28.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಅಂತರ್ಮುಖಿಯಾಗಿ ಅರ್ಥಾತ್ ಮೌನವಾಗಿರಿ, ಬಾಯಿಂದ ಏನೂ ಮಾತನಾಡಬೇಡಿ, ಪ್ರತಿ ಕಾರ್ಯವನ್ನು ಶಾಂತಿಯಿಂದ ಮಾಡಿ, ಎಂದೂ ಅಶಾಂತಿಯನ್ನು ಹರಡಬಾರದು”

ಪ್ರಶ್ನೆ:
ನೀವು ಮಕ್ಕಳನ್ನು ಕಂಗಾಲರನ್ನಾಗಿ ಮಾಡುವ ಎಲ್ಲದಕ್ಕಿಂತ ದೊಡ್ಡಶತ್ರು ಯಾವುದು?

ಉತ್ತರ:
ಕ್ರೋಧ. ಎಲ್ಲಿ ಕ್ರೋಧವಿರುತ್ತದೆಯೋ ಆ ಮನೆಯಲ್ಲಿ ನೀರಿನ ಮಡಕೆಯೂ ಒಣಗಿಹೋಗುತ್ತದೆಯೆಂದು ಹೇಳಲಾಗುತ್ತದೆ. ಭಾರತದ ಮಡಕೆ ಯಾವುದು ವಜ್ರರತ್ನಗಳಿಂದ ತುಂಬಿತ್ತು ಅದು ಈ ಭೂತದ ಕಾರಣ ಖಾಲಿಯಾಗಿಬಿಟ್ಟಿದೆ. ಈ ಭೂತಗಳೇ ನಿಮ್ಮನ್ನು ಕಂಗಾಲರನ್ನಾಗಿ ಮಾಡಿದೆ. ಕ್ರೋಧೀಮನುಷ್ಯನು ತಾನೂ ಸುಟ್ಟುಕೊಳ್ಳುತ್ತಾನೆ, ಅನ್ಯರನ್ನೂ ಸುಡುತ್ತಾನೆ ಆದ್ದರಿಂದ ಈಗ ಅಂತರ್ಮುಖಿಯಾಗಿ ಈ ಭೂತವನ್ನು ತೆಗೆದುಹಾಕಿ.

ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ- ಮಧುರ ಮಕ್ಕಳೇ, ಅಂತರ್ಮುಖಿಯಾಗಿ. ಅಂತರ್ಮುಖತೆ ಅರ್ಥಾತ್ ಏನನ್ನೂ ಮಾತನಾಡಬೇಡಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತಂದೆಯು ಮಕ್ಕಳಿಗೆ ಈ ಶಿಕ್ಷಣವನ್ನು ಕೊಡುತ್ತಾರೆ. ಇದರಲ್ಲಿ ಮತ್ತೇನನ್ನೂ ಮಾತನಾಡುವ ಅವಶ್ಯಕತೆಯಿಲ್ಲ ಕೇವಲ ತಿಳುವಳಿಕೆ ನೀಡಲಾಗುತ್ತದೆ- ಗೃಹಸ್ಥ ವ್ಯವಹಾರದಲ್ಲಿ ಈ ರೀತಿಯಿರಬೇಕೆಂದು. ಇದು ಮನ್ಮನಾಭವ ಆಗಿದೆ. ನನ್ನನ್ನು ನೆನಪು ಮಾಡಿ ಇದು ಮೊದಲ ಮುಖ್ಯ ಅಂಶವಾಗಿದೆ. ನೀವು ಮಕ್ಕಳು ಮನೆಯಲ್ಲಿ ಕ್ರೋಧ ಮಾಡಬಾರದು ಏಕೆಂದರೆ ಕ್ರೋಧವು ನೀರಿನ ಮಡಕೆಯನ್ನೂ ಒಣಗಿಸಿಬಿಡುವಂತದ್ದಾಗಿದೆ. ಕ್ರೋಧಿ ಮನುಷ್ಯರು ಅಶಾಂತಿಯನ್ನು ಹರಡುತ್ತಾರೆ ಆದ್ದರಿಂದ ಗೃಹಸ್ಥವ್ಯವಹಾರದಲ್ಲಿರುತ್ತಾ ಶಾಂತಿಯಲ್ಲಿರಬೇಕಾಗಿದೆ. ಭೋಜನವನ್ನು ಸ್ವೀಕಾರ ಮಾಡಿ, ತಮ್ಮ ವ್ಯಾಪಾರ ಅಥವಾ ಕಛೇರಿ ಮೊದಲಾದವುಗಳಿಗೆ ಹೊರಟುಹೋಗಿ. ಅಲ್ಲಿಯೂ ಶಾಂತಿಯಲ್ಲಿರುವುದು ಒಳ್ಳೆಯದು. ನಮಗೆ ಶಾಂತಿ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಇದನ್ನಂತೂ ಮಕ್ಕಳಿಗೆ ತಿಳಿಸಲಾಗಿದೆ- ಶಾಂತಿಯ ಸಾಗರ ಒಬ್ಬ ತಂದೆಯೇ ಆಗಿದ್ದಾರೆ. ತಂದೆಯೇ ಸಲಹೆ ನೀಡುತ್ತಾರೆ- ನನ್ನನ್ನು ನೆನಪು ಮಾಡಿ ಇದರಲ್ಲಿ ಏನನ್ನೂ ಮಾತನಾಡುವಂತಿಲ್ಲ ಅಂತರ್ಮುಖಿಯಾಗಿರಬೇಕಾಗಿದೆ. ಕಛೇರಿಯಲ್ಲಿ ತಮ್ಮ ಕೆಲಸ ಮಾಡಬೇಕೆಂದರೂ ಸಹ ಇದರಲ್ಲಿ ಹೆಚ್ಚಿಗೆ ಮಾತನಾಡಬೇಕಾಗಿಲ್ಲ, ಸಂಪೂರ್ಣ ಮಧುರರಾಗಬೇಕು. ಯಾರಿಗೂ ದುಃಖ ಕೊಡಬಾರದು. ಜಗಳ-ಕಲಹ ಮಾಡುವುದು ಇದೆಲ್ಲವೂ ಕ್ರೋಧವಾಗಿದೆ. ಎಲ್ಲದಕ್ಕಿಂತ ದೊಡ್ಡಶತ್ರುವು ಕಾಮವಾಗಿದೆ, ಎರಡನೆಯದು ಕ್ರೋಧವಾಗಿದೆ. ಪರಸ್ಪರ ದುಃಖವನ್ನು ಕೊಡುತ್ತಾರೆ. ಕ್ರೋಧದಿಂದ ಎಷ್ಟೊಂದು ಕಲಹಗಳಾಗಿಬಿಡುತ್ತವೆ. ಮಕ್ಕಳೂ ತಿಳಿದುಕೊಂಡಿದ್ದೀರಿ- ಸತ್ಯಯುಗದಲ್ಲಿ ಕಲಹಗಳಾಗುವುದಿಲ್ಲ ಇದು ರಾವಣನ ಚಿಹ್ನೆಯಾಗಿದೆ. ಕ್ರೋಧಿಗಳಿಗೂ ಸಹ ಅಸುರೀ ಸಂಪ್ರದಾಯದವರೆಂದು ಹೇಳಲಾಗುತ್ತದೆ. ಭೂತದ ಪ್ರವೇಶತೆಯಾಯಿತಲ್ಲವೆ. ಇದರಲ್ಲಿ ಏನನ್ನೂ ಮಾತನಾಡುವಂತಿಲ್ಲ ಏಕೆಂದರೆ ಈ ಮನುಷ್ಯರಿಗಂತೂ ಜ್ಞಾನವಿಲ್ಲ, ಅವರು ಕ್ರೋಧ ಮಾಡುತ್ತಾರೆ. ಕ್ರೋಧಿಗಳ ಜೊತೆ ಕ್ರೋಧ ಮಾಡುವುದರಿಂದ ಜಗಳವಾಗಿಬಿಡುತ್ತವೆ. ತಂದೆಯು ತಿಳಿಸಿಕೊಡುತ್ತಾರೆ- ಇದು ಅತಿಕಠಿಣವಾದ ಭೂತವಾಗಿದೆ ಇದನ್ನು ಯುಕ್ತಿಯಿಂದ ಓಡಿಸಬೇಕಾಗಿದೆ. ಮುಖದಿಂದ ಯಾವುದೇ ಕಠಿಣ ಶಬ್ಧಗಳು ಬರಬಾರದಾಗಿದೆ. ಇದು ಬಹಳ ನಷ್ಟಕಾರಕವಾಗಿದೆ. ವಿನಾಶವೂ ಸಹ ಕ್ರೋಧದಿಂದಲೇ ಆಗುತ್ತದೆಯಲ್ಲವೆ. ಮನೆ-ಮನೆಯಲ್ಲಿ ಎಲ್ಲಿ ಕ್ರೋಧವಿರುತ್ತದೆಯೋ ಅಲ್ಲಿ ಅಶಾಂತಿ ಬಹಳ ಇರುತ್ತದೆ. ಕ್ರೋಧ ಮಾಡುತ್ತೀರೆಂದರೆ ನೀವು ತಂದೆಯ ಹೆಸರನ್ನು ಕೆಡಿಸಿಬಿಡುತ್ತೀರಿ. ಈ ಭೂತಗಳನ್ನು ಓಡಿಸಬೇಕು. ಒಂದುಬಾರಿ ಓಡಿಸುತ್ತೀರೆಂದರೆ ನಂತರ ಅರ್ಧಕಲ್ಪಕ್ಕೋಸ್ಕರ ಈ ಭೂತಗಳು ಇರುವುದೇ ಇಲ್ಲ. ಈ ಪಂಚವಿಕಾರಗಳು ಬಹಳ ತೀವ್ರತೆಯಲ್ಲಿರುತ್ತವೆ. ಈ ಕಣ್ಣುಗಳು ಬಹಳ ಮೋಸ ಮಾಡುವಂತದಾಗಿದೆ. ಮುಖ (ಬಾಯಿ) ವೂ ಸಹ ಮೋಸ ಮಾಡುವಂತದ್ದಾಗಿದೆ. ಜೋರಾಗಿ ಮಾತನಾಡುವುದರಿಂದ ತಾನೂ ಬಿಸಿಯಾಗುತ್ತಾನೆ ಮತ್ತು ಮನೆಯನ್ನೂ ಬಿಸಿಮಾಡುತ್ತಾನೆ ಅರ್ಥಾತ್ ವಾತಾವರ್ಣವನ್ನು ಕೆಡಿಸುತ್ತಾನೆ. ಕಾಮ ಮತ್ತು ಕ್ರೋಧ ಇವೆರಡು ದೊಡ್ಡ ಶತ್ರುಗಳಾಗಿವೆ. ಕ್ರೋಧಿಗಳು ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ನೆನಪು ಮಾಡುವವರು ಸದಾ ಶಾಂತಿಯಲ್ಲಿರುತ್ತಾರೆ, ಅಂದಾಗ ತಮ್ಮನ್ನು ಕೇಳಿಕೊಳ್ಳಬೇಕು- ನನ್ನಲ್ಲಿ ಭೂತವಂತೂ ಇಲ್ಲವೇ? ಮೋಹದ ಭೂತ, ಲೋಭದ ಭೂತವೂ ಇರುತ್ತದೆ. ಲೋಭದ ಭೂತವೂ ಸಹ ಕಡಿಮೆಯಿಲ್ಲ, ಇವೆಲ್ಲವೂ ಭೂತಗಳಾಗಿವೆ ಏಕೆಂದರೆ ರಾವಣನ ಸೈನ್ಯವಾಗಿದೆ.

ತಂದೆಯು ಮಕ್ಕಳಿಗೆ ನೆನಪಿನ ಯಾತ್ರೆಯನ್ನು ಕಲಿಸುತ್ತಾರೆ ಆದರೆ ಮಕ್ಕಳು ಇದರಲ್ಲಿ ತಬ್ಬಿಬ್ಬಾಗುತ್ತಾರೆ. ಅರಿತುಕೊಳ್ಳುವುದಿಲ್ಲ ಏಕೆಂದರೆ ಬಹಳ ಭಕ್ತಿ ಮಾಡಿದ್ದಾರಲ್ಲವೆ. ಭಕ್ತಿಯು ದೇಹಾಭಿಮಾನವಾಗಿದೆ. ಅರ್ಧಕಲ್ಪ ದೇಹಾಭಿಮಾನವಿತ್ತು, ಬಾಹರ್ಮುಖತೆಯಿರುವ ಕಾರಣ ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಲು ಆಗುತ್ತಿಲ್ಲ. ತಂದೆಯು ಬಹಳ ಒತ್ತುಕೊಟ್ಟು ಹೇಳುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ ಆದರೆ ಬರುವುದೇ ಇಲ್ಲ, ಮತ್ತೆಲ್ಲಾ ಮಾತುಗಳನ್ನೂ ಒಪ್ಪುತ್ತಾರೆ. ಮತ್ತೆ ಹೇಗೆ ನೆನಪು ಮಾಡುವುದು, ಏನೂ ಕಾಣಿಸುವುದಿಲ್ಲ ಎಂದು ಹೇಳಿಬಿಡುತ್ತಾರೆ. ಅವರಿಗೆ ತಿಳಿಸಬೇಕಾಗಿದೆ- ನೀವು ತಮ್ಮನ್ನು ಆತ್ಮವೆಂದು ತಿಳಿಯುತ್ತೀರಿ. ಇದೂ ಸಹ ತಿಳಿದಿದೆ- ಅವರು ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ಬಾಯಿಂದ ಶಿವ-ಶಿವ ಎಂದು ಹೇಳಬೇಕಾಗಿಲ್ಲ ಏಕೆಂದರೆ ನಿಮಗೆ ಒಳಗೆ ಗೊತ್ತಿದೆಯಲ್ಲವೆ- ನಾನಾತ್ಮನಾಗಿದ್ದೇನೆ ಎಂದು. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ, ಶಾಂತಿಯ ಸಾಗರ ಆ ಪರಮಾತ್ಮನೇ ಆಗಿದ್ದಾರೆ ಆಸ್ತಿಯನ್ನೂ ಅವರೇ ಕೊಡುತ್ತಾರೆ. ಈಗ ಆ ತಂದೆಯೇ ತಿಳುವಳಿಕೆ ಕೊಡುತ್ತಾರೆ. ನನ್ನನ್ನು ನೆನಪು ಮಾಡಿದರೆ ಶಾಂತಿ ಸಿಗುವುದು ಮತ್ತು ಜನ್ಮ-ಜನ್ಮಾಂತರದ ಪಾಪಗಳೂ ಸಹ ವಿನಾಶವಾಗುತ್ತವೆ, ಮತ್ತ್ಯಾವುದೇ ವಸ್ತುವಿಲ್ಲ. ತಂದೆಯು ಇಷ್ಟು ದೊಡ್ಡಲಿಂಗದ ರೂಪದಲ್ಲಿಯೂ ಇಲ್ಲ. ಆತ್ಮವು ಸೂಕ್ಷ್ಮವಾಗಿದೆ, ತಂದೆಯೂ ಸೂಕ್ಷ್ಮವಾಗಿದ್ದಾರೆ. ಹೇ ಭಗವಾನ್, ಹೇ ಗಾಡ್ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಹೇ ಭಗವಾನ್ ಎಂದು ಯಾರು ಹೇಳುತ್ತಾರೆ? ಆತ್ಮವೇ ಹೇಳುತ್ತದೆ, ತನ್ನ ತಂದೆಯನ್ನು ನೆನಪು ಮಾಡುತ್ತದೆ ಅಂದಾಗ ತಂದೆಯು ಮಕ್ಕಳಿಗೆ ಈಗ ತಿಳಿಸುತ್ತಾರೆ- ಮನ್ಮನಾಭವ, ಮಧುರಾತಿ ಮಧುರ ಮಕ್ಕಳೇ ಅಂತರ್ಮುಖಿಯಾಗಿರಿ. ಏನೆಲ್ಲವನ್ನೂ ನೋಡುತ್ತಿದ್ದೀರೋ ಅದೆಲ್ಲವೂ ಸಮಾಪ್ತಿಯಾಗುವುದು ಆತ್ಮವು ಶಾಂತಿಯಲ್ಲಿರುವುದು. ಆತ್ಮವು ಶಾಂತಿಧಾಮಕ್ಕೇ ಹೋಗಬೇಕಾಗಿದೆ. ಎಲ್ಲಿಯವರೆಗೆ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ಶಾಂತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಶಾಂತಿಯು ಹೇಗೆ ಸಿಗುವುದೆಂದು ಋಷಿ-ಮುನಿ ಮೊದಲಾದವರೆಲ್ಲರೂ ಕೇಳುತ್ತಾರೆ. ಇದಕ್ಕೆ ತಂದೆಯು ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ ಆದರೆ ಅನೇಕ ಮಕ್ಕಳು ಶಾಂತಿಯಲ್ಲಿರುವುದೇ ಇಲ್ಲ. ಇದು ತಂದೆಗೂ ತಿಳಿದಿದೆ- ಮನೆಗಳಲ್ಲಿರುತ್ತಾರೆ ಅಂದಾಗ ಸಂಪೂರ್ಣ ಶಾಂತರಾಗಿರುವುದಿಲ್ಲ. ಸೇವಾಕೇಂದ್ರಕ್ಕೆ ಸ್ವಲ್ಪ ಸಮಯ ಹೋಗುತ್ತಾರೆ, ಶಾಂತವಾಗಿ ತಂದೆಯನ್ನು ಎಷ್ಟು ನೆನಪು ಮಾಡಬೇಕೋ ಅಷ್ಟಿಲ್ಲ. ಇಡೀ ದಿನ ಮನೆಯಲ್ಲಿ ಏರುಪೇರುಗಳನ್ನು ಮಾಡುತ್ತಿರುತ್ತಾರೆ ಆದ್ದರಿಂದ ಸೇವಾಕೇಂದ್ರಕ್ಕೆ ಬಂದರೂ ಸಹ ಶಾಂತಿಯಲ್ಲಿರಲು ಸಾಧ್ಯವಿಲ್ಲ. ಯಾರ ದೇಹದೊಂದಿಗಾದರೂ ಪ್ರೀತಿಯುಂಟಾಗಿಬಿಟ್ಟರೆ ಅವರ ಮನಸ್ಸಿಗೆ ಎಂದೂ ಶಾಂತಿ ಸಿಗುವುದಿಲ್ಲ. ಅವರದೇ ನೆನಪು ಬರುತ್ತಿರುತ್ತದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಮನುಷ್ಯರಲ್ಲಿ ಪಂಚಭೂತಗಳಿವೆ, ಇವರಲ್ಲಿ ಭೂತಪ್ರವೇಶತೆಯಾಯಿತೆಂದು ತಿಳಿಸುತ್ತಾರಲ್ಲವೆ. ಈ ಭೂತಗಳೇ ನಿಮ್ಮನ್ನು ಕಂಗಾಲರನ್ನಾಗಿ ಮಾಡಿದೆ. ಅದಂತೂ ಹೆಚ್ಚೆಂದರೆ ಒಂದು ಭೂತ ಪ್ರವೇಶವಾಗುತ್ತದೆ. ಅದು ಕೆಲವೊಮ್ಮೆ ಪ್ರವೇಶ ಮಾಡುತ್ತದೆ ಆದರೆ ಇಲ್ಲಿ ತಂದೆಯು ಹೇಳುತ್ತಾರೆ- ಈ ಪಂಚಭೂತಗಳು ಪ್ರತಿಯೊಬ್ಬರಲ್ಲಿಯೂ ಪ್ರವೇಶವಾಗಿದೆ, ಈ ಭೂತಗಳನ್ನು ಓಡಿಸುವುದಕ್ಕಾಗಿಯೇ ಕರೆಯುತ್ತಾರೆ- ಬಾಬಾ, ಬಂದು ನಮಗೆ ಶಾಂತಿಕೊಡಿ, ಈ ಭೂತಗಳನ್ನು ಓಡಿಸುವ ಯುಕ್ತಿಯನ್ನು ತಿಳಿಸಿ. ಎಲ್ಲರಲ್ಲಿಯೂ ಈ ಭೂತಗಳಿವೆ, ಇದು ರಾವಣರಾಜ್ಯವಲ್ಲವೆ. ಎಲ್ಲದಕ್ಕಿಂತ ಕಠಿಣಭೂತವು ಕಾಮ-ಕ್ರೋಧವಾಗಿದೆ. ತಂದೆಯು ಬಂದು ಭೂತಗಳನ್ನು ಓಡಿಸುತ್ತಾರೆಂದರೆ ಅದರ ಪ್ರತಿಫಲವಾಗಿ ಏನಾದರೂ ಸಿಗಬೇಕಲ್ಲವೆ. ಅವರು ಭೂತ-ಪ್ರೇತಗಳನ್ನು ಓಡಿಸುತ್ತಾರೆ, ಏನೂ ಸಿಗುವುದಿಲ್ಲ. ಇದಂತೂ ಮಕ್ಕಳಿಗೆ ಗೊತ್ತಿದೆ, ತಂದೆಯು ಇಡೀ ವಿಶ್ವದ ಭೂತಗಳನ್ನು ಓಡಿಸಲು ಬರುತ್ತಾರೆ. ಈಗ ಇಡೀ ವಿಶ್ವದಲ್ಲಿ ಎಲ್ಲರಲ್ಲಿಯೂ ಭೂತಗಳು ಪ್ರವೇಶತೆಯಾಗಿದೆ. ದೇವತೆಗಳಲ್ಲಿ ಯಾವುದೇ ಭೂತವಿರುವುದಿಲ್ಲ, ದೇಹಾಭಿಮಾನದ್ದಾಗಲಿ, ಕಾಮವಾಗಲಿ, ಕ್ರೋಧ-ಲೋಭ-ಮೋಹದ ಭೂತವಾಗಲಿ ಯವುದೂ ಇರುವುದಿಲ್ಲ. ಲೋಭದ ಭೂತವೂ ಸಹ ಕಡಿಮೆಯಿಲ್ಲ. ಈ ಮೊಟ್ಟೆಯನ್ನು ತಿನ್ನಲೆ, ಅದನ್ನು ತಿನ್ನಲೆ, ಇದನ್ನು ತಿನ್ನಲೆ..... ಹೀಗೆ ಅನೇಕ ಭೂತಗಳಿರುತ್ತವೆ. ತಮ್ಮೊಂದಿಗೆ ತಾವೇ ತಿಳಿಯಬಹುದು- ಅವಶ್ಯವಾಗಿ ನನ್ನಲ್ಲಿ ಕಾಮದ ಭೂತವಿದೆ, ಕ್ರೋಧದ ಭೂತವಿದೆ, ಆದ್ದರಿಂದ ಈ ಭೂತಗಳನ್ನು ತೆಗೆಯುವುದಕ್ಕಾಗಿ ತಂದೆಯು ಎಷ್ಟೊಂದು ಪರಿಶ್ರಮ ಪಡುತ್ತಾರೆ. ದೇಹಾಭಿಮಾನದಲ್ಲಿ ಬರುವುದರಿಂದ ಅಪ್ಪಿಕೊಳ್ಳಲೆ, ಇದನ್ನು ಮಾಡಲೇ ಎಂದು ಮನಸ್ಸಾಗುತ್ತದೆ. ಇದರಿಂದ ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗುತ್ತದೆ, ಕ್ರೋಧಿಗಳದೂ ಇದೇ ಆಗುತ್ತದೆ. ಕ್ರೋಧದಲ್ಲಿ ಬಂದು ತಂದೆಯು ಮಕ್ಕಳನ್ನು ಸಾಯಿಸುತ್ತಾರೆ. ಮಕ್ಕಳು ತಂದೆಯನ್ನು ಸಾಯಿಸುತ್ತಾರೆ, ಸ್ತ್ರೀಯು ಪತಿಯನ್ನು ಸಾಯಿಸುತ್ತಾರೆ. ಹೋಗಿ ಜೈಲಿನಲ್ಲಿ ನೋಡಿ, ಎಂಥೆಂಥಹ ಪ್ರಕರಣಗಳಿರುತ್ತವೆ! ಈ ಭೂತಗಳ ಪ್ರವೇಶತೆಯ ಕಾರಣ ಭಾರತದ ಸ್ಥಿತಿಯು ಏನಾಗಿಬಿಟ್ಟಿದೆ! ಭಾರತದ ಯಾವ ದೊಡ್ಡ ಮಡಿಕೆಯು ವಜ್ರರತ್ನಗಳಿಂದ ತುಂಬಿತ್ತೋ ಅದು ಈಗ ಖಾಲಿಯಾಗಿಬಿಟ್ಟಿದೆ. ಕ್ರೋಧದ ಕಾರಣ ಹೇಳುತ್ತಾರಲ್ಲವೆ- ನೀರಿನ ಮಡಿಕೆಯೂ ಒಣಗಿಹೋಗುತ್ತದೆ. ಅಂದಾಗ ಈ ಭಾರತದ ಸ್ಥಿತಿಯು ಅದೇ ಆಗಿಬಿಟ್ಟಿದೆ. ಇದೂ ಸಹ ಯಾರಿಗೂ ಗೊತ್ತಿಲ್ಲ. ಭೂತಗಳನ್ನು ಓಡಿಸಲು ತಂದೆಯೇ ಬರುತ್ತಾರೆ. ಇದನ್ನು ಮತ್ತ್ಯಾವುದೇ ಮನುಷ್ಯರು ಓಡಿಸಲು ಸಾಧ್ಯವಿಲ್ಲ. ಈ ಪಂಚಭೂತಗಳು ಬಹಳ ಶಕ್ತಿಶಾಲಿಯಾಗಿದೆ. ಅರ್ಧಕಲ್ಪವಂತೂ ಇವುಗಳ ಪ್ರವೇಶತೆಯಾಗಿತ್ತು ಈ ಸಮಯದಲ್ಲಂತೂ ಅದರ ಮಾತೇ ಕೇಳಬೇಡಿ. ಭಲೆ ಯಾರೇ ಪವಿತ್ರರಾಗಿರುತ್ತಾರೆ ಆದರೆ ಜನ್ಮವಂತೂ ವಿಕಾರದಿಂದಲೇ ಸಿಗುತದೆ. ಭೂತಗಳಂತೂ ಇರುತ್ತದೆಯಲ್ಲವೆ. 5 ಭೂತಗಳೇ ಭಾರತವನ್ನು ಸಂಪೂರ್ಣ ಕಂಗಾಲಾಗಿ ಮಾಡಿಬಿಟ್ಟಿದೆ. ನಾಟಕವು ಹೇಗೆ ಮಾಡಲ್ಪಟ್ಟಿದೆ ಎಂಬುದನ್ನು ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಭಾರತವು ಕಂಗಾಲಾಗಿದೆ, ಹೊರಗಿನ ದೇಶಗಳಿಂದ ಸಾಲ ಪಡೆಯುತ್ತಿದೆ. ಭಾರತಕ್ಕಾಗಿಯೇ ತಂದೆಯು ತಿಳಿಸುತ್ತಾರೆ. ಈ ವಿದ್ಯೆಯಿಂದ ಎಷ್ಟೊಂದು ಹಣವು ಸಿಗುತ್ತದೆ, ಈ ಅವಿನಾಶಿ ವಿದ್ಯೆಯನ್ನು ಅವಿನಾಶಿ ತಂದೆಯೇ ಓದಿಸುತ್ತಾರೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಸಾಮಗ್ರಿಗಳಿವೆ. ಬ್ರಹ್ಮಾತಂದೆಯು ಬಾಲ್ಯದಿಂದಲೂ ಗೀತೆಯನ್ನು ಓದುತ್ತಿದ್ದರು, ನಾರಾಯಣನ ಪೂಜೆಯನ್ನು ಮಾಡುತ್ತಿದ್ದರು ಆದರೆ ಏನನ್ನೂ ತಿಳಿದಿರಲಿಲ್ಲ. ನಾನಾತ್ಮನಾಗಿದ್ದೇನೆ, ಅವರು ನನ್ನ ತಂದೆಯಾಗಿದ್ದಾರೆ- ಈ ತಿಳುವಳಿಕೆಯೂ ಇರಲಿಲ್ಲ ಆದ್ದರಿಂದಲೇ ಕೇಳುತ್ತಾರೆ- ಹೇಗೆ ನೆನಪು ಮಾಡುವುದು? ಎಂದು. ಅರೆ! ನೀವಂತೂ ಭಕ್ತಿಮಾರ್ಗದಲ್ಲಿ ಹೇ ಭಗವಂತ ಬನ್ನಿ, ಮುಕ್ತರನ್ನಾಗಿ ಮಾಡಿ, ಮಾರ್ಗದರ್ಶಕನಾಗಿ ಎಂದು ನೆನಪು ಮಾಡುತ್ತಾ ಬಂದಿದ್ದೀರಿ. ಮಾರ್ಗದರ್ಶಕ ಮುಕ್ತಿ-ಜೀವನ್ಮುಕ್ತಿಗಾಗಿ ಸಿಗುತ್ತಾರೆ. ತಂದೆಯು ಈ ಹಳೆಯ ಪ್ರಪಂಚದಿಂದ ತಿರಸ್ಕಾರವನ್ನು ತರಿಸುತ್ತಾರೆ. ಈ ಸಮಯದಲ್ಲಿ ಎಲ್ಲಾ ಆತ್ಮಗಳು ಕಪ್ಪಾಗಿದ್ದಾರೆ ಅಂದಮೇಲೆ ಸುಂದರ ಶರೀರವು ಹೇಗೆ ಸಿಗುತ್ತದೆ? ಭಲೆ ಚರ್ಮವು ಎಷ್ಟೇ ಬೆಳ್ಳಗಿರಬಹುದು ಆದರೆ ಆತ್ಮವು ಕಪ್ಪಾಗಿದೆಯಲ್ಲವೆ. ಯಾರು ಬೆಳ್ಳಗಿನ ಸುಂದರ ಶರೀರದವರಿರುವರೋ ಅವರಿಗೆ ಎಷ್ಟೊಂದು ನಶೆಯಿರುತ್ತದೆ. ಆತ್ಮವು ಹೇಗೆ ಸುಂದರವಾಗುತ್ತದೆ ಎಂದು ಮನುಷ್ಯರಿಗೆ ಗೊತ್ತೇ ಇಲ್ಲ ಆದ್ದರಿಂದ ಅವರಿಗೆ ನಾಸ್ತಿಕರೆಂದು ಹೇಳಲಾಗುತ್ತದೆ. ಯಾರು ತಮ್ಮ ತಂದೆಯಾದ ರಚಯಿತನನ್ನು ಮತ್ತು ರಚನೆಯನ್ನು ಅರಿತುಕೊಂಡಿಲ್ಲವೋ ಅವರು ನಾಸ್ತಿಕರಾಗಿದ್ದಾರೆ. ಯಾರು ಅರಿತಿರುವರೋ ಅವರು ಆಸ್ತಿಕರಾಗಿದ್ದಾರೆ. ತಂದೆಯು ಬಹಳ ಚೆನ್ನಾಗಿ ನೀವು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಅಂದಾಗ ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ- ನನ್ನಲ್ಲಿ ಎಲ್ಲಿಯವರೆಗೆ ಸ್ವಚ್ಛತೆ ಬಂದಿದೆ? ಎಲ್ಲಿಯವರೆಗೆ ನಾನು ನನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೇನೆ? ನೆನಪಿನ ಬಲದಿಂದಲೇ ರಾವಣನ ಮೇಲೆ ಜಯಗಳಿಸಬೇಕಾಗಿದೆ. ಇದರಲ್ಲಿ ಶರೀರದಿಂದ ಬಲಶಾಲಿಗಳಾಗುವ ಮಾತೇ ಇಲ್ಲ. ಈ ಸಮಯದಲ್ಲಿ ಎಲ್ಲರಿಗಿಂತ ಬಲಶಾಲಿ ಅಮೇರಿಕಾ ಆಗಿದೆ ಏಕೆಂದರೆ ಅವರ ಬಳಿ ಹಣ, ಅಧಿಕಾರ, ಅಣ್ವಸ್ತ್ರಗಳು ಇತ್ಯಾದಿ ಬಹಳ ಇದೆ. ಅಂದಮೇಲೆ ಇದು ದೈಹಿಕ ಬಲವಾಯಿತು. ನಾವು ವಿಜಯ ಗಳಿಸಬೇಕೆಂದು ಬುದ್ಧಿಯಲ್ಲಿದೆ ಆದರೆ ನಿಮ್ಮದಂತೂ ಆತ್ಮಿಕ ಬಲವಾಗಿದೆ. ನೀವು ರಾವಣನ ಮೇಲೆ ವಿಜಯ ಗಳಿಸುತ್ತೀರಿ ಇದರಿಂದ ನೀವು ವಿಶ್ವದ ಮಾಲೀಕರಾಗಿಬಿಡುತ್ತೀರಿ. ನಿಮ್ಮ ಮೇಲೆ ಯಾರೂ ಗೆಲ್ಲಲು ಸಾಧ್ಯವಿಲ್ಲ. ಅರ್ಧಕಲ್ಪಕ್ಕಾಗಿ ನಿಮ್ಮ ಆಸ್ತಿಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮತ್ತ್ಯಾರಿಗೂ ತಂದೆಯಿಂದ ಆಸ್ತಿಯು ಸಿಗುವುದಿಲ್ಲ. ನೀವು ಏನಾಗುತ್ತೀರೆಂದು ಸ್ವಲ್ಪ ವಿಚಾರ ಮಾಡಿ! ತಂದೆಯನ್ನಂತೂ ಬಹಳ ಪ್ರೀತಿಯಿಂದ ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರಧಾರಿಗಳಾಗಬೇಕು. ಸ್ವದರ್ಶನ ಚಕ್ರದಿಂದ ವಿಷ್ಣು ಎಲ್ಲರ ತಲೆ ಕತ್ತರಿಸಿದರೆಂದು ಅವರು ತಿಳಿಯುತ್ತಾರೆ ಆದರೆ ಇಲ್ಲಿ ಹಿಂಸೆಯ ಮಾತಿಲ್ಲ.

ಅಂದಮೇಲೆ ಮಧುರಾತಿ ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ನೀವು ಹೇಗಿದ್ದೀರಿ, ಈಗ ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ. ಭಲೆ ನೀವು ಬಹಳ ಭಕ್ತಿಮಾಡುತ್ತಿದ್ದಿರಿ ಆದರೆ ಭೂತಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ. ಈಗ ಅಂತರ್ಮುಖಿಯಾಗಿ ನೋಡಿಕೊಳ್ಳಿ- ನಮ್ಮಲ್ಲಿ ಯಾವುದೇ ಭೂತಗಳಿಲ್ಲವೆ? ಯಾರೊಂದಿಗಾದರೂ ಮನಸ್ಸಾಯಿತು, ಅಪ್ಪಿಕೊಂಡೆವು ಎಂದರೆ ತಿಳಿದುಕೊಳ್ಳಿ- ಖಾತೆಯಲ್ಲಿ ಎಲ್ಲವೂ ಸಮಾಪ್ತಿಯಾಯಿತು ನಂತರ ಅಂತಹವರ ಮುಖವನ್ನು ನೋಡಲೂ ಸಹ ಇಷ್ಟವಾಗುವುದಿಲ್ಲ. ಅವರು ಅಚೂತರು, ಸ್ವಚ್ಛರಲ್ಲ. ಅವಶ್ಯವಾಗಿ ನಾನೀಗ ಅಚೂತ್, ಅಸ್ವಚ್ಛವಾಗಿದ್ದೇನೆಂದು ಮನಸ್ಸು ತಿನ್ನುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ದೇಹಸಹಿತವಾಗಿ ಎಲ್ಲವನ್ನೂ ಮರೆಯಿರಿ, ತಮ್ಮನ್ನು ಆತ್ಮವೆಂದು ತಿಳಿಯಿರಿ, ಈ ಸ್ಥಿತಿಯನ್ನಿಟ್ಟುಕೊಳ್ಳುವುದರಿಂದಲೇ ನೀವು ದೇವತೆಗಳಾಗುತ್ತೀರಿ ಆದ್ದರಿಂದ ಯಾವುದೇ ಭೂತವು ಬರಬಾರದು ಆದ್ದರಿಂದಲೇ ನಿಮ್ಮನ್ನು ಪರಿಶೀಲಿಸಿಕೊಳ್ಳಿರಿ ಎಂದು ತಂದೆಯು ತಿಳಿಸುತ್ತಿರುತ್ತಾರೆ. ಅನೇಕರಲ್ಲಿ ಕ್ರೋಧವಿದೆ, ಅವರು ನಿಂದನೆ ಮಾಡದಹೊರತು ಇರುವುದೇ ಇಲ್ಲ ಮತ್ತೆ ಅಲ್ಲಿ ಜಗಳವೇ ಆಗಿಬಿಡುತ್ತದೆ. ಕ್ರೋಧವಂತೂ ಬಹಳ ದೊಡ್ಡದಾಗಿದೆ. ಭೂತಗಳನ್ನು ಓಡಿಸಿ ಒಮ್ಮೆಲೆ ಸ್ವಚ್ಛವಾಗಿಬಿಡಬೇಕು. ಶರೀರವೂ ಸಹ ನೆನಪಿಗೆ ಬರಬಾರದು. ಆಗ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ ಆದ್ದರಿಂದ ಅಷ್ಟರತ್ನಗಳೆಂದು ಗಾಯನವಿದೆ. ರತ್ನಗಳಾಗುವುದಕ್ಕಾಗಿಯೇ ನಿಮಗೆ ಜ್ಞಾನರತ್ನಗಳು ಸಿಗುತ್ತದೆ. ಭಾರತದಲ್ಲಿ 33 ಕೋಟಿ ದೇವತೆಗಳಿದ್ದಾರೆಂದು ಹೇಳುತ್ತಾರೆ ಆದರೆ ಅವರಲ್ಲಿಯೂ 8 ರತ್ನಗಳೇ ಪಾಸ್-ವಿತ್-ಆನರ್ ಆಗುತ್ತಾರೆ. ಅವರಿಗೆ ಬಹುಮಾನವೂ ಸಿಗುತ್ತದೆ. ಹೇಗೆ ವಿದ್ಯಾರ್ಥಿವೇತನವು ಸಿಗುತ್ತದೆಯಲ್ಲವೆ. ನಿಮಗೆ ಗೊತ್ತಿದೆ, ಗುರಿಯು ಬಹಳ ಉನ್ನತವಾಗಿದೆ. ನಡೆಯುತ್ತಾ-ನಡೆಯುತ್ತಾ ಬೀಳುತ್ತಾರೆ, ಭೂತದ ಪ್ರವೇಶತೆಯಾಗಿಬಿಡುತ್ತದೆ. ಸತ್ಯಯುಗದಲ್ಲಿ ವಿಕಾರವಿರುವುದೇ ಇಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಪೂರ್ಣನಾಟಕದ ಚಕ್ರವು ತಿರುಗಬೇಕು.

ನಿಮಗೆ ಗೊತ್ತಿದೆ, 5000 ವರ್ಷಗಳಲ್ಲಿ ಎಷ್ಟು ತಿಂಗಳುಗಳು, ಎಷ್ಟು ಗಂಟೆಗಳು, ಎಷ್ಟು ಸೆಕೆಂಡುಗಳಿರುತ್ತವೆ. ಇದನ್ನು ಲೆಕ್ಕ ಮಾಡುವಂತಿದ್ದರೆ ಮಾಡಬಹುದು. ಮತ್ತೆ ಈ ವೃಕ್ಷದ ಚಿತ್ರದಲ್ಲಿಯೂ ಸಹ ಕಲ್ಪದ ಇಷ್ಟು ವರ್ಷಗಳು, ಇಷ್ಟು ತಿಂಗಳು, ಇಷ್ಟು ದಿನ, ಇಷ್ಟು ಗಂಟೆ, ಇಷ್ಟು ಸೆಕೆಂಡ್ ಇರುತ್ತದೆ ಎಂದು ಬರೆಯಬಹುದು. ಇವರಂತೂ ಬಹಳ ಆಕ್ಯೂರೇಟ್ ಆಗಿ ತಿಳಿಸುತ್ತಾರೆ, 84 ಜನ್ಮಗಳ ಲೆಕ್ಕವನ್ನು ತಿಳಿಸುತ್ತಾರೆ ಅಂದಮೇಲೆ ಕಲ್ಪದ ಆಯಸ್ಸನ್ನು ಏಕೆ ತಿಳಿಸುವುದಿಲ್ಲವೆಂದು ಮನುಷ್ಯರು ತಿಳಿಯುತ್ತಾರೆ. ಮಕ್ಕಳಿಗೆ ಮುಖ್ಯಮಾತಂತೂ ತಿಳಿಸಲಾಗಿದೆ. ಹೇಗಾದರೂ ಮಾಡಿ ಭೂತಗಳನ್ನಂತೂ ಓಡಿಸಬೇಕಾಗಿದೆ, ಈ ಭೂತಗಳೇ ನಿಮ್ಮನ್ನು ಪೂರ್ಣ ಸತ್ಯನಾಶ ಮಾಡಿಬಿಟ್ಟಿದೆ. ಎಲ್ಲಾ ಮನುಷ್ಯರಲ್ಲಿ ಭೂತಗಳಿವೆ, ಎಲ್ಲರದು ಭ್ರಷ್ಟಾಚಾರದ ಜನ್ಮವಾಗಿದೆ. ಸತ್ಯಯುಗದಲ್ಲಿ ಭ್ರಷ್ಟಾಚಾರವಿರುವುದಿಲ್ಲ, ರಾವಣನೇ ಇರುವುದಿಲ್ಲ. ರಾವಣನನ್ನೂ ಸಹ ಯಾರೂ ತಿಳಿದುಕೊಂಡಿರುವುದಿಲ್ಲ. ನೀವು ರಾವಣನ ಮೇಲೆ ಜಯಗಳಿಸುತ್ತೀರಿ ಅನಂತರ ರಾವಣನೇ ಇರುವುದಿಲ್ಲ. ಈಗ ಪುರುಷಾರ್ಥ ಮಾಡಿ ತಂದೆಯೂ ಬಂದಿದ್ದಾರೆಂದರೆ ತಂದೆಯ ಆಸ್ತಿಯು ನಿಮಗೆ ಅವಶ್ಯವಾಗಿ ಸಿಗಬೇಕು. ನೀವು ಎಷ್ಟು ಶ್ರೇಷ್ಠ ದೇವತೆಗಳಾಗುತ್ತೀರಿ. ಎಷ್ಟು ಬಾರಿ ಅಸುರರಾಗುತ್ತೀರಿ ಎಂಬುದರ ಲೆಕ್ಕವನ್ನು ತೆಗೆಯಲು ಸಾಧ್ಯವಿಲ್ಲ ಏಕೆಂದರೆ ಲೆಕ್ಕವಿಲ್ಲದಷ್ಟು ಬಾರಿ ಆಗಿರುತ್ತೀರಿ. ಒಳ್ಳೆಯದು. ಮಕ್ಕಳೇ, ಶಾಂತಿಯಲ್ಲಿರಿ ಎಂದೂ ಕ್ರೋಧವು ಬರುವುದಿಲ್ಲ, ತಂದೆಯು ಯಾವ ಶಿಕ್ಷಣವನ್ನು ನೀಡುತ್ತಾರೆಯೋ ಅದನ್ನು ಪ್ರಯೋಗದಲ್ಲಿ ತರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮೊಂದಿಗೆ ತಾವು ಕೇಳಿಕೊಳ್ಳಬೇಕು- ಯಾವುದೇ ಭೂತಗಳಂತೂ ತನ್ನಲ್ಲಿ ಇಲ್ಲವೆ? ಕಣ್ಣುಗಳು ಮೋಸಗೊಳಿಸುವುದಿಲ್ಲವೇ? ಜೋರಾಗಿ ಮಾತನಾಡುವ, ಅಶಾಂತಿಯನ್ನು ಹರಡುವಂತಹ ಸಂಸ್ಕಾರವಂತೂ ಇಲ್ಲವೇ? ಲೋಭ-ಮೋಹದ ವಿಕಾರವು ಸತಾಯಿಸುವುದಿಲ್ಲ ತಾನೆ?

2. ಯಾವುದೇ ದೇಹಧಾರಿಗಳೊಂದಿಗೆ ಮನಸ್ಸನ್ನಿಡಬಾರದು. ದೇಹಸಹಿತವಾಗಿ ಎಲ್ಲವನ್ನೂ ಮರೆತು ನೆನಪಿನ ಯಾತ್ರೆಯಿಂದ ಸ್ವಯಂನಲ್ಲಿ ಆತ್ಮಿಕಬಲವನ್ನು ತುಂಬಿಕೊಳ್ಳಬೇಕು. ಒಂದುಬಾರಿ ಭೂತಗಳನ್ನು ಓಡಿಸಿ ಅರ್ಧಕಲ್ಪಕ್ಕಾಗಿ ಇವುಗಳಿಂದ ಮುಕ್ತರಾಗಬೇಕಾಗಿದೆ.

ವರದಾನ:
ಈಶ್ವರೀಯ ವಿಧಾನವನ್ನು ತಿಳಿದು ವಿಧಿಯಿಂದ ಸಿಧ್ಧಿ ಪ್ರಾಪ್ತಿ ಮಾಡಿಕೊಳ್ಳುವಂತಹವರು ಮೊದಲನೇ ಡಿವಿಜನ್ನ ಅಧಿಕಾರಿ ಭವ.

ಸಾಹಸದ ಒಂದು ಹೆಜ್ಜೆಯಿಂದ ಪದಮದಷ್ಟು ಹೆಜ್ಜೆಗಳ ಸಹಾಯ - ಡ್ರಾಮದಲ್ಲಿ ಈ ವಿಧಾನದ ವಿಧಿ ಸಮ್ಮಿಳಿತವಾಗಿದೆ. ಒಂದುವೇಳೆ ಈ ವಿಧಿ, ವಿಧಾನದಲ್ಲಿ ಇರಲಿಲ್ಲವೆಂದರೆ ಎಲ್ಲರೂ ವಿಶ್ವದ ಮೊದಲನೇ ರಾಜರಾಗಿಬಿಡುತ್ತಿದ್ದರು. ನಂಬರ್ವಾರ್ ಆಗುವ ವಿಧಾನ ಈ ವಿಧಿಯ ಕಾರಣದಿಂದಲೇ ಆಗುವುದು. ಅಂದರೆ ಎಷ್ಟು ಇಚ್ಛೆಪಡುವಿರೋ ಅಷ್ಟು ಸಾಹಸವಿಡಿ ಮತ್ತು ಸಹಾಯ ಪಡೆಯಿರಿ. ಸರೆಂಡರ್ ಆಗಿರಬಹುದು ಅಥವಾ ಪ್ರವೃತ್ತಿಯಲ್ಲಿರುವವರಿರಬಹುದು - ಅಧಿಕಾರ ಸಮಾನವಾಗಿದೆ ಆದರೆ ವಿಧಿಯಿಂದ ಸಿದ್ಧಿ ಪ್ರಾಪ್ತಿಯಾಗುತ್ತದೆ. ಈ ಈಶ್ವರೀಯ ವಿಧಾನವನ್ನು ತಿಳಿದು ಹುಡುಗಾಟಿಕೆಯ ಲೀಲೆಯನ್ನು ಸಮಾಪ್ತಿಮಾಡಿದರೆ ಫಸ್ಟ ದಿವಿಜನ್ನ ಅಧಿಕಾರ ಸಿಕ್ಕಿಬಿಡುತ್ತದೆ.

ಸ್ಲೋಗನ್:
ಸಂಕಲ್ಪದ ಖಜಾನೆಯ ಪ್ರತಿ ಎಕಾನಮಿಯ ಅವತಾರ ಆಗಿ.