25.05.25 Avyakt Bapdada
Kannada
Murli 04.09.2005 Om Shanti Madhuban
“ಶಿಕ್ಷಣದ ಜೊತೆಗೆ ಕ್ಷಮೆ
ಮತ್ತು ದಯೆಯನ್ನು ಅಳವಡಿಸಿಕೊಳ್ಳಿ, ಆಶೀರ್ವಾದ ಕೊಡಿ, ಆಶೀರ್ವಾದವನ್ನು ತೆಗೆದುಕೊಳ್ಳಿ ಆಗ ತಮ್ಮ
ಮನೆಯು ಆಶ್ರಮವಾಗಿಬಿಡುವುದು”
ಇಂದು ಬಾಪ್ದಾದಾ
ಸರ್ವಮಕ್ಕಳ ಮಸ್ತಕದಲ್ಲಿ ಪವಿತ್ರತೆಯ ರೇಖೆಗಳನ್ನು ನೋಡುತ್ತಿದ್ದಾರೆ ಏಕೆಂದರೆ ಬ್ರಾಹ್ಮಣ ಜೀವನದ
ತಳಹದಿಯು ಪವಿತ್ರತೆಯಾಗಿದೆ. ಪವಿತ್ರತೆಯ ರೇಖೆಗಳು ಯಾವುದಾಗಿದೆ, ತಿಳಿದುಕೊಂಡಿದ್ದೀರಾ?
ಪವಿತ್ರತೆಯು ಸರ್ವರಿಗೆ ಪ್ರಿಯವಾಗಿದೆ. ಪವಿತ್ರತೆಯು ಸುಖ, ಶಾಂತಿ, ಪ್ರೇಮ, ಆನಂದದ ಜನನಿಯಾಗಿದೆ.
ಪವಿತ್ರತೆಯು ಮಾನವನ ಸತ್ಯಶೃಂಗಾರವಾಗಿದೆ. ಪವಿತ್ರತೆಯಿಲ್ಲವೆಂದರೆ ಮಾನವ ಜೀವನಕ್ಕೆ ಬೆಲೆಯಿಲ್ಲ.
ಹೇಗೆ ನೋಡುತ್ತೀರಿ, ದೇವತೆಗಳು ಪವಿತ್ರರಾಗಿದ್ದಾರೆ ಆದ್ದರಿಂದ ಮಾನನೀಯ ಮತ್ತು
ಪೂಜ್ಯನೀಯರಾಗಿದ್ದಾರೆ. ಪವಿತ್ರತೆಯಿಲ್ಲವೆಂದರೆ ಅಂತಹ ಮಾನವಜೀವನವನ್ನು ನೀವು ಇಂದು
ನೋಡುತ್ತಿದ್ದೀರಿ. ಬಾಪ್ದಾದಾ ತಾವೆಲ್ಲಾ ಮಕ್ಕಳಿಗೆ ಬ್ರಾಹ್ಮಣ ಜೀವನದ ಇದೇ ವರದಾನವನ್ನು ಕೊಟ್ಟರು
- ಪವಿತ್ರಭವ, ಯೋಗಿಭವ. ಯಾವ ಆತ್ಮನಲ್ಲಿ ಪವಿತ್ರತೆಯಿದೆಯೋ ಅವರ ಚಲನೆ-ವಲನೆ, ಚಹರೆ ಹೊಳೆಯುತ್ತದೆ
ಆದ್ದರಿಂದ ಪವಿತ್ರತೆಯೇ ಜೀವನವನ್ನು ಶ್ರೇಷ್ಠ ಮಾಡುವಂತದ್ದಾಗಿದೆ. ವಾಸ್ತವದಲ್ಲಿ ತಾವೆಲ್ಲಾ
ಮಕ್ಕಳ ಆದಿಸ್ವರೂಪವೇ ಪವಿತ್ರತೆಯಾಗಿದೆ, ಅನಾದಿ ಸ್ವರೂಪವೂ ಪವಿತ್ರತೆಯಾಗಿದೆ. ಇಂತಹ ಪವಿತ್ರ
ಆತ್ಮಗಳ ವಿಶೇಷತೆಗಳೆಂದರೆ ಅವರ ಜೀವನದಲ್ಲಿ ಪವಿತ್ರತೆಯ ವ್ಯಕ್ತಿತ್ವವು ಕಂಡುಬರುತ್ತದೆ.
ಪವಿತ್ರತೆಯ ರಿಯಾಲಿಟಿ, ಪವಿತ್ರತೆಯ ರಾಯಲ್ಟಿ, ಚಲನೆ ಮತ್ತು ಚಹರೆಯಲ್ಲಿ ಕಾಣುತ್ತದೆ. ಈ ರೇಖೆಗಳು
ಜೀವನದ ಶೃಂಗಾರವಾಗಿದೆ. ರಿಯಾಲಿಟಿಯಾಗಿದೆ - ನಾನು ಅನಾದಿ, ಆದಿಸ್ವರೂಪನಾಗಿದ್ದೇನೆ - ಈ
ಸ್ಮೃತಿಯಿಂದ ಸಮರ್ಥನಾಗಿಬಿಡುತ್ತಾರೆ. ರಾಯಲ್ಟಿಯಾಗಿದೆ - ಸ್ವಯಂ ಸ್ವಮಾನದಲ್ಲಿದ್ದು
ಪ್ರತಿಯೊಬ್ಬರಿಗೆ ಸನ್ಮಾನ ನೀಡಿ ನಡೆಯುವವರು. ಪರ್ಸನಾಲಿಟಿಯಾಗಿದೆ - ಸದಾ ಸಂತುಷ್ಟತೆ ಮತ್ತು
ಪ್ರಸನ್ನತೆ. ಸ್ವಯಂ ಸಂತುಷ್ಟ ಮತ್ತು ಅನ್ಯರನ್ನೂ ಸಂತುಷ್ಟಪಡಿಸುವವರು. ಪವಿತ್ರತೆಯಿಂದ ಬಹಳಷ್ಟು
ಪ್ರಾಪ್ತಿಗಳಿವೆ, ಬಾಪ್ದಾದಾ ತಾವೆಲ್ಲಾ ಮಕ್ಕಳಿಗೆ ಏನೇನು ಪ್ರಾಪ್ತಿಗಳನ್ನು ಮಾಡಿಸಿದ್ದಾರೆ
ಅದನ್ನು ತಿಳಿದುಕೊಂಡಿದ್ದೀರಲ್ಲವೆ! ಎಷ್ಟೊಂದು ಖಜಾನೆಗಳಿಂದ ಸಂಪನ್ನ ಮಾಡಿದ್ದಾರೆ. ಒಂದುವೇಳೆ
ಪ್ರಾಪ್ತಿಗಳನ್ನು ಸ್ಮೃತಿಯಲ್ಲಿಟ್ಟುಕೊಂಡರೆ ಸಂಪನ್ನರಾಗಿಬಿಡುವಿರಿ.
ಎಲ್ಲದಕ್ಕಿಂತ ಮೊದಲ
ಖಜಾನೆಯನ್ನು ಕೊಟ್ಟಿದ್ದಾರೆ - ಜ್ಞಾನದ ಖಜಾನೆ, ಇದರಿಂದ ಜೀವನದಲ್ಲಿರುತ್ತಾ ದುಃಖ-ಅಶಾಂತಿಯಿಂದ
ಮುಕ್ತರಾಗಿಬಿಡುತ್ತೀರಿ. ವ್ಯರ್ಥಸಂಕಲ್ಪ, ನಕಾರಾತ್ಮಕ ಸಂಕಲ್ಪ, ವಿಕಲ್ಪ, ವಿಕರ್ಮದಿಂದ
ಮುಕ್ತರಾಗಿಬಿಡುತ್ತೀರಿ. ಒಂದುವೇಳೆ ಯಾವುದೇ ವ್ಯರ್ಥಸಂಕಲ್ಪ ಹಾಗೂ ವಿಕಲ್ಪವು ಬಂದರೂ ಸಹ ಜ್ಞಾನದ
ಬಲದಿಂದ ವಿಜಯಿಗಳಾಗಿಬಿಡುತ್ತೀರಿ.
ಎರಡನೆಯ ಖಜಾನೆಯಾಗಿದೆ -
ನೆನಪು, ಯೋಗ. ಇದರಿಂದ ಶಕ್ತಿಗಳ ಪ್ರಾಪ್ತಿಯಾಗುತ್ತದೆ ಮತ್ತು ಶಕ್ತಿಗಳ ಆಧಾರದಿಂದ
ಸರ್ವಸಮಸ್ಯೆಗಳನ್ನು, ಸರ್ವವಿಘ್ನಗಳನ್ನು ಸಹಜವಾಗಿ ಪಾರುಮಾಡುತ್ತೀರಿ.
ಮೂರನೆಯ ಖಜಾನೆಯಾಗಿದೆ -
ಧಾರಣೆಗಳ ಖಜಾನೆ. ಇದರಿಂದ ಸರ್ವಗುಣಗಳ ಪ್ರಾಪ್ತಿಯಾಗುತ್ತದೆ. ನಾಲ್ಕನೆಯ ಖಜಾನೆಯಾಗಿದೆ - ಸೇವೆಯ
ಖಜಾನೆ. ಸೇವೆ ಮಾಡುವುದರಿಂದ ಯಾರ ಸೇವೆ ಮಾಡುತ್ತೀರೋ ಅವರ ಆಶೀರ್ವಾದಗಳು ಸಿಗುತ್ತವೆ. ಖುಷಿಯು
ಪ್ರಾಪ್ತಿಯಾಗುತ್ತದೆ.
ತಂದೆಯ ಮೂಲಕ ಇಷ್ಟೊಂದು
ಖಜಾನೆಗಳು ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ. ತಂದೆಯು ಎಲ್ಲರಿಗೆ ಒಂದೇ ರೀತಿಯಾಗಿ ಖಜಾನೆಗಳನ್ನು
ಕೊಡುತ್ತಾರೆ. ಕೆಲವರಿಗೆ ಕಡಿಮೆ, ಕೆಲವರಿಗೆ ಹೆಚ್ಚು ಕೊಡುವುದಿಲ್ಲ ಆದರೆ ತೆಗೆದುಕೊಳ್ಳುವುದರಲ್ಲಿ
ಅಂತರವಾಗಿಬಿಡುತ್ತದೆ. ಕೆಲವು ಮಕ್ಕಳಂತೂ ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಂಡು ತಿನ್ನುತ್ತಾ,
ಕುಡಿಯುತ್ತಾ, ಮಜಾ ಮಾಡುತ್ತಾ ಮೋಜಿನಲ್ಲಿಯೇ ಎಲ್ಲವನ್ನೂ ಸಮಾಪ್ತಿ ಮಾಡುತ್ತಾರೆ. ಇನ್ನೂ ಕೆಲವರು
ತಿನ್ನುತ್ತಾ-ಕುಡಿಯುತ್ತಾ ಮೋಜನ್ನಾಚರಿಸುತ್ತಾ ಖಜಾನೆಯನ್ನು ಜಮಾ ಮಾಡಿಕೊಳ್ಳುತ್ತಾರೆ. ಇನ್ನೂ
ಕೆಲವರು ಕಾರ್ಯದಲ್ಲಿ ತೊಡಗಿಸುತ್ತಾರೆ ಆದರೆ ಇನ್ನೂ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ.
ಹೆಚ್ಚಿಸಿಕೊಳ್ಳುವ ಬೀಗದ ಕೈ ಆಗಿದೆ - ಖಜಾನೆಯನ್ನು ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ
ಉಪಯೋಗಿಸುವುದು. ಯಾರು ಉಪಯೋಗಿಸುವರೋ ಅವರು ಹೆಚ್ಚಿಸಿಕೊಳ್ಳುತ್ತಾರೆ ಅಂದಾಗ ತಮ್ಮೊಂದಿಗೆ ತಾವು
ಕೇಳಿಕೊಳ್ಳಿ - ಈ ವಿಶೇಷ ಖಜಾನೆಗಳು ಜಮಾ ಆಗಿದೆಯೇ? ಆಗಿದೆಯೇ? ಏನು ಹೇಳುತ್ತೀರಿ. ಹೌದೊ ಅಥವಾ
ಸ್ವಲ್ಪ-ಸ್ವಲ್ಪವೋ? ಯಾರ ಬಳಿ ಈ ಖಜಾನೆಗಳು ಜಮಾ ಆಗಿವೆಯೋ ಅವರು ಸದಾ ಸಂಪನ್ನರಾಗಿರುತ್ತಾರೆ. ನೋಡಿ,
ಯಾವುದೇ ಪದಾರ್ಥವು ತುಂಬಿದ್ದರೆ ಅದು ತುಳುಕುವುದಿಲ್ಲ. ಒಂದುವೇಳೆ ತುಂಬಿಲ್ಲವೆಂದರೆ ಅದು
ತುಳುಕುತ್ತದೆ, ಏರುಪೇರಾಗುತ್ತದೆ. ಯಾವುದೇ ಪದಾರ್ಥವು ಒಂದುವೇಳೆ ಪೂರ್ಣರೀತಿಯಿಂದ
ತುಂಬಿಲ್ಲದಿದ್ದರೆ ಅದು ತುಳುಕುತ್ತದೆ ಹಾಗೆಯೇ ಇಲ್ಲಿಯೂ ಸಹ ಸರ್ವಖಜಾನೆಗಳಿಂದ
ಸಂಪನ್ನವಾಗಿಲ್ಲವೆಂದರೆ ಏರಿಳಿತಗಳಾಗುತ್ತವೆ ಅಂದಾಗ ಸದಾ ಈ ನಶೆಯಿರಲಿ - ತಂದೆಯ ಖಜಾನೆಯು ನಮ್ಮ
ಜನ್ಮಸಿದ್ಧ ಅಧಿಕಾರವಾಗಿದೆ. ತಂದೆಯು ಕೊಟ್ಟರು, ತಾವು ತೆಗೆದುಕೊಂಡಿರಿ ಅಂದಮೇಲೆ ಎಲ್ಲಾ ಖಜಾನೆಗಳು
ಯಾರದಾಯಿತು? ತಮ್ಮದಾಯಿತಲ್ಲವೆ. ಅಂದಮೇಲೆ ಯಾರ ಬಳಿ ಖಜಾನೆಗಳಿವೆಯೋ ಅವರು ಎಷ್ಟು
ಖುಷಿಯಾಗಿರುತ್ತಾರೆ? ಹೇಗೆ ಚಿಕ್ಕರಾಜನಿಗೆ ಮಗು ರಾಜಕುಮಾರನಿರುತ್ತಾರೆಂದರೆ ಅವನಿಗೆ ತಂದೆಯ ಬಳಿ
ಏನೇನು ಖಜಾನೆಗಳಿವೆ ಎಂದು ತಿಳಿದಿರುವುದೂ ಇಲ್ಲ ಆದರೆ ನಮ್ಮ ತಂದೆಯ ಖಜಾನೆಯು ನನ್ನ ಖಜಾನೆಯಾಗಿದೆ
ಎಂದು ನಶೆಯಿರುತ್ತದೆ ಮತ್ತು ಖಜಾನೆಯ ಖುಷಿಯಲ್ಲಿರುತ್ತಾರೆ. ಒಂದುವೇಳೆ ಖುಷಿಯು
ಕಡಿಮೆಯಿರುತ್ತದೆಯೆಂದರೆ ಅದಕ್ಕೆ ಕಾರಣವೇನು? ತಂದೆಯಂತೂ ಖಜಾನೆಗಳನ್ನು ಕೊಟ್ಟಿದ್ದಾರೆ,
ಕೇಳಿದಿರಲ್ಲವೆ. ಆದರೆ ಒಂದನೇ ಪ್ರಕಾರದವರು ಕೇಳುವವರಾಗಿದ್ದಾರೆ, ಎರಡನೆಯವರು ಅದನ್ನು ಸಮಾವೇಶ
ಮಾಡಿಕೊಳ್ಳುವವರಾಗಿದ್ದಾರೆ. ಯಾರು ಸಮಾವೇಶ ಮಾಡಿಕೊಳ್ಳುವರೋ ಅವರು ನಶೆಯಲ್ಲಿರುತ್ತಾರೆ.
ಇಂದು ಹೊಸ-ಹೊಸ ಮಕ್ಕಳು
ಬಂದಿದ್ದೀರಿ, ಬಾಪ್ದಾದಾ ತಾವು ಭಾಗ್ಯಶಾಲಿ ಮಕ್ಕಳಿಗೆ ತಮ್ಮೆಲ್ಲರ ಭಾಗ್ಯದ ಶುಭಾಷಯಗಳನ್ನು
ಕೊಡುತ್ತಿದ್ದೇವೆ. ತಮ್ಮ ಭಾಗ್ಯವನ್ನೂ ಅರಿತುಕೊಂಡಿರಾ? ಪರಮಾತ್ಮ ಪ್ರೀತಿ, ಅವಿನಾಶಿ ಪ್ರೀತಿಯು
ಕೇವಲ ಒಂದು ಜನ್ಮವಷ್ಟೆ ನಡೆಯುವುದಿಲ್ಲ, ಅನೇಕ ಜನ್ಮಗಳವರೆಗೆ ಸದಾ ಪ್ರೀತಿಯು ಸ್ಥಿರವಾಗಿರುತ್ತದೆ
ಏಕೆಂದರೆ ಈಗ ನಡೆಯುತ್ತಿರುವ ಸಮಯವೂ ಸಹ ಸಂಗಮಯುಗವಾಗಿದೆ. ಈ ಸಂಗಮಯುಗವು ಭಾಗ್ಯದ ಯುಗವಾಗಿದೆ.
ಸತ್ಯಯುಗಕ್ಕೂ ಭಾಗ್ಯವಂತ ಯುಗವೆಂದು ಹೇಳುತ್ತಾರೆ ಆದರೆ ವರ್ತಮಾನ ಸಂಗಮಯುಗದ ಸಮಯವು ಅದಕ್ಕಿಂತಲೂ
ಭಾಗ್ಯವಂತನಾಗಿದೆ - ಏಕೆ? ಈ ಸಂಗಮಯುಗದಲ್ಲಿ0iÉುೀ ತಂದೆಯ ಮೂಲಕ ಅಖಂಡ ಭಾಗ್ಯದ ವರದಾನ, ಆಸ್ತಿಯು
ಪ್ರಾಪ್ತಿಯಾಗುತ್ತದೆ ಅಂದಾಗ ಇಂತಹ ಸಂಗಮಯುಗದಲ್ಲಿ, ಭಾಗ್ಯವಂತ ಸಮಯದಲ್ಲಿ ತಾವೆಲ್ಲರೂ ತಮ್ಮ
ಭಾಗ್ಯವನ್ನು ಪಡೆಯಲು ಬಂದಿದ್ದೀರಿ. ಬಾಪ್ದಾದಾ ಮಕ್ಕಳಿಗೆ ಒಂದು ಬಹಳ ಸಹಜ ಪುರುಷಾರ್ಥದ ವಿಧಿಯನ್ನು
ತಿಳಿಸುತ್ತೇವೆ! ಎಲ್ಲರೂ ಸಹಜವಾದುದನ್ನೇ ಬಯಸುತ್ತೀರಲ್ಲವೆ. ಪರಿಶ್ರಮವಾದುದನ್ನು ಬಯಸುವುದಿಲ್ಲ
ಅಲ್ಲವೆ. ಈ ಮಕ್ಕಳಿಗಂತೂ ಭಾಗ್ಯದ ಸಹಜವಿಧಿಯು ಸಿಕ್ಕಿಬಿಟ್ಟಿದೆ. ಸಿಕ್ಕಿದೆಯಲ್ಲವೆ?
ಎಲ್ಲದಕ್ಕಿಂತ ಸಹಜ ಮತ್ತೇನೂ ಮಾಡಬೇಡಿ, ಕೇವಲ ಒಂದುಮಾತನ್ನು ಮಾಡಿರಿ. ಒಂದುಮಾತಂತೂ
ಕೇಳುತ್ತೀರಲ್ಲವೆ. ಹೌದು ಎನ್ನಿ ಅಥವಾ ಇಲ್ಲ ಎನ್ನಿರಿ. ಆಯಿತು (ಹಾಂಜಿ) ಎಂದು ಹೇಳಿ. ಅಂದಾಗ
ಎಲ್ಲದಕ್ಕಿಂತ ಸಹಜವಿಧಿಯಾಗಿದೆ - ಎಲ್ಲರಿಗೆ ಯಾರಾದರೂ ಸಿಗಲಿ ಅದರಿಂದ ಆಶೀರ್ವಾದಗಳನ್ನು ಪಡೆಯಿರಿ
ಮತ್ತು ಆಶೀರ್ವಾದಗಳನ್ನು ಕೊಡಿ. ಭಲೆ ಕ್ರೋಧಿಯೇ ಬರಲಿ ಆದರೆ ತಾವು ಅವರಿಗೂ ಸಹ ಆಶೀರ್ವಾದಗಳನ್ನು
ಕೊಡಿ, ಆಶೀರ್ವಾದಗಳನ್ನು ಪಡೆಯಿರಿ ಏಕೆಂದರೆ ಆಶೀರ್ವಾದಗಳು ತೀವ್ರಪುರುಷಾರ್ಥದ ಬಹಳ ಸಹಜ
ಯಂತ್ರವಾಗಿದೆ. ಹೇಗೆ ವಿಜ್ಞಾನದಲ್ಲಿ ರಾಕೆಟ್ ಇದೆಯಲ್ಲವೆ. ಇದು ಎಷ್ಟು ಬೇಗನೆ ಕೆಲಸ
ಮಾಡಿಬಿಡುತ್ತದೆ. ಅದೇರೀತಿ ಆಶೀರ್ವಾದಗಳನ್ನು ಕೊಡಿ ಮತ್ತು ಆಶೀರ್ವಾದಗಳನ್ನು ತೆಗೆದುಕೊಳ್ಳಿ, ಇದೂ
ಸಹ ಮುಂದುವರೆಯಲು ಬಹಳ ಸಹಜವಾದ ಒಂದು ಸಾಧನವಾಗಿದೆ. ಅಮೃತವೇಳೆ ತಂದೆಯಿಂದ ಸಹಜ ನೆನಪಿನಿಂದ
ಆಶೀರ್ವಾದಗಳನ್ನು ತೆಗೆದುಕೊಳ್ಳಿ ಮತ್ತು ಇಡೀ ದಿನ ಆಶೀರ್ವಾದಗಳನ್ನು ಕೊಡಿ ಮತ್ತು
ಆಶೀರ್ವಾದಗಳನ್ನು ತೆಗೆದುಕೊಳ್ಳಿ. ಇದನ್ನು ಮಾಡುತ್ತೀರಲ್ಲವೆ? ಮಾಡಬಲ್ಲಿರಾ? ಮಾಡುತ್ತೀರೆಂದರೆ
ಕೈಯನ್ನೆತ್ತಿರಿ. ಯಾರಾದರೂ ಶಾಪಕೊಟ್ಟರೆ ಏನು ಮಾಡುತ್ತೀರಿ? ತಮಗೆ ಪದೇ-ಪದೇ ತೊಂದರೆ ಕೊಟ್ಟರೆ?
ನೋಡಿ, ತಾವು ಪರಮಾತ್ಮನ ಮಕ್ಕಳು, ದಾತನ ಮಕ್ಕಳು ದಾತನಾಗಿದ್ದೀರಲ್ಲವೆ. ಮಾ|| ದಾತನಾಗಿದ್ದೀರಿ
ಅಂದಾಗ ದಾತನ ಕೆಲಸವು ಏನಾಗಿರುತ್ತದೆ? ಕೊಡುವುದು. ಅದಾಗ ಎಲ್ಲದಕ್ಕಿಂತ ಒಳ್ಳೆಯ ವಸ್ತು
ಆಶೀರ್ವಾದಗಳನ್ನು ಕೊಡುವುದಾಗಿದೆ. ಎಂತಹ ವ್ಯಕ್ತಿಯೇ ಇರಲಿ ಆದರೆ ತಮ್ಮ ಸಹೋದರ-ಸಹೋದರಿಯೇ ಅಲ್ಲವೆ.
ಪರಮಾತ್ಮನ ಮಕ್ಕಳು ಸಹೋದರ-ಸಹೋದರಿಯರಾಗಿದ್ದೀರಲ್ಲವೆ ಅಂದಾಗ ಪರಮಾತ್ಮನ ಮಗುವಾಗಿದ್ದಾರೆ. ನನ್ನ
ಈಶ್ವರೀಯ ಸಹೋದರನಾಗಿದ್ದಾರೆ, ಈಶ್ವರೀಯ ಸಹೋದರಿಯಾಗಿದ್ದಾರೆ, ಅವರಿಗೇನು ಕೊಡುತ್ತೀರಿ! ಶಾಪ
ಕೊಡುತ್ತೀರಾ? ತಂದೆ0iÉುಂದಾದರೂ ಶಾಪ ಕೊಡುತ್ತಾರೆಯೇ? ಕೊಡುವರೇ? ಹೌದು ಅಥವಾ ಇಲ್ಲ ಎನ್ನಿರಿ.
ಬಹಳ ಖುಷಿಯಾಗಿರುತ್ತೀರಿ. ಏಕೆ? ಒಂದುವೇಳೆ ಶಾಪಕೊಡುವವರಿಗೂ ಸಹ ತಾವು ಆಶೀರ್ವಾದ ಕೊಡುತ್ತೀರಿ,
ಅವರು ಕೊಡಲಿ ಕೊಡದಿರಲಿ ಆದರೆ ತಾವು ಆಶೀರ್ವಾದವನ್ನು ತೆಗೆದುಕೊಳ್ಳುತ್ತೀರಿ ಅಂದಮೇಲೆ
ದುಃಖವೇಕಾಗುವುದು. ಬಾಪ್ದಾದಾ ತಾವು ಬಂದಿರುವ ಮಕ್ಕಳಿಗೆ ಒಂದು ವರದಾನವನ್ನು ಕೊಡುತ್ತಾರೆ - ಆ
ವರದಾನವನ್ನು ನೆನಪಿಟ್ಟುಕೊಂಡರೆ ಸಾಕು ಸದಾ ಖುಷಿಯಲ್ಲಿರುತ್ತೀರಿ. ವರದಾನವನ್ನು ತಿಳಿಸುವುದೇ?
ಕೇಳಿರಿ.
ವರದಾನ:
ವರದಾನವಾಗಿದೆ - ಒಂದುವೇಳೆ ತಮಗೆ ಯಾರಾದರೂ ದುಃಖಕೊಟ್ಟರೂ ಸಹ ತಾವು ದುಃಖವನ್ನು ತೆಗೆದುಕೊಳ್ಳಬೇಡಿ.
ಅವರು ಕೊಡಲಿ ಆದರೆ ತಾವು ತೆಗೆದುಕೊಳ್ಳಬಾರದು ಏಕೆಂದರೆ ಕೊಡುವವರಂತೂ ಕೊಟ್ಟುಬಿಟ್ಟರು ಆದರೆ
ತೆಗೆದುಕೊಳ್ಳುವವರು ತಾವಲ್ಲವೆ? ಕೊಡುವವರು ತೆಗೆದುಕೊಳ್ಳುವವರಲ್ಲ. ಒಂದುವೇಳೆ ಅವರು
ಕೆಟ್ಟವಸ್ತುವನ್ನು ಕೊಡುತ್ತಾರೆ, ದುಃಖ ಕೊಡುತ್ತಾರೆ, ಅಶಾಂತಿ ಕೊಡುತ್ತಾರೆಂದರೆ ಅದು
ಕೆಟ್ಟವಸ್ತುವಾಯಿತಲ್ಲವೆ. ದುಃಖವು ತಮಗೆ ಇಷ್ಟವಾಗುತ್ತದೆಯೇ? ಇಷ್ಟವಾಗುವುದಿಲ್ಲ ಅಲ್ಲವೆ! ಅಂದಾಗ
ಅದು ಕೆಟ್ಟವಸ್ತುವಾಯಿತಲ್ಲವೆ. ಕೆಟ್ಟ ವಸ್ತುವನ್ನು ತೆಗೆದುಕೊಳ್ಳುತ್ತಾರೆಯೇ? ಯಾರಾದರೂ ತಮಗೆ
ಕೆಟ್ಟ ವಸ್ತುವನ್ನು ಕೊಟ್ಟರೆ ತಾವು ತೆಗೆದುಕೊಂಡುಬಿಡುವಿರಾ? ತೆಗೆದುಕೊಳ್ಳುವುದಿಲ್ಲವೆ. ಏಕೆ
ತೆಗೆದುಕೊಳ್ಳುತ್ತೀರಿ? ತೆಗೆದುಕೊಳ್ಳುತ್ತೀರಲ್ಲವೆ! ಒಂದುವೇಳೆ ದುಃಖವನ್ನು
ತೆಗೆದುಕೊಳ್ಳುತ್ತೀರೆಂದರೆ ಯಾರು ದುಃಖಿಯಾಗುತ್ತಾರೆ? ತಾವಾಗುತ್ತೀರೋ ಅಥವಾ ಅವರಾಗುತ್ತಾರೋ?
ತೆಗೆದುಕೊಳ್ಳುವವರು ಹೆಚ್ಚು ದುಃಖಿಯಾಗುತ್ತಾರೆ. ಒಂದುವೇಳೆ ಈಗಿನಿಂದ ತೆಗೆದುಕೊಳ್ಳುವುದಿಲ್ಲವೆ.
ಅರ್ಧದುಃಖವಂತೂ ದೂರವಾಯಿತು. ತೆಗೆದುಕೊಳ್ಳುವುದಿಲ್ಲ ಅಲ್ಲವೆ! ಮತ್ತು ತಾವು ದುಃಖದ ಬದಲು ಅವರಿಗೆ
ಸುಖ ಕೊಡುತ್ತೀರೆಂದರೆ ಆಶೀರ್ವಾದವು ಸಿಕ್ಕಿತಲ್ಲವೆ. ಆಗ ಸುಖಿಯಾಗಿರುತ್ತೀರಿ ಮತ್ತು ಆಶೀರ್ವಾದದ
ಖಜಾನೆಯು ಸಂಪನ್ನವಾಗುತ್ತಾಹೋಗುವುದು. ಪ್ರತೀ ಆತ್ಮನಿಂದ ಅವರು ಎಂತಹವರೇ ಆಗಿರಲಿ ತಾವು
ಆಶೀರ್ವಾದಗಳನ್ನು ತೆಗೆದುಕೊಳ್ಳಿ. ಶುಭಭಾವನೆ, ಶುಭಕಾಮನೆಯನ್ನಿಡಿ. ಕೆಲಕೆಲವೊಮ್ಮೆ ಏನಾಗುತ್ತದೆ?
ಯಾರಾದರೂ ಅಂತಹ ಕೆಲಸ ಮಾಡುತ್ತಾರೆಂದರೆ ಅವರಿಗೆ ಶಿಕ್ಷಣ ಕೊಡುವ ಪ್ರಯತ್ನಪಡಿ. ಇವರನ್ನು
ಸರಿಪಡಿಸೋಣ ಎಂದು ಶಿಕ್ಷಣ ಕೊಡುತ್ತೀರಿ. ಶಿಕ್ಷಣ ಕೊಡಿ ಆದರೆ ಶಿಕ್ಷಣ ಕೊಡುವ ಸರ್ವೋತ್ತಮ
ವಿಧಿಯೆಂದರೆ ಕ್ಷಮೆಯ ರೂಪವಾಗಿ ಶಿಕ್ಷಣ ಕೊಡಿ. ಕೇವಲ ಶಿಕ್ಷಣ ಕೊಡಬೇಡಿ, ದಯೆ-ಕ್ಷಮೆಯನ್ನೂ ಮಾಡಿ
ಮತ್ತು ಶಿಕ್ಷಣವನ್ನೂ ಕೊಡಿ. ಎರಡು ಶಬ್ಧಗಳನ್ನು ನೆನಪಿಟ್ಟುಕೊಳ್ಳಿ - ಶಿಕ್ಷಣ ಮತ್ತು ಕ್ಷಮೆ, ದಯೆ.
ಒಂದುವೇಳೆ ದಯಾಹೃದಯಿಯಾಗಿ ಅವರಿಗೆ ಶಿಕ್ಷಣ ಕೊಡುತ್ತೀರೆಂದರೆ ತಮ್ಮ ಶಿಕ್ಷಣವನ್ನು ಕೆಲಸ ಮಾಡುವುದು.
ಒಂದುವೇಳೆ ದಯಾಹೃದಯಿಯಾಗಿ ಕೊಡುವುದಿಲ್ಲವೆಂದರೆ ನಿಮ್ಮ ಶಿಕ್ಷಣವನ್ನು ಒಂದುಕಿವಿಯಿಂದ ಕೇಳುತ್ತಾರೆ
ಇನ್ನೊಂದು ಕಿವಿಯಿಂದ ಹೊರಟುಹೋಗುತ್ತದೆ. ಶಿಕ್ಷಣವು ಧಾರಣೆಯಾಗುವುದಿಲ್ಲ. ಹೌದಲ್ಲವೆ?
ಅನುಭವವಿದೆಯೇ? ತಾವೂ ಸಹ ಯಾರಿಗೂ ಶಿಕ್ಷಕರಾಗುವುದಿಲ್ಲ ತಾನೆ. ಶಿಕ್ಷಕರಾಗಲು ಬಹಳ ಬೇಗನೆ
ಬರುತ್ತದೆ ಆದರೆ ಕ್ಷಮೆ ಮಾಡುವುದು ಎರಡೂ ಜೊತೆಜೊತೆಯಿರಬೇಕು. ಈಗಿನಿಂದ ದಯೆ. ದಯೆ ತೋರಿಸುವ
ವಿಧಿಯಾಗಿದೆ - ಶುಭಭಾವನೆ, ಶುಭಕಾಮನೆ. ಶುಭಭಾವನೆ ಹೇಗೆ ಹೆಳುತ್ತೀರಲ್ಲವೆ. ಸತ್ಯಪ್ರೀತಿಯು
ಕಲ್ಲನ್ನು ಕರಗಿಸಿಬಿಡುತ್ತದೆ. ಹಾಗೆಯೇ ಕ್ಷಮಾಸ್ವರೂಪರಾಗಿ ಶಿಕ್ಷಣ ಕೊಡುವುದರಿಂದ ತಮ್ಮ ಕಾರ್ಯವು
ಯಾವುದನ್ನು ಇವರು ಈ ರೀತಿ ಮಾಡದಿರಲಿ, ಇದು ಆಗದಿರಲಿ ಎಂದು ಬಯಸುತ್ತೀರೋ ಅದು ಪ್ರತ್ಯಕ್ಷವಾಗಿ
ಕಾಣುವುದು. ತಾವು ದಯಾಹೃದಯಿಗಳಾಗಿ ಶಿಕ್ಷಣ ಕೊಡುವ ಪ್ರಭಾವದಿಂದ ಅವರ ಕಠೋರ ಹೃದಯವೂ ಸಹ
ಪರಿವರ್ತನೆಯಾಗಿಬಿಡುವುದು. ಅಂದಾಗ ಯಾವ ವರದಾನ ಸಿಕ್ಕಿತು? ದುಃಖವನ್ನು ಕೊಡಬೇಡಿ, ದುಃಖವನ್ನು
ತೆಗೆದುಕೊಳ್ಳಬೇಡಿ. ಸರಿಯಲ್ಲವೆ? ಇದು ಇಷ್ಟವಾಯಿತೆ? ಈಗ ದುಃಖವನ್ನು ತೆಗೆದುಕೊಳ್ಳಬೇಡಿ,
ತಪ್ಪುಗಳನ್ನು ಮಾಡಬೇಡಿ. ಯಾವಾಗ ತಂದೆಯೇ ದುಃಖವನ್ನು ಕೊಡುವುದಿಲ್ಲ ಅಂದಾಗ ಫಾಲೋ ಫಾದರ್
ಮಾಡಬೇಕಲ್ಲವೆ. ಮಾಡುತ್ತಿದ್ದೀರಿ, ಕೆಲಕೆಲವೊಮ್ಮೆ ಅನ್ಯರನ್ನು ಬೈದುಬಿಡುತ್ತೀರಿ. ಈಗಿನಿಂದ
ಯಾರನ್ನೂ ಬೈಯಬಾರದು, ದಯೆ ತೋರಿಸಿ. ದಯೆಯ ಜೊತೆಗೆ ಶಿಕ್ಷಣ ಕೊಡಿ. ಪದೇ-ಪದೇ ಯಾರನ್ನಾದರೂ
ಬೈಯುವುದರಿಂದ ಆ ಆತ್ಮವು ಇನ್ನೂ ಶತ್ರುವಾಗಿಬಿಡುತ್ತದೆ ಮತ್ತು ತಿರಸ್ಕಾರವೂ ಬಂದುಬಿಡುತ್ತದೆ.
ತಾವು ಪರಮಾತ್ಮನ ಮಕ್ಕಳಲ್ಲವೆ? ಅಂದಮೇಲೆ ಹೇಗೆ ತಂದೆಯು ಪತಿತರನ್ನು ಪಾವನ ಮಾಡುವವರಾಗಿದ್ದಾರೆ
ಅಂದಾಗ ತಾವು ದುಃಖಿಗಳಿಗೆ ಸುಖ ಕೊಡಲು ಸಾಧ್ಯವಿಲ್ಲವೆ? ಈಗ ಹೋಗಿ ಪ್ರಯೋಗ ಮಾಡಿ, ಪ್ರಯೋಗ
ಮಾಡುತ್ತೀರಾ? ಮನೆಯೆ ಮೊದಲ ಪಾಠಶಾಲೆ, ಒಂದುವೇಳೆ ಪರಿವಾರದಲ್ಲಿ ಯಾರಾದರೂ ದುಃಖ ಕೊಟ್ಟರೂ ಸಹ
ದುಃಖವನ್ನು ತೆಗೆದುಕೊಳ್ಳಬೇಡಿ. ಆಶೀರ್ವಾದಗಳನ್ನು ಕೊಡಿ, ದಯಾಹೃದಯಿಗಳಾಗಿ. ಮೊದಲು ಮನೆಯವರಿಗೆ
ಮಾಡಿ. ತಮ್ಮ ಮನೆಯ ಪ್ರಭಾವವು ನಿಮ್ಮ ಸುತ್ತಮುತ್ತ ಬೀರುವುದು ಮತ್ತು ನಿಮ್ಮ ಸುತ್ತಮುತ್ತಲಿನ
ಪ್ರಭಾವವು ದೇಶದಲ್ಲಿ ಬೀರುವುದು. ದೇಶದ ಪ್ರಭಾವ ವಿಶ್ವದಲ್ಲಿ ಬೀರುವುದು. ಸಹಜವಲ್ಲವೆ. ತಮ್ಮ
ಪರಿವಾರದಲ್ಲಿಯೇ ಆರಂಭಿಸಿ ಏಕೆಂದರೆ ನೋಡಿ, ಒಂದುವೇಳೆ ಒಬ್ಬರು ಕ್ರೋಧ ಮಾಡಿದರೂ ಸಹ ಮನೆಯ
ವಾತಾವರಣವು ಏನಾಗಿಬಿಡುತ್ತದೆ? ಮನೆಯೆನಿಸುತ್ತದೆಯೋ ಅಥವಾ ಯುದ್ಧದ ಮೈದಾನವೆನಿಸುತ್ತದೆಯೋ? ಆ
ಸಮಯದಲ್ಲಿ ಚೆನ್ನಾಗಿರುತ್ತದೆಯೇ? ಇಷ್ಟವಾಗುವುದಿಲ್ಲ ಅಲ್ಲವೆ!
ಇದು ತಮ್ಮೆಲ್ಲರಿಗಾಗಿಯೂ
ಆಗಿದೆ (ಮಧುಬನ ನಿವಾಸಿಗಳೊಂದಿಗೆ) ತಮ್ಮ-ತಮ್ಮ ಜೊತೆಗಾರರೊಂದಿಗೆ ತಮ್ಮ-ತಮ್ಮ ಕಾರ್ಯಕರ್ತರೊಂದಿಗೆ
ದುಃಖವನ್ನು ಕೊಡಬೇಡಿ ಮತ್ತು ದುಃಖವನ್ನು ತೆಗೆದುಕೊಳ್ಳಬೇಡಿ. ಆಶೀರ್ವಾದವನ್ನು ಕೊಡಿ,
ಆಶೀರ್ವಾದವನ್ನು ತೆಗೆದುಕೊಳ್ಳಿ. ಒಂದುವೇಳೆ ಅಂತಹ ಸಮಯದಲ್ಲಿ ತಾವು ಅಧಿಕಾರದಿಂದ ಹೃದಯಪೂರ್ವಕವಾಗಿ
ನನ್ನಬಾಬಾ ಎಂದು ಹೇಳುತ್ತೀರೆಂದರೆ ಗಾದೆ ಮಾತಿದೆಯಲ್ಲವೆ - ಭಗವಂತನು ಸದಾ
ಪ್ರತ್ಯಕ್ಷವಾಗಿಬಿಡುತ್ತಾರೆ. ಒಂದುವೇಳೆ ತಾವು ಇಂತಹ ಸಮಯದಲ್ಲಿ ಹೃದಯಪೂರ್ವಕವಾಗಿ ಅಧಿಕಾರದ
ರೂಪದಲ್ಲಿ ನನ್ನಬಾಬಾ ಎಂದು ಹೇಳಿದರೆ ತಂದೆಯು ಪ್ರತ್ಯಕ್ಷವಾಗಿಬಿಡುವರು ಏಕೆಂದರೆ ತಂದೆಯು
ಇರುವುದಾದರೂ ಏತಕ್ಕಾಗಿ? ಮಕ್ಕಳಿಗಾಗಿಯೇ ಅಲ್ಲವೆ. ಅಧಿಕಾರಿ ಮಕ್ಕಳಿಗೂ ತಂದೆಯು ಸಹಯೋಗವನ್ನು
ಕೊಡದೇ ಇರಲು ಸಾಧ್ಯವಿಲ್ಲ, ಅಸಂಭವವಾಗಿದೆ ಅಂದಾಗ ಇಲ್ಲಿಂದಲೇ ಪರಿವರ್ತನೆಯಾಗಿ ಹೋಗಿರಿ. ಹೇಗೆ
ಬಂದಿರೋ ಹಾಗೆಯೇ ಹೋಗಬೇಡಿ, ಪರಿವರ್ತನೆ ಮಾಡಿಕೊಂಡೇ ಹೋಗಿರಿ ಏಕೆಂದರೆ ನೋಡಿ, ಇಷ್ಟು ಖರ್ಚು
ಮಾಡಿಕೊಂಡು ಬರುತ್ತೀರಿ! ಖರ್ಚಾಗುತ್ತದೆಯಲ್ಲವೆ. ಸಮಯವನ್ನೂ ಕೊಟ್ಟಿದ್ದೀರಿ, ಖರ್ಚೂ ಮಾಡಿದ್ದೀರಿ
ಅದಕ್ಕೆ ಬೆಲೆಯಿರಬೇಕಲ್ಲವೆ ಅಂದಾಗ ಬೆಲೆ ಯಾವುದೆಂದರೆ ಸ್ವಪರಿವರ್ತನೆಯಿಂದ ಮೊದಲು ಮನೆಯ
ಪರಿವರ್ತನೆ, ದೇಶದ ಪರಿವರ್ತನೆ ಮತ್ತೆ ವಿಶ್ವದ ಪರಿವರ್ತನೆ. ತಮ್ಮ ಮನೆಯು ಆಶ್ರಮವಾಗಿಬಿಡಲಿ.
ಮನೆಯಲ್ಲ, ಆಶ್ರಮ. ಶಾಸ್ತ್ರಗಳಲ್ಲಿಯೂ ಸಹ ಹೇಳುತ್ತಾರೆ - ಗೃಹಸ್ಥಾಶ್ರಮ ಎಂದು, ಆದರೆ ಇಂದು
ಆಶ್ರಮವಲ್ಲ. ಆಶ್ರಮವೇ ಬೇರೆಯಾಗಿದೆ, ಮನೆಯೇ ಬೇರೆಯಾಗಿದೆ ಅಂದಾಗ ಈಗ ಮನೆಯನ್ನೂ ಆಶ್ರಮ
ಮಾಡಿಕೊಳ್ಳಿ. ಆಶೀರ್ವಾದಗಳನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು, ಇದು ಆಶ್ರಮದ
ಕಾರ್ಯವಾಗಿದೆ. ತಮ್ಮ ಮನೆಯೇ ಮಂದಿರವಾಗಿಬಿಡುವುದು. ಮಂದಿರದಲ್ಲಿ ಮೂರ್ತಿಯು ಏನು ಮಾಡುವುದು?
ಆಶೀರ್ವಾದಗಳನ್ನು ಕೊಡುತ್ತದೆಯಲ್ಲವೆ! ಮೂರ್ತಿಯ ಮುಂದೆ ಹೋಗಿ ಏನು ಹೇಳುತ್ತಾರೆ? ಆಶೀರ್ವಾದ ಕೊಡಿ
ಎಂದು. ದಯೆ ತೋರಿಸಿ, ದಯೆ ತೋರಿಸಿ ಎಂದು ಕೂಗುತ್ತಾರೆ ಅಂದಮೇಲೆ ತಾವೂ ಸಹ ಏನು ಮಾಡಬೇಕಾಗಿದೆ?
ಆಶೀರ್ವಾದ ಕೊಡಬೇಕು. ಈಶ್ವರೀಯ ಪ್ರೀತಿಯನ್ನು ಕೊಡಿ, ಆತ್ಮಿಕ ಪ್ರೀತಿಯನ್ನು ಕೊಡಿ, ಶರೀರದ
ಪ್ರೀತಿಯಲ್ಲ ಆತ್ಮಿಕ ಪ್ರೀತಿ. ಇಂದು ಪ್ರೀತಿಯಿದ್ದರೂ ಸಹ ಅದು ಸ್ವಾರ್ಥದ ಪ್ರೀತಿಯಾಗಿದೆ,
ಸತ್ಯಹೃದಯದ ಪ್ರೀತಿಯಿಲ್ಲ. ಸ್ವಾರ್ಥವಿದ್ದಾಗ ಪ್ರೀತಿ ಕೊಡುತ್ತಾರೆ, ಬೇಕಿಲ್ಲದಿದ್ದಾಗ ನೋಡುವುದೂ
ಇಲ್ಲ ಅಂದಮೇಲೆ ತಾವೇನು ಮಾಡುತ್ತೀರಿ? ಆತ್ಮಿಕ ಪ್ರೀತಿಯನ್ನು ಕೊಡಿ, ಆಶೀರ್ವಾದ ಕೊಡಿ. ದುಃಖವನ್ನು
ಕೊಡಬೇಡಿ ಮತ್ತು ತೆಗೆದುಕೊಳ್ಳಲೂ ಬೇಡಿ. ನೋಡಿ, ತಮಗೆ ಅವಕಾಶ ಸಿಕ್ಕಿದೆ, ಬಾಪ್ದಾದಾರವರಿಗೂ
ಖುಷಿಯಿದೆ. ಇಷ್ಟು ಮಂದಿ ಯಾರೆಲ್ಲರೂ ಬಂದಿದ್ದೀರೋ ತಮ್ಮೆಲ್ಲರ ಮನೆಯು ಆಶ್ರಮವಾಗುತ್ತದೆಯಲ್ಲವೆ.
ಮಾಡುತ್ತೀರಲ್ಲವೆ? ಪಕ್ಕಾ? ಅಥವಾ ಸ್ವಲ್ಪ-ಸ್ವಲ್ಪ ಕಚ್ಚಾ ಇದೆಯೇ? ಯಾರು ತಿಳಿಯುತ್ತೀರಿ - ಏನೇ
ಆಗಲಿ, ಸ್ವಲ್ಪ ಸಹನೆ ಮಾಡಬೇಕಾಗುವುದು, ಅಳವಡಿಸಿಕೊಳ್ಳುವ ಶಕ್ತಿಯನ್ನು ಕಾರ್ಯದಲ್ಲಿ
ತೊಡಗಿಸಬೇಕಾಗುವುದು ಆದರೆ ಸಹನಾಶಕ್ತಿಯ ಫಲವು ಬಹಳ ಮಧುರವಾಗಿರುತ್ತದೆ. ಸಹನೆ ಮಾಡಬೇಕಾಗುತ್ತದೆ
ಆದರೆ ಫಲವು ಬಹಳ ಮಧುರವಾಗಿರುತ್ತದೆ ಅಂದಾಗ ನಾವು ಮನೆ-ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತೇವೆ.
ಮಂದಿರವನ್ನಾಗಿ ಮಾಡುತ್ತೇವೆ, ಆಶ್ರಮವನ್ನಾಗಿ ಮಾಡುತ್ತೇವೆಂದು ಯಾರು ಪಕ್ಕಾ ಪ್ರತಿಜ್ಞೆ
ಮಾಡುತ್ತೀರೋ ಅವರು ಕೈ ಎತ್ತಿ. ತೋರ್ಪಡಿಕೆಗೆ ಎತ್ತಬೇಡಿ ಏಕೆಂದರೆ ಬಾಪ್ದಾದಾ ಲೆಕ್ಕವನ್ನು
ತೆಗೆದುಕೊಳ್ಳುತ್ತಾರಲ್ಲವೆ. ಅನ್ಯರನ್ನು ನೋಡಿ ಎತ್ತಬೇಡಿ, ಸತ್ಯ-ಸತ್ಯವಾದ ಮನಸ್ಸಿನ ಕೈ ಅರ್ಥಾತ್
ಮನಸ್ಸಿನಿಂದ ಕೈಯನ್ನೆತ್ತಿರಿ. ಒಳ್ಳೆಯದು. ದಾದಿಯರೇ, ಇವರಿಗೆ ಇದಕ್ಕಾಗಿ ಯಾವ ಬಹುಮಾನ
ಕೊಡುತ್ತೀರಿ? ಹೇಳಿ, ಇಷ್ಟೊಂದು ಮನೆಗಳು ಮಂದಿರವಾಗಿಬಿಟ್ಟರೆ ಅವರಿಗೆ ತಾವು ಯಾವ ಬಹುಮಾನ
ಕೊಡುವಿರಿ? (ತಮ್ಮ ಮನೆಯವರನ್ನು ಕರೆದುಕೊಂಡು ಬರಬೇಕು) ಇದಂತೂ ಬಹುಮಾನವನ್ನು ಕೊಟ್ಟಿದ ಹಾಗಲ್ಲ.
ಇದು ಕೇವಲ ಕರ್ತವ್ಯವನ್ನು ತಿಳಿಸಿದಿರಿ. (ಬಾಪ್ದಾದಾ ಏನು ಹೇಳುತ್ತಾರೆಯೋ ಅದರಂತೆ ಮಾಡುತ್ತೀರಿ)
ನೋಡಿ, ಬಹುಮಾನವಂತೂ ತಮಗೆ ಸಿಕ್ಕಿಬಿಡುವುದು, ಏನು ದೊಡ್ಡಮಾತಲ್ಲ...... ಆದರೆ..... ಆದರೆ? ಆದರೆ
ಹೇಳುವುದೇ! ತಾವು ಹೋದನಂತರ ತಮ್ಮ ಧಾರಣೆಯಿಂದ ಪರಿವರ್ತನೆ ಮಾಡಿಕೊಳ್ಳಿ ಮತ್ತು 15 ದಿನಗಳ ನಂತರ,
ತಿಂಗಳಿನ ನಂತರ ತಮ್ಮ ಫಲಿತಾಂಶವನ್ನು ಬರೆಯಿರಿ. ಯಾರು ಒಂದುಮಾಸವಾದರೂ ದುಃಖವನ್ನು ಕೊಡುವುದಿಲ್ಲ,
ತೆಗೆದುಕೊಳ್ಳುವುದಿಲ್ಲವೋ ಅವರಿಗೆ ಬಹಳ ಒಳ್ಳೆಯ ಬಹುಮಾನವನ್ನು ಕೊಡುತ್ತೇವೆ. ಒಂದುವೇಳೆ ತಾವು
ಬಂದರೆ ಶುಭಾಷಯಗಳು. ಬರಲು ಆಗಲಿಲ್ಲವೆಂದರೂ ಸಹ ನಿಮ್ಮ ಸ್ಥಳೀಯ ಸೇವಾಕೇಂದ್ರಗಳಿಗೆ ಕಳುಹಿಸುತ್ತೇವೆ.
ನಾಲ್ಕೂ ಕಡೆಯ ಪರಮಾತ್ಮನ
ಪ್ರೀತಿಯ ಅಧಿಕಾರಿ ಮಕ್ಕಳಿಗೆ ನಾಲ್ಕೂಕಡೆಯ ಸರ್ವಖಜಾನೆಗಳಿಂದ ಸಂಪನ್ನ, ನಿರ್ವಿಘ್ನ, ನಿರ್ವಿಕಲ್ಪ,
ನಿರ್ವ್ಯರ್ಥ ಸಂಕಲ್ಪದಲ್ಲಿರುವಂತಹ ಶ್ರೇಷ್ಠಾತ್ಮಗಳಿಗೆ, ಜೊತೆಜೊತೆಗೆ ಸರ್ವ ಪರಿವರ್ತನೆ
ಮಾಡಿಕೊಳ್ಳುವಂತಹ ಮತ್ತು ಮಾಡಿಸುವಂತಹ ಒಲವು-ಉತ್ಸಾಹದಲ್ಲಿ ಹಾರುವಂತಹ ಮಕ್ಕಳಿಗೆ, ಜೊತೆಜೊತೆಗೆ
ಬಾಪ್ದಾದಾರವರಿಗೆ ಸತ್ಯಹೃದಯದ ಸಮಾಚಾರವನ್ನು ನೀಡಿದಂತಹ ಸತ್ಯಹೃದಯವಂತ ಮಕ್ಕಳಿಗೆ ವಿಶೇಷ
ಹೃದಯರಾಮರೂಪದಲ್ಲಿ, ತಂದೆಯ ರೂಪದಲ್ಲಿ, ಶಿಕ್ಷಕನ ರೂಪದಲ್ಲಿ, ಸದ್ಗುರುವಿನ ರೂಪದಲ್ಲಿ ಪದಮಗುಣ
ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ಅಲೆದಾಡುತ್ತಿರುವ ಆತ್ಮಗಳಿಗೆ ಯಥಾರ್ಥ ಗುರಿ ತೋರಿಸುವಂತಹ ಚೈತನ್ಯ ಲೈಟ್-ಮೈಟ್ ಹೌಸ್ ಭವ
ಯಾವುದೇ
ಅಲೆದಾಡುತ್ತಿರುವ ಆತ್ಮಗಳಿಗೆ ಯಥಾರ್ಥ ಗುರಿ ತೋರಿಸುವುದಕ್ಕಾಗಿ ಚೈತನ್ಯ ಲೈಟ್-ಮೈಟ್ ಹೌಸ್ ಆಗಿ.
ಅದಕ್ಕಾಗಿ ಎರಡು ಮಾತುಗಳ ಬಗ್ಗೆ ಗಮನಕೊಡಿ-1- ಪ್ರತಿ ಆತ್ಮದ ಇಚ್ಛೆಯನ್ನು ಕಂಡುಹಿಡಿಯಬೇಕು, ಹೇಗೆ
ಯೋಗ್ಯ ಡಾಕ್ಟರ್ ಎಂದು ಯಾರಿಗೆ ಹೇಳಲಾಗುತ್ತದೆಯೆಂದರೆ ಯಾರು ನಾಡಿಯನ್ನು ತಿಳಿದಿರುತ್ತಾರೆ, ಇಂತಹ
ಕಂಡುಹಿಡಿಯುವ ಶಕ್ತಿಯನ್ನು ಸದಾ ಉಪಯೋಗಿಸಬೇಕಿದೆ. 2-ಸದಾ ತಮ್ಮ ಬಳಿ ಸರ್ವ ಖಜಾನೆಗಳ ಅನುಭವವನ್ನು
ಖಾಯಂ ಆಗಿಟ್ಟುಕೊಳ್ಳಬೇಕಿದೆ. ಸದಾ ಇದೇ ಲಕ್ಷ್ಯವನ್ನಿಟ್ಟುಕೊಳ್ಳಿ. ಹೇಳುವುದೊಂದೇ ಅಲ್ಲ ಆದರೆ
ಸರ್ವ ಸಂಬಂಧಗಳ ಸರ್ವ ಶಕ್ತಿಗಳ ಅನುಭವ ಮಾಡಬೇಕು.
ಸ್ಲೋಗನ್:
ಬೇರೆಯವರನ್ನು
ಸರಿಮಾಡುವ ಬದಲು ಒಬ್ಬ ತಂದೆಯ ಜೊತೆ ಸರಿಯಾದ ಸಂಬಂಧ ಜೋಡಿಸಿಕೊಳ್ಳಿ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ತಮ್ಮ ನಿಜೀ - ಸ್ವರೂಪ
ಅಥವಾ ವರದಾನಿ ಸ್ವರೂಪ ಸದಾ ಸ್ಮೃತಿಯಿದ್ದರೆ ಅಪವಿತ್ರತೆ ಮತ್ತು ವಿಸ್ಮೃತಿಯ ಹೆಸರು-ಲಕ್ಷಣ
ಸಮಾಪ್ತಿ ಆಗಿಬಿಡುತ್ತದೆ. ವಿಸ್ಮೃತಿ ಅಥವಾ ಅಪವಿತ್ರತೆ ಏನು ಎನ್ನುವುದರ ಈಗ ಅವಿದ್ಯೆಯಾಗಬೇಕು
ಏಕೆಂದರೆ ಈ ಸಂಸ್ಕಾರ ಅಥವಾ ಸ್ವರೂಪ ನಿಮ್ಮದಲ್ಲ ಆದರೆ ನಿಮ್ಮ ಪೂರ್ವ ಜನ್ಮದಾಗಿತ್ತು. ಈಗ ನೀವು
ಬ್ರಾಹ್ಮಣರಾಗಿದ್ದೀರಿ, ಇದಂತು ಶೂದ್ರರ ಸಂಸ್ಕಾರ ಅಥವಾ ಸ್ವರೂಪವಾಗಿದೆ, ಹೀಗೆ ನಿಮ್ಮಿಂದ ಭಿನ್ನ
ಅರ್ಥಾತ್ ಬೇರೆಯವರ ಸಂಸ್ಕಾರ ಅನುಭವವಾಗುವುದು, ಇದಕ್ಕೆ ಹೇಳಲಾಗುತ್ತದೆ - ಭಿನ್ನರು ಮತ್ತು
ಪ್ರಿಯರು.