13.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ರಕ್ಷಾಬಂಧನ ಹಬ್ಬವು ಪ್ರತಿಜ್ಞೆಯ ಹಬ್ಬವಾಗಿದೆ, ಇದು ಸಂಗಮಯುಗದಿಂದಲೇ ಪ್ರಾರಂಭವಾಗುತ್ತದೆ, ಈಗ ನೀವು ಪವಿತ್ರರಾಗುವ ಮತ್ತು ಅನ್ಯರನ್ನು ಮಾಡುವ ಪ್ರತಿಜ್ಞೆ ಮಾಡುತ್ತೀರಿ”

ಪ್ರಶ್ನೆ:
ಯಾವ ಆಧಾರದ ಮೇಲೆ ನಿಮ್ಮ ಎಲ್ಲಾ ಕಾರ್ಯಗಳು ಸಫಲವಾಗುತ್ತವೆ? ಹೆಸರು ಹೇಗೆ ಪ್ರಸಿದ್ಧವಾಗುತ್ತದೆ?

ಉತ್ತರ:
ಜ್ಞಾನಬಲದ ಜೊತೆಗೆ ಯೋಗಬಲವೂ ಇದ್ದಾಗ ಎಲ್ಲಾ ಕಾರ್ಯಗಳನ್ನು ತಾವಾಗಿಯೇ ಮಾಡಿಕೊಳ್ಳಲು ತಯಾರಾಗಿಬಿಡುತ್ತೀರಿ. ಯೋಗವು ಬಹಳ ಗುಪ್ತವಾಗಿದೆ, ಇದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಯೋಗದಲ್ಲಿದ್ದು ತಿಳಿಸಿದರೆ ಪತ್ರಿಕಾಕಾರರು ತಾವೇ ನಿಮ್ಮ ಸಂದೇಶವನ್ನು ಮುದ್ರಿಸುತ್ತಾರೆ. ಪತ್ರಿಕೆಗಳಿಂದಲೇ ಹೆಸರು ಪ್ರಸಿದ್ಧವಾಗಬೇಕಾಗಿದೆ, ಇದರಿಂದಲೇ ಅನೇಕರಿಗೆ ಸಂದೇಶ ಸಿಗುವುದು.

ಓಂ ಶಾಂತಿ.
ಇಂದು ಮಕ್ಕಳಿಗೆ ರಕ್ಷಾಬಂಧನವನ್ನು ಕುರಿತು ತಿಳಿಸುತ್ತೇವೆ ಏಕೆಂದರೆ ಸಮೀಪವಿದೆ. ಮಕ್ಕಳು ರಕ್ಷಾಬಂಧನವನ್ನು ಕಟ್ಟಲು ಹೋಗುತ್ತಾರೆ, ಯಾವುದು ಆಗಿಹೋಗುತ್ತದೆಯೋ ಅದರ ಹಬ್ಬವನ್ನು ಆಚರಣೆ ಮಾಡುತ್ತಾರೆ, ಇದಂತೂ ಮಕ್ಕಳಿಗೆ ತಿಳಿದಿದೆ- ಇಂದಿಗೆ 5000 ವರ್ಷಗಳ ಮೊದಲೂ ಈ ಪ್ರತಿಜ್ಞಾ ಪತ್ರವನ್ನು ಬರೆಸಲಾಗಿತ್ತು, ಇದಕ್ಕೆ ಬಹಳ ಹೆಸರುಗಳನ್ನು ಕೊಡಲಾಗಿದೆ. ಇದು ಪವಿತ್ರತೆಯ ಸಂಕೇತವಾಗಿದೆ, ಪವಿತ್ರರಾಗಲು ಶ್ರೀರಕ್ಷೆಯನ್ನು ಕಟ್ಟಿಕೊಳ್ಳಿ ಎಂದು ಎಲ್ಲರಿಗೆ ಹೇಳಬೇಕು. ಇದೂ ಸಹ ನಿಮಗೆ ತಿಳಿದಿದೆ- ಪವಿತ್ರ ಪ್ರಪಂಚವು ಸತ್ಯಯುಗದ ಆದಿಯಲ್ಲಿಯೇ ಇರುತ್ತದೆ, ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ರಕ್ಷಾಬಂಧನದ ಹಬ್ಬವು ಪ್ರಾರಂಭವಾಗುತ್ತದೆ ನಂತರ ಇದನ್ನು ಭಕ್ತಿಯು ಪ್ರಾರಂಭವಾದಾಗ ಆಚರಿಸಲಾಗುತ್ತದೆ. ಇದಕ್ಕೆ ಅನಾದಿಹಬ್ಬವೆಂದು ಹೇಳಲಾಗುತ್ತದೆ. ಅದೂ ಯಾವಾಗಿನಿಂದ ಪ್ರಾರಂಭವಾಗುತ್ತದೆ? ಭಕ್ತಿಮಾರ್ಗದಿಂದ ಏಕೆಂದರೆ ಸತ್ಯಯುಗದಲ್ಲಿ ಈ ಹಬ್ಬಗಳು ಮೊದಲಾದವುಗಳು ಇರುವುದೇ ಇಲ್ಲ. ಇವು ಇಲ್ಲಿಯೇ ಇರುತ್ತವೆ. ಎಲ್ಲಾ ಹಬ್ಬಗಳೂ ಸಂಗಮಯುಗದಲ್ಲಿಯೇ ಇರುತ್ತವೆ, ಅವೇ ಮತ್ತೆ ಭಕ್ತಿಮಾರ್ಗದಿಂದ ಪ್ರಾರಂಭವಾಗುತ್ತದೆ. ಸತ್ಯಯುಗದಲ್ಲಿ ಯಾವುದೇ ಹಬ್ಬಗಳಾಗುವುದಿಲ್ಲ, ದೀಪಾವಳಿಯಿರುವುದೇ ಎಂದು ನೀವು ಕೇಳುತ್ತೀರಿ ಆದರೆ ಇಲ್ಲ. ಅದನ್ನು ಇಲ್ಲಿಯೇ ಆಚರಿಸುತ್ತಾರೆ. ಅಲ್ಲಿ ಅವಶ್ಯಕತೆಯಿಲ್ಲ. ಯಾವುದನ್ನು ಇಲ್ಲಿ ಆಚರಿಸುತ್ತಾರೆಯೋ ಅದನ್ನು ಅಲ್ಲಿ ಆಚರಿಸುವುದಿಲ್ಲ. ಇವೆಲ್ಲವೂ ಕಲಿಯುಗದ ಹಬ್ಬಗಳಾಗಿವೆ. ರಕ್ಷಾಬಂಧನವನ್ನು ಆಚರಿಸುತ್ತಾರೆ ಅಂದಾಗ ಈಗ ಈ ರಕ್ಷಾಬಂಧನವನ್ನು ಏಕೆ ಆಚರಿಸಲಾಗುತ್ತದೆ ಎಂದು ಎಲ್ಲರಿಗೆ ಹೇಗೆ ತಿಳಿಯುವುದು? ನೀವು ಎಲ್ಲರಿಗೆ ರಾಖಿಯನ್ನು ಕಟ್ಟುತ್ತೀರಿ, ಪಾವನರಾಗಿ ಎಂದು ಹೇಳುತ್ತೀರಿ ಏಕೆಂದರೆ ಈಗ ಪಾವನ ಪ್ರಪಂಚವು ಸ್ಥಾಪನೆಯಾಗುತ್ತಾ ಇದೆ, ಬ್ರಹ್ಮಾರವರ ಮೂಲಕ ಪಾವನ ಪ್ರಪಂಚದ ಸ್ಥಾಪನೆಯಾಗುತ್ತಿದೆ ಎಂದು ತ್ರಿಮೂರ್ತಿಯ ಚಿತ್ರದಲ್ಲಿಯೂ ಬರೆಯಲಾಗಿದೆ ಆದ್ದರಿಂದ ಪವಿತ್ರರನ್ನಾಗಿ ಮಾಡಲು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಇದು ಜ್ಞಾನಮಾರ್ಗದ ಸಮಯವಾಗಿದೆ. ನೀವು ಮಕ್ಕಳಿಗೂ ತಿಳಿಸಲಾಗಿದೆ- ಭಕ್ತಿಯ ಯಾವುದೇ ಮಾತನ್ನು ತಿಳಿಸಿದರೂ ಸಹ ಅವರಿಗೆ ಹೇಳಿ, ನಾವೀಗ ಜ್ಞಾನಮಾರ್ಗದಲ್ಲಿದ್ದೇವೆ, ಜ್ಞಾನಸಾಗರ ಒಬ್ಬರೇ ಭಗವಂತನಾಗಿದ್ದಾರೆ, ಅವರು ಇಡೀ ಪ್ರಪಂಚವನ್ನು ನಿರ್ವಿಕಾರಿಯನ್ನಾಗಿ ಮಾಡುತ್ತಾರೆ. ಭಾರತವು ನಿರ್ವಿಕಾರಿಯಾಗಿದ್ದಾಗ ಇಡೀ ಪ್ರಪಂಚವೇ ನಿರ್ವಿಕಾರಿಯಾಗಿತ್ತು. ಭಾರತವನ್ನು ನಿರ್ವಿಕಾರಿಯನ್ನಾಗಿ ಮಾಡುವುದರಿಂದ ಇಡೀ ಪ್ರಪಂಚವೇ ನಿರ್ವಿಕಾರಿಯಾಗಿಬಿಡುತ್ತದೆ. ಭಾರತಕ್ಕೆ ಪ್ರಪಂಚವೆಂದು ಹೇಳುವುದಿಲ್ಲ, ಪ್ರಪಂಚದಲ್ಲಿ ಭಾರತವೂ ಒಂದು ಖಂಡವಾಗಿದೆ. ಮಕ್ಕಳಿಗೆ ಗೊತ್ತಿದೆ- ಇಡೀ ಪ್ರಪಂಚದಲ್ಲಿ ಕೇವಲ ಒಂದು ಭಾರತಖಂಡವಿರುತ್ತದೆ, ಭಾರತ ಖಂಡದಲ್ಲಿ ಅವಶ್ಯವಾಗಿ ಮನುಷ್ಯರೂ ಇರುತ್ತಾರೆ. ಭಾರತವು ಸತ್ಯಖಂಡವಾಗಿತ್ತು, ಸೃಷ್ಟಿಯ ಆದಿಯಲ್ಲಿ ದೇವತಾಧರ್ಮವೇ ಇತ್ತು, ಅದಕ್ಕೆ ನಿರ್ವಿಕಾರಿ ಪವಿತ್ರಧರ್ಮವೆಂದು ಹೇಳಲಾಗುತ್ತದೆ. ಅದಕ್ಕೆ 5000 ವರ್ಷಗಳಾಯಿತು. ಈಗ ಈ ಹಳೆಯ ಪ್ರಪಂಚವು ಇನ್ನು ಸ್ವಲ್ಪ ದಿನಗಳಿವೆ. ನಿರ್ವಿಕಾರಿಗಳಾಗುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ. ಸಮಯ ವಂತೂ ಹಿಡಿಸುತ್ತದೆ. ಇಲ್ಲಿಯೂ ಪವಿತ್ರರಾಗುವ ಪುರುಷಾರ್ಥ ಮಾಡುತ್ತೀರಿ, ಎಲ್ಲದಕ್ಕಿಂತ ದೊಡ್ಡ ಉತ್ಸವವು ಇದಾಗಿದೆ. ಬಾಬಾ, ನಾವು ಅವಶ್ಯವಾಗಿ ಪವಿತ್ರರಾಗುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ಈ ಉತ್ಸವವು ಎಲ್ಲದಕ್ಕಿಂತ ದೊಡ್ಡದೆಂದು ತಿಳಿಯಬೇಕು. ಹೇ ಪರಮಪಿತ ಪರಮಾತ್ಮ ಎಂದು ಎಲ್ಲರೂ ಕರೆಯುತ್ತಾರೆ. ಈ ರೀತಿ ಹೇಳುತ್ತಿದ್ದರೂ ಸಹ ಪರಮಪಿತನು ಬುದ್ಧಿಯಲ್ಲಿ ಬರುವುದಿಲ್ಲ. ನಿಮಗೆ ತಿಳಿದಿದೆ, ಪರಮಪಿತ ಪರಮಾತ್ಮನು ಜೀವಾತ್ಮರಿಗೆ ಜ್ಞಾನವನ್ನು ತಿಳಿಸಲು ಬರುತ್ತಾರೆ, ಆತ್ಮಗಳು ಪರಮಾತ್ಮನಿಂದ ಬಹಳಕಾಲ ಅಗಲಿದ್ದರು...... ಈ ಮೇಳವು ಸಂಗಮದಲ್ಲಿಯೇ ಸೇರುತ್ತದೆ. ಇದಕ್ಕೆ ಕುಂಭಮೇಳವೆಂದು ಹೇಳಲಾಗುತ್ತದೆ, ಇದು ಪ್ರತಿ 5000 ವರ್ಷಗಳ ನಂತರ ಒಂದೇ ಬಾರಿ ಆಗುತ್ತದೆ. ನೀರಿನಲ್ಲಿ ಸ್ನಾನ ಮಾಡುವ ಮೇಳವಂತೂ ಅನೇಕಬಾರಿ ಆಚರಿಸುತ್ತಾ ಬಂದಿದ್ದೀರಿ, ಅದು ಭಕ್ತಿಮಾರ್ಗ ಇದು ಜ್ಞಾನಮಾರ್ಗವಾಗಿದೆ. ಸಂಗಮ (ಸೇರುವ ಜಾಗ)ಕ್ಕೂ ಕುಂಭಮೇಳವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಮೂರು ನದಿಗಳಿಲ್ಲ, ನೀರಿನ ಗುಪ್ತನದಿಯು ಇರಲು ಹೇಗೆ ಸಾಧ್ಯ. ತಂದೆಯು ತಿಳಿಸುತ್ತಾರೆ ನಿಮ್ಮ ಈ ಗೀತೆಯು ಗುಪ್ತವಾಗಿದೆ ಆದ್ದರಿಂದ ಇದನ್ನು ತಿಳಿಸಬೇಕಾಗುತ್ತದೆ- ನೀವು ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಇದರಲ್ಲಿ ಕುಣಿತ-ತಮಾಷೆ ಮೊದಲಾದುವುಗಳು ಯಾವುದೂ ಇಲ್ಲ. ಆ ಭಕ್ತಿಮಾರ್ಗವು ಪೂರ್ಣ ಅರ್ಧಕಲ್ಪ ನಡೆಯುತ್ತದೆ, ಈ ಜ್ಞಾನವು ಒಂದು ಜನ್ಮ ನಡೆಯುತ್ತದೆ ನಂತರ 2 ಯುಗಗಳು ಜ್ಞಾನದ ಪ್ರಾಲಬ್ಧವಿರುತ್ತದೆ, ಜ್ಞಾನವು ನಡೆಯುವುದಿಲ್ಲ, ಭಕ್ತಿಯಂತೂ, ದ್ವಾಪರ ಕಲಿಯುಗದಿಂದ ನಡೆದುಕೊಂಡು ಬಂದಿದೆ, ಜ್ಞಾನವು ಒಂದೇಬಾರಿ ಸಿಗುತ್ತದೆ ನಂತರ ಅದರ ಪ್ರಾಲಬ್ಧವು 21 ಜನ್ಮಗಳವರೆಗೆ ನಡೆಯುತ್ತದೆ. ಈಗ ನಿಮ್ಮ ಕಣ್ಣುಗಳು ತೆರೆದಿದೆ, ಮೊದಲು ನೀವು ಅಜ್ಞಾನದ ನಿದ್ರೆಯಲ್ಲಿದ್ದಿರಿ. ರಕ್ಷಾಬಂಧನದಂದು ಬ್ರಾಹ್ಮಣರು ರಾಖಿ ಕಟ್ಟುತ್ತಾರೆನೀವೂ ಸಹ ಬ್ರಾಹ್ಮಣರಾಗಿದ್ದೀರಿ. ಅವರು ಕುಖವಂಶಾವಳಿ ನೀವು ಮುಖವಂಶಾವಳಿಯಾಗಿದ್ದೀರಿ ಭಕ್ತಿಮಾರ್ಗದಲ್ಲಿ ಎಷ್ಟು ಅಂಧಶ್ರದ್ಧೆಯಿದೆ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ- ಕೆಸರಿನಲ್ಲಿ ಕಾಲು ಸಿಕ್ಕಿಹಾಕಿಕೊಳ್ಳುತ್ತದೆಯಲ್ಲವೆ ಹಾಗೆಯೇ ಭಕ್ತಿಯ ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆಂದರೆ ಒಮ್ಮೆಲೆ ಕೆಸರು ಕೊರಳಿನವರೆಗೆ ಬಂದುಬಿಡುತ್ತದೆ ಆಗ ಅದರಿಂದ ಪಾರುಮಾಡಲು ಪುನಃ ತಂದೆಯು ಬರುತ್ತಾರೆ. ಆಗ ಶಿಖೆಯಷ್ಟೇ ಉಳಿದಿರುತ್ತದೆ. ಹಿಡಿದುಕೊಳ್ಳಲು ಬೇಕಲ್ಲವೆ. ಮಕ್ಕಳು ತಿಳಿಸಿಕೊಡಲು ಬಹಳ ಪರಿಶ್ರಮಪಡುತ್ತಾರೆ, ಕೋಟ್ಯಾಂತರ ಮನುಷ್ಯರಿದ್ದಾರೆ, ಪ್ರತಿಯೊಬ್ಬರ ಬಳಿಗೂ ಹೋಗುವುದು ಶ್ರಮವಾಗುತ್ತದೆ. ನಿಮ್ಮ ಕಳಂಕವು ಪತ್ರಿಕೆಗಳಿಂದ ಆಯಿತು ಏನೆಂದರೆ ಇವರು ಓಡಿಸುತ್ತಾರೆ, ಮನೆ-ಮಠವನ್ನು ಬಿಡಿಸುತ್ತಾರೆ, ಸಹೋದರ-ಸಹೋದರಿಯನ್ನಾಗಿ ಮಾಡುತ್ತಾರೆಂದು ಪ್ರಾರಂಭದಲ್ಲಿ ಈ ಮಾತು ಎಷ್ಟೊಂದು ಹರಡಿತು. ಪತ್ರಿಕೆಗಳಲ್ಲಿ ಹೆಸರಾಗಿಹೋಯಿತು, ಈಗ ಒಬ್ಬೊಬ್ಬರಿಗೂ ತಿಳಿಸಲು ಸಾಧ್ಯವಿಲ್ಲ ಅಂದಮೇಲೆ ಈ ಪತ್ರಿಕೆಗಳೇ ಕೆಲಸಕ್ಕೆ ಬರುತ್ತವೆ. ಪತ್ರಿಕೆಗಳ ಮೂಲಕವೇ ನಿಮ್ಮ ಹೆಸರು ಪ್ರಸಿದ್ಧವಾಗುತ್ತದೆ. ಏನು ಮಾಡಿದರೆ ಎಲ್ಲರಿಗೆ ಇದು ಅರ್ಥವಾಗುತ್ತದೆಯೆಂದು ಈಗ ವಿಚಾರ ಮಾಡಬೇಕು. ರಕ್ಷಾಬಂಧನದ ಅರ್ಥವೇನಾಗಿದೆ? ಯಾವಾಗ ತಂದೆಯು ಪಾವನರನ್ನಾಗಿ ಮಾಡಲು ಬರುತ್ತಾರೆಯೋ ಆಗ ತಂದೆಯು ಮಕ್ಕಳಿಂದ ಪವಿತ್ರತೆಯ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. ಪತಿತರನ್ನು ಪಾವನರನ್ನಾಗಿ ಮಾಡುವವರೇ ರಾಖಿಯನ್ನು ಕಟ್ಟಿದ್ದಾರೆ.

ಕೃಷ್ಣನ ಜನ್ಮವನ್ನು ಆಚರಿಸುತ್ತಾರೆ ನಂತರ ಖಂಡಿತವಾಗಿ ಸಿಂಹಾಸನದ ಮೇಲೆ ಕುಳಿತಿರಬೇಕು ಪಟ್ಟಾಭಿಷೇಕವನ್ನು ಎಂದೂ ತೋರಿಸುವುದಿಲ್ಲ. ಸತ್ಯಯುಗದ ಆದಿಯಲ್ಲಿ ಲಕ್ಷ್ಮೀ-ನಾರಾಯಣರಿದ್ದರು, ಅವರ ಪಟ್ಟಾಭಿಷೇಕವಾಗಿರಬೇಕು. ರಾಜಕುಮಾರ (ಕೃಷ್ಣ) ನ ಜನ್ಮದಿನವನ್ನು ಆಚರಿಸುತ್ತಾರೆ. ಮತ್ತೆ ಪಟ್ಟಾಭಿಷೇಕವೆಲ್ಲಿ? ದೀಪಾವಳಿಯಂದು ಪಟ್ಟಾಭಿಷೇಕವಾಗುತ್ತದೆ. ಅಂದಮೇಲೆ ಬಹಳ ವಿಜೃಂಭಣೆಯಿರುತ್ತದೆ, ಅದು ಸತ್ಯಯುಗದ್ದಾಗಿದೆ. ಸಂಗಮದ ಮಾತು ಸತ್ಯಯುಗದಲ್ಲಿ ಇರುವುದಿಲ್ಲ. ಮನೆ-ಮನೆಯಲ್ಲಿ ಪ್ರಕಾಶವು ಇಲ್ಲಿಯೇ ಆಗುವುದಿದೆ. ಸತ್ಯಯುಗದಲ್ಲಿ ದೀಪಾವಳಿಮೊದಲಾದುವುಗಳನ್ನು ಆಚರಿಸುವುದಿಲ್ಲ ಏಕೆಂದರೆ ಅಲ್ಲಂತೂ ಆತ್ಮಗಳ ಜ್ಯೋತಿಯು ಜಾಗೃತವಾಗಿರುತ್ತದೆ ಅಂದಮೇಲೆ ಅಲ್ಲಿ ಪಟ್ಟಾಭೀಷೇಕವನ್ನು ಆಚರಿಸುತ್ತಾರೆಯೇ ಹೊರತು ದೀಪಾವಳಿಯನ್ನಲ್ಲ. ಎಲ್ಲಿಯವರೆಗೆ ಆತ್ಮಗಳ ಜ್ಯೋತಿ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ಎಲ್ಲರೂ ಪತಿತರಾಗಿದ್ದಾರೆ, ಅವರನ್ನು ಪಾವನರನ್ನಾಗಿ ಮಾಡುವುದಕ್ಕಾಗಿ ಯೋಚಿಸಬೇಕು. ಮಕ್ಕಳು ಯೋಚಿಸಿ ದೊಡ್ಡ-ದೊಡ್ಡ ವ್ಯಕ್ತಿಗಳ ಬಳಿ ಹೋಗುತ್ತಾರೆ. ಪತ್ರಿಕೆಗಳ ಮೂಲಕ ಮಕ್ಕಳ ನಿಂದನೆಯಾಯಿತು, ಈಗ ಇವುಗಳ ಮುಖಾಂತರವೇ ಪ್ರಸಿದ್ಧವಾಗುವುದು, ಸ್ವಲ್ಪ ಹಣವನ್ನು ಕೊಟ್ಟರೆ ಪತ್ರಿಕೆಗಳಲ್ಲಿ ಚೆನ್ನಾಗಿಯೇ ಹಾಕುತ್ತಾರೆ. ಈಗ ನೀವು ಹಣವನ್ನು ಎಲ್ಲಿಯವರೆಗೆ ಕೊಡುತ್ತೀರಿ. ಹಣವನ್ನು ಕೊಡುವುದೂ ಸಹ ಲಂಚವಾಗಿದೆ. ನಿಯಮಕ್ಕೆ ವಿರುದ್ಧವಾಗಿಬಿಡುತ್ತದೆ, ಇತ್ತೀಚೆಗಂತೂ ಲಂಚವಿಲ್ಲದೆ ಕೆಲಸವಂತೂ ಇಲ್ಲವೇ ಇಲ್ಲ. ಅವರೂ ಲಂಚ ಕೊಡುತ್ತಾರೆ, ನೀವು ಲಂಚಕೊಟ್ಟಿದ್ದೇ ಆದರೆ ಇಬ್ಬರದೂ ಸಮಾನವಾಯಿತು. ನಿಮ್ಮದು ಯೋಗಬಲದ ಮಾತಾಗಿದೆ. ನಿಮ್ಮ ಯೋಗಬಲವು ಇಷ್ಟಿರಬೇಕು- ನೀವು ಯಾರಿಂದ ಬೇಕಾದರೂ ಕೆಲಸ ಮಾಡಿಸುವಂತಿರಬೇಕು, ಜ್ಞಾನದ ಧ್ವನಿ ಮಾಡುತ್ತಾ ಇರಬೇಕು. ಜ್ಞಾನದ ಬಲವಂತೂ ನಿಮ್ಮಲ್ಲಿಯೂ ಇದೆ. ಈ ಚಿತ್ರಗಳಲ್ಲಿ ಜ್ಞಾನವಿದೆ, ಯೋಗವು ಗುಪ್ತವಾಗಿದೆ. ತಂದೆಯ ಬೇಹದ್ದಿನ ಆಸ್ತಿಯನ್ನು ಪಡೆಯಲು ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪೂ ಗುಪ್ತವಾಗಿದೆ ಇದರಿಂದಲೇ ನೀವು ವಿಶ್ವದ ಮಾಲೀಕರಾಗುತ್ತೀರಿ. ನೀವು ಎಲ್ಲಿ ಬೇಕಾದರೂ ಕುಳಿತು ನೆನಪು ಮಾಡಬಹುದು. ಕೇವಲ ಇಲ್ಲಿಯೇ ಕುಳಿತು ಯೋಗ ಮಾಡಬೇಕೆಂದಲ್ಲ. ಜ್ಞಾನ ಮತ್ತು ಯೋಗ ಎರಡೂ ಸಹ ಸಹಜವಾಗಿದೆ. ಕೇವಲ 7 ದಿನಗಳ ಶಿಕ್ಷಣವನ್ನು ತೆಗೆದುಕೊಂಡರೆ ಸಾಕು. ಇನ್ನು ಹೆಚ್ಚಿನ ಅವಶ್ಯಕತೆಯಿಲ್ಲ. ಮತ್ತೆ ನೀವು ಹೋಗಿ ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡಿ. ತಂದೆಯು ಜ್ಞಾನದ, ಶಾಂತಿಯ ಸಾಗರನಾಗಿದ್ದಾರೆ. ಇವೆರಡು ಮಾತುಗಳು ಮುಖ್ಯವಾಗಿದೆ. ತಂದೆಯಿಂದ ನೀವು ಶಾಂತಿಯ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೆನಪೂ ಸಹ ಬಹಳ ಸೂಕ್ಷ್ಮವಾಗಿದೆ.

ನೀವು ಮಕ್ಕಳು ಹೊರಗಡೆ ತಿರುಗಾಡಿ ಆದರೆ ತಂದೆಯನ್ನು ನೆನಪು ಮಾಡಿ, ಪವಿತ್ರರಾಗಬೇಕು. ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಯಾವುದೇ ಅವಗುಣಗಳಿರಬಾರದು, ಕಾಮವೂ ಸಹ ಬಹಳ ದೊಡ್ಡ ಅವಗುಣವಾಗಿದೆ. ತಂದೆಯು ತಿಳಿಸುತ್ತಾರೆ- ಈಗ ನೀವು ಪತಿತರಾಗಬೇಡಿ. ಭಲೆ ಸ್ತ್ರೀ ಸನ್ಮುಖದಲ್ಲಿದ್ದರೂ ಸಹ ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ನೋಡಿಯೂ ನೋಡದಂತಿರಬೇಕು. ನಾವಂತೂ ನಮ್ಮ ತಂದೆಯನ್ನು ನೆನಪು ಮಾಡುತ್ತೇವೆ, ಅವರು ಜ್ಞಾನದ ಸಾಗರನಾಗಿದ್ದಾರೆ. ನಿಮ್ಮನ್ನು ತನ್ನ ಸಮಾನರನ್ನಾಗಿ ಮಾಡುತ್ತಾರೆಂದರೆ ನೀವು ಜ್ಞಾನಸಾಗರರಾಗುತ್ತೀರಿ. ಇದರಲ್ಲಿ ತಬ್ಬಿಬ್ಬಾಗಬಾರದು. ಅವರು ಪರಮ ಆತ್ಮನಾಗಿದ್ದಾರೆ, ಪರಮಧಾಮದಲ್ಲಿರುತ್ತಾರೆ ಆದ್ದರಿಂದ ಪರಮ ಎಂದು ಹೇಳಲಾಗುತ್ತದೆ. ಅಲ್ಲಂತೂ ನೀವೂ ಸಹ ಇರುತ್ತೀರಿ, ಈಗ ನಂಬರ್ವಾರ್ ಪುರುಷಾರ್ಥದನುಸಾರ ನೀವು ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೀರಿ. ಯಾರು ಪಾಸ್-ವಿತ್-ಆನರ್ ಆಗುವರೋ ಅವರನ್ನು ಪೂರ್ಣ ಜ್ಞಾನಸಾಗರನಾಗಿದ್ದಾರೆಂದು ಹೇಳುತ್ತಾರೆ. ತಂದೆಯೂ ಜ್ಞಾನಸಾಗರ, ನೀವೂ ಜ್ಞಾನಸಾಗರರು. ಆತ್ಮದ ಗಾತ್ರವು ಚಿಕ್ಕದು-ದೊಡ್ಡದು ಇರುವುದಿಲ್ಲ. ಪರಮಪಿತನೂ ಸಹ ಯಾವುದೇ ದೊಡ್ಡ ರೂಪದಲ್ಲಿಲ್ಲ. ಪರಮಾತ್ಮನು ಕೋಟಿಸೂರ್ಯ ತೇಜೋಮಯನೆಂದು ಇವರೇನು ಹೇಳುತ್ತಾರೆಯೋ ಅದೆಲ್ಲವೂ ಅಸತ್ಯವಾಗಿದೆ. ಬುದ್ಧಿಯಲ್ಲಿ ಯಾವ ರೂಪದಿಂದ ನೆನಪು ಮಾಡುತ್ತಾರೆಯೋ ಅದರ ಸಾಕ್ಷಾತ್ಕಾರವಾಗಿಬಿಡುತ್ತದೆ. ಇದರಲ್ಲಿ ತಿಳುವಳಿಕೆ ಬೇಕು. ಆತ್ಮದ ಸಾಕ್ಷಾತ್ಕಾರ ಅಥವಾ ಪರಮಾತ್ಮನ ಸಾಕ್ಷಾತ್ಕಾರವು ಒಂದೇ ಮಾತಾಗಿರುತ್ತದೆ. ತಂದೆಯು ಅನುಭೂತಿ ಮಾಡಿಸಿದ್ದಾರೆ, ನಾನೇ ಪತಿತ-ಪಾವನ, ಜ್ಞಾನಸಾಗರನಾಗಿದ್ದೇನೆ. ಸಮಯದಲ್ಲಿ ಬಂದು ಸರ್ವರ ಸದ್ಗತಿ ಮಾಡುತ್ತೇನೆ. ಎಲ್ಲರಿಗಿಂತ ಹೆಚ್ಚಿನ ಭಕ್ತಿಯನ್ನು ನೀವೇ ಮಾಡಿದ್ದೀರಿ. ಮತ್ತೆ ತಂದೆಯು ನಿಮಗೇ ಓದಿಸುತ್ತಾರೆ. ರಕ್ಷಾಬಂಧನದ ನಂತರ ಕೃಷ್ಣಜನ್ಮಾಷ್ಟಮಿಯಾಗುತ್ತದೆ ಅದರ ನಂತರ ದಸರಾ, ವಾಸ್ತವದಲ್ಲಿ ದಸರಾಕ್ಕಿಂತ ಮೊದಲು ಕೃಷ್ಣನು ಬರಲು ಸಾಧ್ಯವಿಲ್ಲ. ಮೊದಲು ದಸರಾ ಆಗಬೇಕು ನಂತರ ಕೃಷ್ಣನು ಬರಬೇಕು. ಇದರ ಲೆಕ್ಕವನ್ನೂ ಸಹ ನೀವು ತೆಗೆಯುತ್ತೀರಿ. ಮೊದಲಂತೂ ಏನನ್ನೂ ತಿಳಿದುಕೊಂಡಿರಲಿಲ್ಲ, ಈಗ ತಂದೆಯು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಶಿಕ್ಷಕರು ಬುದ್ಧಿವಂತರನ್ನಾಗಿ ಮಾಡುತ್ತಾರಲ್ಲವೆ. ಈಗ ನೀವು ತಿಳಿದುಕೊಂಡಿದ್ದೀರಿ- ಭಗವಂತನು ಬಿಂದುಸ್ವರೂಪನಾಗಿದ್ದಾರೆ. ವೃಕ್ಷವು ಎಷ್ಟು ದೊಡ್ಡದಾಗಿದೆ, ಆತ್ಮಗಳು ಮೇಲೆ ಬಿಂದುರೂಪದಲ್ಲಿರುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ತಿಳಿಸಲಾಗುತ್ತದೆ, ವಾಸ್ತವದಲ್ಲಿ ಒಂದು ಸೆಕೆಂಡಿನಲ್ಲಿ ಬುದ್ಧಿವಂತರಾಗಬೇಕು. ಆದರೆ ಇಷ್ಟೂ ಕಲ್ಲುಬುದ್ಧಿಯವರಾಗಿದ್ದಾರೆ, ಅರಿತುಕೊಳ್ಳುವುದೇ ಇಲ್ಲ. ಇಲ್ಲವೆಂದರೆ ಇದು ಸೆಕೆಂಡಿನ ಮಾತಾಗಿದೆಯಷ್ಟೆ. ಹದ್ದಿನ ತಂದೆಯಂತೂ ಪ್ರತಿಯೊಂದು ಜನ್ಮದಲ್ಲಿಯೂ ಹೊಸಬರು ಸಿಗುತ್ತಾರೆ. ಈ ಬೇಹದ್ದಿನ ತಂದೆಯು ಒಂದೇಬಾರಿ ಬಂದು 21 ಜನ್ಮಗಳ ಆಸ್ತಿಯನ್ನು ಕೊಡುತ್ತಾರೆ. ಈಗ ನೀವು ಬೇಹದ್ದಿನ ತಂದೆಯಿಂದ ಅಪರಿಮಿತ ಆಸ್ತಿಯನ್ನು ಪಡೆಯುತ್ತಿದೀರಿ. ಆಯಸ್ಸೂ ಧೀರ್ಘವಾಗುತ್ತದೆ, ಅಂದರೆ 21 ಜನ್ಮಗಳೂ ಒಬ್ಬರೇ ತಂದೆಯಿರುತ್ತಾರೆಂದಲ್ಲ. ನಿಮ್ಮ ಆಯಸ್ಸು ಧೀರ್ಘಾಯಸ್ಸು ಆಗುತ್ತದೆ. ನೀವೆಂದೂ ದುಃಖ ನೋಡುವುದಿಲ್ಲ. ಅಂತಿಮದಲ್ಲಿ ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವಷ್ಟೇ ಉಳಿಯುವುದು. ತಂದೆಯನ್ನು ನೆನಪು ಮಾಡಬೇಕು, ಆಸ್ತಿಯನ್ನು ತೆಗೆದುಕೊಳ್ಳಬೇಕು. ಮಕ್ಕಳು ಜನ್ಮಪಡೆಯುವುದು ಮತ್ತು ವಾರಸುಧಾರರಾಗುವರು. ತಂದೆಯನ್ನು ಅರಿತುಕೊಂಡರೆ ಸಾಕು, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಹಾಗೂ ಪವಿತ್ರರಾಗಿ ದೈವೀಗುಣಗಳನ್ನು ಧಾರಣೆ ಮಾಡಿ. ತಂದೆ ಮತ್ತು ಆಸ್ತಿಯು ಎಷ್ಟು ಸಹಜವಾಗಿದೆ ಮತ್ತು ಗುರಿ-ಧ್ಯೇಯವು ಸನ್ಮುಖದಲ್ಲಿದೆ.

ಈಗ ಮಕ್ಕಳು ವಿಚಾರ ಮಾಡಬೇಕು- ನಾವು ಪತ್ರಿಕೆಗಳ ಮೂಲಕ ಹೇಗೆ ತಿಳಿಸುವುದು? ತ್ರಿಮೂರ್ತಿಗಳ ಚಿತ್ರವನ್ನೂ ಕೊಡಬೇಕು ಏಕೆಂದರೆ ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದು ತಿಳಿಸಲಾಗುತ್ತದೆ. ಬ್ರಾಹ್ಮಣರನ್ನು ಪಾವನರನ್ನಾಗಿ ಮಾಡಲು ತಂದೆ ಬಂದಿದ್ದಾರೆ ಆದ್ದರಿಂದ ರಾಖಿಯನ್ನು ಕಟ್ಟಿಸುತ್ತಾರೆ. ಪತಿತ-ಪಾವನ ತಂದೆಯ ಭಾರತವನ್ನು ಪಾವನವನ್ನಾಗಿ ಮಾಡುತ್ತಿದ್ದಾರೆ, ಪ್ರತಿಯೊಬ್ಬರೂ ಪಾವನರಾಗಬೇಕಾಗಿದೆ ಏಕೆಂದರೆ ಈಗ ಪಾವನಪ್ರಪಂಚವು ಸ್ಥಾಪನೆಯಾಗುತ್ತಿದೆ. ಈಗ ನಿಮ್ಮ 84 ಜನ್ಮಗಳು ಪೂರ್ಣವಾಯಿತು, ಯಾರು ಬಹಳ ಜನ್ಮಗಳನ್ನು ತೆಗೆದುಕೊಂಡಿರುತ್ತಾರೆಯೋ ಅವರು ಬಹಳ ಚೆನ್ನಾಗಿ ಅರಿತುಕೊಳ್ಳುತ್ತಿರುತ್ತಾರೆ. ಕೊನೆಯಲ್ಲಿ ಬರುವವರಿಗೆ ಇಷ್ಟೊಂದು ಖುಷಿಯಿರುವುದಿಲ್ಲ ಏಕೆಂದರೆ ಭಕ್ತಿ ಕಡಿಮೆ ಮಾಡಿದ್ದಾರೆ. ಭಕ್ತಿಯ ಫಲವನ್ನು ಕೊಡಲು ತಂದೆಯು ಬರುತ್ತಾರೆ. ಯಾರು ಹೆಚ್ಚಿನ ಭಕ್ತಿಯನ್ನು ಮಾಡಿದ್ದಾರೆಂದು ಈಗ ನೀವು ತಿಳಿದುಕೊಂಡಿದ್ದೀರಿ. ಮೊಟ್ಟಮೊದಲು ನೀವೇ ಬಂದಿದ್ದೀರಿ, ನೀವೇ ಅವ್ಯಭಿಚಾರಿ ಭಕ್ತಿ ಮಾಡಿದ್ದೀರಿ, ಈಗ ನೀವು ಸಹ ತಮ್ಮೊಂದಿಗೆ ಕೇಳಿಕೊಳ್ಳಿ- ನಾವು ಹೆಚ್ಚಿನ ಭಕ್ತಿ ಮಾಡಿದ್ದೇವೆಯೋ ಅಥವಾ ಇವರೋ? ಎಲ್ಲರಿಗಿಂತ ಹೆಚ್ಚಿನದಾಗಿ ಯಾರು ಸರ್ವೀಸ್ ಮಾಡುತ್ತಾರೆಯೋ ಅವರು ಅವಶ್ಯವಾಗಿ ಹೆಚ್ಚಿನ ಭಕ್ತಿಯನ್ನೂ ಮಾಡಿದ್ದಾರೆ. ತಂದೆಯು ಹೆಸರನ್ನಂತೂ ಬರೆಯುತ್ತಾರೆ, ಈ ಕುಮಾರ್ಕಾ, ಜಾನಕಿ, ಮನೋಹರ್, ಗುಲ್ಜರ್ ನಂಬರ್ವಾರಂತೂ ಇದ್ದೇ ಇರುತ್ತಾರೆ ಆದರೆ ಇಲ್ಲಿ ನಂಬರ್ವಾರಾಗಿ ಕುಳ್ಳರಿಸಲು ಸಾಧ್ಯವಿಲ್ಲ ಅಂದಾಗ ವಿಚಾರ ಮಾಡಬೇಕು- ರಕ್ಷಾಬಂಧನದ ಬಗ್ಗೆ ಪತ್ರಿಕೆಗಳಲ್ಲಿ ಹೇಗೆ ಹಾಕಿಸುವುದು. ಇದಂತೂ ಸರಿಯಾಗಿದೆ, ಮಂತ್ರಿಗಳ ಬಳಿ ಹೋಗುತ್ತೀರಿ, ಶ್ರೀರಕ್ಷೆಯನ್ನು ಕಟ್ಟುತ್ತೀರಿ ಆದರೆ ಪವಿತ್ರರಂತೂ ಆಗುವುದಿಲ್ಲ. ನೀವು ಹೇಳುತ್ತೀರಿ- ಪವಿತ್ರರಾದರೆ ಪವಿತ್ರಪ್ರಪಂಚವು ಸ್ಥಾಪನೆಯಾಗುತ್ತದೆ. 63 ಜನ್ಮಗಳು ವಿಕಾರಿಗಳಾದಿರಿ, ಈಗ ತಂದೆಯು ತಿಳಿಸುತ್ತಾರೆ- ಈ ಅಂತಿಮ ಜನ್ಮ ಪವಿತ್ರರಾಗಿ. ಖುದಾನನ್ನು ನೆನಪು ಮಾಡಿ, ಆಗ ನಿಮ್ಮ ತಲೆಯ ಮೇಲಿರುವ ಪಾಪಗಳು ಇಳಿಯುತ್ತವೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ-
1. ಪಾಸ್-ವಿತ್-ಆನರ್ ಆಗಲು ತಂದೆಯ ಸಮಾನ ಜ್ಞಾನಸಾಗರರಾಗಬೇಕು. ಒಳಗಡೆ ಯಾವುದೇ ಅವಗುಣವಿದ್ದರೆ ಪರಿಶೀಲನೆ ಮಾಡಿ ಅದನ್ನು ತೆಗೆದುಹಾಕಬೇಕು. ಶರೀರವನ್ನು ನೋಡುತ್ತಿದ್ದರೂ ನೋಡದಂತೆ, ಆತ್ಮನಿಶ್ಚಯ ಮಾಡಿಕೊಂಡು ಆತ್ಮನೊಂದಿಗೇ ಮಾತನಾಡಬೇಕಾಗಿದೆ.

2. ತಮ್ಮಲ್ಲಿ ಯೋಗಬಲವನ್ನು ಇಷ್ಟೂ ಜಮಾ ಮಾಡಿಕೊಳ್ಳಬೇಕು ಅದರಿಂದ ತಮ್ಮ ಪ್ರತೀಕಾರ್ಯವು ಸಹಜವಾಗಬೇಕು. ಪತ್ರಿಕೆಗಳ ಮೂಲಕ ಪ್ರತಿಯೊಬ್ಬರಿಗೆ ಪಾವನರಾಗುವ ಸಂದೇಶವನ್ನು ಕೊಡಬೇಕು. ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕು.

ವರದಾನ:
ದೇಹ-ಭಾನವನ್ನು ದೇಹೀ-ಅಭಿಮಾನಿ ಸ್ಥಿತಿಯಲ್ಲಿ ಪರಿವರ್ತನೆ ಮಾಡುವಂತಹ ಬೇಹದ್ದಿನ ವೈರಾಗಿ ಭವ.

ಒಂದುವೇಳೆ ನಡೆಯುತ್ತಾ-ನಡೆಯುತ್ತಾ ವೈರಾಗ್ಯದಲ್ಲಿ ಬಿರುಕುಂಟಾದರೆ ಅದಕ್ಕೆ ಮುಖ್ಯಕಾರಣವಾಗಿದೆ ದೇಹ-ಭಾನ. ಎಲ್ಲಿಯವರೆಗೆ ದೇಹ-ಭಾನದ ವೈರಾಗ್ಯ ಬರುವುದಿಲ್ಲ ಅಲ್ಲಿಯವರೆಗೆ ಯಾವುದೇ ಮಾತಿನ ವೈರಾಗ್ಯ ಸದಾಕಾಲಕ್ಕೆ ಇರುವುದಿಲ್ಲ. ಸಂಬಂಧದಲ್ಲಿ ವೈರಾಗ್ಯ ಇದು ಬಹಳ ದೊಡ್ಡ ಮಾತಲ್ಲ, ಅದಂತೂ ಪ್ರಪಂಚದಲ್ಲಿ ಅನೇಕರಿಗೆ ವೈರಾಗ್ಯ ಬರುತ್ತದೆ ಆದರೆ ಇದು ದೇಹ-ಭಾನದ ಏನೆಲ್ಲಾ ಭಿನ್ನ-ಭಿನ್ನ ರೂಪವಿದೆ. ಅದನ್ನು ತಿಳಿದು, ದೇಹ-ಭಾನವನ್ನು ದೇಹೀ-ಅಭಿಮಾನಿ ಸ್ಥಿತಿಯಲ್ಲಿ ಪರಿವರ್ತನೆ ಮಾಡಿಬಿಡುವ ಈ ವಿಧಿಯೇ ಬೇಹದ್ದಿನ ವೈರಾಗಿಯಾಗುವುದಾಗಿದೆ.

ಸ್ಲೋಗನ್:
ಸಂಕಲ್ಪ ರೂಪಿ ಕಾಲು ಶಕ್ತಿಶಾಲಿಯಾಗಿದ್ದರೆ ಕಪ್ಪು ಮೋಡಗಳಂತಹ ಮಾತುಗಳು ಸಹ ಪರಿವರ್ತನೆಯಾಗಿಬಿಡುತ್ತದೆ.