14.04.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ದೇವತೆಗಳಾಗಬೇಕೆಂದರೆ ಅಮೃತವನ್ನು ಕುಡಿಯಿರಿ ಮತ್ತು ಕುಡಿಸಿರಿ, ಅಮೃತವನ್ನು ಕುಡಿಯುವವರೇ ಶ್ರೇಷ್ಠಾಚಾರಿಗಳಾಗುತ್ತಾರೆ”

ಪ್ರಶ್ನೆ:
ಈ ಸಮಯದಲ್ಲಿ ಸತ್ಯಯುಗೀ ಪ್ರಜೆಗಳು ಯಾವ ಆಧಾರದ ಮೇಲೆ ತಯಾರಾಗುತ್ತಿದ್ದಾರೆ?

ಉತ್ತರ:
ಯಾರು ಈ ಜ್ಞಾನದಿಂದ ಪ್ರಭಾವಿತರಾಗುತ್ತಾರೆ, ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ ಆದರೆ ವಿದ್ಯೆಯನ್ನು ಓದುವುದಿಲ್ಲವೋ, ಪರಿಶ್ರಮ ಪಡುವುದಿಲ್ಲವೋ ಅವರು ಪ್ರಜೆಗಳಾಗಿ ಬಿಡುತ್ತಾರೆ. ಪ್ರಭಾವಿತರಾಗುವುದು ಎಂದರೆ ಪ್ರಜೆಗಳಾಗುವುದು. ಸೂರ್ಯವಂಶಿ ರಾಜ-ರಾಣಿಯಾಗಲು ಪರಿಶ್ರಮ ಪಡಬೇಕಲ್ಲವೆ. ವಿದ್ಯೆಯ ಮೇಲೆ ಪೂರ್ಣ ಗಮನವಿರಬೇಕು. ನೆನಪು ಮಾಡುತ್ತಾ ಮತ್ತು ಮಾಡಿಸುತ್ತಾ ಇದ್ದಾಗ ಶ್ರೇಷ್ಠ ಪದವಿಯು ಸಿಗುವುದು.

ಗೀತೆ:
ನೀನು ರಾತ್ರಿಯನ್ನು ನಿದ್ರಿಸುತ್ತಾ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ...........

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ - ನಮ್ಮ ಜೀವನವು ವಜ್ರ ಸಮಾನವಾಗಿತ್ತು, ಈಗ ಕವಡೆಯಂತಾಗಿ ಬಿಟ್ಟಿದೆ. ಇದಂತೂ ಸಾಮಾನ್ಯ ಮಾತಾಗಿದೆ. ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳುತ್ತಾರೆ - ತಂದೆಯು ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳುವಷ್ಟು ಸಹಜ ರೀತಿಯಿಂದ ತಿಳಿಸುತ್ತಾರೆ. ಸತ್ಯ ನಾರಾಯಣನ ಕಥೆಯನ್ನು ತಿಳಿಸುವಾಗ ಚಿಕ್ಕ-ಚಿಕ್ಕ ಮಕ್ಕಳೂ ಸಹ ಕುಳಿತುಕೊಳ್ಳುತ್ತಾರೆ ಆದರೆ ಆ ಸತ್ಸಂಗಗಳಲ್ಲಿ ಏನೆಲ್ಲವನ್ನೂ ತಿಳಿಸುತ್ತಾರೆಯೋ ಅವೆಲ್ಲವೂ ಕಥೆಗಳಾಗಿವೆ. ಕಥೆಯು ಜ್ಞಾನವಲ್ಲ, ಇವು ಮಾಡಿ-ಮಾಡಲ್ಪಟ್ಟ ಕಥೆಗಳಾಗಿವೆ. ಗೀತೆಯ ಕಥೆ, ರಾಮಾಯಣದ ಕಥೆ, ಭಿನ್ನ-ಭಿನ್ನ ಶಾಸ್ತ್ರಗಳಿವೆ. ಅದರ ಕಥೆಗಳನ್ನು ಕುಳಿತು ತಿಳಿಸುತ್ತಾರೆ, ಅವೆಲ್ಲವೂ ಕಥೆಗಳಾಗಿವೆ. ಕಥೆಗಳಿಂದ ಏನಾದರೂ ಲಾಭವಾಗುತ್ತದೆಯೇ? ಇದು ಸತ್ಯ ನಾರಾಯಣನ ಅರ್ಥಾತ್ ನರನಿಂದ ನಾರಾಯಣನಾಗುವ ಸತ್ಯ ಕಥೆಯಾಗಿದೆ, ಇದನ್ನು ಕೇಳುವುದರಿಂದ ನೀವು ನರನಿಂದ ನಾರಾಯಣರಾಗಿ ಬಿಡುತ್ತೀರಿ. ಇದು ಅಮರ ಕಥೆಯೂ ಆಗಿದೆ. ನೀವು ನಿಮಂತ್ರಣ ನೀಡುತ್ತೀರಿ - ಬನ್ನಿರಿ, ನಿಮಗೆ ಅಮರ ಕಥೆಯನ್ನು ತಿಳಿಸುತ್ತೇವೆ, ಇದರಿಂದ ನೀವು ಅಮರ ಲೋಕದಲ್ಲಿ ಹೋಗುತ್ತೀರಿ. ಆದರೆ ಯಾರೂ ತಿಳಿದುಕೊಳ್ಳುವುದಿಲ್ಲ, ಶಾಸ್ತ್ರಗಳ ಕಥೆಯನ್ನೇ ಕೇಳುತ್ತಾ ಬರುತ್ತಾರೆ, ಸಿಗುವುದೇನೂ ಇಲ್ಲ. ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ದರ್ಶನ ಮಾಡಿಕೊಂಡು ಬರೋಣವೆಂದು ಹೋಗುತ್ತಾರೆ, ಮಹಾತ್ಮರ ದರ್ಶನ ಮಾಡಿಕೊಂಡು ಬಂದೆವೆಂದು ಹೇಳುತ್ತಾರೆ. ಇದೊಂದು ಪದ್ಧತಿಯು ನಡೆಯುತ್ತಾ ಬಂದಿದೆ. ಋಷಿ-ಮುನಿ ಮೊದಲಾದವರು ಯಾರೆಲ್ಲರೂ ಇದ್ದು ಹೋಗಿದ್ದಾರೆಯೋ ಅವರಿಗೆ ತಲೆ ಬಾಗುತ್ತಾ ಬಂದಿದ್ದಾರೆ. ರಚಯಿತ ಮತ್ತು ರಚನೆಯ ಕಥೆಯು ತಿಳಿದಿದೆಯೋ ಎಂದು ಕೇಳಿದರೆ ಇಲ್ಲವೆಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ರಚಯಿತ ಮತ್ತು ರಚನೆಯ ಕಥೆಯು ಬಹಳ ಸಹಜವಾಗಿದೆ, ತಂದೆ ಮತ್ತು ಆಸ್ತಿಯ ಕಥೆಯಾಗಿದೆ. ಭಲೆ ಯಾರು ಪ್ರದರ್ಶನಿಗೆ ಬರುವರೋ ಅವರು ಕಥೆಯನ್ನಂತೂ ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ ಆದರೆ ಪವಿತ್ರರಾಗುವುದಿಲ್ಲ. ಈ ವಿಕಾರಗಳಲ್ಲಿ ಹೋಗುವ ಪದ್ಧತಿಯೂ ಸಹ ಅನಾದಿಯಾಗಿದೆಯೆಂದು ತಿಳಿದುಕೊಳ್ಳುತ್ತಾರೆ, ಮಂದಿರಗಳಲ್ಲಿ ದೇವತೆಗಳ ಮುಂದೆ ಹೋಗಿ ತಾವು ಸಂಪೂರ್ಣ ನಿರ್ವಿಕಾರಿಗಳಾಗಿದ್ದೀರಿ.... ಎಂದು ಹಾಡುತ್ತಾರೆ. ಮತ್ತೆ ಹೊರಗೆ ಬಂದು ವಿಕಾರದಲ್ಲಿ ಹೋಗುವರು, ಇದು ಅನಾದಿಯಾಗಿದೆ, ಇದು ಇಲ್ಲದೆ ಪ್ರಪಂಚವು ಹೇಗೆ ನಡೆಯುವುದು ಎಂದು ಕೇಳುತ್ತಾರೆ. ಲಕ್ಷ್ಮೀ-ನಾರಾಯಣ ಮೊದಲಾದವರಿಗೂ ಮಕ್ಕಳಿದ್ದರಲ್ಲವೆ ಎನ್ನುತ್ತಾರೆ, ಇಂತಹವರಿಗೆ ಏನು ಹೇಳುವುದು. ಮನುಷ್ಯನ ಪದವಿಯಂತೂ ಕೊಡಲು ಸಾಧ್ಯವಿಲ್ಲ. ದೇವತೆಗಳೂ ಸಹ ಮನುಷ್ಯರಾಗಿದ್ದರು, ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಎಷ್ಟು ಸುಖಿಯಾಗಿದ್ದರು! ನೀವು ಮಕ್ಕಳಿಗೆ ತಂದೆಯು ಬಹಳ ಸಹಜವಾದ ಮಾತನ್ನು ತಿಳಿಸುತ್ತಾರೆ. ಅವಶ್ಯವಾಗಿ ಇದೇ ಭಾರತದಲ್ಲಿಯೇ ಸ್ವರ್ಗವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದನ್ನಂತೂ ಎಲ್ಲರೂ ಒಪ್ಪುತ್ತಾರೆ - ಸತ್ಯಯುಗದಲ್ಲಿ ಇವರ ರಾಜ್ಯವಿತ್ತು. ಅಲ್ಲಿ ಯಾರೂ ದುಃಖಿಯಾಗಿರಲಿಲ್ಲ. ಸಂಪೂರ್ಣ ನಿರ್ವಿಕಾರಿಗಳಿದ್ದರು, ಅವರ ಮಂದಿರಗಳು ದೊಡ್ಡ-ದೊಡ್ಡದಾಗಿ ಮಾಡಲ್ಪಟ್ಟಿವೆ. ಅವರಿಗೆ 5000 ವರ್ಷಗಳಾಯಿತು, ಅವರು ಈಗ ಇಲ್ಲ. ಈಗಂತೂ ಕಲಿಯುಗದ ಅಂತ್ಯವಾಗಿದೆ. ಮನುಷ್ಯರು ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಭಗವಂತನಂತೂ ಮೇಲೆ ನಿರ್ವಾಣಧಾಮದಲ್ಲಿಯೇ ಇರುತ್ತಾರೆ. ಮೂಲತಃ ನಾವಾತ್ಮರೂ ಅಲ್ಲಿಯೇ ಇರುತ್ತೇವೆ, ಪಾತ್ರವನ್ನಭಿನಯಿಸಲು ಇಲ್ಲಿಗೆ ಬರುತ್ತೇವೆ. ಮೊದಲು ನಾವು ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿದ್ದೆವು, ಅಲ್ಲಿ ಬಹಳ ಸುಖ, ಆನಂದವಿತ್ತು. ನಂತರ ನಾವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. 84 ಜನ್ಮಗಳ ಚಕ್ರವೆಂದು ಗಾಯನವೂ ಇದೆ. ನಾವು ಸೂರ್ಯವಂಶದಲ್ಲಿ 1250 ವರ್ಷಗಳಕಾಲ ರಾಜ್ಯಭಾರ ಮಾಡಿದೆವು, ಅಲ್ಲಿ ಅಪಾರ ಸುಖವಿತ್ತು, ಸಂಪೂರ್ಣ ನಿರ್ವಿಕಾರಿಗಳಾಗಿದ್ದೆವು. ವಜ್ರ ವೈಡೂರ್ಯಗಳ ಮಹಲುಗಳಿತ್ತು. ನಾವೇ ರಾಜ್ಯಭಾರ ಮಾಡಿದೆವು ನಂತರ 84 ಜನ್ಮಗಳಲ್ಲಿ ಬರಬೇಕಾಯಿತು. ಈ ವಿಶ್ವದ ಚರಿತ್ರೆ-ಭೂಗೋಳದ ಚಕ್ರವು ಸುತ್ತುತ್ತಾ ಇರುತ್ತದೆ. ಅರ್ಧಕಲ್ಪ ಸುಖವಿತ್ತು, ರಾಮ ರಾಜ್ಯದಲ್ಲಿದ್ದೆವು ನಂತರ ಮನುಷ್ಯರು ವೃದ್ಧಿಯಾಗುತ್ತಾ ಹೋಯಿತು. ಸತ್ಯಯುಗದಲ್ಲಿ ಕೇವಲ 9 ಲಕ್ಷ ಜನ ಇದ್ದರು. ಸತ್ಯಯುಗದ ಅಂತ್ಯದಲ್ಲಿ ವೃದ್ಧಿಯಾಗಿ 9 ಲಕ್ಷದಿಂದ ಎರಡು ಕೋಟಿಯಾಗಿ ಬಿಟ್ಟರು. ನಂತರ 12 ಜನ್ಮಗಳು, ತ್ರೇತಾಯುಗದಲ್ಲಿ ಬಹಳ ಸುಖ-ಶಾಂತಿಯಲ್ಲಿದ್ದಿರಿ, ಒಂದೇ ಧರ್ಮವಿತ್ತು ನಂತರ ಏನಾಯಿತು? ರಾವಣ ರಾಜ್ಯವು ಆರಂಭವಾಯಿತು. ರಾಮ ರಾಜ್ಯ ಮತ್ತು ರಾವಣ ರಾಜ್ಯವನ್ನು ನೋಡಿ! ಬಹಳ ಸಹಜ ರೀತಿಯಿಂದ ತಿಳಿಸುತ್ತೇನೆ. ಚಿಕ್ಕ ಚಿಕ್ಕ ಮಕ್ಕಳಿಗೂ ಸಹ ಹೀಗೆ ತಿಳಿಸಬೇಕು. ಮತ್ತೇನಾಯಿತು? ದೊಡ್ಡ-ದೊಡ್ಡ ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳು ಭೂಕಂಪದಲ್ಲಿ ಕೆಳಗೆ ಹೊರಟು ಹೋದವು. ಭಾರತವಾಸಿಗಳು ವಿಕಾರಿಯಾದುದರಿಂದಲೇ ಭೂಕಂಪವಾಯಿತು ನಂತರ ರಾವಣ ರಾಜ್ಯವು ಆರಂಭವಾಯಿತು. ಪವಿತ್ರರಿಂದ ಅಪವಿತ್ರರಾಗಿ ಬಿಟ್ಟರು. ಇದಕ್ಕೆ ಚಿನ್ನದ ಲಂಕೆಯು ಕೆಳಗಡೆ ಹೊರಟು ಹೋಯಿತೆಂದು ಹೇಳುತ್ತಾರೆ. ಸ್ವಲ್ಪವಾದರೂ ಉಳಿದಿರಬೇಕಲ್ಲವೆ ಅದರಿಂದ ಮಂದಿರ ಇತ್ಯಾದಿಗಳನ್ನು ಕಟ್ಟಿಸಿರುತ್ತಾರೆ. ಭಕ್ತಿಮಾರ್ಗವು ಆರಂಭವಾಯಿತು, ಮನುಷ್ಯರು ವಿಕಾರಿಯಾಗ ತೊಡಗಿದರು. ನಂತರ ರಾವಣ ರಾಜ್ಯವು ನಡೆಯಿತು, ಆಗಿನಿಂದ ಆಯಸ್ಸೂ ಕಡಿಮೆಯಾಯಿತು, ನಾವು ನಿರ್ವಿಕಾರಿ, ಯೋಗಿಗಳಿಂದ ವಿಕಾರಿ ಭೋಗಿಗಳಾಗಿ ಬಿಟ್ಟೆವು. ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ವಿಕಾರಿಗಳಾಗಿ ಬಿಟ್ಟರು. ಈ ಕಥೆಯು ಎಷ್ಟು ಸಹಜವಾಗಿದೆ! ಚಿಕ್ಕ ಚಿಕ್ಕ ಕನ್ಯೆಯರು ಈ ಕಥೆಯನ್ನು ತಿಳಿಸಿದ್ದೇ ಆದರೆ ದೊಡ್ಡ ದೊಡ್ಡ ವ್ಯಕ್ತಿಗಳೂ ಸಹ ತಲೆ ತಗ್ಗಿಸುವರು. ಈಗ ತಂದೆಯು ಕುಳಿತು ತಿಳಿಸುತ್ತಾರೆ - ಅವರೇ ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ಒಳ್ಳೆಯದು - ದ್ವಾಪರದಲ್ಲಿ ಭೋಗಿ, ಪತಿತರಾಗಿ ಬಿಟ್ಟರು ಆಗ ಅನ್ಯ ಧರ್ಮಗಳು ಪ್ರಾರಂಭವಾಗುತ್ತಾ ಹೋಯಿತು. ಯಾವ ಅಮೃತದ ನಶೆಯಿತ್ತು ಅದು ಸಮಾಪ್ತಿಯಾಯಿತು. ಜಗಳ-ಕಲಹಗಳಾಗತೊಡಗಿತು. ದ್ವಾಪರದಿಂದ ಹಿಡಿದು ನಾವು ಕೆಳಗಿಳಿಯುತ್ತಲೇ ಬಂದೆವು, ಕಲಿಯುಗದಲ್ಲಿ ನಾವು ಇನ್ನೂ ವಿಕಾರಿಗಳಾದೆವು. ಕಲ್ಲಿನ ಮೂರ್ತಿಗಳನ್ನು ಮಾಡುತ್ತಲೇ ಬಂದೆವು. ಹನುಮಂತ, ಗಣೇಶನ....... ಕಲ್ಲು ಬುದ್ಧಿಯವರಾದ ಕಾರಣ ಕಲ್ಲಿನ ಪೂಜೆಯನ್ನೇ ಮಾಡಲು ಆರಂಭಿಸಿದೆವು. ಭಗವಂತನು ಕಲ್ಲು-ಮಣ್ಣಿನಲ್ಲಿದ್ದಾರೆಂದು ತಿಳಿದುಕೊಂಡಿದ್ದೆವು. ತಂದೆಯು ತಿಳಿಸುತ್ತಾರೆ - ಹೀಗೆ ಮಾಡುತ್ತಾ-ಮಾಡುತ್ತಾ ಭಾರತದ ಸ್ಥಿತಿಯು ಹೇಗಾಯಿತು, ಮತ್ತೆ ಪುನಃ ತಂದೆಯು ಬಂದು ವಿಷವನ್ನು ಬಿಡಿ, ಅಮೃತವನ್ನು ಪಾನ ಮಾಡಿ ಮತ್ತೆ ರಾಜ್ಯಭಾಗ್ಯವನ್ನು ಪಡೆಯಿರಿ. ವಿಷವನ್ನು ಬಿಟ್ಟು ನೀವು ಮನುಷ್ಯರಿಂದ ದೇವತೆಗಳಾಗುವಿರಿ ಆದರೆ ವಿಷವನ್ನು ಬಿಡುವುದೇ ಇಲ್ಲ. ವಿಷಕ್ಕಾಗಿ ಎಷ್ಟೊಂದು ಹೊಡೆಯುತ್ತಾರೆ, ತೊಂದರೆ ಕೊಡುತ್ತಾರೆ ಆದ್ದರಿಂದಲೇ ದ್ರೌಪದಿಯು ಕರೆದಳಲ್ಲವೆ! ನೀವೀಗ ತಿಳಿದುಕೊಂಡಿದ್ದೀರಿ - ಅಮೃತವನ್ನು ಕುಡಿಯದ ವಿನಃ ನಾವು ದೇವತೆಗಳಾಗುವುದು ಹೇಗೆ! ಸತ್ಯಯುಗದಲ್ಲಂತೂ ರಾವಣನಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ಶ್ರೇಷ್ಠಾಚಾರಿಗಳಾಗುವುದಿಲ್ಲವೋ ಅಲ್ಲಿಯವರೆಗೆ ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಯಾರು ಶ್ರೇಷ್ಠಾಚಾರಿಗಳಾಗಿದ್ದರೋ ಅವರು ಭ್ರಷ್ಟಾಚಾರಿಗಳಾಗಿದ್ದಾರೆ ಪುನಃ ಈಗ ಅಮೃತವನ್ನು ಕುಡಿದು ಶ್ರೇಷ್ಠಾಚಾರಿಗಳಾಗಬೇಕಾಗಿದೆ. ನನ್ನನ್ನೇ ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಗೀತೆಯನ್ನು ಮರೆತು ಬಿಟ್ಟಿರಾ? ಗೀತೆಯನ್ನು ರಚನೆಯನ್ನು ನಾನು ಮಾಡಿದೆನು, ಹೆಸರನ್ನಂತೂ ಕೃಷ್ಣನದನ್ನು ಹಾಕಿ ಬಿಟ್ಟಿರಿ. ಈ ಲಕ್ಷ್ಮೀ-ನಾರಾಯಣರಿಗೆ ಯಾರು ರಾಜ್ಯ ಪದವಿಯನ್ನು ಕೊಟ್ಟರು? ಅವಶ್ಯವಾಗಿ ಭಗವಂತನೇ ಕೊಟ್ಟಿರಬೇಕು. ಹಿಂದಿನ ಜನ್ಮದಲ್ಲಿ ಭಗವಂತನು ರಾಜಯೋಗವನ್ನು ಕಲಿಸಿದರು ನಂತರ ಹೆಸರನ್ನು ಕೃಷ್ಣನದನ್ನು ಹಾಕಿದರು ಅಂದಾಗ ತಿಳಿಸಿ ಕೊಡಲು ಅಭ್ಯಾಸ ಮಾಡಬೇಕಾಗಿದೆ. ಬಹಳ ಸಹಜವಾದ ಕಥೆಯಾಗಿದೆ. ಇದನ್ನು ತಿಳಿಸಲು ತಂದೆಗೆ ಎಷ್ಟು ಸಮಯ ಹಿಡಿಸಿತು? ಅರ್ಧ ಗಂಟೆಯಲ್ಲಿ ಇಷ್ಟೂ ಸಹಜವಾದ ಮಾತೂ ಸಹ ಅರ್ಥವಾಗುವುದಿಲ್ಲವೆ? ಆದ್ದರಿಂದ ತಂದೆಯು ತಿಳಿಸುತ್ತಾರೆ - ಕೇವಲ ಒಂದು ಚಿಕ್ಕ ಕಥೆಯನ್ನಾಗಿ ಮಾಡಿ ಅನ್ಯರಿಗೆ ತಿಳಿಸಿ ಕೊಡಬೇಕು. ಕೈಯಲ್ಲಿ ಚಿತ್ರವನ್ನು ಹಿಡಿದುಕೊಳ್ಳಿ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯ ನಂತರ ರಾಮ-ಸೀತೆಯರ ರಾಜ್ಯ,...... ನಂತರ ದ್ವಾಪರ ಯುಗದಲ್ಲಿ ರಾವಣ ರಾಜ್ಯವು ಪ್ರಾರಂಭವಾಯಿತು. ಎಷ್ಟು ಸಹಜವಾದ ಕಥೆಯಾಗಿದೆ! ಅವಶ್ಯವಾಗಿ ನಾವು ದೇವತೆಗಳಾಗಿದ್ದೆವು, ಕ್ಷತ್ರಿಯರು, ವೈಶ್ಯ ನಂತರ ಶೂದ್ರರಾದೆವು. ಈಗ ತಮ್ಮನ್ನು ದೇವತೆಗಳು ಎಂದು ತಿಳಿಯದಕಾರಣ ಹಿಂದೂ ಎಂದು ಹೇಳಿ ಬಿಡುತ್ತಾರೆ. ಧರ್ಮ ಶ್ರೇಷ್ಠ, ಕರ್ಮ ಶ್ರೇಷ್ಠದಿಂದ ಕರ್ಮ ಭ್ರಷ್ಟರಾಗಿದ್ದೇವೆ. ಹೀಗೆ ಚಿಕ್ಕ-ಚಿಕ್ಕ ಮಕ್ಕಳೂ ಸಹ ಭಾಷಣ ಮಾಡಿ ಸಭೆಯಲ್ಲಿ ಮತ್ತೊಮ್ಮೆ ಹೇಳಿ ಎಂದು ಹೇಳಿಸಿಕೊಳ್ಳಬೇಕು.

ತಂದೆಯು ಎಲ್ಲಾ ಸೇವಾಕೇಂದ್ರದವರಿಗೂ ತಿಳಿಸುತ್ತಿದ್ದಾರೆ. ಈಗ ದೊಡ್ಡ-ದೊಡ್ಡವರು ಕಲಿಯದಿದ್ದರೆ ಚಿಕ್ಕ-ಚಿಕ್ಕ ಕುಮಾರಿಯರಿಗೆ ಕಲಿಸಿ ಕೊಡಿ. ಕುಮಾರಿಯರ ಹೆಸರೂ ಸಹ ಇದೆ. ದೆಹಲಿ ಮತ್ತು ಬಾಂಬೆಯಲ್ಲಿ ಬಹಳ ಒಳ್ಳೊಳ್ಳೆಯ ಕುಮಾರಿಯರಿದ್ದಾರೆ, ವಿದ್ಯಾವಂತರೂ ಆಗಿದ್ದಾರೆ. ಅವರೀಗ ಎದ್ದು ನಿಲ್ಲಬೇಕಾಗಿದೆ. ಎಷ್ಟೊಂದು ಸೇವೆ ಮಾಡಬಹುದು! ಕುಮಾರಿಯರು ಎದ್ದುನಿಂತರೆ ಹೆಸರು ಪ್ರಸಿದ್ಧವಾಗಿ ಬಿಡುವುದು. ಸಾಹುಕಾರ ಮನೆಯವರು ಧೈರ್ಯವನ್ನಿಡುವುದು ಬಹಳ ವಿರಳ, ಅವರಿಗೆ ಸಾಹುಕಾರತನದ ನಶೆಯಿರುತ್ತದೆ, ವರದಕ್ಷಿಣೆ ಸಿಗುತ್ತದೆಯೆಂದರೆ ಸಾಕು. ಕುಮಾರಿಯರು ವಿವಾಹ ಮಾಡಿಕೊಂಡು ಮುಖ ಕಪ್ಪು ಮಾಡಿಕೊಂಡು ಎಲ್ಲರ ಮುಂದೆ ತಲೆ ಬಾಗಬೇಕಾಗುತ್ತದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ ಆದರೆ ಪಾರಸ ಬುದ್ಧಿಯಾಗುವ ವಿಚಾರವೇ ಬರುವುದಿಲ್ಲ. ನೋಡಿ, ಕೆಲವರು ಓದುವುದೇ ಬರುವುದಿಲ್ಲ ಅಂತಹವರೂ ಸಹ ಎಂ.ಪಿ., ಎಂ.ಎಲ್.ಎ., ಗಳಾಗಿದ್ದಾರೆ. ವಿದ್ಯೆಯಿಂದ ಏನೆನೆಲ್ಲಾ ಆಗಿ ಬಿಡುತ್ತಾರೆ! ಈ ವಿದ್ಯೆಯು ಬಹಳ ಸಹಜವಾಗಿದೆ, ಬಹಳ ಒಳ್ಳೊಳ್ಳೆಯ ಕುಮಾರಿಯರಿದ್ದಾರೆ ಆದರೆ ಅವರಿಗೆ ಅವರದೇ ನಶೆಯೇರಿದೆ. ಸ್ವಲ್ಪ ಕೆಲಸ ಮಾಡಿದರೂ ಸಹ ನಾವು ತುಂಬಾ ಕೆಲಸ ಮಾಡಿದೆವೆಂದು ತಿಳಿದುಕೊಳ್ಳುತ್ತಾರೆ. ಈಗಂತೂ ಬಹಳಷ್ಟು ಸೇವೆಯಿದೆ. ಇತ್ತೀಚೆಗೆ ಕುಮಾರಿಯರು ಬಹಳ ಫ್ಯಾಷನ್ನಲ್ಲಿಯೇ ಇರುತ್ತಾರೆ. ಅಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ, ಇಲ್ಲಿ ಎಷ್ಟೊಂದು ಕೃತಕವಾದ ಸೌಂದರ್ಯವನ್ನು ಮಾಡಿಕೊಳ್ಳುತ್ತಿರುತ್ತಾರೆ. ಕೇವಲ ಕೂದಲಿಗಾಗಿಯೇ ಎಷ್ಟೊಂದು ಹಣವನ್ನು ಕೊಡುತ್ತಾರೆ, ಇದು ಮಾಯೆಯ ಪಾಂಪ್ (ಶೋ) ಆಗಿದೆ. ಮಾಯಾ ರಾವಣ ರಾಜ್ಯದ ಪಥನ ಮತ್ತೆ ರಾಮ ರಾಜ್ಯದ ಉತ್ಥಾನ. ಈಗ ರಾಮ ರಾಜ್ಯವು ಸ್ಥಾಪನೆಯಾಗುತ್ತಿದೆ ಆದರೆ ಸ್ವಲ್ಪ ಪರಿಶ್ರಮ ಪಡಬೇಕಾಗಿದೆ. ನೀವು ಏನಾಗುತ್ತೀರಿ, ವಿದ್ಯೆಯನ್ನು ಓದದೇ ಇದ್ದರೆ ಅಲ್ಲಿ ಹೋಗಿ ಚಿಕ್ಕ ಪದವಿಯ ಪ್ರಜೆಗಳಾಗಿ ಬಿಡುತ್ತೀರಿ. ಇತ್ತೀಚಿನ ದೊಡ್ಡ-ದೊಡ್ಡ ಮನುಷ್ಯರು ಅಲ್ಲಿಗೆ ಹೋಗಿ ಪ್ರಜೆಗಳಾಗಿ ಬರುತ್ತಾರೆ. ಸಾಹುಕಾರರು ಕೇವಲ ಚೆನ್ನಾಗಿದೆ-ಚೆನ್ನಾಗಿದೆ ಎಂದು ತಮ್ಮ ವ್ಯಾಪಾರದಲ್ಲಿಯೇ ಇರುತ್ತಾರೆ. ಬಹಳ ಒಳ್ಳೆಯ ಪ್ರಭಾವ ಬೀರುತ್ತದೆ ಆದರೆ ಮತ್ತೇನು? ಕೊನೆಯಲ್ಲಿ ಏನಾಗುವುದು? ಅಲ್ಲಿಗೆ ಹೋಗಿ ಪ್ರಜೆಗಳಾಗುತ್ತಾರೆ. ಪ್ರಭಾವಿತರಾಗುವುದು ಎಂದರೆ ಪ್ರಜೆಗಳಾಗುವುದಾಗಿದೆ. ಯಾರು ಪರಿಶ್ರಮ ಪಡುತ್ತಾರೆಯೋ ಅವರು ರಾಮ ರಾಜ್ಯದಲ್ಲಿ ಬರುತ್ತಾರೆ. ತಿಳಿದುಕೊಳ್ಳುವುದು ಸಹಜವಾಗಿದೆ, ಈ ಕಥೆಯ ನಶೆಯಲ್ಲಿ ಯಾರಿದ್ದರೂ ಸಹ ದೋಣಿಯು ಪಾರಾಗಿ ಬಿಡುವುದು. ನಾವು ಶಾಂತಿಧಾಮಕ್ಕೆ ಹೋಗುತ್ತೇವೆ ನಂತರ ಸುಖಧಾಮಕ್ಕೆ ಬರುತ್ತೇವೆ ಎಂದು ನೆನಪು ಮಾಡುತ್ತಾ- ಮಾಡಿಸುತ್ತಾ ಇದ್ದರೆ ಸಾಕು ಶ್ರೇಷ್ಠ ಪದವಿಯನ್ನು ಪಡೆಯಬಹುದು. ವಿದ್ಯೆಯ ಮೇಲೆ ಗಮನ ಕೊಡಬೇಕಾಗಿದೆ, ಚಿತ್ರವು ಕೈಯಲ್ಲಿರಬೇಕಾಗಿದೆ. ಹೇಗೆ ಬಾಬಾರವರು ಲಕ್ಷ್ಮೀ-ನಾರಾಯಣನ ಪೂಜೆ ಮಾಡುತ್ತಿದ್ದಾಗ ಅವರ ಜೇಬಿನಲ್ಲಿ ಚಿತ್ರವಿರುತ್ತಿತ್ತು ಹಾಗೆಯೇ. ಚಿತ್ರ ಚಿಕ್ಕದಾಗಿಯೂ ಇದೆ ಹಾಗೂ ಲಾಕೆಟ್ನಲ್ಲಿಯೂ ಸಹ ಇದೆ. ಇದರ ಬಗ್ಗೆ ತಿಳಿಸಬೇಕಾಗಿದೆ. ಇವರು ತಂದೆಯಾಗಿದ್ದಾರೆ, ಇವರ ಮೂಲಕ ಆಸ್ತಿಯು ಸಿಗುತ್ತಿದೆ. ಈಗ ಪವಿತ್ರರಾಗಿ ತಂದೆಯನ್ನು ನೆನಪು ಮಾಡಬೇಕು. ಈ ಬ್ಯಾಡ್ಜ್ನಲ್ಲಿ ಎಷ್ಟೊಂದು ಜ್ಞಾನವಿದೆ, ಇದರಲ್ಲಿ ಸಂಪೂರ್ಣ ಜ್ಞಾನವಿದೆ. ಇದರ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ಸೆಕೆಂಡಿನಲ್ಲಿ ತಂದೆಯಿಂದ ಸ್ವರ್ಗದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ಇದನ್ನು ಯಾರು ತಿಳಿಸಿದರೂ ಸಹ ಜೀವನ್ಮುಕ್ತಿ ಪದವಿಯ ಅಧಿಕಾರಿಗಳಾಗಿ ಬಿಡುತ್ತಾರೆ. ಬಾಕಿ ವಿದ್ಯೆಯನುಸಾರ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಸ್ವರ್ಗದಲ್ಲಂತೂ ಬರುತ್ತೀರಲ್ಲವೆ. ಕೊನೆಯಲ್ಲಂತೂ ಬರಬೇಕಲ್ಲವೆ, ವೃದ್ಧಿ ಆಗಲೇಬೇಕಾಗಿದೆ. ದೇವಿ-ದೇವತಾ ಧರ್ಮವು ಶ್ರೇಷ್ಠವಾಗಿದೆ, ಅವರಂತೂ ಆಗುತ್ತಾರಲ್ಲವೆ. ಲಕ್ಷಾಂತರ ಲೆಕ್ಕದಲ್ಲಿ ಪ್ರಜೆಗಳಾಗುತ್ತಾರೆ. ಸೂರ್ಯವಂಶಿಯಾಗುವುದರಲ್ಲಿಯೇ ಪರಿಶ್ರಮವಿದೆ, ಸರ್ವೀಸ್ ಮಾಡುವವರೇ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಇವರ ಹೆಸರುಗಳೂ ಸಹ ಪ್ರಸಿದ್ಧವಾಗಿದೆ, ಕುಮಾರಿಕಾ ದಾದೀಜಿ, ಜಾನಕಿ ದಾದೀಜಿ ಚೆನ್ನಾಗಿ ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಿದ್ದಾರೆ. ಯಾವುದೇ ತರಹದ ತೊಂದರೆಯಿಲ್ಲ.

ತಂದೆಯು ತಿಳಿಸುತ್ತಾರೆ - ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದನ್ನು ಮಾತನಾಡಬೇಡಿ ಎಂದು ಹೇಳುತ್ತಾರೆ ಆದರೂ ಸಹ ಏನೇನೋ ಮಾತನಾಡುತ್ತಾರೆ. ಅಂತಹವರು ಅಲ್ಲಿ ಹೋಗಿ ಏನಾಗುತ್ತಾರೆ. ಇಷ್ಟು ಸಹಜವಾದ ಸರ್ವೀಸನ್ನೂ ಸಹ ಮಾಡುವುದಿಲ್ಲ. ಚಿಕ್ಕ-ಚಿಕ್ಕ ಮಕ್ಕಳೂ ಸಹ ಇದನ್ನು ಅರ್ಥ ಮಾಡಿಸಬಹುದು, ಅನ್ಯರಿಗೂ ತಿಳಿಸಲೂಬಹುದು. ಮಂಗಗಳ ಸೈನ್ಯವು ಪ್ರಸಿದ್ಧವಾಗಿದೆಯಲ್ಲವೆ. ರಾವಣನ ಜೈಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಸೀತೆಯರನ್ನು ಬಿಡಿಸಬೇಕಾಗಿದೆ. ಏನೆನೆಲ್ಲಾ ಕಥೆಗಳನ್ನು ಮಾಡಿ ಬಿಟ್ಟಿದ್ದಾರೆ. ಈ ರೀತಿ ಯಾರಾದರೂ ಭಾಷಣ ಮಾಡಬೇಕಾಗಿದೆ. ಉಳಿದಂತೆ ಇಂತಹವರು ಬಹಳ ಪ್ರಭಾವಿತರಾದರು ಎಂದು ಹೇಳುತ್ತಾರಷ್ಟೆ . ನೀವು ಏನಾಗಲು ಬಯಸುತ್ತೀರೆಂದು ಕೇಳಿರಿ, ಕೇವಲ ಜ್ಞಾನವು ಚೆನ್ನಾಗಿದೆ ಎಂದು ಹೇಳುತ್ತಾರೆ. ತಾವು ಏನನ್ನೂ ತಿಳಿದುಕೊಳ್ಳುವುದಿಲ್ಲವೆಂದರೆ ಇದರಿಂದ ಲಾಭವೇನು! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಪಾರಸ ಬುದ್ಧಿಯವರಾಗಲು ವಿದ್ಯೆಯ ಮೇಲೆ ಸಂಪೂರ್ಣ ಗಮನವನ್ನಿಡಬೇಕಾಗಿದೆ. ಶ್ರೀಮತದಂತೆ ಓದಿ ಮತ್ತು ಓದಿಸಬೇಕಾಗಿದೆ. ಅಲ್ಪಕಾಲದ ಸಾಹುಕಾರಿ ನಶೆ, ಫ್ಯಾಷನ್ನ್ನು ಬಿಟ್ಟು ಬೇಹದ್ದಿನ ಸೇವೆಯಲ್ಲಿ ತೊಡಗಬೇಕಾಗಿದೆ.

2) ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ...... ಯಾವುದೇ ವ್ಯರ್ಥ ಮಾತು ಮಾತನಾಡಬಾರದು. ಯಾರ ಮೇಲೆಯೂ ಪ್ರಭಾವಿತರಾಗಬಾರದು. ಎಲ್ಲರಿಗೂ ಸತ್ಯ ನಾರಾಯಣನ ಚಿಕ್ಕ ಕಥೆಯನ್ನು ತಿಳಿಸಬೇಕಾಗಿದೆ.

ವರದಾನ:
ನವ ಜೀವನದ ಸ್ಮೃತಿಯಿಂದ ಕರ್ಮೇಂದ್ರಿಯಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಮರುಜೀವಾ ಭವ.

ಯಾವ ಮಕ್ಕಳು ಸಂಪೂರ್ಣವಾಗಿ ಮರುಜೀವಿ ಆಗಿ ಬಿಡುತ್ತಾರೆಯೋ ಅವರ ಕರ್ಮೇಂದ್ರಿಯಗಳು ಆಕರ್ಷಣೆಯಾಗಲು ಸಾಧ್ಯವಿಲ್ಲ. ಮರುಜೀವಿ ಆಗುವುದು ಅರ್ಥಾತ್ ಎಲ್ಲಾ ಕಡೆಗಳಿಂದ ಸತ್ತು ಹೋಗುವುದು, ಹಳೆಯ ಆಯಸ್ಸು ಸಮಾಪ್ತಿಯಾಯಿತು. ಯಾವಾಗ ಹೊಸ ಜನ್ಮವಾಯಿತೆಂದರೆ ಹೊಸ ಜನ್ಮ, ಹೊಸ ಜೀವನದಲ್ಲಿ ಕರ್ಮೇಂದ್ರಿಯಗಳು ವಶವಾಗಲು ಹೇಗೆ ಸಾಧ್ಯ! ಬ್ರಹ್ಮಾಕುಮಾರ-ಕುಮಾರಿಯರು ಹೊಸ ಜೀವನದಲ್ಲಿ ಕರ್ಮೇಂದ್ರಿಯಗಳ ವಶರಾಗುವುದು ಎಂತಹ ವಸ್ತುವಾಗಿದೆ - ಈ ತಿಳುವಳಿಕೆಯಿಂದಲೂ ದೂರ. ಶೂದ್ರತ್ವದ ಅಂಶವೂ ಸಹ ಶ್ವಾಸ ಅರ್ಥಾತ್ ಸಂಸ್ಕಾರ, ಎಲ್ಲಿಯೂ ಸಿಲುಕಿರಬಾರದು.

ಸ್ಲೋಗನ್:
ಅಮೃತವೇಳೆಯಲ್ಲಿ ಹೃದಯದಲ್ಲಿ ಪರಮಾತ್ಮನ ಸ್ನೇಹವನ್ನು ಸಮಾವೇಶ ಮಾಡಿಕೊಳ್ಳುತ್ತೀರೆಂದರೆ ಮತ್ತ್ಯಾವುದೇ ಸ್ನೇಹವು ಆಕರ್ಷಿಸಲು ಸಾಧ್ಯವಿಲ್ಲ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಸಂಘಟನೆಯಲ್ಲಿ ಸಫಲತೆ ಪ್ರಾಪ್ತಿ ಮಾಡಿಕೊಳ್ಳಲು ಸದಾ ನಮ್ರಚಿತ್ತಯ ಸಿಂಹಾಸನ ಮೇಲೆ ವಿರಾಜಮಾನರಾಗಿರಿ. ಇದೇ ಸಿಂಹಾಸನದ ಮೇಲೆ ಕುಳಿತು, ಜವಾಬ್ದಾರಿಯ ಕೀರಿಟ ಧಾರಣೆ ಮಾಡಿಕೊಂಡು ಭವಿಷ್ಯ ಪದವಿಯನ್ನು ಮಾಡಿಕೊಳ್ಳಿರಿ. ಸಿಂಹಾಸನದಿಂದ ಇಳಿಯಬೇಡಿರಿ, ಇದರ ಮೇಲೆ ಕುಳಿತು ಕಾರ್ಯ ಮಾಡಿ ಆಗ ಸಫಲತೆ ಸಿಗುತ್ತಿರುವುದು. ಅದಕ್ಕಾಗಿ “ಮೊದಲು ನೀವು” ಎನ್ನುವ ಪಾಠವನ್ನು ಪಕ್ಕಾ ಮಾಡಿಕೊಳ್ಳಿರಿ, ಇದರಿಂದ ನಿಮ್ಮ ಸಂಸ್ಕಾರ ಎಲ್ಲರ ಜೊತೆ ಸಹಜವಾಗಿ ಮಿಲನವಾಗುವುದು.