20.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಪುಣ್ಯಾತ್ಮರಾಗಬೇಕೆಂದರೆ ಒಬ್ಬ ತಂದೆಯನ್ನು ನೆನಪು ಮಾಡಿ ನೆನಪಿನಿಂದಲೇ ತುಕ್ಕು ಬಿಟ್ಟು ಹೋಗುವುದು,
ಆತ್ಮವು ಪಾವನವಾಗುವುದು”
ಪ್ರಶ್ನೆ:
ಯಾವ
ಸ್ಮೃತಿಯಿದ್ದಾಗ ಎಂದೂ ಯಾವುದೇ ಮಾತಿನಲ್ಲಿ ತಬ್ಬಿಬ್ಬಾಗುವುದಿಲ್ಲ?
ಉತ್ತರ:
ಡ್ರಾಮಾದ ಸ್ಮೃತಿ.
ಮಾಡಿ-ಮಾಡಿಲ್ಪಟ್ಟಿರುವುದೇ ನಡೆಯುತ್ತಿದೆ, ಈಗ ಏನೂ ಹೊಸದಾಗಿ ನಡೆಯುತ್ತಿಲ್ಲ.... ಈ ಅನಾದಿ
ನಾಟಕವು ನಡೆಯುತ್ತಲೇ ಇರುತ್ತದೆ, ಇದರಲ್ಲಿ ಯಾವುದೇ ಮಾತಿನಲ್ಲಿ ತಬ್ಬಿಬ್ಬಾಗುವ ಅವಶ್ಯಕತೆಯಿಲ್ಲ.
ಕೆಲವು ಮಕ್ಕಳು ಹೇಳುತ್ತಾರೆ - ನಮ್ಮದು ಇದು ಅಂತಿಮ 84ನೇ ಜನ್ಮವೋ ಅಥವಾ ಅಲ್ಲವೋ,
ಗೊತ್ತಿಲ್ಲವೆಂದು ತಬ್ಬಿಬ್ಬಾಗುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ - ತಬ್ಬಿಬ್ಬಾಗಬೇಡಿ,
ಮನುಷ್ಯನಿಂದ ದೇವತೆಯಾಗುವ ಪುರುಷಾರ್ಥ ಮಾಡಿ.
ಓಂ ಶಾಂತಿ.
ಮಕ್ಕಳಿಗೆ ಓಂ ಶಾಂತಿಯ ಅರ್ಥವು ತಿಳಿದಿದೆ - ನಾನಾತ್ಮನಾಗಿದ್ದೇನೆ ಮತ್ತು ನಾನಾತ್ಮನ ಸ್ವಧರ್ಮವು
ಶಾಂತಿಯಾಗಿದೆ. ನಾನಾತ್ಮ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದ್ದೇನೆ. ಈ ಪಾಠವನ್ನು ಪಕ್ಕಾ
ಮಾಡಿಕೊಳ್ಳುತ್ತಾ ಹೋಗಿ. ಇದನ್ನು ಯಾರು ತಿಳಿಸುತ್ತಾರೆ? ಶಿವ ತಂದೆ. ಶಿವ ತಂದೆಯನ್ನೇ ನೆನಪು
ಮಾಡಬೇಕಾಗಿದೆ, ಅವರಿಗೆ ತಮ್ಮದೇ ಆದ ರಥವಿಲ್ಲ. ಆದ್ದರಿಂದ ಅವರಿಗೆ ಎತ್ತನ್ನು ತೋರಿಸುತ್ತಾರೆ.
ಮಂದಿರದಲ್ಲಿಯೂ ಬಸವನ್ನಿಟ್ಟಿದ್ದಾರೆ, ಇದಕ್ಕೆ ಪೂರ್ಣ ಅಜ್ಞಾನವೆಂದು ಹೇಳಲಾಗುತ್ತದೆ. ತಂದೆಯು
ಮಕ್ಕಳಿಗೆ ಅಥವಾ ಆತ್ಮರಿಗೆ ತಿಳಿಸುತ್ತಾರೆ. ಇವರು ಆತ್ಮಗಳ ತಂದೆ ಶಿವನಾಗಿದ್ದಾರೆ, ಇವರಿಗೆ ಅನೇಕ
ಹೆಸರುಗಳಿವೆ ಆದರೆ ಅನೇಕ ಹೆಸರುಗಳ ಕಾರಣ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ವಾಸ್ತವದಲ್ಲಿ ಅವರ
ಸತ್ಯವಾದ ಹೆಸರು ಶಿವ ಎಂದಾಗಿದೆ. ಶಿವ ಜಯಂತಿಯನ್ನೂ ಭಾರತದಲ್ಲಿಯೇ ಆಚರಣೆ ಮಾಡಲಾಗುತ್ತದೆ, ಅವರು
ನಿರಾಕಾರ ತಂದೆಯಾಗಿದ್ದಾರೆ, ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಕೆಲವರು ಭಗೀರಥ,
ಕೆಲವರು ನಂದೀಗಣವೆಂದು ಹೇಳಿ ಬಿಟ್ಟಿದ್ದಾರೆ. ತಂದೆಯೇ ತಿಳಿಸುತ್ತಾರೆ - ನಾನು ಯಾವ ಭಾಗ್ಯಶಾಲಿ
ರಥದಲ್ಲಿ ಬರುತ್ತೇನೆ, ನಾನು ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಬ್ರಹ್ಮಾರವರ ಮೂಲಕ
ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ. ನೀವೆಲ್ಲಾ ಭಾರತವಾಸಿಗಳು ತಿಳಿದುಕೊಂಡಿದ್ದೀರಿ -
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರು
ಸ್ವರ್ಗವಾಸಿಗಳಾಗಿದ್ದೆವು. 5000 ವರ್ಷಗಳ ಮೊದಲೂ ಯಾವಾಗ ನಾನು ಬಂದಿದ್ದೆನೋ ಆಗ ಎಲ್ಲರನ್ನೂ
ಸತೋಪ್ರಧಾನ ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದೆನು ನಂತರ ಪುನರ್ಜನ್ಮವನ್ನು ಅವಶ್ಯವಾಗಿ
ತೆಗೆದುಕೊಳ್ಳಬೇಕಾಯಿತು. ತಂದೆಯು ಎಷ್ಟು ನೇರವಾಗಿ ತಿಳಿಸುತ್ತಾರೆ. ಈಗ ಜಯಂತಿಯನ್ನಾಚರಿಸುತ್ತೀರಿ,
(ಈ 2026 ವರ್ಷದಲ್ಲಿ 90ನೇ ಶಿವ ಜಯಂತಿ ಎಂದು ಬರೆಯುವೆವು), ತಂದೆಯ ಅವತರಣೆಯಾಗಿ 90 ವರ್ಷಗಳಾಯಿತು
ಮತ್ತೆ ಜೊತೆ ಜೊತೆಗೆ ಬ್ರಹ್ಮಾ, ವಿಷ್ಣು, ಶಂಕರನ ಅವತರಣೆಯೂ ಆಗಿದೆ. ತ್ರಿಮೂರ್ತಿ ಬ್ರಹ್ಮನ
ಜಯಂತಿಯನ್ನು ಯಾರೂ ತೋರಿಸುವುದಿಲ್ಲ. ಇದು ಅವಶ್ಯವಾಗಿ ತೋರಿಸಬೇಕಾಗಿದೆ ಏಕೆಂದರೆ ತಂದೆಯು
ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಪುನಃ ಸ್ಥಾಪನೆ ಮಾಡುತ್ತೇನೆ. ಬ್ರಾಹ್ಮಣರನ್ನಾಗಿ
ಮಾಡುತ್ತಾ ಹೋಗುತ್ತೇನೆ ಅಂದಾಗ ಬ್ರಹ್ಮಾ ಮತ್ತು ಬ್ರಾಹ್ಮಣ ವಂಶಿಯರದೂ ಜನ್ಮವಾಯಿತು. ನಂತರ ನೀವೇ
ವಿಷ್ಣು ಪುರಿಯ ಮಾಲೀಕರಾಗುತ್ತೀರಿ ಎಂಬುದನ್ನು ತೋರಿಸುತ್ತೇನೆ. ತಂದೆಯ ನೆನಪಿನಿಂದಲೇ ನಿಮ್ಮ
ತುಕ್ಕು ಬಿಟ್ಟು ಹೋಗುವುದು. ಭಲೆ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ ಆದರೆ ಅದನ್ನು ಯಾರು
ಕಲಿಸಿದ್ದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ - ಹೇ ಮಕ್ಕಳೇ,
ನೀವು ತಮ್ಮ ತಂದೆಯನ್ನು ನೆನಪು ಮಾಡಿ, ಆಸ್ತಿಯು ನಿಮಗೆ ನನ್ನಿಂದಲೇ ಸಿಗುತ್ತದೆ. ನಾನು ನಿಮ್ಮ
ತಂದೆಯಾಗಿದ್ದೇನೆ, ನಾನು ಕಲ್ಪ-ಕಲ್ಪವೂ ಬರುತ್ತೇನೆ. ಬಂದು ನಿಮ್ಮನ್ನು ಮನುಷ್ಯರಿಂದ
ದೇವತೆಗಳನ್ನಾಗಿ ಮಾಡುತ್ತೇನೆ ಏಕೆಂದರೆ ನೀವು ದೇವಿ-ದೇವತೆಗಳಾಗಿದ್ದಿರಿ ನಂತರ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ. ರಾವಣನ ಮತದಂತೆ ನಡೆಯುತ್ತಿದ್ದೀರಿ.
ಈಶ್ವರೀಯ ಮತದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ.
ತಂದೆಯು ತಿಳಿಸುತ್ತಾರೆ
- ನಾನು ಕಲ್ಪದ ಮೊದಲೂ ಸಹ ಬಂದಿದ್ದೆನು, ಏನೆಲ್ಲವೂ ಕಳೆಯುತ್ತದೆಯೋ ಅದು ಕಲ್ಪ-ಕಲ್ಪವೂ ಆಗುತ್ತಲೇ
ಇರುವುದು. ತಂದೆಯು ಪುನಃ ಬಂದು ಇವರಲ್ಲಿ ಪ್ರವೇಶ ಮಾಡುತ್ತಾರೆ. ಈ ದಾದಾರವನ್ನು ಬಿಡಿಸುತ್ತಾರೆ
ನಂತರ ಇವರೆಲ್ಲರ ಪಾಲನೆ ಮಾಡಿಸುತ್ತಾರೆ. ನಾವೇ ಸತ್ಯಯುಗದಲ್ಲಿದ್ದೆವು, ನಾವು ಭಾರತವಾಸಿಗಳೇ 84
ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೊಟ್ಟ ಮೊದಲು ನೀವು
ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದಿರಿ. ಯಥಾ ರಾಜ-ರಾಣಿ, ತಥಾ ಪ್ರಜಾ ನಂಬರ್ವಾರ್......
ಎಲ್ಲರೂ ರಾಜರಾಗಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ. ನಿಮ್ಮದು ಸತ್ಯಯುಗದಲ್ಲಿ 8
ಜನ್ಮಗಳು, ತ್ರೇತಾಯುಗದಲ್ಲಿ 12 ಜನ್ಮಗಳು.... ಇದೇ ರೀತಿ ತಮ್ಮನ್ನು ತಿಳಿದುಕೊಳ್ಳಿ... ನಾವು ಈ
ಪಾತ್ರವನ್ನು ಅಭಿನಯಿಸಿದ್ದೇವೆ. ಮೊದಲು ಸೂರ್ಯವಂಶಿ ರಾಜಧಾನಿಯಲ್ಲಿ ಪಾತ್ರವನ್ನಭಿನಯಿಸಿದೆವು
ನಂತರ ಚಂದ್ರವಂಶದಲ್ಲಿ ಮತ್ತೆ ಕೆಳಗಿಳಿಯುತ್ತಾ ವಾಮ ಮಾರ್ಗದಲ್ಲಿ ಬಂದೆವು. 63 ಜನ್ಮಗಳನ್ನು
ತೆಗೆದುಕೊಂಡೆವು. ಭಾರತವಾಸಿಗಳೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ ಮತ್ತ್ಯಾವ
ಧರ್ಮದವರೂ ಇಷ್ಟು ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಗುರುನಾನಕರಿಗೆ 500 ವರ್ಷಗಳಾಯಿತು,
ಅವರದು ಸುಮಾರು 12-14 ಜನ್ಮಗಳಿರಬಹುದು. ಕ್ರಿಶ್ಚಿಯನ್ನರು 2000 ವರ್ಷಗಳಲ್ಲಿ 60
ಪುನರ್ಜನ್ಮಗಳನ್ನು ತೆಗೆದುಕೊಂಡಿರುತ್ತಾರೆ, ವೃದ್ಧಿಯಾಗುತ್ತಾ ಹೋಗುತ್ತದೆ. ಪುನರ್ಜನ್ಮಗಳನ್ನು
ತೆಗೆದುಕೊಳ್ಳುತ್ತಾ ಹೋಗುತ್ತಾರೆ. ಬುದ್ಧಿಯಲ್ಲಿ ಇದನ್ನು ವಿಚಾರ ಮಾಡಿ - ನಾವೇ 84 ಜನ್ಮಗಳನ್ನು
ತೆಗೆದುಕೊಂಡಿದ್ದೇವೆ, ಮತ್ತೆ ಸತೋಪ್ರಧಾನರಾಗಬೇಕಾಗಿದೆ. ಏನೆಲ್ಲವೂ ಕಳೆಯಿತೋ ಅದು ಡ್ರಾಮಾ.
ಡ್ರಾಮಾದಲ್ಲಿ ಏನು ಮಾಡಲ್ಪಟ್ಟಿದೆಯೋ ಅದೇ ಪುನರಾವರ್ತನೆಯಾಗುವುದು. ನಿಮ್ಮನ್ನು ಬೇಹದ್ದಿನ
ಚರಿತ್ರೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನೀವು ಪುನರ್ಜನ್ಮವನ್ನು ತೆಗೆದುಕೊಂಡು ಬಂದಿದ್ದೀರಿ.
ನೀವೀಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈಗ ಪುನಃ ತಂದೆಯು ನೆನಪು ತರಿಸಿದರು - ಮಕ್ಕಳೇ,
ನಿಮ್ಮ ಮನೆಯು ಶಾಂತಿಧಾಮವಾಗಿದೆ, ಆತ್ಮದ ರೂಪವೇನಾಗಿದೆ? ಬಿಂದು. ಅಲ್ಲಿ ಹೇಗೆ ಬಿಂದುಗಳ
ವೃಕ್ಷವಿರುತ್ತದೆ, ಆತ್ಮಗಳದೂ ನಂಬರ್ವಾರ್ ವೃಕ್ಷವಾಗಿದೆ, ನಂಬರ್ವಾರ್ ಆಗಿ ಕೆಳಗೆ ಬರುತ್ತಾರೆ.
ಪರಮಾತ್ಮನೂ ಬಿಂದುವಾಗಿದ್ದಾರೆ. ಅವರು ಇಷ್ಟು ದೊಡ್ಡ ಲಿಂಗವಾಗಿದ್ದಾರೆ ಎಂದಲ್ಲ. ತಂದೆಯು
ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗುತ್ತೀರೆಂದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತೇನೆ. ಮೊದಲು ನೀವು ನನ್ನವರಾದರೆ ನಾನು ನಿಮಗೆ ಓದಿಸುತ್ತೇನೆ. ಬಾಬಾ, ನಾವು
ನಿಮ್ಮವರಾಗಿದ್ದೇವೆ ಎಂದು ಹೇಳುತ್ತೀರಿ, ಜೊತೆ ಜೊತೆಗೆ ಓದಲೂಬೇಕಾಗಿದೆ. ನನ್ನವರಾದ ಕೂಡಲೇ ನಿಮ್ಮ
ವಿದ್ಯಾಭ್ಯಾಸವು ಆರಂಭವಾಗಿ ಬಿಟ್ಟಿತು.
ತಂದೆಯು ತಿಳಿಸುತ್ತಾರೆ
- ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಆದ್ದರಿಂದ ಕಮಲ ಪುಷ್ಪ ಸಮಾನ ಪವಿತ್ರರಾಗಿರಿ. ಬಾಬಾ, ನಾವು
ತಮ್ಮಿಂದ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ ಎಂದಿಗೂ ಪತಿತರಾಗುವುದಿಲ್ಲ ಎಂದು ಮಕ್ಕಳು
ಪ್ರತಿಜ್ಞೆ ಮಾಡುತ್ತಾರೆ. 63 ಜನ್ಮಗಳಂತೂ ಪತಿತರಾದಿರಿ, ಇದು 84 ಜನ್ಮಗಳ ಕಥೆಯಾಗಿದೆ. ತಂದೆಯು
ಬಂದು ಸಹಜ ಮಾಡಿ ತಿಳಿಸುತ್ತಾರೆ. ಹೇಗೆ ಲೌಕಿಕ ತಂದೆಯು ತಿಳಿಸುತ್ತಾರಲ್ಲವೆ ಹಾಗೆಯೇ ಇವರು
ಬೇಹದ್ದಿನ ತಂದೆಯಾಗಿದ್ದಾರೆ. ಬಂದು ಆತ್ಮಗಳೊಂದಿಗೆ ಮಕ್ಕಳೇ, ಮಕ್ಕಳೇ ಎಂದು ಮಾತನಾಡುತ್ತಾರೆ.
ಶಿವರಾತ್ರಿಯನ್ನೂ ಆಚರಿಸುತ್ತಾರಲ್ಲವೆ. ಇದು ಅರ್ಧ ಕಲ್ಪದ ದಿನ ಮತ್ತು ಅರ್ಧ ಕಲ್ಪದ ರಾತ್ರಿಯಾಗಿದೆ.
ಈಗ ರಾತ್ರಿಯ ಅಂತ್ಯ ಮತ್ತು ದಿನದ ಆದಿಯ ಸಂಗಮವಾಗಿದೆ. ಭಾರತವು ಸತ್ಯಯುಗವಾಗಿದ್ದಾಗ ದಿನವಾಗಿತ್ತು,
ಸತ್ಯ-ತ್ರೇತಾಯುಗಕ್ಕೆ ಬ್ರಹ್ಮನ ದಿನವೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರಾಗಿದ್ದೀರಲ್ಲವೆ.
ನೀವು ಬ್ರಾಹ್ಮಣರಿಗೆ ತಿಳಿದಿದೆ - ಈಗ ನಮ್ಮ ರಾತ್ರಿಯು ಪೂರ್ಣವಾಗುತ್ತಿದೆ. ಈಗ ತಮೋಪ್ರಧಾನ
ಭಕ್ತಿಯಾಗಿದೆ. ಗುಡಿ-ಗೋಪುರಗಳನ್ನು ಸುತ್ತುತ್ತಿರುತ್ತಾರೆ, ಎಲ್ಲರ ಪೂಜೆ ಮಾಡುತ್ತಾರೆ. ಮೂರು
ದಾರಿಗಳು ಸೇರುವ ಸ್ಥಾನ(ಟಿವಾಟೆ)ವನ್ನೂ ಪೂಜಿಸುತ್ತಾರೆ. ಮನುಷ್ಯರ ಶರೀರಕ್ಕೂ ಪೂಜೆ ಮಾಡುತ್ತಾರೆ.
ಸನ್ಯಾಸಿಗಳು ತಮ್ಮನ್ನು ಶಿವೋಹಂ ಎಂದು ಹೇಳಿ ಕುಳಿತು ಬಿಡುತ್ತಾರೆ ಮತ್ತೆ ಮಾತೆಯರು ಹೋಗಿ ಅವರ
ಪೂಜೆ ಮಾಡುತ್ತಾರೆ. ಬ್ರಹ್ಮಾ ತಂದೆಯು ಬಹಳ ಅನುಭವಿಯಾಗಿದ್ದಾರೆ. ತಿಳಿಸುತ್ತಾರೆ - ನಾನೂ ಸಹ ಬಹಳ
ಪೂಜೆ ಮಾಡಿದೆನು ಆದರೆ ಆ ಸಮಯದಲ್ಲಿ ಜ್ಞಾನವಂತೂ ಇರಲಿಲ್ಲ. ಹೂಗಳನ್ನು ಎರಚುತ್ತಿದ್ದೆವು, ಇದೂ ಸಹ
ಮೋಸವಾಯಿತಲ್ಲವೆ ಆದರೆ ಇದೆಲ್ಲವೂ ಪುನಃ ಆಗುವುದು. ಭಕ್ತರ ರಕ್ಷಕನು ಭಗವಂತನಾಗಿದ್ದಾರೆ ಏಕೆಂದರೆ
ಎಲ್ಲರೂ ದುಃಖಿಯಾಗಿದ್ದಾರಲ್ಲವೆ. ತಂದೆಯು ತಿಳಿಸುತ್ತಾರೆ - ದ್ವಾಪರದಿಂದ ಹಿಡಿದು ನೀವು
ಗುರುಗಳನ್ನು ಮಾಡಿಕೊಳ್ಳುತ್ತಾ ಬಂದಿರಿ ಮತ್ತು ಭಕ್ತಿಮಾರ್ಗದಲ್ಲಿ ಇಳಿಯುತ್ತಾ ಬಂದಿದ್ದೀರಿ.
ಇಲ್ಲಿಯವರೆಗೂ ಸಾಧು-ಸಂತರು ಸಾಧನೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಅವರ
ಉದ್ಧಾರವನ್ನೂ ಮಾಡುತ್ತೇನೆ, ಸಂಗಮದಲ್ಲಿ ನಿಮ್ಮದು ಸದ್ಗತಿಯಾಗಿ ಬಿಡುತ್ತದೆ ನಂತರ ನೀವು 84
ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ತಂದೆಗೆ ಜ್ಞಾನ ಸಾಗರ, ಮನುಷ್ಯ ಸೃಷ್ಟಿಯ ಬೀಜ ರೂಪನೆಂದು
ಹೇಳಲಾಗುತ್ತದೆ. ಸತ್ಚಿತ್ ಆನಂದ ಸ್ವರೂಪನಾಗಿದ್ದಾರೆ. ಅವರೆಂದೂ ವಿನಾಶ ಹೊಂದುವುದಿಲ್ಲ. ಅವರಲ್ಲಿ
ಜ್ಞಾನವಿದೆ, ಜ್ಞಾನ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ಅವರಿಂದ ಅವಶ್ಯವಾಗಿ ಆಸ್ತಿ
ಸಿಗಬೇಕಾಗಿದೆ. ಈಗ ನೀವು ಮಕ್ಕಳಿಗೆ ಆಸ್ತಿಯು ಸಿಗುತ್ತಿದೆ, ಶಿವ ತಂದೆಯಲ್ಲವೆ. ಅವರೂ (ಬ್ರಹ್ಮಾ)
ತಂದೆಯಾಗಿದ್ದಾರೆ ಇವರೂ ನಿಮ್ಮ ತಂದೆಯಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮಗೆ
ಓದಿಸುತ್ತಾರೆ, ಆದ್ದರಿಂದ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಲಾಗುತ್ತದೆ. ಎಷ್ಟೊಂದು
ಮಂದಿ ಬಿ.ಕೆ.ಗಳಿದ್ದಾರೆ, ನಮಗೆ ತಂದೆಯಿಂದ ಆಸ್ತಿ ಸಿಗುತ್ತದೆ, ತಂದೆಯು ನಮ್ಮನ್ನು
ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ -
ಹೇ ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ತಲೆಯ ಮೇಲಿರುವ ಪಾಪಗಳ ಹೊರೆಯು
ಭಸ್ಮವಾಗುವುದು ಮತ್ತು ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ನೀವು ಸತ್ಯ ಚಿನ್ನ, ಸತ್ಯ
ಆಭರಣಗಳಾಗಿದ್ದಿರಿ, ಆತ್ಮ ಮತ್ತು ಶರೀರ ಎರಡೂ ಸತೋಪ್ರಧಾನವಾಗಿತ್ತು, ಆತ್ಮವು ಮತ್ತೆ ಸತೋ-ರಜೋ-ತಮೋ
ಆದಾಗ ಶರೀರವೂ ಅಂತಹ ತಮೋ ಗುಣವಾದದ್ದೇ ಸಿಗುತ್ತದೆ. ತಂದೆಯು ನಿಮಗೆ ಸಲಹೆ ನೀಡುತ್ತಾರೆ - ಮಕ್ಕಳೇ,
ನನ್ನನ್ನು ನೆನಪು ಮಾಡಿ. ಹೇ ಪತಿತ-ಪಾವನ ಬನ್ನಿ ಎಂದು ನನ್ನನ್ನು ಕರೆಯುತ್ತೀರಲ್ಲವೆ. ಭಾರತದ
ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ, ಈಗ ನಿಮಗೆ ಆ ರಾಜಯೋಗವನ್ನು ಕಲಿಸುತ್ತಿದ್ದೇನೆ,
ನನ್ನೊಂದಿಗೆ ಬುದ್ಧಿಯೋಗವನ್ನು ಇಟ್ಟಿದ್ದೇ ಆದರೆ ಅದರಿಂದ ನಿಮ್ಮಲ್ಲಿರುವ ತುಕ್ಕು ಭಸ್ಮವಾಗುತ್ತದೆ.
ಎಷ್ಟು ನೆನಪು ಮಾಡುತ್ತೀರೋ ಅಷ್ಟು ತುಕ್ಕು ಬಿಡುತ್ತಾ ಹೋಗುವುದು. ನೆನಪಿನದೇ ಮುಖ್ಯ ಮಾತಾಗಿದೆ.
ಜ್ಞಾನವನ್ನು ತಂದೆಯು ಕೊಟ್ಟಿದ್ದಾರೆ, ಸತ್ಯಯುಗದಲ್ಲಿ ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ
ಪವಿತ್ರರಾಗಿದ್ದರು, ಈಗ ಎಲ್ಲರೂ ಪತಿತರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಇವರ ಬಹಳ ಜನ್ಮಗಳ
ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ.
ಇವರು ಓದಿ ನಂತರ ಮೊದಲ ನಂಬರಿನಲ್ಲಿ ಹೋಗುತ್ತಾರೆ. ನಂಬರ್ವಾರ್ ಆಗುತ್ತಾರಲ್ಲವೆ ಆದರೆ ಮುಖ್ಯವಾಗಿ
ಒಬ್ಬರ ಹೆಸರಿರುತ್ತದೆ. ತಂದೆಯು ಮಕ್ಕಳಿಗೆ 84 ಜನ್ಮಗಳ ರಹಸ್ಯವನ್ನು ಚೆನ್ನಾಗಿ ತಿಳಿಸಿದ್ದಾರೆ.
ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ, ಹಿಂದೂ ಧರ್ಮದವರಲ್ಲ. ನೀವು ಧರ್ಮ ಶ್ರೇಷ್ಠ,
ಕರ್ಮ ಶ್ರೇಷ್ಠವಾಗಿದ್ದಿರಿ ನಂತರ ರಾವಣನ ಪ್ರವೇಶತೆಯಾಗಿದ್ದರಿಂದ ಕರ್ಮ ಭ್ರಷ್ಟ, ಧರ್ಮ
ಭ್ರಷ್ಟರಾಗಿದ್ದೀರಿ. ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳುವುದರಲ್ಲಿ ಸಂಕೋಚವಾಗುತ್ತದೆ.
ಆದ್ದರಿಂದ ಹಿಂದೂ ಎಂದು ಹೆಸರಿಟ್ಟು ಬಿಟ್ಟಿದ್ದಾರೆ. ವಾಸ್ತವದಲ್ಲಿ ಆದಿ ಸನಾತನ ದೇವಿ-ದೇವತಾ
ಧರ್ಮದವರಾಗಿದ್ದಿರಿ. ನೀವು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿ ಬಿಟ್ಟಿದ್ದೀರಿ.
ಭಾರತವಾಸಿಗಳಿಗಾಗಿಯೇ 84 ಜನ್ಮಗಳ ಚಕ್ರವಿದೆ. ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಮೊದಲು ನೀವು
ಹೋಗುತ್ತೀರಿ, ಹೇಗೆ ದಿಬ್ಬಣವು ಹೊರಡುತ್ತದೆಯಲ್ಲವೆ. ಶಿವ ತಂದೆಗೆ ಪ್ರಿಯತಮನೆಂತಲೂ ಹೇಳುತ್ತಾರೆ.
ಈ ಸಮಯದಲ್ಲಿ ನೀವು ಪ್ರಿಯತಮೆಯರು ಛೀ ಛೀ, ತಮೋಪ್ರಧಾನರಾಗಿದ್ದೀರಿ. ನಿಮ್ಮನ್ನು ಪವಿತ್ರರನ್ನಾಗಿ
ಮಾಡಿ ಕರೆದುಕೊಂಡು ಹೋಗುತ್ತಾರೆ. ಆತ್ಮರನ್ನು ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆ. ಇವರಿಗೆ
ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳಲಾಗಿದೆ. ಬೇಹದ್ದಿನ ತಂದೆಯು ಕರೆದುಕೊಂಡು ಹೋಗುತ್ತಾರೆ. ಅವರ
ಹೆಸರೇನು? ಶಿವ ತಂದೆ. ಹೆಸರು ಶರೀರಕ್ಕೆ ಬರುತ್ತದೆ ಆದರೆ ಪರಮಾತ್ಮನೆಂದೇ ಹೆಸರಿದೆ.
ಬ್ರಹ್ಮಾ-ವಿಷ್ಣು-ಶಂಕರನಿಗಾದರೂ ಸೂಕ್ಷ್ಮ ಶರೀರವಿದೆ. ಶಿವ ತಂದೆಗೆ ಯಾವುದೇ ಶರೀರವಿಲ್ಲ, ಅವರಿಗೆ
ಶಿವ ತಂದೆಯೆಂತಲೇ ಹೇಳಲಾಗುತ್ತದೆ. ಓ ಮಾತಾಪಿತಾ ನಾವು ನಿಮ್ಮ ಬಾಲಕರಾಗಿದ್ದೇವೆ ಎಂದು ಮಕ್ಕಳು
ಹೇಳುತ್ತೀರಿ. ಅನ್ಯರಂತೂ ಕೇವಲ ಕೂಗುತ್ತಿರುತ್ತಾರೆ ಏಕೆಂದರೆ ಅವರಿಗೆ ತಿಳಿದೇ ಇಲ್ಲ. ಒಂದುವೇಳೆ
ಇದು ಎಲ್ಲರಿಗೆ ಅರ್ಥವಾಗಿ ಬಿಟ್ಟರೆ ಏನಾಗುವುದೋ ಗೊತ್ತಿಲ್ಲ. ಈಗ ದೈವೀ ವೃಕ್ಷದ ನಾಟಿಯಾಗುತ್ತದೆ.
ವಜ್ರ ಸಮಾನರಿಂದ ಕವಡೆಯಂತೆ ಆಗುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ ಮತ್ತೆ ಹೊಸದಾಗಿ
ಆರಂಭವಾಗುವುದು. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ತಂದೆಯು ತಿಳಿಸುತ್ತಾರೆ -
ನೀವು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. 84 ಲಕ್ಷ ಜನ್ಮಗಳಿರಲು ಸಾಧ್ಯವಿಲ್ಲ. ಇದು
ದೊಡ್ಡ ತಪ್ಪಾಗಿದೆ. 84 ಲಕ್ಷ ಜನ್ಮಗಳೆಂದು ತಿಳಿದುಕೊಂಡಿರುವ ಕಾರಣ ಕಲ್ಪದ ಆಯಸ್ಸು ಲಕ್ಷಾಂತರ
ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ಇದು ಪೂರ್ಣ ಅಸತ್ಯವಾಗಿದೆ. ಭಾರತವು ಈಗ ಅಸತ್ಯ ಖಂಡವಾಗಿದೆ.
ನೀವು ಸತ್ಯ ಖಂಡದಲ್ಲಿ ಸದಾ ಸುಖಿಯಾಗಿದ್ದಿರಿ, ಈ ಸಮಯದಲ್ಲಿ ನೀವು 21 ಜನ್ಮಗಳ ಆಸ್ತಿಯನ್ನು
ಪಡೆದುಕೊಳ್ಳುತ್ತೀರಿ. ಎಲ್ಲವೂ ನಿಮ್ಮ ಪುರುಷಾರ್ಥದ ಮೇಲೆ ಅವಲಂಭಿಸಿದೆ. ರಾಜಧಾನಿಯಲ್ಲಿ ಯಾವ
ಪದವಿಯನ್ನು ಬೇಕಾದರೂ ಪಡೆದುಕೊಳ್ಳಿ. ಅದರಲ್ಲಿ ಜಾದು ಮುಂತಾದುದರ ಮಾತಿಲ್ಲ. ಮನುಷ್ಯರಿಂದ
ದೇವತೆಗಳು ಅವಶ್ಯವಾಗಿ ಆಗುತ್ತೀರಿ. ಇದಂತೂ ಒಳ್ಳೆಯ ಜಾದು ಅಲ್ಲವೆ. ನಾವು ತಂದೆಯ ಮಕ್ಕಳಾಗಿದ್ದೇವೆ.
ಕಲ್ಪ-ಕಲ್ಪವೂ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಎಂಬುದನ್ನು ನೀವು
ಸೆಕೆಂಡಿನಲ್ಲಿ ಅರಿತುಕೊಳ್ಳುತ್ತೀರಿ. ಅರ್ಧಕಲ್ಪ ಅಲೆದಾಡುತ್ತಾ ಬಂದಿದ್ದೀರಿ ಆದರೆ ಯಾರೂ
ಸ್ವರ್ಗವಾಸಿಗಳಂತೂ ಆಗಲಿಲ್ಲ. ತಂದೆಯು ಬಂದು ನೀವು ಮಕ್ಕಳನ್ನು ಯೋಗ್ಯರನ್ನಾಗಿ ಮಾಡುತ್ತಾರೆ.
ಅವಶ್ಯವಾಗಿ ಅಲ್ಲಿ ಮಹಾಭಾರತ ಯುದ್ಧವು ನಡೆದಿತ್ತು ಮತ್ತು ರಾಜಯೋಗವನ್ನು ಕಲಿಸಿದ್ದರು. ಶಿವ
ತಂದೆಯು ತಿಳಿಸುತ್ತಾರೆ - ನಾನೇ ಬಂದು ನಿಮಗೆ ಕಲಿಸಿಕೊಡುತ್ತೇನೆ, ಕ್ರಿಸ್ತನಲ್ಲ. ಈಗ ನಿಮ್ಮದು
ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಇದರಲ್ಲಿ ನೀವು ತಬ್ಬಿಬ್ಬಾಗಬೇಡಿ. ನೀವು
ಭಾರತವಾಸಿಗಳಾಗಿದ್ದೀರಿ, ನಿಮ್ಮ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಅನ್ಯ ಧರ್ಮದವರಂತೂ
ವೈಕುಂಠದಲ್ಲಿ ಬರಲು ಸಾಧ್ಯವಿಲ್ಲ. ಈ ನಾಟಕವು ಅನಾದಿಯಾಗಿ ನಡೆಯುತ್ತಿರುತ್ತದೆ. ಯಾವಾಗ ಆಯಿತು
ಎಂದು ಹೇಳುವಂತಿಲ್ಲ. ಇದಕ್ಕೆ ಅಂತ್ಯವಿಲ್ಲ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಾ
ಇರುತ್ತದೆ. ಇದು ಸಂಗಮಯುಗ ಚಿಕ್ಕ ಯುಗವಾಗಿದೆ. ಬ್ರಾಹ್ಮಣರದು ಶಿಖೆಯಾಗಿದೆ, ತಂದೆಯು ನೀವು
ಬ್ರಾಹ್ಮಣರನ್ನು ದೇವತೆಗಳನ್ನಾಗಿ ಮಾಡುತ್ತಿದ್ದಾರೆ ಅಂದಮೇಲೆ ಬ್ರಹ್ಮನ ಮಕ್ಕಳು ಅವಶ್ಯವಾಗಿ
ಆಗಬೇಕಾಗಿದೆ. ನಿಮಗೆ ತಾತನಿಂದ ಆಸ್ತಿಯು ಸಿಗುತ್ತದೆ. ಎಲ್ಲಿಯವರೆಗೆ ತನ್ನನ್ನು ಬಿ.ಕೆ., ಎಂದು
ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆಸ್ತಿಯು ಹೇಗೆ ಸಿಗುವುದು! ಆದರೂ ಸಹ ಯಾರಾದರೂ
ಅಲ್ಪಸ್ವಲ್ಪ ಜ್ಞಾನವನ್ನು ಕೇಳಿದರೂ ಸಾಧಾರಣ ಪ್ರಜೆಗಳಲ್ಲಿ ಬರುತ್ತಾರೆ. ಬರುವುದಂತೂ ಖಂಡಿತವಾಗಿದೆ,
ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆ ಮಾಡುತ್ತಾರೆ.
ಗೀತೆಯನ್ನು ಬಿಟ್ಟರೆ ಮತ್ತ್ಯಾವುದೇ ಶಾಸ್ತ್ರವಿಲ್ಲ. ಗೀತೆಯು ಸರ್ವೋತ್ತಮ ದೈವೀ ಧರ್ಮದ
ಶಾಸ್ತ್ರವಾಗಿದೆ, ಇದರಿಂದ ಮೂರು ಧರ್ಮಗಳು ಸ್ಥಾಪನೆಯಾಗುತ್ತವೆ. ಬ್ರಾಹ್ಮಣರೂ ಇಲ್ಲಿಯೇ
ಆಗಬೇಕಾಗಿದೆ, ದೇವತೆಗಳೂ ಇಲ್ಲಿಯೇ ಆಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಪ್ರತಿಯೊಬ್ಬರ ನಿಶ್ಚಿತ ಪಾತ್ರವನ್ನರಿತು ಸದಾ ನಿಶ್ಚಿಂತವಾಗಿರಬೇಕಾಗಿದೆ.
ಮಾಡಿ-ಮಾಡಲ್ಪಟ್ಟಿರುವುದೇ ಆಗುತ್ತಿದೆ...... ಡ್ರಾಮಾದ ಮೇಲೆ ಅಡೋಲರಾಗಿರಬೇಕಾಗಿದೆ.
2. ಈ ಚಿಕ್ಕದಾದ
ಸಂಗಮಯುಗದಲ್ಲಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೆನಪಿನ ಬಲದಿಂದ
ತುಕ್ಕನ್ನು ತೆಗೆದು ಸ್ವಯಂನ್ನು ಕವಡೆಯಿಂದ ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ. ಮಧುರ ವೃಕ್ಷದಲ್ಲಿ
ಹೋಗುವುದಕ್ಕಾಗಿ ಯೋಗ್ಯರಾಗಬೇಕಾಗಿದೆ.
ವರದಾನ:
ಸದಾ ಒಬ್ಬ
ತಂದೆಯ ನೆನಪಿನಲ್ಲಿ ಮಗ್ನರಾಗಿದ್ದು ಏಕರಸ ಸ್ಥಿತಿಯನ್ನಾಗಿ ಮಾಡಿಕೊಳ್ಳುವಂತಹ ಸಾಕ್ಷಿ ದೃಷ್ಟ ಭವ.
ಯಾವುದು ಸಂಕಲ್ಪ,
ಸ್ವಪ್ನದಲ್ಲಿಯೂ ಇರುವುದಿಲ್ಲವೋ ಅಂತಹ ಪರೀಕ್ಷೆಯು ಈಗ ಬರುವುದಿದೆ. ಆದರೆ ತಮ್ಮಲ್ಲಿ ಇಂತಹ
ಅಭ್ಯಾಸವಿರಬೇಕು - ಹೇಗೆಂದರೆ ಅಲ್ಪಕಾಲದ ಡ್ರಾಮಾವನ್ನು ಸಾಕ್ಷಿಯಾಗಿದ್ದು ನೋಡಲಾಗುತ್ತದೆ,
ಅದರಲ್ಲಿ ಭಲೆ ನೋವಿರುವುದೇ ಇರಬಹುದು ಅಥವಾ ತಮಾಷೆಯೇ ಇರಬಹುದು, ಅದರಲ್ಲಿ ಅಂತರವಾಗುವುದಿಲ್ಲ.
ಅದೇರೀತಿ ಭಲೆ ಯಾವುದೇ ರಮಣೀಕವಾದ ಪಾತ್ರವಿರಲಿ, ಸ್ನೇಹಿ ಆತ್ಮನ ಗಂಭೀರ ಪಾತ್ರವೇ ಇರಲಿ....
ಪ್ರತಿಯೊಂದು ಪಾತ್ರವನ್ನು ಸಾಕ್ಷಿ ದೃಷ್ಟನಾಗಿದ್ದು ನೋಡಿರಿ, ಏಕರಸ ಸ್ಥಿತಿಯಿರಲಿ. ಆದರೆ ಇಂತಹ
ಸ್ಥಿತಿಯಾಗಬೇಕೆಂದರೆ ಸದಾ ಒಬ್ಬ ತಂದೆಯ ನೆನಪಿನಲ್ಲಿ ಮಗ್ನರಾಗಿರಬೇಕು.
ಸ್ಲೋಗನ್:
ಧೃಡ
ನಿಶ್ಚಯದಿಂದ ತಮ್ಮ ಭಾಗ್ಯವನ್ನು ನಿಶ್ಚಿತಗೊಳಿಸುತ್ತೀರೆಂದರೆ ಸದಾ ನಿಶ್ಚಿಂತವಾಗಿ ಇರುತ್ತೀರಿ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”
ಕರ್ಮ ಮಾಡುವುದಕ್ಕೆ
ಮೊದಲು ನಿಶ್ಚಯವಿಟ್ಟುಕೊಳ್ಳಿ ನಮ್ಮ ವಿಜಯ ಆಗೇ ಇದೆ. ಅನೇಕ ಕಲ್ಪ ವಿಜಯಿಯಾಗಿದ್ದೇವೆ. ಯಾವಾಗ
ಅನೇಕ ಕಲ್ಪ, ಅನೇಕ ಬಾರಿ ವಿಜಯಿಯಾಗಿ ವಿಜಯ ಮಾಲೆಯಲ್ಲಿ ಪೋಣಿಸಲ್ಪಡುವಂತಹ,
ಪೂಜೆಯಾಗುವಂತಹವರಾಗಿದ್ದೀರೆಂದಾಗ ಈಗ ಅದನ್ನೇ ಪುನರಾವರ್ತಿಸಬೇಕು. ಮಾಡಲ್ಪಟ್ಟಿರುವಂತಹ ಕರ್ಮ
ಮತ್ತೊಮ್ಮೆ ಪುನರಾವರ್ತಿಸಬೇಕು ಅದಕ್ಕೆ ಹೇಳಲಾಗುತ್ತದೆ ಮಾಡಿ-ಮಾಡಲ್ಪಟ್ಟಿರುವ... ಮಾಡಲಾಗಿದೆ
ಆದರೆ ಈಗ ಪುನಃ ಪುನರಾವರ್ತಿಸಿ “ಮಾಡಿ-ಮಾಡಲ್ಪಟ್ಟಿರುವ” ಎಂದು ಹೇಳಲಾಗುತ್ತದೆಯೇ ಅದನ್ನು ಈಗ
ಪೂರ್ಣ ಮಾಡಬೇಕು.