ಯನಲ್ಲಿ ಬರುತ್ತಾರೆ? ಇದು ನಿಮ್ಮ ವಿನಃ ಯಾರಿಗೂ ತಿಳಿದಿಲ್ಲ. ಸ್ವಯಂ ರಚಯಿತ ತಂದೆಯೇ ತಮ್ಮ ಪರಿಚಯವನ್ನು ತಿಳಿಸುತ್ತಾರೆ- ನಾನು ಹೇಗೆ ಮತ್ತು ಯಾವ ರಥದಲ್ಲಿ ಬರುತ್ತೇನೆ, ನನ್ನ ರಥವು ಯಾವುದಾಗಿದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಮನುಷ್ಯರು ಇದರಲ್ಲಿ ಬಹಳ ಗೊಂದಲಕ್ಕೊಳಗಾಗಿದ್ದಾರೆ. ಯಾವ-ಯಾವುದೋ ರಥವನ್ನೋ ತೋರಿಸಿಬಿಡುತ್ತಾರೆ. ಪ್ರಾಣಿಗಳಲ್ಲಂತೂ ತಂದೆಯು ಬರಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಯಾವ ಮನುಷ್ಯನಲ್ಲಿ ಬರುತ್ತೇನೆಂದು ತಿಳಿದುಕೊಳ್ಳಲು ಆಗುವುದಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಯಾವ ಮನುಷ್ಯನಲ್ಲಿ ಬರುತ್ತೇನೆಂದು ತಿಳಿದುಕೊಳ್ಳಲು ಆಗುವುದಿಲ್ಲ. ಬರುವುದೂ ಸಹ ಭಾರತದಲ್ಲಿಯೇ. ಭಾರತವಾಸಿಗಳಲ್ಲಿಯೂ ಯಾರ ತನುವಿನಲ್ಲಿ ಬರುತ್ತೇನೆ, ರಾಷ್ಟ್ರಪತಿ ಅಥವಾ ಸಾಧು-ಮಹಾತ್ಮರ ರಥದಲ್ಲಿ ಬರುತ್ತೇನೆಯೇ? ಅಥವಾ ಪವಿತ್ರ ರಥದಲ್ಲಿಯೇ ಬರಬೇಕೆಂದಿಲ್ಲ ಏಕೆಂದರೆ ಇದಂತೂ ರಾವಣರಾಜ್ಯವಾಗಿದೆ. ದೂರದೇಶದಲ್ಲಿರುವವರು ಪರದೇಶದಲ್ಲಿ ಬಂದರೆಂದು ಗಾಯನವಿದೆ.

ಇದೂ ಸಹ ಮಕ್ಕಳಿಗೆ ತಿಳಿದಿದೆ- ಭಾರತವು ಅವಿನಾಶಿ ಖಂಡವಾಗಿದೆ, ಎಂದೂ ಇದರ ವಿನಾಶವಾಗುವುದಿಲ್ಲ. ಅವಿನಾಶಿ ತಂದೆಯು ಅವಿನಾಶಿ ಭಾರತ ಖಂಡದಲ್ಲಿಯೇ ಬರುತ್ತಾರೆ. ಯಾರ ತನುವಿನಲ್ಲಿ ಬರುತ್ತಾರೆಂಬುದನ್ನು ಅವರೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸುವುದಿಲ್ಲ. ನಿಮಗೂ ಗೊತ್ತಿದೆ- ತಂದೆಯು ಯಾವುದೇ ಸಾಧು-ಮಹಾತ್ಮರಲ್ಲಿಯೂ ಸಹ ಬರಲು ಸಾಧ್ಯವಿಲ್ಲ ಏಕೆಂದರೆ ಅವರು ಹಠಯೋಗಿಗಳು, ನಿವೃತ್ತಿ ಮಾರ್ಗದವರಾಗಿದ್ದಾರೆ ಬಾಕಿ ಭಾರತವಾಸಿ ಭಕ್ತರು ಉಳಿದರು. ಭಕ್ತಿಯ ಫಲವನ್ನು ಕೊಡಲು ಭಗವಂತನೇ ಬರಬೇಕಾಗುತ್ತದೆ. ಭಾರತದಲ್ಲಿ ಭಕ್ತರಂತೂ ಅನೇಕರಿದ್ದಾರೆ, ಇವರು ಬಹಳ ದೊಡ್ಡಭಕ್ತರಾಗಿದ್ದಾರೆ, ಇವರಲ್ಲಿ ಬರಬೇಕೆಂದು ಹೇಳುತ್ತಾರೆ ಆದರೆ ಈ ರೀತಿ ಅನೇಕರು ಭಕ್ತರಾಗಿಬಿಡುತ್ತಾರೆ. ನಾಳೆ ಯಾರಿಗಾದರೂ ವೈರಾಗ್ಯ ಬಂದರೆ ಭಕ್ತರಾಗಿಬಿಡುವರು. ಅವರು ಈ ಜನ್ಮದ ಭಕ್ತರಾದರಲ್ಲವೆ. ಅಂತಹವರಲ್ಲಿ ಬರುವುದಿಲ್ಲ. ಯಾರು ಮೊಟ್ಟಮೊದಲು ಭಕ್ತಿಯನ್ನು ಪ್ರಾರಂಭಿಸಿದರೋ ಅವರಲ್ಲಿಯೇ ನಾನು ಬರುತ್ತೇನೆ, ದ್ವಾಪರದಿಂದ ಹಿಡಿದು ಭಕ್ತಿಯು ಪ್ರಾರಂಭವಾಗಿದೆ. ಇದರ ಲೆಕ್ಕವನ್ನೂ ಸಹ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ, ಎಷ್ಟು ಗುಪ್ತಮಾತುಗಳಾಗಿವೆ. ಯಾರು ಮೊಟ್ಟಮೊದಲು ಭಕ್ತಿಯನ್ನು ಪ್ರಾರಂಭಿಸುತ್ತಾರೆ, ಯಾರು ನಂಬರ್ವನ್ ಪೂಜ್ಯರಾಗಿದ್ದರು ಯಾರು ಪೂಜಾರಿಯಾಗುವರೋ, ಅವರಲ್ಲಿಯೇ ನಾನು ಬರುತ್ತೇನೆ. ಭಗವಂತನೇ ಹೇಳುತ್ತಾರೆ- ಈ ರಥ (ಬ್ರಹ್ಮಾ)ವೇ ಮೊದಲನೇ ನಂಬರಿನಲ್ಲಿ ಹೋಗುತ್ತಾರೆ ಮತ್ತೆ 84 ಜನ್ಮಗಳನ್ನೂ ಇವರೇ ತೆಗೆದುಕೊಳ್ಳುತ್ತಾರೆ. ನಾನು ಇವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ. ಇವರೇ ನಂಬರ್ ಒನ್ ರಾಜರಾಗಬೇಕಿದೆ. ಇವರೇ ಬಹಳ ಭಕ್ತಿಮಾಡುತ್ತಿದ್ದರು ಅಂದಮೇಲೆ ಭಕ್ತಿಯ ಫಲವೂ ಇವರಿಗೆ ಸಿಗಬೇಕು. ತಂದೆಯು ಮಕ್ಕಳಿಗೆ ತೋರಿಸುತ್ತಾರೆ- ನೋಡಿ, ಈ ಬ್ರಹ್ಮಾರವರು ನನ್ನಮೇಲೆ ಹೇಗೆ ಬಲಿಹಾರಿಯಾದರು! ಎಲ್ಲವನ್ನೂ ಕೊಟ್ಟುಬಿಟ್ಟರು. ಇಷ್ಟೊಂದು ಜನ ಮಕ್ಕಳಿಗೆ ಕಲಿಸುವುದಕ್ಕಾಗಿ ಹಣವೂ ಬೇಕು. ಈಶ್ವರನ ಯಜ್ಞವು ರಚಿಸಲ್ಪಟ್ಟಿದೆ, ಖುದಾ ಇದರಲ್ಲಿ ಕುಳಿತು ರುದ್ರಜ್ಞಾನಯಜ್ಞವನ್ನು ರಚಿಸುತ್ತಾರೆ, ಇದಕ್ಕೆ ವಿದ್ಯೆಯೆಂದೂ ಹೇಳಲಾಗುತ್ತದೆ. ಇಲ್ಲಿ ರುದ್ರ ಶಿವತಂದೆ ಯಾರು ಜ್ಞಾನಸಾಗರನಾಗಿದ್ದಾರೆಯೋ ಅವರೇ ಜ್ಞಾನವನ್ನು ಕೊಡುವುದಕ್ಕಾಗಿ ಯಜ್ಞವನ್ನು ರಚಿಸಿದ್ದಾರೆ. ಈ ಅಕ್ಷರವು ಸಂಪೂರ್ಣ ಸರಿಯಾಗಿದೆ- ರಾಜಸ್ವ, ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಯಜ್ಞವಾಗಿದೆ. ಇದಕ್ಕೆ ಯಜ್ಞವೆಂದು ಏಕೆ ಹೇಳುತ್ತಾರೆ? ಯಜ್ಞದಲ್ಲಂತೂ ಅವರು ಆಹುತಿ ಮಾಡುತ್ತಾರೆ, ನೀವಂತೂ ಓದುತ್ತೀರಿ. ಏನು ಆಹುತಿ ಮಾಡುತ್ತೀರಿ? ನಿಮಗೆ ಗೊತ್ತಿದೆ, ನಾವು ಓದಿ ಬುದ್ಧಿವಂತರಾಗುತ್ತೇವೆ. ನಂತರ ಈ ಇಡೀ ಪ್ರಪಂಚವೇ ಈ ಯಜ್ಞದಲ್ಲಿ ಸ್ವಾಹಾ ಆಗಿಬಿಡುತ್ತದೆ. ಯಜ್ಞದಲ್ಲಿಯೂ ಸಹ ಕೊನೆಯಲ್ಲಿ ಏನೆಲ್ಲವೂ ಸಾಮಗ್ರಿಗಳಿವೆಯೋ ಎಲ್ಲವನ್ನೂ ಹಾಕಿಬಿಡುತ್ತಾರೆ.

ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ- ನಮಗೆ ತಂದೆಯು ಓದಿಸುತ್ತಿದ್ದಾರೆ. ತಂದೆಯು ಬಹಳ ಸಾಧಾರಣವಾಗಿದ್ದಾರೆ. ಮನುಷ್ಯರಿಗೇನು ಗೊತ್ತು! ಆ ದೊಡ್ಡ-ದೊಡ್ಡವ್ಯಕ್ತಿಗಳಿಗೆ ಬಹಳ ಮಹಿಮೆಯಾಗುತ್ತದೆ. ತಂದೆಯಂತೂ ಬಹಳ ಸಾಧಾರಣ, ಸರಳರೀತಿಯಲ್ಲಿ ಕುಳಿತಿದ್ದಾರೆ. ಇದು ಮನುಷ್ಯರಿಗೆ ಹೇಗೆ ತಿಳಿಯುತ್ತದೆ? ಈ ದಾದಾರವರಂತೂ ವಜ್ರವ್ಯಾಪಾರಿಯಾಗಿದ್ದರು. ಯಾವುದೇ ಶಕ್ತಿಯು ಕಣ್ಣಿಗೆ ಕಾಣಿಸುವುದಿಲ್ಲ, ಕೇವಲ ಇವರನ್ನು (ಬ್ರಹ್ಮಾತಂದೆ) ನೋಡಿ ಇಷ್ಟನ್ನಂತೂ ಹೇಳುತ್ತಾರೆ- ಇವರಲ್ಲಿ ಏನೋ ಶಕ್ತಿಯಿದೆ. ಇವರಲ್ಲಿ ಸರ್ವಶಕ್ತಿವಂತ ತಂದೆಯಿದ್ದಾರೆಂಬುದನ್ನು ತಿಳಿಯುವುದಿಲ್ಲ. ಇವರಲ್ಲಿ ಶಕ್ತಿಯಂತೂ ಇದೆ, ಆ ಶಕ್ತಿಯು ಎಲ್ಲಿಂದ ಬಂದಿತು? ತಂದೆಯು ಪ್ರವೇಶ ಮಾಡಿದರಲ್ಲವೆ! ಅವರ ಖಜಾನೆಯನ್ನು ಸುಮ್ಮನೆ ಕೊಟ್ಟುಬಿಡುತ್ತಾರೆಯೇ! ನೀವು ಯೋಗಬಲದಿಂದ ಖಜಾನೆಯನ್ನು ಪಡೆಯುತ್ತೀರಿ. ಅವರಂತೂ ಸರ್ವಶಕ್ತಿವಂತನಾಗಿದ್ದಾರೆ, ಅವರ ಶಕ್ತಿಯು ಎಲ್ಲಿಯೂ ಹೊರಟುಹೋಗುವುದಿಲ್ಲ. ಪವರಮಾತ್ಮನನ್ನು ಸರ್ವಶಕ್ತಿವಂತನೆಂದು ಏಕೆ ಗಾಯನ ಮಾಡಲಾಗುತ್ತದೆ? ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ- ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರಲ್ಲಂತೂ ಪೂರ್ಣ ತುಕ್ಕು ಹಿಡಿದಿತ್ತು- ಹಳೆಯ ದೇಹ, ಹಳೆಯ ಶರೀರ, ಇವರ ಬಹಳ ಜನ್ಮಗಳ ಅಂತ್ಯದಲ್ಲಿ ಬರುತ್ತೇನೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದನ್ನು ಯಾರೂ ತೆಗೆಯಲು ಸಾಧ್ಯವಿಲ್ಲ. ತುಕ್ಕುನ್ನು ತೆಗೆಯುವವರು ಒಬ್ಬರೇ ಸದ್ಗುರುವಾಗಿದ್ದಾರೆ, ಅವರು ಸದಾ ಪಾವನನಾಗಿದ್ದಾರೆ. ಇದನ್ನು ನೀವು ತಿಳಿದುಕೊಂಡಿದ್ದೀರಿ, ಇದೆಲ್ಲವನ್ನೂ ಬುದ್ಧಿಯಲ್ಲಿ ಇಟ್ಟುಕೊಳ್ಳಲು ಸಮಯವೂ ಬೇಕು. ನೀವು ಮಕ್ಕಳಿಗೆ ತಂದೆಯು ಎಲ್ಲವನ್ನೂ ವ್ಹಿಲ್ ಮಾಡಿಬಿಡುತ್ತಾರೆ. ತಂದೆ ಜ್ಞಾನದ ಸಾಗರ, ಶಾಂತಿಯಸಾಗರ ನಾಗಿದ್ದಾರೆ ಬರುವುದು ಹಳೆಯ ಪ್ರಪಂಚದಲ್ಲಿ, ಯಾರು ವಜ್ರ ಸಮಾನರಾಗಿದ್ದರು ನಂತರ ಕವಡೆಯ ಸಮಾನರಾದರು, ಅವರಲ್ಲಿ ಪ್ರವೇಶ ಮಾಡುತ್ತಾರೆ. ಅವರು ಭಲೆ ಈ ಸಮಯದಲ್ಲಿ ಕೋಟ್ಯಾಧಿಪತಿ ಯಾಗಿರಬಹುದು ಆದರೆ ಅಲ್ಪಕಾಲಕ್ಕಾಗಿ. ಎಲ್ಲರದೂ ಸಮಾಪ್ತಿಯಾಗಿಬಿಡುತ್ತದೆ. ಮೌಲ್ಯವಂತರಂತೂ ನೀವಾಗುತ್ತೀರಿ. ಈಗ ನೀವೂ ವಿದ್ಯಾರ್ಥಿಗಳಾಗಿದ್ದೀರಿ, ಇವರೂ ವಿದ್ಯಾರ್ಥಿಯಾಗಿದ್ದಾರೆ, ಇವರು ಬಹಳ ಜನ್ಮಗಳ ಅಂತ್ಯದಲ್ಲಿದ್ದಾರೆ. ಇವರ ಆತ್ಮದಲ್ಲಿ ತುಕ್ಕುಹಿಡಿದಿದೆ. ಯಾರು ಬಹಳ ಚೆನ್ನಾಗಿ ಓದುವರೋ ಅವರಲ್ಲಿಯೇ ತುಕ್ಕುಹಿಡಿದಿದೆ ಅವರೇ ಎಲ್ಲರಿಗಿಂತ ಹೆಚ್ಚಿನ ಪತಿತರಾಗುತ್ತಾರೆ, ಮತ್ತೆ ಅವರೇ ಪಾವನರಾಗಬೇಕಾಗಿದೆ. ಈ ನಾಟಕವು ಮಾಡಲ್ಪಟ್ಟಿದೆ. ತಂದೆಯಂತೂ ಸತ್ಯವಾದ ಮಾತನ್ನು ತಿಳಿಸುತ್ತಾರೆ, ತಂದೆಯು ಸತ್ಯವಾಗಿದ್ದಾರೆ ಅವರೆಂದೂ ಅಸತ್ಯವನ್ನು ಹೇಳುವುದಿಲ್ಲ. ಇವೆಲ್ಲಾ ಮಾತುಗಳನ್ನು ಮನುಷ್ಯರು ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವು ಮಕ್ಕಳ ವಿನಃ ಮನುಷ್ಯರಿಗೆ ಹೇಗೆ ತಿಳಿಯುತ್ತದೆ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೇಷ್ಠ ಪದವಿ ಪಡೆಯಲು ತಂದೆಯನ್ನು ಪೂರ್ಣ ಅನುಸರಿಸಬೇಕಾಗಿದೆ, ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿ ಟ್ರಸ್ಟಿಯಾಗಿ ಎಲ್ಲವನ್ನೂ ಸಂಭಾಲನೆ ಮಾಡಬೇಕು, ಪೂರ್ಣ ಬಲಿಹಾರಿಯಾಗಬೇಕಾಗಿದೆ. ಆಹಾರ-ಪಾನೀಯ, ಚಲನೆ-ವಲನೆ ಸಾಧಾರಣವಾಗಿರಬೇಕು, ಬಹಳ ಉನ್ನತಮಟ್ಟದ್ದೂ ಆಗಿರಬಾರದು, ಕನಿಷ್ಠಮಟ್ಟದ್ದೂ ಆಗಿರಬಾರದು.

2. ತಂದೆಯು ಯಾವ ಸುಖ-ಶಾಂತಿ, ಜ್ಞಾನದ ಖಜಾನೆಯನ್ನು ವ್ಹಿಲ್ ಮಾಡಿದ್ದಾರೆಯೋ ಅದನ್ನು ಅನ್ಯರಿಗೂ ಕೊಡಬೇಕು. ಕಲ್ಯಾಣಕಾರಿಗಳಾಗಬೇಕಾಗಿದೆ.

ವರದಾನ:
ಪವಿತ್ರತೆಯ ಗುಹ್ಯತೆಯನ್ನು ತಿಳಿದು ಸುಖ-ಶಾಂತಿ ಸಂಪನ್ನರಾಗುವಂತಹ ಮಹಾನ್ ಆತ್ಮ ಭವ.

ಪವಿತ್ರತೆಯ ಶಕ್ತಿಯ ಮಹಾನತೆಯನ್ನು ತಿಳಿದು ಪವಿತ್ರ ಅರ್ಥಾತ್ ಪೂಜ್ಯ ದೇವಾತ್ಮರು ಈಗಲೇ ಆಗಿ. ಅಂತ್ಯದಲ್ಲಿ ಹಾಗುವೆ ಎಂದಲ್ಲ. ಇಲ್ಲಿ ಬಹಳಕಾಲದಿಂದ ಜಮಾ ಮಾಡಿಕೊಂಡಿರುವ ಶಕ್ತಿ ಅಂತ್ಯದಲ್ಲಿ ಕೆಲಸಕ್ಕೆ ಬರುತ್ತದೆ. ಪವಿತ್ರರಾಗುವುದು ಏನೂ ಸಾಧಾರಣಮಾತಲ್ಲ. ಬ್ರಹ್ಮಚಾರಿಯಾಗಿದ್ದರೆ, ಪವಿತ್ರರಾಗಿಬಿಟ್ಟೆ ಎಂದು ತಿಳಿಯುತ್ತಾರೆ.... ಆದರೆ ಪವಿತ್ರತೆ ಜನನಿಯಾಗಿದೆ, ಸಂಕಲ್ಪದಿಂದಾಗಲಿ, ವೃತ್ತಿಯಿಂದಾಗಲಿ, ವಾಯುಮಂಡಲದಿಂದ, ವಾಣಿಯಿಂದ, ಸಂಪರ್ಕದಿಂದ ಸುಖ-ಶಾಂತಿಯ ಜನನಿಯಾಗಬೇಕು - ಇವರಿಗೆ ಹೇಳಲಾಗುತ್ತೆ ಮಹಾನ್ ಆತ್ಮ.

ಸ್ಲೋಗನ್:
ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿ ಸರ್ವ ಆತ್ಮರಿಗೆ ದಯಾದೃಷ್ಠಿ ನೀಡಿ, ವೈಬ್ರೇಷನ್ ಹರಡಿ.