17.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಪಾವನರಾದರೆ ಆತ್ಮಿಕ ಸೇವೆಗೆ ಯೋಗ್ಯರಾಗುತ್ತೀರಿ, ದೇಹೀ-ಅಭಿಮಾನಿ ಮಕ್ಕಳು ಆತ್ಮಿಕ
ಯಾತ್ರೆಯಲ್ಲಿರುತ್ತಾರೆ ಮತ್ತು ಅನ್ಯರಿಗೂ ಇದೇ ಯಾತ್ರೆಯನ್ನು ಮಾಡಿಸುತ್ತಾರೆ”
ಪ್ರಶ್ನೆ:
ಸಂಗಮಯುಗದಲ್ಲಿ
ನೀವು ಮಕ್ಕಳು ಯಾವ ಸಂಪಾದನೆ ಮಾಡುತ್ತೀರಿ, ಇದೇ ಸತ್ಯ ಸಂಪಾದನೆಯಾಗಿದೆ - ಹೇಗೆ?
ಉತ್ತರ:
ಈಗಿನ ಯಾವ
ಸಂಪಾದನೆಯಿದೆ ಅದು ಜನ್ಮಗಳವರೆಗೆ ನಡೆಯುತ್ತದೆ, ಇದು ಎಂದೂ ದಿವಾಳಿಯಾಗುವುದಿಲ್ಲ, ಜ್ಞಾನ
ಹೇಳುವುದು-ಕೇಳುವುದು, ನೆನಪು ಮಾಡುವುದು-ಮಾಡಿಸುವುದು - ಇದೇ ಸತ್ಯ-ಸತ್ಯವಾದ ಸಂಪಾದನೆಯಾಗಿದೆ,
ಇದನ್ನು ಸತ್ಯ-ಸತ್ಯವಾದ ತಂದೆಯೇ ನಿಮಗೆ ಕಲಿಸುತ್ತಾರೆ. ಇಂತಹ ಸಂಪಾದನೆಯು ಇಡೀ ಕಲ್ಪದಲ್ಲಿ
ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಮತ್ತ್ಯಾವುದೇ ಸಂಪಾದನೆಯು ಜೊತೆಯಲ್ಲಿ ಬರುವುದಿಲ್ಲ.
ಗೀತೆ:
ನಾವು ಅವರ
ಮಾರ್ಗದಂತೆ ನಡೆಯಬೇಕು.............
ಓಂ ಶಾಂತಿ.
ಭಕ್ತಿ ಮಾರ್ಗದಲ್ಲಿ ಮಕ್ಕಳು ಬಹಳ ಮೋಸ ಹೋಗಿದ್ದೀರಿ. ಭಕ್ತಿ ಮಾರ್ಗದಲ್ಲಿ ಬಹಳ ಭಾವನೆಯಿಂದ
ಯಾತ್ರೆಯನ್ನು ಮಾಡಲು ಹೋಗುತ್ತಾರೆ, ರಾಮಾಯಣ ಇತ್ಯಾದಿಗಳನ್ನು ಕೇಳುತ್ತಾರೆ. ಇಷ್ಟು ಪ್ರೀತಿಯಿಂದ
ಕಥೆಗಳನ್ನು ಕೇಳುತ್ತಾ-ಕೇಳುತ್ತಾ ಕಣ್ಣೀರು ಬಂದು ಬಿಡುತ್ತದೆ. ನಮ್ಮ ಭಗವಂತನ ಸೀತೆ, ಭಗವತಿಯನ್ನು
ರಾವಣನು ಕದ್ದುಕೊಂಡು ಹೋದನು ಎಂಬುದನ್ನು ಕೇಳುವ ಸಮಯದಲ್ಲಿ ಅಳುತ್ತಾರೆ. ಇವೆಲ್ಲವೂ ದಂತ
ಕಥೆಗಳಾಗಿವೆ, ಇವುಗಳಿಂದ ಯಾವುದೇ ಲಾಭವಿಲ್ಲ. ಪತಿತ-ಪಾವನ ಬಾ, ಬಂದು ನಾವು ದುಃಖಿಗಳನ್ನು
ಸುಖಿಯನ್ನಾಗಿ ಮಾಡು ಎಂದು ಕರೆಯುತಾರೆ. ಆತ್ಮವು ದುಃಖಿಯಾಗುತ್ತದೆ ಎಂದು ತಿಳಿಯುವುದಿಲ್ಲ ಏಕೆಂದರೆ
ಆತ್ಮವು ನಿರ್ಲೇಪವೆಂದು ತಿಳಿದಿದ್ದಾರೆ. ಇದನ್ನು ಏಕೆ ಹೇಳುತ್ತಾರೆ? ಏಕೆಂದರೆ ಪರಮಾತ್ಮನು
ದುಃಖ-ಸುಖದಿಂದ ಭಿನ್ನವಾಗಿದ್ದಾರೆ ಅಂದಮೇಲೆ ಮಕ್ಕಳು ಸುಖ-ದುಃಖದಲ್ಲಿ ಬರಲು ಹೇಗೆ ಸಾಧ್ಯ ಎಂದು
ತಿಳಿಯುತ್ತಾರೆ. ಈ ಮಾತುಗಳನ್ನು ಈಗ ಮಕ್ಕಳು ತಿಳಿದುಕೊಂಡಿದ್ದೀರಿ. ಈ ಜ್ಞಾನ ಮಾರ್ಗದಲ್ಲಿ
ಕೆಲವೊಮ್ಮೆ ಗ್ರಹಚಾರಿಯು ಕುಳಿತು ಬಿಡುತ್ತದೆ, ಕೆಲವೊಮ್ಮೆ ಇನ್ನೇನೋ ಆಗುತ್ತದೆ. ಕೆಲವೊಮ್ಮೆ
ಹೂವಿನಂತೆ ಅರಳಿರುತ್ತಾರೆ, ಕೆಲವೊಮ್ಮೆ ಬಾಡಿದ ಮುಖವಿರುತ್ತದೆ. ಇದು ಮಾಯೆಯೊಂದಿಗಿನ ಯುದ್ಧವಾಗಿದೆ.
ಮಾಯೆಯ ಮೇಲೆ ವಿಜಯ ಪಡೆಯಬೇಕಾಗಿದೆ. ಯಾವಾಗ ಮೂರ್ಛೆ ಹೋಗುವರೋ ಆಗ ಸಂಜೀವಿನಿ ಮೂಲಿಕೆಯನ್ನು
ಕೊಡಲಾಗುತ್ತದೆ - ಮನ್ಮನಾಭವ ಎಂದು. ಭಕ್ತಿಮಾರ್ಗದಲ್ಲಿ ಬಹಳ ಜಂಜಾಟವಿದೆ. ದೇವತೆಗಳು
ಮೂರ್ತಿಗಳನ್ನು ಎಷ್ಟೊಂದು ಶೃಂಗಾರ ಮಾಡುತ್ತಾರೆ, ಸತ್ಯವಾದ ಆಭರಣಗಳನ್ನು ತೊಡಿಸುತ್ತಾರೆ. ಆ
ಆಭರಣಗಳಂತೂ ಠಾಕೂರನ ಸಂಪತ್ತು ಆಗುತ್ತದೆ. ಠಾಕೂರನ ಆಸ್ತಿ ಸೋ ಪೂಜಾರಿ ಅಥವಾ ನಿಮಿತ್ತರದಾಗಿ
ಬಿಡುತ್ತದೆ. ನಾವು ಚೈತನ್ಯದಲ್ಲಿ ಬಹಳ ವಜ್ರ ವೈಡೂರ್ಯಗಳಿಂದ ಶೃಂಗರಿತರಾಗಿದ್ದೆವು ನಂತರ ಯಾವಾಗ
ಪೂಜಾರಿಗಳಾಗುತ್ತೇವೆಯೋ ಆಗಲೂ ಬಹಳ ಆಭರಣಗಳನ್ನು ತೊಡಿಸುತ್ತಾರೆ. ಈಗ ಏನೂ ಇಲ್ಲ, ಚೈತನ್ಯ
ರೂಪದಲ್ಲಿಯೂ ಧರಿಸಿದಿರಿ ಮತ್ತು ಜಡರೂಪದಲ್ಲಿಯೂ ಧರಿಸಿದಿರಿ, ಈಗ ಯಾವುದೇ ಆಭರಣಗಳಿಲ್ಲ, ಸಂಪೂರ್ಣ
ಸಾಧಾರಣರಾಗಿದ್ದೀರಿ, ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ, ಯಾವುದೇ ರಾಜಾಯಿಯ ಆಡಂಬರವಿಲ್ಲ.
ಸನ್ಯಾಸಿಗಳೂ ಸಹ ಬಹಳ ಆಡಂಬರದಿಂದ ಇರುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ
ಸತ್ಯಯುಗದಲ್ಲಿ ಹೇಗೆ ನಾವಾತ್ಮರು ಪವಿತ್ರರಾಗಿದ್ದೆವು, ಶರೀರವು ಪವಿತ್ರವಾಗಿತ್ತು, ಅವರ ಶೃಂಗಾರವು
ಬಹಳ ಚೆನ್ನಾಗಿರುತ್ತದೆ. ಯಾರಾದರೂ ಸುಂದರವಾಗಿದ್ದರೆ ಅವರಿಗೆ ಶೃಂಗಾರದ ಆಸಕ್ತಿಯಿರುತ್ತದೆ. ನೀವೂ
ಸಹ ಸುಂದರರಾಗಿದ್ದಾಗ ಬಹಳ ಒಳ್ಳೊಳ್ಳೆಯ ಆಭರಣಗಳನ್ನು ಧರಿಸಿದಿರಿ, ವಜ್ರಗಳ ದೊಡ್ಡ ಹಾರಗಳನ್ನು
ಧರಿಸುತ್ತಿದ್ದಿರಿ, ಇಲ್ಲಿ ಪ್ರತಿಯೊಂದು ವಸ್ತುವೂ ಕಪ್ಪಾಗಿದೆ. ನೋಡಿ, ಹಸುಗಳೂ ಸಹ ಕಪ್ಪಾಗುತ್ತಾ
(ಪತಿತ) ಹೋಗಿವೆ. ಬ್ರಹ್ಮಾ ತಂದೆಯು ಶ್ರೀ ನಾಥ ದ್ವಾರಕ್ಕೆ ಹೋದಾಗ ಬಹಳ ಒಳ್ಳೆಯ ಹಸುಗಳಿತ್ತು,
ಕೃಷ್ಣನ ಹಸುವನ್ನು ಬಹಳ ಸುಂದರವಾಗಿ ತೋರಿಸುತ್ತಾರೆ. ಇಲ್ಲಂತೂ ಕೆಲಕೆಲವು ಕೆಲವೊಂದು
ರೀತಿಯಿರುತ್ತದೆ ಎಕೆಂದರೆ ಕಲಿಯುಗವಾಗಿದೆ. ಇಂತಹ ಹಸುಗಳು ಅಲ್ಲಿರುವುದಿಲ್ಲ. ನೀವು ವಿಶ್ವದ
ಮಾಲೀಕರಾಗುತ್ತೀರಿ, ನಿಮ್ಮ ಶೃಂಗಾರವೂ ಸಹ ಅಲ್ಲಿ ಸುಂದರವಾಗಿರುತ್ತದೆ. ವಿಚಾರ ಮಾಡಿದಾಗ ಹಸುಗಳೂ
ಸಹ ಅಲ್ಲಿ ಸುಂದರವಾಗಿರಬೇಕಲ್ಲವೆ! ಅಲ್ಲಿಯ ಹಸುಗಳ ಗೊಬ್ಬರವು ಬಹಳ ಚೆನ್ನಾಗಿರುತ್ತದೆ, ಅದರಲ್ಲಿ
ಎಷ್ಟೊಂದು ಶಕ್ತಿಯಿರುತ್ತದೆ! ಹೊಲ ಗದ್ದೆಗಳಿಗೆ ಗೊಬ್ಬರ ಬೇಕಾಗುತ್ತದೆಯಲ್ಲವೆ. ಒಳ್ಳೆಯ
ಗೊಬ್ಬರವನ್ನು ಹಾಕಿದರೆ ಬಹಳ ಒಳ್ಳೆಯ ಫಲವು ಸಿಗುವುದು. ಅಲ್ಲಿ ಎಲ್ಲಾ ವಸ್ತುಗಳು ಬಹಳ
ಶಕ್ತಿಶಾಲಿಯಾಗಿರುತ್ತದೆ. ಇಲ್ಲಿರುವ ಯಾವುದೇ ವಸ್ತುವಿನಲ್ಲಿ ಶಕ್ತಿಯಿಲ್ಲ. ಇಲ್ಲಿ ಅವಶ್ಯವಾಗಿ
ಎಲ್ಲವೂ ಶಕ್ತಿಹೀನವಾಗಿದೆ. ಯಜ್ಞದ ಆರಂಭದಲ್ಲಿ ಕನ್ಯೆಯರು ಸೂಕ್ಷ್ಮವತನಕ್ಕೆ ಹೋಗುತ್ತಿದ್ದರು,
ಎಷ್ಟು ಒಳ್ಳೊಳ್ಳೆಯ ಹಣ್ಣುಗಳನ್ನು ಸೇವಿಸುತ್ತಿದ್ದರು. ಶೂಬೀರಸ ಇತ್ಯಾದಿಗಳನ್ನು
ಕುಡಿಯುತ್ತಿದ್ದರು, ಇದೆಲ್ಲವನ್ನೂ ಸಾಕ್ಷಾತ್ಕಾರ ಮಾಡುತ್ತಿದ್ದರು. ಅಲ್ಲಿ ಮಾಲಿಯು ಹೇಗೆ
ಹಣ್ಣುಗಳನ್ನು ಕಿತ್ತು ಕೊಡುತ್ತಾರೆ, ಸೂಕ್ಷ್ಮವತನದಲ್ಲಂತೂ ಹೊಲ ಇತ್ಯಾದಿಗಳಿರಲು ಸಾಧ್ಯವಿಲ್ಲ.
ಇದು ಕೇವಲ ಸಾಕ್ಷಾತ್ಕಾರವಾಗುತ್ತದೆ. ವೈಕುಂಠವಂತೂ ವಾಸ್ತವದಲ್ಲಿ ಇಲ್ಲಿಯೇ ಇರುತ್ತದೆಯಲ್ಲವೆ.
ವೈಕುಂಠವು ಮೇಲಿರಬಹುದೆಂದು ಮನುಷ್ಯರು ತಿಳಿಯುತ್ತಾರೆ. ವೈಕುಂಠವು ಸೂಕ್ಷ್ಮವತನದಲ್ಲಾಗಲಿ,
ಮೂಲವತನದಲ್ಲಾಗಲಿ ಇರುವುದಿಲ್ಲ. ಇಲ್ಲಿಯೇ ಸ್ಥಾಪನೆಯಾಗುತ್ತದೆ. ಕನ್ಯೆಯರು ಯಾವುದನ್ನು
ಸಾಕ್ಷಾತ್ಕಾರದಲ್ಲಿ ನೋಡುವರೋ ಅದನ್ನು ಮತ್ತೆ ಈ ಸ್ಥೂಲ ಕಣ್ಣುಗಳಿಂದ ನೋಡುತ್ತೀರಿ. ಎಂತಹ
ಸ್ಥಾನಮಾನವೋ ಅಂತಹ ಸಾಮಗ್ರಿಗಳಿರುತ್ತವೆ. ರಾಜರ ಮಹಲುಗಳನ್ನು ನೋಡಿ, ಎಷ್ಟು ಚೆನ್ನಾಗಿರುತ್ತವೆ!
ಜೈಪುರದಲ್ಲಿ ಬಹಳ ಒಳ್ಳೊಳ್ಳೆಯ ಮಹಲುಗಳನ್ನು ಕಟ್ಟಿಸಿದ್ದಾರೆ. ಕೇವಲ ಮಹಲುಗಳನ್ನು ನೋಡುವುದಕ್ಕಾಗಿ
ಮನುಷ್ಯರು ಹೋದರೂ ಸಹ ಅದಕ್ಕೆ ಟಿಕೇಟು ಇರುತ್ತದೆ. ವಿಶೇಷವಾಗಿ ಆ ಮಹಲನ್ನು ನೋಡುವುದಕ್ಕಾಗಿಯೇ
ಇಡುತ್ತಾರೆ. ಅವರು ಮತ್ತೆ ಬೇರೆ ಮಹಲುಗಳಲ್ಲಿ ಇರುತ್ತಾರೆ, ಅದೂ ಸಹ ಈ ಕಲಿಯುಗದಲ್ಲಿ. ಇದಂತೂ
ಪತಿತ ಪ್ರಪಂಚವಾಗಿದೆ. ಯಾರಾದರೂ ತಮ್ಮನ್ನು ಪತಿತರೆಂದು ತಿಳಿದುಕೊಳ್ಳುತ್ತಾರೆಯೇ! ನೀವೀಗ
ತಿಳಿದುಕೊಳ್ಳುತ್ತೀರಿ - ನಾವು ಪತಿತರಾಗಿದ್ದೆವು, ಯಾವುದೇ ಪ್ರಯೋಜನಕ್ಕಿರಲಿಲ್ಲ, ಈಗ ಪುನಃ ನಾವು
ಸುಂದರರಾಗುತ್ತೇವೆ, ಆ ಪ್ರಪಂಚವೇ ಬಹಳ ಸುಂದರವಾಗಿರುವುದು. ಇಲ್ಲಿ ಭಲೆ ಅಮೇರಿಕಾ ಮೊದಲಾದ
ದೇಶಗಳಲ್ಲಿ ಬಹಳ ಒಳ್ಳೊಳ್ಳೆಯ ಮಹಲುಗಳಿವೆ ಆದರೆ ಅಲ್ಲಿನ ಹೋಲಿಕೆಯಲ್ಲಿ ಇದೇನೂ ಇಲ್ಲ ಏಕೆಂದರೆ
ಇವಂತೂ ಅಲ್ಪಕಾಲದ ಸುಖ ಕೊಡುವಂತಹವಾಗಿವೆ. ಅಲ್ಲಂತೂ ಬಹಳ ಸುಂದರ ಮಹಲುಗಳಿರುತ್ತವೆ. ಹಸುಗಳು
ಸುಂದರವಾಗಿರುತ್ತವೆ, ಅಲ್ಲಿ ಗೊಲ್ಲರೂ ಇರುತ್ತಾರೆ. ಶ್ರೀ ಕೃಷ್ಣನಿಗೆ ಗೊಲ್ಲ ಬಾಲಕನೆಂದು
ಹೇಳುತ್ತಾರಲ್ಲವೆ. ಇಲ್ಲಿ ಯಾರು ಹಸುಗಳನ್ನು ಸಂಭಾಲನೆ ಮಾಡುವವರಿದ್ದಾರೆಯೋ ಅವರೂ ಸಹ ನಾವು
ಗೊಲ್ಲರಾಗಿದ್ದೇವೆ, ಕೃಷ್ಣನ ವಂಶಾವಳಿಯಾಗಿದ್ದೇವೆ. ವಾಸ್ತವದಲ್ಲಿ ಕೃಷ್ಣನ ವಂಶಾವಳಿಯೆಂದು
ಹೇಳುವುದಿಲ್ಲ. ಕೃಷ್ಣನ ರಾಜಧಾನಿಯವರೆಂದು ಹೇಳುತ್ತಾರೆ. ಸಾಹುಕಾರರ ಬಳಿ ಹಸುಗಳಿದ್ದರೆ ಅವುಗಳನ್ನು
ಸಂಭಾಲನೆ ಮಾಡಲು ಗೊಲ್ಲರೂ ಇರುತ್ತಾರೆ. ಈ ಗೊಲ್ಲ ಎಂಬ ಹೆಸರು ಸತ್ಯಯುಗದ್ದಾಗಿದೆ. ಇದು ನೆನ್ನೆಯ
ಮಾತಾಗಿದೆ. ನೆನ್ನೆಯ ದಿನ ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ನಂತರ
ಪತಿತರಾಗಿದ್ದರಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಕೇಳಿರಿ, ನೀವು ಆದಿ ಸನಾತನ
ದೇವಿ-ದೇವತಾ ಧರ್ಮದವರೋ ಅಥವಾ ಹಿಂದೂ ಧರ್ಮದವರೋ? ಇತ್ತೀಚೆಗೆ ಎಲ್ಲರೂ ಹಿಂದೂಗಳೆಂದು ಬರೆದು
ಬಿಡುತ್ತಾರೆ. ಹಿಂದೂ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ದೇವಿ-ದೇವತಾ ಧರ್ಮವನ್ನು ಯಾರು
ಸ್ಥಾಪನೆ ಮಾಡಿದರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಈ ಪ್ರಶ್ನೆಯನ್ನು ಕೇಳುತ್ತಾರೆ -
ತಿಳಿಸಿ, ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಶಿವ ತಂದೆಯು
ಬ್ರಹ್ಮಾರವರ ಮೂಲಕ ಮಾಡುತ್ತಿದ್ದಾರೆ. ರಾಮ ಅಥವಾ ಶಿವ ತಂದೆಯ ಶ್ರೀಮತದಂತೆ ಆದಿ ಸನಾತನ
ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು ನಂತರದಲ್ಲಿ ರಾವಣ ರಾಜ್ಯವು ಸ್ಥಾಪನೆಯಾಗುತ್ತದೆ,
ವಿಕಾರಗಳಲ್ಲಿ ಹೋಗುತ್ತಾರೆ. ಭಕ್ತಿಮಾರ್ಗವು ಆರಂಭವಾಗಿ ಬಿಡುತ್ತದೆ, ಆಗ ಹಿಂದೂಗಳೆಂದು
ಕರೆಸಿಕೊಳ್ಳತೊಡಗುತ್ತಾರೆ. ಈಗ ತಮ್ಮನ್ನು ಯಾರೂ ಸಹ ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ.
ರಾವಣನು ವಿಕಾರಿಗಳನ್ನಾಗಿ ಮಾಡಿದನು, ತಂದೆಯು ಬಂದು ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ನೀವು
ಈಶ್ವರೀಯ ಮತದಿಂದ ದೇವತೆಗಳಾಗುತ್ತೀರಿ. ತಂದೆಯೇ ಬಂದು ನಿಮ್ಮನ್ನು ಬ್ರಾಹ್ಮಣರಿಂದ ದೇವತೆಗಳನ್ನಾಗಿ
ಮಾಡುತ್ತಾರೆ. ಏಣಿಯನ್ನು ಹೇಗೆ ಇಳಿಯುತ್ತೀರೆಂದು ನೀವು ಮಕ್ಕಳ ಬುದ್ಧಿಯಲ್ಲಿ ನಂಬರ್ವಾರ್ ಆಗಿ
ಕುಳಿತುಕೊಳ್ಳುತ್ತದೆ. ಬೇರೆಲ್ಲರೂ ಮನುಷ್ಯರು ಆಸುರೀ ಮತದಂತೆ ನಡೆಯುತ್ತಿದ್ದಾರೆ, ನೀವು ಮಕ್ಕಳು
ಈಶ್ವರೀಯ ಮತದಂತೆ ನಡೆಯುತ್ತಿದ್ದೀರಿ. ರಾವಣನ ಮತದಂತೆ ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ. 84
ಜನ್ಮಗಳ ನಂತರ ಪುನಃ ಮೊದಲ ನಂಬರಿನಲ್ಲಿ ಜನ್ಮವಾಗುತ್ತದೆ. ಈಶ್ವರೀಯ ಬುದ್ಧಿಯಿಂದ ನೀವು ಇಡೀ
ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದು ಬಿಡುತ್ತೀರಿ. ಇದು ನಿಮ್ಮದು ಬಹಳ ಅಮೂಲ್ಯ ಜೀವನವಾಗಿದೆ,
ಇದು ಇವರ ಸಾಹಸವಾಗಿದೆ ಯಾವಾಗ ತಂದೆಯು ಬಂದು ನಮ್ಮನ್ನು ಈ ರೀತಿ ಪಾವನರನ್ನಾಗಿ ಮಾಡುತ್ತಾರೆ. ನಾವು
ಆತ್ಮಿಕ ಸೇವೆಗೆ ಯೋಗ್ಯರಾಗುತ್ತೇವೆ. ಅವರು ಶರೀರದ ಸಮಾಜ ಸೇವಕರು ಯಾರು ಸದಾ
ದೇಹಾಭಿಮಾನಿಗಳಾಗಿರುತ್ತಾರೆ. ನೀವು ದೇಹೀ-ಅಭಿಮಾನಿಗಳು ಆಗಿದ್ದೀರಿ. ಆತ್ಮಗಳನ್ನು ಆತ್ಮಿಕ
ಯಾತ್ರೆಯಲ್ಲಿ ಕರೆದುಕೊಂಡು ಹೋಗುತ್ತೀರಿ. ತಂದೆಯು ತಿಳಿಸುತ್ತಾರೆ - ನೀವು ಸತೋಪ್ರಧಾನರಾಗಿದ್ದಿರಿ,
ಈಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಸತೋಪ್ರಧಾನರಿಗೆ ಪಾವನರು, ತಮೋಪ್ರಧಾನರಿಗೆ ಪತಿತರೆಂದು
ಹೇಳಲಾಗುತ್ತದೆ. ಆತ್ಮದಲ್ಲಿಯೇ ತುಕ್ಕು ಹಿಡಿದಿದೆ. ಆತ್ಮವೇ ಸತೋಪ್ರಧಾನವಾಗಬೇಕಾಗಿದೆ.
ನೆನಪಿನಲ್ಲಿ ಎಷ್ಟಿರುತ್ತೀರೋ ಅಷ್ಟು ಪಾವನರಾಗುತ್ತೀರಿ. ಇಲ್ಲದಿದ್ದರೆ ಸ್ವಲ್ಪ
ಪವಿತ್ರರಾಗುತ್ತೀರಿ, ತಲೆಯ ಮೇಲೆ ಪಾಪಗಳ ಹೊರೆಯು ಉಳಿದು ಬಿಡುತ್ತದೆ. ಆತ್ಮಗಳಂತೂ ಎಲ್ಲರೂ
ಪವಿತ್ರರೇ ಆಗಿದ್ದಾರೆ ಆದರೆ ಅವರ ಪಾತ್ರವು ಬೇರೆ-ಬೇರೆಯಾಗಿದೆ. ಎಲ್ಲರ ಪಾತ್ರವು ಒಂದೇ ರೀತಿಯಿರಲು
ಸಾಧ್ಯವಿಲ್ಲ. ಎಲ್ಲರಿಗಿಂತ ತಂದೆಯ ಪಾತ್ರವು ಮೊದಲಾಗಿದೆ, ನಂತರ ಬ್ರಹ್ಮಾ-ಸರಸ್ವತಿಯದಾಗಿದೆ. ಯಾರು
ಸ್ಥಾಪನೆ ಮಾಡುತ್ತಾರೆಯೋ ಅವರೇ ಪಾಲನೆ ಮಾಡಬೇಕಾಗುತ್ತದೆ. ಬಹಳ ದೊಡ್ಡ ಪಾತ್ರವು ಅವರದಾಗಿದೆ.
ಮೊದಲು ಶಿವ ತಂದೆಯದು, ನಂತರ ಬ್ರಹ್ಮಾ-ಸರಸ್ವತಿ ಯಾರು ಪುನರ್ಜನ್ಮದಲ್ಲಿ ಬರುತ್ತಾರೆ. ಶಂಕರನಂತೂ
ಸೂಕ್ಷ್ಮ ರೂಪವನ್ನು ಧಾರಣೆ ಮಾಡುತ್ತಾರೆ. ಶಂಕರನು ಯಾವುದೋ ಶರೀರವನ್ನು ಸಾಲ ತೆಗೆದುಕೊಳ್ಳುತ್ತಾನೆ
ಎಂದಲ್ಲ. ಕೃಷ್ಣನಿಗೆ ತನ್ನದೇ ಆದ ಶರೀರವಿದೆ. ಇಲ್ಲಿ ಕೇವಲ ಶಿವ ತಂದೆಯು ಸಾಲವಾಗಿ ಶರೀರವನ್ನು
ಪಡೆಯುತ್ತಾರೆ. ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಪತಿತ ಶರೀರದಲ್ಲಿ, ಪತಿತ ಪ್ರಪಂಚದಲ್ಲಿ ಬಂದು
ಸೇವೆಯನ್ನು ಮಾಡುತ್ತಾರೆ. ಮೊದಲು ಮುಕ್ತಿಯಲ್ಲಿ ಹೋಗಬೇಕಾಗಿದೆ. ಒಬ್ಬ ತಂದೆಯೇ ಜ್ಞಾನ ಸಾಗರ,
ಪತಿತ-ಪಾವನ, ಅವರನ್ನು ಶಿವ ತಂದೆ ಎಂದು ಕರೆಯುತ್ತಾರೆ. ಶಂಕರನಿಗೆ ತಂದೆಯೆಂದು ಹೇಳುವುದು
ಶೋಭಿಸುವುದಿಲ್ಲ. ಶಿವ ತಂದೆ ಎಂಬ ಅಕ್ಷರವು ಬಹಳ ಮಧುರವಾಗಿದೆ. ಶಿವ ಲಿಂಗದ ಮೇಲೆ ಎಕ್ಕದ ಹೂವನ್ನು
ಹಾಕುತ್ತಾರೆ. ಕೆಲವರು ಏನೇನೋ ಹಾಕುತ್ತಾರೆ. ಕೆಲವರು ಹಾಲನ್ನೂ ಎರೆಯುತ್ತಾರೆ.
ತಂದೆಯು ಮಕ್ಕಳಿಗೆ ಅನೇಕ
ಪ್ರಕಾರವಾಗಿ ತಿಳುವಳಿಕೆ ಕೊಡುತ್ತಾರೆ. ಎಲ್ಲದರ ಆಧಾರವು ಯೋಗವಾಗಿದೆ ಎಂದು ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ. ಯೋಗದಿಂದಲೇ ವಿಕರ್ಮ ವಿನಾಶವಾಗುವುದು. ಯೋಗವಿರುವವರಿಗೆ ಜ್ಞಾನವು ಬಹಳ ಚೆನ್ನಾಗಿ
ಧಾರಣೆಯಾಗುವುದು. ತಾನು ಧಾರಣೆಯಲ್ಲಿ ನಡೆಯುತ್ತಾರೆ ಎಂದರೆ ಅನ್ಯರಿಗೆ ತಿಳಿಸಬೇಕಾಗುತ್ತದೆ. ಇದು
ಹೊಸ ಮಾತಾಗಿದೆ. ಭಗವಂತನೇ ಯಾರಿಗೆ ಡೈರೆಕ್ಟ್ ತಿಳಿಸಿದರು, ಅದನ್ನು ಕೇಳುತ್ತಾರೆ ನಂತರ ಈ ಜ್ಞಾನವು
ಇರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಈಗಲೇ ಇದನ್ನು ಕೇಳುತ್ತೀರಿ. ಧಾರಣೆಯಾಗುತ್ತದೆ ನಂತರ
ಪ್ರಾಲಬ್ಧದ ಪಾತ್ರವನ್ನಭಿನಯಿಸಬೇಕಾಗುತ್ತದೆ. ಜ್ಞಾನವನ್ನು ಕೇಳುವುದು, ಹೇಳುವುದು ಈಗಲೇ ಆಗುತ್ತದೆ,
ಸತ್ಯಯುಗದಲ್ಲಿ ಈ ಪಾತ್ರವಿರುವುದಿಲ್ಲ. ಅಲ್ಲಂತೂ ಪ್ರಾಲಬ್ಧದ ಪಾತ್ರವಿರುತ್ತದೆ. ಮನುಷ್ಯರು
ಬ್ಯಾರಿಸ್ಟರಿ ಓದುತ್ತಾರೆ ಬ್ಯಾರಿಸ್ಟರ್ ಆಗಿ ಸಂಪಾದನೆ ಮಾಡುತ್ತಾರೆ. ಇದು ಎಷ್ಟು ದೊಡ್ಡ
ಸಂಪಾದನೆಯಾಗಿದೆ, ಇದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ತಂದೆಯು ನಮಗೆ ಸತ್ಯವಾದ ಸಂಪಾದನೆ
ಮಾಡಿಸುತ್ತಿದ್ದಾರೆಂದು ನೀವು ತಿಳಿದಿದ್ದೀರಿ. ಇದರ ದಿವಾಳಿಯಾಗಲು ಸಾಧ್ಯವಿಲ್ಲ. ಈಗ ನೀವು
ಸತ್ಯವಾದ ಸಂಪಾದನೆ ಮಾಡುತ್ತೀರಿ. ಪುನಃ ಅದು 21 ಜನ್ಮಗಳು ಜೊತೆಯಲ್ಲಿರುತ್ತದೆ. ಆ ಸಂಪಾದನೆಯು
ಜೊತೆ ಕೊಡುವುದಿಲ್ಲ, ಈ ಸಂಪಾದನೆಯು ಜೊತೆ ಕೊಡುತ್ತದೆ. ಇಂತಹ ಜೊತೆ ಕೊಡುವ ಸಂಪಾದನೆಗೆ ನೀವು
ಜೊತೆಯಲ್ಲಿರಬೇಕಾಗಿದೆ. ಈ ಮಾತನ್ನು ನೀವು ಮಕ್ಕಳ ವಿನಃ ಬೇರೆ ಯಾರ ಬುದ್ಧಿಯಲ್ಲಿಯೂ ಇಲ್ಲ.
ನಿಮ್ಮಲ್ಲಿಯೂ ಸಹ ಇದನ್ನು ಗಳಿಗೆ-ಗಳಿಗೆಗೆ ಮರೆತು ಹೋಗುತ್ತಾರೆ. ತಂದೆ ಮತ್ತು ಆಸ್ತಿಯನ್ನು
ಮರೆಯಬಾರದು. ಒಂದು ಮಾತು ಆಗಿದೆ - ತಂದೆಯನ್ನು ನೆನಪು ಮಾಡಿ. ಯಾವ ತಂದೆಯಿಂದ ನಿಮಗೆ 21 ಜನ್ಮ
ನಿರೋಗಿ ಶರೀರವಿರುತ್ತದೆ. ವೃದ್ಧಾಪ್ಯದವರೆಗೂ ಅಕಾಲಮೃತ್ಯುವಾಗುವುದಿಲ್ಲ. ಮಕ್ಕಳಿಗೆ ಎಷ್ಟೊಂದು
ಖುಷಿಯಿರಬೇಕಾಗಿದೆ. ತಂದೆಯ ನೆನಪು ಮುಖ್ಯವಾದುದಾಗಿದೆ, ಇದರಲ್ಲಿಯೇ ಮಾಯೆಯು ವಿಘ್ನವನ್ನು
ಹಾಕುತ್ತದೆ, ಬಿರುಗಾಳಿಯನ್ನೂ ತರುವುದು. ಅನೇಕ ಪ್ರಕಾರದ ಬಿರುಗಾಳಿಯೂ ಬರುತ್ತದೆ. ತಂದೆಯನ್ನು
ನೆನಪು ಮಾಡಬೇಕೆಂದು ತಿಳಿಯುತ್ತೀರಿ ಆದರೆ ಮಾಡಲು ಆಗುವುದಿಲ್ಲ. ನೆನಪಿನಲ್ಲಿಯೇ ಎಲ್ಲರೂ ಬಹಳ
ನಾಪಾಸಾಗುತ್ತಾರೆ. ಎಲ್ಲರಲ್ಲಿಯೂ ಯೋಗವೇ ಬಹಳ ಕಡಿಮೆಯಿದೆ. ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ.
ಬಾಕಿ ಬೀಜ ಮತ್ತು ವೃಕ್ಷದ ಜ್ಞಾನವು ದೊಡ್ಡ ಮಾತೇನಲ್ಲ. ನನ್ನನ್ನು ನೆನಪು ಮಾಡುವುದರಿಂದ,
ನನ್ನನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿಯುತ್ತೀರಿ. ನೆನಪಿನಲ್ಲಿಯೇ ಎಲ್ಲವೂ ಇದೆ. ಮಧುರತಂದೆ,
ಶಿವ ತಂದೆಯನ್ನು ನೆನಪು ಮಾಡಬೇಕು. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ. ಶ್ರೇಷ್ಠರಲ್ಲಿ
ಶ್ರೇಷ್ಠರು ತಂದೆಯು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು 21 ಜನ್ಮಕ್ಕಾಗಿ ಕೊಟ್ಟು ಸದಾ ಸುಖಿ
ಅಮರರನ್ನಾಗಿ ಮಾಡುತ್ತಾರೆ. ನೀವು ಅಮರಪುರಿಯ ಮಾಲೀಕರಾಗುತ್ತೀರಿ ಅಂದಮೇಲೆ ಅಂತಹ ತಂದೆಯನ್ನು ಬಹಳ
ನೆನಪು ಮಾಡಬೇಕಲ್ಲವೆ! ತಂದೆಯನ್ನು ನೆನಪು ಮಾಡದೇ ಇದ್ದರೆ ಬೇರೆಲ್ಲವೂ ನೆನಪಿಗೆ ಬರುತ್ತದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಈ ಈಶ್ವರೀಯ
ಜೀವನವು ಬಹಳ-ಬಹಳ ಅಮೂಲ್ಯವಾಗಿದೆ, ಈ ಜೀವನದಲ್ಲಿ ಆತ್ಮ ಮತ್ತು ಶರೀರ ಎರಡನ್ನೂ ಪಾವನವನ್ನಾಗಿ
ಮಾಡಿಕೊಳ್ಳಬೇಕಾಗಿದೆ. ಆತ್ಮಿಕ ಯಾತ್ರೆಯಲ್ಲಿದ್ದು ಅನ್ಯರಿಗೆ ಇದೇ ಯಾತ್ರೆಯನ್ನು ಕಲಿಸಬೇಕಾಗಿದೆ.
2) ಎಷ್ಟು ಸಾಧ್ಯವೋ
ಅಷ್ಟು ಸತ್ಯ ಸಂಪಾದನೆಯಲ್ಲಿ ತೊಡಗಬೇಕಾಗಿದೆ. ನಿರೋಗಿಯಾಗಲು ನೆನಪಿನಲ್ಲಿ ಧೃಡವಾಗಬೇಕಾಗಿದೆ.
ವರದಾನ:
ಶರೀರವನ್ನು
ಈಶ್ವರೀಯ ಸೇವೆಗಾಗಿ ಉಡುಗೊರೆಯೆಂದು ತಿಳಿದುಕೊಂಡು ಕಾರ್ಯದಲ್ಲಿ ಉಪಯೋಗಿಸುವಂತಹ ನಷ್ಟಮೋಹ ಭವ.
ಹೇಗೆ ಯಾರಾದರೂ
ಕೊಟ್ಟಿರುವ ಉಡುಗೊರೆಯಾಗಿದ್ದರೆ, ಅದರಲ್ಲಿ ನನ್ನದೆನ್ನುವುದು ಇರುವುದಿಲ್ಲ ಹಾಗೂ ಮಮತ್ವವೂ
ಇರುವುದಿಲ್ಲ. ಅಂದಮೇಲೆ ಈ ಶರೀರವೂ ಈಶ್ವರನ ಸೇವೆಗಾಗಿ ಉಡುಗೊರೆಯಾಗಿದೆ. ಈ ಉಡುಗೊರೆಯನ್ನು
ಆತ್ಮಿಕ ತಂದೆಯು ಕೊಟ್ಟಿದ್ದಾರೆ, ಅಂದಮೇಲೆ ಅವಶ್ಯವಾಗಿ ಆತ್ಮಿಕ ತಂದೆಯ ನೆನಪಿರುವುದು.
ಉಡುಗೊರೆಯೆಂದು ತಿಳಿಯುವುದರಿಂದ ಆತ್ಮೀಯತೆಯು ಬರುತ್ತದೆ, ನನ್ನದೆಂಬ ಮಮತ್ವವಿರುವುದಿಲ್ಲ - ಇದೇ
ನಿರಂತರ ಯೋಗಿ, ನಷ್ಟಮೋಹರಾಗಲು ಸಹಜ ಉಪಾಯವಾಗಿದೆ. ಅಂದಾಗ ಈಗ ಆತ್ಮೀಯತೆಯ ಸ್ಥಿತಿಯನ್ನು
ಪ್ರತ್ಯಕ್ಷಗೊಳಿಸಿರಿ.
ಸ್ಲೋಗನ್:
ವಾನಪ್ರಸ್ಥ
ಸ್ಥಿತಿಯಲ್ಲಿ ಹೋಗಬೇಕೆಂದರೆ ದೃಷ್ಟಿ-ವೃತ್ತಿಯಲ್ಲಿಯೂ ಪವಿತ್ರತೆಯನ್ನು ಅಂಡರ್ಲೈನ್ ಮಾಡಿರಿ.
ಅವ್ಯಕ್ತ ಸೂಚನೆ:–
“ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”
ನಿಮ್ಮ ಪ್ರತಿ ಮಾತು
ಮಹಾನವಾಗಿರಲಿ. ಪ್ರತಿ ಮನಸ್ಸಾ ಸಂಕಲ್ಪ ಪ್ರತಿ ಆತ್ಮನ ಪ್ರತಿ ಮಧುರವಾಗಿರಲಿ. ಪ್ರತಿಯೊಬ್ಬರನ್ನು
ಶ್ರೇಷ್ಠರನ್ನಾಗಿ ಮಾಡುವ ಸ್ವಭಾವ, ಮಧುರತೆಯ ಸ್ವಭಾವ, ನಿರ್ಮಾಣತೆಯ ಸ್ವಭಾವವಿರಲಿ. ನನ್ನ ಸ್ವಭಾವ
ಹೀಗಿದೆ, ಇದನ್ನು ಎಂದೂ ಹೇಳಬಾರದು. ನನ್ನದು ಎಲ್ಲಿಂದ ಬಂತು. ನನ್ನ ಜೋರಾಗಿ ಮಾತನಾಡುವ
ಸ್ವಭಾವವಿದೆ, ನಾನು ಆವೇಶದಲ್ಲಿ ಬರುವ ಸ್ವಭಾವವಿದೆ. ಸ್ವಭಾವದ ವಶರಾಗುವುದೇ ಮಾಯೆಯಾಗಿದೆ. ಈಗ
ಮಾಯಾಜೀತ್ರಾಗಿ. ಅಭಿಮಾನ ಅಥವಾ ಹೃದಯವಿಧೀರ್ಣರಾಗುವ, ಈರ್ಷ್ಯೆ ಅಥವಾ ಆವೇಶದಲ್ಲಿ ಬರುವ ಸ್ವಭಾವದ
ಪರಿವರ್ತನೆ ಮಾಡಿ.