25.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಈ
ಡ್ರಾಮಾದ ಆಟವು ಆಕ್ಯೂರೇಟ್ ಆಗಿ ನಡೆಯುತ್ತದೆ, ಯಾರ ಯಾವ ಪಾತ್ರವು ಯಾವ ಘಳಿಗೆಯಲ್ಲಿ
ಪಾತ್ರವಿರಬೇಕೋ ಅದೇ ಪುನರಾವರ್ತನೆಯಾಗುತ್ತಿದೆ, ಈ ಮಾತನ್ನು ಯಥಾರ್ಥ ರೀತಿಯಿಂದ
ತಿಳಿದುಕೊಳ್ಳಬೇಕಾಗಿದೆ"
ಪ್ರಶ್ನೆ:
ನೀವು ಮಕ್ಕಳ
ಪ್ರಭಾವವು ಯಾವಾಗ ಹೊರ ಬೀಳುವುದು? ಇಲ್ಲಿಯವರೆಗೂ ಯಾವ ಶಕ್ತಿಯ ಕೊರತೆಯಿದೆ?
ಉತ್ತರ:
ಯಾವಾಗ ಯೋಗದಲ್ಲಿ
ಶಕ್ತಿಶಾಲಿಗಳಾಗುವಿರೋ ಆಗ ಪ್ರಭಾವವಾಗುವುದು. ಈಗಿನ್ನೂ ಆ ಹರಿತವಿಲ್ಲ. ನೆನಪಿನಿಂದಲೇ ಶಕ್ತಿ
ಸಿಗುತ್ತದೆ. ಜ್ಞಾನದ ಖಡ್ಗದಲ್ಲಿ ನೆನಪಿನ ಹರಿತವಿರಬೇಕು. ಅದು ಇಲ್ಲಿಯವರೆಗೂ ಕಡಿಮೆಯಿದೆ.
ಒಂದುವೇಳೆ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ದೋಣಿಯು
ಪಾರಾಗುವುದು. ಇದು ಸೆಕೆಂಡಿನ ಮಾತಾಗಿದೆ.
ಓಂ ಶಾಂತಿ.
ಆತ್ಮೀಯ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸಿಕೊಡುತ್ತಾರೆ - ಒಬ್ಬರಿಗೇ ಆತ್ಮಿಕ ತಂದೆಯೆಂದು
ಹೇಳಲಾಗುತ್ತದೆ ಉಳಿದೆಲ್ಲರೂ ಆತ್ಮರಾಗಿದ್ದೀರಿ. ಅವರಿಗೆ ಪರಮ ಆತ್ಮನೆಂದು ಕರೆಯಲಾಗುತ್ತದೆ.
ತಂದೆಯು ತಿಳಿಸುತ್ತಾರೆ - ನಾನೂ ಸಹ ಆತ್ಮನಾಗಿದ್ದೇನೆ ಆದರೆ ನಾನು ಪರಮ ಸತ್ಯವಾಗಿದ್ದೇನೆ. ನಾನೇ
ಪತಿತ-ಪಾವನ, ಜ್ಞಾನ ಸಾಗರನಾಗಿದ್ದೇನೆ. ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ನಾನು
ಭಾರತದಲ್ಲಿಯೇ ಬರುತ್ತೇನೆ. ನೀವೇ ಮಾಲೀಕರಾಗಿದ್ದಿರಲ್ಲವೆ! ಈಗ ಸ್ಮೃತಿ ಬಂದಿದೆ. ತಂದೆಯು
ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ - ನೀವು ಮೊಟ್ಟ ಮೊದಲಿಗೆ ಸತ್ಯಯುಗದಲ್ಲಿ ಬಂದಿರಿ, ನಂತರ
ಪಾತ್ರವನ್ನಭಿನಯಿಸುತ್ತಾ 84 ಜನ್ಮಗಳನ್ನು ಭೋಗಿಸಿ ಈಗ ಕೊನೆಯಲ್ಲಿ ಬಂದು ಬಿಟ್ಟಿದ್ದೀರಿ. ನೀವು
ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮವು ಅವಿನಾಶಿ, ಶರೀರವು ವಿನಾಶಿಯಾಗಿದೆ. ಆತ್ಮವೇ ದೇಹದಿಂದ
ಆತ್ಮಗಳೊಂದಿಗೆ ಮಾತನಾಡುತ್ತದೆ. ಆತ್ಮಾಭಿಮಾನಿಯಾಗಿ ಇರುವುದಿಲ್ಲವೆಂದರೆ ಅವಶ್ಯವಾಗಿ
ದೇಹಾಭಿಮಾನವಿದೆ. ನಾನು ಆತ್ಮನಾಗಿದ್ದೇನೆ, ಇದೆಲ್ಲವನ್ನೂ ಮರೆತು ಹೋಗಿದ್ದಾರೆ. ಪಾಪಾತ್ಮ,
ಪುಣ್ಯಾತ್ಮ, ಮಹಾನ್ ಆತ್ಮನೆಂದು ಹೇಳುತ್ತಾರೆ. ಅಂದಮೇಲೆ ಅವರು ಮತ್ತೆ ಪರಮಾತ್ಮನಂತೂ ಆಗಲು
ಸಾಧ್ಯವಿಲ್ಲ. ಯಾರೂ ತಮ್ಮನ್ನು ಶಿವನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅನೇಕರ ಶರೀರಗಳ ಹೆಸರುಗಳು
ಶಿವ ಎಂದು ಇಟ್ಟುಕೊಂಡಿದ್ದಾರೆ. ಆತ್ಮವು ಶರೀರದಲ್ಲಿ ಪ್ರವೇಶ ಮಾಡಿದಾಗ ಹೆಸರನ್ನಿಡುತ್ತಾರೆ
ಏಕೆಂದರೆ ಶರೀರದಿಂದಲೇ ಪಾತ್ರವನ್ನಭಿನಯಿಸಲಾಗುತ್ತದೆ ಆದರೆ ಮನುಷ್ಯರು ನಾನು ಇಂತಹವನಾಗಿದ್ದೇನೆ,
ಶರೀರದ ಅಭಿಮಾನದಲ್ಲಿ ಬಂದು ಬಿಡುತ್ತಾರೆ. ಈಗ ತಿಳಿದುಕೊಳ್ಳುತ್ತೀರಿ - ಹೌದು,
ನಾನಾತ್ಮನಾಗಿದ್ದೇನೆ. ನಾವು 84 ಜನ್ಮಗಳ ಪಾತ್ರವನ್ನಭಿನಯಿಸಿದೆವು, ನಾನೀಗ ಆತ್ಮನನ್ನು
ತಿಳಿದುಕೊಂಡಿದ್ದೇನೆ. ನಾವಾತ್ಮಗಳು ಸತೋಪ್ರಧಾನರಾಗಿದ್ದೆವು, ಈಗ ತಮೋಪ್ರಧಾನರಾಗಿದ್ದೇವೆ. ಯಾವಾಗ
ಎಲ್ಲಾ ಆತ್ಮಗಳಲ್ಲಿ ತುಕ್ಕು ಬೀಳುವುದೋ ಆಗಲೇ ತಂದೆಯು ಬರುತ್ತಾರೆ. ಹೇಗೆ ಚಿನ್ನದಲ್ಲಿ ತುಕ್ಕು
ಬೀಳುತ್ತದೆಯಲ್ಲವೆ. ನೀವು ಮೊದಲು ಅಪ್ಪಟ್ಟ ಚಿನ್ನದಂತಿದ್ದಿರಿ ನಂತರ ಬೆಳ್ಳಿ, ತಾಮ್ರ, ಕಬ್ಬಿಣ
ಎಲ್ಲವೂ ಬೆರಕೆಯಾಗಿದೆ ಸಂಪೂರ್ಣ ಕಪ್ಪಾಗಿ ಬಿಟ್ಟಿರಿ. ಈ ಮಾತನ್ನು ಮತ್ತ್ಯಾರೂ ತಿಳಿಸಲು
ಸಾಧ್ಯವಿಲ್ಲ. ಆತ್ಮವು ನಿರ್ಲೇಪವೆಂದು ಎಲ್ಲರೂ ಹೇಳಿ ಬಿಡುತ್ತಾರೆ ಆದರೆ ಆತ್ಮದಲ್ಲಿ ಹೇಗೆ ತುಕ್ಕು
ಬೀಳುತ್ತದೆ ಎಂಬುದನ್ನು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ನಾನು
ಭಾರತದಲ್ಲಿಯೇ ಬರುತ್ತೇನೆ, ಯಾವಾಗ ಸಂಪೂರ್ಣ ತಮೋಪ್ರಧಾನರಾಗಿ ಬಿಡುವಿರೋ ಆಗಲೇ ಬರುತ್ತೇನೆ. ನಾನು
ನನ್ನ ಸಮಯಕ್ಕೆ ಸರಿಯಾಗಿ ಬರುತ್ತೇನೆ. ಹೇಗೆ ಡ್ರಾಮಾದಲ್ಲಿ ಆಕ್ಯೂರೇಟ್ ಆಟವು ನಡೆಯುತ್ತದೆಯಲ್ಲವೆ.
ಯಾರ ಪಾತ್ರವು ಯಾವ ಘಳಿಗೆಯಲ್ಲಿ ನಡೆಯಬೇಕೋ ಆ ಸಮಯದಲ್ಲಿಯೇ ಅದು ಪುನರಾವರ್ತನೆಯಾಗುವುದು. ಇದರಲ್ಲಿ
ಸ್ವಲ್ಪವೂ ಅಂತರವಾಗಲು ಸಾಧ್ಯವಿಲ್ಲ. ಅದು ಹದ್ದಿನ ಡ್ರಾಮ, ಇದು ಬೇಹದ್ದಿನ ಡ್ರಾಮ ಆಗಿದೆ.
ಇವೆಲ್ಲವೂ ತಿಳಿದುಕೊಳ್ಳುವ ಬಹಳ ಸೂಕ್ಷ್ಮ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ನಿಮ್ಮ ಯಾವ
ಪಾತ್ರವು ಅಭಿನಯವಾಯಿತೋ ಅದು ಡ್ರಾಮಾನುಸಾರ. ಯಾವುದೇ ಮನುಷ್ಯ ಮಾತ್ರರು ರಚಯಿತನನ್ನಾಗಲಿ, ರಚನೆಯ
ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ಋಷಿ-ಮುನಿಗಳೂ ಸಹ ನೇತಿ-ನೇತಿ ಎನ್ನುತ್ತಾ ಹೋದರು.
ಈಗ ನಿಮ್ಮೊಂದಿಗೆ ಯಾರಾದರೂ ನೀವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿದ್ದೀರಾ ಎಂದು ಕೇಳಿದರೆ ನೀವು ಕೂಡಲೇ ಹೇಳಿರಿ, ಹೌದು ಅದನ್ನು ನೀವು ಕೇವಲ ಈಗಲೇ
ತಿಳಿದುಕೊಳ್ಳಬಹುದು ಮತ್ತೆಂದೂ ಇಲ್ಲ. ತಂದೆಯು ತಿಳಿಸಿದ್ದಾರೆ - ನೀವೇ ರಚಯಿತನಾದ ನನ್ನನ್ನು
ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಒಳ್ಳೆಯದು- ಈ ಲಕ್ಷ್ಮೀ-ನಾರಾಯಣರ
ರಾಜ್ಯವು ಯಾವಾಗ ಇರುವುದು? ಇದನ್ನು ತಿಳಿದುಕೊಂಡಿರುವರೇ? ಇಲ್ಲ. ಅವರಲ್ಲಿ ಯಾವುದೇ ಜ್ಞಾನವಿಲ್ಲ.
ಇದಂತೂ ಆಶ್ಚರ್ಯದ ಮಾತಾಗಿದೆ. ನಮ್ಮಲ್ಲಿ ಜ್ಞಾನವಿದೆ ಎಂದು ನೀವು ಹೇಳುತ್ತೀರಿ. ಇದನ್ನು ನೀವು
ತಿಳಿದುಕೊಳ್ಳುತ್ತೀರಿ. ತಂದೆಯದು ಒಂದೇ ಬಾರಿಯ ಪಾತ್ರವಾಗಿದೆ. ಈ ಲಕ್ಷ್ಮೀ-ನಾರಾಯಣರಾಗುವುದು
ನಿಮ್ಮ ಗುರಿ-ಧ್ಯೇಯವಾಗಿದೆ, ಆ ರೀತಿ ಆದ ನಂತರ ವಿದ್ಯೆಯ ಅವಶ್ಯಕತೆಯಿರುವುದಿಲ್ಲ. ಹೇಗೆ ವಕೀಲರಾದ
ನಂತರ ವಿದ್ಯೆಯ ಅವಶ್ಯಕತೆಯಿರುವುದಿಲ್ಲ. ತಂದೆಯು ಯಾರು ಓದಿಸುವವರಾಗಿದ್ದಾರೆ, ಅವರ ನೆನಪಂತೂ
ಮಾಡಬೇಕು. ನಿಮಗೆ ಎಲ್ಲವನ್ನೂ ಸಹಜ ಮಾಡಿ ಬಿಟ್ಟಿದ್ದಾರೆ. ತಂದೆಯು ನಿಮಗೆ ಮತ್ತೆ-ಮತ್ತೆ
ತಿಳಿಸುತ್ತಾರೆ - ಮೊದಲು ತನ್ನನ್ನು ಆತ್ಮನೆಂದು ತಿಳಿಯಿರಿ. ನಾನು ತಂದೆಯ ಮಗುವಾಗಿದ್ದೇನೆ. ನೀವು
ಮೊದಲು ನಾಸ್ತಿಕರಾಗಿದ್ದಿರಿ, ಈಗ ಆಸ್ತಿಕರಾಗಿದ್ದೀರಿ. ಈ ಲಕ್ಷ್ಮೀ-ನಾರಾಯಣರೂ ಸಹ ಆಸ್ತಿಕರಾಗಿಯೇ
ಈ ಆಸ್ತಿಯನ್ನು ಪಡೆದಿದ್ದಾರೆ, ಅದನ್ನು ನೀವೀಗ ಪಡೆಯುತ್ತಿದ್ದೀರಿ. ನೀವೀಗ
ಆಸ್ತಿಕರಾಗುತ್ತಿದ್ದೀರಿ. ಆಸ್ತಿಕ-ನಾಸ್ತಿಕ ಶಬ್ಧವು ಈ ಸಮಯದ್ದಾಗಿದೆ. ಅಲ್ಲಿ ಈ
ಶಬ್ಧಗಳಿರುವುದಿಲ್ಲ. ಕೇಳುವ ಪ್ರಮೇಯವೂ ಇರುವುದಿಲ್ಲ. ಇಲ್ಲಿ ಪ್ರಶ್ನೆಯು ಉದ್ಭವಿಸುತ್ತದೆ
ಆದ್ದರಿಂದಲೇ ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿದ್ದೀರಾ ಎಂದು ಕೇಳಲಾಗುತ್ತದೆ ಇದಕ್ಕೆ ಅವರು
ಇಲ್ಲವೆಂದು ಹೇಳಿ ಬಿಡುತ್ತಾರೆ. ತಂದೆಯೇ ಬಂದು ತಮ್ಮ ಪರಿಚಯವನ್ನು ಹಾಗೂ ರಚನೆಯ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ತಂದೆಯು ಬೇಹದ್ದಿನ ಮಾಲೀಕ ರಚಯಿತನಾಗಿದ್ದಾರೆ.
ಮಕ್ಕಳಿಗೆ ತಿಳಿಸಲಾಗಿದೆ – ಅನ್ಯ ಧರ್ಮ ಸ್ಥಾಪಕರೂ ಸಹ ಇಲ್ಲಿಗೆ ಅವಶ್ಯವಾಗಿ ಬರುತ್ತಾರೆ. ಇಬ್ರಾಹಿಂ,
ಕ್ರೈಸ್ಟ್ ಮೊದಲಾದವರು ಹೇಗೆ ಬರುತ್ತಾರೆಂದು ನಿಮಗೆ ಸಾಕ್ಷಾತ್ಕಾರ ಮಾಡಿಸಿದ್ದೆನು. ಅವರಂತೂ
ಕೊನೆಯಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹ ಸಹಿತ-ದೇಹದ ಎಲ್ಲಾ ಧರ್ಮಗಳನ್ನು
ತ್ಯಜಿಸಿ ನನ್ನನ್ನು ನೆನಪು ಮಾಡಿ. ನೀವೀಗ ಸನ್ಮುಖದಲ್ಲಿ ಕುಳಿತಿದ್ದೀರಿ, ತಮ್ಮನ್ನು ದೇಹವೆಂದು
ತಿಳಿಯಬೇಡಿ, ನಾನು ಆತ್ಮನಾಗಿದ್ದೇನೆ. ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡುತ್ತಾ
ಇದ್ದರೆ ಜೀವನದೋಣಿಯು ಪಾರಾಗುವುದು. ಸೆಕೆಂಡಿನ ಮಾತಾಗಿದೆ - ಮುಕ್ತಿಯಲ್ಲಿ ಹೋಗುವುದಕ್ಕಾಗಿಯೇ
ಅರ್ಧ ಕಲ್ಪ ಭಕ್ತಿ ಮಾಡುತ್ತಾರೆ ಆದರೆ ಯಾವುದೇ ಆತ್ಮನು ಹಿಂತಿರುಗಿ ಹೋಗಲು ಸಾಧ್ಯವಿಲ್ಲ.
5000 ವರ್ಷಗಳ ಮೊದಲೂ ಸಹ
ತಂದೆಯು ಇದನ್ನು ತಿಳಿಸಿದ್ದರು, ಈಗಲೂ ತಿಳಿಸುತ್ತಾರೆ. ಶ್ರೀ ಕೃಷ್ಣನು ಈ ಮಾತುಗಳನ್ನು ತಿಳಿಸಲು
ಸಾಧ್ಯವಿಲ್ಲ. ಕೃಷ್ಣನಿಗೆ ತಂದೆಯೆಂತಲೂ ಹೇಳುವುದಿಲ್ಲ. ತಂದೆಯು ಲೌಕಿಕ, ಅಲೌಕಿಕ ಮತ್ತು
ಪಾರಲೌಕಿಕ ಆಗಿದ್ದಾರೆ. ಹದ್ದಿನ ತಂದೆಯು ಲೌಕಿಕ, ಬೇಹದ್ದಿನ ತಂದೆಯು ಪಾರಲೌಕಿಕ, ಆತ್ಮಗಳ
ತಂದೆಯಾಗಿದ್ದಾರೆ ಮತ್ತು ಇವರು (ಬ್ರಹ್ಮಾ) ಸಂಗಮಯುಗೀ ವಿಚಿತ್ರ ತಂದೆಯಾಗಿದ್ದಾರೆ. ಇವರಿಗೆ
ಅಲೌಕಿಕ ತಂದೆಯೆಂದು ಹೇಳುತ್ತಾರೆ. ಪ್ರಜಾಪಿತ ಬ್ರಹ್ಮಾನನ್ನು ಯಾರೂ ನೆನಪು ಮಾಡುವುದಿಲ್ಲ. ಅವರು
ನಮ್ಮ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ, ಇದು ಬುದ್ಧಿಯಲ್ಲಿಯೇ ಬರುವುದಿಲ್ಲ. ಆದಿದೇವ.
ಆಡಂ........ ಎಂದು ಹೇಳುತ್ತಾರೆ ಆದರೆ ನಾಮ ಮಾತ್ರ. ಮಂದಿರಗಳಲ್ಲಿಯೂ ಆದಿ ದೇವನ
ಚಿತ್ರಗಳಿವೆಯಲ್ಲವೆ. ನೀವು ಅಲ್ಲಿಗೆ ಹೋದಾಗ ಇದು ನಮ್ಮದೇ ನೆನಪಾರ್ಥವೆಂದು ತಿಳಿಯುತ್ತಾರೆ.
ತಂದೆಯೂ ಕುಳಿತಿದ್ದಾರೆ, ನಾವೂ ಕುಳಿತಿದ್ದೇವೆ. ಇಲ್ಲಿ ತಂದೆಯು ಚೈತನ್ಯದಲ್ಲಿ ಕುಳಿತಿದ್ದಾರೆ,
ಅಲ್ಲಿ ಜಡ ಚಿತ್ರವನ್ನಿಟ್ಟಿದ್ದಾರೆ. ಮೇಲೆ ಸ್ವರ್ಗವನ್ನು ತೋರಿಸಿರುವುದೂ ಸರಿಯಾಗಿದೆ. ಯಾರು
ಮಂದಿರವನ್ನು ನೋಡಿದ್ದಾರೆಯೋ ಅವರು ತಂದೆಯು ಈಗ ಚೈತನ್ಯದಲ್ಲಿ ನಮಗೆ ರಾಜಯೋಗವನ್ನು
ಕಲಿಸುತ್ತಿದ್ದಾರೆ ನಂತರ ಮಂದಿರಗಳನ್ನು ಕಟ್ಟಿಸುತ್ತೇವೆಂದು ತಿಳಿದುಕೊಂಡಿದ್ದಾರೆ. ಇದು
ಸ್ಮೃತಿಯಲ್ಲಿ ಬರಬೇಕು - ಇವೆಲ್ಲವೂ ನಮ್ಮ ನೆನಪಾರ್ಥವಾಗಿದೆ. ಈ ಲಕ್ಷ್ಮೀ-ನಾರಾಯಣರು ನಾವೀಗ
ಆಗುತ್ತಿದ್ದೇವೆ. ಆಗಿದ್ದೆವು, ನಂತರ ಏಣಿಯನ್ನು ಇಳಿಯುತ್ತಾ ಬಂದಿದ್ದೇವೆ. ಈಗ ಮತ್ತೆ ನಾವು ಮನೆಗೆ
ಹೋಗಿ ರಾಮರಾಜ್ಯದಲ್ಲಿ ಬರುತ್ತೇವೆ. ಕೊನೆಯಲ್ಲಿ ರಾವಣ ರಾಜ್ಯವಾಗುತ್ತದೆ ಮತ್ತೆ ನಾವು ವಾಮ
ಮಾರ್ಗದಲ್ಲಿ ಹೋಗುತ್ತೇವೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸಿ ಕೊಡುತ್ತಾರೆ! ಈ ಸಮಯದಲ್ಲಿ ಎಲ್ಲಾ
ಮನುಷ್ಯ ಮಾತ್ರವು ಪತಿತರಾಗಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬಂದು, ನಮ್ಮನ್ನು ಪಾವನ ಮಾಡಿ,
ದುಃಖವನ್ನು ದೂರ ಮಾಡಿ ಸುಖದ ಮಾರ್ಗ ತಿಳಿಸಿ ಎಂದು ಕೂಗುತ್ತಾರೆ ಮತ್ತು ಭಗವಂತನು ಅವಶ್ಯವಾಗಿ
ಯಾವುದೋ ವೇಷದಲ್ಲಿ ಬಂದು ಬಿಡುವರೆಂದು ಹೇಳಿ ಬಿಡುತ್ತಾರೆ. ಅಂದಮೇಲೆ ಭಗವಂತನು ನಾಯಿ, ಬೆಕ್ಕು,
ಕಲ್ಲು, ಮುಳ್ಳು ಇತ್ಯಾದಿಗಳಲ್ಲಂತೂ ಬರುವುದಿಲ್ಲ, ಭಾಗ್ಯಶಾಲೀ ರಥದಲ್ಲಿ ಬರುತ್ತಾರೆಂದು ಗಾಯನವಿದೆ.
ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಈ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಅವರು ತಮ್ಮ
ಜನ್ಮಗಳನ್ನು ಅರಿತುಕೊಂಡಿಲ್ಲ. ನೀವೀಗ ಅರಿತುಕೊಂಡಿದ್ದೀರಿ. ಇವರು ಬಹಳ ಜನ್ಮಗಳ ಅಂತಿಮದಲ್ಲಿ
ಯಾವಾಗ ವಾನಪ್ರಸ್ಥ ಸ್ಥಿತಿಯಾಗುವುದೋ ಆಗ ನಾನು ಪ್ರವೇಶ ಮಾಡುತ್ತೇನೆ. ಭಕ್ತಿಮಾರ್ಗದಲ್ಲಿ ಪಾಂಡವರ
ಬಹಳ ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿದ್ದಾರೆ. ರಂಗೂನ್ನಲ್ಲಿ ಬುದ್ಧನ ಬಹಳ ದೊಡ್ಡ ಚಿತ್ರವಿದೆ.
ಯಾರಾದರೂ ಇಷ್ಟು ದೊಡ್ಡ ಗಾತ್ರದ ಮನುಷ್ಯರಿರುತ್ತಾರೆಯೇ? ಮಕ್ಕಳಿಗಂತೂ ಈಗ ಬಹಳ ನಗು ಬರುತ್ತದೆ,
ರಾವಣನ ಚಿತ್ರವನ್ನು ಹೇಗೆ ಮಾಡಿದ್ದಾರೆ! ದಿನ-ಪ್ರತಿದಿನ ಇನ್ನೂ ದೊಡ್ಡದನ್ನಾಗಿ ಮಾಡುತ್ತಲೇ
ಹೋಗುತ್ತಾರೆ ಆದರೆ ಇವರು ಯಾರಾಗಿದ್ದಾರೆ, ಯಾರನ್ನು ಪ್ರತೀ ವರ್ಷವೂ ಸುಡುತ್ತೇವೆ, ಇಂತಹ ಶತ್ರುಗಳು
ಯಾರಾದರೂ ಇರುತ್ತಾರೆಯೇ! ಶತ್ರುವಿನ ಚಿತ್ರವನ್ನೇ ಮಾಡಿ ಸುಡುತ್ತಾರೆ. ಒಳ್ಳೆಯದು, ರಾವಣ ಯಾರು,
ಯಾವಾಗ ಶತ್ರುವಾಗಿದ್ದಾನೆ, ಯಾವ ಕಾರಣದಿಂದ ಪ್ರತೀ ವರ್ಷವೂ ಸುಡುತ್ತಾ ಬಂದಿದ್ದಾರೆ? ಈ ಶತ್ರುವಿನ
ಬಗ್ಗೆ ಯಾರಿಗೂ ತಿಳಿದಿಲ್ಲ. ಅದರ ಅರ್ಥವನ್ನೂ ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ -
ಅವರು ರಾವಣ ಸಂಪ್ರದಾಯ, ನೀವು ರಾಮನ ಸಂಪ್ರದಾಯದವರಾಗಿದ್ದೀರಿ. ತಂದೆಯು ತಿಳಿಸುತ್ತಾರೆ – ಗೃಹಸ್ಥ
ವ್ಯವಹಾರದಲ್ಲಿ ಕಮಲ ಪುಷ್ಪ ಸಮಾನರಾಗಿ ಮತ್ತು ನನ್ನನ್ನು ನೆನಪು ಮಾಡಿ. ಬಾಬಾ, ಹಂಸ ಮತ್ತು
ಕೊಕ್ಕರೆಗಳು ಒಟ್ಟಿಗೆ ಇರಲು ಹೇಗೆ ಸಾಧ್ಯ, ಕಿರಿ ಕಿರಿಯಾಗುತ್ತದೆಯೆಂದು ಹೇಳುತ್ತಾರೆ. ಇದಂತೂ
ಖಂಡಿತ ಆಗುತ್ತದೆ, ಆದರೆ ಸಹನೆ ಮಾಡಬೇಕಾಗುವುದು, ಇದರಲ್ಲಿ ಬಹಳ ಯುಕ್ತಿಗಳೂ ಇವೆ. ತಂದೆಗೆ
ರಹಸ್ಯಯುಕ್ತ ರಮಣೀಕಗಾರನೆಂದು ಹೇಳಲಾಗುತ್ತದೆ. ಎಲ್ಲರೂ ಅವರನ್ನೇ ಹೇ ಭಗವಂತ, ದುಃಖ ದೂರ ಮಾಡು,
ದಯೆ ತೋರಿಸು, ಮುಕ್ತ ಮಾಡು ಎಂದು ನೆನಪು ಮಾಡುತ್ತಾರಲ್ಲವೆ. ಆ ಮುಕ್ತಿದಾತ ತಂದೆಯು ಎಲ್ಲರಿಗೂ
ಒಬ್ಬರೇ ಆಗಿದ್ದಾರೆ, ನಿಮ್ಮ ಬಳಿ ಯಾರೇ ಬಂದರೂ ಸಹ ಅವರಿಗೆ ಬೇರೆ-ಬೇರೆಯಾಗಿ ತಿಳಿಸಿ.
ಕರಾಚಿಯಲ್ಲಿಯೂ ಒಬ್ಬೊಬ್ಬರಿಗೂ ಬೇರೆ-ಬೇರೆಯಾಗಿ ಕುಳಿತು ತಿಳಿಸಿ ಕೊಡುತ್ತಿದ್ದರು.
ಯಾವಾಗ ನೀವು ಮಕ್ಕಳು
ಯೋಗದಲ್ಲಿ ಶಕ್ತಿಶಾಲಿಗಳಾಗುತ್ತಾ ಹೋಗುವಿರೋ ಆಗ ನಿಮ್ಮ ಪ್ರಭಾವ ಹೊರ ಬೀಳುವುದು. ಬಹುಷಃ ಇನ್ನೂ ಆ
ಯೋಗದ ಹರಿತವಿಲ್ಲ, ನೆನಪಿನಿಂದಲೇ ಶಕ್ತಿ ಸಿಗುತ್ತದೆ, ವಿದ್ಯೆಯಿಂದ ಸಿಗುವುದಿಲ್ಲ. ಜ್ಞಾನವು
ಖಡ್ಗವಾಗಿದೆ ಅದರಲ್ಲಿ ನೆನಪಿನ ಹರಿತವನ್ನು ತುಂಬಿಸಿಕೊಳ್ಳಬೇಕಾಗಿದೆ. ಆ ಶಕ್ತಿಯು ಕಡಿಮೆಯಿದೆ.
ತಂದೆಯು ನಿತ್ಯವೂ ಹೇಳುತ್ತಿರುತ್ತಾರೆ - ಮಕ್ಕಳೇ, ನೆನಪಿನ ಯಾತ್ರೆಯಲ್ಲಿದ್ದರೆ ನಿಮಗೆ ಶಕ್ತಿ
ಸಿಗುವುದು. ವಿದ್ಯೆಯಲ್ಲಿ ಅಷ್ಟೊಂದು ಶಕ್ತಿಯಿಲ್ಲ, ನೆನಪಿನಿಂದ ನೀವು ಇಡೀ ವಿಶ್ವದ
ಮಾಲೀಕರಾಗುತ್ತೀರಿ. ನೀವು ತಮಗಾಗಿಯೇ ಎಲ್ಲವನ್ನೂ ಮಾಡಿಕೊಳ್ಳುತ್ತೀರಿ. ಅನೇಕರು ಬಂದರು ಮತ್ತೆ
ಹೊರಟು ಹೋದರು. ಮಾಯೆಯೂ ಶಕ್ತಿಶಾಲಿಯಾಗಿದೆ. ಬಹಳಷ್ಟು ಮಂದಿ ಬರುವುದಿಲ್ಲ, ಜ್ಞಾನವು ಬಹಳ
ಚೆನ್ನಾಗಿದೆ, ಖುಷಿಯೂ ಆಗುತ್ತದೆಯೆಂದು ಹೇಳುತ್ತಾರೆ ಆದರೆ ಹೊರಗಡೆ ಹೋದ ನಂತರ ಸಮಾಪ್ತಿ. ಮಾಯೆಯು
ನಿಲ್ಲಲು ಬಿಡುವುದಿಲ್ಲ. ಕೆಲ ಕೆಲವರಿಗೆ ಬಹಳ ಖುಷಿಯಾಗುತ್ತದೆ. ಓಹೋ! ಈಗ ತಂದೆಯು ಬಂದಿದ್ದಾರೆ,
ನಾವಂತೂ ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. ತಂದೆಯು ತಿಳಿಸುತ್ತಾರೆ - ಈಗಿನ್ನೂ ಪೂರ್ಣ ರಾಜಧಾನಿಯು
ಸ್ಥಾಪನೆಯಾಗಬೇಕಾಗಿದೆ. ನೀವು ಈ ಸಮಯದಲ್ಲಿ ಈಶ್ವರೀಯ ಸಂಪ್ರದಾಯದವರಾಗಿದ್ದೀರಿ ನಂತರ
ದೇವತೆಗಳಾಗುತ್ತೀರಿ. ಇಲ್ಲಿಗಿಂತಲೂ ಅಲ್ಲಿ ದರ್ಜೆಯು ಕಡಿಮೆಯಾಯಿತಲ್ಲವೆ. ಹೇಗೆ ಮೀಟರಿನಲ್ಲಿ
ಪಾಯಿಂಟ್ ಇರುತ್ತದೆ, ಅದರಲ್ಲಿ ಒಂದಿಷ್ಟು ಪಾಯಿಂಟ್ ಕಡಿಮೆ. ನೀವೀಗ ಒಮ್ಮೆಲೆ ಸಂಪೂರ್ಣ
ಶ್ರೇಷ್ಠರಾಗುತ್ತೀರಿ ನಂತರ ಕಡಿಮೆಯಾಗುತ್ತಾ-ಆಗುತ್ತಾ ಕೆಳಗೆ ಬಂದು ಬಿಡುತ್ತೀರಿ. ಏಣಿಯನ್ನು
ಕೆಳಗಿಳಿಯಲೇಬೇಕು. ಈಗ ನಿಮ್ಮ ಬುದ್ಧಿಯಲ್ಲಿ ಏಣಿಯ ಜ್ಞಾನವಿದೆ. ಏರುವ ಕಲೆಯಿಂದ ಸರ್ವರ ಉನ್ನತಿ
ನಂತರ ನಿಧಾನ-ನಿಧಾನವಾಗಿ ಇಳಿಯುವ ಕಲೆಯಾಗುತ್ತದೆ. ಆರಂಭದಿಂದ ಹಿಡಿದು ಈ ಚಕ್ರವನ್ನು ಚೆನ್ನಾಗಿ
ತಿಳಿದುಕೊಳ್ಳಬೇಕಾಗಿದೆ. ಈ ಸಮಯದಲ್ಲಿ ನಿಮ್ಮದು ಏರುವ ಕಲೆಯಾಗುತ್ತದೆ ಏಕೆಂದರೆ ತಂದೆಯು
ಜೊತೆಯಿದ್ದಾರಲ್ಲವೆ. ಈಶ್ವರ, ಯಾರಿಗೆ ಮನುಷ್ಯರು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆಯೋ ಆ
ತಂದೆಯು ಮಧುರಾತಿ ಮಧುರ ಮಕ್ಕಳೇ, ಎಂದು ಹೇಳುತ್ತಿರುತ್ತಾರೆ ಮತ್ತು ಮಕ್ಕಳೂ ಸಹ ಬಾಬಾ, ಬಾಬಾ
ಎನ್ನುತ್ತಿರುತ್ತೀರಿ. ತಂದೆಯು ನಮಗೆ ಓದಿಸಲು ಬಂದಿದ್ದಾರೆ, ಆತ್ಮವು ಓದುತ್ತದೆ. ಆತ್ಮವೇ
ಕರ್ಮವನ್ನು ಮಾಡುತ್ತದೆ. ನಾನಾತ್ಮನು ಶಾಂತ ಸ್ವರೂಪನಾಗಿದ್ದೇನೆ. ಈ ಶರೀರದ ಮೂಲಕ ಕರ್ಮವನ್ನು
ಮಾಡುತ್ತೇನೆ. ಯಾವಾಗ ದುಃಖವಾಗುವುದೋ ಆಗ ಅಶಾಂತಿ ಶಬ್ಧವನ್ನು ಹೇಳಲಾಗುತ್ತದೆ. ಬಾಕಿ ಶಾಂತಿಯು
ನಮ್ಮ ಸ್ವಧರ್ಮವಾಗಿದೆ. ಮನಃಶ್ಯಾಂತಿ ಬೇಕೆಂದು ಅನೇಕರು ಹೇಳುತ್ತಾರೆ. ಅರೆ! ಆತ್ಮವಂತೂ ಸ್ವಯಂ
ಶಾಂತ ಸ್ವರೂಪನಾಗಿದೆ, ಅದರ ಮನೆಯು ಶಾಂತಿಧಾಮವಾಗಿದೆ. ನೀವು ತಮ್ಮನ್ನು ಮರೆತು ಹೋಗಿದ್ದೀರಿ.
ನೀವಂತೂ ಶಾಂತಿಧಾಮದ ನಿವಾಸಿಗಳಾಗಿದ್ದೀರಿ, ಶಾಂತಿಯು ಅಲ್ಲಿಯೇ ಸಿಗುವುದು. ಒಂದು ರಾಜ್ಯ, ಒಂದು
ಧರ್ಮ, ಒಂದು ಭಾಷೆಯಿರಲಿ ಎಂದು ಇತ್ತೀಚೆಗೆ ಹೇಳುತ್ತಾರೆ. ಈಗ ಸರ್ಕಾರವೂ ಸಹ ಭಗವಂತನು ಒಬ್ಬನೇ
ಇದ್ದಾನೆಂದು ಬರೆಯುತ್ತಾರೆ. ಅಂದಮೇಲೆ ಮತ್ತೆ ಸರ್ವವ್ಯಾಪಿ ಎಂದು ಏಕೆ ಹೇಳುತ್ತಾರೆ? ಆ
ಭಗವಂತನನ್ನಂತೂ ಯಾರೂ ಒಪ್ಪುವುದಿಲ್ಲ ಆದ್ದರಿಂದ ನೀವೀಗ ಇದನ್ನು ಬರೆಯಬೇಕಾಗಿದೆ.
ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಮೇಲ್ಭಾಗದಲ್ಲಿ ಬರೆಯಿರಿ. ಸತ್ಯಯುಗದಲ್ಲಿ ಇವರ ರಾಜ್ಯವಿದ್ದಾಗ
ಒಬ್ಬ ಭಗವಂತ, ಒಂದು ದೈವೀ ರಾಜ್ಯವಿತ್ತು ಆದರೆ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ, ಗಮನವನ್ನೇ
ಕೊಡುವುದಿಲ್ಲ. ಯಾರು ನಮ್ಮ ಬ್ರಾಹ್ಮಣ ಕುಲದವರಾಗಿರುವರೊ ಅವರಿಗೇ ಗಮನಕ್ಕೆ ಬರುವುದು. ಮತ್ತ್ಯಾರೂ
ತಿಳಿದುಕೊಳ್ಳುವುದಿಲ್ಲ ಆದ್ದರಿಂದ ಬೇರೆ-ಬೇರೆಯಾಗಿ ಕುಳ್ಳರಿಸಿ ತಿಳಿಸಿ ಕೊಡಿ ಎಂದು ತಂದೆಯು
ಹೇಳುತ್ತಾರೆ. ಫಾರ್ಮ್ನ್ನು ತುಂಬಿಸಿದಾಗ ಅರ್ಥವಾಗುವುದು ಏಕೆಂದರೆ ಒಬ್ಬೊಬ್ಬರು ಒಬ್ಬೊಬ್ಬರನ್ನು
ಆರಾಧನೆ ಮಾಡುವವರಿರುತ್ತಾರೆ. ಎಲ್ಲರಿಗೆ ಒಟ್ಟಿಗೆ ಹೇಗೆ ತಿಳಿಸುತ್ತೀರಿ! ಹೀಗೆ ಮಾಡಿದರೆ ಎಲ್ಲರೂ
ತಮ್ಮ-ತಮ್ಮ ಮಾತುಗಳನ್ನು ತಿಳಿಸಲಾರಂಭಿಸುತ್ತಾರೆ. ಮೊಟ್ಟ ಮೊದಲಿಗೆ ಕೇಳಬೇಕು - ಎಲ್ಲಿಂದ
ಬಂದಿದ್ದೀರಿ? ಬ್ರಹ್ಮಾಕುಮಾರ-ಕುಮಾರಿಯರ ಹೆಸರನ್ನು ಕೇಳಿದ್ದೀರಾ? ಪ್ರಜಾಪಿತ ಬ್ರಹ್ಮಾನು ನಿಮಗೆ
ಏನಾಗಬೇಕು? ಎಂದಾದರೂ ಹೆಸರನ್ನು ಕೇಳಿದ್ದೀರಾ? ನೀವು ಪ್ರಜಾಪಿತ ಬ್ರಹ್ಮಾನ ಸಂತಾನರಲ್ಲವೆ? ನಾವಂತೂ
ಪ್ರತ್ಯಕ್ಷ ರೂಪದಲ್ಲಿ ಅವರ ಮಕ್ಕಳಾಗಿದ್ದೇವೆ. ನೀವೂ ಆಗಿದ್ದೀರಿ ಆದರೆ ತಿಳಿದುಕೊಂಡಿಲ್ಲ. ಹೀಗೆ
ತಿಳಿಸುವುದಕ್ಕೂ ಯುಕ್ತಿ ಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮಂದಿರಗಳು
ಇತ್ಯಾದಿಗಳನ್ನು ನೋಡುತ್ತಾ ಸದಾ ಈ ಸ್ಮೃತಿಯಿರಲಿ - ಇವೆಲ್ಲವೂ ನಮ್ಮದೇ ನೆನಪಾರ್ಥ ಮಂದಿರಗಳಾಗಿವೆ.
ನಾವೀಗ ಇಂತಹ ಲಕ್ಷ್ಮೀ-ನಾರಾಯಣರಾಗುತ್ತಿದ್ದೇವೆ.
2. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಿರಬೇಕಾಗಿದೆ. ಹಂಸ ಮತ್ತು ಕೊಕ್ಕರೆಗಳು
ಜೊತೆಯಲ್ಲಿದ್ದರೆ ಬಹಳ ಯುಕ್ತಿಯಿಂದ ನಡೆಯಬೇಕು, ಸಹನೆಯನ್ನೂ ಮಾಡಬೇಕಾಗಿದೆ.
ವರದಾನ:
ಏಕತೆ ಮತ್ತು
ಸಂತುಷ್ಠತೆಯ ಸರ್ಟಿಫಿಕೆಟ್ ಮೂಲಕ ಸೇವೆಯಲ್ಲಿ ಸದಾ ಸಫಲತಾ ಮೂರ್ತಿ ಭವ.
ಸೇವೆಯಲ್ಲಿ ಸಫಲತಾ
ಮೂರ್ತಿಗಳಾಗಬೇಕಾದರೆ ಎರಡು ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳ ಬೇಕು ಒಂದು -ಸಂಸ್ಕಾರಗಳನ್ನು
ಸೇರಿಸುವಂತಹ ಯೂನಿಟಿ ಮತ್ತು ಇನ್ನೊಂದು ಸ್ವಯಂ ಸಹಾ ಸದಾ ಸಂತುಷ್ಠರಾಗಿರಿ ಮತ್ತು ಅನ್ಯರನ್ನೂ ಸಹಾ
ಸಂತುಷ್ಠರನ್ನಾಗಿ ಮಾಡಿ. ಸದಾ ಪರಸ್ಪರರಲ್ಲಿ ಸ್ನೇಹದ ಭಾವನೆಯಿಂದ, ಶ್ರೇಷ್ಠತೆಯ ಭಾವನೆಯಿಂದ
ಸಂಪರ್ಕದಲ್ಲಿ ಬನ್ನಿ ಆಗ ಈ ಎರಡೂ ಸರ್ಟಿಫಿಕೆಟ್ ಸಿಕ್ಕಿ ಬಿಡುವುದು. ನಂತರ ತಮ್ಮ ವ್ಯಾವಹಾರಿಕ
ಜೀವನ ತಂದೆಯ ಚಿತ್ರಣದ ದರ್ಪಣವಾಗಿ ಬಿಡುವುದು ಮತ್ತು ಆ ದರ್ಪಣದಲ್ಲಿ ತಂದೆ ಏನಾಗಿದ್ದಾರೆ
ಹೇಗಿದ್ದಾರೆ ಅದೇ ರೀತಿ ಕಂಡು ಬರುವುದು.
ಸ್ಲೋಗನ್:
ಆತ್ಮ
ಸ್ಥಿತಿಯಲ್ಲಿ ಸ್ಥಿತರಾಗಿ ಅನೇಕ ಆತ್ಮಗಳಿಗೆ ಜೀವಧಾನ ಕೊಟ್ಟಾಗ ಆಶೀರ್ವಾದ ಸಿಕ್ಕುವುದು.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಹೇಗೆ ಅಗ್ನಿಯಲ್ಲಿ
ಯಾವುದೇ ವಸ್ತುವನ್ನು ಹಾಕಿದಾಗ ನಾಮ, ರೂಪ, ಗುಣ ಎಲ್ಲವೂ ಬದಲಾಗಿ ಬಿಡುತ್ತದೆ, ಅಂದಾಗ ಯಾವಾಗ
ತಂದೆಯ ನೆನಪಿನ ಲಗನ್ನಿನ ಅಗ್ನಿಯಲ್ಲಿದ್ದಾಗ ಪರಿವರ್ತನೆಯಾಗಿ ಬಿಡುತ್ತೇವೆ. ಮನುಷ್ಯರಿಂದ
ಬ್ರಾಹ್ಮಣರಾಗುತ್ತೇವೆ, ನಂತರ ಬ್ರಾಹ್ಮಣರಿಂದ ಫರಿಶ್ತಾ ಸೋ ದೇವತೆಗಳಾಗುತ್ತೇವೆ, ಲಗನ್ನಿನ
ಅಗ್ನಿಯಿಂದ ಇಂತಹ ಪರಿವರ್ತನೆಯಾಗುತ್ತದೆ. ಯಾವುದರಿಂದ ತನ್ನತನ ಎನ್ನುವುದು ಏನು ಇರುವುದಿಲ್ಲ,
ಇದಕ್ಕಾಗಿ ನೆನಪನ್ನು ಜ್ವಾಲಾರೂಪವೆಂದು ಹೇಳಲಾಗುತ್ತದೆ.