17.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ನೆನಪಿನಿಂದ ಸತೋಪ್ರಧಾನರಾಗುವ ಜೊತೆ ಜೊತೆಗೆ ವಿದ್ಯೆಯಿಂದ ಸಂಪಾದನೆಯನ್ನು ಜಮಾ
ಮಾಡಿಕೊಳ್ಳಬೇಕಾಗಿದೆ, ವಿದ್ಯೆಯ ಸಮಯದಲ್ಲಿ ಬುದ್ಧಿಯು ಆ ಕಡೆ - ಈ ಕಡೆ ಅಲೆಯಬಾರದು"
ಪ್ರಶ್ನೆ:
ನೀವು ಡಬಲ್
ಅಹಿಂಸಕ, ಗುಪ್ತ ಸೈನಿಕರ ಯಾವ ವಿಜಯವು ನಿಶ್ಚಿತವಾಗಿದೆ ಮತ್ತು ಏಕೆ?
ಉತ್ತರ:
ನೀವು ಮಕ್ಕಳು
ಮಾಯೆಯ ಮೇಲೆ ಜಯ ಗಳಿಸಲು ಯಾವ ಪುರುಷಾರ್ಥ ಮಾಡುತ್ತಿದ್ದೀರಿ, ನಿಮ್ಮ ಲಕ್ಷ್ಯವಾಗಿದೆ - ನಾವು
ರಾವಣನಿಂದ ನಮ್ಮ ರಾಜ್ಯವನ್ನು ತೆಗೆದುಕೊಂಡೇ ತೀರುತ್ತೇವೆ.... ಇದೂ ಸಹ ಡ್ರಾಮಾದಲ್ಲಿ ಯುಕ್ತಿಯು
ರಚಿಸಲ್ಪಟ್ಟಿದೆ. ನಿಮ್ಮ ವಿಜಯವು ನಿಶ್ಚಿತವಾಗಿದೆ ಏಕೆಂದರೆ ನಿಮ್ಮ ಜೊತೆ ಸಾಕ್ಷಾತ್ ಪರಮಪಿತ
ಪರಮಾತ್ಮನಿದ್ದಾರೆ. ನೀವು ಯೋಗಬಲದಿಂದ ವಿಜಯವನ್ನು ಪಡೆಯುತ್ತೀರಿ. ಮನ್ಮನಾಭವದ ಮಂತ್ರದಿಂದ ನಿಮಗೆ
ರಾಜ್ಯಭಾಗ್ಯವು ಸಿಗುತ್ತದೆ. ನೀವು ಅರ್ಧಕಲ್ಪ ರಾಜ್ಯಭಾರ ಮಾಡುತ್ತೀರಿ.
ಗೀತೆ:
ಮುಖವನ್ನು
ನೋಡಿಕೋ ಪ್ರಾಣಿ.........
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ, ಸನ್ಮುಖದಲ್ಲಿ ಕುಳಿತಿರುವಾಗ ತಿಳಿದುಕೊಳ್ಳುತ್ತೀರಿ - ನಮಗೆ ಓದಿಸುವವರು
ಯಾವುದೇ ಸಾಕಾರ ಶಿಕ್ಷಕನಲ್ಲ, ಇವರು ಜ್ಞಾನ ಸಾಗರ ತಂದೆಯಾಗಿದ್ದಾರೆ. ಅವರು ನಮ್ಮ ತಂದೆಯೂ
ಆಗಿದ್ದಾರೆಂಬುದು ಪಕ್ಕಾ ನಿಶ್ಚಯವಿದೆ. ಓದುವಾಗ ವಿದ್ಯೆಯ ಮೇಲೆ ಗಮನವಿರುತ್ತದೆ, ವಿದ್ಯಾರ್ಥಿಗಳು
ತಮ್ಮ ಶಾಲೆಯಲ್ಲಿ ಕುಳಿತಿದ್ದಾಗ ಶಿಕ್ಷಕರ ನೆನಪು ಬರುತ್ತದೆಯೇ ಹೊರತು ತಂದೆಯದಲ್ಲ ಏಕೆಂದರೆ
ಶಾಲೆಯಲ್ಲಿ ಕುಳಿತಿದ್ದೀರಿ. ನೀವೂ ಸಹ ತಿಳಿದುಕೊಂಡಿದ್ದೀರಿ, ತಂದೆಯು ಶಿಕ್ಷಕನೂ ಆಗಿದ್ದಾರೆ.
ಕೇವಲ ಹೆಸರನ್ನು ತಿಳಿದುಕೊಳ್ಳುವುದಲ್ಲ, ಗಮನದಲ್ಲಿರಲಿ - ನಾವಾತ್ಮರಾಗಿದ್ದೇವೆ, ತಂದೆಯಿಂದ
ಕೇಳುತ್ತಿದ್ದೇವೆ. ಈ ರೀತಿ ಕೇಳುವುದು ಮತ್ತೆಂದೂ ಇರುವುದೇ ಇಲ್ಲ. ಸತ್ಯಯುಗದಲ್ಲಾಗಲಿ,
ಕಲಿಯುಗದಲ್ಲಾಗಲಿ ಇರುವುದಿಲ್ಲ, ಕೇವಲ ಈ ಒಂದು ಸಂಗಮ ಯುಗದಲ್ಲಿಯೇ ಪರಮಾತ್ಮನಿಂದ ಕೇಳುತ್ತೀರಿ.
ನೀವು ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ. ನಮ್ಮ ತಂದೆಯು ಈ ಸಮಯದಲ್ಲಿ ಶಿಕ್ಷಕನಾಗಿದ್ದಾರೆ
ಏಕೆಂದರೆ ಓದಿಸುತ್ತಾರೆ, ಎರಡೂ ಕೆಲಸಗಳನ್ನು ಮಾಡಬೇಕಾಗುತ್ತದೆ. ಆತ್ಮವು ಶಿವ ತಂದೆಯಿಂದ ಓದುತ್ತದೆ.
ಇದೂ ಸಹ ಯೋಗ ಮತ್ತು ವಿದ್ಯೆಯಾಗಿ ಬಿಡುತ್ತದೆ. ಆತ್ಮವೇ ಓದುತ್ತದೆ, ಓದಿಸುವವರು
ಪರಮಾತ್ಮನಾಗಿದ್ದಾರೆ. ನೀವು ಸನ್ಮುಖದಲ್ಲಿರುವ ಕಾರಣ ಇದರಲ್ಲಿ ಇನ್ನೂ ಹೆಚ್ಚಿನ ಲಾಭವಿದೆ, ಅನೇಕ
ಮಕ್ಕಳು ಬಹಳ ಚೆನ್ನಾಗಿ ನೆನಪಿನಲ್ಲಿರುತ್ತಾರೆ, ಕರ್ಮಾತೀತ ಸ್ಥಿತಿಯನ್ನು ತಲುಪುತ್ತಾರೆಂದರೆ
ಅದರಿಂದಲೂ ಪವಿತ್ರತೆಯ ಶಕ್ತಿಯು ಸಿಗುತ್ತದೆ. ಶಿವ ತಂದೆಯು ನಮಗೆ ಓದಿಸುತ್ತಾರೆಂದು ಮಕ್ಕಳು
ತಿಳಿದುಕೊಂಡಿದ್ದೀರಿ. ಇದು ನಿಮ್ಮ ಯೋಗವೂ ಆಗಿದೆ, ಸಂಪಾದನೆಯೂ ಆಗಿದೆ, ಆತ್ಮವೇ
ಸತೋಪ್ರಧಾನವಾಗಬೇಕಾಗಿದೆ. ನೀವು ಸತೋಪ್ರಧಾನರೂ ಆಗುತ್ತಿದ್ದೀರಿ. ಧನವನ್ನೂ ಪಡೆಯುತ್ತಿದ್ದೀರಿ.
ಅಂದಮೇಲೆ ತಮ್ಮನ್ನು ಆತ್ಮನೆಂದು ಅವಶ್ಯವಾಗಿ ತಿಳಿಯಬೇಕಾಗಿದೆ. ಬುದ್ಧಿಯು ಅಲ್ಲಿ-ಇಲ್ಲಿ ಓಡಬಾರದು.
ಇಲ್ಲಿ ಕುಳಿತಿರುವಾಗಲೂ ಬುದ್ಧಿಯಲ್ಲಿರಲಿ – ಶಿವ ತಂದೆಯು ಓದಿಸುವುದಕ್ಕಾಗಿ ಶಿಕ್ಷಕನ ರೂಪದಲ್ಲಿ
ಬಂದಿದ್ದಾರೆ, ಅವರೇ ಜ್ಞಾನಪೂರ್ಣನಾಗಿದ್ದಾರೆ, ನಮಗೆ ಓದಿಸುತ್ತಿದ್ದಾರೆ. ನಾವು ತಂದೆಯನ್ನು ನೆನಪು
ಮಾಡಬೇಕಾಗಿದೆ, ಸ್ವದರ್ಶನ ಚಕ್ರಧಾರಿಗಳೂ ಆಗಿದ್ದೇವೆ, ಲೈಟ್ಹೌಸ್ ಸಹ ಆಗಿದ್ದೇವೆ. ಒಂದು
ಕಣ್ಣಿನಲ್ಲಿ ಮುಕ್ತಿಧಾಮ, ಇನ್ನೊಂದು ಕಣ್ಣಿನಲ್ಲಿ ಜೀವನ್ಮುಕ್ತಿ ಧಾಮ. ಈ ಸ್ಥೂಲ ಕಣ್ಣುಗಳೆಂದಲ್ಲ,
ಆತ್ಮದ ಮೂರನೆಯ ನೇತ್ರವೆಂದು ಹೇಳಲಾಗುತ್ತದೆ. ಈಗ ಆತ್ಮಗಳು ಕೇಳುತ್ತಿದ್ದೀರಿ, ಶರೀರವನ್ನು
ಬಿಟ್ಟಾಗ ಆತ್ಮದಲ್ಲಿ ಈ ಸಂಸ್ಕಾರವಿರುತ್ತದೆ, ನೀವೀಗ ತಂದೆಯೊಂದಿಗೆ ಬುದ್ಧಿಯೋಗವನ್ನಿಡುತ್ತೀರಿ.
ಸತ್ಯಯುಗದಿಂದ ಹಿಡಿದು ನೀವು ವಿಯೋಗಿಗಳಾಗಿದ್ದಿರಿ ಅರ್ಥಾತ್ ತಂದೆಯೊಂದಿಗೆ ಯೋಗವಿರಲಿಲ್ಲ. ನೀವೀಗ
ತಂದೆಯ ಸಮಾನ ಯೋಗಿಗಳಾಗುತ್ತಿದ್ದೀರಿ. ಯೋಗ ಕಲಿಸುವವರು ಈಶ್ವರನಾಗಿದ್ದಾರೆ ಆದ್ದರಿಂದ ಅವರಿಗೆ
ಯೋಗೇಶ್ವರನೆಂದು ಕರೆಯಲಾಗುತ್ತದೆ. ನೀವೂ ಸಹ ಯೋಗೇಶ್ವರನ ಮಕ್ಕಳಾಗಿದ್ದೀರಿ. ಅವರೇನೂ ಯೋಗ
ಮಾಡಬೇಕಾಗಿಲ್ಲ. ಅವರು ಯೋಗವನ್ನು ಕಲಿಸಿ ಕೊಡುವ ಪರಮಪಿತ ಪರಮಾತ್ಮನಾಗಿದ್ದಾರೆ. ನೀವು ಒಬ್ಬೊಬ್ಬರೂ
ಯೋಗೇಶ್ವರ-ಯೋಗೇಶ್ವರಿಯಾಗುತ್ತೀರಿ ಮತ್ತು ರಾಜ ರಾಜೇಶ್ವರಿಯಾಗುತ್ತೀರಿ. ತಂದೆಯು ಯೋಗವನ್ನು
ಕಲಿಸಿಕೊಡುವ ಈಶ್ವರನಾಗಿದ್ದಾರೆ. ತಾನು ಸ್ವಯಂ ಕಲಿಯುವುದಿಲ್ಲ, ಮಕ್ಕಳಿಗೆ ಕಲಿಸಿ ಕೊಡುತ್ತಾರೆ.
ಕೃಷ್ಣನ ಆತ್ಮವೇ ಅಂತಿಮ ಜನ್ಮದಲ್ಲಿ ಯೋಗವನ್ನು ಕಲಿತು ಮತ್ತೆ ಕೃಷ್ಣನಾಗುತ್ತದೆ ಆದ್ದರಿಂದ
ಕೃಷ್ಣನಿಗೂ ಯೋಗೇಶ್ವರನೆಂದು ಹೇಳಿ ಬಿಡುತ್ತಾರೆ ಏಕೆಂದರೆ ಕೃಷ್ಣನ ಆತ್ಮವು ಈಗ ಕಲಿಯುತ್ತಿದೆ.
ಯೋಗೇಶ್ವರನಿಂದ ಯೋಗವನ್ನು ಕಲಿತು ಕೃಷ್ಣನ ಪದವಿಯನ್ನು ಪಡೆಯುತ್ತಾರೆ. ಈಗ ಇವರ ಹೆಸರು ತಂದೆಯು
ಬ್ರಹ್ಮಾನೆಂದು ಇಟ್ಟಿದ್ದಾರೆ. ಮೊದಲಂತೂ ಲೌಕಿಕ ಹೆಸರಿತ್ತು, ನಂತರ ಮರುಜೀವಿಯಾಗಿದ್ದಾರೆ. ಆತ್ಮವೇ
ತಂದೆಯ ಮಗುವಾಗಬೇಕಾಗಿದೆ, ತಂದೆಯ ಮಗುವಾಗುವುದು ಎಂದರೆ ಲೌಕಿಕದಿಂದ ಸತ್ತಂತೆ ಆಯಿತಲ್ಲವೆ. ನೀವೂ
ಸಹ ತಂದೆಯ ಮೂಲಕ ಯೋಗವನ್ನು ಕಲಿಯುತ್ತೀರಿ. ಈ ಸಂಸ್ಕಾರಗಳಿಂದಲೇ ನೀವು ಶಾಂತಿಧಾಮಕ್ಕೆ ಹೋಗುತ್ತೀರಿ.
ನಂತರ ಪ್ರಾಲಬ್ಧದ ಹೊಸ ಪಾತ್ರವು ಇಮರ್ಜ್ ಆಗುವುದು. ಅಲ್ಲಿ ಈ ಮಾತುಗಳು ನೆನಪಿರುವುದಿಲ್ಲ. ಇದನ್ನು
ಈಗಲೇ ತಂದೆಯು ತಿಳಿಸುತ್ತಾರೆ - ಈಗ ಪಾತ್ರವು ಮುಕ್ತಾಯವಾಗುತ್ತದೆ ಮತ್ತೆ ಹೊಸದಾಗಿ ಆರಂಭವಾಗುವುದು.
ಹೇಗೆ ತಂದೆಗೂ ನಾನು ಮಕ್ಕಳ ಬಳಿ ಹೋಗಬೇಕು ಎಂಬ ಸಂಕಲ್ಪವು ಬರುತ್ತದೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ನಾನು ಬರುತ್ತೇನೆ ಮತ್ತು ವಾಣಿ ನುಡಿಸಲು ಆರಂಭಿಸುತ್ತೇನೆ. ಅಲ್ಲಂತೂ
ಶಾಂತಿಯಲ್ಲಿರುತ್ತೇನೆ ಮತ್ತೆ ಡ್ರಾಮಾನುಸಾರ ಪಾತ್ರವು ಆರಂಭವಾಗಿ ಬಿಡುತ್ತದೆ. ಕೆಳಗೆ ಬರುವ
ಸಂಕಲ್ಪವೂ ಬರುತ್ತದೆ, ಮತ್ತೆ ಇಲ್ಲಿ ಬಂದು ಪಾತ್ರವನ್ನಭಿನಯಿಸುತ್ತಾರೆ. ನೀವಾತ್ಮಗಳೂ ಕೇಳುತ್ತೀರಿ
- ನಂಬರ್ವಾರ್ ಪುರುಷಾರ್ಥದನುಸಾರ ಕಲ್ಪದ ಹಿಂದಿನ ತರಹ. ದಿನ-ಪ್ರತಿ ದಿನ ವೃದ್ಧಿಯನ್ನು ಹೊಂದುತ್ತಾ
ಹೋಗುತ್ತೀರಿ. ಒಂದಾನೊಂದುದಿನ ನಿಮಗೆ ಬಹಳ ದೊಡ್ಡ ಮನೆಯೂ ಸಿಗುವುದು ಆಗ ದೊಡ್ಡ-ದೊಡ್ಡವರೂ
ಬರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ಕೇಳುತ್ತಾರೆ, ಸಮಯ ಕಳೆದಂತೆ ಸಾಹುಕಾರರೂ ಸಾಧಾರಣ
ಪ್ರಜೆಗಳಾಗುತ್ತಾ ಹೋಗುತ್ತಾರೆ, ಹೊಟ್ಟೆಯು ಬೆನ್ನಿಗೆ ತಾಕುತ್ತದೆ. ಇಂತಹ ಆಪತ್ತುಗಳು ಬರಲಿವೆ,
ಬೆಂಕಿಯ ಮಳೆ ಬೀಳುತ್ತದೆ. ಆಗ ಇಡೀ ಹೊಲ ಗದ್ದೆಗಳೆಲ್ಲವೂ ನೀರಿನಲ್ಲಿ ಮುಳುಗಿ ಹೋಗುವುದು. ಆ
ಪ್ರಾಕೃತಿಕ ಆಪತ್ತುಗಳೂ ಸಹ ಬರಲಿವೆ ವಿನಾಶವಾಗಲಿದೆ. ಇದಕ್ಕೆ ಸೃಷ್ಟಿಯ ವಿಕೋಪಗಳೆಂದು
ಹೇಳಲಾಗುತ್ತದೆ. ವಿನಾಶವಾಗುವುದಂತೂ ಖಚಿತವೆಂದು ಬುದ್ಧಿಯು ಹೇಳುತ್ತದೆ. ಅಲ್ಲಿಗಾಗಿ (ವಿದೇಶದ ಕಡೆ)
ಬಾಂಬುಗಳೂ ತಯಾರಾಗಿವೆ ಮತ್ತು ಇಲ್ಲಿಗಾಗಿ ಪ್ರಾಕೃತಿಕ ಆಪತ್ತುಗಳೂ ಬರಲಿವೆ, ಇದರಲ್ಲಿ ಬಹಳ ಸಾಹಸ
ಬೇಕು. ಅಂಗಧನ ಉದಾಹರಣೆಯಿದೆಯಲ್ಲವೆ, ಅವನನ್ನು ಯಾರೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಈ
ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಿ - ನಾನಾತ್ಮನಾಗಿದ್ದೇನೆ, ಶರೀರದ ಪರಿವೆಯು ಕಳೆಯುತ್ತಾ ಹೋಗಲಿ.
ಸತ್ಯಯುಗದಲ್ಲಂತೂ ತನ್ನ ಸಮಯವು ಮುಗಿದಾಗ ತಾನಾಗಿಯೇ ನಾನೀಗ ಈ ಶರೀರವನ್ನು ಬಿಟ್ಟುಹೋಗಿ
ಮಗುವಾಗುತ್ತೇನೆ ಎಂದು ಸಾಕ್ಷಾತ್ಕಾರವಾಗುತ್ತದೆ. ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದರಲ್ಲಿ
ಆತ್ಮವು ಪ್ರವೇಶ ಮಾಡುತ್ತದೆ, ಅಲ್ಲಿ ಯಾವುದೇ ಶಿಕ್ಷೆ ಇತ್ಯಾದಿಗಳಿರುವುದಿಲ್ಲ. ದಿನ-ಪ್ರತಿದಿನ
ನೀವು ಸಮೀಪ ಬರುತ್ತಾ ಹೋಗುತ್ತೀರಿ. ತಂದೆಯು ತಿಳಿಸುತ್ತಾರೆ - ನನ್ನಲ್ಲಿ ಯಾವ ಪಾತ್ರವು
ಅಡಕವಾಗಿದೆಯೋ ಅದು ತೆರೆಯಲ್ಪಡುತ್ತಾ ಹೋಗುವುದು. ಎಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾ ಹೋಗುತ್ತಾರೆ.
ತಂದೆಯ ಪಾತ್ರವು ಪೂರ್ಣವಾದರೆ ನಿಮ್ಮ ಪಾತ್ರವೂ ಪೂರ್ಣವಾಗಿ ಬಿಡುತ್ತದೆ ನಂತರ ನಿಮ್ಮ ಸತ್ಯಯುಗದ
ಪಾತ್ರವು ಆರಂಭವಾಗುವುದು. ಈಗ ನೀವು ತಮ್ಮ ರಾಜ್ಯವನ್ನು ತೆಗೆದುಕೊಳ್ಳಬೇಕಾಗಿದೆ. ಈ ನಾಟಕವು ಬಹಳ
ಯುಕ್ತಿಯಿಂದ ಮಾಡಲ್ಪಟ್ಟಿದೆ. ನೀವು ಮಾಯೆಯ ಮೇಲೆ ಜಯ ಗಳಿಸುತ್ತೀರಿ. ಇದರಲ್ಲಿಯೂ ಸಮಯ
ಹಿಡಿಸುತ್ತದೆ. ಅವರಂತೂ ಒಂದು ಕಡೆ ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ, ಇದು ಸುಖಧಾಮವಾಗಿ
ಬಿಟ್ಟಿದೆ ಎಂದು ತಿಳಿಯುತ್ತಾರೆ, ಇನ್ನೊಂದು ಕಡೆ ಗೀತೆಯಲ್ಲಿಯೂ ಭಾರತದ ಸ್ಥಿತಿಯನ್ನು
ತಿಳಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಮನುಷ್ಯರಂತೂ ಇನ್ನೂ ತಮೋಪ್ರಧಾನರಾಗಿ
ಬಿಟ್ಟಿದ್ದಾರೆ, ಡ್ರಾಮಾನುಸಾರ ಇನ್ನೂ ಬೇಗಬೇಗನೆ ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ನೀವೀಗ
ಸತೋಪ್ರಧಾನರಾಗುತ್ತಿದ್ದೀರಿ. ಇನ್ನೂ ಸಮೀಪಕ್ಕೆ ಹೋಗುತ್ತಿದ್ದೀರಿ, ಕೊನೆಗೆ ವಿಜಯವು ನಿಮ್ಮದೇ
ಆಗಲಿದೆ. ಹಾಹಾಕಾರದ ನಂತರ ಜಯ ಜಯಕಾರವಾಗುವುದು, ತುಪ್ಪದ ನದಿಗಳು ಹರಿಯುತ್ತವೆ. ಸತ್ಯಯಗದಲ್ಲಿ
ತುಪ್ಪ ಇತ್ಯಾದಿಗಳನ್ನು ಖರೀದಿಸಬೇಕಾಗಿಲ್ಲ, ಎಲ್ಲರ ಬಳಿ ತಮ್ಮದೇ ಆದ ಬಹಳ ಸುಂದರವಾದ
ಹಸುಗಳಿರುತ್ತವೆ, ನೀವು ಎಷ್ಟು ಶ್ರೇಷ್ಠರಾಗುತ್ತೀರಿ! ನಿಮಗೆ ತಿಳಿದಿದೆ - ವಿಶ್ವದ
ಚರಿತ್ರೆ-ಭೂಗೋಳವು ಮತ್ತೆ ಪುನರಾವರ್ತನೆಯಾಗುತ್ತದೆ. ತಂದೆಯು ಬಂದು ವಿಶ್ವದ ಇತಿಹಾಸವನ್ನು
ಪುನರಾವರ್ತನೆ ಮಾಡುತ್ತಾರೆ ಆದ್ದರಿಂದ ತಂದೆಯು ಹೇಳಿದರು - ಇದನ್ನೂ ಸಹ ಬರೆಯಿರಿ, ವಿಶ್ವದ
ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ.
ಬುದ್ಧಿವಂತರಾಗಿದ್ದರೆ ಅವರು ಹೇಳುವರು, ಈಗ ಕಲಿಯುಗವಿದೆಯೆಂದರೆ ಇದರ ನಂತರ ಅವಶ್ಯವಾಗಿ ಸತ್ಯಯುಗವೇ
ಪುನರಾವರ್ತನೆಯಾಗುವುದು ಎಂದು. ಇನ್ನೂ ಕೆಲವರು ಹೇಳುತ್ತಾರೆ - ಸೃಷ್ಟಿಚಕ್ರವು ಲಕ್ಷಾಂತರದ
ವರ್ಷಗಳದ್ದಾಗಿದೆ, ಈಗ ಹೇಗೆ ಪುನರಾವರ್ತನೆಯಾಗುವುದು! ಇಲ್ಲಿ ಸೂರ್ಯವಂಶೀ-ಚಂದ್ರವಂಶೀಯರ
ಚರಿತ್ರೆಯಂತೂ ಇಲ್ಲ, ಅಂತ್ಯದವರೆಗೆ ಈ ಚಕ್ರವು ಹೇಗೆ ಪುನರಾವರ್ತನೆಯಾಗುತ್ತದೆ, ಮತ್ತೆ ಈ ರಾಜ್ಯವು
ಯಾವಾಗ ಬರುವುದು ಎಂಬುದೇನನ್ನೂ ತಿಳಿದುಕೊಂಡಿಲ್ಲ. ರಾಮ ರಾಜ್ಯದ ಬಗ್ಗೆ ತಿಳಿದುಕೊಂಡಿಲ್ಲ ಈಗ
ತಂದೆಯು ನಿಮ್ಮ ಜೊತೆ ಇದ್ದಾರೆ, ಯಾರಕಡೆ ಸಾಕ್ಷಾತ್ ಪರಮಪಿತ ಪರಮಾತ್ಮನಿದ್ದಾರೆ ಅವರ ವಿಜಯವು
ಖಂಡಿತ ಆಗುವುದು. ತಂದೆಯು ಹಿಂಸೆಯನ್ನೇನೂ ಮಾಡಿಸುವುದಿಲ್ಲ. ಯಾರನ್ನಾದರೂ ಹೊಡೆಯುವುದು
ಹಿಂಸೆಯಲ್ಲವೆ. ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಹಿಂಸೆಯಾಗಿದೆ, ನೀವೀಗ ಡಬಲ್
ಅಹಿಂಸಕರಾಗುತ್ತಿದ್ದೀರಿ. ಸತ್ಯಯುಗದಲ್ಲಿ ಅಹಿಂಸಾ ಪರಮೋ ದೇವಿ-ದೇವತಾ ಧರ್ಮವಿರುತ್ತದೆ. ಅಲ್ಲಿ
ಹೊಡೆದಾಡುವುದೂ ಇಲ್ಲ, ವಿಕಾರದಲ್ಲಿಯೂ ಹೋಗುವುದಿಲ್ಲ. ಈಗ ನಿಮ್ಮದು ಯೋಗಬಲವಾಗಿದೆ ಆದರೆ ಇದನ್ನು
ತಿಳಿದುಕೊಳ್ಳದಿರುವ ಕಾರಣ ಶಾಸ್ತ್ರಗಳಲ್ಲಿ ಅಸುರರು ಮತ್ತು ದೇವತೆಗಳ ಯುದ್ಧವೆಂದು ಬರೆದಿದ್ದಾರೆ,
ಅಹಿಂಸೆಯನ್ನು ಯಾರೂ ತಿಳಿದುಕೊಂಡಿಲ್ಲ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ನೀವು ರಕ್ಷಣಾ
ಸೈನಿಕರಾಗಿದ್ದೀರಿ. ಬಹಳ ಪ್ರಸಿದ್ಧ ಸೈನಿಕರು ಆದರೆ ಗುಪ್ತ ಸೈನಿಕರಾಗಿದ್ದೀರಿ. ನಿಮ್ಮನ್ನು
ಯಾರಾದರೂ ಸೈನಿಕರೆಂದು ತಿಳಿಯುತ್ತಾರೆಯೇ? ನಿಮ್ಮ ಮೂಲಕ ಎಲ್ಲರಿಗೂ ಮನ್ಮನಾಭವದ ಸಂದೇಶವು
ಸಿಗುತ್ತದೆ. ಇದು ಮಹಾಮಂತ್ರವಾಗಿದೆ, ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ.
ಸತ್ಯಯುಗ-ತ್ರೇತಾಯುಗದಲ್ಲಿ ಇದೇನೂ ಇರುವುದಿಲ್ಲ. ಮಂತ್ರದಿಂದ ನೀವು ರಾಜ್ಯವನ್ನು ಪಡೆದಮೇಲೆ ಮತ್ತೆ
ಇದರ ಅವಶ್ಯಕತೆಯಿಲ್ಲ. ನಾವು ಹೇಗೆ ಚಕ್ರವನ್ನು ಸುತ್ತುತ್ತಾ ಬಂದಿದ್ದೇವೆಂದು ನೀವು
ತಿಳಿದುಕೊಳ್ಳುತ್ತಾ ಬಂದಿದ್ದೀರಿ. ಈಗ ತಂದೆಯು ಮಹಾಮಂತ್ರವನ್ನು ಕೊಡುತ್ತಾರೆ ನಂತರ ನೀವು
ಅರ್ಧಕಲ್ಪ ರಾಜ್ಯಭಾರ ಮಾಡುತ್ತೀರಿ. ನೀವೀಗ ದೈವೀ ಗುಣಗಳನ್ನು ಧಾರಣೆ ಮಾಡಬೇಕು ಮತ್ತು
ಮಾಡಿಸಬೇಕಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಮಕ್ಕಳೇ, ಚಾರ್ಟನ್ನಿಡುವುದರಿಂದ ಬಹಳ ಮಜಾ
ಬರುವುದು. ರಿಜಿಸ್ಟರ್ನಲ್ಲಿ ಉತ್ತಮ, ಅತ್ಯುತ್ತಮ, ಸರ್ವೋತ್ತಮ ಎಂದು ಇರುತ್ತದೆಯಲ್ಲವೆ. ತಾವೂ
ಇದನ್ನು ಅನುಭವ ಮಾಡಬೇಕು, ಕೆಲವರು ಚೆನ್ನಾಗಿ ಓದುತ್ತಾರೆ, ಕೆಲವರಿಗೆ ಗಮನವಿಲ್ಲವೆಂದರೆ
ಅನುತ್ತೀರ್ಣರಾಗಿ ಬಿಡುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ. ತಂದೆಯು ಶಿಕ್ಷಕನೂ ಆಗಿದ್ದಾರೆ,
ಗುರುವೂ ಆಗಿದ್ದಾರೆ. ಪಾತ್ರವು ಒಟ್ಟಿಗೆ ನಡೆಯುತ್ತದೆ. ಈ ಒಬ್ಬರೇ ತಂದೆಯು ಹೇಳುತ್ತಾರೆ -
ಮರುಜೀವಿಗಳಾಗಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತಂದೆಯು ತಿಳಿಸುತ್ತಾರೆ
- ನಾನು ನಿಮ್ಮ ತಂದೆಯಾಗಿದ್ದೇನೆ, ಬ್ರಹ್ಮಾರವರ ಮೂಲಕ ರಾಜ್ಯವನ್ನು ಕೊಡುತ್ತೇನೆ, ಇವರು (ಬ್ರಹ್ಮಾ)
ಮಧ್ಯದಲ್ಲಿ ದಲ್ಲಾಳಿಯಾಯಾಗಿದ್ದಾರೆ, ಇವರೊಂದಿಗೆ ಬುದ್ಧಿಯೋಗವನ್ನಿಡಬಾರದು. ಈಗ ನಿಮ್ಮ
ಬುದ್ಧಿಯೋಗವು ಆ ತಮ್ಮ ಪತಿಯರ ಪತಿ ಶಿವ ಪ್ರಿಯತಮನ ಜೊತೆ ಇದೆ. ಇವರ (ಬ್ರಹ್ಮಾ) ಮೂಲಕ ನೀವು
ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತೀರಿ. ಆ ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು
ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ, ಈಗ ನಾವಾತ್ಮಗಳು ಪಾತ್ರವನ್ನು ಪೂರ್ಣಗೊಳಿಸಿದೆವು,
ಈಗ ತಂದೆಯ ಬಳಿ ಮನೆಗೆ ಹೋಗಬೇಕಾಗಿದೆ. ಈಗಂತೂ ಇಡೀ ಸೃಷ್ಟಿಯು ತಮೋಪ್ರಧಾನವಾಗಿದೆ. ಪಂಚತತ್ವಗಳೂ
ತಮೋಪ್ರಧಾನವಾಗಿದೆ. ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸದಾಗಿರುವುದು, ಇಲ್ಲಾದರೆ ನೋಡಿ ವಜ್ರ
ವೈಡೂರ್ಯಗಳ ಮಹಲುಗಳೂ ಇಲ್ಲ. ಮತ್ತೆ ಸತ್ಯಯುಗದಲ್ಲಿ ಎಲ್ಲಿಂದ ಬರುತ್ತದೆ? ಈಗ ಯಾವ ಗಣಿಗಳು
ಖಾಲಿಯಾಗಿ ಬಿಟ್ಟಿದೆಯೋ ಅದೆಲ್ಲವೂ ಈಗ ಪುನಃ ತುಂಬಲ್ಪಡುತ್ತದೆ, ಗಣಿಗಳಿಂದ ಅಗೆದು ಹೊರ
ತೆಗೆಯುತ್ತಾರೆ. ವಿಚಾರ ಮಾಡಿ, ಎಲ್ಲವೂ ಹೊಸ ವಸ್ತುಗಳಾಗಿರುತ್ತವೆಯಲ್ಲವೆ. ದೀಪ ಇತ್ಯಾದಿಗಳೂ ಸಹ
ಸ್ವಾಭಾವಿಕವಾಗಿರುತ್ತವೆ. ವಿಜ್ಞಾನವನ್ನು ಇಲ್ಲಿಯೇ ಕಲಿಯುತ್ತಾರೆ, ಮತ್ತೆ ಅಲ್ಲಿ ಇವೆಲ್ಲವೂ
ಕೆಲಸಕ್ಕೆ ಬರುತ್ತದೆ. ಹೆಲಿಕ್ಯಾಫ್ಟರ್ಗಳು ನಿಂತಿರುತ್ತವೆ, ಗುಂಡಿಯನ್ನು ಒತ್ತಿದ ತಕ್ಷಣ ಹಾರಿ
ಹೋಗುತ್ತಾರೆ. ಯಾವುದೇ ಕಷ್ಟವಿಲ್ಲ. ಅಲ್ಲಿ ಎಲ್ಲವೂ ಬಹಳ ಭದ್ರತೆಯಿಂದ ಕೂಡಿರುತ್ತವೆ, ಯಾವುದೇ
ಯಂತ್ರಗಳು ಹಾಳಾಗುವುದಿಲ್ಲ. ಮನೆಯಲ್ಲಿ ಕುಳಿತಿದ್ದಂತೆಯೇ ಸೆಕೆಂಡಿನಲ್ಲಿ ಶಾಲೆ ಅಥವಾ ತಿರುಗಾಡಲು
ಹೋಗಿ ಬಿಡುತ್ತಾರೆ, ಪ್ರಜೆಗಳಿಗೆ ಅವರಿಗಿಂತಲೂ ಕಡಿಮೆಯಿರುತ್ತದೆ. ನಿಮಗಾಗಿ ಅಲ್ಲಿ ಎಲ್ಲಾ
ಸುಖವಿರುತ್ತದೆ, ಅಕಾಲ ಮೃತ್ಯುವಾಗಲು ಸಾಧ್ಯವಿಲ್ಲ ಅಂದಮೇಲೆ ನೀವು ಮಕ್ಕಳು ವಿದ್ಯೆಯ ಮೇಲೆ
ಎಷ್ಟೊಂದು ಗಮನ ಕೊಡಬೇಕು! ಮಾಯೆಯ ಪ್ರಭಾವವು ಬಹಳಷ್ಟಿದೆ, ಇದು ಮಾಯೆಯ ಅಂತಿಮ ಆಡಂಬರವಾಗಿದೆ.
ಯುದ್ಧದಲ್ಲಿ ನೋಡಿ, ಎಷ್ಟೊಂದು ಮಂದಿ ಸಾವನ್ನಪ್ಪುತ್ತಾರೆ! ಯುದ್ಧವು ನಿಲ್ಲುವುದೇ ಇಲ್ಲ, ಇಷ್ಟು
ದೊಡ್ಡ ಪ್ರಪಂಚವೆಲ್ಲಿ, ಕೇವಲ ಒಂದು ಸ್ವರ್ಗವೆಲ್ಲಿ! ಸತ್ಯಯುಗದಲ್ಲಿ ಗಂಗೆಯು ಪತಿತ-ಪಾವನಿ ಎಂದು
ಹೇಳುವುದಿಲ್ಲ. ಅಲ್ಲಿ ಭಕ್ತಿಮಾರ್ಗದ ಯಾವುದೇ ಮಾತಿಲ್ಲ. ಈ ಗಂಗಾ ನದಿಯಲ್ಲಿ ನೋಡಿ, ಇಡೀ ನಗರದ
ಕಸವೆಲ್ಲವೂ ಬಂದು ಬೀಳುತ್ತಿರುತ್ತದೆ. ಬಾಂಬೆಯ ಕಸವೆಲ್ಲವೂ ಸಾಗರದಲ್ಲಿ ಹೋಗಿ ಬೀಳುವುದು.
ಭಕ್ತಿಯಲ್ಲಿ ನೀವು
ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸುತ್ತೀರಿ, ವಜ್ರ-ವೈಡೂರ್ಯಗಳ ಸುಖವಂತೂ ಇರುತ್ತದೆಯಲ್ಲವೆ.
ಮುಕ್ಕಾಲು ಭಾಗದಷ್ಟು ಸುಖವಿರುತ್ತದೆ, ಇನ್ನು ಕಾಲು ಭಾಗ ದುಃಖವಿರುತ್ತದೆ. ಸುಖ-ದುಃಖವು
ಸರಾಸರಿಯಿದ್ದರೆ ಅದರ ಆನಂದವಿರುವುದಿಲ್ಲ. ಭಕ್ತಿಮಾರ್ಗದಲ್ಲಿಯೂ ನೀವು ಬಹಳ ಸುಖಿಯಾಗಿರುತ್ತೀರಿ
ನಂತರ ಮಂದಿರಗಳನ್ನು ವಿದೇಶಿಯರು ಬಂದು ಲೂಟಿ ಮಾಡಿಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ ನೀವು
ಎಷ್ಟು ಸಾಹುಕಾರರಾಗಿದ್ದಿರಿ! ಅಂದಾಗ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಲಕ್ಷ್ಯವಂತೂ ನಿಮ್ಮ
ಸನ್ಮುಖದಲ್ಲಿದೆ, ಮಮ್ಮಾ-ಬಾಬಾರವರ ಪದವಿಯಂತೂ ನಿಶ್ಚಿತವಾಗಿದೆ. ಖುಷಿಯಂತಹ ಔಷಧಿಯಿಲ್ಲವೆಂದು
ಗಾಯನವಿದೆ. ಯೋಗದಿಂದಲೇ ಆಯಸ್ಸು ವೃದ್ಧಿಯಾಗುತ್ತದೆ.
ಈಗ ಆತ್ಮಕ್ಕೆ ನಾವು ಹೇಗೆ
84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆಂದು ಸ್ವಯಂನ ದರ್ಶನವಾಗಿದೆ. ಇಷ್ಟೊಂದು ಪಾತ್ರ ಮಾಡುವರು.
ಎಲ್ಲಾ ಪಾತ್ರಧಾರಿ ಆತ್ಮಗಳು ಕೆಳಗಡೆ ಬಂದನಂತರ ತಂದೆಯು ಮತ್ತೆ ಎಲ್ಲರನ್ನೂ ಕರೆದುಕೊಂಡು
ಹೋಗುತ್ತಾರೆ. ಶಿವನ ಮೆರವಣಿಗೆಯೆಂದು ಹೇಳುತ್ತಾರಲ್ಲವೆ. ಇದೆಲ್ಲವನ್ನೂ ನಂಬರ್ವಾರ್
ಪುರುಷಾರ್ಥದನುಸಾರ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನೀವು ಎಷ್ಟು ನೆನಪಿನಲ್ಲಿರುವಿರೊ ಅಷ್ಟು
ಖುಷಿಯಲ್ಲಿರುತ್ತೀರಿ. ದಿನ-ಪ್ರತಿದಿನ ಅನುಭವ ಮಾಡುತ್ತಾ ಇರುತ್ತೀರಿ ಏಕೆಂದರೆ ಕಲಿಸಿ ಕೊಡುವವರು
ಆ ತಂದೆಯಲ್ಲವೆ. ಇವರೂ (ಬ್ರಹ್ಮಾ) ಕಲಿಸುತ್ತಿರುತ್ತಾರೆ, ಇವರಿಗೆ ಕೇಳುವ ಅವಶ್ಯಕತೆಯಿರುವುದಿಲ್ಲ
ನೀವೇ ಕೇಳುತ್ತೀರಿ. ಅದನ್ನು ಇವರು ಕೇಳಿಸಿಕೊಳ್ಳುತ್ತಾರೆ. ತಂದೆಯು ಪ್ರತ್ಯುತ್ತರ ಕೊಡುತ್ತಾರೆ
ಮತ್ತು ಅದನ್ನು ಇವರೂ ಕೇಳಿಸಿಕೊಳ್ಳುತ್ತಾರೆ. ಇವರ ಚಟುವಟಿಕೆಯು ಬಹಳ ವಿಚಿತ್ರವಾಗಿದೆ. ಇವರೂ
ನೆನಪಿನಲ್ಲಿರುತ್ತಾರೆ, ಮತ್ತೆ ವರ್ಣನೆ ಮಾಡಿ ಮಕ್ಕಳಿಗೆ ತಿಳಿಸುತ್ತಾರೆ – ಶಿವ ತಂದೆಯು ನಮಗೆ
ತಿನ್ನಿಸುತ್ತಾರೆ, ನಾನು ಅವರಿಗೆ ರಥವನ್ನು ಕೊಡುತ್ತೇನೆ, ಅವರು ಸವಾರಿ ಮಾಡುತ್ತಾರೆ ಅಂದಮೇಲೆ ಏಕೆ
ತಿನ್ನಿಸುವುದಿಲ್ಲ. ಇದು ಶರೀರರೂಪಿ ಅಶ್ವವಾಗಿದೆ. ಶಿವ ತಂದೆಯ ರಥವಾಗಿದ್ದೇನೆ ಎಂಬ
ಸಂಕಲ್ಪವಿದ್ದರೂ ಸಹ ಶಿವ ತಂದೆಯ ನೆನಪಿರುವುದು. ನೆನಪಿನಿಂದಲೇ ಲಾಭವಿದೆ. ಭಂಡಾರದಲ್ಲಿ ಅಡಿಗೆ
ಮಾಡುವಾಗಲೂ ಸಹ ನಾವು ಶಿವ ತಂದೆಯ ಮಕ್ಕಳಿಗಾಗಿ ತಯಾರಿಸುತ್ತೇವೆಂದು ತಿಳಿದುಕೊಳ್ಳಿ. ಶಿವ ತಂದೆಯ
ಮಕ್ಕಳಿಗಾಗಿ ಎಂದು ನೆನಪಿದ್ದರೂ ಸಹ ಲಾಭವೇ ಆಗುವುದು. ಯಾರು ನೆನಪಿನಲ್ಲಿದ್ದು ಕರ್ಮಾತೀತ
ಸ್ಥಿತಿಯನ್ನು ಪಡೆಯುವರು ಮತ್ತು ಸರ್ವೀಸ್ ಮಾಡುವರೋ ಅವರಿಗೇ ಎಲ್ಲರಿಗಿಂತ ಹೆಚ್ಚಿನ ಪದವಿ
ಸಿಗುವುದು. ಈ ಬ್ರಹ್ಮಾ ತಂದೆಯು ಬಹಳ ಸೇವೆ ಮಾಡುತ್ತಾರೆ. ಇವರದು ಬೇಹದ್ದಿನ ಸೇವೆಯಾಗಿದೆ, ನೀವು
ಹದ್ದಿನ ಸೇವೆ ಮಾಡುತ್ತೀರಿ. ಸೇವೆಯಿಂದಲೇ ಇವರಿಗೆ ಪದವಿ ಸಿಗುತ್ತದೆ. ಹೀಗೀಗೆ ಮಾಡಿ ಎಂದು ಶಿವ
ತಂದೆಯು ಹೇಳುತ್ತಾರೆ, ಇವರಿಗೂ ಸಲಹೆ ನೀಡುತ್ತಾರೆ. ಬಿರುಗಾಳಿಯು ಮಕ್ಕಳಿಗೆ ಬರುತ್ತದೆ.
ನೆನಪಿಲ್ಲದೆ ಕರ್ಮೇಂದ್ರಿಯಗಳನ್ನು ವಶ ಪಡಿಸಿಕೊಳ್ಳುವುದು ಕಷ್ಟವಾಗುತ್ತದೆ. ನೆನಪಿನಿಂದಲೇ ದೋಣಿಯು
ಪಾರಾಗುವುದು. ಇದನ್ನು ಶಿವ ತಂದೆಯು ಹೇಳುತ್ತಾರೆಯೋ ಅಥವಾ ಬ್ರಹ್ಮಾ ತಂದೆಯು ಹೇಳುತ್ತಾರೆಯೋ
ಎಂಬುದನ್ನು ತಿಳಿದುಕೊಳ್ಳುವುದೂ ಕಷ್ಟವಾಗುತ್ತದೆ. ಇದರಲ್ಲಿ ತಿಳಿದುಕೊಳ್ಳುವ ಬಹಳ ಸೂಕ್ಷ್ಮ
ಬುದ್ಧಿಯು ಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಸಮಯದಲ್ಲಿ
ಸಂಪೂರ್ಣ ಮರುಜೀವಿಗಳಾಗಬೇಕು. ವಿದ್ಯೆಯನ್ನು ಚೆನ್ನಾಗಿ ಓದಬೇಕು, ತಮ್ಮ ಚಾರ್ಟ್ ಅಥವಾ
ರಿಜಿಸ್ಟರನ್ನು ಇಟ್ಟುಕೊಳ್ಳಬೇಕು. ನೆನಪಿನಲ್ಲಿದ್ದು ತಮ್ಮ ಕರ್ಮಾತೀತ ಸ್ಥಿತಿಯನ್ನು
ಪಡೆಯಬೇಕಾಗಿದೆ.
2. ಅಂತಿಮ ವಿನಾಶದ
ದೃಶ್ಯವನ್ನು ನೋಡಲು ಸಾಹಸವಂತರಾಗಬೇಕಾಗಿದೆ. ನಾನು ಆತ್ಮನಾಗಿದ್ದೇನೆ, ಈ ಅಭ್ಯಾಸದಿಂದ ಶರೀರದ
ಅಭಿಮಾನವು ಕಳೆಯುತ್ತಾ ಹೋಗಲಿ.
ವರದಾನ:
ದೇಹಭಾನದ ತ್ಯಾಗ
ಮಾಡಿ ನಿಕ್ರೋಧಿಯಾಗುವ ನಿರ್ಮಾನ ಚಿತ್ತ ಭವ.
ಯಾವ ಮಕ್ಕಳು ದೇಹ ಭಾನದ
ತ್ಯಾಗ ಮಾಡುತ್ತಾರೆಯೋ, ಅವರೆಂದಿಗೂ ಕ್ರೋಧವು ಬರಲು ಸಾಧ್ಯವಿಲ್ಲ ಏಕೆಂದರೆ ಕ್ರೋಧವು ಬರಲು ಎರಡು
ಕಾರಣಗಳಿವೆ - ಒಂದು:- ಯಾವಾಗ ಯಾರೇ ಅಸತ್ಯ ಮಾತನ್ನು ಹೇಳಿದಾಗ ಮತ್ತು ಇನ್ನೊಂದು:- ಯಾವಾಗ ಯಾರೇ
ಗ್ಲಾನಿ ಮಾಡಿದಾಗ. ಇವೆರೆಡೇ ಮಾತುಗಳು ಕ್ರೋಧಕ್ಕೆ ಜನ್ಮ ಕೊಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ
ನಿರ್ಮಾನ ಚಿತ್ತದ ವರದಾನದ ಮೂಲಕ ಅಪಕಾರಿಗೂ ಉಪಕಾರ ಮಾಡಿರಿ, ಗ್ಲಾನಿ ಮಾಡುವವರಿಗೂ
ತಮ್ಮವರೆಂದುಕೊಳ್ಳಿರಿ, ನಿಂದನೆ ಮಾಡುವವರನ್ನು ಸತ್ಯ ಮಿತ್ರನೆಂದು ಸ್ವೀಕರಿಸಿ - ಆಗ ಕಮಾಲ್ ಎಂದು
ಹೇಳುತ್ತೇವೆ. ಯಾವಾಗ ಇಂತಹ ಪರಿವರ್ತನೆಯನ್ನು ತೋರಿಸುತ್ತೀರಿ, ಆಗ ವಿಶ್ವದ ಮುಂದೆ
ಪ್ರಸಿದ್ಧರಾಗುವಿರಿ.
ಸ್ಲೋಗನ್:
ಮೋಜಿನ ಅನುಭವ
ಮಾಡುವುದಕ್ಕಾಗಿ ಮಾಯೆಯ ಅಧೀನತೆಯನ್ನು ಬಿಟ್ಟು ಸ್ವತಂತ್ರರಾಗಿರಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಈಗ ಜ್ವಾಲಾಮುಖಿಯಾಗಿ
ಆಸುರೀ ಸಂಸ್ಕಾರ, ಆಸುರೀ ಸ್ವಭಾವ ಎಲ್ಲವನ್ನು ಭಸ್ಮ ಮಾಡಿ. ಹೇಗೆ ದೇವಿಯರ ನೆನಪಾರ್ಥದಲ್ಲಿ
ತೋರಿಸುತ್ತಾರೆ ಜ್ವಾಲೆಯಿಂದ ಅಸುರರನ್ನು ಸಂಹಾರ ಮಾಡಿದರೆಂದು. ಅಸುರರೆಂದರೆ ಯಾವುದೇ
ವ್ಯಕ್ತಿಯಲ್ಲ ಆದರೆ ಆಸುರೀ ಶಕ್ತಿಗಳನ್ನು ಸಮಾಪ್ತಿ ಮಾಡಿದರು. ಇದು ಈಗ ತಮ್ಮ ಜ್ವಾಲಾ ಸ್ವರೂಪ
ಸ್ಥಿತಿಯ ನೆನಪಾರ್ಥವಾಗಿದೆ. ಈಗ ಇಂತಹ ಯೋಗ ಜ್ವಾಲಾ ಪ್ರಜ್ವಲಿತ ಮಾಡಬೇಕು ಯಾವುದರಿಂದ ಈ ಕಲಿಯುಗೀ
ಸಂಸಾರ ಸುಟ್ಟು ಭಸ್ಮವಾಗಲಿ.