13.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ದೇವತೆಗಳಾಗಬೇಕಾಗಿದೆ, ಆದ್ದರಿಂದ ಮಾಯೆಯ ಅವಗುಣಗಳ ತ್ಯಾಗ ಮಾಡಿ, ಕೋಪಿಸಿಕೊಳ್ಳುವುದು,
ಹೊಡೆಯುವುದು, ತೊಂದರೆ ಕೊಡುವುದು, ಕೆಟ್ಟ ಕೆಲಸ ಮಾಡುವುದು, ಕಳ್ಳತನ ಮಾಡುವುದು, ಇದೆಲ್ಲವೂ
ಮಹಾಪಾಪವಾಗಿದೆ"
ಪ್ರಶ್ನೆ:
ಈ ಜ್ಞಾನದಲ್ಲಿ
ಯಾವ ಮಕ್ಕಳು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ? ನಷ್ಟವು ಯಾರಿಗೆ ಆಗುತ್ತದೆ?
ಉತ್ತರ:
ಯಾರಿಗೆ ತಮ್ಮ
ಲೆಕ್ಕ ಪತ್ರವನ್ನಿಡುವುದು ಬರುತ್ತದೆಯೋ ಅವರು ಈ ಜ್ಞಾನದಲ್ಲಿ ಬಹಳ ತೀಕ್ಷ್ಣವಾಗಿ ಮುಂದೆ
ಹೋಗುತ್ತಾರೆ. ಯಾರು ದೇಹೀ-ಅಭಿಮಾನಿಯಾಗಿರುವುದಿಲ್ಲವೋ ಅವರಿಗೇ ನಷ್ಟವಾಗುತ್ತದೆ. ತಂದೆಯು
ತಿಳಿಸುತ್ತಾರೆ - ವ್ಯಾಪಾರಿಗಳಿಗೆ ಲೆಕ್ಕವನ್ನಿಡುವ ಅಭ್ಯಾಸವಿರುತ್ತದೆ, ಆದ್ದರಿಂದ ಇಲ್ಲಿಯೂ ಅವರು
ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ.
ಗೀತೆ:
ಮುಖವನ್ನು
ನೋಡಿಕೊ ಪ್ರಾಣಿ..............
ಓಂ ಶಾಂತಿ.
ಆತ್ಮಿಕ ಪಾತ್ರಧಾರಿ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ, ಏಕೆಂದರೆ ಆತ್ಮವೇ ಬೇಹದ್ದಿನ
ನಾಟಕದಲ್ಲಿ ಪಾತ್ರವನ್ನಭಿನಯಿಸುತ್ತಿದೆ. ಇದು ಮನುಷ್ಯರ ನಾಟಕವಲ್ಲವೆ. ಮಕ್ಕಳು ಈ ಸಮಯದಲ್ಲಿ
ಪುರುಷಾರ್ಥ ಮಾಡುತ್ತಿದ್ದೀರಿ. ಭಲೆ ಮನುಷ್ಯರು ವೇದ-ಶಾಸ್ತ್ರಗಳನ್ನು ಓದುತ್ತಾರೆ, ಶಿವನ ಪೂಜೆ
ಮಾಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ, ಇದರಿಂದ ಯಾರೂ ನನ್ನನ್ನು ಪ್ರಾಪ್ತಿ ಮಾಡಿಕೊಳ್ಳಲು
ಸಾಧ್ಯವಿಲ್ಲ ಏಕೆಂದರೆ ಭಕ್ತಿಯು ಇಳಿಯುವ ಕಲೆಯಾಗಿದೆ. ಜ್ಞಾನದಿಂದ ಸದ್ಗತಿಯಾಗುತ್ತದೆ ಅಂದಮೇಲೆ
ಅವಶ್ಯವಾಗಿ ಮತ್ತ್ಯಾವ ಮಾರ್ಗದಿಂದಲೋ ಇಳಿಯುತ್ತಾರಲ್ಲವೆ. ಇದೊಂದು ಆಟವಾಗಿದೆ. ಇದನ್ನು ಯಾರೂ
ತಿಳಿದುಕೊಂಡಿಲ್ಲ. ಶಿವ ಲಿಂಗವನ್ನು ಪೂಜಿಸುವಾಗ ಅದನ್ನು ಬ್ರಹ್ಮಾನೆಂದು ಹೇಳುವುದಿಲ್ಲ. ಅಂದಮೇಲೆ
ಯಾರನ್ನು ಪೂಜಿಸುತ್ತಾರೆ? ಶಿವ ಲಿಂಗವನ್ನೇ ಈಶ್ವರನೆಂದು ತಿಳಿದು ಪೂಜೆ ಮಾಡುತ್ತಾರೆ. ನೀವು
ಮೊಟ್ಟ ಮೊದಲಿಗೆ ಪೂಜೆಯನ್ನು ಆರಂಭಿಸಿದಾಗ ವಜ್ರದ ಶಿವಲಿಂಗವನ್ನು ಮಾಡಿಸುತ್ತೀರಿ, ಈಗಂತೂ
ಬಡವರಾಗಿರುವ ಕಾರಣ ಕಲ್ಲಿನ ಶಿವಲಿಂಗವನ್ನು ಮಾಡಿಸಿದ್ದಾರೆ. ವಜ್ರದ ಶಿವಲಿಂಗವು ಆ ಸಮಯದಲ್ಲಿ
ನಾಲ್ಕೈದು ಸಾವಿರ ಬೆಲೆಬಾಳುತ್ತಿತ್ತು. ಈ ಸಮಯದಲ್ಲಂತೂ ಅದರ ಬೆಲೆಯು 5-7 ಲಕ್ಷಗಳಾಗಿವೆ. ಅಂತಹ
ವಜ್ರಗಳು ಸಿಗುವುದು ಬಹಳ ವಿರಳ. ಕಲ್ಲು ಬುದ್ಧಿಯವರಾಗಿರುವಕಾರಣ ಜ್ಞಾನವಿಲ್ಲದೆ ಕಲ್ಲಿನ ಪೂಜೆ
ಮಾಡುತ್ತಾರೆ. ನಿಮಗೆ ಜ್ಞಾನವಿದೆ ಅಂದಮೇಲೆ ನೀವು ಪೂಜೆ ಮಾಡುವುದಿಲ್ಲ. ಚೈತನ್ಯದಲ್ಲಿ ತಂದೆಯು
ಸನ್ಮುಖದಲ್ಲಿದ್ದಾರೆ, ಅವರನ್ನೇ ನೀವು ನೆನಪು ಮಾಡುತ್ತೀರಿ. ನಿಮಗೆ ತಿಳಿದಿದೆ - ನೆನಪಿನಿಂದಲೇ
ವಿಕರ್ಮಗಳು ವಿನಾಶವಾಗುತ್ತವೆ. ಗೀತೆಯಲ್ಲಿಯೂ ಸಹ ಹೇ ಮಕ್ಕಳೇ, ಎಂದು ಹೇಳುತ್ತಾರೆ. ಪ್ರಾಣಿಯೆಂದು
ಆತ್ಮಕ್ಕೆ ಹೇಳಲಾಗುತ್ತದೆ. ಪ್ರಾಣವು ಹೊರಟು ಹೋಯಿತೆಂದರೆ ಇದು ಶವದ ಸಮಾನ. ಆತ್ಮವು ಶರೀರವನ್ನು
ಬಿಟ್ಟು ಹೋಗುತ್ತದೆ. ಆತ್ಮವು ಅವಿನಾಶಿಯಾಗಿದೆ, ಅದು ಶರೀರದಲ್ಲಿ ಪ್ರವೇಶ ಮಾಡಿದಾಗ
ಚೈತನ್ಯವಿರುತ್ತದೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ತಮ್ಮಲ್ಲಿ ಪರಿಶೀಲನೆ ಮಾಡಿಕೊಳ್ಳಿ
– ದೈವೀ ಗುಣಗಳ ಧಾರಣೆಯು ಎಲ್ಲಿಯವರೆಗೆ ಆಗಿದೆ? ಯಾವುದೇ ವಿಕಾರವಿಲ್ಲವೆ? ಕಳ್ಳತನ ಇತ್ಯಾದಿಗಳ
ಯಾವುದೇ ಆಸುರೀ ಗುಣವಂತೂ ಇಲ್ಲ ಅಲ್ಲವೆ? ಆಸುರೀ ಕರ್ತವ್ಯ ಮಾಡುವುದರಿಂದ ಕೆಳಗೆ ಬೀಳುತ್ತಾರೆ,
ಅಷ್ಟು ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಕೆಟ್ಟ ಹವ್ಯಾಸಗಳನ್ನು ಖಂಡಿತವಾಗಿ
ಕಳೆಯಬೇಕಾಗಿದೆ. ದೇವತೆಗಳೆಂದೂ ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಇಲ್ಲಿ ಅಸುರರ ಮೂಲಕ ಎಷ್ಟೊಂದು
ಪೆಟ್ಟು ತಿನ್ನುತ್ತಾರೆ ಏಕೆಂದರೆ ನೀವು ದೈವೀ ಸಂಪ್ರದಾಯದವರಾಗುತ್ತೀರಿ ಆದ್ದರಿಂದ ಮಾಯೆಯು ಎಷ್ಟು
ಶತ್ರುವಾಗಿ ಬಿಡುತ್ತದೆ. ಮಾಯೆಯು ಅವಗುಣದ ಕೆಲಸ ಮಾಡುತ್ತದೆ. ಹೊಡೆಯುವುದು, ತೊಂದರೆ ಕೊಡುವುದು,
ಕೆಟ್ಟ ಕೆಲಸ ಮಾಡುವುದು, ಇದೆಲ್ಲವೂ ಪಾಪವಾಗಿದೆ. ನೀವು ಮಕ್ಕಳಂತೂ ಬಹಳ ಶುದ್ಧವಾಗಿರಬೇಕು.
ಕಳ್ಳತನ ಇತ್ಯಾದಿಗಳನ್ನು ಮಾಡುವುದು ಮಹಾನ್ ಪಾಪವಾಗಿದೆ. ಬಾಬಾ, ನನ್ನವರು ತಾವೊಬ್ಬರ ವಿನಃ
ಮತ್ತ್ಯಾರೂ ಇಲ್ಲ. ನಾನು ತಮ್ಮನ್ನೇ ನೆನಪು ಮಾಡುತ್ತೇನೆಂದು ತಂದೆಯೊಂದಿಗೆ ನೀವು ಪ್ರತಿಜ್ಞೆ
ಮಾಡುತ್ತಾ ಬಂದಿದ್ದೀರಿ. ಭಕ್ತಿಮಾರ್ಗದಲ್ಲಿ ಭಲೆ ಹಾಡುತ್ತಾ ಬಂದಿದ್ದಾರೆ ಆದರೆ ನೆನಪಿನಿಂದ
ಏನಾಗುತ್ತದೆಯೆಂದು ಅವರಿಗೆ ತಿಳಿದಿಲ್ಲ. ಅವರಂತೂ ತಂದೆಯನ್ನೇ ಅರಿತುಕೊಂಡಿಲ್ಲ. ಒಂದು ಕಡೆ
ಭಗವಂತನು ನಾಮ ರೂಪದಿಂದ ಭಿನ್ನವೆಂದು ಹೇಳುತ್ತಾರೆ, ಇನ್ನೊಂದು ಕಡೆ ಲಿಂಗ ಪೂಜೆ ಮಾಡುತ್ತಾರೆ.
ನೀವೀಗ ಚೆನ್ನಾಗಿ ತಿಳಿದುಕೊಂಡು ಮತ್ತೆ ತಿಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಇದನ್ನೂ ಸಹ
ವಿಚಾರ ಮಾಡಿ, ಮಹಾನ್ ಆತ್ಮರೆಂದು ಯಾರಿಗೆ ಹೇಳಲಾಗುವುದು? ಶ್ರೀಕೃಷ್ಣನಂತೂ ಚಿಕ್ಕ ಮಗು, ಸ್ವರ್ಗದ
ರಾಜಕುಮಾರನಾಗಿದ್ದಾನೆ ಅಂದಮೇಲೆ ಶ್ರೀ ಕೃಷ್ಣನು ಮಹಾತ್ಮನೋ ಅಥವಾ ಇಂದಿನ ಕಲಿಯುಗೀ ಮನುಷ್ಯರೋ?
ಕೃಷ್ಣನು ವಿಕಾರದಿಂದ ಜನ್ಮ ಪಡೆಯುವುದಿಲ್ಲ ಅಲ್ಲವೆ? ಅದು ನಿರ್ವಿಕಾರಿ ಪ್ರಪಂಚ, ಇದು ವಿಕಾರಿ
ಪ್ರಪಂಚವಾಗಿದೆ, ನಿರ್ವಿಕಾರಿಗಳಿಗೆ ಬಹಳಷ್ಟು ಬಿರುದುಗಳನ್ನು ಕೊಡಬಹುದು. ವಿಕಾರಿಗಳಿಗೇನು
ಮಹಿಮೆಯಿದೆ? ಒಬ್ಬ ತಂದೆಯೇ ಶ್ರೇಷ್ಟಾಚಾರಿಗಳನ್ನಾಗಿ ಮಾಡುತ್ತಾರೆ ಅವರು ಎಲ್ಲರಿಗಿಂತ ಸರ್ವ
ಶ್ರೇಷ್ಠನಾಗಿದ್ದಾರೆ. ಮತ್ತೆಲ್ಲಾ ಮನುಷ್ಯರು ಪಾತ್ರಧಾರಿಗಳಾಗಿದ್ದಾರೆ. ಅಂದಮೇಲೆ ಪಾತ್ರದಲ್ಲಿ
ಅವಶ್ಯವಾಗಿ ಬರಬೇಕಾಗುವುದು. ಸತ್ಯಯುಗವು ಶ್ರೇಷ್ಠ ಮನುಷ್ಯರ ಪ್ರಪಂಚವಾಗಿದೆ.
ಪ್ರಾಣಿ-ಪಕ್ಷಿಗಳೆಲ್ಲವೂ ಶ್ರೇಷ್ಠವಾಗಿರುತ್ತವೆ. ಅಲ್ಲಿ ಮಾಯಾ ರಾವಣನೇ ಇರುವುದಿಲ್ಲ. ಅಲ್ಲಿ
ಇಂತಹ ಯಾವುದೇ ತಮೋಗುಣಿ ಪ್ರಾಣಿ, ಪಕ್ಷಿಗಳಿರುವುದಿಲ್ಲ. ನಿಮಗೆ ತಿಳಿದಿದೆ, ನವಿಲು ವಿಕಾರದಿಂದ
ಜನ್ಮ ಕೊಡುವುದಿಲ್ಲ. ಅದರ ಕಣ್ಣಿನಿಂದ ನೀರು ಬರುತ್ತದೆ, ಅದನ್ನು ಹೆಣ್ಣು ನವಿಲು ಧಾರಣೆ
ಮಾಡಿಕೊಳ್ಳುತ್ತದೆ. ನವಿಲಿಗೆ ರಾಷ್ಟ್ರ ಪಕ್ಷಿಯೆಂದು ಹೇಳುತ್ತಾರೆ. ಸತ್ಯಯುಗದಲ್ಲಿಯೂ ಸಹ ವಿಕಾರದ
ಹೆಸರಿರುವುದಿಲ್ಲ. ಮೊದಲನೇ ವಿಶ್ವದ ರಾಜಕುಮಾರನು ಶ್ರೀ ಕೃಷ್ಣನಾಗಿದ್ದಾನೆ. ಅವನ ಕಿರೀಟದಲ್ಲಿ
ನವಿಲು ಗರಿಯನ್ನಿಡುತ್ತಾರೆ ಅಂದಮೇಲೆ ಏನೋ ರಹಸ್ಯವಿರಬೇಕಲ್ಲವೆ. ಆದ್ದರಿಂದ ತಂದೆಯು ಎಲ್ಲಾ
ಮಾತುಗಳನ್ನು ರಿಫೈನ್ ಮಾಡಿ ತಿಳಿಸಿ ಕೊಡುತ್ತಾರೆ. ಅಲ್ಲಿ ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆ
ಎಂಬುದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅಲ್ಲಿ ವಿಕಾರವಿರುವುದಿಲ್ಲ. ತಂದೆಯು
ತಿಳಿಸುತ್ತಾರೆ - ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತೇನೆ ಅಂದಮೇಲೆ ತಮ್ಮ ಪೂರ್ಣ ಪರಿಶೀಲನೆ
ಮಾಡಿಕೊಳ್ಳಿ. ಪರಿಶ್ರಮವಿಲ್ಲದೆ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ.
ಹೇಗೆ ನೀವಾತ್ಮಗಳು
ಬಿಂದುವಾಗಿದ್ದೀರೋ ಹಾಗೆಯೇ ತಂದೆಯೂ ಬಿಂದುವಾಗಿದ್ದಾರೆ. ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ನಾವು
ನೋಡಬೇಕೆಂದು ಕೆಲವರು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಈ ಕಣ್ಣಿಗೆ
ಕಾಣಿಸುವವರನ್ನು ಬಹಳ ಸಮಯದಿಂದ ನೀವು ಪೂಜೆ ಮಾಡಿದಿರಿ ಆದರೆ ಲಾಭವೇನೂ ಆಗಲಿಲ್ಲ. ಈಗ ಯಥಾರ್ಥ
ರೀತಿಯಿಂದ ನಾನು ನಿಮಗೆ ತಿಳಿಸುತ್ತೇನೆ. ನನ್ನಲ್ಲಿ ಇಡೀ ಪಾತ್ರವು ಅಡಕವಾಗಿದೆ. ನಾನು ಪರಮ
ಆತ್ಮನಲ್ಲವೆ. ಯಾವುದೇ ಮಗು ತನ್ನ ಲೌಕಿಕ ತಂದೆಗೆ ಈ ರೀತಿ ಹೇಳುವುದಿಲ್ಲ. ಪರಮಪಿತನೆಂದು ಒಬ್ಬರಿಗೇ
ಹೇಳಲಾಗುತ್ತದೆ. ಸನ್ಯಾಸಿಗಳಗಂತೂ ತಂದೆಯೆಂದು ಹೇಳಲು ಅವರಿಗೆ ಮಕ್ಕಳೇ ಇಲ್ಲ. ಇವರು ಎಲ್ಲಾ
ಆತ್ಮಗಳ ತಂದೆಯಾಗಿದ್ದಾರೆ, ಆಸ್ತಿಯನ್ನು ಕೊಡುತ್ತಾರೆ. ಅವರದು ಗೃಹಸ್ಥಾಶ್ರಮವಲ್ಲ. ತಂದೆಯು
ತಿಳಿಸುತ್ತಾರೆ - ನೀವೇ 84 ಜನ್ಮಗಳನ್ನು ಭೋಗಿಸಿದ್ದೀರಿ, ಮೊಟ್ಟ ಮೊದಲಿಗೆ ನೀವೇ
ಸತೋಪ್ರಧಾನರಾಗಿದ್ದಿರಿ ನಂತರ ಕೆಳಗಿಳಿಯುತ್ತಾ ಬಂದಿದ್ದೀರಿ. ಈಗಂತೂ ತಮಗೆ ಶ್ರೇಷ್ಠರೆಂದು
ಹೇಳಿಕೊಳ್ಳುವುದಿಲ್ಲ. ಈಗಂತೂ ನೀಚರೆಂದು ತಿಳಿಯುತ್ತಾರೆ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ
– ಮೂಲ ಮಾತೇನೆಂದರೆ ತಮ್ಮಲ್ಲಿ ನೋಡಿಕೊಳ್ಳಿ, ನನ್ನಿಂದ ಯಾವುದೇ ವಿಕಾರೀ ಕರ್ಮವಾಗಿಲ್ಲವೆ?
ಪ್ರತಿನಿತ್ಯವೂ ರಾತ್ರಿಯಲ್ಲಿ ತಮ್ಮ ಲೆಕ್ಕ ಪತ್ರವನ್ನು ತೆಗೆಯಿರಿ. ವ್ಯಾಪಾರಿಗಳು ಯಾವಾಗಲೂ
ಲೆಕ್ಕವನ್ನು ತೆಗೆಯುತ್ತಾರೆ. ಸರ್ಕಾರಿ ಸೇವಕರು ಲೆಕ್ಕವನ್ನು ತೆಗೆಯಲು ಸಾಧ್ಯವಿಲ್ಲ. ಅವರಿಗಾದರೂ
ನಿಗಧಿತ ಸಂಬಳವಿರುತ್ತದೆ. ಈ ಜ್ಞಾನ ಮಾರ್ಗದಲ್ಲಿಯೂ ವ್ಯಾಪಾರಿಗಳು ತೀಕ್ಷ್ಣವಾಗಿ ಮುಂದೆ
ಹೋಗುತ್ತಾರೆ. ಇಷ್ಟು ವಿದ್ಯಾವಂತ, ಅಧಿಕಾರಿಗಳೂ ಸಹ ಮುಂದುವರೆಯುವುದಿಲ್ಲ. ವ್ಯಾಪಾರದಲ್ಲಿ ಇಂದು
50 ಸಾವಿರ ಸಂಪಾದಿಸಿದರು, ನಾಳೆ 60 ಸಾವಿರ ಸಂಪಾದಿಸುತ್ತಾರೆ. ಕೆಲವೊಮ್ಮೆ ನಷ್ಟವೂ ಆಗಬಹುದು.
ಸರ್ಕಾರಿ ಸೇವಕರಿಗೆ ನಿಗಧಿತ ಸಂಬಳವಿರುತ್ತದೆ. ಈ ಸಂಪಾದನೆಯಲ್ಲಿಯೂ ಸಹ ಒಂದುವೇಳೆ
ದೇಹೀ-ಅಭಿಮಾನಿಯಾಗಿಲ್ಲವೆಂದರೆ ನಷ್ಟವುಂಟಾಗುವುದು. ಮಾತೆಯರು ವ್ಯಾಪಾರ ಮಾಡುವುದಿಲ್ಲ, ಅವರಿಗಾಗಿ
ಇನ್ನೂ ಸಹಜವಾಗಿದೆ. ಕನ್ಯೆಯರಿಗೂ ಸಹಜವಾಗಿದೆ ಏಕೆಂದರೆ ಮಾತೆಯರು ಏಣಿಯನ್ನು ಇಳಿಯಬೇಕಾಗುತ್ತದೆ.
ಯಾರು ಇಷ್ಟು ಪರಿಶ್ರಮ ಪಡುವರೋ ಅವರದು ಬಲಿಹಾರಿಯಾಗಿದೆ. ಕನ್ಯೆಯರಂತೂ ವಿಕಾರದಲ್ಲಿ ಹೋಗಿರುವುದೇ
ಇಲ್ಲ ಅಂದಮೇಲೆ ಬಿಡುವುದೇನೂ ಇಲ್ಲ. ಪುರುಷರಿಗಾದರೂ ಪರಿಶ್ರಮವಾಗುತ್ತದೆ, ಕುಟುಂಬ ಪರಿವಾರದ
ಸಂಭಾಲನೆ ಮಾಡಬೇಕಾಗುತ್ತದೆ. ಏಣಿ ಹತ್ತಿರುವುದನ್ನು ಇಳಿಯಬೇಕಾಗುತ್ತದೆ. ಮತ್ತೆ-ಮತ್ತೆ ಮಾಯೆಯು
ಪೆಟ್ಟು ಕೊಟ್ಟು ಬೀಳಿಸಿ ಬಿಡುತ್ತದೆ. ನೀವೀಗ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಕುಮಾರಿಯರು
ಪವಿತ್ರರಾಗಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಪತಿಯ ಮೇಲೆ ಪ್ರೇಮವಿರುತ್ತದೆ. ನೀವಂತೂ
ಪತಿಯರ ಪತಿಯಾದ ಪರಮಾತ್ಮನನ್ನು ನೆನಪು ಮಾಡಬೇಕು ಮತ್ತೆಲ್ಲರನ್ನೂ ಮರೆಯಬೇಕಾಗಿದೆ. ತಂದೆ-ತಾಯಿಗೆ
ಮಕ್ಕಳಲ್ಲಿ ಮೋಹವಿರುತ್ತದೆ. ಮಕ್ಕಳಂತೂ ಮುಗ್ಧರಾಗಿರುತ್ತಾರೆ. ವಿವಾಹದ ನಂತರ ಮೋಹವು
ಆರಂಭವಾಗುತ್ತದೆ. ಮೊದಲು ಸ್ತ್ರೀ ಇಷ್ಟವಾಗುತ್ತಾಳೆ ನಂತರ ವಿಕಾರಗಳಲ್ಲಿ ಬೀಳಿಸುವ ಏಣಿಯನ್ನು
ಹತ್ತಲಾರಂಭಿಸುತ್ತಾರೆ. ಕುಮಾರಿಯು ನಿರ್ವಿಕಾರಿಯಾಗಿದ್ದಾಗ ಪೂಜಿಸಲ್ಪಡುತ್ತಾಳೆ. ನಿಮ್ಮ
ಹೆಸರಾಗಿದೆ - ಬ್ರಹ್ಮಾಕುಮಾರ-ಕುಮಾರಿಯರು. ನೀವು ಮಹಿಮಾಯೋಗ್ಯರಾಗಿ ಪೂಜಾಯೋಗ್ಯರಾಗುತ್ತೀರಿ.
ತಂದೆಯೇ ನಿಮ್ಮ ಶಿಕ್ಷಕನೂ ಆಗಿದ್ದಾರೆ ಅಂದಮೇಲೆ ನಾವು ವಿದ್ಯಾರ್ಥಿಗಳಾಗಿದ್ದೇವೆಂದು ನೀವು
ಮಕ್ಕಳಿಗೆ ನಶೆಯಿರಲಿ. ಭಗವಂತನು ಅವಶ್ಯವಾಗಿ ಭಗವಾನ್-ಭಗವತಿ (ದೇವಿ-ದೇವತಾ) ಯರನ್ನಾಗಿ
ಮಾಡುತ್ತಾರೆ. ಕೇವಲ ಇದನ್ನೇ ತಿಳಿಸಲಾಗುತ್ತದೆ - ಭಗವಂತನೊಬ್ಬರೇ ಆಗಿದ್ದಾರೆ ಉಳಿದೆಲ್ಲರೂ
ಸಹೋದರ-ಸಹೋದರರಾಗಿದ್ದೀರಿ ಮತ್ತ್ಯಾವುದೇ ಸಂಬಂಧವಿಲ್ಲ. ಪ್ರಜಾಪಿತ ಬ್ರಹ್ಮಾನಿಂದ ರಚನೆಯಾಗುತ್ತದೆ
ನಂತರ ವೃದ್ಧಿಯಾಗುತ್ತದೆ. ಆತ್ಮಗಳ ವೃದ್ಧಿಯೆಂದು ಹೇಳುವುದಿಲ್ಲ, ಮನುಷ್ಯರ ವೃದ್ಧಿಯಾಗುತ್ತದೆ.
ಆತ್ಮಗಳ ನಿಗಧಿತ ಸಂಖ್ಯೆಯಿದೆ ಅಲ್ಲಿಂದ ಬರುತ್ತಾ ಇರುತ್ತಾರೆ. ಅಲ್ಲಿ ಖಾಲಿಯಾಗುವವರೆಗೂ ಬರುತ್ತಾ
ಇರುತ್ತಾರೆ. ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ ಅಂದರೆ ಒಣಗಿ ಹೋಗುತ್ತದೆಯೆಂದಲ್ಲ. ಇದನ್ನು
ಆಲದ ಮರದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅದರ ಬುನಾದಿಯೇ ಇಲ್ಲ. ಉಳಿದಂತೆ ಇಡೀ ವೃಕ್ಷವು ನಿಂತಿದೆ.
ನಿಮ್ಮದೂ ಹಾಗೆಯೇ ವೃಕ್ಷದ ಬುನಾದಿಯೇ ಇಲ್ಲ. ಕೆಲವೊಂದು ಚಿಹ್ನೆಗಳಿವೆಯಷ್ಟೆ. ಇಲ್ಲಿಯವರೆಗೂ
ಮಂದಿರಗಳನ್ನು ಕಟ್ಟಿಸುತ್ತಾ ಇರುತ್ತಾರೆ. ದೇವತೆಗಳ ರಾಜ್ಯವು ಯಾವಾಗ ಇತ್ತು ನಂತರ ಎಲ್ಲಿ
ಹೋಯಿತೆಂಬುದು ಮನುಷ್ಯರಿಗೆ ತಿಳಿದಿಲ್ಲ. ಈ ಜ್ಞಾನವು ನೀವು ಬ್ರಾಹ್ಮಣರಿಗೇ ಇದೆ. ಪರಮಾತ್ಮನು
ಬಿಂದು ಸ್ವರೂಪನಾಗಿದ್ದಾರೆಂದು ಮನುಷ್ಯರಿಗೆ ತಿಳಿದಿಲ್ಲ. ಗೀತೆಯಲ್ಲಿಯೂ ಸಹ ಅವರು ಅಖಂಡ ಜ್ಯೋತಿ
ಸ್ವರೂಪನೆಂದು ಬರೆದಿದ್ದಾರೆ. ಮೊದಲು ಅನೇಕರಿಗೆ ಅವರ ಭಾವನೆಯನುಸಾರ ಸಾಕ್ಷಾತ್ಕಾರವಾಗುತ್ತಿತ್ತು,
ಕಣ್ಣುಗಳು ಕೆಂಪಗಾಗಿ ಬಿಡುತ್ತಿದ್ದವು. ನಮ್ಮಿಂದ ಸಹನೆ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದರು
ಅದಂತೂ ಕೇವಲ ಸಾಕ್ಷಾತ್ಕಾರವಾಗಿತ್ತು. ತಂದೆಯು ತಿಳಿಸುತ್ತಾರೆ - ಸಾಕ್ಷಾತ್ಕಾರದಿಂದ ಯಾವುದೇ
ಕಲ್ಯಾಣವಿಲ್ಲ. ಇಲ್ಲಂತೂ ನೆನಪಿನ ಯಾತ್ರೆಯು ಮುಖ್ಯವಾಗಿದೆ. ಹೇಗೆ ಪಾದರಸವು ಜಾರುತ್ತದೆಯಲ್ಲವೆ
ಹಾಗೆಯೇ ನೆನಪೂ ಸಹ ಪದೇ-ಪದೇ ಜಾರಿ ಹೋಗುತ್ತದೆ. ಎಷ್ಟು ನಾವು ತಂದೆಯನ್ನು ನೆನಪು ಮಾಡಬೇಕು
ಎಂದುಕೊಂಡರೂ ಸಹ ಬೇರೆ-ಬೇರೆ ವಿಚಾರಗಳು ಬಂದು ಬಿಡುತ್ತವೆ. ಇದರಲ್ಲಿಯೇ ನಿಮ್ಮ ಸ್ಪರ್ಧೆಯಿದೆ.
ಕೂಡಲೇ ಪಾಪಗಳು ಕಳೆಯುತ್ತವೆಯೆಂದಲ್ಲ, ಸಮಯ ಹಿಡಿಸುತ್ತದೆ. ಕರ್ಮಾತೀತ ಸ್ಥಿತಿಯಾಗಿ ಬಿಟ್ಟರೆ
ಮತ್ತೆ ಈ ಶರೀರವೇ ಇರುವುದಿಲ್ಲ ಆದರೆ ಈಗ ಯಾರೂ ಕರ್ಮಾತೀತ ಸ್ಥಿತಿಯನ್ನು ಹೊಂದುವುದಿಲ್ಲ ಏಕೆಂದರೆ
ಕರ್ಮಾತೀತರಾದರೆ ಅವರಿಗೆ ಈಗ ಸತ್ಯಯುಗೀ ಶರೀರವು ಬೇಕಾಗುವುದು ಆದ್ದರಿಂದ ಈಗ ನೀವು ಮಕ್ಕಳು
ತಂದೆಯನ್ನೇ ನೆನಪು ಮಾಡಬೇಕಾಗಿದೆ. ತನ್ನನ್ನು ನೋಡಿಕೊಳ್ಳುತ್ತಾ ಇರಿ, ನನ್ನಿಂದ ಯಾವುದೇ ಕೆಟ್ಟ
ಕರ್ಮವಂತೂ ಆಗುತ್ತಿಲ್ಲವೆ? ತಮ್ಮ ಲೆಕ್ಕ ಪತ್ರವನ್ನು ಅವಶ್ಯವಾಗಿ ಇಡಬೇಕಾಗಿದೆ. ಇಂತಹ
ವ್ಯಾಪಾರಿಗಳು ಬಹು ಬೇಗನೆ ಸಾಹುಕಾರರಾಗಿ ಬಿಡುತ್ತಾರೆ.
ತಂದೆಯ ಬಳಿ ಯಾವ
ಜ್ಞಾನವಿದೆಯೋ ಅದನ್ನು ಮಕ್ಕಳಿಗೆ ತಿಳಿಸುತ್ತಿದ್ದಾರೆ. ತಂದೆಯು ಹೇಳುತ್ತಾರೆ - ನಾನಾತ್ಮನಲ್ಲಿ ಈ
ಜ್ಞಾನವು ಅಡಕವಾಗಿದೆ. ಕಲ್ಪದ ಹಿಂದೆ ಯಾವ ಜ್ಞಾನವನ್ನು ಕೊಟ್ಟಿದ್ದೆನೋ ಅದನ್ನೇ ನಿಮಗೆ
ತಿಳಿಸುತ್ತೇನೆ. ಮಕ್ಕಳಿಗೇ ತಿಳಿಸುತ್ತೇನೆ, ನೀವಲ್ಲದೆ ಮತ್ತ್ಯಾರು ಅರಿತುಕೊಳ್ಳುವರು? ನೀವು ಈ
ಸೃಷ್ಟಿಚಕ್ರವನ್ನು ತಿಳಿದುಕೊಂಡಿದ್ದೀರಿ, ಇದರಲ್ಲಿ ಎಲ್ಲಾ ಪಾತ್ರಧಾರಿಗಳ ಪಾತ್ರವು ನಿಗಧಿಯಾಗಿದೆ,
ಅದಲು-ಬದಲಾಗಲು ಸಾಧ್ಯವಿಲ್ಲ. ಯಾರೂ ಬಿಡುಗಡೆ ಹೊಂದುವುದಕ್ಕೂ ಸಾಧ್ಯವಿಲ್ಲ. ಹಾ! ಸ್ವಲ್ಪ ಸಮಯ
ಮುಕ್ತಿ ಸಿಗುತ್ತದೆ, ನೀವಂತೂ ಆಲ್ರೌಂಡ್ ಪಾತ್ರಧಾರಿಗಳಾಗಿದ್ದೀರಿ, 84 ಜನ್ಮಗಳನ್ನು ಪಡೆಯುತ್ತೀರಿ
ಉಳಿದೆಲ್ಲರೂ ತಮ್ಮ ಮನೆಯಲ್ಲಿರುತ್ತಾರೆ ಮತ್ತೆ ಕೊನೆಯಲ್ಲಿ ಕೆಳಗೆ ಬರುತ್ತಾರೆ. ಮೋಕ್ಷವನ್ನು
ಇಚ್ಛಿಸುವವರು ಇಲ್ಲಿ ಬರುವುದಿಲ್ಲ. ಜ್ಞಾನವನ್ನೆಂದೂ ಕೇಳುವುದಿಲ್ಲ. ಅವರು ಕೊನೆಯಲ್ಲಿ ಹೊರಟು
ಹೋಗುತ್ತಾರೆ. ಸೊಳ್ಳೆಗಳ ತರಹ ಬಂದರು, ಹೊರಟು ಹೋದರು. ನೀವಂತೂ ಡ್ರಾಮಾನುಸಾರ ಓದುತ್ತೀರಿ, ನಿಮಗೆ
ತಿಳಿದಿದೆ - ತಂದೆಯು 5000 ವರ್ಷಗಳ ಮೊದಲೂ ಸಹ ಹೀಗೆ ರಾಜಯೋಗವನ್ನು ಕಲಿಸಿದ್ದರು, ಶಿವ ತಂದೆಯು ಈ
ರೀತಿ ಹೇಳುತ್ತಾರೆಂದು ನೀವು ಮತ್ತೆ ಅನ್ಯರಿಗೂ ತಿಳಿಸುತ್ತೀರಿ. ನಾವು ಎಷ್ಟು ಶ್ರೇಷ್ಠರಾಗಿದ್ದೆವು,
ಈಗ ಎಷ್ಟು ಕನಿಷ್ಟರಾಗಿದ್ದೇವೆ ಎಂಬುದು ನಿಮಗೆ ಅರ್ಥವಾಗಿದೆ. ತಂದೆಯು ಶ್ರೇಷ್ಠರನ್ನಾಗಿ
ಮಾಡುತ್ತಾರೆಂದ ಮೇಲೆ ಅಂತಹ ಪುರುಷಾರ್ಥ ಮಾಡಬೇಕಲ್ಲವೆ. ನೀವಿಲ್ಲಿ ರಿಫ್ರೆಷ್ ಆಗಲು ಬರುತ್ತೀರಿ,
ಇದರ ಹೆಸರೇ ಆಗಿದೆ ಮಧುಬನ. ಕಲ್ಕತ್ತೆ ಅಥವಾ ಬಾಂಬೆಯಲ್ಲಿ ಮುರುಳಿಯನ್ನು ನುಡಿಸುವುದಿಲ್ಲ,
ಮಧುಬನದಲ್ಲಿಯೇ ತಂದೆಯು ಮುರುಳಿಯನ್ನು ನುಡಿಸುತ್ತಾರೆ. ಮುರುಳಿಯನ್ನು ಕೇಳುವುದಕ್ಕಾಗಿ ತಂದೆಯ ಬಳಿ
ರಿಫ್ರೆಷ್ ಆಗಲು ಬರುತ್ತೀರಿ. ಹೊಸ-ಹೊಸ ವಿಚಾರಗಳನ್ನು ತಂದೆಯು ತಿಳಿಸುತ್ತಿರುತ್ತಾರೆ. ಸನ್ಮುಖ
ಕೇಳುವುದರಲ್ಲಿ ಎಷ್ಟೊಂದು ಅಂತರವಿದೆ ಎಂಬುದನ್ನು ಅನುಭವ ಮಾಡುತ್ತೀರಿ. ಮುಂದೆ ಹೋದಂತೆ ಬಹಳ
ಪಾತ್ರವನ್ನು ನೋಡುವಿರಿ. ತಂದೆಯು ಮೊಟ್ಟ ಮೊದಲೇ ಎಲ್ಲವನ್ನೂ ತಿಳಿಸಿ ಬಿಟ್ಟರೆ, ಅದರ ಸವಿಯೇ
ಇರುವುದಿಲ್ಲ ಆದ್ದರಿಂದ ಕಳೆಯುತ್ತಾ ಹೋದಂತೆ ತಂದೆಯಲ್ಲಿ ಎಲ್ಲವೂ ಇಮರ್ಜ್ ಆಗುತ್ತಾ ಹೋಗುತ್ತದೆ.
ಒಂದು ಕ್ಷಣವು ಇನ್ನೊಂದು ಕ್ಷಣಕ್ಕೆ ಹೋಲುವುದಿಲ್ಲ. ತಂದೆಯು ಆತ್ಮಿಕ ಸೇವೆ ಮಾಡಲು ಬಂದಿದ್ದಾರೆ
ಅಂದಮೇಲೆ ಆತ್ಮಿಕ ಸೇವೆ ಮಾಡುವುದು ನೀವು ಮಕ್ಕಳ ಕರ್ತವ್ಯವೂ ಆಗಿದೆ. ಕೊನೆಪಕ್ಷ ಇಷ್ಟಾದರೂ ತಿಳಿಸಿ
- ತಂದೆಯನ್ನು ನೆನಪು ಮಾಡಿ, ಪವಿತ್ರರಾಗಿ. ಪವಿತ್ರತೆಯಲ್ಲಿಯೇ ಅನುತ್ತೀರ್ಣರಾಗುತ್ತಾರೆ ಏಕೆಂದರೆ
ನೆನಪು ಮಾಡುವುದಿಲ್ಲ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು - ನಾವು ಬೇಹದ್ದಿನ ತಂದೆಯ
ಸನ್ಮುಖದಲ್ಲಿ ಕುಳಿತಿದ್ದೇವೆ, ಯಾರನ್ನು ಪ್ರಪಂಚದವರು ಯಾರೂ ತಿಳಿದುಕೊಂಡಿಲ್ಲ. ಜ್ಞಾನ ಸಾಗರನು ಆ
ಶಿವ ತಂದೆಯೇ ಆಗಿದ್ದಾರೆ, ದೇಹಧಾರಿಗಳೊಂದಿಗಿನ ಬುದ್ಧಿಯೋಗವನ್ನು ತೆಗೆಯಿರಿ. ಇದು ಶಿವ ತಂದೆಯ ರಥ
(ಬ್ರಹ್ಮಾ) ವಾಗಿದೆ. ಇವರಿಗೆ ಗೌರವ ಕೊಡಲಿಲ್ಲವೆಂದರೆ ಧರ್ಮರಾಜನ ಮೂಲಕ ಬಹಳ
ಶಿಕ್ಷೆಗಳನ್ನನುಭವಿಸಬೇಕಾಗುವುದು. ಹಿರಿಯರ ಪ್ರತಿ ಗೌರವವನ್ನಿಡಬೇಕಲ್ಲವೆ. ಆದಿ ದೇವನಿಗೆ
ಎಷ್ಟೊಂದು ಗೌರವ ಕೊಡುತ್ತಾರೆ. ಜಡಚಿತ್ರಕ್ಕೇ ಅಷ್ಟು ಗೌರವವಿದೆಯೆಂದರೆ ಚೈತನ್ಯದಲ್ಲಿ ಇವರಿಗೆ
ಎಷ್ಟೊಂದು ಗೌರವವಿರಬೇಕು! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತನ್ನಲ್ಲಿ
ಪರಿಶೀಲನೆ ಮಾಡಿಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಕೆಟ್ಟ ಹವ್ಯಾಸಗಳನ್ನು
ತೆಗೆಯಬೇಕಾಗಿದೆ. ಪ್ರತಿಜ್ಞೆ ಮಾಡಿ - ಬಾಬಾ, ನಾವೆಂದೂ ಕೆಟ್ಟ ಕರ್ಮವನ್ನು ಮಾಡುವುದಿಲ್ಲ.
2. ಕರ್ಮಾತೀತ
ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ನೆನಪಿನ ರೇಸ್ ಮಾಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ
ತತ್ಫರರಾಗಿರಬೇಕು. ಹಿರಿಯರಿಗೆ ಗೌರವ ಕೊಡಬೇಕಾಗಿದೆ.
ವರದಾನ:
ಫಾಲೋ ಫಾದರ್ ನ
ಪಾಠದ ಮೂಲಕ ಕಷ್ಟವನ್ನು ಸಹಜ ಮಾಡುವಂತಹ ತೀವ್ರ ಪುರುಷಾರ್ಥಿ ಭವ.
ಕಷ್ಟವನ್ನು ಸಹಜವನ್ನಾಗಿ
ಮಾಡುವಂತಹ ಅಥವಾ ಕೊನೆಯ ಪುರುಷಾರ್ಥದಲ್ಲಿ ಸಪಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ಮೊದಲ ಪಾಠ
“ಫಾಲೋ ಫಾದರ್” ಈ ಮೊದಲ ಪಾಠವೇ ಕೊನೆಯ ಸ್ಟೇಜ್ ಅನ್ನು ಸಮೀಪ ತರುವಂತಹದ್ದಾಗಿದೆ. ಈ ಪಾಠದಿಂದ
ಅಭೂಲ್ (ತಪ್ಪಿಲ್ಲದ), ಏಕರಸ ಮತ್ತು ತೀವ್ರ ಪುರುಷಾರ್ಥಿಗಳಾಗಿ ಬಿಡುವಿರಿ ಏಕೆಂದರೆ ಯಾವುದೇ
ಮಾತಿನಲ್ಲಿ ಕಷ್ಟ ಎಮದು ಯಾವಾಗ ಅನ್ನಿಸುವುದೆಂದರೆ ಯಾವಾಗ ಫಾಲೋ ಮಾಡುವ ಬದಲು ತಮ್ಮ ಬುದ್ಧಿಯನ್ನು
ತೊರಿಸುವಿರಿ. ಇದರಲ್ಲಿ ತಮ್ಮದೇ ಸಂಕಲ್ಪದ ಜಾಲದಲ್ಲಿ ಸಿಕ್ಕಿ ಹಾಕಿಕೊಂಡು ಬಿಡುವಿರಿ ನಂತರ ಸಮಯವೂ
ಇಡಿಸುತ್ತೆ ಮತ್ತು ಶಕ್ತಿ ಸಹಾ ಇಡಿಸುತ್ತೆ. ಒಂದುವೇಳೆ ಫಾಲೋ ಮಾಡುತ್ತಾ ಹೋಗಿ ಆಗ ಸಮಯ ಮತ್ತು
ಶಕ್ತಿ ಎರಡೂ ಉಳಿತಾಯವಾಗುವುದು, ಜಮಾ ಆಗಿ ಬಿಡುವುದು.
ಸ್ಲೋಗನ್:
ಸತ್ಯತೆ.
ಸ್ವಚ್ಛತೆಯನ್ನು ಧಾರಣೆ ಮಾಡಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಎಷ್ಟು ಸ್ವಯಂನ್ನು
ಮನಸ್ಸಾ ಸೇವೆಯಲ್ಲಿ ಬಿಜಿಯಾಗಿಟ್ಟುಕೊಳ್ಳುತ್ತೀರಿ ಅಷ್ಟು ಸಹಜ ಮಾಯಾಜೀತ್ರಾಗಿ. ಕೇವಲ ಸ್ವಯಂನ
ಪ್ರತಿ ಭಾವುಕರಾಗಬೇಡಿ ಆದರೆ ಅನ್ಯರನ್ನೂ ಸಹ ಶುಭ ಭಾವನೆ ಮತ್ತು ಶುಭ ಕಾಮನೆಯ ಮೊಲಕ ಪರಿವರ್ತನೆ
ಮಾಡುವ ಸೇವೆಯನ್ನು ಮಾಡಿ. ಭಾವನೆ ಮತ್ತು ಜ್ಞಾನ, ಸ್ನೇಹ ಮತ್ತು ಯೋಗ ಎರಡರ ಸಮತೋಲನವಿರಲಿ,
ಕಲ್ಯಾಣಕಾರಿಯಂತು ಆಗಿದ್ದೀರಿ ಈಗ ಬೇಹದ್ದಿನ ವಿಶ್ವ ಕಲ್ಯಾಣಕಾರಿಗಳಾಗಿರಿ.