23.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ನಿಮ್ಮನ್ನು ಈ ತೀರದಿಂದ ಆ ತೀರಕ್ಕೆ ಕರೆದುಕೊಂಡು ಹೋಗಲು ಅಂಬಿಗನು ಸಿಕ್ಕಿದ್ದಾರೆ, ನಿಮ್ಮ
ಕಾಲುಗಳು ಈಗ ಈ ಹಳೆಯ ಪ್ರಪಂಚದಲ್ಲಿಲ್ಲ, ನಿಮ್ಮ ದೋಣಿಯ ಹಗ್ಗವು ಬಿಚ್ಚಲ್ಪಟ್ಟಿದೆ”
ಪ್ರಶ್ನೆ:
ಜಾದೂಗಾರ ತಂದೆಯ
ಅದ್ಭುತವಾದ ಜಾದೂ ಯಾವುದಾಗಿದೆ, ಅದನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ?
ಉತ್ತರ:
ಕವಡೆಯ
ಸಮಾನವಾಗಿರುವ ಆತ್ಮನನ್ನು ವಜ್ರಸಮಾನವನ್ನಾಗಿ ಮಾಡುವುದು, ಹೂದೋಟದ ಮಾಲೀಕನನ್ನಾಗಿ ಮುಳ್ಳುಗಳನ್ನು
ಹೂಗಳನ್ನಾಗಿ ಮಾಡುವುದು ಬಹಳ ಅದ್ಭುತವಾದ ಜಾದೂ ಆಗಿದೆ. ಇದನ್ನು ಒಬ್ಬ ಜಾದೂಗಾರ ತಂದೆಯೇ
ಮಾಡುತ್ತಾರೆ ಮತ್ತ್ಯಾರೂ ಇಲ್ಲ. ಮನುಷ್ಯರು ಹಣವನ್ನು ಸಂಪಾದಿಸಲು ಕೇವಲ ಜಾದೂಗಾರರೆಂದು
ಕರೆಸಿಕೊಳ್ಳುತ್ತಾರೆ ಆದರೆ ತಂದೆಯಂತಹ ಜಾದುವನ್ನು ಮಾಡಲು ಸಾಧ್ಯವಿಲ್ಲ.
ಓಂ ಶಾಂತಿ.
ಇಡೀ ಸೃಷ್ಟಿಚಕ್ರ ಅಥವಾ ನಾಟಕದಲ್ಲಿ ತಂದೆಯು ಒಂದೇಬಾರಿ ಬರುತ್ತಾರೆ ಮತ್ತ್ಯಾವುದೇ ಸತ್ಸಂಗ
ಮೊದಲಾದವುಗಳಲ್ಲಿ ಈ ರೀತಿ ತಿಳಿದುಕೊಂಡಿರುವುದಿಲ್ಲ. ಅರ್ಥವನ್ನು ತಿಳಿಸುವವರು ತಂದೆಯೂ ಅಲ್ಲ,
ಅವರು ಮಕ್ಕಳೂ ಅಲ್ಲ. ಅವರು ವಾಸ್ತವದಲ್ಲಿ ಅನುಯಾಯಿಗಳೂ ಅಲ್ಲ. ಇಲ್ಲಂತೂ ನೀವು ಮಕ್ಕಳಾಗಿದ್ದೀರಿ
ಮತ್ತು ಅನುಯಾಯಿಗಳೂ ಆಗಿದ್ದೀರಿ. ತಂದೆಯು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ತಂದೆಯು ಹೋಗುತ್ತಾರೆಂದರೆ ಮತ್ತು ಮಕ್ಕಳೂ ಸಹ ಈ ಛೀ ಛೀ ಪ್ರಪಂಚದಿಂದ ತಮ್ಮ ಹೂಗಳ ಪ್ರಪಂಚದಲ್ಲಿ
ಹೋಗಿ ರಾಜ್ಯಭಾರ ಮಾಡುತ್ತೀರಿ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಬರಬೇಕು. ಈ ಶರೀರದಲ್ಲಿ ವಾಸ
ಮಾಡುವಂತಹ ಯಾವ ಆತ್ಮವಿದೆಯೋ ಅದು ಬಹಳ ಖುಷಿಪಡುತ್ತದೆ ಅಂದರೆ ನೀವಾತ್ಮರು ಬಹಳ ಖುಷಿಯಾಗಿರಬೇಕು.
ಎಲ್ಲರ ಬೇಹದ್ದಿನ ತಂದೆಯು ಈಗ ಬಂದಿದ್ದಾರೆ. ಇದೂ ಸಹ ಕೇವಲ ನೀವು ಮಕ್ಕಳಿಗೇ ತಿಳುವಳಿಕೆಯಿದೆ. ಇಡೀ
ಪ್ರಪಂಚದಲ್ಲಂತೂ ಎಲ್ಲರೂ ತಿಳುವಳಿಕೆಹೀನರೇ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ- ರಾವಣನು
ನಿಮ್ಮನ್ನು ತಿಳುವಳಿಕೆಹೀನರನ್ನಾಗಿ ಮಾಡಿದ್ದಾನೆ, ತಂದೆಯು ಬಂದು ತಿಳುವಳಿಕೆಯುಳ್ಳವರನ್ನಾಗಿ
ಮಾಡುತ್ತಾರೆ. ಇಡೀ ವಿಶ್ವದಲ್ಲಿ ರಾಜ್ಯಮಾಡಲು ಯೋಗ್ಯರು, ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ
ವಿದ್ಯಾರ್ಥಿಜೀವನವೂ ಸಹ ಒಂದೇಬಾರಿ ಇರುತ್ತದೆ ಅಂದಾಗ ಸ್ವಯಂ ಭಗವಂತನೇ ಓದಿಸುತ್ತಾರೆಂದು
ಬುದ್ಧಿಯಲ್ಲಿ ಬರಲು ಸಾಧ್ಯವಿಲ್ಲ. ಅವರಿಗಂತೂ ತಮ್ಮ ಉದ್ಯೋಗ-ವ್ಯವಹಾರಗಳೇ ನೆನಪಿರುತ್ತದೆ.
ಭಗವಂತನೇ ನಮಗೆ ಓದಿಸುತ್ತಾರೆಂದು ನೀವೀಗ ತಿಳಿದುಕೊಂಡಿದ್ದೀರೆಂದಮೇಲೆ ಎಷ್ಟೊಂದು
ಹರ್ಷಿತರಾಗಿರಬೇಕು. ಉಳಿದವರೆಲ್ಲರೂ ಕನಿಷ್ಠರಾದವರ ಮಕ್ಕಳಾಗಿದ್ದಾರೆ. ನೀವಂತೂ ಭಗವಂತನ
ಮಕ್ಕಳಾದ್ದೀರಿ ಅಂದಮೇಲೆ ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು. ಕೆಲವರು ಬಹಳ
ಹರ್ಷಿತರಾಗಿರುತ್ತಾರೆ. ಕೆಲವರು ಹೇಳುತ್ತಾರೆ- ಬಾಬಾ, ನಮಗೆ ಮುರುಳಿಯನ್ನು ಹೇಳಲು ಬರುವುದಿಲ್ಲ.....
ಅರೆ! ಮುರುಳಿಯೇನು ಕಷ್ಟವೇ? ಹೇಗೆ ಭಕ್ತಿಮಾರ್ಗದಲ್ಲಿ ಸಾಧು-ಸಂತ ಮೊದಲಾದವರೊಂದಿಗೆ ಕೆಲವರು
ಕೇಳುತ್ತಾರೆ- ನಾವು ಈಶ್ವರನೊಂದಿಗೆ ಹೇಗೆ ಮಿಲನ ಮಾಡುವುದು? ಆದರೆ ಅವರು ತಿಳಿದುಕೊಂಡಿಲ್ಲ.
ತಂದೆಯನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಈ ನಾಟಕವು ಹೀಗೆ ಮಾಡಲ್ಪಟ್ಟಿದೆ. ಮುಂದಿನ ಕಲ್ಪದಲ್ಲಿಯೂ
ಮರೆತುಹೋಗುತ್ತೀರಿ. ನಿಮ್ಮಲ್ಲಿಯೂ ಎಲ್ಲರೂ ತಂದೆ ಮತ್ತು ರಚನೆಯನ್ನು ಅರಿತುಕೊಂಡಿದ್ದಾರೆಂದಲ್ಲ.
ಕೆಲವೊಂದು ಕಡೆ ಇಂತಹ ಚಲನೆಯಲ್ಲಿ ನಡೆಯುತ್ತಾರೆ ಮಾತೇ ಕೇಳಬೇಡಿ. ಆ ನಶೆಯೇ ಹೊರಟುಹೋಗುತ್ತದೆ. ಈಗ
ನೀವು ಮಕ್ಕಳ ಕಾಲು ಈ ಹಳೆಯ ಪ್ರಪಂಚದಲ್ಲಿ ಹೇಗೆ ಇಲ್ಲವೇ ಇಲ್ಲ. ಏಕೆಂದರೆ ನಿಮಗೆ ಅರ್ಥವಾಗಿ-
ಕಲಿಯುಗೀ ಪ್ರಪಂಚದಿಂದ ಈಗ ಕಾಲನ್ನು ತೆಗೆದಿದ್ದೇವೆ, ದೋಣಿಕಟ್ಟಿರುವ ಹಗ್ಗವು ಬಿಚ್ಚಲ್ಪಟ್ಟಿದೆ.
ನಾವೀಗ ಹೋಗುತ್ತಿದ್ದೇವೆ, ತಂದೆಯು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬುದು
ಬುದ್ಧಿಯಲ್ಲಿದೆ ಏಕೆಂದರೆ ತಂದೆಯು ಅಂಬಿಗನೂ ಆಗಿದ್ದಾರೆ, ಹೂದೋಟದ ಮಾಲೀಕನಾಗಿದ್ದಾರೆ.
ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡಲು ಅವರಂತಹ ಹೂದೋಟದ
ಮಾಲೀಕರು ಯಾರೂ ಇಲ್ಲ. ಈ ಜಾದು ಕಡಿಮೆಯೇ! ಕವಡೆಯ ಸಮಾನವಾಗಿರುವ ಆತ್ಮವನ್ನು ವಜ್ರದ ಸಮಾನ
ಮಾಡುತ್ತಾರೆ. ಇತ್ತೀಚೆಗೆ ಬಹಳಷ್ಟು ಮಂದಿ ಜಾದೂಗಾರರಾಗಿಬಿಟ್ಟಿದ್ದಾರೆ. ಇದು ಮೋಸದ ಪ್ರಪಂಚವಾಗಿದೆ.
ತಂದೆಯು ಸದ್ಗುರುವಾಗಿದ್ದಾರೆ. ಸದ್ಗುರು ಅಕಾಲ್ ಎಂದು ಹೇಳುತ್ತಾರೆ. ಬಹಳ ಗುಂಗಿನಿಂದ ಹೇಳುತ್ತಾರೆ.
ಸದ್ಗುರು ಒಬ್ಬರೇ ಸರ್ವರ ಸದ್ಗತಿದಾತನೂ ಒಬ್ಬರೇ ಆಗಿದ್ದಾರೆಂದು ಹೇಳುತ್ತಾರೆಂದಮೇಲೆ ಮತ್ತೆ
ತಮ್ಮನ್ನು ಗುರುಗಳೆಂದು ಏಕೆ ಕರೆಸಿಕೊಳ್ಳಬೇಕು? ಅವರೂ ತಿಳಿದುಕೊಂಡಿಲ್ಲ. ಮನುಷ್ಯರೂ ಸಹ ಏನೂ
ತಿಳಿದುಕೊಂಡಿಲ್ಲ. ಈ ಹಳೆಯ ಪ್ರಪಂಚದಲ್ಲಿ ಇಟ್ಟಿರುವುದಾದರೂ ಏನು? ತಂದೆಯು ಹೊಸಮನೆಯನ್ನು
ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಕ್ಕಳಿಗೆ ಅರ್ಥವಾಗಿದೆಯೆಂದಮೇಲೆ ಹೊಸ ಮನೆಯೊಂದಿಗೆ ತಿರಸ್ಕಾರ,
ಹಳೆಯ ಮನೆಯೊಂದಿಗೆ ಪ್ರೀತಿಯನ್ನಿಟ್ಟುಕೊಳ್ಳುವವರು ಯಾರಾದರುಂಟೆ? ಬುದ್ಧಿಯಲ್ಲಿ ಹೊಸ ಮನೆಯೇ
ನೆನಪಿರುತ್ತದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ ಅಂದಾಗ ನಿಮಗೆ ಸ್ಮೃತಿಯಿರಬೇಕು-
ತಂದೆಯು ನಮಗಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ, ನಾವು ಆ ಹೊಸ ಪ್ರಪಂಚದಲ್ಲಿ
ಹೋಗುತ್ತೇವೆ, ಅದಕ್ಕೆ ಅನೇಕ ಹೆಸರುಗಳಿವೆ- ಸತ್ಯಯುಗ, ಹೆವೆನ್, ಪ್ಯಾರಡೈಸ್, ವೈಕುಂಠ ಇತ್ಯಾದಿ......
ನಿಮ್ಮ ಬುದ್ಧಿಯು ಈಗ ಹಳೆಯ ಪ್ರಪಂಚದಿಂದ ದೂರವಾಗಿದೆ ಏಕೆಂದರೆ ಹಳೆಯಪ್ರಪಂಚದಲ್ಲಿ ದುಃಖವೇ
ದುಃಖವಿದೆ. ಇದರ ಹೆಸರೇ ಆಗಿದೆ- ಹೆಲ್, ಮುಳ್ಳುಗಳ ಪ್ರಪಂಚ, ರೌರವ ನರಕ, ಕಂಸಪುರಿ, ಇದರ
ಅರ್ಥವನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಕಲ್ಲುಬುದ್ಧಿಯವರಾಗಿದ್ದಾರಲ್ಲವೆ. ಭಾರತದ ಸ್ಥಿತಿ ನೋಡಿ
ಏನಾಗಿದೆ! ಈ ಸಮಯದಲ್ಲಿ ಎಲ್ಲರೂ ಕಲ್ಲುಬುದ್ಧಿಯವರಾಗಿದ್ದಾರೆ. ಸತ್ಯಯುಗದಲ್ಲಿ ಯಥಾರಾಜ-ರಾಣಿ ತಥಾ
ಪ್ರಜಾ ಎಲ್ಲರೂ ಪಾರಸಬುದ್ಧಿಯವರಾಗಿರುತ್ತಾರೆ. ಇಲ್ಲಿ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ
ಆದ್ದರಿಂದ ಎಲ್ಲರ ಸ್ಟಾಂಪುಗಳನ್ನು ಮಾಡುತ್ತಿರುತ್ತಾರೆ.
ನೀವು ಮಕ್ಕಳ
ಬುದ್ಧಿಯಲ್ಲಿ ಇದು ನೆನಪಿರಬೇಕು- ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ ಮತ್ತು ಎರಡನೆಯದಾಗಿ
ಶ್ರೇಷ್ಠರೆಂದರೆ ಬ್ರಹ್ಮಾ, ವಿಷ್ಣು, ಶಂಕರನದು ಯಾವುದೇ ದೊಡ್ಡತನವಿಲ್ಲ. ಶಂಕರನಿಗೆ ಉಡುಪನ್ನು
ಹೇಗೆ ಮಾಡಿಬಿಟ್ಟಿದ್ದಾರೆ! ಶಂಕರನು ಭಂಗಿ ಸೇದುತ್ತಿದ್ದನು, ದತ್ತೂರಿಯನ್ನು ತಿನ್ನುತ್ತಿದ್ದನು
ಎಂದು ಹೇಳುತ್ತಾರೆ ಅಂದಮೇಲೆ ಇದು ನಿಂದನೆಯಾಗಿದೆಯಲ್ಲವೆ. ಇಂತಹ ಮಾತುಗಳೇ ಇರುವುದಿಲ್ಲ. ಇವರು
ತಮ್ಮ ಧರ್ಮವನ್ನೇ ಮರೆತಿದ್ದಾರೆ. ತಮ್ಮ ದೇವತೆಗಳಿಗೂ ಸಹ ಏನೇನನ್ನೋ ಹೇಳಿಬಿಡುತ್ತಾರೆ. ಎಷ್ಟೊಂದು
ಅಗೌರವ ಮಾಡುತ್ತಾರೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ನನಗೂ ಅಗೌರವ, ಶಂಕರನಿಗೂ ಮತ್ತು
ಬ್ರಹ್ಮನಿಗೂ ಅಗೌರವ ಮಾಡಿದಿರಿ, ವಿಷ್ಣುವಿಗೆ ಈ ರೀತಿ ಮಾಡುವುದಿಲ್ಲ. ವಾಸ್ತವದಲ್ಲಿ ಗುಪ್ತವಾಗಿ
ವಿಷ್ಣುವಿಗೂ ಮಾಡುತ್ತಾರೆ ಏಕೆಂದರೆ ವಿಷ್ಣುವೇ ರಾಧಾ-ಕೃಷ್ಣರಾಗಿದ್ದಾರೆ. ಕೃಷ್ಣನು ಚಿಕ್ಕಮಗು
ಅಂದಮೇಲೆ ಮಹಾತ್ಮರಿಗಿಂತಲೂ ಶ್ರೇಷ್ಠರೆಂದು ಗಾಯನ ಮಾಡುತ್ತಾರೆ. ಈ ಬ್ರಹ್ಮಾರವರಂತೂ ಕೊನೆಯಲ್ಲಿ
ಸನ್ಯಾಸ ಮಾಡುತ್ತಾರೆ ಆದರೆ ಕೃಷ್ಣನು ಚಿಕ್ಕಮಗು, ಸಂಪೂರ್ಣ ಪವಿತ್ರನಾಗಿರುತ್ತಾನೆ. ಪಾಪವೆಂದರೇನು
ತಿಳಿದಿರುವುದೇ ಇಲ್ಲ ಅಂದಾಗ ಸರ್ವಶ್ರೇಷ್ಠ ಶಿವತಂದೆಯಾಗಿದ್ದಾರೆ. ಆದರೂ ಸಹ ಪ್ರಜಾಪಿತ ಬ್ರಹ್ಮನು
ಎಲ್ಲಿರಬೇಕು ಎಂಬುದು ಪಾಪ ಮನುಷ್ಯರು ತಿಳಿದೇ ಇಲ್ಲ. ಬ್ರಹ್ಮನನ್ನು ಶರೀರಧಾರಿಯನ್ನಾಗಿಯೇ
ತೋರಿಸುತ್ತಾರೆ. ಅಜ್ಮೀರ್ನಲ್ಲಿ ಬ್ರಹ್ಮನ ಮಂದಿರವಿದೆ. ಬ್ರಹ್ಮನಿಗೂ ದಾಡಿ-ಮೀಸೆಗಳನ್ನು
ತೋರಿಸುತ್ತಾರೆ. ಇದನ್ನು ಶಂಕರ ಅಥವಾ ವಿಷ್ಣುವಿಗೆ ತೋರಿಸುವುದಿಲ್ಲ ಅಂದಾಗ ಇದು ತಿಳುವಳಿಕೆಯ
ಮಾತಾಗಿದೆ. ಪ್ರಜಾಪಿತ ಬ್ರಹ್ಮಾ ಸೂಕ್ಷ್ಮವತನದಲ್ಲಿ ಹೇಗಿರುವರು! ಅವರು ಇಲ್ಲಿಯೇ ಇರಬೇಕಲ್ಲವೆ. ಈ
ಸಮಯದಲ್ಲಿ ಬಹ್ಮನಿಗೆ ಎಷ್ಟು ಸಂತಾನರಿದ್ದಾರೆ? ಬರೆಯಲ್ಪಟ್ಟಿದೆ- ಪ್ರಜಾಪಿತ
ಬ್ರಹ್ಮಾಕುಮಾರ-ಕುಮಾರಿಯರು ಇಷ್ಟು ಮಂದಿ ಇದ್ದಾರೆಂದು ಅವಶ್ಯವಾಗಿ ಪ್ರಜಾಪಿತ ಬ್ರಹ್ಮನಿರುವರು.
ಅವರು ಚೈತನ್ಯದಲ್ಲಿ ಇದ್ದಾರೆ ಆದ್ದರಿಂದಲೇ ಇಷ್ಟು ಮಾಡುತ್ತಿದ್ದಾರೆ. ಪ್ರಜಾಪಿತ ಬ್ರಹ್ಮನು ಕೇವಲ
ಮಕ್ಕಳಿಗೆ ಜನ್ಮವನ್ನಷ್ಟೇ ಕೊಡುತ್ತಾರೆಯೇ ಅಥವಾ ಇನ್ನೇನ್ನಾದರೂ ಮಾಡುತ್ತಾರೆಯೇ? ಭಲೆ ಆದಿದೇವ
ಬ್ರಹ್ಮಾ, ಆದಿದೇವಿ ಸರಸ್ವತಿ ಎಂದು ಹೇಳುತ್ತಾರೆ ಆದರೆ ಅವರ ಪಾತ್ರವೇನೆಂಬುದು ತಿಳಿದಿಲ್ಲ.
ರಚಯಿತನೆಂದರೆ ಅವಶ್ಯವಾಗಿ ಇಲ್ಲಿ ಇದ್ದು ಹೋಗಿರುತ್ತಾರಲ್ಲವೆ. ಅವಶ್ಯವಾಗಿ ಬ್ರಾಹ್ಮಣರನ್ನು
ಶಿವತಂದೆಯು ದತ್ತು ಮಾಡಿಕೊಂಡಿರಬೇಕು ಇಲ್ಲವೆಂದರೆ ಬ್ರಹ್ಮನೆಲ್ಲಿಂದ ಬರುವರು? ಇವು ಹೊಸ
ಮಾತುಗಳಲ್ಲವೆ. ಎಲ್ಲಿಯವರೆಗೆ ತಂದೆಯು ಬರುವುದಿಲ್ಲವೋ ಅಲ್ಲಿಯವರೆಗೆ ಯಾರೂ ಅರಿತುಕೊಳ್ಳುವುದಿಲ್ಲ.
ಯಾರದು ಯಾವ ಪಾತ್ರವಿದೆಯೋ ಅದನ್ನೇ ಅಭಿನಯಿಸುತ್ತಾರೆ. ಬುದ್ಧನು ಯಾವ ಪಾತ್ರವನ್ನಭಿನಯಿಸಿದನು,
ಯಾವಾಗ ಬಂದನು, ಏನು ಮಾಡಿದನು, ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ.
ಅವರು ಗುರುವೇ, ಶಿಕ್ಷಕನೇ ತಂದೆಯೇ? ಇಲ್ಲ. ಸದ್ಗತಿಯನ್ನಂತೂ ಕೊಡಲು ಸಾಧ್ಯವಿಲ್ಲ. ಬುದ್ಧನು ಕೇವಲ
ತಮ್ಮ ಧರ್ಮದ ರಚಯಿತನಾದನೆ ಹೊರತು ಗುರುವಲ್ಲ. ತಂದೆಯು ಮಕ್ಕಳನ್ನು ರಚಿಸುತ್ತಾರೆ ಮತ್ತು
ಓದಿಸುತ್ತಾರೆ. ತಂದೆ, ಶಿಕ್ಷಕ, ಗುರು- ಮೂರೂ ಆಗಿದ್ದಾರೆ. ನೀವು ಓದಿಸು ಎಂದು ಮತ್ತ್ಯಾರಿಗೂ
ಹೇಳುವುದಿಲ್ಲ. ಮತ್ತ್ಯಾರ ಬಳಿಯೂ ಈ ಜ್ಞಾನವಿಲ್ಲ. ಬೇಹದ್ದಿನ ತಂದೆಯೇ ಜ್ಞಾನಸಾಗರನಾಗಿದ್ದಾರೆ
ಅಂದಮೇಲೆ ಅವಶ್ಯವಾಗಿ ಜ್ಞಾನವನ್ನು ತಿಳಿಸುತ್ತಾರೆ. ತಂದೆಯೇ ಸ್ವರ್ಗದ ರಾಜ್ಯಬಾಗ್ಯವನ್ನು
ಕೊಟ್ಟಿದ್ದರು, ಈಗ ಪುನಃ ಕೊಡುತ್ತಿದ್ದಾರೆ. ತಂದೆಯು ತಿಳಿಸುತ್ತಿದ್ದಾರೆ- ನೀವು 5000 ವರ್ಷಗಳ
ನಂತರ ಬಂದು ಪುನಃ ಸೇರಿದ್ದೀರಿ. ಯಾರನ್ನು ಇಡೀ ಪ್ರಪಂಚವು ಹುಡುಕುತ್ತಿದೆಯೋ ಅವರೀಗ ನಮಗೆ
ಸಿಕ್ಕಿಬಿಟ್ಟರೆಂದು ಮಕ್ಕಳಿಗೆ ಆಂತರಿಕ ಖುಷಿಯಿದೆ. ತಂದೆಯು ತಿಳಿಸುತ್ತಿದ್ದಾರೆ- ನೀವು 5000
ವರ್ಷಗಳ ನಂತರ ಬಂದು ಪುನಃ ಬಂದು ಮಿಲನ ಮಾಡುತ್ತೀರಿ. ಅದಕ್ಕೆ ಮಕ್ಕಳು ಹೇಳುತ್ತಾರೆ- ಹೌದು ಬಾಬಾ,
ತಮ್ಮನ್ನು ಅನೇಕಬಾರಿ ಮಿಲನ ಮಾಡಿದ್ದೇವೆ. ಭಲೆ ಯಾರೆಷ್ಟಾದರೂ ನಿಮಗೆ ಹೊಡೆಯಲಿ, ಬಡಿಯಲಿ ಆದರೆ
ಒಳಗೆ ಆ ಖುಷಿಯಿದೆಯಲ್ಲವೆ. ಶಿವತಂದೆಯನ್ನು ಮಿಲನ ಮಾಡಿರುವ ನೆನಪಿದೆಯಲ್ಲವೆ. ನೆನಪಿನಿಂದಲೇ
ಎಷ್ಟೊಂದು ಪಾಪಗಳು ಭಸ್ಮವಾಗುತ್ತವೆ. ಅಬಲೆಯರು ಬಂಧನದಲ್ಲಿರುವವರ ಪಾಪಗಳು ಇನ್ನೂ ಹೆಚ್ಚಿನದಾಗಿ
ಭಸ್ಮವಾಗುತ್ತವೆ ಏಕೆಂದರೆ ಅವರು ಶಿವತಂದೆಯನ್ನು ಹೆಚ್ಚು ನೆನಪು ಮಾಡುತ್ತಾರೆ. ಹತ್ಯಾಚಾರಗಳಾದಾಗ
ಬುದ್ಧಿಯು ಶಿವತಂದೆಯ ಕಡೆ ಹೊರಟುಹೋಗುತ್ತದೆ- ಶಿವಬಾಬಾ, ನಮ್ಮನ್ನು ರಕ್ಷಿಸಿ. ಅಂದಾಗ ನೆನಪು
ಮಾಡುವುದು ಒಳ್ಳೆಯದಲ್ಲವೆ. ಇಂತಹ ದುಃಖದಲ್ಲಂತೂ ಬಲಿಹಾರಿಯಾಗಿಬಿಡಬೇಕು. ಪೆಟ್ಟುಬಿದ್ದಾಗ ನೆನಪು
ಮಾಡುತ್ತಾರೆ. ಗಂಗಾಜಲವು ಬಾಯಲ್ಲಿರಲಿ. ಗಂಗಾನದಿಯ ತೀರದಲ್ಲಿರಲಿ ಆಗ ಪ್ರಾಣವು ಶರೀರದಿಂದ
ಹೊರಟುಹೋಗಲೆಂದು ಹೇಳುತ್ತಾರೆ. ನಿಮಗೆ ಯಾವಾಗ ಪೆಟ್ಟುಬೀಳುತ್ತದೆಯೋ ಆಗ ಬುದ್ಧಿಯಲ್ಲಿ ತಂದೆ ಮತ್ತು
ಆಸ್ತಿಯ ನೆನಪಿರುವುದು. ಬಾಬಾ ಎಂದು ಹೇಳಿದಾಗ ಅವಶ್ಯವಾಗಿ ಆಸ್ತಿಯು ನೆನಪಿಗೆ ಬರುವುದು. ಬಾಬಾ
ಎಂದು ಹೇಳಿದಾಗ ಆಸ್ತಿಯು ನೆನಪಿಗೆ ಬರದೇ ಇರುವಂತಹವರು ಯಾರೂ ಇಲ್ಲ. ತಂದೆಯ ಜೊತೆ ಅವಶ್ಯವಾಗಿ
ಆಸ್ತಿಯ ನೆನಪೂ ಬರುವುದು. ನಿಮಗೂ ಸಹ ಶಿವತಂದೆಯ ಜೊತೆ ಆಸ್ತಿಯ ನೆನಪು ಬರುವುದು. ಅವರಂತೂ
ವಿಕಾರಕ್ಕಾಗಿ ಪೆಟ್ಟನ್ನು ಕೊಟ್ಟು ಶಿವತಂದೆಯ ನೆನಪನ್ನು ತರಿಸುತ್ತಾರೆ. ನೀವು ತಂದೆಯಿಂದ
ಆಸ್ತಿಯನ್ನು ಪಡೆಯುತ್ತೀರಿ, ಪಾಪಗಳು ತುಂಡಾಗುತ್ತವೆ. ಇದೂ ಸಹ ನಾಟಕದಲ್ಲಿ ನಿಮಗಾಗಿ
ಗುಪ್ತಕಲ್ಯಾಣವಿದೆ. ಹೇಗೆ ಯುದ್ಧವು ಕಲ್ಯಾಣಕಾರಿಯಾಗಿದೆ ಎಂದು ಹೇಳಲಾಗುತ್ತದೆ ಅಂದಾಗ ಈ ಏಟುಗಳೂ
ಸಹ ಒಳ್ಳೆಯದಲ್ಲವೆ.
ಇತ್ತೀಚೆಗೆ ಮಕ್ಕಳ
ಪ್ರದರ್ಶನಿ ಮೇಳಗಳ ಸೇವೆಯು ಬಹಳ ತೀವ್ರವಾಗಿದೆ. ನವನಿರ್ಮಾಣ ಪ್ರದರ್ಶನಿಯ ಜೊತೆಜೊತೆಗೆ ಗೇಟ್ ವೇ
ಟು ಹೆವೆನ್ ಎಂದು ಬರೆಯಿರಿ. ಎರಡೂ ಶಬ್ಧಗಳಿರಬೇಕು. ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ,
ಅದರ ಪ್ರದರ್ಶನಿಯೆಂದರೆ ಮನುಷ್ಯರಿಗೆ ಕೇಳಿ ಖುಷಿಯಾಗುವುದು. ಹೊಸ ಪ್ರಪಂಚವು ಹೇಗೆ
ಸ್ಥಾಪನೆಯಾಗುತ್ತದೆ, ಅದಕ್ಕಾಗಿ ಈ ಚಿತ್ರಗಳನ್ನು ಮಾಡಿದ್ದೇವೆ ಬಂದು ನೋಡಿರಿ. ಗೇಟ್ ವೇ ಟು ನ್ಯೂ
ವಲ್ರ್ಡ್ (ಹೊಸಪ್ರಪಂಚದ ದಾರಿ). ಈಗ ಯಾವ ಯುದ್ಧವಾಗುವುದೋ ಇದರ ಮೂಲಕ ದ್ವಾರಗಳು ತೆರೆಯುತ್ತವೆ.
ಗೀತೆಯಲ್ಲಿಯೂ ಇದೆ- ಭಗವಂತನು ಬಂದಿದ್ದರು, ಬಂದು ರಾಜಯೋಗವನ್ನು ಕಲಿಸಿದ್ದರು, ಮನುಷ್ಯರಿಂದ
ದೇವತೆಗಳನ್ನಾಗಿ ಮಾಡಿದರು ಅಂದಾಗ ಅವಶ್ಯವಾಗಿ ಹೊಸಪ್ರಪಂಚದ ಸ್ಥಾಪನೆಯಾಗಿರುವುದು.
ಚಂದ್ರಗ್ರಹದಲ್ಲಿ ಹೋಗಲು ಮನುಷ್ಯರು ಎಷ್ಟೊಂದು ಪ್ರಯತ್ನಪಡುತ್ತಾರೆ. ಧರಣಿಯೇ ಧರಣಿ ಇರುವುದನ್ನು
ನೋಡುತ್ತಾರೆ. ಮನುಷ್ಯರೇ ಕಂಡುಬರುವುದಿಲ್ಲ. ಇಷ್ಟನ್ನೇ ತಿಳಿಸುತ್ತಾರೆ- ಇದರಿಂದೇನು ಲಾಭ? ನೀವೀಗ
ಸತ್ಯವಾಗಿ ಶಾಂತಿಯಲ್ಲಿ ಹೋಗುತ್ತೀರಲ್ಲವೆ, ಅಶರೀರಿಯಾಗುತ್ತೀರಿ, ಅದು ಶಾಂತಿಧಾಮವಾಗಿದೆ. ನೀವು
ಮೃತ್ಯುವನ್ನು ಬಯಸುತ್ತೀರಿ, ಶರೀರವನ್ನು ಬಿಟ್ಟುಹೋಗಲು ಇಚ್ಛಿಸುತ್ತೀರಿ. ತಂದೆಯನ್ನೂ ಸಹ
ಮೃತ್ಯುವಿಗಾಗಿಯೇ ಕರೆಯುತ್ತೀರಿ- ಬಾಬಾ, ಬಂದು ತಮ್ಮ ಜೊತೆ ಮುಕ್ತಿ-ಜೀವನ್ಮುಕ್ತಿಯಲ್ಲಿ
ಕರೆದುಕೊಂಡು ಹೋಗಿ ಆದರೆ ಅರ್ಥಮಾಡಿಕೊಂಡಿಲ್ಲ. ಪತಿತ-ಪಾವನನು ಬರುತ್ತಾರೆಂದರೆ ಹೇಗೆ ನಾವು
ಮಹಾಕಾಲನನ್ನು ಕರೆಯುತ್ತಿದ್ದೇವೆ ಎಂದರ್ಥ. ನೀವೀಗ ತಿಳಿದುಕೊಂಡಿದ್ದೀರಿ- ತಂದೆಯು ಬಂದಿದ್ದಾರೆ,
ಮನೆಗೆ ನಡೆಯಿರಿ ಎಂದು ಹೇಳುತ್ತಾರೆ ಮತ್ತು ನಾವು ಮನೆಗೆ ಹೋಗುತ್ತೇವೆ. ಬುದ್ಧಿಯು ಕೆಲಸ
ಮಾಡುತ್ತದೆಯಲ್ಲವೆ. ಇಲ್ಲಿ ಕೆಲವು ಮಕ್ಕಳಿದ್ದಾರೆ ಯಾರ ಬುದ್ಧಿಯು ಉದ್ಯೋಗ-ವ್ಯವಹಾರಗಳ ಕಡೆ
ಓಡುತ್ತಿರುವುದು. ಇಂತಹವರು ರೋಗಿಯಾಗಿದ್ದಾರೆ, ಏನಾಗಿರಬಹುದು....... ಹೀಗೆ ಅನೇಕ ಪ್ರಕಾರದ
ಸಂಕಲ್ಪಗಳು ಬಂದುಬಿಡುತ್ತವೆ. ತಂದೆಯು ತಿಳಿಸುತ್ತಾರೆ- ನೀವು ಇಲ್ಲಿ ಕುಳಿತಿದ್ದೀರಿ, ಆತ್ಮದ
ಬುದ್ಧಿಯು ತಂದೆ ಮತ್ತು ಆಸ್ತಿಯ ಕಡೆಯಿರಲಿ. ಆತ್ಮವೇ ನೆನಪು ಮಾಡುತ್ತದೆಯಲ್ಲವೆ. ತಿಳಿದುಕೊಳ್ಳಿ-
ಯಾರ ಮಗನಾದರೂ ಲಂಡನ್ನಿನಲ್ಲಿದ್ದಾರೆ, ಅವರು ರೋಗಿಯಾಗಿದ್ದಾರೆಂದು ಸಮಾಚಾರವು ಬಂದಿತೆಂದರೆ
ಬುದ್ಧಿಯು ಹೊರಟುಹೋಗುತ್ತದೆ, ಮತ್ತೆ ಜ್ಞಾನವು ಬುದ್ಧಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಇಲ್ಲಿ ಕುಳಿತಿದ್ದರೂ ಬುದ್ಧಿಯಲ್ಲಿ ಅವರ ನೆನಪೇ ಬರುತ್ತಿರುವುದು. ಯಾರ ಪತಿಯಾದರೂ
ರೋಗಿಯಾಗಿಬಿಟ್ಟರೆ ಸ್ತ್ರೀಯ ಮನಸ್ಸು ಅಲ್ಲೋಲ-ಕಲ್ಲೋಲವಾಗುವುದು. ಬುದ್ಧಿಯಂತೂ ಹೋಗುತ್ತದೆಯಲ್ಲವೆ
ಅಂದಾಗ ನೀವೂ ಸಹ ಇಲ್ಲಿ ಕುಳಿತಿದ್ದಂತೆಯೇ ಎಲ್ಲವನ್ನೂ ಮಾಡುತ್ತಾ ಶಿವತಂದೆಯನ್ನು ನೆನಪು ಮಾಡುತ್ತಾ
ಇರಿ. ಇಷ್ಟಿದ್ದರೂ ಸಹ ಅಹೋ ಸೌಭಾಗ್ಯ! ಹೇಗೆ ಅವರು ಪತಿಯನ್ನು ಅಥವಾ ಗುರುವನ್ನು ನೆನಪು
ಮಾಡುತ್ತಾರೆ ಹಾಗೆಯೇ ನೀವು ತಂದೆಯನ್ನು ನೆನಪು ಮಾಡಿ. ನೀವು ತಮ್ಮ ಒಂದು ನಿಮಿಷವನ್ನೂ ಸಹ
ವ್ಯರ್ಥವಾಗಿ ಕಳೆಯಬಾರದು. ಸರ್ವೀಸ್ ಮಾಡುವುದರಲ್ಲಿಯೇ ತಂದೆಯ ನೆನಪು ಬರುವುದು. ತಂದೆಯು
ತಿಳಿಸುತ್ತಾರೆ- ನನ್ನ ಭಕ್ತರಿಗೆ ತಿಳಿಸಿಕೊಡಿ. ಇದನ್ನು ಯಾರು ಹೇಳಿದರು? ಶಿವತಂದೆ. ಕೃಷ್ಣನ
ಭಕ್ತರಿಗೇನು ತಿಳಿಸುತ್ತೀರಿ? ಅವರಿಗೆ ತಿಳಿಸಿ- ಕೃಷ್ಣನು ಹೊಸಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ-
ಒಪ್ಪುತ್ತೀರಾ? ರಚಯಿತನಂತೂ ಪರಮಾತ್ಮನಾಗಿದ್ದಾರೆ, ಕೃಷ್ಣನಲ್ಲ. ಪರಮಪಿತ ಪರಮಾತ್ಮನು ಹಳೆಯ
ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಿದ್ದಾರೆ, ಇದನ್ನು ಒಪ್ಪುತ್ತಾರೆ. ಹೊಸದರಿಂದ ಹಳೆಯದು,
ಹಳೆಯದರಿಂದ ಮತ್ತೆ ಹೊಸದಾಗುತ್ತದೆ. ಕೇವಲ ಬಹಳಷ್ಟು ಸಮಯವನ್ನು ಕೊಟ್ಟಿರುವುದರಿಂದ ಮನುಷ್ಯರು ಘೋರ
ಅಂಧಕಾರದಲ್ಲಿದ್ದಾರೆ. ನಿಮಗಾಗಿ ಈಗ ಅಂಗೈಯಲ್ಲಿ ಸ್ವರ್ಗವಿದೆ. ತಂದೆಯು ತಿಳಿಸುತ್ತಾರೆ- ನಾನು
ನಿಮ್ಮನ್ನು ಆ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ- ಆಗುವಿರಾ? ವಾಹ್! ಏಕಾಗುವುದಿಲ್ಲ!
ಒಳ್ಳೆಯದು- ನನ್ನನ್ನು ನೆನಪು ಮಾಡಿ. ಪವಿತ್ರರಾಗಿ. ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ. ನೀವು
ಮಕ್ಕಳಿಗೆ ತಿಳಿದಿದೆ- ಆತ್ಮದಲ್ಲಿ ವಿಕರ್ಮಗಳ ಹೊರೆಯಿದೆ, ಶರೀರದ ಮೇಲಲ್ಲ. ಒಂದುವೇಳೆ ಶರೀರದ ಮೇಲೆ
ಹೊರೆಯಿದ್ದಿದ್ದರೆ ಯಾವಾಗ ಶರೀರವನ್ನು ಸುಡುತ್ತಾರೆಯೋ ಅದರ ಜೊತೆ ಪಾಪವು ಸುಟ್ಟುಹೋಗುತ್ತಿತ್ತು.
ಆತ್ಮವು ಅವಿನಾಶಿಯಾಗಿದೆ, ಅದರಲ್ಲಿ ಕೇವಲ ತುಕ್ಕು ಹಿಡಿಯುತ್ತದೆ. ಅದನ್ನು ತೆಗೆಯುವುದಕ್ಕಾಗಿ
ತಂದೆಯು ಒಂದೇ ಯುಕ್ತಿಯನ್ನು ತಿಳಿಸುತ್ತಾರೆ- ಮಕ್ಕಳೇ, ನೆನಪು ಮಾಡಿ. ಪತಿತರಿಂದ ಪಾವನರಾಗುವ
ಯುಕ್ತಿಯು ಎಷ್ಟು ಚೆನ್ನಾಗಿದೆ! ಮಂದಿರವನ್ನು ಕಟ್ಟಿಸುವವರು, ಶಿವನ ಪೂಜೆಯನ್ನು ಮಾಡುವವರೂ ಸಹ
ಭಕ್ತರಾಗಿದ್ದಾರಲ್ಲವೆ. ಪೂಜಾರಿಗಳಿಗೆಂದೂ ಪೂಜ್ಯರೆಂದು ಹೇಳಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾರನ್ನು ಇಡೀ
ಪ್ರಪಂಚವು ಹುಡುಕುತ್ತಿದೆಯೋ ಆ ತಂದೆಯು ನಮಗೆ ಸಿಕ್ಕಿಬಿಟ್ಟರು- ಇದೇ ಖುಷಿಯಲ್ಲಿರಬೇಕಾಗಿದೆ.
ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ ಆದ್ದರಿಂದ ಎಂತಹದ್ದೇ ಪರಿಸ್ಥಿತಿಯಿರಲಿ, ತಂದೆ ಮತ್ತು
ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ತಮ್ಮ ಒಂದು ನಿಮಿಷದ ಸಮಯವನ್ನೂ ವ್ಯರ್ಥವಾಗಿ ಕಳೆಯಬಾರದು.
2. ಈ ಹಳೆಯ ಪ್ರಪಂಚದಿಂದ
ಬುದ್ಧಿಯೆಂಬ ಹಗ್ಗವನ್ನು ಬಿಚ್ಚಬೇಕಾಗಿದೆ. ತಂದೆಯು ನಮಗಾಗಿ ಹೊಸಮನೆಯನ್ನು ಕಟ್ಟುತ್ತಿದ್ದಾರೆ,
ಇದು ರೌರವ ನರಕ, ಕಂಸಪುರಿಯಾಗಿದೆ, ನಾವು ವೈಕುಂಠಪುರಿಯಲ್ಲಿ ಹೋಗುತ್ತೇವೆ- ಸದಾ ಈ
ಸ್ಮೃತಿಯಲ್ಲಿರಬೇಕಾಗಿದೆ.
ವರದಾನ:
ವಿಹಂಗಮಾರ್ಗದ
ಸೇವೆಯ ಮೂಲಕ ವಿಶ್ವ ಪರಿವರ್ತನೆಯ ಕಾರ್ಯವನ್ನು ಸಂಪನ್ನ ಮಾಡುವಂತಹ ಸತ್ಯ ಸೇವಾಧಾರಿ ಭವ
ವಿಹಂಗಮಾರ್ಗದ ಸೇವೆ
ಮಾಡಲು ಸಂಗಟಿತ ರೂಪದಲ್ಲಿ “ರೂಪ ಮತ್ತು ಬಸಂತ” ಈ ಎರಡು ಮಾತುಗಳ ಬ್ಯಾಲೆನ್ಸ್ ಅವಶ್ಯಕತೆಯಿದೆ.
ಹೇಗೆ ಬಸಂತ ರೂಪದಲ್ಲಿ ಒಂದೇ ಸಮಯದಲ್ಲಿ ಅನೇಕ ಆತ್ಮರಿಗೆ ಸಂದೇಶವನ್ನು ಕೊಡುವಂತಹ ಕಾರ್ಯವನ್ನು
ಮಾಡುವಿರಿ ಅದೇ ರೀತಿ ರೂಪ ಅರ್ಥಾತ್ ನೆನಪಿನ ಬಲದ ಮೂಲಕ ಶ್ರೇಷ್ಠ ಸಂಕಲ್ಪದ ಬಲದ ಮೂಲಕ ವಿಹಂಗ
ಮಾರ್ಗದ ಸೇವೆ ಮಾಡಿ. ಇದರ ಬಗ್ಗೆಯೂ ಸಂಶೋಧನೆ ಮಾಡಿ. ಜೊತೆ-ಜೊತೆ ಸಂಗಟಿತ ರೂಪದಲ್ಲಿ ಧೃಡ
ಸಂಕಲ್ಪದಿಂದ ಹಳೆಯ ಸಂಸ್ಕಾರ, ಸ್ವಭಾವ ಅಥವಾ ಹಳೆಯ ಚಲನೆಗೆ ಎಳ್ಳು ಹಾಗೂ ಜೊಳ್ಳನ್ನು ಯಜ್ಞದಲ್ಲಿ
ಸ್ವಾಹ ಮಾಡಿ ಆಗ ವಿಶ್ವ ಪರಿವರ್ತನೆಯ ಕಾರ್ಯ ಸಂಪನ್ನವಾಗುತ್ತದೆ ಅಥವಾ ಯಜ್ಞದ ಸಮಾಪ್ತಿಯಾಗುತ್ತದೆ.
ಸ್ಲೋಗನ್:
ಬಾಲಕ ಮತ್ತು
ಮಾಲಿಕತನದ ಬ್ಯಾಲೆನ್ಸ್ ನಿಂದ ಯೋಜನೆಯನ್ನು ಕಾರ್ಯರೂಪದಲ್ಲಿ ತನ್ನಿ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಈ ಈಶ್ವರೀಯ ಸೇವೆಯಲ್ಲಿ
ದೊಡ್ಡಕ್ಕಿಂತ ದೊಡ್ಡ ಪುಣ್ಯವಾಗಿದೆ - ಪವಿತ್ರತೆಯ ದಾನ ಕೊಡುವುದು. ಪವಿತ್ರರಾಗುವುದು ಮತ್ತು
ಪವಿತ್ರರನ್ನಾಗಿ ಮಾಡುವುದೇ ಪುಣ್ಯಾತ್ಮರಾಗುವುದಾಗಿದೆ ಏಕೆಂದರೆ ಯಾವುದೇ ಆತ್ಮನನ್ನು ಆತ್ಮ-ಹತ್ಯೆ
ಮಹಾ ಪಾಪದಿಂದ ಬಿಡಿಸುತ್ತೀರಿ. ಅಪವಿತ್ರತೆ ಆತ್ಮ-ಹತ್ಯೆಯಾಗಿದೆ. ಪವಿತ್ರತೆ ಜೀವದಾನವಾಗಿದೆ.
ಯಾರದೋ ದುಃಖ ತೆಗೆದುಕೊಂಡು ಸುಖ ಕೊಡುವುದು, ಇದೇ ಎಲ್ಲದಕ್ಕಿಂತ ದೊಡ್ಡ ಪುಣ್ಯದ ಕೆಲಸವಾಗಿದೆ.
ಇಂತಹ ಪುಣ್ಯ ಮಾಡುತ್ತ-ಮಾಡುತ್ತ ಪುಣ್ಯಾತ್ಮರಾಗಿ ಬಿಡುತ್ತೀರಿ.