26.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ಒಳ್ಳೆಯ ಸಂಗವನ್ನು ಮಾಡಬೇಕಾಗಿದೆ, ಕೆಟ್ಟಸಂಗದ ಪ್ರಭಾವದಲ್ಲಿಬಿದ್ದರೆ ಕೆಳಗೆ ಬೀಳುತ್ತೀರಿ,
ಕೆಟ್ಟಸಂಗವು ನಿಮ್ಮನ್ನು ತುಚ್ಛಬುದ್ಧಿಯವರನ್ನಾಗಿ ಮಾಡುತ್ತದೆ”
ಪ್ರಶ್ನೆ:
ಈಗ ನೀವು
ಮಕ್ಕಳಿಗೆ ಯಾವ ಆಸಕ್ತಿ ಬರಬೇಕು?
ಉತ್ತರ:
ಹಳ್ಳಿ-ಹಳ್ಳಿಗೆ
ಹೋಗಿ ಸೇವೆ ಮಾಡಬೇಕೆಂದು ಉಮ್ಮಂಗವು ಬರಬೇಕು. ನಿಮ್ಮ ಬಳಿ ಏನೆಲ್ಲವೂ ಇದೆಯೋ ಅದು ಸೇವಾರ್ಥವಾಗಿದೆ.
ತಂದೆಯು ಮಕ್ಕಳಿಗೆ ಸಲಹೆ ನೀಡುತ್ತಾರೆ- ಮಕ್ಕಳೇ, ಈ ಹಳೆಯ ಪ್ರಪಂಚದಿಂದ ತಮ್ಮ ಬುದ್ಧಿಯನ್ನು
ಸ್ವತಂತ್ರ ಮಾಡಿಕೊಳ್ಳಿ, ಯಾವುದೇ ವಸ್ತುವಿನಲ್ಲಿ ಮಮತ್ವವನ್ನಿಡಬೇಡಿ. ಈ ಪ್ರಪಂಚದೊಂದಿಗೆ
ಮನಸ್ಸನ್ನಿಡಬೇಡಿ.
ಗೀತೆ:
ಈ ಪಾಪದ
ಪ್ರಪಂಚದಿಂದ ದೂರ ಕರೆದುಕೊಂಡು ಹೋಗು................
ಓಂ ಶಾಂತಿ.
ಪಾಪಾತ್ಮರ ಪ್ರಪಂಚ ಮತ್ತು ಪುಣ್ಯಾತ್ಮರ ಪ್ರಪಂಚ, ಆತ್ಮಗಳ ಹೆಸರನ್ನೇ ಇಡಲಾಗುತ್ತದೆ. ಈಗ ಇಲ್ಲಿ
ದುಃಖವಿದೆ ಆದ್ದರಿಂದಲೇ ಕೂಗುತ್ತಾರೆ. ಪುಣ್ಯಾತ್ಮರ ಪ್ರಪಂಚದಲ್ಲಿ ನಮ್ಮನ್ನು ಕರೆದುಕೊಂಡು ಹೋಗಿ
ಎಂದು ಹೇಳುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಇಲ್ಲಿ ಯಾವುದೇ ಪಂಡಿತ ಅಥವಾ ಸನ್ಯಾಸಿ
ಶಾಸ್ತ್ರವಾದಿಗಳು ತಿಳಿಸುವುದಿಲ್ಲ. ಸ್ವಯಂ ಇವರೂ (ಬ್ರಹ್ಮಾ) ಸಹ ಹೇಳುತ್ತಾರೆ- ನಾನೂ ಸಹ ಈ
ಜ್ಞಾನವನ್ನು ತಿಳಿದುಕೊಂಡಿರಲಿಲ್ಲ. ರಾಮಾಯಣ ಮೊದಲಾದವುಗಳನ್ನು ಬಹಳಷ್ಟು ಓದುತ್ತಿದ್ದೆನು. ತಂದೆಯೇ
ಈ ಜ್ಞಾನವನ್ನು ತಿಳಿಸುತ್ತಾರೆ. ನಾನೂ ಸಹ ಕೇಳುತ್ತೇನೆ. ಈಗ ಇದು ಪಾಪಾತ್ಮರ ಪ್ರಪಂಚವಾಗಿದೆ.
ಪುಣ್ಯಾತ್ಮರು ಇಲ್ಲಿ ಇದ್ದು ಹೋಗಿದ್ದಾರೆಂದು ಹೇಳುತ್ತಾರೆ. ಪೂಜೆ ಮಾಡಿ ಬಂದುಬಿಡುತ್ತಾರೆ,
ಶಿವನಪೂಜೆ ಮಾಡಿ ಬರುತ್ತಾರೆ ಎಂದು ಹೇಳುಉತ್ತಾರೆ. ನೀವು ಮಕ್ಕಳು ಯಾರ ಪೂಜೆ ಮಾಡುತ್ತೀರಿ? ನಿಮಗೆ
ತಿಳಿದಿದೆ- ಶ್ರೇಷ್ಠಾತಿಶ್ರೇಷ್ಠ ಭಗವಂತ ಶಿವನಾಗಿದ್ದಾರೆ. ಅವರು ವಿಧೇಯ ತಂದೆ, ಶಿಕ್ಷಕ,
ಗುರುವಾಗಿದ್ದಾರೆ. ಜೊತೆಯಲ್ಲಿ ಕರೆದುಕೊಂಡು ಹೋಗುವ ಗ್ಯಾರಂಟಿಯನ್ನು ಮತ್ತ್ಯಾವುದೇ ಗುರುಗಳು
ಕೊಡಲು ಸಾಧ್ಯವಿಲ್ಲ. ಅದರಲ್ಲಿಯೂ ಅವರು ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗುವುದಿಲ್ಲ. ಈಗ ನೀವು
ಸನ್ಮುಖದಲ್ಲಿ ಕೇಳುವುದರಿಂದ ಮಜಾ ಬರುವುದು. ತಂದೆಯು ಪದೇ-ಪದೇ ತಿಳಿಸುತ್ತಾರೆ- ಮಕ್ಕಳೇ,
ಚೆನ್ನಾಗಿ ಓದಿ, ಇದರಲ್ಲಿ ಹುಡುಗಾಟಿಕೆ ಮಾಡಬೇಡಿ, ಕೆಟ್ಟಸಂಗದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ.
ಇಲ್ಲವಾದರೆ ಇನ್ನೂ ತುಚ್ಛಬುದ್ಧಿಯವರಾಗಿಬಿಡುತ್ತೀರಿ. ಮಕ್ಕಳಿಗೆ ಗೊತ್ತಿದೆ- ನಾವು ಏನಾಗಿದ್ದೆವು,
ಯಾವ ಪಾಪಗಳನ್ನು ಮಾಡಿದ್ದೆವು, ನಾವೀಗ ಈ ದೇವತೆಗಳಾಗುತ್ತೇವೆ. ಈ ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ ಅಂದಮೇಲೆ ಈ ಮನೆ ಇತ್ಯಾದಿಗಳ ಚಿಂತೆಯನ್ನೇನು ಇಟ್ಟುಕೊಳ್ಳುವುದು. ಈ ಹಳೆಯ
ಪ್ರಪಂಚದಲ್ಲಿ ಏನೆಲ್ಲವೂ ಇದೆಯೋ ಅದನ್ನು ಮರೆಯಬೇಕಾಗಿದೆ ಇಲ್ಲವಾದರೆ ಇದೆಲ್ಲವೂ ಅಡಚಣೆ ಮಾಡುತ್ತದೆ.
ಇದರಲ್ಲಿ ಮನಸ್ಸಿಡಲು ಬಿಡುವುದಿಲ್ಲ. ನಾವು ಹೊಸ ಪ್ರಪಂಚದಲ್ಲಿ ಹೋಗಿ ನಮ್ಮ ವಜ್ರವೈಡೂರ್ಯಗಳ
ಮಹಲನ್ನು ಮಾಡುತ್ತೇವೆ. ಇಲ್ಲಿನ ಯಾವುದೇ ಹಣ ಮೊದಲಾದ ಯಾವುದೇ ವಸ್ತು ಪ್ರಿಯವೆನಿಸುತ್ತದೆ ಎಂದರೆ
ಶರೀರಬಿಡುವ ಸಮಯದಲ್ಲಿ ಅದರ ಮೇಲೆಯೇ ಮೋಹವುಂಟಾಗುವುದು. ನನ್ನದು-ನನ್ನದು ಎನ್ನುತ್ತೀರೆಂದರೆ
ಅಂತ್ಯದಲ್ಲಿ ಅದು ನಿಮ್ಮ ಮುಂದೆ ಬರುವುದು. ಇದೆಲ್ಲವೂ ಇಲ್ಲಿ ಸಮಾಪ್ತಿಯಾಗಿಬಿಡಲಿದೆ. ಇಲ್ಲಿ ನಾವು
ನಮ್ಮ ರಾಜಧಾನಿಯಲ್ಲಿ ಬರುತ್ತೇವೆ ಅಂದಮೇಲೆ ಈ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನೇನು ಇಡುವುದು!
ಅಲ್ಲಿ ಬಹಳ ಸುಖವಿರುತ್ತದೆ. ಹೆಸರೇ ಆಗಿದೆ- ಸ್ವರ್ಗ. ನಾವೀಗ ನಮ್ಮ ವತನಕ್ಕೆ ಹೋಗುತ್ತೇವೆ. ಇದು
ರಾವಣನ ವತನವಾಗಿದೆ ನಮ್ಮದಲ್ಲ. ಇದರಿಂದ ಮುಕ್ತರಾಗುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ಹಳೆಯ
ಪ್ರಪಂಚದಿಂದ ಬುದ್ಧಿಯನ್ನು ಸ್ವತಂತ್ರಪಡಿಸುತ್ತಾರೆ. ಆದ್ದರಿಂದ ಯಾವುದೇ ವಸ್ತುವಿನೊಂದಿಗೆ
ಮಮತ್ವವನ್ನಿಟ್ಟುಕೊಳ್ಳಬೇಡಿ ಎಂದು ತಂದೆಯು ತಿಳಿಸುತ್ತಾರೆ. ಹೊಟ್ಟೆಯೇನು ಹೆಚ್ಚಿಗೆ
ಕೇಳುವುದಿಲ್ಲ. ವ್ಯರ್ಥವಸ್ತುಗಳ ಮೇಲೆ ಬಹಳ ಖರ್ಚಾಗುತ್ತದೆ. ನೀವು ಮಕ್ಕಳಿಗೆ ಸರ್ವೀಸ್ ಮಾಡಲು
ಉಮ್ಮಂಗವು ಬರಬೇಕು. ಕೆಲವರು ಮಕ್ಕಳಿದ್ದಾರೆ ಅವರಿಗೆ ಹಳ್ಳಿ-ಹಳ್ಳಿಯಲ್ಲಿ ಸರ್ವೀಸ್ ಮಾಡುವ
ಉಮ್ಮಂಗವಿದೆ. ಬಾಕಿ ಯಾರಿಗೆ ಸೇವೆಯ ಉಮ್ಮಂಗವಿಲ್ಲವೋ ಅವರಿಂದೇನು ಪ್ರಯೋಜನ. ತಂದೆಯ ಮಕ್ಕಳಾಗಬೇಕು.
ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ- ತಂದೆಯನ್ನು ನೆನಪು ಮಾಡಿ ಮತ್ತು ತಂದೆಯಿಂದ ಆಸ್ತಿಯನ್ನು
ಪಡೆಯಿರಿ. ನಾವು ತಂದೆಯ ಸೇವೆಗಾಗಿ ಹೋಗುತ್ತೇವೆಂದು ಮಕ್ಕಳಿಗೆ ಉಮ್ಮಂಗವಿರುತ್ತದೆ ಆಗ ತಂದೆಯೂ ಸಹ
ಉತ್ಸಾಹವನ್ನು ಹೆಚ್ಚಿಸುತ್ತಾರೆ. ತಂದೆಯು ಸೇವೆಗಾಗಿ ಬಂದಿದ್ದಾರೆ. ಸೇವೆಗಾಗಿ ಎಲ್ಲವೂ ಇದೆ,
ಕೇವಲ ಈಗ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ಭಾರತದಲ್ಲಿ
ಬಂದಿದ್ದರು, ಭಾರತದಲ್ಲಿ ದೇವತೆಗಳ ರಾಜ್ಯವಿತ್ತು, ಇದು ನೆನ್ನೆಯ ಮಾತಾಗಿದೆ. ಲಕ್ಷ್ಮೀ-ನಾರಾಯಣರ
ರಾಜ್ಯದ ನಂತರ ರಾಮ-ಸೀತೆಯರ ರಾಜ್ಯವಿತ್ತು. ಅವರೇ ನಂತರ ವಾಮಮಾರ್ಗದಲ್ಲಿ ಇಳಿದರು. ರಾವಣರಾಜ್ಯವು
ಪ್ರಾರಂಭವಾಯಿತು ಏಣಿಯನ್ನು ಕೆಳಗಿಳಿದರು. ಈಗ ಮತ್ತೆ ಏರುವಕಲೆಯು ಸೆಕೆಂಡಿನ ಮಾತಾಗಿದೆ.
ಒಂದು ಸತ್ಯವಾದ
ಪ್ರೀತಿಯಾಗಿರುತ್ತದೆ, ಇನ್ನೊಂದು ಹೊರಗಿನ ಪ್ರೀತಿಯಿರುತ್ತದೆ. ಯಾವಾಗ ತಮ್ಮನ್ನು ಆತ್ಮನೆಂದು
ತಿಳಿಯುವಿರೋ ಆಗ ತಂದೆಯೊಂದಿಗೆ ಸತ್ಯವಾದ ಪ್ರೀತಿಯಿರುವುದು. ಈಗ ನೀವು ಮಕ್ಕಳಿಗೆ ಈ
ಪ್ರಪಂಚದೊಂದಿಗೆ ಹೊರಗಿನ ಪ್ರೀತಿಯಿರುತ್ತದೆ. ಇದಂತೂ ಸಮಾಪ್ತಿಯಾಗಲಿದೆ. ಸರ್ವೀಸ್ ಮಾಡುವವರೆಂದೂ
ಹಸಿವಿನಿಂದಿರಲು ಸಾಧ್ಯವಿಲ್ಲ ಅಂದಮೇಲೆ ಮಕ್ಕಳಿಗೆ ಸರ್ವೀಸಿನ ಉಮ್ಮಂಗವಿರಬೇಕು. ನಿಮ್ಮ ಈಶ್ವರೀಯ
ಯಂತ್ರವು ಬಹಳ ಸಹಜವಾಗಿದೆ. ಧರ್ಮವು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ಯಾರೂ
ತಿಳಿದುಕೊಳ್ಳುವುದಿಲ್ಲ. ಕ್ರಿಸ್ತನು ಬಂದರು, ಕ್ರೈಸ್ತಧರ್ಮದ ಸ್ಥಾಪನೆ ಮಾಡಿದರು, ಧರ್ಮವು
ವೃದ್ಧಿಯಾಗುತ್ತಾ ಹೋಯಿತು. ಅವರ ಮತದಂತೆ ನಡೆಯುತ್ತಾ ಕೆಳಗಿಳಿಯುತ್ತಾ ಬಂದರು, ಈಗ ನೀವು ಮಕ್ಕಳು
ದೇಹೀ-ಅಭಿಮಾನಿಯಾಗಬೇಕಾಗಿದೆ. ಅರ್ಧಕಲ್ಪ ರಾವಣರಾಜ್ಯದಲ್ಲಿ ನಾವು ತಂದೆಯನ್ನು ಮರೆತುಹೋದೆವು, ಈಗ
ತಂದೆಯು ಬಂದು ಜಾಗೃತಗೊಳಿಸುತ್ತಾರೆ. ತಂದೆಯು ತಿಳಿಸುತ್ತಾರೆ- ಡ್ರಾಮಾನುಸಾರ
ಕೆಳಗಿಳಿಯಲೇಬೇಕಿತ್ತು, ಇದು ನಿಮ್ಮದೂ ದೋಷವಿಲ್ಲ. ರಾವಣರಾಜ್ಯದಲ್ಲಿ ಪ್ರಪಂಚದ ಸ್ಥಿತಿಯೇ ಈ
ರೀತಿಯಾಗಿಬಿಡುತ್ತದೆ. ತಂದೆಯು ತಿಳಿಸುತ್ತಾರೆ- ನಾನೀಗ ಓದಿಸಲು ಬಂದಿದ್ದೇನೆ. ನೀವು ತಮ್ಮ
ರಾಜ್ಯಭಾಗ್ಯವನ್ನು ತೆಗೆದುಕೊಳ್ಳಿ, ನಾನು ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ ಕೊಳಕು
ಪದಾರ್ಥಗಳನ್ನು ತಿನ್ನಬೇಡಿ ಮತ್ತು ನನ್ನೊಬ್ಬನನ್ನೇ ನೆನಪು ಮಾಡಿ. ನೀವು ಮಕ್ಕಳಿಗೆ ತಿಳಿದಿದೆ-
ಇದು ನಾಟಕದ ಚಕ್ರವಾಗಿದೆ. ಪುನಃ ಪರಿವರ್ತನೆಯಾಗುತ್ತದೆ. ನಿಮ್ಮ ಬುದ್ಧಿಯಲ್ಲಿ ನಾಟಕದ
ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನೀವಿದನ್ನು ಯಾರಿಗಾದರೂ ತಿಳಿಸಬಹುದು. ಮೊದಲು ತಂದೆಯ ನೆನಪಿರಬೇಕು.
ಸರ್ವೀಸಿಗಾಗಿ ಪರಸ್ಪರ ಸೇರಿ ತಂಡವನ್ನು ಮಾಡಿಕೊಳ್ಳಬೇಕು. ಇದರಲ್ಲಿ ಮಾತೆಯರು ಪಾಲ್ಗೊಳ್ಳಬೇಕು,
ಹೆದರುವ ಮಾತಿಲ್ಲ. ಚಿತ್ರ ಮುಂತಾದವುಗಳೆಲ್ಲವೂ ನಿಮಗೆ ಸಿಗುತ್ತದೆ. ನಿಮ್ಮ ಸೇವೆಯು
ವೃದ್ಧಿಯಾಗುವುದು. ತಾವಂತೂ ಹೊರಟುಹೋಗುತ್ತೀರಿ ಮತ್ತೆ ನಮಗೆ ಯಾರು ಕಲಿಸುತ್ತಾರೆ ಎಂದು
ಕೇಳುತ್ತಾರೆ. ಆಗ ತಿಳಿಸಿ- ನಾವು ಸರ್ವೀಸ್ ಮಾಡಲು ತಯಾರಿದ್ದೇವೆ. ಮನೆ ಮೊದಲಾದ ಪ್ರಬಂಧ ಮಾಡಿ
ಅನೇಕರ ಕಲ್ಯಾಣಾರ್ಥವಾಗಿ ನಿಮಿತ್ತರಾಗುತ್ತೇವೆ. ತಂದೆಯು ಸರ್ವೀಸಿನ ಉಮ್ಮಂಗವನ್ನು ತರಿಸುತ್ತಾರೆ.
ಮಕ್ಕಳಲ್ಲಿ ಸಾಹಸವಿದ್ದಾಗ ಸೇವೆಯೂ ವೃದ್ಧಿಯಾಗುತ್ತದೆ. 10-15 ದಿನಗಳ ಕಾಲ ಮೇಳವು ನಡೆದು
ಕೊನೆಗೊಳ್ಳುವುದು. ಈ ಮೇಳವಂತೂ ನಡೆಯುತ್ತಲೇ ಇರುತ್ತದೆ. ಇಲ್ಲಿ ಆತ್ಮಗಳು ಮತ್ತು ಪರಮಾತ್ಮನ
ಮಿಲನವಾಗುತ್ತದೆ. ಇದಕ್ಕೆ ಸತ್ಯವಾದ ಮೇಳವೆಂದು ಕರೆಯಲಾಗುವುದು. ಅದು ಈಗ ನಡೆಯುತ್ತಲೇ ಇದೆ.
ಯಾವಾಗ ಸೇವೆಯು ಮುಕ್ತಾಯವಾಗುವುದೋ ಆಗ ಮೇಳವು ಕೊನೆಗೊಳ್ಳುವುದು. ನಾಟಕದನುಸಾರ ಮಕ್ಕಳಿಗೆ
ಸರ್ವೀಸಿನ ಉಮ್ಮಂಗವಿರಬೇಕು. ಬೇಹದ್ದಿನ ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದು ಮಕ್ಕಳ
ಬುದ್ಧಿಯಲ್ಲಿದೆ. ಸರ್ವಶ್ರೇಷ್ಠ ತಂದೆಯಿಂದ ನಾವು ಎಷ್ಟೊಂದು ಶ್ರೇಷ್ಠರಾಗಲು ಬಂದಿದ್ದೇವೆ. ಈ ರೀತಿ
ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಬೇಕು. ಪರಸ್ಪರ ಸೆಮಿನಾರ್ ಮಾಡಬೇಕು. ಬಾಬಾರವರಿಂದ ಸಲಹೆ
ತೆಗೆದುಕೊಂಡು ಸೇವೆಯಲ್ಲಿ ತತ್ಪರರಾಗಿರಬೇಕು. ಯಾವುದಾದರೂ ಸಹಯೋಗ ಬೇಕೆಂದರೆ ಬಾಬಾ ವರ
ಕುಳಿತಿದ್ದಾರೆ. ಇದೆಲ್ಲವೂ ಡ್ರಾಮಾದಲ್ಲಿ ನಿಗದಿಯಾಗಿದೆ. ಚಿಂತೆ ಮಾಡುವ ವಿಷಯ ಯಾವುದೂ ಇಲ್ಲ.
ಇಲ್ಲವೆಂದರೆ ಹೇಗೆ ಸ್ಥಾಪನೆ ಆಗುತ್ತದೆ. ಇನ್ನೊಂದು ವಿಷಯ ಯಾರು ಮಾಡುತ್ತಾರೋ ಅವರು
ಪಡೆದುಕೊಳ್ಳುತ್ತಾರೆ. ಈಗ ತಾವು ಮಕ್ಕಳು ಕಲ್ಲುಬುದ್ಧಿಯವರಿಂದ ವಜ್ರ ಸಮಾನ ಆಗುತ್ತಿದ್ದೀರಿ. ತಂದೆ
ಜ್ಞಾನದಿಂದ ನಮ್ಮನ್ನು ಸೀಧಾ ಮಾಡುತ್ತಾರೆ ಮತ್ತೆ ಮಾಯೆ ಮೂಗು ಹಿಡಿದು ನಮ್ಮನ್ನು ಪಲ್ಟಿ
ಮಾಡಿಸಿಬಿಡುತ್ತದೆ.
ತಾವು ಮಕ್ಕಳು ಬಹಳ
ಒಳ್ಳೆಯ ಸಂಘವನ್ನು ಮಾಡಬೇಕಾಗಿದೆ. ಕೆಟ್ಟ ಸಂಘದ ಪ್ರಭಾವದಿಂದ ಬಿದ್ದುಹೋಗುತ್ತೀರಿ. ಬಾಬಾ ಸಿನೆಮಾ
ಮುಂತಾದವುಗಳನ್ನು ನೋಡಲು ಬಿಡುವುದಿಲ್ಲ. ಯಾರಿಗೆ ಸಿನೆಮಾ ನೋಡುವ ಅಭ್ಯಾಸ ಇರುತ್ತದೆ ಅವರು
ಪತಿತರಾಗದೆ ಇರಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಬ್ಬರ ಚಟುವಟಿಕೆಗಳು (ಏಕ್ಟಿವಿಟಿ) ಕೊಳಕು (ಡರ್ಟಿ)
ಆಗಿದೆ, ಹೆಸರೇ ಆಗಿದೆ ವೇಶ್ಯಾಲಯ. ತಂದೆ ಶಿವಾಲಯವನ್ನು ಸ್ಥಾಪನೆ ಮಾಡುತ್ತಿದ್ದಾರೆ.
ವೇಶ್ಯಾಲಯಕ್ಕೆ ಪೂರ್ತಿ ಬೆಂಕಿ ಬೀಳುವುದಿದೆ. ಕುಂಭಕರ್ಣನ ಹಾಗೆ ಆಸುರೀ ನಿದ್ರೆಯಲ್ಲಿ
ಮಲಗಿಬಿಟ್ಟಿದ್ದಾರೆ. ನಾವು ಶಿವಾಲಯಕ್ಕೆ ಹೋಗುತ್ತಿದ್ದೇವೆ ಎಂದು ತಾವು ತಿಳಿದುಕೊಂಡಿದ್ದೀರಿ.
ಮೊದಲು ನಾವು ಕೋತಿಗಳ ಹಾಗೆ ಇದ್ದೆವು, ಇದರ ಮೇಲೆ ರಾಮಾಯಣದಲ್ಲೂ ಸಹ ಕಥೆ ಇದೆ. ಈಗ ತಾವು ತಂದೆಗೆ
ಸಹಯೋಗಿ ಆಗಿದ್ದೀರಿ. ತಾವು ತಮ್ಮ ಶಕ್ತಿಯಿಂದ ರಾಜ್ಯ ಸ್ಥಾಪನೆ ಮಾಡುತ್ತಿದ್ದೀರಿ. ನಂತರ ಈ
ರಾವಣರಾಜ್ಯ ಸಮಾಪ್ತಿ ಆಗಬೇಕಾಗಿದೆ. ತಾವು ಮಕ್ಕಳಿಗೆ ಅನೇಕ ಪ್ರಕಾರದ ಯುಕ್ತಿಗಳನ್ನು
ತಿಳಿಸುತ್ತಿರುತ್ತೇನೆ. ಯಾರಿಗೂ ದಾನ ಮಾಡಿಲ್ಲವೆಂದರೆ ಹೇಗೆ ಫಲ ಸಿಗುತ್ತದೆ? ಮೊಟ್ಟಮೊದಲು 10-15
ಜನಕ್ಕೆ ಮಾರ್ಗವನ್ನು ತೋರಿಸಿ ನಂತರ ಊಟ ಮಾಡಬೇಕಾಗಿದೆ. ಮೊದಲು ಶುಭಕಾರ್ಯವನ್ನು ಮಾಡಿ ಇದರಲ್ಲೇ
ತಮ್ಮ ಕಲ್ಯಾಣವಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಇದಂತೂ ಪತಿತ ಪ್ರಪಂಚವಾಗಿದೆ.
ಪತಿತಪಾವನ ಒಬ್ಬ ತಂದೆಯನ್ನು ನೆನಪು ಮಾಡಿದ್ದೇ ಆದರೆ ಪಾವನ ಪ್ರಪಂಚಕ್ಕೆ ಮಾಲೀಕರಾಗಿಬಿಡುತ್ತೀರಿ.
ಅಂತಿಮತಿ ಸೋ ಗತಿ ಆಗಿಬಿಡುತ್ತದೆ. ಅಂದಾಗ ಯಾವುದಾದರೂ ಸಂದೇಶವನ್ನು ಕೊಟ್ಟು ನಂತರ ಊಟ ಮಾಡಬೇಕು.
ತಂದೆಯನ್ನು ನೆನಪು ಮಾಡುವುದರಿಂದ ನಾವು ಇಷ್ಟು ಶ್ರೇಷ್ಠರಾಗುತ್ತೇವೆ ಎಂದು ಎಲ್ಲರಿಗೆ ಹೇಳುತ್ತಿರಿ.
ಒಳ್ಳೆಯದು.
ರಾತ್ರಿ ಕ್ಲಾಸ್:
17-03-1968
ಎಂದಾದರೂ ಎಲ್ಲಾದರೂ
ಭಾಷಣವೇನಾದರೂ ಮಾಡಬೇಕಾದಾಗ ಪರಸ್ಪರ ಒಬ್ಬರಿಗೊಬ್ಬರು ಸೇರಿಕೊಂಡು 2-3 ಬಾರಿ ರಿರ್ಹಸಲ್ ಮಾಡಿ,
ಪಾಯಿಂಟ್ಸ್ ಗಳನ್ನು ಸೇರಿಸಿ, ಕರೆಕ್ಷನ್ ಮಾಡಿಕೊಂಡು ತಯಾರಾಗಿ ಆಗ ಇನ್ನೂ ರಿಫೈನ್ ಆಗಿ ಭಾಷಣ
ಮಾಡುವಿರಿ ಮುಖ್ಯವಾಗಿ ಒಂದು ಮಾತಿನ ಮೇಲೆ(ಗೀತೆಯ ಭಗವಂತ)ನೀವು ವಿಜಯ ಸಾದಿಸಿದರೆ ನಂತರ ಬೇರೆ
ಎಲ್ಲಾ ಮಾತುಗಳಲ್ಲಿ ವಿಜಯಿಗಳಾಗುವಿರಿ, ಇದಕ್ಕಾಗಿ ಕಾನ್ಫರೆನ್ಸ್ಗಳಂತೂ ಆಗುವುದಲ್ಲವೇ!
ತಿಳಿಯುತ್ತಾ ಹೋಗುತ್ತಾರೆ ವೃಕ್ಷವಂತೂ ಖಂಡಿತ ವೃದ್ಧಿಯಾಗಲೇ ಬೇಕು. ಮಾಯೆಯ ಬಿರುಗಾಳಿ ಎಲ್ಲರಿಗೂ
ಬೀಸುತ್ತೆ. ಕೆಲವೊಮ್ಮೆ ಬರೆಯುತ್ತಾರೆ ಬಾಬಾ ನಾನು ಕಾಮವಿಕಾರದ ಚಾಟಿ ಏಟನ್ನು ತಿಂದೆ, ಇದಕ್ಕೆ
ಹೇಳಲಾಗುವುದು ಸಂಪಾದನೆ ಸಮಾಪ್ತಿ. ಕ್ರೋಧ ಏನಾದರೂ ಮಾಡಿದರೆ ಹೇಳಲಾಗುತ್ತೆ ಸ್ವಲ್ಪ ನಷ್ಟ ಅಯಿತು.
ಇದಕ್ಕಾಗಿ ತಿಳಿಸಿಹೇಳಬೇಕಾಗುತ್ತೆ, ಕಾಮದಮೇಲೆ ಜಯ ಸಾಧಿಸಿದರೆ ಜಗತ್ ಜೀತ್ ಆಗುವಿರಿ. ಕಾಮದ ಮೇಲೆ
ಸೋತರೆ ಸೋತಹಾಗೆ. ಕಾಮದಿಂದ ಸೋಲುವಂತಹವರ ಸಂಪಾದನೆ ಸಮಾಪ್ತಿಯಾಗಿಬಿಡುವುದು, ದಂಡ ಬೀಳುತ್ತದೆ.
ಗುರಿ ಬಹಳ ದೊಡ್ಡದಾಗಿದೆ ಇದರಿಂದ ಬಹಳ ಎಚ್ಚರಿಕೆ ಇಟ್ಟುಕೊಳ್ಳ ಬೇಕಾಗುತ್ತದೆ. ನೀವು ಮಕ್ಕಳು
ತಿಳಿದಿರುವಿರಿ 5000 ವರ್ಷಕ್ಕೆ ಮೊದಲು ಸಹಾ ನಮಗೆ ರಾಜ್ಯಭಾಗ್ಯ ಸಿಕ್ಕಿತ್ತು. ಈಗ ಪುನಃ
ದೈವೀರಾಜಧಾನಿ ಸ್ಥಾಪನೆಯಾಗುತ್ತಿದೆ. ಈ ವಿಧ್ಯೆಯಿಂದ ನಾವು ಆ ರಾಜಧಾನಿಯಲ್ಲಿ ಹೋಗುವೆವು, ಎಲ್ಲದರ
ಆಧಾರ ವಿಧ್ಯೆಯ ಮೇಲಿದೆ. ವಿಧ್ಯೆ ಮತ್ತು ಧಾರಣೆಯಿಂದಲೇ ತಂದೆಯ ಸಮಾನ ಆಗುವಿರಿ. ರಿಜಿಸ್ಟರ್ ಸಹಾ
ಬೇಕಲ್ಲವೇ ಇದರಿಂದ ತಿಳಿಯುತ್ತೆ ಎಷ್ಟು ಜನಕ್ಕೆ ನಿಮ್ಮಸಮಾನ ಮಾಡಿಕೊಂಡಿರಿ. ಎಷ್ಟೆಷ್ಟು ಜಾಸ್ತಿ
ಧಾರಣೆ ಮಾಡುವಿರಿ ಅಷ್ಟೂ ಮಧುರರಾಗುವಿರಿ. ಬಹಳ ಪ್ರೀಯ ಮಕ್ಕಳು ಬೇಕು. ನೀವು ಮಕ್ಕಳಿಗಾಗಿಯೆ ಆ
ದಿನ ಇಂದು ಬಂದಿದೆ, ಯಾವುದಕ್ಕಾಗಿ ಮನುಷ್ಯರು ಮುಕ್ತಿಯಲ್ಲಿ ಹೋಗಲು ಬಹಳ ಪ್ರಯತ್ನ ಮಾಡುತ್ತಾರೆ.
ತಂದೆ ಎಲ್ಲರಿಗೂ ಒಟ್ಟಿಗೆ ಮುಕ್ತಿ ಜೀವನ್ ಮುಕ್ತಿ ಕೊಡುತ್ತಾರೆ. ಯಾರು ದೇವತೆಗಳಾಗುವ ಪುರುಷಾರ್ಥ
ಮಾಡುತ್ತಾರೆ ಅವರೇ ಜೀವನ್ಮುಕ್ತಿಯಲ್ಲಿ ಹೋಗುವರು. ಸರಿಯಾಗಿ ಲೆಕ್ಕ ಹಾಕಲುಸಾಧ್ಯವಿಲ್ಲ. ಯಾರೆಲ್ಲಾ
ಉಳಿಯುತ್ತಾರೆ ಅವರು ವಿನಾಶದ ಸಾಕ್ಷಾತ್ಕಾರ ಮಾಡುತ್ತಾರೆ ಇವರು ಸುಖಮಯ ಸುಂದರವಾದ ಸಮಯವನ್ನೂ ಸಹಾ
ನೋಡುತ್ತಾರೆ. ಪ್ರತಿ ಮಾತಿನಲ್ಲಿ ಪುರುಷಾರ್ಥ ಮಾಡಬೇಕಾಗುತ್ತದೆ. ಹೀಗೂ ಅಲ್ಲ ನೆನಪಿನಲ್ಲಿ
ಕುಳಿತರೆ ಎಲ್ಲಾ ಕಾರ್ಯ ಆಗಿಬಿಡುತ್ತದೆ, ಮನೆ ದೊರಕಿಬಿಡುತ್ತದೆ ಎಂದು, ಇಲ್ಲ. ಅಲ್ಲಂತೂ
ಡ್ರಾಮದಲ್ಲಿ ಏನಿದೆಯೋ ಅದೇ ಆಗುತ್ತಿರುತ್ತದೆ, ಆಸೆಯನ್ನಿಟ್ಟುಕೊಳ್ಳುವಹಾಗಿಲ್ಲ. ಪುರುಷಾರ್ಥವನ್ನು
ಮಾಡಬೇಕಾಗುತ್ತದೆ. ಬಾಕಿ ಡ್ರಾಮದಲ್ಲಿ ಏನು ನಿಗಧಿಯಾಗಿದೆಯೊ ಅದು ಆಗುತ್ತದೆ. ಮುಂದೆ ಹೋದಂತೆ
ನಿಮ್ಮ ವೃತ್ತಿಯೂ ಸಹಾ ಭಾಯಿ-ಭಾಯಿಯದಾಗಿಬಿಡುತ್ತದೆ. ಎಷ್ಟು ಪುರುಷಾರ್ಥಮಾಡುವಿರೋ ಅಷ್ಟು ಆ
ವೃತ್ತಿ ಇರುವುದು. ನಾವು ಅಶರೀರಿಗಳಾಗಿ ಬಂದಿದ್ದೆವು. 84 ಜನ್ಮದ ಚಕ್ರ ಪೂರ್ಣಮಾಡಿದೆವು. ಈಗ ತಂದೆ
ಹೇಳುತ್ತಾರೆ ಕರ್ಮಾತೀತ ಅವಸ್ಥೆಯಲ್ಲಿ ಹೋಗಬೇಕು. ನೀವು ವಾಸ್ತವದಲ್ಲಿ ಯಾರೊಂದಿಗೂ ಶಾಸ್ತ್ರಗಳ
ಬಗ್ಗೆ ವಿವಾಧಮಾಡುವ ಅಗತ್ಯ ಇಲ್ಲ ಮೂಲ ಮಾತೇ ಆಗಿದೆ ನೆನಪಿನದು ಮತ್ತು ಸೃಷ್ಠಿಚಕ್ರದ
ಆದಿ,ಮಧ್ಯ,ಅಂತ್ಯವನ್ನು ತಿಳಿದುಕೊಳ್ಳುವುದು. ಚಕ್ರವರ್ತಿರಾಜ ಆಗ ಬೇಕಿದೆ. ಕೇವಲ ಈ ಚಕ್ರವನ್ನು
ಮಾತ್ರ ತಿಳಿದುಕೊಳ್ಳಬೇಕು. ಇದರದೇ ಗಾಯನವಿದೆ ಸೆಕೆಂಡ್ ನಲ್ಲಿ ಜೀವನ್ಮುಕ್ತಿ. ನೀವು ಮಕ್ಕಳಿಗೆ
ಆಶ್ಚರ್ಯವಾಗುತ್ತಿರಬಹುದು, ಅರ್ಧ ಕಲ್ಪ ಭಕ್ತಿಯು ನಡೆಯುತ್ತದೆ. ಜ್ಞಾನ ಸ್ವಲ್ಪವೂ ಇರುವುದಿಲ್ಲ.
ಜ್ಞಾನವಿರುವುದೇ ತಂದೆಯ ಬಳಿ. ತಂದೆಯ ಮೂಲಕವೇ ತಿಳಿದುಕೊಳ್ಳ ಬೇಕು. ಈ ಮಾತು ಎಷ್ಟು
ಅಸಾಮಾನ್ಯವಾಗಿದೆ, ಆದ್ದರಿಂದ ಕೋಟಿಯಲ್ಲಿ ಕೆಲವರು ತಿಳಿದುಕೊಳ್ಳುತ್ತಾರೆ. ಅಲ್ಲಿ ಟೀಚರ್ಸ್ ಈ
ರೀತಿ ಹೇಳುವುದಿಲ್ಲ. ಇಲ್ಲಿ ಹೇಳುತ್ತಾರೆ ನಾನೇ ತಂದೆ, ಟೀಚರ್, ಗುರುವಾಗಿದ್ದೇನೆ ಎಂದು. ಇದನ್ನು
ಮನುಷ್ಯರು ಕೇಳಿ ಆಶ್ಚರ್ಯ ಪಡುತ್ತಾರೆ. ಭಾರತವನ್ನು ತಾಯ್ನಾಡು ಎಂದು ಹೇಳುತ್ತಾರೆ ಏಕೆಂದರೆ
ಅಂಭಾನ ಹೆಸರು ಬಹಳ ಪ್ರಸಿದ್ಧವಾಗಿದೆ. ಅಂಭಾನ ಮೇಳಾ ಸಹ ನಡೆಯುತ್ತದೆ. ಅಂಭಾ ಎನ್ನುವುದು ಮಧುರ
ಅಕ್ಷರವಾಗಿದೆ. ಚಿಕ್ಕ ಮಕ್ಕಳು ಸಹ ತಾಯಿಯನ್ನು ಪ್ರೀತಿಮಾಡುತ್ತಾರಲ್ಲವೇ ಏಕೆಂದರೆ ತಾಯಿ
ತಿನ್ನಿಸುತ್ತಾರೆ ಕುಡಿಸುತ್ತಾರೆ ಸಂಭಾಲನೆಮಾಡುತ್ತಾರೆ. ಈಗ ಅಂಭಾ ನ ಬಾಬಾ ಸಹಾ ಬೇಕಲ್ಲವೇ.
ಇವರಂತೂ ದತ್ತು ಮಗುವಾಗಿದ್ದಾರೆ, ಇವರ ತಂದೆಯಂತೂ ಇಲ್ಲ. ಇದು ಹೊಸ ಮಾತಲ್ಲವೇ, ಪ್ರಜಾಪಿತ ಬ್ರಹ್ಮಾ
ಖಂಡಿತ ದತ್ತು ತೆಗೆದುಕೊಂಡಿರಬಹುದು. ಈ ಎಲ್ಲಾ ಮಾತುಗಳನ್ನು ತಂದೆಯೇ ಬಂದು ತಿಳಿಸಿಕೊಡುತ್ತಾರೆ.
ಎಷ್ಟು ಮೇಳಾಗಳು ನಡೆಯುತ್ತವೆ ಪೂಜೆಯಾಗುತ್ತದೆ, ಏಕೆಂದರೆ ನೀವು ಮಕ್ಕಳು ಸೇವೆಮಾಡುವಿರಿ.
ಮಮ್ಮಾರವರು ಎಷ್ಟು ಜನರಿಗೆ ಓದಿಸಿದ್ದಾರೆ ಅಷ್ಟು ಬೇರೆಯಾರೂ ಓದಿಸಿರಲು ಸಾದ್ಯವಿಲ್ಲ. ಮಮ್ಮರವರ
ಹೆಸರು ಬಹಳ ಪ್ರಸಿದ್ಧವಾಗಿದೆ, ಮೇಳಗಳು ಬಹಳ ನಡೆಯುತ್ತವೆ. ಈಗ ನೀವು ಮಕ್ಕಳು ತಿಳಿದುಕೊಂಡಿರುವಿರಿ,
ತಂದೆಯೇ ಬಂದು ರಚನೆಯ ಆದಿ-ಮಧ್ಯೆ-ಅಂತ್ಯದ ಇಡೀ ರಹಸ್ಯ ನೀವು ಮಕ್ಕಳಿಗೆ ತಿಳಿಸಿದ್ದಾರೆ. ನಿಮಗೆ
ತಂದೆಯ ಮನೆಯೂ ಸಹಾ ಗೊತ್ತಾಗಿದೆ. ತಂದೆಯೊಂದಿಗೆ ಪ್ರೀತಿಯಿದೆ, ಮನೆಯೊಂದಿಗೂ ಪ್ರೀತಿಯಿದೆ. ಈ
ಜ್ಞಾನ ನಿಮಗೆ ಈಗ ಸಿಗುವುದು. ಈ ವಿದ್ಯೆಯಿಂದ ನಿಮಗೆ ಎಷ್ಟು ಸಂಪಾದನೆಯಾಗುತ್ತದೆ. ಆದ್ದರಿಂದ
ಖುಷಿಯಾಗಬೇಕಲ್ಲವೇ ಮತ್ತು ನೀವಾಗಿರುವಿರಿ ಪೂರ್ತಿ ಸಾಧಾರಣ. ಇದು ಪ್ರಪಂಚದ ಜನರಿಗೆ ಗೊತ್ತಿಲ್ಲ,
ತಂದೆ ಬಂದು ಈ ಜ್ಞಾನವನ್ನು ತಿಳಿಸುತ್ತಾರೆ. ತಂದೆಯೇ ಬಂದು ಎಲ್ಲಾ ಹೊಸ ಹೊಸ ಮಾತುಗಳನ್ನು
ಮಕ್ಕಳಿಗೆ ಹೇಳುತ್ತಾರೆ. ಹೊಸ ಪ್ರಪಂಚ ಈ ಬೇಹದ್ಧಿನ ವಿಧ್ಯೆಯಿಂದ ಆಗುತ್ತದೆ. ಹಳೆಯ ಪ್ರಪಂಚದಿಂದ
ವೈರಾಗ್ಯ ಬಂದು ಬಿಡುತ್ತದೆ. ನೀವು ಮಕ್ಕಳೊಳಗೆ ಜ್ಞಾನದ ಖುಷಿ ಇರುತ್ತದೆ. ತಂದೆ ಹಾಗೂ ಮನೆಯನ್ನು
ನೆನಪು ಮಾಡಬೇಕು. ಮನೆಗೆ ಎಲ್ಲರೂ ಹೋಗಲೇ ಬೇಕು. ತಂದೆಯಂತೂ ಎಲ್ಲರಿಗೂ ಹೇಳುವರಲ್ಲವೇ ಮಕ್ಕಳೇ ನಾನು
ನಿಮಗೆ ಮುಕ್ತಿ ಹಾಗೂ ಜೀವನ್ಮುಕ್ತಿಯ ಆಸ್ತಿಯನ್ನು ಕೊಡಲು ಬಂದಿರುವೆನು. ಮತ್ತೆ ಏಕೆ ಮರೆತು
ಹೋಗಿಬಿಡುವಿರಿ! ನಾನು ನಿಮ್ಮ ಬೇಹದ್ಧಿನ ತಂದೆಯಾಗಿದ್ದೇನೆ, ರಾಜಯೋಗವನ್ನು ಕಲಿಸಲು ಬಂದಿರುವೆನು.
ಅಂದಮೆಲೆ ನೀವು ಶ್ರೀಮತದ ಮೇಲೆ ನಡೆಯುವುದಿಲ್ಲವೇ. ಆಮೇಲೆ ಬಹಳ ನಷ್ಟವಾಗಿಬಿಡುವುದು. ಇದಾಗಿದೆ
ಬೇಹದ್ಧಿನ ನಷ್ಟ. ತಂದೆಯ ಕೈ ಬಿಟ್ಟಿರೆಂದರೆ ಸಂಪಾದನೆಯಲ್ಲಿ ನಷ್ಟ ಉಂಟಾಗಿಬಿಡುವುದು. ಒಳ್ಳೆಯದು.
ಗುಡ್ ನೈಟ್. ಓಂ ಶಾಂತಿ.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ
ಪ್ರಪಂಚದ್ದು ಯಾವುದೆಲ್ಲಾ ಇದೆ ಅದೆಲ್ಲವನ್ನು ಮರೆಯಬೇಕು. ತಂದೆಯ ಸಮಾನ ವಿಧೇಯರಾಗಿ ಸೇವೆ
ಮಾಡಬೇಕಾಗಿದೆ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಬೇಕಾಗಿದೆ.
2. ಈ ಪತಿತ ಪ್ರಪಂಚದಲ್ಲಿ
ತಮ್ಮನ್ನು ತಾವು ಕುಸಂಗದಿಂದ ರಕ್ಷಿಸಿಕೊಳ್ಳಬೇಕು. ಬಜಾರಿನ ಕೊಳಕು ಊಟ ತಿನ್ನ ಬಾರದು, ಸಿನೆಮಾ
ನೋಡಬಾರದು.
ವರದಾನ:
ತ್ರಿಕಾಲದರ್ಶಿ
ಸ್ಟೇಜ್ ಮೂಲಕ ವ್ಯರ್ಥದ ಖಾತೆಯನ್ನು ಸಮಾಪ್ತಿ ಮಾಡುವಂತಹ ಸದಾ ಸಫಲತಾಮೂರ್ತಿ ಭವ
ತ್ರಿಕಾಲದರ್ಶಿ ಸ್ಟೇಜ್
ಮೇಲೆ ಸ್ಥಿತರಾಗುವುದು ಅರ್ಥಾತ್ ಪ್ರತಿ ಸಂಕಲ್ಪ, ಮಾತು ಮತ್ತು ಕರ್ಮ ಮಾಡುವ ಮೊದಲು ಚೆಕ್
ಮಾಡಿಕೊಳ್ಳಬೇಕು ಇದು ವ್ಯರ್ಥವಾಗಿದೆಯೋ ಸಮರ್ಥವಾಗಿದೆಯೋ! ವ್ಯರ್ಥ ಒಂದು ಸೆಕೆಂಡ್ನಲ್ಲಿ
ಪದುಮಗಳಷ್ಟು ನಷ್ಟ ಮಾಡಿಸುತ್ತದೆ, ಸಮರ್ಥ ಒಂದು ಸೆಕೆಂಡ್ನಲ್ಲಿ ಪದುಮದಷ್ಟು ಸಂಪಾದನೆ
ಮಾಡಿಸುತ್ತದೆ. ಸೆಕೆಂಡ್ನ ವ್ಯರ್ಥ ಕೂಡ ಸಂಪಾದನೆಯಲ್ಲಿ ಬಹಳಷ್ಟು ನಷ್ಟ ಉಂಟುಮಾಡುತ್ತದೆ ಇದರಿಂದ
ಮಾಡಿರುವ ಸಂಪಾದನೆ ಸಹ ಮುಚ್ಚಿಹೋಗುತ್ತದೆ ಆದ್ದರಿಂದ ಒಂದೇ ಕಾಲದ ದರ್ಶನಿಯಾಗಿ ಕರ್ಮ ಮಾಡುವ ಬದಲು
ತ್ರಿಕಾಲದರ್ಶಿ ಸ್ಥಿತಿಯ ಮೆಲೆ ಸ್ಥಿತರಾಗಿ ಮಾಡಿ ಆಗ ವ್ಯರ್ಥ ಸಮಾಪ್ತಿಯಾಗಿಬಿಡುತ್ತದೆ ಮತ್ತು ಸದಾ
ಸಫಲತಾಮೂರ್ತಿಯಾಗಿಬಿಡುವಿರಿ.
ಸ್ಲೋಗನ್:
ಮಾನ್, ಶಾನ್
ಮತ್ತು ಸಾಧನಗಳ ತ್ಯಾಗವೇ ಮಹಾನ್ ತ್ಯಾಗವಾಗಿದೆ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಹೇಗೆ ದೇಹ ಮತ್ತು ದೇಹಿ
ಎರಡು ಬೇರೆ-ಬೇರೆ ವಸ್ತುಗಳಾಗಿವೆ, ಆದರೆ ಅಜ್ಞಾನ – ವಶ ಎರಡನ್ನು ಸೇರಿಸಿಬಿಟ್ಟಿದ್ದಾರೆ,
ನನ್ನದನ್ನು ನಾನು ಎಂದು ತಿಳಿದುಬಿಟ್ಟಿದ್ದಾರೆ ಮತ್ತು ಈ ತಪ್ಪಿನ ಕಾರಣ ಇಷ್ಟೊಂದು ಚಿಂತೆ, ದುಃಖ
ಮತ್ತು ಅಶಾಂತಿ ಪ್ರಾಪ್ತಿಯಾಗಿದೆ. ಹಾಗೆಯೇ ಈ ಅಪವಿತ್ರತೆ ಮತ್ತು ವಿಸ್ಮೃತಿಯ ಸಂಸ್ಕಾರ, ಯಾವುದು
ಬ್ರಾಹ್ಮಣತನದಲ್ಲ, ಶೂದ್ರತನದ್ದಾಗಿದೆ, ಇವುಗಳನ್ನು ಸಹ ನನ್ನದು ಎಂದು ತಿಳಿಯುವುದರಿಂದ ಮಾಯೆಗೆ
ವಶರಾಗುತ್ತಾರೆ ಮತ್ತು ಚಿಂತಿತರಾಗುತ್ತಾರೆ.