18.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಸಮಯದಲ್ಲಿ ನಿಮ್ಮ ಈ ಜೀವನವು ಬಹಳ-ಬಹಳ ಅಮೂಲ್ಯವಾಗಿದೆ ಏಕೆಂದರೆ ನೀವು ಹದ್ದಿನಿಂದ ಹೊರಬಂದು
ಬೇಹದ್ದಿನಲ್ಲಿ ಬಂದಿದ್ದೀರಿ, ನಿಮಗೆ ತಿಳಿದಿದೆ - ನಾವು ಈ ಜಗತ್ತಿನ ಕಲ್ಯಾಣ ಮಾಡುವವರಾಗಿದ್ದೇವೆ”
ಪ್ರಶ್ನೆ:
ತಂದೆಯ ಆಸ್ತಿಯ
ಅಧಿಕಾರವು ಯಾವ ಪುರುಷಾರ್ಥದಿಂದ ಪ್ರಾಪ್ತವಾಗುತ್ತದೆ?
ಉತ್ತರ:
ಸದಾ
ಸಹೋದರ-ಸಹೋದರರೆನ್ನುವ ದೃಷ್ಟಿಯಿರಲಿ. ಸ್ತ್ರೀ-ಪುರುಷರೆಂಬ ಪರಿವೆಯೂ ಸಹ ಹೊರಟುಹೋಗಲಿ ಆಗ ತಂದೆಯ
ಆಸ್ತಿಯ ಪೂರ್ಣ ಅಧಿಕಾರವು ಪ್ರಾಪ್ತವಾಗುತ್ತದೆ ಆದರೆ ಸ್ತ್ರೀ-ಪುರುಷರೆಂಬ ಪರಿವೆಯು, ದೃಷ್ಟಿಯು
ಹೋಗುವುದು ಬಹಳ ಕಷ್ಟ. ಇದಕ್ಕಾಗಿ ಆತ್ಮಾಭಿಮಾನಿಗಳಾಗುವ ಅಭ್ಯಾಸವು ಬೇಕು. ಯಾವಾಗ ತಂದೆಯ
ಮಕ್ಕಳಾಗುವಿರಿ ಆಗ ಆಸ್ತಿಯು ಸಿಗುವುದು. ಯಾರು ಒಬ್ಬ ತಂದೆಯ ನೆನಪಿನಿಂದ ಸತೋಪ್ರಧಾನರಾಗುವರೋ ಅವರೇ
ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯುವರು.
ಗೀತೆ:
ಕೊನೆಗೂ ಆ ದಿನ
ಇಂದು ಬಂದಿತು.................
ಓಂ ಶಾಂತಿ.
ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ಓಂ ಎಂದರೆ ನಾನು ಆತ್ಮ, ಇದು ನನ್ನ ಶರೀರವಾಗಿದೆ. ನೀವೀಗ
ಈ ನಾಟಕ, ಸೃಷ್ಟಿಚಕ್ರ ಮತ್ತು ಸೃಷ್ಟಿಚಕ್ರವನ್ನು ಅರಿತುಕೊಂಡಿರುವಂತಹ ತಂದೆಯನ್ನು
ತಿಳಿದುಕೊಂಡಿದ್ದೀರಿ, ಏಕೆಂದರೆ ಚಕ್ರವನ್ನು ಅರಿತುಕೊಂಡಿರುವವರಿಗೆ ರಚಯಿತನೆಂದೇ ಹೇಳಲಾಗುತ್ತದೆ.
ರಚಯಿತ ಮತ್ತು ರಚನೆಯನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಭಲೆ ಬಹಳಷ್ಟು ಓದಿರುವ ದೊಡ್ಡ-ದೊಡ್ಡ
ಪಂಡಿತ, ವಿಧ್ವ್ವಾಂಸರಿದ್ದಾರೆ ಆದರೆ ಅವರಿಗೆ ಅಭಿಮಾನವಂತೂ ಇರುತ್ತದೆಯಲ್ಲವೆ. ಆದರೆ ಅವರಿಗಿದು
ತಿಳಿದಿಲ್ಲ. ಜ್ಞಾನ, ಭಕ್ತಿ, ವೈರಾಗ್ಯವೆಂದು ಹೇಳುತ್ತಾರೆ, ಈ ಮೂರೂ ಮಾತುಗಳ ಅರ್ಥವನ್ನು ಅವರು
ತಿಳಿದುಕೊಂಡಿಲ್ಲ. ಸನ್ಯಾಸಿಗಳಿಗೆ ಗೃಹಸ್ಥದಿಂದ ವೈರಾಗ್ಯವುಂಟಾಗುತ್ತದೆ. ಅವರಿಗೂ ಸಹ ಶ್ರೇಷ್ಠ
ಮತ್ತು ಕನಿಷ್ಟರೆಂಬ ಈರ್ಷೆಯಿರುತ್ತದೆ. ಇವರು ಶ್ರೇಷ್ಠಕುಲದವರಾಗಿದ್ದಾರೆ, ಇವರು
ಮಧ್ಯಮಕುಲದವರಾಗಿದ್ದಾರೆ ಎಂಬುದರ ಬಗ್ಗೆ ಅವರಲ್ಲಿ ಬಹಳಷ್ಟು ನಡೆಯುತ್ತದೆ. ಕುಂಭಮೇಳದಲ್ಲಿಯೂ
ಮೊದಲು ಯಾರ ಸವಾರಿ ನಡೆಯಬೇಕೆಂಬುದರ ಮೇಲೆ ಬಹಳಷ್ಟು ಜಗಳವಾಗಿಬಿಡುತ್ತದೆ. ಇದಕ್ಕಾಗಿ ಬಹಳ
ಹೊಡೆದಾಡುತ್ತಾರೆ ಮತ್ತೆ ಪೆÇೀಲಿಸರು ಬಂದು ಬಿಡಿಸುತ್ತಾರೆ ಅಂದಮೇಲೆ ಇದೂ ಸಹ
ದೇಹಾಭಿಮಾನವಾಯಿತಲ್ಲವೆ. ಪ್ರಪಂಚದಲ್ಲಿ ಯಾರೆಲ್ಲಾ ಮನುಷ್ಯಾತ್ಮರಿದ್ದಾರೆಯೋ ಎಲ್ಲರೂ
ದೇಹಾಭಿಮಾನಿಗಳಾಗಿದ್ದಾರೆ. ಈಗಂತೂ ನೀವು ದೇಹಿ-ಅಭಿಮಾನಿಯಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ -
ದೇಹಾಭಿಮಾನವನ್ನು ಬಿಡಿ, ತನ್ನನ್ನು ಆತ್ಮವೆಂದು ತಿಳಿಯಿರಿ. ಆತ್ಮವೇ ಪತಿತವಾಗಿದೆ, ಅದರಲ್ಲಿ
ತುಕ್ಕುಹಿಡಿದಿದೆ. ಆತ್ಮವೇ ಸತೋಪ್ರಧಾನ, ತಮೋಪ್ರಧಾನವಾಗುತ್ತದೆ. ಆತ್ಮವು ಹೇಗೋ ಅದರ ಅಧಾರದ ಮೇಲೆ
ಶರೀರವು ಸಿಗುತ್ತದೆ. ಕೃಷ್ಣನ ಆತ್ಮವು ಸುಂದರ (ಪಾವನ) ವಾಗಿರುವುದರಿಂದ ಕೃಷ್ಣನಿಗೆ ಶರೀರವು ಬಹಳ
ಸುಂದರವಾಗಿರುತ್ತದೆ. ಆ ಶರೀರದಲ್ಲಿ ಬಹಳ ಆಕರ್ಷಣೆಯಿರುತ್ತದೆ. ಪವಿತ್ರ ಆತ್ಮವೇ ಆಕರ್ಷಣೆ
ಮಾಡುತ್ತದೆ. ಕೃಷ್ಣನಿಗಿರುವಷ್ಟು ಮಹಿಮೆಯು ಲಕ್ಷ್ಮೀ-ನಾರಾಯಣರಿಗಿಲ್ಲ ಏಕೆಂದರೆ ಕೃಷ್ಣನು ಪವಿತ್ರ,
ಚಿಕ್ಕ ಮಗುವಾಗಿದ್ದಾನೆ. ಇಲ್ಲಿಯೂ ಸಹ ಚಿಕ್ಕಮಕ್ಕಳು ಮತ್ತು ಮಹಾತ್ಮರು ಒಂದೇ ಸಮಾನ ಎಂದು
ಹೇಳುತ್ತಾರೆ. ಮಹಾತ್ಮರಾದರೂ ಜೀವನದ ಅನುಭವ ಮಾಡಿ ನಂತರ ವಿಕಾರಗಳನ್ನು ಬಿಡುತ್ತಾರೆ, ತಿರಸ್ಕಾರವು
ಬರುತ್ತದೆ ಆದರೆ ಮಗುವಂತೂ ಪವಿತ್ರವಾಗಿಯೇ ಇರುತ್ತದೆ. ಇದಕ್ಕೆ ಶ್ರೇಷ್ಠ ಮಹಾತ್ಮ ಎಂದು
ತಿಳಿಯುತ್ತಾರೆ ಅಂದಾಗ ತಂದೆಯು ತಿಳಿಸಿದ್ದಾರೆ - ಈ ನಿವೃತ್ತಿ ಮಾರ್ಗದ ಸನ್ಯಾಸಿಗಳೂ ಸಹ ಸ್ವಲ್ಪ
ತಡೆಹಿಡಿಯುತ್ತಾರೆ. ಹೇಗೆ ಮನೆಯು ಅರ್ಧ ಹಳೆಯದಾದಾಗ ಮತ್ತೆ ಅದನ್ನು ರಿಪೇರಿ ಮಾಡಿಸಲಾಗುತ್ತದೆಯೋ
ಹಾಗೆಯೇ ಸನ್ಯಾಸಿಗಳೂ ಸಹ ರಿಪೇರಿ ಮಾಡುತ್ತಾರೆ ಅಂದರೆ ಅವರು ಪವಿತ್ರವಾಗಿರುವುದರಿಂದ ಭಾರತವು
ಸ್ವಲ್ಪ ತಮನವಾಗುತ್ತದೆ. ಭಾರತದಂತಹ ಪವಿತ್ರ ಮತ್ತು ಧನವಂತ ಖಂಡವು ಮತ್ತ್ಯಾವುದೂ ಇಲ್ಲ. ಈಗ ನಿಮಗೆ
ತಂದೆಯು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಸ್ಮೃತಿಯನ್ನು ತರಿಸುತ್ತಾರೆ ಏಕೆಂದರೆ ಇವರು
ಗುರುವೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಗೀತೆಯಲ್ಲಿ ಕೃಷ್ಣಭಗವಾನುವಾಚವೆಂದು
ಬರೆದಿದ್ದಾರೆ, ಕೃಷ್ಣನಿಗೆಂದಾದರೂ ತಂದೆಯೆಂದು ಹೇಳುತ್ತಾರೆಯೇ ಅಥವಾ ಪತಿತ-ಪಾವನನೆಂದು
ಹೇಳುತ್ತಾರೆಯೇ! ಮನುಷ್ಯರು ಪತಿತ-ಪಾವನನೆಂದು ಹೇಳಿದಾಗ ಕೃಷ್ಣನನ್ನು ನೆನಪು ಮಾಡುವುದಿಲ್ಲ,
ಭಗವಂತನನ್ನೇ ನೆನಪು ಮಾಡುತ್ತಾರೆ ಆದರೆ ಪತಿತ-ಪಾವನ ಸೀತಾರಾಂ, ರಘುಪತಿ ರಾಘವ ರಾಜಾರಾಂ ಎಂದು
ಹೇಳಿಬಿಡುತ್ತಾರೆ. ಎಷ್ಟೊಂದು ಗೊಂದಲವಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ನೀವು ಮಕ್ಕಳಿಗೆ
ಯಥಾರ್ಥ ರೀತಿಯಲ್ಲಿ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ಮೊಟ್ಟಮೊದಲನೆಯದಾಗಿ
ಮುಖ್ಯಮಾತನ್ನು ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ
ಆಗ ನೀವು ಪಾವನರಾಗುತ್ತೀರಿ, ನೀವು ಸಹೋದರ-ಸಹೋದರರಾಗಿದ್ದೀರಿ. ನೀವು ಬ್ರಹ್ಮನ ಸಂತಾನರು ಅಂದರೆ
ಸಹೋದರ-ಸಹೋದರಿಯರಾದಿರಿ. ಇದು ಸದಾ ಬುದ್ಧಿಯಲ್ಲಿರಲಿ - ಮೂಲತಃ ಆತ್ಮಗಳು ಸಹೋದರರಾಗಿದ್ದಾರೆ ಮತ್ತೆ
ಇಲ್ಲಿ ಶರೀರದಲ್ಲಿ ಬಂದಾಗ ಸಹೋದರ-ಸಹೋದರಿಯರಾಗಿಬಿಡುತ್ತಾರೆ. ಇಷ್ಟಾದರೂ ತಿಳಿದುಕೊಳ್ಳುವ
ಬುದ್ಧಿಯಿಲ್ಲ ಅವರು ನಾವಾತ್ಮಗಳ ತಂದೆಯಾಗಿದ್ದಾರೆಂದಮೇಲೆ ನಾವು ಸಹೋದರರಾದೆವಲ್ಲವೆ. ಅಂದಮೇಲೆ
ತಂದೆಯನ್ನು ಸರ್ವವ್ಯಾಪಿಯೆಂದು ಹೇಗೆ ಹೇಳುತ್ತಾರೆ? ಆಸ್ತಿಯು ಮಕ್ಕಳಿಗೇ ಸಿಗುತ್ತದೆ, ತಂದೆಗೆ
ಸಿಗುವುದಿಲ್ಲ. ತಂದೆಯಿಂದ ಮಕ್ಕಳಿಗೆ ಆಸ್ತಿಯು ಸಿಗುತ್ತದೆ. ಈ ಬ್ರಹ್ಮನೂ ಸಹ ಶಿವತಂದೆಯ
ಮಗುವಾಗಿದ್ದಾರಲ್ಲವೆ. ಇವರಿಗೂ ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವೆಲ್ಲರೂ
ಮೊಮ್ಮಕ್ಕಳಾಗಿದ್ದೀರಿ, ನಿಮಗೂ ಅಧಿಕಾರವಿದೆ ಅಂದಾಗ ಆತ್ಮದ ರೂಪದಲ್ಲಿ ಎಲ್ಲರೂ ಮಕ್ಕಳಾಗಿದ್ದೀರಿ
ಮತ್ತೆ ಶರೀರದಲ್ಲಿ ಬಂದಾಗ ಸಹೋದರ-ಸಹೋದರಿ ಎಂದು ಹೇಳುತ್ತೀರಿ ಮತ್ತ್ಯಾವುದೇ ಸಂಬಂಧವಿಲ್ಲ. ಸದಾ
ಸಹೋದರ-ಸಹೋದರ ಎಂಬ ದೃಷ್ಟಿಯಿರಲಿ, ಸ್ತ್ರೀ-ಪುರುಷರೆಂಬ ದೃಷ್ಟಿಯೂ ಹೊರಟುಹೋಗಲಿ. ಯಾವಾಗ
ಸ್ತ್ರೀ-ಪುರುಷರಿಬ್ಬರೂ ಹೇ ಪರಮಪಿತ ಎಂದು ಹೇಳುತ್ತೀರೆಂದರೆ ಪರಸ್ಪರ ಸಹೋದರ-ಸಹೋದರಿಯಾದರಲ್ಲವೆ.
ತಂದೆಯು ಸಂಗಮಯುಗದಲ್ಲಿ ಬಂದು ರಚನೆಯನ್ನು ರಚಿಸಿದಾಗಲೇ ಸಹೋದರ-ಸಹೋದರಿಯಾಗುತ್ತೀರಿ ಆದರೆ
ಸ್ತ್ರೀ-ಪುರುಷರೆಂಬ ದೃಷ್ಟಿಯು ಬಿಟ್ಟುಹೋಗುವುದು ಬಹಳ ಕಷ್ಟವಾಗುತ್ತದೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ನೀವು ಆತ್ಮಾಭಿಮಾನಿಗಳಾಗಬೇಕು. ತಂದೆಯ ಮಕ್ಕಳಿಗೇ ಆಸ್ತಿಯು ಸಿಗುತ್ತದೆ.
ನನ್ನೊಬ್ಬನನ್ನೇ ನೆನಪು ಮಾಡಿದರೆ ಸತೋಪ್ರಧಾನರಾಗುತ್ತೀರಿ. ಸತೋಪ್ರಧಾನರಾಗದೆ ಹಿಂತಿರುಗಿ
ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಈ ಯುಕ್ತಿಯನ್ನು ಸನ್ಯಾಸಿಗಳೆಂದೂ
ತಿಳಿಸುವುದಿಲ್ಲ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ಎಂದಿಗೂ
ಹೇಳುವುದಿಲ್ಲ. ತಂದೆಗೆ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ. ಆತ್ಮವೆಂದು ಎಲ್ಲರಿಗೂ
ಹೇಳಲಾಗುತ್ತದೆ ಆದರೆ ತಂದೆಗೆ ಪರಮ ಆತ್ಮನೆಂದು ಹೇಳಲಾಗುತ್ತದೆ. ಆ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ನಾನು ನೀವು ಮಕ್ಕಳ ಬಳಿ ಬಂದಿದ್ದೇನೆ, ನನಗೆ ಮಾತನಾಡಲು ಮುಖವಂತೂ ಬೇಕಲ್ಲವೆ. ಇತ್ತೀಚೆಗೆ
ನೋಡಿ, ಎಲ್ಲಿ ನೋಡಿದರಲ್ಲಿ ಗೋಮುಖವನ್ನು ತೋರಿಸುತ್ತಾರೆ. ಗೋಮುಖದಿಂದ ಅಮೃತವು ಬರುತ್ತದೆಯೆಂದು
ಹೇಳುತ್ತಾರೆ, ವಾಸ್ತವದಲ್ಲಿ ಅಮೃತವೆಂದು ಜ್ಞಾನಕ್ಕೆ ಹೇಳಲಾಗುತ್ತದೆ. ಜ್ಞಾನಾಮೃತವು ಮುಖದಿಂದಲೇ
ಬರುತ್ತದೆ, ಇದರಲ್ಲಿ ನೀರಿನ ಮಾತಿಲ್ಲ. ಈ ಗೋವು (ಬ್ರಹ್ಮಾ) ತಾಯಿಯೂ ಆಗಿದ್ದಾರೆ, ತಂದೆಯು
ಇವರಲ್ಲಿ ಪ್ರವೇಶ ಮಾಡುತ್ತಾರೆ. ಇವರ ಮೂಲಕ ತಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ.
ಇವರಿಂದ ಜ್ಞಾನವು ಬರುತ್ತದೆ, ಇದಕ್ಕೆ ಅವರು ಕಲ್ಲಿನಿಂದ ಮಾಡಿ ಅದರಲ್ಲಿ ಮುಖವನ್ನು ಮಾಡಿದ್ದಾರೆ,
ಅಲ್ಲಿಂದ ನೀರು ಹೊರಬರುತ್ತದೆ. ಅದಂತೂ ಭಕ್ತಿಯ ಪದ್ಧತಿಯಾಯಿತಲ್ಲವೆ. ಆದರೆ ಯಥಾರ್ಥ ರೀತಿಯನ್ನು
ನೀವು ಅರ್ಥಮಾಡಿಕೊಂಡಿದ್ದೀರಲ್ಲವೆ. ಭೀಷ್ಮಪಿತಾಮಹ ಮೊದಲಾದವರಿಗೂ ಸಹ ನೀವು ಕುಮಾರಿಯರೇ ಬಾಣವನ್ನು
ಹೊಡೆದಿದ್ದೀರಿ, ನೀವು ಬ್ರಹ್ಮಾಕುಮಾರ ಕುಮಾರಿಯರಾಗಿದ್ದೀರಿ ಅಂದಾಗ ಯಾರಿಗೋ
ಕುಮಾರಿಯಾಗಿರಬೇಕಲ್ಲವೆ. ಅಧರ್ ಕುಮಾರಿ ಮತ್ತು ಕುಮಾರಿ ಇಬ್ಬರ ಮಂದಿರಗಳೂ ಇವೆಯಲ್ಲವೆ.
ಪ್ರತ್ಯಕ್ಷದಲ್ಲಿ ನಿಮ್ಮ ನೆನಪಾರ್ಥ ಮಂದಿರವಿದೆಯಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ನೀವು
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರೆಂದರೆ ಕುದೃಷ್ಟಿಯಿರಲು ಸಾಧ್ಯವಿಲ್ಲ. ಒಂದುವೇಳೆ ಆ ರೀತಿ
ದೃಷ್ಟಿಯಿದ್ದರೆ ಬಹಳ ಕಠಿಣ ಶಿಕ್ಷೆಯಾಗುವುದು. ದೇಹಾಭಿಮಾನದಲ್ಲಿ ಬರುವುದರಿಂದ ನಾವು
ಸಹೋದರ-ಸಹೋದರಿಯರೆಂಬುದೂ ಮರೆತುಹೋಗುತ್ತದೆ. ಇವರೂ ಬಿ.ಕೆ ಆಗಿದ್ದಾರೆ, ನಾವೂ ಬಿ.ಕೆ ಆಗಿದ್ದೇವೆ
ಅಂದಮೇಲೆ ವಿಕಾರದ ದೃಷ್ಟಿಯಿರಲು ಹೇಗೆ ಸಾಧ್ಯ? ಅಂದಮೇಲೆ ಆಸುರೀ ಸಂಪ್ರದಾಯದ ಮನುಷ್ಯರು
ವಿಕಾರವಿಲ್ಲದೆ ಇರಲು ಸಾಧ್ಯವಾಗುವುದಿಲ್ಲ ಆದ್ದರಿಂದ ವಿಘ್ನಗಳನ್ನು ಹಾಕುತ್ತಾರೆ. ಈಗ ನೀವು
ಬ್ರಹ್ಮಾಕುಮಾರ-ಕುಮಾರಿಯರಿಗೆ ತಂದೆಯ ಆಸ್ತಿಯು ಸಿಗುತ್ತದೆ. ತಂದೆಯ ಶ್ರೀಮತದಂತೆ ನಡೆಯಬೇಕು.
ಪವಿತ್ರರಾಗಬೇಕಾಗಿದೆ. ಇದು ಈ ವಿಕಾರೀ ಮೃತ್ಯುಲೋಕದ ಅಂತಿಮಜನ್ಮವಾಗಿದೆ, ಇದನ್ನೂ ಸಹ ಯಾರೂ
ತಿಳಿದುಕೊಂಡಿಲ್ಲ. ಅಮರಲೋಕದಲ್ಲಿ ಯಾವುದೇ ವಿಕಾರವಿರುವುದಿಲ್ಲ ಅವರಿಗೆ ಸತೋಪ್ರಧಾನ, ಸಂಪೂರ್ಣ
ನಿರ್ವಿಕಾರಿಗಳೆಂದು ಕರೆಯಲಾಗುತ್ತದೆ. ಇಲ್ಲಿ ಎಲ್ಲರೂ ತಮೋಪ್ರಧಾನ, ಸಂಪೂರ್ಣ ವಿಕಾರಿಗಳಾಗಿದ್ದಾರೆ
ಆದ್ದರಿಂದಲೇ ಅವರು ಸಂಪೂರ್ಣ ನಿರ್ವಿಕಾರಿಗಳು, ನಾವು ವಿಕಾರಿ, ಪಾಪಿಗಳೆಂದು ಹೇಳುತ್ತಾರೆ.
ಸಂಪೂರ್ಣ ನಿರ್ವಿಕಾರಿಗಳ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಭಾರತವಾಸಿಗಳೇ
ಪೂಜ್ಯರಿಂದ ಪೂಜಾರಿಗಳಾಗುತ್ತೀರಿ. ಈ ಸಮಯದಲ್ಲಿ ಭಕ್ತಿಯ ಪ್ರಭಾವವು ಬಹಳಷ್ಟಿದೆ. ಬಂದು ಭಕ್ತಿಯ
ಫಲವನ್ನು ಕೊಡಲಿ ಎಂದು ಭಕ್ತರು ಭಗವಂತನನ್ನು ನೆನಪು ಮಾಡುತ್ತಾರೆ. ಭಕ್ತಿಯಲ್ಲಿ ಯಾವ
ಸ್ಥಿತಿಯುಂಟಾಗಿದೆ! ತಂದೆಯು ತಿಳಿಸುತ್ತಾರೆ - ಮುಖ್ಯವಾಗಿ ನಾಲ್ಕು ಧರ್ಮಶಾಸ್ತ್ರಗಳಿವೆ, ಒಂದು -
ದೇವತಾಧರ್ಮವಾಗಿದೆ, ಇದರಲ್ಲಿ ಬ್ರಾಹ್ಮಣ, ದೇವತಾ, ಕ್ಷತ್ರಿಯ ಮೂರೂ ಬಂದುಬಿಡುತ್ತದೆ. ತಂದೆಯು
ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣರ ಶಿಖೆಯು ಸಂಗಮದ್ದಾಗಿದೆ. ಈಗ ನೀವು
ಬ್ರಾಹ್ಮಣರು ಪುರುಷೋತ್ತಮರಾಗುತ್ತಿದ್ದೀರಿ. ಬ್ರಾಹ್ಮಣರಾದಿರಿ ನಂತರ ದೇವತೆಗಳಾಗುತ್ತೀರಿ. ಆ
ಬ್ರಾಹ್ಮಣರಂತೂ ವಿಕಾರಿಗಳಾಗಿದ್ದಾರೆ, ಅವರೂ ಸಹ ಈ ಬ್ರಾಹ್ಮಣರ ಮುಂದೆ ನಮಸ್ಕಾರ ಮಾಡುತ್ತಾರೆ.
ಬ್ರಾಹ್ಮಣ ದೇವಿ-ದೇವತಾ ನಮಃ ಎಂದು ಹೇಳುತ್ತಾರೆ ಏಕೆಂದರೆ ಅವರು ಬ್ರಹ್ಮನ ಸಂತಾನರಾಗಿದ್ದರು,
ನಾವಂತೂ ಬ್ರಹ್ಮನ ಸಂತಾನರಲ್ಲ ಎಂದು ತಿಳಿದುಕೊಂಡಿದ್ದಾರೆ. ಈಗ ನೀವು ಬ್ರಹ್ಮನ ಸಂತಾನರಾಗಿದ್ದೀರಿ,
ನಿಮಗೆ ಎಲ್ಲರೂ ನಮಸ್ಕಾರ ಮಾಡುತ್ತಾರೆ. ನೀವೇ ನಂತರ ದೇವಿ-ದೇವತೆಗಳಾಗುತ್ತೀರಿ, ನೀವೀಗ
ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ ನಂತರ ದೈವೀಕುಮಾರ-ಕುಮಾರಿಯರಾಗುತ್ತೀರಿ.
ಈ ಸಮಯದಲ್ಲಿ ನಿಮ್ಮ
ಜೀವನವು ಬಹಳ-ಬಹಳ ಅಮೂಲ್ಯವಾಗಿದೆ ಏಕೆಂದರೆ ನೀವು ಜಗನ್ಮಾತೆಯರೆಂದು ಗಾಯನವಿದೆ. ನೀವು ಹದ್ದಿನಿಂದ
ಹೊರಬಂದು ಬೇಹದ್ದಿನಲ್ಲಿ ಬಂದಿದ್ದೀರಿ. ನಿಮಗೆ ತಿಳಿದಿದೆ - ನಾವು ಈ ಜಗತ್ತಿನ ಕಲ್ಯಾಣ
ಮಾಡುವವರಾಗಿದ್ದೇವೆ ಅಂದಮೇಲೆ ಪ್ರತಿಯೊಬ್ಬರೂ ಜಗದಂಬಾ, ಜಗತ್ಪಿತರಾದಿರಿ. ಈ ನರಕದಲ್ಲಿ ಮನುಷ್ಯರು
ಬಹಳ ದುಃಖಿಯಾಗಿದ್ದಾರೆ. ನಾವು ಅವರ ಆತ್ಮೀಯ ಸೇವೆ ಮಾಡಲು ಬಂದಿದ್ದೇವೆ, ನಾವು ಅವರನ್ನು
ಸ್ವರ್ಗವಾಸಿಗಳನ್ನಾಗಿ ಮಾಡೇ ಮಾಡುತ್ತೇವೆ. ತಂದೆಯು ತಿಳಿಸುತ್ತಾರೆ - ನೀವೀಗ ಸೈನಿಕರಾಗಿದ್ದೀರಿ,
ಇದಕ್ಕೆ ಯುದ್ಧಸ್ಥಳವೆಂದೂ ಹೇಳಲಾಗುತ್ತದೆ. ಯಾದವರು, ಕೌರವರು ಮತ್ತು ಪಾಂಡವರು ಒಟ್ಟಿಗೆ
ಇರುತ್ತಾರೆ, ಸಹೋದರ-ಸಹೋದರರಲ್ಲವೆ. ಈಗ ನಿಮ್ಮ ಯುದ್ಧವು ಸಹೋದರ-ಸಹೋದರಿಯರೊಂದಿಗಲ್ಲ,
ರಾವಣನೊಂದಿಗಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ನೀವು ಸಹೋದರ-ಸಹೋದರಿಯರಿಗೆ
ತಿಳಿಸಿಕೊಡುತ್ತೀರಿ ಅದಕ್ಕೆ ತಂದೆಯು ತಿಳಿಸುತ್ತಾರೆ - ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು
ಬಿಡಬೇಕಾಗಿದೆ. ಇದು ಹಳೆಯ ಪ್ರಪಂಚವಾಗಿದೆ, ಎಷ್ಟು ದೊಡ್ಡ-ದೊಡ್ಡ ಅಣೆಕಟ್ಟು, ಕಾಲುವೆ
ಮೊದಲಾದುವುಗಳನ್ನು ಕಟ್ಟಿಸುತ್ತಾರೆ ಏಕೆಂದರೆ ಜನಸಂಖ್ಯೆಯು ಬಹಳ ಹೆಚ್ಚಾಗಿಬಿಟ್ಟಿದೆ.
ಸತ್ಯಯುಗದಲ್ಲಿ ನೀವು ಬಹಳ ಕಡಿಮೆ ಜನಸಂಖ್ಯೆಯೇ ಇರುತ್ತೀರಿ. ನದಿಗಳಲ್ಲಿ ನೀರೂ ಸಹ
ಬಹಳಷ್ಟಿರುತ್ತದೆ, ದವಸ-ಧಾನ್ಯಗಳೂ ಯಥೇಚ್ಛವಾಗಿರುತ್ತದೆ. ಇಲ್ಲಿ ಈ ಭೂಮಿಯ ಮೇಲೆ ಕೋಟ್ಯಾಂತರ
ಮನುಷ್ಯರಿದ್ದಾರೆ, ಅಲ್ಲಿ ಇಡೀ ಭೂಮಿಯ ಮೇಲೆ ಆರಂಭದಲ್ಲಿ 9-10 ಲಕ್ಷ ಜನಸಂಖ್ಯೆಯಿರುತ್ತದೆ,
ಮತ್ತ್ಯಾವುದೇ ಖಂಡವಿರುವುದಿಲ್ಲ. ನೀವು ಅಲ್ಲಿ ಸ್ವಲ್ಪ ಜಾಗದಲ್ಲಿಯೇ ಇರುತ್ತೀರಿ. ನಿಮಗೆ ಎಲ್ಲಿಗೂ
ಹೋಗುವ ಅವಶ್ಯಕತೆಯಿರುವುದಿಲ್ಲ. ಅಲ್ಲಿ ವಸಂತಋತುವೇ ಇರುತ್ತದೆ, ಪಂಚತತ್ವಗಳೂ ಸಹ ಯಾವುದೇ ತೊಂದರೆ
ಕೊಡುವುದಿಲ್ಲ, ಆಜ್ಞಾನುಸಾರವಾಗಿ0iÉುೀ ನಡೆಯುತ್ತದೆ, ದುಃಖದ ಚಿಹ್ನೆಯೇ ಇರುವುದಿಲ್ಲ. ಅದು
ಸ್ವರ್ಗವಾಗಿದೆ, ಇದು ನರಕವಾಗಿದೆ. ಇದು ಮಧ್ಯದಿಂದ ಆರಂಭವಾಗುತ್ತದೆ. ದೇವತೆಗಳು ವಾಮಮಾರ್ಗದಲ್ಲಿ
ಬರುವಕಾರಣ ರಾವಣರಾಜ್ಯವು ಆರಂಭವಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವು ಡಬಲ್ ಕಿರೀಟಧಾರಿ
ಪೂಜ್ಯರಾಗುತ್ತೇವೆ ನಂತರ ಸಿಂಗಲ್ ಕಿರೀಟಧಾರಿಗಳಾಗುತ್ತೇವೆ. ಸತ್ಯಯುಗದಲ್ಲಿ ಪವಿತ್ರತೆಯ ಚಿಹ್ನೆಯೂ
ಇದೆ. ದೇವತೆಗಳೆಲ್ಲರೂ ಪವಿತ್ರರಾಗಿರುತ್ತಾರೆ, ಇಲ್ಲಿ ಪವಿತ್ರರು ಯಾರೂ ಇಲ್ಲ. ಜನ್ಮವನ್ನಂತೂ
ವಿಕಾರದಿಂದಲೇ ಪಡೆಯುತ್ತಾರೆ ಆದ್ದರಿಂದ ಇದಕ್ಕೆ ಭ್ರಷ್ಟಾಚಾರಿ ಪ್ರಪಂಚವೆಂದು ಕರೆಯಲಾಗುತ್ತದೆ,
ಸತ್ಯಯುಗವು ಶ್ರೇಷ್ಠಾಚಾರಿ ಪ್ರಪಂಚವಾಗಿದೆ. ವಿಕಾರಕ್ಕೇ ಭ್ರಷ್ಟಾಚಾರವೆಂದು ಕರೆಯಲಾಗುತ್ತದೆ.
ಮಕ್ಕಳಿಗೆ ತಿಳಿದಿದೆ - ಸತ್ಯಯುಗದಲ್ಲಿ ಪವಿತ್ರ ಪ್ರವೃತ್ತಿಮಾರ್ಗವಿತ್ತು, ಈಗ
ಅಪವಿತ್ರರಾಗಿಬಿಟ್ಟಿದ್ದಾರೆ. ಈಗ ಪುನಃ ಪವಿತ್ರ ಶ್ರೇಷ್ಠಾಚಾರಿ ಪ್ರಪಂಚವಾಗುತ್ತದೆ,
ಸೃಷ್ಟಿಚಕ್ರವು ಸುತ್ತುತ್ತದೆಯಲ್ಲವೆ. ಪರಮಪಿತ ಪರಮಾತ್ಮನನ್ನೇ ಪತಿತ-ಪಾವನನೆಂದು ಕರೆಯಲಾಗುತ್ತದೆ.
ಭಗವಂತನು ಪ್ರೇರಣೆಯಿಂದ ಎಲ್ಲವನ್ನೂ ಮಾಡುತ್ತಾರೆಂದು ಮನುಷ್ಯರು ಹೇಳುತ್ತಾರೆ. ಪ್ರೇರಣೆಯೆಂದರೆ
ವಿಚಾರ, ಇದರಲ್ಲಿ ಪ್ರೇರಣೆಯ ಮಾತೇ ಇಲ್ಲ. ಅವರೇ ಸ್ವಯಂ ಹೇಳುತ್ತಾರೆ - ನಾನು ಶರೀರದ ಆಧಾರವನ್ನು
ತೆಗೆದುಕೊಳ್ಳಬೇಕಾಗುತ್ತದೆ, ಮುಖವಿಲ್ಲದೆ ನಾನು ಹೇಗೆ ಶಿಕ್ಷಣ ಕೊಡಲಿ, ಪ್ರೇರಣೆಯಿಂದ ಶಿಕ್ಷಣ
ಕೊಡಲು ಸಾಧ್ಯವೆ! ಭಗವಂತ ಪ್ರೇರಣೆಯಿಂದ ಏನೂ ಮಾಡುವುದಿಲ್ಲ. ತಂದೆಯಂತೂ ಮಕ್ಕಳಿಗೆ ಓದಿಸುತ್ತಾರೆ,
ಪ್ರೇರಣೆಯಿಂದ ವಿದ್ಯಾಭ್ಯಾಸವು ನಡೆಯಲು ಸಾಧ್ಯವೇ? ತಂದೆಯ ವಿನಃ ಸೃಷ್ಟಿಯ ಆದಿ-ಮಧ್ಯ-ಅಂತ್ಯದ
ರಹಸ್ಯವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯನ್ನೇ ಅರಿತುಕೊಂಡಿಲ್ಲ. ಅವರಿಗೆ ಲಿಂಗವೆಂದು
ಕೆಲವರು ಹೇಳುತ್ತಾರೆ, ಇನ್ನೂ ಕೆಲವರು ಅಖಂಡ ಜ್ಯೋತಿಯೆಂದು ತಿಳಿಯುತ್ತಾರೆ. ಬ್ರಹ್ಮ್ ತತ್ವವೇ
ಈಶ್ವರನೆಂದು ಇನ್ನೂ ಕೆಲವರು ಹೇಳುತ್ತಾರೆ. ತತ್ವಜ್ಞಾನಿ, ಬ್ರಹ್ಮ್ ಜ್ಞಾನಿಗಳೂ ಇದ್ದಾರಲ್ಲವೆ.
ಶಾಸ್ತ್ರಗಳಲ್ಲಿ 84 ಲಕ್ಷ ಯೋನಿಗಳೆಂದು ತೋರಿಸಿದ್ದಾರೆ. ಒಂದುವೇಳೆ 84 ಲಕ್ಷ ಜನ್ಮಗಳಿದ್ದಿದ್ದೇ
ಆದರೆ ಕಲ್ಪದ ಆಯಸ್ಸೂ ಸಹ ಬಹಳ ದೊಡ್ಡದಾಗಿರಬೇಕು. ಯಾರೂ ಲೆಕ್ಕವನ್ನೇ ತೆಗೆಯಲು
ಸಾಧ್ಯವಾಗುವುದಿಲ್ಲ. ಅವರಂತೂ ಸತ್ಯಯುಗಕ್ಕೇ ಲಕ್ಷಾಂತರ ವರ್ಷಗಳೆಂದು ಹೇಳಿಬಿಟ್ಟಿದ್ದಾರೆ. ತಂದೆಯು
ತಿಳಿಸುತ್ತಾರೆ - ಇಡೀ ಸೃಷ್ಟಿಚಕ್ರವೇ 5000 ವರ್ಷಗಳದಾಗಿದೆ. 84 ಲಕ್ಷ ಜನ್ಮಗಳಿಗಾಗಿ ಸಮಯವೂ ಸಹ
ಅಷ್ಟೊಂದು ಬೇಕಲ್ಲವೆ. ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ತಂದೆಯು ತಿಳಿಸುತ್ತಾರೆ -
ನಾನು ಬಂದು ನಿಮಗೆ ಇವೆಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ, ಇದೆಲ್ಲವೂ ಭಕ್ತಿಮಾರ್ಗದ
ಸಾಮಗ್ರಿಯಾಗಿದೆ, ಇದರಿಂದ ಯಾರೂ ನನ್ನನ್ನು ಪಡೆಯಲು ಸಾಧ್ಯವಿಲ್ಲ. ನಾನು ಬಂದಾಗಲೇ ಎಲ್ಲರನ್ನೂ
ಕರೆದುಕೊಂಡು ಹೋಗುತ್ತೇನೆ. ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಮಾಡಿ, ನಮ್ಮನ್ನು
ಪಾವನಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ನನ್ನನ್ನು ಕರೆಯುತ್ತಾರೆ ಮತ್ತೆ ಹುಡುಕಾಡಲು
ಪೆಟ್ಟುತಿನ್ನುವುದಾದರೂ ಏಕೆ? ಎಷ್ಟು ದೂರ-ದೂರ ಪರ್ವತಗಳ ಮೇಲೆ ಹೋಗುತ್ತಾರೆ. ಈಗಂತೂ ಎಷ್ಟೊಂದು
ಮಂದಿರಗಳು ಖಾಲಿಯಾಗಿ ಬಿದ್ದಿವೆ, ಯಾರೂ ಹೋಗುವುದೇ ಇಲ್ಲ. ಈಗ ನೀವು ಮಕ್ಕಳು ಸರ್ವಶ್ರೇಷ್ಠ ತಂದೆಯ
ಚರಿತ್ರೆಯನ್ನು ತಿಳಿದುಕೊಂಡಿದ್ದೀರಿ. ತಂದೆಯು ಮಕ್ಕಳಿಗೆ ಎಲ್ಲವನ್ನೂ ಕೊಟ್ಟು 60 ವರ್ಷಗಳ ನಂತರ
ವಾನಪ್ರಸ್ಥದಲ್ಲಿ ಕುಳಿತುಕೊಳ್ಳುತ್ತಾರೆ. ಈ ಪದ್ದತಿಯೂ ಸಹ ಈಗಿನದಾಗಿದೆ ಮತ್ತು ಹಬ್ಬಗಳೆಲ್ಲವೂ ಈ
ಸಮಯದ್ದಾಗಿದೆ.
ನೀವು
ತಿಳಿದುಕೊಂಡಿದ್ದೀರಿ - ನಾವೀಗ ಸಂಗಮಯುಗದಲ್ಲಿ ನಿಂತಿದ್ದೇವೆ, ರಾತ್ರಿಯ ನಂತರ ಮತ್ತೆ
ದಿನವಾಗುವುದು, ಈಗಂತೂ ಘೋರ ಅಂಧಕಾರವಿದೆ, ಜ್ಞಾನಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶವೆಂದು
ಹಾಡುತ್ತಾರೆ. ನೀವು ತಂದೆಯನ್ನು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಈಗ ತಿಳಿದುಕೊಂಡಿದ್ದೀರಿ.
ಹೇಗೆ ತಂದೆಯು ಜ್ಞಾನಪೂರ್ಣನಾಗಿದ್ದಾರೆಯೋ ಅದೇರೀತಿ ನೀವೂ ಸಹ ಮಾ||
ಜ್ಞಾನಪೂರ್ಣರಾಗಿಬಿಟ್ಟಿದ್ದೀರಿ. ಈಗ ನೀವು ಮಕ್ಕಳಿಗೆ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯು
ಸಿಗುತ್ತದೆ. ಲೌಕಿಕತಂದೆಯಿಂದಂತೂ ಹದ್ದಿನ ಆಸ್ತಿಯು ಸಿಗುತ್ತದೆ ಅದರಿಂದ ಅಲ್ಪಕಾಲದ ಆಸ್ತಿಯು
ಸಿಗುತ್ತದೆ. ಅದಕ್ಕೆ ಸನ್ಯಾಸಿಗಳು ಕಾಗವಿಷ್ಟಸಮಾನ ಸುಖವೆಂದು ಹೇಳಿಬಿಡುತ್ತಾರೆ. ಆದ್ದರಿಂದ ಅವರು
ಇಲ್ಲಿಗೆ ಬಂದು ಸುಖಕ್ಕಾಗಿ ಪುರುಷಾರ್ಥ ಮಾಡಲು ಸಾಧ್ಯವಿಲ್ಲ, ಅವರು ಹಠಯೋಗಿಗಳು, ನೀವು
ರಾಜಯೋಗಿಗಳಾಗಿದ್ದೀರಿ. ನಿಮ್ಮ ಯೋಗವು ತಂದೆಯ ಜೊತೆಯಿದೆ, ಅವರದು ತತ್ವದ ಜೊತೆಯಿದೆ. ಇದೂ ಸಹ
ನಾಟಕದಲ್ಲಿ ಮಾಡಲ್ಪಟ್ಟಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಪಾವನರಾಗಬೇಕೆಂದರೆ ನಾವಾತ್ಮಗಳು ಸಹೋದರ-ಸಹೋದರರಾಗಿದ್ದೇವೆ ಮತ್ತು ಬ್ರಹ್ಮಾತಂದೆಯ ಸಂತಾನರು
ಸಹೋದರ-ಸಹೋದರಿಯರಾಗಿದ್ದೇವೆ ಎಂಬ ದೃಷ್ಟಿಯನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಆತ್ಮ ಮತ್ತು ಶರೀರ
ಎರಡನ್ನೂ ಪಾವನ, ಸತೋಪ್ರಧಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ, ದೇಹಾಭಿಮಾನವನ್ನು ಬಿಡಬೇಕಾಗಿದೆ.
2. ಮಾ||
ಜ್ಞಾನಪೂರ್ಣರಾಗಿ ಎಲ್ಲರಿಗೆ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸಿ ಘೋರ ಅಂಧಕಾರದಿಂದ
ಹೊರತೆಗೆಯಬೇಕಾಗಿದೆ. ನರಕವಾಸಿ ಮನುಷ್ಯರ ಆತ್ಮಿಕ ಸೇವೆ ಮಾಡಿ ಸ್ವರ್ಗವಾಸಿಗಳನ್ನಾಗಿ ಮಾಡಬೇಕಾಗಿದೆ.
ವರದಾನ:
ಮಾಸ್ಟರ್
ಜ್ಞಾನಸಾಗರರಾಗಿ ಜ್ಞಾನದ ಆಳದಲ್ಲಿ ಹೋಗುವಂತಹ ಅನುಭವ ರೂಪಿ ರತ್ನಗಳಿಂದ ಸಂಪನ್ನ ಭವ
ಯಾವ ಮಕ್ಕಳು ಜ್ಞಾನದ
ಆಳದಲ್ಲಿ ಹೋಗುತ್ತಾರೆ ಅವರು ಅನುಭವ ರೂಪಿ ರತ್ನಗಳಿಂದ ಸಂಪನ್ನರಾಗುತ್ತಾರೆ. ಒಂದಾಗಿದೆ ಜ್ಞಾನ
ಕೇಳುವುದು ಮತ್ತು ಹೇಳುವುದು, ಇನ್ನೊಂದಾಗಿದೆ ಅನುಭವಿ ಮೂರ್ತಿಯಾಗುವುದು. ಅನುಭವಿ ಸದಾ ಅವಿನಾಶಿ
ಮತ್ತು ನಿರ್ವಿಘ್ನರಾಗಿರುತ್ತಾರೆ. ಅವರನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಅನುಭವಿಯ ಮುಂದೆ
ಮಾಯೆಯ ಯಾವುದೇ ಪ್ರಯತ್ನ ಸಫಲವಾಗುವುದಿಲ್ಲ. ಅನುಭವಿ ಎಂದೂ ಮೋಸಹೋಗುವುದಿಲ್ಲ ಆದ್ದರಿಂದ
ಅನುಭವಗಳನ್ನು ಹೆಚ್ಚಿಸಿಕೊಳ್ಳುತ್ತಾ ಪ್ರತಿ ಗುಣದ ಅನುಭವಿಮೂರ್ತಿಗಳಾಗಿ. ಮನನ ಶಕ್ತಿಯ ಮುಖಾಂತರ
ಶುದ್ಧ ಸಂಕಲ್ಪಗಳ ಸ್ಟಾಕ್ ಜಮಾ ಮಾಡಿಕೊಳ್ಳಿ.
ಸ್ಲೋಗನ್:
ಯಾರು ದೇಹದ
ಸೂಕ್ಷ್ಮಅಭಿಮಾನದ ಸಂಬಂಧದಿಂದಲೂ ನ್ಯಾರಾ ಆಗಿರುತ್ತಾರೆ ಅವರೇ ಫರಿಶ್ತಾ ಆಗಿದ್ದಾರೆ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಸಂಪೂರ್ಣ ಸತ್ಯವೂ ಸಹ
ಪವಿತ್ರತೆಯ ಆಧಾರದ ಮೇಲೆ ಇರುತ್ತದೆ. ಪವಿತ್ರತೆ ಇಲ್ಲದಿದ್ದರೆ ಸದಾ ಸತ್ಯತೆ ಇರಲು ಸಾಧ್ಯವಿಲ್ಲ,
ಕೇವಲ ಕಾಮ ವಿಕಾರ ಅಪವಿತ್ರತೆ ಅಲ್ಲ ಆದರೆ ಅದರ ಇನ್ನೂ ಅನೇಕ ಜೊತೆಗಾರರಿದ್ದಾರೆ. ಅಂದ ಮೇಲೆ ಮಹಾನ್
ಪವಿತ್ರ ಎಂದರೆ ಅಪವಿತ್ರತೆಯ ಹೆಸರು ಚಿನ್ನೆಯು ಸಹ ಇಲ್ಲದಿರಲಿ ಆಗ ಪರಮಾತ್ಮ ಪ್ರತ್ಯಕ್ಷತೆಯ
ನಿಮಿತ್ತ ಆಗುವಿರಿ.