13.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಶ್ರೀಮತದಂತೆ ತತ್ವಗಳ ಸಹಿತವಾಗಿ ಇಡೀ ಪ್ರಪಂಚವನ್ನು ಪಾವನವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ,
ಎಲ್ಲರಿಗೂ ಸುಖ ಮತ್ತು ಶಾಂತಿಯ ಮಾರ್ಗವನ್ನು ತಿಳಿಸಬೇಕಾಗಿದೆ”
ಪ್ರಶ್ನೆ:
ನೀವು ಮಕ್ಕಳು
ತಮ್ಮ ದೇಹವನ್ನೂ ಮರೆಯುವ ಪುರುಷಾರ್ಥ ಮಾಡುತ್ತೀರಿ, ಆದ್ದರಿಂದ ನಿಮಗೆ ಯಾವ ವಸ್ತುವಿನ
ಅವಶ್ಯಕತೆಯಿಲ್ಲ?
ಉತ್ತರ:
ಚಿತ್ರಗಳ
ಅವಶ್ಯಕತೆಯಿಲ್ಲ. ಯಾವಾಗ ಈ ಚಿತ್ರ(ದೇಹ)ವನ್ನೇ ಮರೆಯಬೇಕಾಗಿದೆ, ಅಂದಮೇಲೆ ಆ ಚಿತ್ರಗಳ
ಅವಶ್ಯಕತೆಯೇನಿದೆ? ಸ್ವಯಂನ್ನು ಆತ್ಮನೆಂದು ತಿಳಿದು ವಿದೇಹಿ ತಂದೆಯನ್ನು ಮತ್ತು ಮಧುರ ಮನೆಯನ್ನು
ನೆನಪು ಮಾಡಿ. ಈ ಚಿತ್ರಗಳು ಚಿಕ್ಕ ಮಕ್ಕಳಿಗಾಗಿ ಅರ್ಥಾತ್ ಹೊಸಬರಿಗಾಗಿ ಇವೆ. ನೀವಂತೂ
ನೆನಪಿನಲ್ಲಿರಬೇಕು ಮತ್ತು ಎಲ್ಲರಿಗೆ ನೆನಪು ಮಾಡಿಸಬೇಕಾಗಿದೆ. ಉದ್ಯೋಗ - ವ್ಯವಹಾರಗಳನ್ನು
ಮಾಡುತ್ತಾ ಸತೋಪ್ರಧಾನರಾಗಲು ನೆನಪಿನಲ್ಲಿಯೇ ಇರುವ ಅಭ್ಯಾಸ ಮಾಡಿ.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ.........
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ, ಈ ಶಬ್ಧಗಳನ್ನು ಕೇಳಿದಿರಿ ಮತ್ತು ಕೂಡಲೆ ಖುಷಿಯಲ್ಲಿ ರೋಮಾಂಚನವಾಗಿ
ಬಿಟ್ಟಿರುತ್ತೀರಿ. ಏಕೆಂದರೆ ಮಕ್ಕಳಿಗೆ ತಿಳಿದಿದೆ - ಇಲ್ಲಿ ಸೌಭಾಗ್ಯ, ಸ್ವರ್ಗದ ಅದೃಷ್ಟವನ್ನು
ಪಡೆಯಲು ಬಂದಿದ್ದೀರಿ, ಹೀಗೆ ಮತ್ತೆಲ್ಲಿಯೂ ಹೇಳುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು
ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅರ್ಥಾತ್ ಸ್ವರ್ಗವನ್ನಾಗಿ ಮಾಡುವ
ಪುರುಷಾರ್ಥ ಮಾಡುತ್ತಿದ್ದೇವೆ. ಕೇವಲ ಸ್ವರ್ಗವಾಸಿಗಳಾಗುವುದಲ್ಲ ಆದರೆ ಸ್ವರ್ಗದಲ್ಲಿ ಶ್ರೇಷ್ಠ
ಪದವಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೇವೆ. ಸ್ವರ್ಗದ ಸಾಕ್ಷಾತ್ಕಾರ ಮಾಡಿಸುವ ತಂದೆಯೇ
ನಮಗೆ ಓದಿಸುತ್ತಿದ್ದಾರೆ. ಇದೂ ಸಹ ಮಕ್ಕಳಿಗೆ ನಶೆಯಿರಬೇಕು. ಭಕ್ತಿಯು ಈಗ ಮುಗಿಯಲಿದೆ. ಭಗವಂತನು
ಭಕ್ತರ ಉದ್ಧಾರ ಮಾಡಲು ಬರುತ್ತಾರೆಂದು ಹೇಳಲಾಗುತ್ತದೆ ಏಕೆಂದರೆ ರಾವಣನ ಬಂಧನಗಳಲ್ಲಿ ಸಿಕ್ಕಿ
ಹಾಕಿಕೊಂಡಿದ್ದಾರೆ. ಅನೇಕ ಮನುಷ್ಯರ ಅನೇಕ ಮತಗಳಿವೆ. ನೀವಂತೂ ಅರಿತುಕೊಂಡಿದ್ದೀರಿ. ಸೃಷ್ಟಿಚಕ್ರದ
ಈ ಅನಾದಿ ಆಟವು ಮಾಡಲ್ಪಟ್ಟಿದೆ. ಇದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ
ನಾವು ಪ್ರಾಚೀನ ಹೊಸ ಪ್ರಪಂಚದ ನಿವಾಸಿಗಳಾಗಿದ್ದೆವು, ಈಗ ಹಳೆಯ ಪ್ರಪಂಚದ ನಿವಾಸಿಗಳಾಗಿದ್ದೇವೆ.
ತಂದೆಯು ಸ್ವರ್ಗ ಹೊಸ ಪ್ರಪಂಚವನ್ನಾಗಿ ಮಾಡಿದರು ಮತ್ತೆ ರಾವಣನು ನರಕವನ್ನಾಗಿ ಮಾಡಿದ್ದಾನೆ. ಬಾಪ್
ದಾದಾರವರ ಮತದಂತೆ ನೀವೀಗ ತಮಗಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೀರಿ, ಹೊಸ
ಪ್ರಪಂಚಕ್ಕಾಗಿ ಓದುತ್ತಿದ್ದೀರಿ. ಯಾರು ಓದಿಸುತ್ತಾರೆ? ಜ್ಞಾನ ಸಾಗರ, ಪತಿತ - ಪಾವನ, ಅವರಿಗೆ
ಮಹಿಮೆಯಿದೆ. ಆ ಒಬ್ಬರ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ. ಅವರೇ ಪತಿತ-ಪಾವನನಾಗಿದ್ದಾರೆ.
ನಾವೆಲ್ಲರೂ ಪತಿತರಾಗಿದ್ದೇವೆ. ಯಾರಿಗೂ ಪಾವನ ಪ್ರಪಂಚದ ನೆನಪು ಇಲ್ಲ, ನೀವೀಗ ತಿಳಿದುಕೊಂಡಿದ್ದೀರಿ
- ಅವಶ್ಯವಾಗಿ 5000 ವರ್ಷಗಳ ಮೊದಲು ಪಾವನ ಪ್ರಪಂಚವಿತ್ತು, ಈ ಭಾರತವೇ ಇತ್ತು. ಉಳಿದೆಲ್ಲಾ
ಧರ್ಮದವರು ಶಾಂತಿಯಲ್ಲಿದ್ದರು. ನಾವು ಭಾರತವಾಸಿಗಳು ಸುಖಧಾಮದಲ್ಲಿದ್ದೆವು. ಮನುಷ್ಯರು ಶಾಂತಿಯನ್ನು
ಬಯಸುತ್ತಾರೆ ಆದರೆ ಇಲ್ಲಂತೂ ಯಾರೂ ಶಾಂತವಾಗಿರಲು ಸಾಧ್ಯವಿಲ್ಲ. ಇದು ಶಾಂತಿಧಾಮವಲ್ಲ. ಅದು
ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿಂದ ನಾವು ಬರುತ್ತೇವೆ. ಬಾಕಿ ಸತ್ಯಯುಗವು ಸುಖಧಾಮವಾಗಿದೆ,
ಅದಕ್ಕೆ ಶಾಂತಿಧಾಮವೆಂದು ಹೇಳುವುದಿಲ್ಲ. ಅಲ್ಲಿ ನೀವು ಪವಿತ್ರತೆ, ಸುಖ, ಶಾಂತಿಯಲ್ಲಿರುತ್ತೀರಿ,
ಯಾವುದೇ ಏರುಪೇರುಗಳು ಇರುವುದಿಲ್ಲ. ಮನೆಯಲ್ಲಿ ಮಕ್ಕಳು ಜಗಳ-ಕಲಹ ಮಾಡಿಕೊಂಡರೂ ಅವರಿಗೆ
ಶಾಂತವಾಗಿರಿ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವಾತ್ಮರು ಆ ಶಾಂತಿ
ದೇಶದವರಾಗಿದ್ದೀರಿ. ಈಗ ಈ ಜಗಳದ ಪ್ರಪಂಚದಲ್ಲಿ ಬಂದು ಕುಳಿತಿದ್ದೀರಿ. ಈ ಮಾತು ನಿಮ್ಮ
ಬುದ್ಧಿಯಲ್ಲಿದೆ. ನೀವು ತಂದೆಯ ಮೂಲಕ ಪುನಃ ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುವ
ಪುರುಷಾರ್ಥ ಮಾಡುತ್ತಿದ್ದೀರಿ. ಈ ಶಾಲೆಯು ಕಡಿಮೆಯೇ? ಇದು ಪರಮಾತ್ಮನ ವಿಶ್ವ ವಿದ್ಯಾಲಯವಾಗಿದೆ.
ಇಡೀ ಪ್ರಪಂಚದಲ್ಲಿ, ಇದೇ ಅತಿ ದೊಡ್ಡ ವಿಶ್ವ ವಿದ್ಯಾಲಯವಾಗಿದೆ. ಇದರಲ್ಲಿ ಎಲ್ಲರೂ ತಂದೆಯಿಂದ
ಶಾಂತಿ ಮತ್ತು ಸುಖದ ಆಸ್ತಿಯನ್ನು ಪಡೆಯುತ್ತಾರೆ. ಒಬ್ಬ ತಂದೆಯ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ.
ಬ್ರಹ್ಮನಿಗೂ ಮಹಿಮೆಯಿಲ್ಲ. ತಂದೆಯೇ ಈ ಸಮಯದಲ್ಲಿ ಬಂದು ಆಸ್ತಿಯನ್ನು ಕೊಡುತ್ತಾರೆ ನಂತರ ಸುಖವೇ
ಸುಖವಿರುತ್ತದೆ. ಸುಖ-ಶಾಂತಿಯನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರದೇ ಮಹಿಮೆಯಿದೆ.
ಸತ್ಯ-ತ್ರೇತಾಯುಗದಲ್ಲಿ ಯಾರದೇ ಮಹಿಮೆಯಾಗುವುದಿಲ್ಲ. ಅಲ್ಲಂತೂ ರಾಜಧಾನಿಯು ನಡೆಯುತ್ತಿರುತ್ತದೆ.
ನೀವು ಆಸ್ತಿಯನ್ನು ಪಡೆದುಕೊಳ್ಳುತ್ತೀರಿ ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ, ಯಾರಿಗೂ
ಮಹಿಮೆಯಿಲ್ಲ. ಭಲೆ ಕ್ರಿಸ್ತನು ಧರ್ಮ ಸ್ಥಾಪನೆ ಮಾಡುತ್ತಾರೆ ಆದರೆ ಅದನ್ನಂತೂ ಮಾಡಲೇಬೇಕಾಗಿದೆ.
ಧರ್ಮ ಸ್ಥಾಪನೆ ಮಾಡಿದರೂ ಸಹ ಮತ್ತೆ ಕೆಳಗಿಳಿಯತೊಡಗುತ್ತಾರೆ ಅಂದ ಮೇಲೆ ಅವರ ಮಹಿಮೆಯೇನಾಯಿತು?
ಮಹಿಮೆಗೆ ಯೋಗ್ಯರಾದವರು ಒಬ್ಬರೇ ಆಗಿದ್ದಾರೆ. ಅವರಿಗೆ ಪತಿತ-ಪಾವನ, ಮುಕ್ತಿದಾತನೆಂದು ಹೇಳಿ
ಕರೆಯುತ್ತಾರೆ. ಅವರಿಗೆ ಕ್ರಿಸ್ತ, ಬುದ್ಧ ಮೊದಲಾದವರು ನೆನಪು ಬರುತ್ತಾ ಇರುತ್ತಾರೆಂದಲ್ಲ. ಓ ಗಾಡ್
ಫಾದರ್ ಎಂದು ನೆನಪೂ ಸಹ ಒಬ್ಬರನ್ನೇ ಮಾಡುತ್ತಾರೆ. ಸತ್ಯಯುಗದಲ್ಲಿ ಯಾರದೇ ಮಹಿಮೆಯಾಗುವುದಿಲ್ಲ.
ಕೊನೆಯಲ್ಲಿ ಈ ಧರ್ಮಗಳು ಆರಂಭವಾದಾಗ ತಂದೆಯ ಮಹಿಮೆಯನ್ನು ಹಾಡುತ್ತಾರೆ ಮತ್ತು ಭಕ್ತಿಯು
ಆರಂಭವಾಗುತ್ತದೆ. ನಾಟಕವು ಹೇಗೆ ಮಾಡಲ್ಪಟ್ಟಿದೆ, ಹೇಗೆ ಚಕ್ರವು ಸುತ್ತುತ್ತದೆ ಎಂಬುದನ್ನು ಯಾರು
ತಂದೆಯ ಮಕ್ಕಳಾಗಿದ್ದಾರೆಯೋ ಅವರೇ ತಿಳಿದುಕೊಂಡಿದ್ದಾರೆ ತಂದೆಯು ರಚಯಿತನಾಗಿದ್ದಾರೆ. ಹೊಸ ಸೃಷ್ಟಿ
ಸ್ವರ್ಗವನ್ನು ರಚಿಸುತ್ತಾರೆ ಆದರೆ ಎಲ್ಲರೂ ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ. ಡ್ರಾಮಾದ
ರಹಸ್ಯವನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ತಂದೆಯಿಂದ ಸುಖದ ಆಸ್ತಿಯು ಸಿಗುತ್ತದೆ. ಈ ಸಮಯದಲ್ಲಿ
ಎಲ್ಲರೂ ದುಃಖಿಯಾಗಿದ್ದಾರೆ. ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ ಮತ್ತೆ ಸುಖದಲ್ಲಿ ಬರುತ್ತಾರೆ.
ನೀವು ಮಕ್ಕಳಿಗೆ ಬಹಳ ಒಳ್ಳೆಯ ಪಾತ್ರವು ಸಿಕ್ಕಿದೆ, ಯಾವ ತಂದೆಗೆ ಇಷ್ಟೊಂದು ಮಹಿಮೆಯಿದೆಯೋ ಅವರು
ಈಗ ಬಂದು ಸನ್ಮುಖದಲ್ಲಿ ಕುಳಿತಿದ್ದಾರೆ ಮತ್ತು ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಎಲ್ಲರೂ
ಮಕ್ಕಳಲ್ಲವೆ. ತಂದೆಯಂತೂ ಸದಾ ಸಂತೋಷವಾಗಿರುತ್ತಾರೆ. ವಾಸ್ತವದಲ್ಲಿ ತಂದೆಗೆ ಇದನ್ನು
ಹೇಳುವಂತಿಲ್ಲ. ಒಂದುವೇಳೆ ಅವರು ಸಂತೋಷವಾಗಿದ್ದಾರೆ ಎಂದು ಹೇಳುವುದಾದರೆ ಅಸಂತೋಷವೂ
ಆಗಬೇಕಾಗುತ್ತದೆ ಆದರೆ ತಂದೆಯು ಇವೆಲ್ಲದರಿಂದ ಭಿನ್ನವಾಗಿದ್ದಾರೆ. ಯಾವುದು ತಂದೆಯ ಮಹಿಮೆಯಿದೆ ಅದೇ
ಈ ಸಮಯದಲ್ಲಿ ನಿಮ್ಮ ಮಹಿಮೆಯಾಗಿದೆ. ಮತ್ತೆ ಭವಿಷ್ಯದಲ್ಲಿ ನಿಮ್ಮ ಮಹಿಮೆಯು ಬೇರೆಯಾಗಿರುವುದು.
ಹೇಗೆ ತಂದೆಯು ಜ್ಞಾನ ಸಾಗರನಾಗಿದ್ದಾರೆಯೋ ಹಾಗೆಯೇ ನೀವೂ ಆಗಿದ್ದೀರಿ, ನಿಮ್ಮ ಬುದ್ಧಿಯಲ್ಲಿ
ಸೃಷ್ಟಿಚಕ್ರದ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಸುಖದ ಸಾಗರನಾಗಿದ್ದಾರೆ,
ಅವರಿಂದ ಅಪಾರ ಸುಖವು ಸಿಗುತ್ತದೆ. ಈ ಸಮಯದಲ್ಲಿ ನೀವು ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತಿದ್ದೀರಿ. ತಂದೆಯು ಮಕ್ಕಳಿಗೆ ಈಗ ಶ್ರೇಷ್ಠ ಕರ್ಮವನ್ನು ಕಲಿಸುತ್ತಿದ್ದಾರೆ.
ಹೇಗೆ ಈ ಲಕ್ಷ್ಮೀ-ನಾರಾಯಣರಿದ್ದಾರೆ ಇವರು ಅವಶ್ಯವಾಗಿ ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ
ಮಾಡಿದ್ದಾರೆ ಆದ್ದರಿಂದ ಈ ಪದವಿ ಪಡೆದಿದ್ದಾರೆ. ಇವರು ರಾಜ್ಯವನ್ನು ಹೇಗೆ ಪಡೆದರು ಎಂದು
ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ.
ತಂದೆಯು ತಿಳಿಸುತ್ತಾರೆ
- ನೀವು ಮಕ್ಕಳು ಈಗ ಇಂತಹ ದೇವತೆಗಳಾಗುತ್ತಿದ್ದೀರಿ, ನಿಮ್ಮ ಬುದ್ಧಿಯಲ್ಲಿ ಬರುತ್ತದೆ - ನಾವೇ ಈ
ರೀತಿಯಾಗಿದ್ದೆವು ಈಗ ಪುನಃ ಆಗುತ್ತೇವೆ. ತಂದೆಯು ಕುಳಿತು ಕರ್ಮ - ಅಕರ್ಮ - ವಿಕರ್ಮದ ಗತಿಯನ್ನು
ತಿಳಿಸುತ್ತಾರೆ, ಇದರಿಂದ ನಾವು ಈ ರೀತಿಯಾಗುತ್ತೇವೆ. ಶ್ರೀಮತವನ್ನು ಕೊಡುತ್ತಾರೆ ಅಂದಮೇಲೆ
ಶ್ರೀಮತವನ್ನು ಅರಿತುಕೊಳ್ಳಬೇಕಲ್ಲವೆ. ಶ್ರೀಮತದಿಂದ ಇಡೀ ಪ್ರಪಂಚವು ತತ್ವಗಳ ಸಹಿತ ಎಲ್ಲರನ್ನೂ
ಶ್ರೇಷ್ಠರನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠರಾಗಿದ್ದೀರಿ, ಅಲ್ಲಿ ಯಾವುದೇ
ಏರುಪೇರು ಅಥವಾ ಬಿರುಗಾಳಿ ಇತ್ಯಾದಿಗಳೇನೂ ಇರುವುದಿಲ್ಲ. ಹೆಚ್ಚು ಬಿಸಿಲಾಗಲಿ, ಚಳಿಯಾಗಲೀ
ಇರುವುದಿಲ್ಲ. ಸದಾ ವಸಂತ ಋತು ಇರುತ್ತದೆ. ಅಲ್ಲಿ ನೀವು ಎಷ್ಟೊಂದು ಸುಖಿಯಾಗಿರುತ್ತೀರಿ! ಅವರಂತೂ
ಖುದಾನು ಹೆವೆನ್ ಅಥವಾ ಬಹಿಷ್ತ್ ಸ್ವರ್ಗ ಸ್ಥಾಪನೆ ಮಾಡುತ್ತಾರೆಂದು ಹಾಡುತ್ತಾರೆ ಅಂದಮೇಲೆ
ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು. ಯಾವಾಗಲೂ ಮಾತಾಪಿತರನ್ನು ಫಾಲೋ
ಮಾಡಿ ಎಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ
ಮತ್ತು ತಂದೆಯ ಜೊತೆ ನಾವಾತ್ಮರು ಒಟ್ಟಿಗೆ ಹೋಗುತ್ತೇವೆ. ಶ್ರೀಮತದಂತೆ ನಡೆದು ಪ್ರತಿಯೊಬ್ಬರಿಗೂ
ಮಾರ್ಗವನ್ನು ತಿಳಿಸಬೇಕಾಗಿದೆ.
ಬೇಹದ್ದಿನ ತಂದೆಯು
ಸ್ವರ್ಗದ ರಚಯಿತನಾಗಿದ್ದಾರೆ. ಈಗಂತೂ ನರಕವಾಗಿದೆ ಅಂದಮೇಲೆ ಅವಶ್ಯವಾಗಿ ನರಕದಲ್ಲಿಯೇ ಸ್ವರ್ಗದ
ಆಸ್ತಿಯನ್ನು ಕೊಟ್ಟಿರಬೇಕು. ಈಗ 84 ಜನ್ಮಗಳು ಪೂರ್ಣವಾಗುತ್ತವೆ ಮತ್ತೆ ನಾವು ಮೊದಲ ಜನ್ಮವನ್ನು
ಸ್ವರ್ಗದಲ್ಲಿ ತೆಗೆದುಕೊಳ್ಳಬೇಕಾಗಿದೆ. ನಿಮ್ಮ ಗುರಿ - ಧ್ಯೇಯವು ಸಮ್ಮುಖದಲ್ಲಿ ನಿಂತಿದೆ. ಈ
ಲಕ್ಷ್ಮೀ-ನಾರಾಯಣರಂತೆ ಆಗಬೇಕಾಗಿದೆ. ನಾವೇ ಲಕ್ಷ್ಮೀ - ನಾರಾಯಣರಾಗುತ್ತೇವೆ. ವಾಸ್ತವದಲ್ಲಿ ಈ
ಚಿತ್ರಗಳ ಅವಶ್ಯಕತೆಯೂ ಇಲ್ಲ. ಯಾರು ಕಚ್ಛಾ ಇದ್ದಾರೆ, ಪದೇ-ಪದೇ ಮರೆತು ಹೋಗುತ್ತಾರೆಯೋ ಅವರಿಗಾಗಿ
ಚಿತ್ರಗಳನ್ನಿಡಲಾಗುತ್ತದೆ. ಕೆಲವರು ಕೃಷ್ಣನ ಚಿತ್ರವನ್ನಿಟ್ಟುಕೊಳ್ಳುತ್ತಾರೆ. ಕೃಷ್ಣನನ್ನು ನೋಡದೆ
ನೆನಪು ಮಾಡಲು ಆಗುವುದಿಲ್ಲ. ಎಲ್ಲರ ಬುದ್ದಿಯಲ್ಲಿ ಚಿತ್ರವಂತೂ ಇರುತ್ತದೆ. ನಿಮಗೆ ಯಾವುದೇ
ಚಿತ್ರವನ್ನು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ನೀವು ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ. ನೀವು
ತನ್ನ ಚಿತ್ರ (ಶರೀರ) ವನ್ನೂ ಸಹ ಮರೆಯಬೇಕಾಗಿದೆ. ದೇಹ ಸಹಿತ ಎಲ್ಲಾ ಸಂಬಂಧಗಳನ್ನು ಮರೆಯಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ನನ್ನನ್ನು ನೆನಪು
ಮಾಡಿ ಆಗ ವಿಕರ್ಮಗಳು ವಿನಾಶವಾಗುವವು. ಇಂತಹ ಸ್ಥಿತಿಯಿರಲಿ ಯಾವುದೇ ಸಮಯದಲ್ಲಿ ಶರೀರ ಬಿಟ್ಟರೂ ಸಹ
ನಾವು ಈ ಹಳೆಯ ಪ್ರಪಂಚವನ್ನು ಬಿಟ್ಟು ಈಗ ತಂದೆಯ ಬಳಿ ಹೋಗುತ್ತೇವೆಂದು ತಿಳಿದುಕೊಳ್ಳಬೇಕು. 84
ಜನ್ಮಗಳು ಪೂರ್ಣವಾಯಿತು, ಈಗ ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ಆದೇಶ ನೀಡಿದ್ದಾರೆ - ನನ್ನನ್ನು
ನೆನಪು ಮಾಡಿ, ಕೇವಲ ತಂದೆಯನ್ನೂ ಮತ್ತು ಮಧುರ ಮನೆಯನ್ನೂ ನೆನಪು ಮಾಡಿ ಬುದ್ಧಿಯಲ್ಲಿದೆ ನಾನಾತ್ಮ
ಅಶರೀರಿಯಾಗಿದ್ದೆನು ನಂತರ ಇಲ್ಲಿ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಶರೀರವನ್ನು ಧಾರಣೆ
ಮಾಡಿದ್ದೇನೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತನಾಗಿ ಬಿಟ್ಟಿದ್ದೇನೆ. ಈ ಶರೀರವಂತೂ
ಹಳೆಯ ಪಾದರಕ್ಷೆಯಾಗಿದೆ. ಆತ್ಮವು ಪವಿತ್ರವಾಗುತ್ತಿದೆ. ಪವಿತ್ರ ಶರೀರವಂತೂ ಇಲ್ಲಿ ಸಿಗಲು
ಸಾಧ್ಯವಿಲ್ಲ, ನಾವಾತ್ಮರು ಈಗ ಹಿಂತಿರುಗಿ ಮನೆಗೆ ಹೋಗುತ್ತೇವೆ. ಮೊದಲು
ರಾಜಕುಮಾರ-ಕುಮಾರಿಯರಾಗುತ್ತೇವೆ ಮತ್ತೆ ಸ್ವಯಂವರದ ನಂತರ ಲಕ್ಷ್ಮಿ - ನಾರಾಯಣರಾಗುತ್ತೇವೆ.
ರಾಧೆ-ಕೃಷ್ಣರು ಯಾರೆಂಬುದು ಗೊತ್ತೇ ಇಲ್ಲ. ಇಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿದ್ದರು ನಂತರ ಅವರ
ಸ್ವಯಂವರವಾಯಿತು. ನೀವು ಮಕ್ಕಳಲ್ಲಿಯೂ ಕೆಲವರು ಧ್ಯಾನದಲ್ಲಿ ಸ್ವಯಂವರವನ್ನು ನೋಡಿದ್ದಾರೆ.
ಆರಂಭದಲ್ಲಿ ಬಹಳ ಸಾಕ್ಷಾತ್ಕಾರಗಳಾಗುತ್ತಿತ್ತು ಏಕೆಂದರೆ ನಿಮ್ಮನ್ನು ಪಾಕಿಸ್ತಾನದಲ್ಲಿ
ಖುಷಿಯಲ್ಲಿಡಲು ಇವೆಲ್ಲಾ ಪಾತ್ರಗಳು ನಡೆಯುತ್ತಿತ್ತು. ಕೊನೆಯಲ್ಲಂತೂ ಹೊಡೆದಾಟಗಳು, ಭೂಕಂಪ
ಬಹಳಷ್ಟು ನಡೆಯುವುದು. ನಿಮಗೆ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ನಾನು ಯಾವ ಪದವಿಯನ್ನು
ಪಡೆಯುತ್ತೇನೆಂದು ಪ್ರತಿಯೊಬ್ಬರಿಗೆ ಅರ್ಥವಾಗುತ್ತದೆ. ನಂತರ ಕಡಿಮೆ ಓದಿರುವವರು ಬಹಳ ಪಶ್ಚಾತ್ತಾಪ
ಪಡುತ್ತಾರೆ. ಆಗ ತಂದೆಯು ಹೇಳುತ್ತಾರೆ - ನೀವೇ ಓದಲಿಲ್ಲ ಅನ್ಯರಿಗೂ ಓದಿಸಲಿಲ್ಲ, ನೆನಪಿನಲ್ಲಿಯೂ
ಇರುತ್ತಿರಲಿಲ್ಲ. ನೆನಪಿನಿಂದಲೇ ಸತೋಪ್ರಧಾನರಾಗಲು ಸಾಧ್ಯ. ಪತಿತ-ಪಾವನನಂತೂ ತಂದೆಯೇ ಆಗಿದ್ದಾರೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ತುಕ್ಕು ಬಿಟ್ಟು
ಹೋಗುವುದು. ನೆನಪಿನ ಯಾತ್ರೆಯ ಪುರುಷಾರ್ಥ ಮಾಡಬೇಕಾಗಿದೆ. ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ,
ಕರ್ಮವನ್ನಂತೂ ಮಾಡಲೇಬೇಕಲ್ಲವೆ ಆದರೆ ಬುದ್ಧಿಯೋಗವು ಮೇಲಿರಲಿ. ತಮೋಪ್ರಧಾನರಿಂದ ಸತೋಪ್ರಧಾನರು
ಇಲ್ಲಿಯೇ ಆಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನೀವು ನನ್ನನ್ನು ನೆನಪು ಮಾಡಿ ಆಗಲೇ ನೀವು
ಹೊಸ ಪ್ರಪಂಚದ ಮಾಲೀಕರಾಗುವಿರಿ. ತಂದೆಯು ಮತ್ತೇನೂ ಕಷ್ಟವನ್ನು ಕೊಡುವುದಿಲ್ಲ. ನಿಮಗೆ ಬಹಳ ಸಹಜ
ಉಪಾಯವನ್ನು ತಿಳಿಸುತ್ತಾರೆ. ಸುಖಧಾಮದ ಮಾಲೀಕರಾಗಲು ನನ್ನೊಬ್ಬನನ್ನೇ ನೆನಪು ಮಾಡಿ. ಈಗ ನೀವು
ನೆನಪು ಮಾಡಿಕೊಳ್ಳಿ, ತಂದೆಯೂ ಸಹ ನಕ್ಷತ್ರ ಮಾದರಿಯಾಗಿ ಇದ್ದಾರೆ. ಅವರು
ಸರ್ವಶಕ್ತಿವಂತನಾಗಿದ್ದಾರೆ. ಬಹಳ ತೇಜೋಮಯನಾಗಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ. ಆದರೆ
ತಂದೆಯು ಹೇಳುತ್ತಾರೆ - ನಾನು ಮನುಷ್ಯ ಸೃಷ್ಟಿಯ ಚೈತನ್ಯ ಬೀಜರೂಪನಾಗಿದ್ದೇನೆ, ಬೀಜವಾಗಿರುವ ಕಾರಣ
ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ. ನೀವಂತೂ ಬೀಜವಲ್ಲ, ನಾನು ಬೀಜವಾಗಿದ್ದೇನೆ
ಆದ್ದರಿಂದ ನನಗೆ ಜ್ಞಾನ ಸಾಗರನೆಂದು ಹೇಳುತ್ತಾರೆ. ಮನುಷ್ಯ ಸೃಷ್ಟಿಯ ಚೈತನ್ಯ ಬೀಜವೆಂದಮೇಲೆ
ಅವರಿಗೆ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಅವಶ್ಯವಾಗಿ ತಿಳಿದಿರುತ್ತದೆ.
ಋಷಿ-ಮುನಿ ಮೊದಲಾದವರು ಯಾರೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ.
ಮಕ್ಕಳು ಒಂದುವೇಳೆ ತಿಳಿದುಕೊಂಡಿದ್ದರೆ ಅವರ ಬಳಿ ಹೋಗುವುದರಲ್ಲಿ ತಡವಾಗುವುದಿಲ್ಲ ಆದರೆ ತಂದೆಯ
ಬಳಿ ಹೋಗುವ ಮಾರ್ಗವನ್ನು ಯಾರೂ ತಿಳಿದುಕೊಂಡಿಲ್ಲ. ಪಾವನ ಪ್ರಪಂಚಕ್ಕೆ ಪತಿತರು ಹೋಗುವುದಕ್ಕಾದರೂ
ಹೇಗೆ ಸಾಧ್ಯ! ಆದ್ದರಿಂದ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಿ, ಇದೇ
ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ನೀವು ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ.
ಯಾವುದೇ ಕಷ್ಟವಿಲ್ಲ, ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ತಂದೆಯ ನೆನಪು
ಅರ್ಥಾತ್ ಯೋಗದಿಂದ ಪಾಪಗಳು ಭಸ್ಮವಾಗುತ್ತವೆ. ತಂದೆಯಿಂದಲೇ ಸೆಕೆಂಡಿನಲ್ಲಿ ರಾಜ್ಯಭಾಗ್ಯವು
ಸಿಗುತ್ತದೆ. ಮಕ್ಕಳು ಭಲೆ ಸ್ವರ್ಗದಲ್ಲಂತೂ ಬರುತ್ತೀರಿ ಆದರೆ ಸ್ವರ್ಗದಲ್ಲಿಯೂ ಶ್ರೇಷ್ಠ
ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ಸ್ವರ್ಗದಲ್ಲಂತೂ ಹೋಗಲೇಬೇಕಾಗಿದೆ. ಸ್ವಲ್ಪ
ಕೇಳಿದರೂ ಸಹ ತಂದೆಯು ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಈಗಲೂ ಸಹ ಹೇಳುತ್ತಾರೆ -
ಇದು ಅದೇ ಮಹಾಭಾರತ ಯುದ್ಧವಾಗಿದೆ. ಅವಶ್ಯವಾಗಿ ತಂದೆಯೂ ಇರುವರು. ಅವರೇ ಮಕ್ಕಳಿಗೆ ರಾಜಯೋಗವನ್ನು
ಕಲಿಸುತ್ತಾರೆ. ನೀವು ಎಲ್ಲರನ್ನೂ ಜಾಗೃತಗೊಳಿಸುತ್ತಾ ಇರುತ್ತೀರಿ. ಯಾರು ಅನೇಕರನ್ನು
ಜಾಗೃತಗೊಳಸುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಪುರುಷಾರ್ಥ ಮಾಡಬೇಕಾಗಿದೆ. ಎಲ್ಲರೂ
ಒಂದೇ ತರಹ ಪುರುಷಾರ್ಥಿಗಳಿರಲು ಸಾಧ್ಯವಿಲ್ಲ. ಶಾಲೆಯು ಬಹಳ ದೊಡ್ಡದಾಗಿದೆ. ಇದು ವಿಶ್ವ
ವಿದ್ಯಾಲಯವಾಗಿದೆ. ಇಡೀ ವಿಶ್ವವನ್ನು ಸುಖಧಾಮ ಮತ್ತು ಶಾಂತಿಧಾಮವನ್ನಾಗಿ ಮಾಡಬೇಕಾಗಿದೆ. ಇಂತಹ
ಶಿಕ್ಷಕರು ಎಂದಾದರೂ ಇರುತ್ತಾರೆಯೇ? ವಿಶ್ವವೆಂದು ಇಡೀ ಪ್ರಪಂಚಕ್ಕೆ ಹೇಳಲಾಗುತ್ತದೆ. ತಂದೆಯೇ ಇಡೀ
ವಿಶ್ವದ ಮನುಷ್ಯ ಮಾತ್ರರನ್ನು ಸತೋಪ್ರಧಾನರನ್ನಾಗಿ ಮಾಡುತ್ತಾರೆ ಅರ್ಥಾತ್ ಸ್ವರ್ಗವನ್ನಾಗಿ
ಮಾಡುತ್ತಾರೆ.
ಭಕ್ತಿ ಮಾರ್ಗದಲ್ಲಿ
ಏನೆಲ್ಲಾ ಹಬ್ಬಗಳನ್ನು ಆಚರಿಸುವರೋ ಅವೆಲ್ಲವೂ ಈ ಸಂಗಮಯುಗದ್ದಾಗಿದೆ. ಸತ್ಯ-ತ್ರೇತಾಯುಗದಲ್ಲಿ
ಯಾವುದೇ ಹಬ್ಬಗಳಿರುವುದಿಲ್ಲ. ಅಲ್ಲಂತೂ ಪ್ರಾಲಬ್ದವನ್ನು ಭೋಗಿಸುತ್ತಾರೆ. ಹಬ್ಬಗಳೆಲ್ಲವನ್ನೂ
ಇಲ್ಲಿಯೇ ಆಚರಿಸುತ್ತಾರೆ. ಹೋಲಿ ಮತ್ತು ದುರಿಯಾ ಇವು ಜ್ಞಾನದ ಮಾತುಗಳಾಗಿವೆ. ಏನು ಕಳೆದು ಹೋಯಿತೋ
ಅದೆಲ್ಲವನ್ನೂ ಹಬ್ಬಗಳ ರೂಪದಲ್ಲಿ ಆಚರಿಸುತ್ತಾ ಬಂದಿದ್ದಾರೆ. ಎಲ್ಲವೂ ಈ ಸಮಯದ್ದಾಗಿದೆ. ಈ ನೂರು
ವರ್ಷಗಳಲ್ಲಿ ಎಲ್ಲಾ ಕೆಲಸಗಳು ಆಗಿ ಬಿಡುತ್ತವೆ. ಸೃಷ್ಟಿಯು ಹೊಸದಾಗಿ ಬಿಡುತ್ತದೆ. ನೀವು
ತಿಳಿದುಕೊಂಡಿದ್ದೀರಿ - ನಾವು ಅನೇಕ ಬಾರಿ ಸುಖದ ಆಸ್ತಿಯನ್ನು ಪಡೆದುಕೊಂಡಿದ್ದೇವೆ ಮತ್ತು
ಕಳೆದುಕೊಂಡಿದ್ದೇವೆ. ನಾವೀಗ ಪುನಃ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು
ಖುಷಿಯಾಗುತ್ತೇವೆ. ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಡ್ರಾಮಾನುಸಾರ ಸ್ವರ್ಗದ ಸ್ಥಾಪನೆಯು
ಖಂಡಿತ ಆಗುವುದು. ಹೇಗೆ ಹಗಲಿನ ನಂತರ ರಾತ್ರಿ, ರಾತ್ರಿಯ ನಂತರ ಹಗಲಾಗುತ್ತದೆ ಹಾಗೆಯೇ ಕಲಿಯುಗದ
ನಂತರ ಖಂಡಿತವಾಗಿಯೂ ಸತ್ಯಯುಗವಾಗಬೇಕಾಗಿದೆ. ಮಧುರಾತಿ ಮಧುರ ಮಕ್ಕಳ ಬುದ್ಧಿಯಲ್ಲಿ ಖುಷಿಯ ಗಂಟೆಯು
ಮೊಳಗಬೇಕು. ಈಗ ಸಮಯವು ಪೂರ್ಣವಾಗುತ್ತದೆ. ನಾವು ಶಾಂತಿಧಾಮಕ್ಕೆ ಹೋಗುತ್ತೇವೆ, ಇದು ಅಂತಿಮ
ಜನ್ಮವಾಗಿದೆ. ಖುಷಿಯಲ್ಲಿದ್ದಾಗ ಕರ್ಮಭೋಗವೂ ಸಹ ಹಗುರವಾಗಿ ಬಿಡುತ್ತದೆ. ನೋವನ್ನನುಭವಿಸಿ ಮತ್ತು
ಇನ್ನು ಸ್ವಲ್ಪ ಲೆಕ್ಕಾಚಾರವು ಯೋಗಬಲದಿಂದ ಸಮಾಪ್ತಿಯಾಗುವುದು. ತಂದೆಯು ಮಕ್ಕಳಿಗೆ ಧೈರ್ಯವನ್ನು
ಕೊಡುತ್ತಾರೆ. ನಿಮ್ಮ ಸುಖದ ದಿನಗಳು ಬರುತ್ತಿವೆ. ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕಾಗಿದೆ. ಶರೀರ
ನಿರ್ವಹಣೆಗಾಗಿ ಹಣವಂತೂ ಬೇಕಲ್ಲವೆ. ತಂದೆಯು ತಿಳಿಸಿದ್ದಾರೆ - ವ್ಯಾಪಾರಿಗಳು ಧರ್ಮಕ್ಕಾಗಿ
ಹಣವನ್ನು ತೆಗೆಯುತ್ತಾರೆ. ಹೆಚ್ಚು ಹಣವಿದ್ದರೆ ಬಹಳ ದಾನ ಮಾಡುತ್ತೇವೆಂದು ತಿಳಿಯುತ್ತಾರೆ.
ಇಲ್ಲಿಯೂ ಸಹ ತಂದೆಯು ತಿಳಿಸುತ್ತಾರೆ - ಯಾರಾದರೂ ಎರಡು ಪೈಸೆಯನ್ನು ಕೊಟ್ಟರೂ ಸಹ ಅದಕ್ಕೆ
ಪ್ರತಿಫಲವಾಗಿ 21 ಜನ್ಮಗಳಿಗಾಗಿ ಬಹಳಷ್ಟು ಪ್ರಾಪ್ತಿಯಾಗುತ್ತದೆ. ಮೊದಲು ನೀವು ಯಾವ
ದಾನ-ಪುಣ್ಯಗಳನ್ನು ಮಾಡುತ್ತಿದ್ದಿರೋ ಅದಕ್ಕೆ ಪ್ರತಿಯಾಗಿ ಇನ್ನೊಂದು ಜನ್ಮದಲ್ಲಿ ಸಿಗುತ್ತಿತ್ತು.
ಈಗಂತೂ 21 ಜನ್ಮಗಳಿಗಾಗಿ ಪ್ರತಿಫಲ ಸಿಗುತ್ತದೆ. ಸಾಧು-ಸಂತ ಮೊದಲಾದವರಿಗೆ ಕೊಡುತ್ತಿದ್ದಿರಿ. ಈಗ
ನಿಮಗೆ ತಿಳಿದಿದೆ - ಇದೆಲ್ಲವೂ ಸಮಾಪ್ತಿಯಾಗುವುದಿದೆ. ಈಗ ನಾನು ಸನ್ಮುಖದಲ್ಲಿ ಬಂದಿದ್ದೇನೆ
ಅಂದಮೇಲೆ ಈ ಕಾರ್ಯದಲ್ಲಿ ತೊಡಗಿಸಿ ಆಗ ನಿಮಗೆ 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ಮೊದಲು
ನೀವು ಪರೋಕ್ಷವಾಗಿ ಕೊಡುತ್ತಿದ್ದಿರಿ, ಇದು ಪ್ರತ್ಯಕ್ಷವಾಗಿದೆ. ಉಳಿದಂತೆ ನಿಮ್ಮದೆಲ್ಲವೂ
ಸಮಾಪ್ತಿಯಾಗುವುದು. ತಂದೆಯು ಹೇಳುತ್ತಿರುತ್ತಾರೆ - ಹಣವಿದ್ದರೆ ಸೇವಾಕೇಂದ್ರವನ್ನು ತೆರೆಯುತ್ತಾ
ಹೋಗಿ, ಈ ಶಬ್ದಗಳನ್ನು ಬರೆಯಿರಿ - ಸತ್ಯ ಗೀತಾ ಪಾಠಶಾಲೆ, ಭಗವಾನುವಾಚ - ನನ್ನೊಬ್ಬನನ್ನೇ ನೆನಪು
ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಕ ಮಕ್ಕಳಿಗೆ ಆತ್ಮೀಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಮಾನ
ಮಹಿಮಾ ಯೋಗ್ಯರಾಗಲು ತಂದೆಯನ್ನು ಫಾಲೋ ಮಾಡಬೇಕಾಗಿದೆ.
2. ಇದು ಅಂತಿಮ
ಜನ್ಮವಾಗಿದೆ, ಈಗ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಒಳಗಿಂದೊಳಗೆ ಖುಷಿಯ ವಾದ್ಯವು ಮೊಳಗುತ್ತಿರಲಿ.
ಕರ್ಮ ಭೋಗವನ್ನು ಕರ್ಮ ಯೋಗದಿಂದ ಅರ್ಥಾತ್ ತಂದೆಯ ನೆನಪಿನಿಂದ ಖುಷಿ-ಖುಷಿಯಾಗಿ ಸಮಾಪ್ತಿ
ಮಾಡಿಕೊಳ್ಳಬೇಕಾಗಿದೆ.
ವರದಾನ:
ಬಾಲಕನಿಂದ
ಮಾಲೀಕನೆಂಬ ಸ್ಮೃತಿಯಿಂದ ಸರ್ವ ಖಜಾನೆಗಳ ಅಧಿಕಾರಿ, ಪ್ರಾಪ್ತಿ ಸಂಪನ್ನ ಭವ.
ನಾವು ತಂದೆಯ ಸರ್ವ
ಖಜಾನೆಗಳ ಬಾಲಕನಿಂದ ಮಾಲೀಕರಾಗಿದ್ದೇವೆ, ಸ್ವಾಭಾವಿಕ ಯೋಗಿ, ಸ್ವಭಾವಿಕವಾಗಿ ರಾಜ್ಯಾಧಿಕಾರಿ
ಆಗಿದ್ದೇವೆ. ಈ ಸ್ಮೃತಿಯಿಂದ ಸರ್ವ ಪ್ರಾಪ್ತಿ ಸಂಪನ್ನರಾಗಿರಿ.ಸದಾ ಇದೇ ಹಾಡನ್ನು ಹಾಡುತ್ತಿರಿ -
“ಏನನ್ನು ಪಡೆಯಬೇಕಾಗಿತ್ತು ಅದನ್ನು ಪಡೆದೆನು”. ಕಳೆದುಕೊಂಡೆನು-ಪಡೆದೆನು,
ಕಳೆದುಕೊಂಡೆನು-ಪಡೆದೆನು ಎನ್ನುವಂತಹ ಆಟವನ್ನಾಡಬಾರದು. ಪಡೆಯುತ್ತಿದ್ದೇನೆ, ಪಡೆಯುತ್ತಿದ್ದೇನೆ
ಎನ್ನುವುದು ಅಧಿಕಾರಿಯ ಮಾತಲ್ಲ. ಯಾರು ಸಂಪನ್ನ ತಂದೆಯ ಬಾಲಕರು.... ಸಾಗರನ ಮಕ್ಕಳಾಗಿದ್ದಾರೆಯೋ
ಅವರು ನೌಕರನಂತೆ ಕಷ್ಟ ಪಡಲು ಸಾಧ್ಯವಿಲ್ಲ.
ಸ್ಲೋಗನ್:
ಯೋಗ ಬಲದ ಮೂಲಕ
ಕರ್ಮ ಭೋಗದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ಶ್ರೇಷ್ಠ ಪುರುಷಾರ್ಥವಾಗಿದೆ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”.
ಎಲ್ಲದಕ್ಕಿಂತ ಮೊದಲು
ಸ್ವಯಂನಲ್ಲಿ ಪೂರ್ಣ ವಿಶ್ವಾಸವಿರಬೇಕು ನಂತರ ಬಾಪ್-ದಾದಾ ಮತ್ತು ಸರ್ವ ಪರಿವಾರದ ಆತ್ಮರಲ್ಲಿ
ವಿಶ್ವಾಸವಿರಬೇಕಾಗುತ್ತದೆ. ಎಷ್ಟು ವಿಶ್ವಾಸಿಯಾಗಿ, ನಿಶ್ಚಯ ಬುದ್ಧಿಯಾಗಿ ಯಾವುದೇ ಕರ್ತವ್ಯ
ಮಾಡಿದರೆ ವಿಶ್ವಾಸವಿರುವುದರಿಂದ ಸಫಲತಾಪೂರ್ಣರಾಗುವಿರಿ. ನಂಬಿಗಸ್ತರಾಗುವುದರಿಂದ ಪ್ರತಿ ಕರ್ತವ್ಯ,
ಪ್ರತಿ ಸಂಕಲ್ಪ, ಪ್ರತಿ ಮಾತು ಶಕ್ತಿಶಾಲಿಯಾಗುವುದು.