17.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮ್ಮ ಅತಿಥಿಯಾಗಿ ಬಂದಿದ್ದಾರೆ ಅಂದಾಗ ನೀವು ಅವರನ್ನು ಆಧರ ಮಾಡಬೇಕಾಗಿದೆ, ಹೇಗೆ ಪ್ರೀತಿಯಿಂದ ಕರೆದಿರೋ ಹಾಗೆಯೇ ಆಧರವನ್ನು ಮಾಡಬೇಕಾಗಿದೆ, ನಿರಾಧಾರವಲ್ಲ”

ಪ್ರಶ್ನೆ:
ನೀವು ಮಕ್ಕಳಿಗೆ ಸದಾ ಯಾವ ನಶೆಯಿರಬೇಕು? ಒಂದುವೇಳೆ ನಶೆಯಿಲ್ಲವೆಂದರೆ ಅವರಿಗೆ ಏನು ಹೇಳುತ್ತಾರೆ?

ಉತ್ತರ:
ಸರ್ವಶ್ರೇಷ್ಠ ವ್ಯಕ್ತಿಯು ಪತಿತ ಪ್ರಪಂಚದಲ್ಲಿ ನಮ್ಮ ಅತಿಥಿಯಾಗಿ ಬಂದಿದ್ದಾರೆ, ಈ ನಶೆಯು ಸದಾ ಏರಿರಬೇಕು ಆದರೆ ನಂಬರ್ವಾರ್ ಈ ನಶೆಯೇರುತ್ತದೆ, ಕೆಲವರು ತಂದೆಯ ಮಗುವಾಗಿ ನಂತರ ಸಂಶಯಬುದ್ಧಿಯವರಾಗಿ ಕೈಯನ್ನು ಬಿಟ್ಟುಹೋಗುತ್ತಾರೆಂದರೆ ಅವರ ಅದೃಷ್ಟ ಆ ರೀತಿಯಿದೆ ಎಂದು ಹೇಳಲಾಗುತ್ತದೆ.

ಓಂ ಶಾಂತಿ.
ಓಂ ಶಾಂತಿ ಎಂದು ಎರಡು ಬಾರಿ ಹೇಳಬೇಕಾಗಿದೆ. ಮಕ್ಕಳಿಗೆ ತಿಳಿದಿದೆ - ಒಬ್ಬರು ತಂದೆಯಾಗಿದ್ದಾರೆ, ಇನ್ನೊಬ್ಬರು ಸಹೋದರನಾಗಿದ್ದಾರೆ, ಇಬ್ಬರೂ ಒಟ್ಟಿಗೆಯಿದ್ದಾರಲ್ಲವೆ. ಭಗವಂತನಿಗೆ ಎಷ್ಟೊಂದು ಶ್ರೇಷ್ಠಮಹಿಮೆ ಮಾಡುತ್ತಾರೆ, ಆದರೆ ಗಾಡ್ ಫಾದರ್ ಎಂಬ ಶಬ್ಧವು ಎಷ್ಟು ಸರಳವಾಗಿದೆ. ಕೇವಲ ಫಾದರ್ ಎಂದು ಹೇಳುವುದಿಲ್ಲ, ಗಾಡ್ ಫಾದರ್ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ. ಅವರ ಮಹಿಮೆಯೂ ಶ್ರೇಷ್ಠವಾಗಿದೆ, ಅವರನ್ನು ಪತಿತಪ್ರಪಂಚದಲ್ಲಿಯೇ ಕರೆಯುತ್ತಾರೆ. ಅವರೇ ಬಂದು ತಿಳಿಸುತ್ತಾರೆ ಆದರೆ ಪತಿತ-ಪಾವನ ಹೇಗೆ, ಯಾವಾಗ ಬರುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಅರ್ಧಕಲ್ಪ ಸತ್ಯಯುಗ, ತ್ರೇತಾಯುಗದಲ್ಲಿ ಯಾರ ರಾಜ್ಯವಿತ್ತು, ಹೇಗಾಯಿತು, ಇದೂ ಸಹ ತಿಳಿದಿಲ್ಲ. ಪತಿತ-ಪಾವನ ತಂದೆಯು ಅವಶ್ಯವಾಗಿ ಬರುತ್ತಾರೆ. ಅವರಿಗೆ ಕೆಲವರು ಪತಿತ-ಪಾವನನೆಂದು, ಇನ್ನೂ ಕೆಲವರು ಮುಕ್ತಿದಾತನೆಂದು ಹೇಳುತ್ತಾರೆ. ಸ್ವರ್ಗದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಅವರು ಎಲ್ಲರಿಗಿಂತ ಸರ್ವ ಶ್ರೇಷ್ಠನಾಗಿದ್ದಾರಲ್ಲವೆ. ನಾವು ಭಾರತವಾಸಿಗಳನ್ನು ಶ್ರೇಷ್ಠರನ್ನಾಗಿ ಮಾಡಿ ಎಂದು ಪತಿತರಾಜ್ಯದಲ್ಲಿಯೇ ಅವರನ್ನು ಕರೆಯುತ್ತಾರೆ. ಅವರ ಸ್ಥಾನವು ಎಷ್ಟು ದೊಡ್ಡದಾಗಿದೆ, ಹೈಯೆಸ್ಟ್ ಅಥಾರಿಟಿಯಾಗಿದ್ದಾರೆ. ರಾವಣರಾಜ್ಯದಲ್ಲಿರುವಾಗಲೇ ಅವರನ್ನು ಕರೆಯುತ್ತಾರೆ. ಇಲ್ಲವೆಂದರೆ ಈ ರಾವಣರಾಜ್ಯದಿಂದ ಯಾರು ಬಿಡಿಸುವುದು? ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ಕೇಳುತ್ತೀರಿ ಅಂದಮೇಲೆ ನಶೆಯೂ ಏರಿರಬೇಕು ಆದರೆ ಇಷ್ಟೊಂದು ನಶೆಯು ಏರುವುದಿಲ್ಲ. ಸಾರಾಯಿಯ ನಶೆಯು ಎಲ್ಲರಿಗೂ ಏರುತ್ತದೆ ಆದರೆ ಈ ನಶೆಯೇರುವುದಿಲ್ಲ. ಇದರಲ್ಲಿ ಧಾರಣೆಯ ಮಾತಿದೆ, ಅದೃಷ್ಟದ ಮಾತಾಗಿದೆ ಅಂದಾಗ ತಂದೆಯು ಬಹಳ ದೊಡ್ಡ ಆಸಾಮಿ (ವ್ಯಕ್ತಿ) ಯಾಗಿದ್ದಾರೆ. ನಿಮ್ಮಲ್ಲಿಯೂ ಕೆಲವರಿಗೆ ಪೂರ್ಣನಿಶ್ಚಯವಿರುವುದಿಲ್ಲ, ಒಂದುವೇಳೆ ಎಲ್ಲರಿಗೂ ನಿಶ್ಚಯವಿದ್ದರೆ ಎಲ್ಲರೂ ಏಕೆ ಓಡಿಹೋಗುತ್ತಿದ್ದರು? ತಂದೆಯನ್ನೇ ಮರೆತುಹೋಗುತ್ತಾರೆ. ತಂದೆಯ ಮಗುವಾದ ನಂತರ ತಂದೆಯ ಮೇಲೆ ಸಂಶಯ ಬುದ್ಧಿಯಿರಲು ಸಾಧ್ಯವಿಲ್ಲ. ಆದರೆ ಈ ತಂದೆಯು ವಿಚಿತ್ರವಾಗಿದ್ದಾರೆ. ಗಾಯನವೂ ಇದೆ, ಆಶ್ಚರ್ಯವಾಗಿ ತಂದೆಯ ಮಗುವಾಗುತ್ತಾರೆ. ಬಾಬಾ ಎಂದು ಹೇಳುತ್ತಾರೆ, ಜ್ಞಾನವನ್ನು ಕೇಳುತ್ತಾರೆ, ಅನ್ಯರಿಗೂ ತಿಳಿಸುತ್ತಾರೆ, ಅಹೋ ಮಾಯೆ ಇಷ್ಟಾದಮೇಲೂ ಸಂಶಯ ಮಾಡಿಬಿಡುತ್ತೀಯಾ! ಈ ಭಕ್ತಿಮಾರ್ಗದ ಶಾಸ್ತ್ರಗಳಲ್ಲಿ ಯಾವುದೇ ಸಾರವಿಲ್ಲ, ನನ್ನನ್ನು ಯಾರೂ ಅರಿತುಕೊಂಡಿಲ್ಲ. ನೀವು ಮಕ್ಕಳಲ್ಲಿಯೂ ಸಹ ವಿರಳ ಕೆಲವರೇ ನಿಲ್ಲುತ್ತಾರೆ. ನೀವೂ ಸಹ ಇದನ್ನು ಅನುಭವ ಮಾಡುತ್ತೀರಿ. ಆ ಸ್ಥಿರವಾದ ನೆನಪು ಇರುವುದೇ ಇಲ್ಲ. ನಾವಾತ್ಮಗಳು ಬಿಂದುವಾಗಿದ್ದೇವೆ, ತಂದೆಯೂ ಬಿಂದುವಾಗಿದ್ದಾರೆ. ಅವರು ನಮ್ಮ ತಂದೆಯಾಗಿದ್ದಾರೆ, ಅವರಿಗೆ ತನ್ನ ಶರೀರವಿಲ್ಲ, ತಿಳಿಸುತ್ತಾರೆ - ನಾನು ಈ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತೇನೆ. ನನ್ನ ಹೆಸರಾಗಿದೆ - ಶಿವ. ನಾನಾತ್ಮನ ಹೆಸರೆಂದೂ ಬದಲಾಗುವುದಿಲ್ಲ, ನಿಮ್ಮ ಶರೀರದ ಹೆಸರು ಬದಲಾಗುತ್ತದೆ. ಶರೀರದ ಮೇಲೆಯೇ ಹೆಸರು ಬರುತ್ತದೆ. ವಿವಾಹವಾದಾಗ ಹೆಸರು ಬದಲಾಗುತ್ತದೆ ಮತ್ತೆ ಆ ಹೆಸರನ್ನು ಪಕ್ಕಾ ಮಾಡಿಕೊಳ್ಳುತ್ತಾರೆ ಅದೇ ರೀತಿ ಈಗ ತಂದೆಯು ತಿಳಿಸುತ್ತಾರೆ - ನೀವಿದನ್ನು ಪಕ್ಕಾ ಮಾಡಿಕೊಳ್ಳಿ- ನಾನಾತ್ಮನಾಗಿದ್ದೇನೆ. ತಂದೆಯೇ ಪರಿಚಯ ಕೊಟ್ಟಿದ್ದಾರೆ - ಯಾವಾಗ ಅತ್ಯಾಚಾರ ಹಾಗೂ ಗ್ಲಾನಿಯಾಗುತ್ತದೆಯೋ ಆಗ ನಾನು ಬರುತ್ತೇನೆ. ಕೆಲವೊಂದು ಶಬ್ಧಗಳನ್ನಂತೂ ಹಿಡಿದುಕೊಳ್ಳಬಾರದು ಏಕೆಂದರೆ ಅದರಲ್ಲಿ ಕೆಲವೊಂದು ಸರಿಯಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ಕಲ್ಲುಮುಳ್ಳಿನಲ್ಲಿ ಹಾಕಿ ಎಷ್ಟೊಂದು ನಿಂದನೆ ಮಾಡಿದ್ದಾರೆ. ಇದೂ ಹೊಸಮಾತಲ್ಲ. ಕಲ್ಪ-ಕಲ್ಪ ಹೀಗೆ ಪತಿತರಾಗಿ ನಿಂದನೆ ಮಾಡುತ್ತಾರೆ, ಆಗಲೇ ನಾನು ಬರುತ್ತೇನೆ. ನನ್ನದು ಕಲ್ಪ-ಕಲ್ಪದ ಪಾತ್ರವಿದೆ, ಇದರಲ್ಲಿ ಅದಲು-ಬದಲಾಗಲು ಸಾಧ್ಯವಿಲ್ಲ. ನಾಟಕದಲ್ಲಿ ನಿಗಧಿಯಾಗಿದೆಯಲ್ಲವೆ. ಕೇವಲ ಭಾರತದಲ್ಲಿಯೇ ಬರುತ್ತಾರೆ! ಕೇವಲ ಭಾರತವೇ ಸ್ವರ್ಗವಾಗುವುದೇ? ಎಂದು ಕೆಲವರು ಕೇಳುತ್ತಾರೆ. ಹೌದು, ಇದು ಅನಾದಿ-ಅವಿನಾಶಿ ಪಾತ್ರವಾಗಿಬಿಟ್ಟಿದೆಯಲ್ಲವೆ. ತಂದೆಯು ಎಷ್ಟು ಶ್ರೇಷ್ಠಾತಿ ಶ್ರೇಷ್ಠನಾಗುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡುವ ತಂದೆಯು ತಿಳಿಸುತ್ತಾರೆ - ನನ್ನನ್ನು ಈ ಪತಿತ ಪ್ರಪಂಚದಲ್ಲಿಯೇ ಕರೆಯುತ್ತೀರಿ. ನಾನಂತೂ ಸದಾ ಪಾವನನಾಗಿದ್ದೇನೆ, ಅಂದಮೇಲೆ ನನ್ನನ್ನು ಪಾವನ ಪ್ರಪಂಚದಲ್ಲಿ ಕರೆಯಬೇಕಲ್ಲವೆ ಆದರೆ ಇಲ್ಲ. ಪಾವನ ಪ್ರಪಂಚದಲ್ಲಿ ತಂದೆಯನ್ನು ಕರೆಯುವ ಅವಶ್ಯಕತೆಯೇ ಇರುವುದಿಲ್ಲ. ಬಂದು ನಮ್ಮನ್ನು ಪಾವನ ಮಾಡಿ ಎಂದು ಪತಿತಪ್ರಪಂಚದಲ್ಲಿಯೇ ಕರೆಯುತ್ತಾರೆ. ನಾನು ಎಷ್ಟು ದೊಡ್ಡ ಅತಿಥಿಯಾಗಿದ್ದೇನೆ, ಅರ್ಧಕಲ್ಪದಿಂದ ನನ್ನನ್ನು ನೆನಪು ಮಾಡುತ್ತಾ ಬಂದಿದ್ದೀರಿ. ಇಲ್ಲಿ ಯಾವುದೇ ದೊಡ್ಡವ್ಯಕ್ತಿಯನ್ನು ಕರೆಯುತ್ತಾರೆಂದರೆ ಹೆಚ್ಚೆಂದರೆ ಒಂದೆರಡು ವರ್ಷ ಕರೆಯುತ್ತಾರೆ. ಇಂತಹವರು ಈ ವರ್ಷದಲ್ಲಿಲ್ಲವೆಂದರೆ ಇನ್ನೊಂದು ವರ್ಷದಲ್ಲಿ ಬರುತ್ತಾರೆ ಆದರೆ ತಂದೆಯನ್ನಂತೂ ಅರ್ಧಕಲ್ಪದಿಂದ ನೆನಪು ಮಾಡುತ್ತಾ ಬಂದಿದ್ದೀರಿ, ಇವರು ಬರುವ ಪಾತ್ರವು ನಿಶ್ಚಿತವಾಗಿಬಿಟ್ಟಿದೆ. ಇದು ಯಾರಿಗೂ ತಿಳಿದಿಲ್ಲ. ಬಹಳ ಶ್ರೇಷ್ಠತಂದೆಯಾಗಿದ್ದಾರೆ. ಮನುಷ್ಯರು ಒಂದುಕಡೆ ಪ್ರೀತಿಯಿಂದ ಕರೆಯುತ್ತಾರೆ, ಇನ್ನೊಂದುಕಡೆ ಮಹಿಮೆಯಲ್ಲಿ ಏನಾದರೊಂದು ಕಲೆಯುಂಟುಮಾಡಿಬಿಡುತ್ತಾರೆ. ವಾಸ್ತವದಲ್ಲಿ ಇವರು ಅತಿದೊಡ್ಡ ಮಹಿಮೆಯುಳ್ಳ ಅತಿಥಿಯಾಗಿದ್ದಾರೆ ಆದರೆ ಅವರ ಮಹಿಮೆಗೆ ಕಲೆಯುಂಟುಮಾಡಿದ್ದಾರೆ. ಅವರು ಕಲ್ಲು-ಮುಳ್ಳು ಎಲ್ಲದರಲ್ಲಿದ್ದಾರೆಂದು ಹೇಳಿಬಿಡುತ್ತಾರೆ. ಇವರು ಎಷ್ಟು ಹೈಯೆಸ್ಟ್ ಅಥಾರಿಟಿಯಾಗಿದ್ದಾರೆ. ಬಹಳ ಪ್ರೀತಿಯಿಂದ ಕರೆಯುತ್ತಾರೆ ಆದರೆ ಬಹಳ ಅಮಾಯಕರಾಗಿದ್ದಾರೆ. ನಾನೇ ಬಂದು ನನ್ನ ಪರಿಚಯವನ್ನು ಕೊಡುತ್ತೇನೆ, ನಾನು ನಿಮ್ಮ ತಂದೆಯಾಗಿದ್ದೇನೆ, ನನ್ನನ್ನು ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಯಾವಾಗ ಎಲ್ಲರೂ ರಾವಣನ ಬಂಧನದಲ್ಲಿರುತ್ತಾರೆಯೋ ಆಗಲೇ ತಂದೆಯು ಬರಬೇಕಾಗಿದೆ ಏಕೆಂದರೆ ಎಲ್ಲರೂ ಭಕ್ತಿನಿಯರು ಅಥವಾ ವಧುಗಳು ಸೀತೆಯರಾಗಿದ್ದಾರೆ. ತಂದೆಯುವರ ರಾಮನಾಗಿದ್ದಾರೆ. ಒಂದು ಸೀತೆಯ ಮಾತಿಲ್ಲ, ಎಲ್ಲಾ ಸೀತೆಯರನ್ನು ರಾವಣನ ಬಂಧನದಿಂದ ಬಿಡಿಸುತ್ತಾರೆ. ಇದು ಬೇಹದ್ದಿನ ಮಾತಾಗಿದೆ. ಇದು ಹಳೆಯ ಪತಿತ ಪ್ರಪಂಚವಾಗಿದೆ. ಇದು ಹಳೆಯದಾಗುವುದು ಮತ್ತೆ ಹೊಸದಾಗುವುದು ಬಹಳ ನಿಖರವಾಗಿದೆ. ಈ ಶರೀರ ಮೊದಲಾದುವುಗಳಂತೂ ಕೆಲವು ಬಹಳ ಬೇಗ ಹಳೆಯದಾಗಿಬಿಡುತ್ತವೆ. ಕೆಲವು ಶರೀರಗಳು ಹೆಚ್ಚು ಸಮಯ ನಡೆಯುತ್ತದೆ. ಇದು ನಾಟಕದಲ್ಲಿ ನಿಖರವಾಗಿ ನೊಂದಾವಣೆಯಾಗಿದೆ. ಪೂರ್ಣ 5000 ವರ್ಷಗಳ ನಂತರ ಮತ್ತೆ ನಾನು ಬರಬೇಕಾಗುತ್ತದೆ. ನಾನೇ ಬಂದು ನನ್ನ ಪರಿಚಯವನ್ನು ಕೊಡುತ್ತೇನೆ ಮತ್ತು ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತೇನೆ. ಯಾರಿಗೂ ನನ್ನ ಪರಿಚಯವಿಲ್ಲ, ಬ್ರಹ್ಮಾ-ವಿಷ್ಣು-ಶಂಕರನದಾಗಲಿ, ರಾಮ-ಸೀತೆಯ ಪರಿಚಯವಾಗಲಿ ಇಲ್ಲ. ನಾಟಕದಲ್ಲಿ ಸರ್ವ ಶ್ರೇಷ್ಠಪಾತ್ರಧಾರಿ ಇವರೇ ಆಗಿದ್ದಾರೆ. ಇದು ಮನುಷ್ಯರ ಮಾತೇ ಆಗಿದೆ. ಯಾವುದೇ 8-10 ಭುಜದ ಮಾತಿಲ್ಲ. ವಿಷ್ಣುವಿಗೆ 4 ಭುಜಗಳನ್ನು ಏಕೆ ತೋರಿಸುತ್ತಾರೆ? ರಾವಣನಿಗೆ 10 ತಲೆಗಳಿವೆಯೇ? ಇದು ಯಾರಿಗೂ ತಿಳಿದಿಲ್ಲ. ತಂದೆಯೇ ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ನಾನು ನಿಮ್ಮ ದೊಡ್ಡ ಅತಿಥಿಯಾಗಿದ್ದೇನೆ ಆದರೆ ಗುಪ್ತವಾಗಿದ್ದೇನೆಂದು ತಿಳಿಸುತ್ತಾರೆ. ಇದನ್ನೂ ಸಹ ಕೇವಲ ನೀವೇ ತಿಳಿದುಕೊಂಡಿದ್ದೀರಿ ಆದರೆ ತಿಳಿದುಕೊಂಡಿದ್ದರೂ ಸಹ ಮತ್ತೆ ಮರೆತುಹೋಗುತ್ತೀರಿ. ಅವರಿಗೆ ಎಷ್ಟೊಂದು ಗೌರವವನ್ನಿಡಬೇಕು, ಅವರನ್ನು ನೆನಪು ಮಾಡಬೇಕು. ಆತ್ಮವು ನಿರಾಕಾರ, ಪರಮಾತ್ಮನೂ ನಿರಾಕಾರನಾಗಿದ್ದಾರೆ, ಇದರಲ್ಲಿ ಚಿತ್ರದ ಮಾತು ಇಲ್ಲ. ಕೇವಲ ನೀವು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಬೇಕಾಗಿದೆ, ದೇಹಾಭಿಮಾನವನ್ನು ಬಿಡಬೇಕಾಗಿದೆ. ನೀವು ಸದಾ ಅವಿನಾಶಿ ವಸ್ತುವನ್ನು ನೋಡಬೇಕು. ನೀವು ವಿನಾಶಿ ದೇಹವನ್ನೇಕೆ ನೋಡುತ್ತೀರಿ? ದೇಹೀ ಅಭಿಮಾನಿಗಳಾಗಿ, ಇದರಲ್ಲಿಯೇ ಪರಿಶ್ರಮವಿದೆ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಕರ್ಮಾತೀತ ಸ್ಥಿತಿಯನ್ನು ಪಡೆದು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯು ಬಹಳ ಸಹಜವಾದ ಯೋಗ ಅರ್ಥಾತ್ ನೆನಪನ್ನು ಕಲಿಸುತ್ತಾರೆ. ಅನೇಕ ಪ್ರಕಾರದ ಯೋಗಗಳಿವೆ, ಆದ್ದರಿಂದ ನೆನಪು ಎಂಬುದು ಯಥಾರ್ಥ ಶಬ್ಧವಾಗಿದೆ. ಪರಮಾತ್ಮ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ. ನಾನು ಇಷ್ಟು ಸಮಯ ನೆನಪಿನಲ್ಲಿದ್ದೆನೆಂದು ಕೆಲವರೇ ವಿರಳ ಸತ್ಯವನ್ನು ತಿಳಿಸುತ್ತಾರೆ. ನೆನಪು ಮಾಡುವುದೇ ಇಲ್ಲ ಆದ್ದರಿಂದ ತಿಳಿಸಲು ಸಂಕೋಚವಾಗುತ್ತದೆ. ಇಡೀ ದಿನದಲ್ಲಿ ಒಂದು ಗಂಟೆ ನೆನಪಿಲ್ಲಿರುತ್ತೇವೆಂದು ಬರೆಯುತ್ತಾರೆ. ಅಂದಾಗ ಸಂಕೋಚವಾಗಬೇಕಲ್ಲವೆ. ಇಂತಹ ತಂದೆ ಯಾರನ್ನು ದಿನ-ರಾತ್ರಿ ನೆನಪು ಮಾಡಬೇಕೋ ಅವರನ್ನು ಕೇವಲ ಒಂದು ಗಂಟೆ ನೆನಪು ಮಾಡುತ್ತೇವೆ! ಇದರಲ್ಲಿ ಬಹಳ ಗುಪ್ತ ಪರಿಶ್ರಮವಿದೆ. ತಂದೆಯನ್ನು ಕರೆಯುತ್ತಾರೆ ಅಂದಮೇಲೆ ದೂರದಿಂದ ಬರುವವರು ಅತಿಥಿಯಾದರಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಹೊಸಪ್ರಪಂಚದ ಅತಿಥಿಯಾಗುವುದಿಲ್ಲ, ಹಳೆಯ ಪ್ರಪಂಚದಲ್ಲಿಯೇ ಆಗುತ್ತೇನೆ, ಬಂದು ಹೊಸಪ್ರಪಂಚದ ಸ್ಥಾಪನೆ ಮಾಡುತ್ತೇನೆ. ಇದು ಹಳೆಯ ಪ್ರಪಂಚವಾಗಿದೆ. ಇದನ್ನೂ ಸಹ ಯಾರೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಹೊಸ ಪ್ರಪಂಚದ ಕಾಲಾವಧಿಯನ್ನೇ ತಿಳಿದುಕೊಂಡಿಲ್ಲ. ಈ ಜ್ಞಾನವನ್ನು ನಾನೇ ಬಂದು ಕೊಡುತ್ತೇನೆ, ಮತ್ತೆ ನಾಟಕದನುಸಾರ ಈ ಜ್ಞಾನವು ಪ್ರಾಯಃಲೋಪವಾಗಿಬಿಡುತ್ತದೆ. ಪುನಃ ಕಲ್ಪದ ನಂತರ ಈ ಪಾತ್ರವು ಪುನರಾವರ್ತನೆಯಾಗುವುದು. ನನ್ನನ್ನು ಕರೆಯುತ್ತಾರೆ, ವರ್ಷ-ವರ್ಷವೂ ಶಿವಜಯಂತಿಯನ್ನಾಚರಿಸುತ್ತಾರೆ. ಯಾರು ಬಂದುಹೋಗುತ್ತಾರೆಯೋ ವರ್ಷ-ವರ್ಷವೂ ಅವರ ಜಯಂತಿಯನ್ನಾಚರಿಸುತ್ತಾರೆ. ಶಿವತಂದೆಗೂ ಸಹ 12 ತಿಂಗಳಿನ ನಂತರ ಜಯಂತಿಯನ್ನಾಚರಿಸುತ್ತಾರೆ ಆದರೆ ಯಾವಾಗಿನಿಂದ ಆಚರಿಸುತ್ತಾ ಬಂದಿದ್ದಾರೆಂದು ಇಂದು ಯಾರಿಗೂ ತಿಳಿದಿಲ್ಲ ಕೇವಲ ಲಕ್ಷಾಂತರ ವರ್ಷಗಳಾಯಿತೆಂದು ಹೇಳುತ್ತಾರೆ. ಕಲಿಯುಗದ ಆಯಸ್ಸನ್ನೇ ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ಇದು 5000 ವರ್ಷಗಳ ಮಾತಾಗಿದೆ. ಅವಶ್ಯವಾಗಿ ಭಾರತದಲ್ಲಿ ಈ ದೇವತೆಗಳ ರಾಜ್ಯವಿತ್ತಲ್ಲವೆ. ನಾನು ಭಾರತದ ಅತಿದೊಡ್ಡ ಅತಿಥಿಯಾಗಿದ್ದೇನೆ, ನನಗೆ ಅರ್ಧಕಲ್ಪದಿಂದಲೂ ಬಹಳ ನಿಮಂತ್ರಣ ಕೊಡುತ್ತಾ ಬಂದಿದ್ದೀರಿ. ಯಾವಾಗ ಬಹಳ ದುಃಖಿಯಾಗುವರೋ ಆಗ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ನಾನು ಪತಿತಪ್ರಪಂಚದಲ್ಲಿಯೇ ಬಂದಿದ್ದೇನೆ, ನನಗೆ ರಥವೂ ಬೇಕಲ್ಲವೆ. ಆತ್ಮವು ಅಕಾಲಮೂರ್ತಿಯಾಗಿದೆ, ಭೃಕುಟಿಯೂ ಅದರ ಸಿಂಹಾಸನವಾಗಿದೆ, ತಂದೆಯೂ ಅಕಾಲಮೂರ್ತಿಯಾಗಿದ್ದಾರೆ ಅವರು ಬಂದು ಈ (ಬ್ರಹ್ಮಾ) ಸಿಂಹಾಸನದಲ್ಲಿ ವಿರಾಜಮಾನವಾಗುತ್ತಾರೆ. ಇವು ರಮಣೀಕ ಮಾತುಗಳಾಗಿವೆ. ಬೇರೆ ಯಾರಾದರೂ ಕೇಳಿದರೆ ಚಕಿತರಾಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನ ಮತದಂತೆ ನಡೆಯಿರಿ. ಶಿವತಂದೆಯೇ ಮುರುಳಿಯನ್ನು ನುಡಿಸುತ್ತಾರೆ, ಶಿವತಂದೆಯು ಮತವನ್ನು ಕೊಡುತ್ತಾರೆಂದು ತಿಳಿಯಿರಿ. ಇವರೂ (ಬ್ರಹ್ಮಾ) ಸಹ ಹೇಳುತ್ತಾರೆ - ನಾನೂ ಸಹ ಶಿವತಂದೆಯ ಮುರುಳಿಯನ್ನು ಕೇಳಿ ತಿಳಿಸುತ್ತೇನೆ. ಹೇಳುವವರಂತೂ ಶಿವತಂದೆಯಲ್ಲವೆ, ಇವರು ನಂಬರ್ವನ್ ಪೂಜ್ಯರಿಂದ ನಂಬರ್ವನ್ ಪೂಜಾರಿಯಾದರು. ಈಗ ಇವರೂ ಸಹ ಪುರುಷಾರ್ಥಿಯಾಗಿದ್ದಾರೆ. ಮಕ್ಕಳು ಯಾವಾಗಲೂ ನಮಗೆ ಶಿವತಂದೆಯ ಶ್ರೀಮತವು ಸಿಕ್ಕಿದೆಯೆಂದು ತಿಳಿಯಬೇಕು. ಒಂದುವೇಳೆ ಯಾವುದೇ ಉಲ್ಟಾಮಾತಾದರೂ ಸಹ ಅದನ್ನು ಸರಿಮಾಡಿಬಿಡುತ್ತಾರೆ. ಈ ಅಟೂಟ ನಿಶ್ಚಯವಿದ್ದಾಗ ಶಿವತಂದೆಯು ಜವಾಬ್ದಾರನಾಗಿರುತ್ತಾರೆ. ಇದು ನಾಟಕದಲ್ಲಿ ನಿಗಧಿಯಾಗಿದೆ. ವಿಘ್ನಗಳಂತೂ ಬಂದೇ ಬರುತ್ತವೆ, ಬಹಳ ಕಠಿಣವಾದ ವಿಘ್ನಗಳು ಬರುತ್ತವೆ, ತಮ್ಮ ಮಕ್ಕಳಿಂದಲೂ ವಿಘ್ನಗಳು ಬರುತ್ತವೆ. ಆದ್ದರಿಂದ ಯಾವಾಗಲೂ ಶಿವತಂದೆಯು ತಿಳಿಸುತ್ತಾರೆಂದು ತಿಳಿಯಿರಿ ಆಗ ನೆನಪಿರುವುದು. ಈ ಬ್ರಹ್ಮಾತಂದೆಯು ಮತವನ್ನು ಕೊಡುತ್ತಾರೆಂದು ಕೆಲವು ಮಕ್ಕಳು ತಿಳಿಯುತ್ತಾರೆ ಆದರೆ ಇಲ್ಲ. ಶಿವತಂದೆಯೇ ಜವಾಬ್ದಾರನಾಗಿದ್ದಾರೆ ಆದರೆ ಮಕ್ಕಳಲ್ಲಿ ದೇಹಾಭಿಮಾನವಿರುವ ಕಾರಣ ಪದೇ-ಪದೇ ಬ್ರಹ್ಮಾರವರನ್ನೇ ನೋಡುತ್ತಿರುತ್ತಾರೆ. ಶಿವತಂದೆಯು ಎಷ್ಟು ದೊಡ್ಡ ಅತಿಥಿಯಾಗಿದ್ದಾರೆ ಆದರೂ ಸಹ ಇದು ಯಾರಿಗೂ ತಿಳಿದಿಲ್ಲ. ನಿರಾಕಾರನನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಅಥವಾ ತಿಳಿದುಕೊಳ್ಳುವುದು ಎಂಬುದೇನೂ ಗೊತ್ತಿಲ್ಲ. ತಂದೆಯಂತೂ ಎಂದೂ ರೋಗಿಯಾಗುವುದಿಲ್ಲ. ರೋಗ ಇತ್ಯಾದಿ ಎಲ್ಲಾದಕ್ಕೂ ಇವರು ಕಾರಣವೆಂದು ತಿಳಿಸುತ್ತಾರೆ ಆದರೆ ಇವರಲ್ಲಿ ಯಾರಿದ್ದಾರೆ ಎಂದು ಅವರಿಗೇನು ಗೊತ್ತು? ನೀವು ಮಕ್ಕಳೂ ಸಹ ನಂಬರ್ವಾರ್ ತಿಳಿದುಕೊಂಡಿದ್ದೀರಿ - ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಮತ್ತು ಇವರು ಈ ಪ್ರಜಾಪಿತನು ಮನುಷ್ಯರ ತಂದೆಯಾಗಿದ್ದಾರೆ ಅಂದಾಗ ಇವರಿಬ್ಬರು (ಬಾಪ್ದಾದಾ) ಎಷ್ಟು ದೊಡ್ಡ ಅತಿಥಿಗಳಾಗಿಬಿಟ್ಟರು!

ಏನೆಲ್ಲವೂ ಆಗುತ್ತದೆಯೋ ಎಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ನಾನೂ ಸಹ ನಾಟಕದ ಬಂಧನದಲ್ಲಿ ಬಂಧಿತನಾಗಿದ್ದೇನೆ. ನಿಗಧಿಯಾಗಿಲ್ಲದೆ ಏನನ್ನೂ ನಾನು ಮಾಡಲು ಸಾಧ್ಯವಿಲ್ಲ. ಮಾಯೆಯೂ ಸಹ ಬಹಳ ಪ್ರಬಲವಾಗಿದೆ. ರಾಮ ಮತ್ತು ರಾವಣ ಇಬ್ಬರ ಪಾತ್ರವೂ ಇದೆ. ನಾಟಕದಲ್ಲಿ ರಾವಣನು ಚೈತನ್ಯವಾಗಿದ್ದರೆ ನಾನು ಸಹ ನಾಟಕದನುಸಾರ ಬರುತ್ತೇನೆಂದು ಹೇಳುತ್ತಿದ್ದನು. ಇದು ದುಃಖ ಮತ್ತು ಸುಖದ ಆಟವಾಗಿದೆ. ಸುಖವು ಹೊಸಪ್ರಪಂಚದಲ್ಲಿಯೂ, ದುಃಖವು ಹಳೆಯ ಪ್ರಪಂಚದಲ್ಲಿಯೂ ಇದೆ. ಹೊಸಪ್ರಪಂಚದಲ್ಲಿ ಕೆಲವರೇ ಮನುಷ್ಯರು, ಹಳೆಯ ಪ್ರಪಂಚದಲ್ಲಿ ಎಷ್ಟೊಂದು ಮಂದಿ ಆಗಿಬಿಟ್ಟಿದ್ದಾರೆ! ಪತಿತ-ಪಾವನ ತಂದೆಯನ್ನು ಬಂದು ಪಾವನ ಪ್ರಪಂಚವನ್ನಾಗಿ ಮಾಡಿ ಎಂದು ಕರೆಯುತ್ತಾರೆ ಏಕೆಂದರೆ ಪಾವನ ಪ್ರಪಂಚದಲ್ಲಿ ಬಹಳ ಸುಖವಿತ್ತು ಆದ್ದರಿಂದಲೇ ಕಲ್ಪ-ಕಲ್ಪವೂ ಕರೆಯುತ್ತಾರೆ. ತಂದೆಯು ಎಲ್ಲರಿಗೆ ಸುಖವನ್ನು ಕೊಟ್ಟು ಹೋಗುತ್ತಾರೆ. ಈಗ ಪುನಃ ಪಾತ್ರವು ಪುನರಾವರ್ತನೆಯಾಗುತ್ತದೆ. ಸಂಪೂರ್ಣ ಪ್ರಪಂಚವೆಂದೂ ಸಮಾಪ್ತಿಯಾಗುವುದಿಲ್ಲ. ಸಮಾಪ್ತಿಯಾಗುವುದು ಅಸಂಭವವಾಗಿದೆ. ಸಮುದ್ರವು ಪ್ರಪಂಚದಲ್ಲಿಯೇ ಇದೆಯಲ್ಲವೆ. ಈ ಮೂರನೆಯ ಮಹಡಿಯೂ ಇದೆಯಲ್ಲವೆ. ಜಲಮಯವಾಗುತ್ತದೆ, ನೀರು-ನೀರಾಗಿಬಿಡುತ್ತದೆ ಎಂದು ಹೇಳುತ್ತಾರೆ ಆದರೂ ಸಹ ಭೂಮಿಯು ಇದೆಯಲ್ಲವೆ. ನೀರೂ ಇದೆ, ಭೂಮಿಯಿರುವ ಭಾಗವು ಸಂಪೂರ್ಣ ವಿನಾಶವಾಗಲು ಸಾಧ್ಯವಿಲ್ಲ. ನೀರೂ ಸಹ ಇದೇ ಭಾಗದಲ್ಲಿರುತ್ತದೆ. ಎರಡನೆ ಮತ್ತು ಮೂರನೇ ಅಂತಸ್ತು, ಸೂಕ್ಷ್ಮವತನ ಮತ್ತು ಮೂಲವತನದಲ್ಲಿ ನೀರಿರುವುದಿಲ್ಲ. ಇದು ಬೇಹದ್ದಿನ ಸೃಷ್ಟಿಯ ಮೂರು ಅಂತಸ್ತುಗಳಾಗಿವೆ. ಯಾವುದನ್ನು ನೀವು ಮಕ್ಕಳ ವಿನಃ ಯಾರೂ ತಿಳಿದುಕೊಂಡಿಲ್ಲ, ಈ ಖುಷಿಯ ಮಾತನ್ನು ಎಲ್ಲರಿಗೆ ಖುಷಿಯಿಂದ ತಿಳಿಸಬೇಕಾಗಿದೆ. ಯಾರು ಪೂರ್ಣ ತೇರ್ಗಡೆಯಾಗುವರೋ ಅವರದು ಅತೀಂದ್ರಿಯ ಸುಖವೆಂದು ಗಾಯನವಿದೆ. ಯಾರು ದಿನ-ರಾತ್ರಿ ಸೇವೆಯಲ್ಲಿ ತತ್ಪರರಾಗಿರುತ್ತಾರೆ, ಸೇವೆಯನ್ನೇ ಮಾಡುತ್ತಿರುತ್ತಾರೆಯೋ ಅವರಿಗೆ ಬಹಳ ಖುಷಿಯಿರುತ್ತದೆ. ಕೆಲವು ಇಂತಹ ದಿನಗಳೂ ಬರುತ್ತವೆ ಮನುಷ್ಯರು ರಾತ್ರಿಯ ಸಮಯದಲ್ಲಿಯೇ ಎದ್ದಿರುತ್ತಾರೆ ಆದರೆ ಆತ್ಮವು ಸುಸ್ತಾಗುವ ಕಾರಣ ಮಲಗಬೇಕಾಗುತ್ತದೆ. ಆತ್ಮವು ವಿಶ್ರಮಿಸುವುದರಿಂದ ಶರೀರವು ಮಲಗುತ್ತದೆ. ಆತ್ಮವು ಮಲಗದಿದ್ದರೆ ಶರೀರವೂ ಮಲಗುವುದಿಲ್ಲ. ಆತ್ಮವೇ ಸುಸ್ತಾಗುತ್ತದೆ. ಇಂದು ನಾವು ಸುಸ್ತಾಗಿಬಿಟ್ಟಿದ್ದೇನೆ ಎಂದು ಯಾರು ಹೇಳಿದರು? ಆತ್ಮ. ನೀವು ಮಕ್ಕಳು ಆತ್ಮಾಭಿಮಾನಿಯಾಗಿರಬೇಕು. ಇದರಲ್ಲಿಯೇ ಪರಿಶ್ರಮವಿದೆ. ತಂದೆಯನ್ನು ನೆನಪು ಮಾಡುವುದಿಲ್ಲ, ದೇಹೀ-ಅಭಿಮಾನಿಯಾಗಿರುವುದಿಲ್ಲ ಆದ್ದರಿಂದ ದೇಹದ ಸಂಬಂಧಿ ಮೊದಲಾದವರು ನೆನಪಿಗೆ ಬಂದುಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಅಶರೀರಿಯಾಗಿ ಬಂದಿದ್ದೀರಿ, ಈಗ ಅಶರೀರಿಯಾಗಿ ಹೋಗಬೇಕಾಗಿದೆ. ಈ ದೇಹದ ಸಂಬಂಧ ಮೊದಲಾದುವುಗಳನ್ನು ಮರೆತುಹೋಗಿ ಈ ಶರೀರದಲ್ಲಿರುತ್ತಾ ನನ್ನನ್ನು ನೆನಪು ಮಾಡಿ ಆಗ ಸತೋಪ್ರಧಾನರಾಗುವಿರಿ. ತಂದೆಯು ಎಷ್ಟು ದೊಡ್ಡ ಅಥಾರಿಟಿಯಾಗಿದ್ದಾರೆ. ಮಕ್ಕಳ ವಿನಃ ಅವರನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ಎಲ್ಲರೂ ಸಾಧಾರಣರಾಗಿದ್ದಾರೆ. ಪತಿತ-ಪಾವನ ತಂದೆಯು ಬಂದಿದ್ದಾರೆಂಬುದನ್ನು ಅರಿತುಕೊಂಡರೆ ಇಲ್ಲಿ ಎಷ್ಟು ಜನಸಂದಣಿಯಾಗುವುದೋ ಗೊತ್ತಿಲ್ಲ. ದೊಡ್ಡ ವ್ಯಕ್ತಿಗಳು ಬರುತ್ತಾರೆಂದರೆ, ಎಷ್ಟೊಂದು ಜನಸಂದಣಿ ಸೇರುತ್ತದೆ! ಅಂದಾಗ ನಾಟಕದಲ್ಲಿ ಇವರ ಪಾತ್ರವೇ ಗುಪ್ತವಾಗಿರುವುದಾಗಿದೆ. ಮುಂದೆ ಹೋದಂತೆ ನಿಧಾನ-ನಿಧಾನವಾಗಿ ಪ್ರಭಾವ ಬೀರುತ್ತಾ ಹೋಗುವುದು ಮತ್ತು ವಿನಾಶವಾಗಿಬಿಡುವುದು. ಎಲ್ಲರೂ ಮಿಲನ ಮಾಡಲು ಸಾಧ್ಯವಿಲ್ಲ. ನೆನಪು ಮಾಡುತ್ತಾರಲ್ಲವೆ. ಅವರಿಗೆ ತಂದೆಯ ಪರಿಚಯ ಸಿಗುವುದು, ಉಳಿದೆಲ್ಲರೂ ಬಂದು ತಲುಪಲು ಸಾಧ್ಯವಿಲ್ಲ. ಹೇಗೆ ಬಂಧನದಲ್ಲಿರುವ ಮಕ್ಕಳು ಮಿಲನ ಮಾಡುವುದಕ್ಕೆ ಆಗುವುದಿಲ್ಲ, ಎಷ್ಟೊಂದು ಅತ್ಯಾಚಾರಗಳನ್ನು ಸಹನೆ ಮಾಡುತ್ತಾರೆ, ಮನುಷ್ಯರು ವಿಕಾರಗಳನ್ನು ಬಿಡುವುದಿಲ್ಲ, ಸೃಷ್ಟಿಯು ಹೇಗೆ ನಡೆಯುತ್ತದೆಯೆಂದು ಕೇಳುತ್ತಾರೆ. ಅರೆ! ಸೃಷ್ಟಿಯ ಜವಾಬ್ದಾರಿಯು ತಂದೆಯ ಮೇಲಿದೆಯೋ ಅಥವಾ ನಿಮ್ಮ ಮೇಲೋ? ತಂದೆಯನ್ನರಿತುಕೊಂಡರೆ ಮತ್ತೆ ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ ಆದ್ದರಿಂದ ತಿಳಿಸಿ, ಮೊದಲು ತಂದೆಯನ್ನರಿತುಕೊಳ್ಳಿ ಆಗ ಮತ್ತೆಲ್ಲರನ್ನೂ ಅರಿತುಕೊಳ್ಳುತ್ತೀರಿ. ತಿಳಿಸುವ ಯುಕ್ತಿಯೂ ಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಹೈಯೆಸ್ಟ್ ಅಥಾರಿಟಿ ತಂದೆಯ ನೆನಪಿನಲ್ಲಿರಬೇಕಾಗಿದೆ. ವಿನಾಶೀ ದೇಹವನ್ನು ನೋಡದೆ ದೇಹಿ-ಅಭಿಮಾನಿಯಾಗಿರುವ ಪರಿಶ್ರಮ ಪಡಬೇಕಾಗಿದೆ. ನೆನಪಿನ ಸತ್ಯ-ಸತ್ಯವಾದ ಚಾರ್ಟನ್ನು ಇಡಬೇಕಾಗಿದೆ.

2. ಹಗಲು-ರಾತ್ರಿ ಸೇವೆಯಲ್ಲಿ ತತ್ಪರರಾಗಿದ್ದು ಅಪಾರ ಖುಷಿಯಲ್ಲಿರಬೇಕಾಗಿದೆ. ಮೂರೂ ಲೋಕಗಳ ರಹಸ್ಯವನ್ನು ಎಲ್ಲರಿಗೆ ಖುಷಿಯಿಂದ ತಿಳಿಸಬೇಕಾಗಿದೆ. ಶಿವತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರಲ್ಲಿ ಅಟೂಟ ನಿಶ್ಚಯವನ್ನಿಟ್ಟುಕೊಂಡು ನಡೆಯಬೇಕಾಗಿದೆ. ಯಾವುದೇ ವಿಘ್ನಗಳು ಬಂದಾಗ ಗಾಬರಿಯಾಗಬಾರದು. ಶಿವತಂದೆಯು ಜವಾಬ್ದಾರನಾಗಿದ್ದಾರೆ ಆದ್ದರಿಂದ ಸಂಶಯವು ಬಾರದಿರಲಿ. .

ವರದಾನ:
ಶ್ರೇಷ್ಠ ವೇಳೆಯ ಆಧಾರದ ಮೇಲೆ ಸರ್ವಪ್ರಾಪ್ತಿಗಳ ಅಧಿಕಾರದ ಅನುಭವ ಮಾಡುವಂತಹ ಪದಮಾ ಪದಮ ಭಾಗ್ಯಶಾಲಿ ಭವ

ಯಾರು ಶ್ರೇಷ್ಠ ವೇಳೆಯಲ್ಲಿ ಜನ್ಮಪಡೆದ ಭಾಗ್ಯಶಾಲಿ ಮಕ್ಕಳಿದ್ದಾರೆ, ಅವರು ಕಲ್ಪದ ಮೊದಲಿನ ಟಚಿಂಗ್ನ ಆಧಾರದ ಮೇಲೆ ಜನ್ಮದಿಂದಲೇ ನನ್ನತನದ ಅನುಭವ ಮಾಡುತ್ತಾರೆ. ಅವರು ಜನ್ಮ ಪಡೆದೊಡನೆ ಎಲ್ಲಾ ಆಸ್ತಿಗೆ ಅಧಿಕಾರಿಯಾಗಿರುತ್ತಾರೆ. ಹೇಗೆ ಬೀಜದಲ್ಲಿ ಇಡೀ ವೃಕ್ಷದ ಸಾರ ಅಡಗಿರುತ್ತದೆ ಆ ರೀತಿ ಮೊದಲನೇ ನಂಬರ್ನಲ್ಲಿ ಬರುವ ಆತ್ಮಗಳು ಬಂದೊಡನೆ ಸರ್ವ ಸ್ವರೂಪದ ಪ್ರಾಪ್ತಿಯ ಖಜಾನೆಯ ಅನುಭವಿಯಾಗಿಬಿಡುತ್ತಾರೆ. ಅವರು ಎಂದೂ ಈ ರೀತಿ ಹೇಳಲ್ಲ ಸುಖದ ಅನುಭವವಾಗುತ್ತದೆ ಆದರೆ ಶಾಂತಿಯ ಅನುಭವ ಆಗುವುದಿಲ್ಲ, ಶಾಂತಿಯ ಅನುಭವವಾಗುತ್ತದೆ ಆದರೆ ಸುಖ ಅಥವಾ ಶಕ್ತಿಯ ಅನುಭವ ಆಗುವುದಿಲ್ಲ ಎಂದು. ಸರ್ವ ಅನುಭವಗಳಿಂದ ಸಂಪನ್ನರಾಗಿರುತ್ತಾರೆ.

ಸ್ಲೋಗನ್:
ತಮ್ಮ ಪ್ರಸನ್ನತೆಯ ಛಾಯೆಯ ಶೀತಲತೆಯ ಅನುಭವ ಮಾಡಲು ನಿರ್ಮಲ ಮತ್ತು ನಿರ್ಮಾಣರಾಗಿ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಸರ್ವ ಸಂಬಂಧ, ಸರ್ವ ರಸಗಳನ್ನು ಒಬ್ಬರಿಂದ ತೆಗೆದುಕೊಳ್ಳುವವರೇ ಏಕಾಂತ-ಪ್ರಿಯರಾಗಲು ಸಾಧ್ಯವಿಲ್ಲ, ಯಾವಾಗ ಒಬ್ಬರ ಮೂಲಕ ಸರ್ವ ರಸಗಳು ಪ್ರಾಪ್ತಿಯಾಗುತ್ತದೆ ಆಗ ಅನೇಕ ಕಡೆ ಹೋಗುವ ಅವಶ್ಯಕತೆ ಏನಿದೆ? ಕೇವಲ ಒಂದು ಶಬ್ದವೂ ನೆನಪಿದ್ದರೆ ಅದರಲ್ಲಿ ಇಡೀ ಜ್ಞಾನವು ಬಂದುಬಿಡುತ್ತದೆ, ಸ್ಮೃತಿಯು ಸಹ ಬಂದು ಬಿಡುತ್ತದೆ, ಸಂಬಂಧವೂ ಬಂದು ಬಿಡುತ್ತದೆ, ಸ್ಥಿತಿಯು ಸಹ ಬಂದುಬಿಡುತ್ತದೆ ಮತ್ತು ಜೊತೆ-ಜೊತೆಯಲ್ಲಿ ಏನು ಪ್ರಾಪ್ತಿಯಾಗುವುದೋ ಅದೂ ಸಹ ಆ ಒಂದು ಶಬ್ದದಿಂದ ಸ್ಪಷ್ಟವಾಗಿಬಿಡುತ್ತದೆ. ಒಬ್ಬರ ನೆನಪು, ಸ್ಥಿತಿ ಏಕರಸ ಮತ್ತು ಜ್ಞಾನವೂ ಎಲ್ಲವೂ ಒಬ್ಬರ ನೆನಪಿನಿಂದಲೇ ಸಿಗುತ್ತದೆ. ಪ್ರಾಪ್ತಿಯು ಏನಾಗುತ್ತದೆಯೋ ಅದು ಸಹ ಏಕರಸವಾಗಿರುತ್ತದೆ.