29.05.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವು ಪುನಃ ತಮ್ಮ ನೆಲೆಯನ್ನು ತಲುಪಿದ್ದೀರಿ, ನೀವು ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತಿದ್ದೀರಿ, ಆದ್ದರಿಂದ ಖುಷಿಯಲ್ಲಿ ರೋಮಾಂಚನವಾಗಿಬಿಡಬೇಕು”

ಪ್ರಶ್ನೆ:
ಈ ಸಮಯದಲ್ಲಿ ತಂದೆಯು ನೀವು ಮಕ್ಕಳ ಶೃಂಗಾರವನ್ನೇಕೆ ಮಾಡುತ್ತಿದ್ದಾರೆ?

ಉತ್ತರ:
ಈಗ ನಾವು ಶೃಂಗಾರಿತರಾಗಿ ವಿಷ್ಣುಪುರಿಯಲ್ಲಿ (ಮಾವನಮನೆ) ಹೋಗಬೇಕಾಗಿದೆ. ನಾವು ಈ ಜ್ಞಾನದಿಂದ ಶೃಂಗರಿತರಾಗಿ ವಿಶ್ವದ ಮಹಾರಾಜ-ಮಹಾರಾಣಿಯಾಗುತ್ತೇವೆ. ಈಗ ಸಂಗಮಯುಗದಲ್ಲಿದ್ದೇವೆ, ತಂದೆಯ ಮನೆಯಿಂದ ಮಾವನ ಮನೆಗೆ ಕರೆದುಕೊಂಡು ಹೋಗಲು ತಂದೆಯು ಶಿಕ್ಷಕನಾಗಿ ಓದಿಸುತ್ತಿದ್ದಾರೆ.

ಗೀತೆ:
ಕೊನೆಗೂ ಆ ದಿನ ಇಂದು ಬಂದಿತು...................

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು, ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ- ಅರ್ಧಕಲ್ಪ ಯಾವ ಪ್ರಿಯತಮನನ್ನು ನೆನಪು ಮಾಡಿದ್ದೆವೋ ಕೊನೆಗೂ ಅವರು ಸಿಕ್ಕಿದ್ದಾರೆ. ಪ್ರಪಂಚದವರಿಗೆ ಇದು ತಿಳಿದಿಲ್ಲ- ನಾವು ಅರ್ಧಕಲ್ಪ ಭಕ್ತಿ ಮಾಡುತ್ತೇವೆ, ಪ್ರಿಯತಮ ತಂದೆಯನ್ನು ಕರೆಯುತ್ತೇವೆ. ನಾವು ಪ್ರಿಯತಮೆಯರು ಅವರು ಪ್ರಿಯತಮನಾಗಿದ್ದಾರೆ- ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ರಾವಣನು ನಿಮ್ಮನ್ನು, ಅದರಲ್ಲಿಯೂ ವಿಶೇಷವಾಗಿ ಭಾರತವಾಸಿಗಳನ್ನು ಸಂಪೂರ್ಣ ತುಚ್ಛಬುದ್ಧಿಯವರನ್ನಾಗಿ ಮಾಡಿಬಿಟ್ಟಿದ್ದಾನೆ. ನೀವು ದೇವಿ-ದೇವತೆಗಳಾಗಿದ್ದಿರಿ, ಇದನ್ನೂ ಮರೆತುಹೋಗಿದ್ದೀರಿ ಅಂದಮೇಲೆ ತುಚ್ಛಬುದ್ಧಿಯಲ್ಲವೆ. ತಮ್ಮ ಧರ್ಮವನ್ನು ಮರೆತುಬಿಡುವುದೇ ತುಚ್ಛಬುದ್ಧಿಯವರ ಕೆಲಸವಾಗಿದೆ. ಇದನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ, ನಾವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದೆವು, ಈ ಭಾರತವು ಸ್ವರ್ಗವಾಗಿತ್ತು, ಸ್ವಲ್ಪವೇ ಸಮಯವಾಯಿತು. 1250 ವರ್ಷಗಳಕಾಲ ಸತ್ಯಯುಗವಿತ್ತು, ಮತ್ತು 1250 ವರ್ಷಗಳ ಕಾಲ ರಾಮರಾಜ್ಯವು ನಡೆಯಿತು ಆ ಸಮಯದಲ್ಲಿ ಅಪಾರ ಸುಖವಿತ್ತು. ಸುಖವನ್ನು ನೆನಪು ಮಾಡಿ ರೋಮಾಂಚನವಾಗಿ ನಿಲ್ಲಬೇಕು, ಸತ್ಯಯುಗ-ತ್ರೇತಾಯುಗ..... ಇವೆಲ್ಲವೂ ಕಳೆದುಹೋದವು. ಸತ್ಯಯುಗದ ಆಯಸ್ಸು ಎಷ್ಟೆಂಬುದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳಿರಲು ಹೇಗೆ ಸಾಧ್ಯ! ಈಗ ತಂದೆಯು ಬಂದು ತಿಳಿಸುತ್ತಾರೆ. ಮಾಯೆಯು ನಿಮ್ಮನ್ನು ಎಷ್ಟು ತುಚ್ಛಬುದ್ಧಿಯವರನ್ನಾಗಿ ಮಾಡಿಬಿಟ್ಟಿದೆ! ಪ್ರಪಂಚದಲ್ಲಿ ಯಾರೂ ಸಹ ತಮ್ಮನ್ನು ತುಚ್ಛಬುದ್ಧಿಯವರೆಂದು ತಿಳಿಯುವುದೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ- ನಾವು ನೆನ್ನೆಯ ದಿನ ತುಚ್ಛಬುದ್ಧಿಯವರಾಗಿದ್ದೆವು ಈಗ ತಂದೆಯು ಇಷ್ಟು ಶ್ರೇಷ್ಠಬುದ್ಧಿಯನ್ನು ಕೊಟ್ಟಿದ್ದಾರೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನಾವು ಅರಿತಿದ್ದೇವೆ. ನೆನ್ನೆ ಅರಿತುಕೊಂಡಿರಲಿಲ್ಲ, ಇಂದು ಅರಿತುಕೊಂಡಿದ್ದೇವೆ. ಎಷ್ಟೆಷ್ಟು ಅರಿತುಕೊಳ್ಳುವೆವೋ ಅಷ್ಟು ಖುಷಿಯಲ್ಲಿ ರೋಮಾಂಚನವಾಗುತ್ತದೆ. ನಾವು ಪುನಃ ನಮ್ಮ ನೆಲೆಯನ್ನು ತಲುಪಿದ್ದೇವೆ. ಅವಶ್ಯವಾಗಿ ತಂದೆಯು ನಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟಿದ್ದರು ನಂತರ ನಾವು ಕಳೆದುಕೊಂಡೆವು ಈಗ ಪತಿತರಾಗಿಬಿಟ್ಟಿದ್ದೇವೆ. ಸತ್ಯಯುಗಕ್ಕೆ ಪತಿತ ಎಂದು ಹೇಳುವುದಿಲ್ಲ. ಅದು ಪಾವನ ಪ್ರಪಂಚವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಮನುಷ್ಯರು ಹೇಳುತ್ತಾರೆ. ರಾವಣರಾಜ್ಯದಲ್ಲಿ ಯಾರೂ ಪಾವನ, ಶ್ರೇಷ್ಠರಿರುವುದಿಲ್ಲ. ಶ್ರೇಷ್ಠಾತಿಶ್ರೇಷ್ಠ ತಂದೆಯ ಮಕ್ಕಳಾದಾಗಲೇ ಶ್ರೇಷ್ಠರಾಗುವಿರಿ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಂದೆಯನ್ನು ಅರಿತಿದ್ದೀರಿ. ಮುಂಜಾನೆ ಎದ್ದು ತಮ್ಮ ಹೃದಯದಿಂದ ಕೇಳಿಕೊಳ್ಳಿ, ಅಮೃತವೇಳೆಯ ಸಮಯವು ಚೆನ್ನಾಗಿದೆ. ಅಮೃತವೇಳೆ ಕುಳಿತು ಈ ಸಂಕಲ್ಪ ಮಾಡಿ- ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ಓ ಗಾಡ್ ಫಾದರ್, ಹೇ ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. ಯಾರನ್ನು ಹೇ ಭಗವಂತ ಎಂದು ನೆನಪು ಮಾಡುವರೋ ಅವರು ಈಗ ನಮಗೆ ಸಿಕ್ಕಿದ್ದಾರೆ, ನಾವು ಪುನಃ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅವರು ಲೌಕಿಕ ತಂದೆ, ಇವರು ಪಾರಲೌಕಿಕ ತಂದೆಯಾಗಿದ್ದಾರೆ. ನಿಮ್ಮ ಲೌಕಿಕತಂದೆಯೂ ಸಹ ಆ ಪಾರಲೌಕಿಕ ತಂದೆಯನ್ನೇ ನೆನಪು ಮಾಡುತ್ತಾರೆ ಅಂದಮೇಲೆ ಅವರು ತಂದೆಯರ ತಂದೆ, ಪತಿಯರಿಗೂ ಪತಿಯಾದರು. ಇದನ್ನು ಭಾರತವಾಸಿಗಳೂ ಹೇಳುತ್ತಾರೆ ಏಕೆಂದರೆ ನಾನೀಗ ತಂದೆಯರ ತಂದೆ, ಪತಿಯರ ಪತಿಯಾಗಿದ್ದೇನೆ. ನಾನೀಗ ನಿಮ್ಮ ತಂದೆಯೂ ಆಗಿದ್ದೇನೆ, ನೀವು ಮಕ್ಕಳಾಗಿದ್ದೀರಿ. ಬಾಬಾ, ಬಾಬಾ ಎಂದು ಹೇಳುತ್ತಿರುತ್ತೀರಿ. ಈಗ ಪುನಃ ನಿಮ್ಮನ್ನು ಮಾವನ ಮನೆಯಾದ ವಿಷ್ಣುಪುರಿಗೆ ಕರೆದುಕೊಂಡು ಹೋಗುತ್ತೇನೆ. ಇದು ನಿಮ್ಮ ತಂದೆಯ ಮನೆಯಾಗಿದೆ. ನೀವು ಮತ್ತೆ ಮಾವನ ಮನೆಗೆ ಹೋಗುತ್ತೀರಿ. ಮಕ್ಕಳಿಗೆ ತಿಳಿದಿದೆ- ನಮ್ಮನ್ನು ಬಹಳ ಚೆನ್ನಾಗಿ ಶೃಂಗರಿಸಲಾಗುತ್ತದೆ. ಈಗ ನೀವು ತಂದೆಯ ಮನೆಯಲ್ಲಿದ್ದೀರಲ್ಲವೆ. ನಿಮಗೆ ವಿದ್ಯಾಭ್ಯಾಸವನ್ನು ಮಾಡಿಸಲಾಗುತ್ತದೆ. ನೀವು ಈ ಜ್ಞಾನದಿಂದ ಶೃಂಗಾರಿತರಾಗಿ ವಿಶ್ವದ ಮಹಾರಾಜ-ಮಹಾರಾಣಿಯಾಗುತ್ತೀರಿ. ನೀವಿಲ್ಲಿ ವಿಶ್ವದ ಮಾಲೀಕರಾಗುವುದಕ್ಕಾಗಿಯೇ ಬಂದಿದ್ದೀರಿ. ನೀವು ಭಾರತವಾಸಿಗಳೇ ಸತ್ಯಯುಗದಲ್ಲಿದ್ದಾಗ ವಿಶ್ವದ ಮಾಲೀಕರಾಗಿದ್ದೀರಿ. ನಾವು ವಿಶ್ವದ ಮಾಲೀಕರಾಗಿದ್ದೇವೆಂದು ನೀವೀಗ ಹೇಳುವುದಿಲ್ಲ ಏಕೆಂದರೆ ನಿಮಗೆ ತಿಳಿದಿದೆ- ಭಾರತದ ಮಾಲೀಕರು ಕಲಿಯುಗದವರಾಗಿದ್ದಾರೆ, ನಾವು ಸಂಗಮಯುಗದವರಾಗಿದ್ದೇವೆ ಮತ್ತೆ ನಾವು ಸತ್ಯಯುಗದಲ್ಲಿ ಇಡೀ ವಿಶ್ವದ ಮಾಲೀಕರಾಗುತ್ತೇವೆ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿ ಬರಬೇಕು. ನಿಮಗೆ ತಿಳಿದಿದೆ- ವಿಶ್ವದ ರಾಜ್ಯಭಾಗ್ಯವನ್ನು ಕೊಡುವವರು ಬಂದಿದ್ದಾರೆ. ಈಗ ಸಂಗಮಯುಗದಲ್ಲಿ ಅವರು ಬಂದಿದ್ದಾರೆ, ಜ್ಞಾನದಾತನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯ ವಿನಃ ಯಾವುದೇ ಮನುಷ್ಯರಿಗೆ ಜ್ಞಾನದಾತನೆಂದು ಹೇಳುವುದಿಲ್ಲ. ಏಕೆಂದರೆ ತಂದೆಯಬಳಿ ಇಂತಹ ಜ್ಞಾನವಿದೆ ಅದರಿಂದ ಇಡೀ ವಿಶ್ವದ ಸದ್ಗತಿಯಾಗುತ್ತದೆ. ತತ್ವಗಳ ಸಹಿತವಾಗಿ ಎಲ್ಲದರ ಸದ್ಗತಿಯಾಗಿಬಿಡುತ್ತದೆ. ಮನುಷ್ಯರ ಬಳಿ ಸದ್ಗತಿಯ ಜ್ಞಾನವಿಲ್ಲ.

ಈ ಸಮಯದಲ್ಲಿ ತತ್ವಗಳ ಸಹಿತವಾಗಿ ಇಡೀ ಪ್ರಪಂಚವೇ ತಮೋಪ್ರಧಾನವಾಗಿದೆ. ಇದರಲ್ಲಿರುವವರೂ ಸಹ ತಮೋಪ್ರಧಾನರಾಗಿದ್ದಾರೆ, ಹೊಸಪ್ರಪಂಚವು ಸತ್ಯಯುಗವಾಗಿದೆ, ಸತ್ಯಯುಗದಲಿದ್ದವರು ದೇವತೆಗಳಾಗಿದ್ದರು ನಂತರ ರಾವಣನು ಜಯಗಳಿಸಿದನು. ಈಗ ಮತ್ತೆ ತಂದೆಯು ಬಂದಿದ್ದಾರೆ, ಮಕ್ಕಳು ಹೇಳುತ್ತೀರಿ- ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆ, ತಂದೆಯು ನಮಗೆ ದಾದಾರವರ ಮೂಲಕ ಸ್ವರ್ಗದ ರಾಜಧಾನಿಯ ಆಸ್ತಿಯನ್ನು ಕೊಡುತ್ತಾರೆ. ತಂದೆಯಂತೂ ಸ್ವರ್ಗದ ರಾಜ್ಯಭಾಗ್ಯವನ್ನೇ ಕೊಡುತ್ತಾರೆ, ಮತ್ತೇನು ಕೊಡುವರು! ನೀವು ಮಕ್ಕಳ ಬುದ್ದಿಯಲ್ಲಿ ಇಷ್ಟಾದರೂ ಬರಬೇಕಲ್ಲವೆ ಆದರೆ ಮಾಯೆಯು ಮರೆಸಿಬಿಡುತ್ತದೆ. ಖುಷಿಯು ಸ್ಥಿರವಾಗಿರಲು ಬಿಡುವುದಿಲ್ಲ. ಯಾರು ಬಹಳ ಚೆನ್ನಾಗಿ ಓದಿ ಅನ್ಯರಿಗೂ ಓದಿಸುವರೋ ಅವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಒಂದೇ ಬಾರಿ ಅರ್ಥಮಾಡಿಕೊಳ್ಳುತ್ತೀರಲ್ಲವೆ. ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ಅವರೀಗ ಬಂದಿದ್ದಾರೆ ಆದರೆ ಎಲ್ಲರೂ ಅವರನ್ನು ಮಿಲನ ಮಾಡುವುದಿಲ್ಲ ಅಸಂಭವವಾಗಿದೆ. ತಂದೆಯಂತೂ ಓದಿಸಲು ಬಂದಿದ್ದಾರೆ, ನೀವೆಲ್ಲವೂ ಶಿಕ್ಷಕರಾಗಿದ್ದೀರಿ, ಗೀತಾಪಾಠಶಾಲೆಯೆಂದು ಹೇಳಲಾಗುತ್ತದೆಯಲ್ಲವೆ. ಈ ಅಕ್ಷರವು ಸರ್ವೇಸಾಮಾನ್ಯವಾಗಿದೆ. ಕೃಷ್ಣನು ಗೀತೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಈಗ ಇದು ಕೃಷ್ಣನ ಪಾಠಶಾಲೆಯಲ್ಲ. ಕೃಷ್ಣನ ಆತ್ಮವೂ ಓದುತ್ತಿದೆ, ಸತ್ಯಯುಗದಲ್ಲಿ ಯಾರಾದರೂ ಗೀತಾಪಾಠಶಾಲೆಯಲ್ಲಿ ಓದಿ-ಓದಿಸುತ್ತಾರಲ್ಲವೆ. ಕೃಷ್ಣನಿರುವುದೇ ಸತ್ಯಯುಗದಲ್ಲಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಒಂದು ಶರೀರವು ಇನ್ನೊಂದಕ್ಕೆ ಹೋಲುವುದಿಲ್ಲ. ಎಷ್ಟೊಂದು ತಿಳುವಳಿಕೆಯ ಮಾತಾಗಿದೆ. ನಾಟಕವಲ್ಲವೆ. ಪಾತ್ರವು ಪುನರಾವರ್ತನೆಯಾಗುತ್ತಾ ಇರುತ್ತದೆ. ಉಳಿದಂತೆ ಆ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅರ್ಧಕಲ್ಪ ಭಕ್ತಿಯು ನಡೆಯುತ್ತದೆ ನಂತರ ನಾನೇ ಬಂದು ಸರ್ವರ ಸದ್ಗತಿ ಮಾಡುತ್ತೇನೆ. ನಿಮಗೆ ತಿಳಿದಿದೆ- 5000 ವರ್ಷಗಳ ಮೊದಲು ರಾಜ್ಯ ಮಾಡುತ್ತಿದ್ದಿರಿ, ಸದ್ಗತಿಯಲ್ಲಿದ್ದಿರಿ. ದುಃಖದ ಹೆಸರಿರಲಿಲ್ಲ. ಈಗಂತೂ ದುಃಖವೇ ದುಃಖವಿದೆ, ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಶಾಂತಿಧಾಮ, ಸುಖಧಾಮ ಮತ್ತು ದುಃಖಧಾಮ. ನಾನು ಬಂದು ಭಾರತವಾಸಿಗಳಿಗೇ ಸುಖಧಾಮದ ಮಾರ್ಗವನ್ನು ತಿಳಿಸುತ್ತೇನೆ. ಕಲ್ಪ-ಕಲ್ಪವೂ ನಾನು ಬರಬೇಕಾಗುತ್ತದೆ. ಅನೇಕಬಾರಿ ಬಂದಿದ್ದೇನೆ, ಬರುತ್ತಾ ಇರುತ್ತೇನೆ. ಇದು ಕೊನೆಯಾಗಲು ಸಾಧ್ಯವಿಲ್ಲ. ನೀವು ಚಕ್ರವನ್ನು ಸುತ್ತಿ ದುಃಖಧಾಮದಲ್ಲಿ ಬರುತ್ತೀರಿ ಆಗ ನಾನು ಬರಬೇಕಾಗುತ್ತದೆ. ಈಗ ನಿಮಗೆ 84 ಜನ್ಮಗಳ ಚಕ್ರದ ಸ್ಮೃತಿಯು ಬಂದಿದೆ. ತಂದೆಗೆ ರಚಯಿತನೆಂದು ಹೇಳಲಾಗುತ್ತದೆ. ನಾಟಕದ ರಚಯಿತನೆಂದಲ್ಲ. ರಚಯಿತನೆಂದರೆ ಈ ಸಮಯದಲ್ಲಿ ಬಂದು ಸತ್ಯಯುಗವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಯಾರ ರಾಜ್ಯವಿತ್ತೋ ನಂತರ ಅದನ್ನು ಕಳೆದುಕೊಂಡರು ಅವರಿಗೇ ನಾನು ಓದಿಸುತ್ತೇನೆ, ಮಕ್ಕಳನ್ನು ದತ್ತುಮಾಡಿಕೊಳ್ಳುತ್ತೇನೆ. ನೀವು ನನ್ನ ಮಕ್ಕಳಾಗಿದ್ದೀರಲ್ಲವೆ. ನಿಮಗೆ ಯಾವುದೇ ಸಾಧು-ಸಂತ ಮೊದಲಾದವರು ಓದಿಸುವುದಿಲ್ಲ, ಓದಿಸುವವರು ಒಬ್ಬ ತಂದೆಯಾಗಿದ್ದಾರೆ ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಯಾರನ್ನು ನೆನಪು ಮಾಡುವರೋ ಅವರು ಅವಶ್ಯವಾಗಿ ಎಂದಾದರೂ ಬರುತ್ತಾರಲ್ಲವೆ. ಏಕೆ ನೆನಪು ಮಾಡುತ್ತೇವೆ ಎಂಬುದೂ ಸಹ ಯಾರಿಗೂ ತಿಳುವಳಿಕೆಯಿಲ್ಲ ಆದ್ದರಿಂದ ಅವಶ್ಯವಾಗಿ ಪತಿತ-ಪಾವನ ತಂದೆಯು ಬರುತ್ತಾರೆ. ಪುನಃ ಬನ್ನಿ ಎಂದು ಕ್ರಿಸ್ತನಿಗೆ ಹೇಳುವುದಿಲ್ಲ. ಕ್ರಿಸ್ತನು ಲೀನವಾಗಿಬಿಟ್ಟರೆಂದು ಅವರು ತಿಳಿಯುತ್ತಾರೆ ಅಂದಮೇಲೆ ಬರುವ ಮಾತೇ ಇಲ್ಲ. ಪತಿತ-ಪಾವನ ತಂದೆಯನ್ನೇ ಅವರು ನೆನಪು ಮಾಡುತ್ತಾರೆ- ನಾವಾತ್ಮಗಳಿಗೆ ಪುನಃ ಆಸ್ತಿಯನ್ನು ಕೊಡಿ. ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ- ತಂದೆಯು ಬಂದಿದ್ದಾರೆ, ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಅವರು ತಮ್ಮ ಸಮಯದಲ್ಲಿ ರಜೋ ತಮೋದಲ್ಲಿಯೇ ಬರುತ್ತಾರೆ. ನಾವು ಮಾ||ಜ್ಞಾನಪೂರ್ಣರಾಗುತ್ತೇವೆಂದು ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ.

ಒಬ್ಬ ತಂದೆಯೇ ನೀವು ಮಕ್ಕಳಿಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ತಾವೇ ಸ್ವಯಂ ಆಗುವುದಿಲ್ಲ ಆದ್ದರಿಂದ ನಿಷ್ಕಾಮ ಸೇವಾಧಾರಿ ಎಂದು ಕರೆಯಲಾಗುತ್ತದೆ. ಮನುಷ್ಯರು ನಾವು ಫಲದ ಇಚ್ಛೆಯನ್ನು ಇಟ್ಟುಕೊಳ್ಳುವುದಿಲ್ಲ, ನಿಷ್ಕಾಮ ಸೇವೆಯನ್ನು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ಎಂತಹ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ ಅದರನುಸಾರ ಜನ್ಮವು ಸಿಗುತ್ತದೆ. ಕರ್ಮದ ಫಲವು ಅವಶ್ಯವಾಗಿ ಸಿಗುತ್ತದೆ. ಸನ್ಯಾಸಿಗಳೂ ಸಹ ಪುನರ್ಜನ್ಮವನ್ನು ಗೃಹಸ್ಥಿಗಳ ಬಳಿಯೇ ತೆಗೆದುಕೊಂಡು ಮತ್ತೆ ಸಂಸ್ಕಾರದನುಸಾರ ಸನ್ಯಾಸಧರ್ಮದಲ್ಲಿ ಹೊರಟುಹೋಗುತ್ತಾರೆ. ಹೇಗೆ ತಂದೆಯು ಸೈನಿಕರ ಉದಾಹರಣೆಯನ್ನು ಕೊಡುತ್ತಾರೆ, ಯಾರು ಯುದ್ಧದ ಮೈದಾನದಲ್ಲಿ ಮರಣಹೊಂದುತ್ತಾರೆ ಅವರು ಸ್ವರ್ಗದಲ್ಲಿ ಹೋಗುತ್ತಾರೆಂದು ಗೀತೆಯಲ್ಲಿ ಬರೆಯಲ್ಪಟ್ಟಿದೆ ಎಂದು ಹೇಳುತ್ತಾರೆ. ಸ್ವರ್ಗ ಬರುವುದಕ್ಕೆ ಸಮಯವು ಬೇಕಲ್ಲವೆ. ಸ್ವರ್ಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ, ತಂದೆಯು ಏನನ್ನು ತಿಳಿಸುತ್ತಾರೆ, ಗೀತೆಯಲ್ಲಿ ಏನು ಬರೆದಿದೆ ಎಂಬುದು ನಿಮಗೆ ತಿಳಿದಿದೆ. ಭಗವಾನುವಾಚ- ನಾನು ಸರ್ವವ್ಯಾಪಿಯಾಗಿದ್ದೇನೆಂದು ಮನುಷ್ಯರು ಹೇಳುತ್ತಾರೆ. ನಾನು ನನ್ನ ನಿಂದನೆಯನ್ನು ಹೇಗೆ ಮಾಡಿಕೊಳ್ಳಲಿ! ನಾನು ಸರ್ವವ್ಯಾಪಿಯಾಗಿದ್ದೇನೆ, ನಾಯಿ, ಬೆಕ್ಕು ಎಲ್ಲದರಲ್ಲಿಯೂ ಇದ್ದೇನೆಂದು ಹೇಗೆ ಹೇಳಿಕೊಳ್ಳಲಿ! ಎಷ್ಟೊಂದು ಅಸತ್ಯವಾಗಿದೆ. ಜ್ಞಾನವೂ ಯಾರಲ್ಲಿಯೂ ಇಲ್ಲ. ಸನ್ಯಾಸಿಗಳು ಮುಂತಾದವರ ಮಾನ್ಯತೆ ಎಷ್ಟಿದೆ! ಏಕೆಂದರೆ ಅವರು ಪವಿತ್ರವಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ಗುರುಗಳಿರುವುದಿಲ್ಲ, ಇಲ್ಲಂತೂ ಸ್ತ್ರೀಗೆ ನಿನ್ನ ಪತಿಯೇ ಗುರು, ಈಶ್ವರನಾಗಿದ್ದಾರೆಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ಪ್ರಾರಂಭದಲ್ಲಿ ಗುರುಗಳಿರುವುದಿಲ್ಲ, ಪತಿಯೇ ಎಲ್ಲವೂ ಆಗಿರುತ್ತಾರೆ. ಗುರುವನ್ನು ಮಾಡಿಕೊಳ್ಳುವುದಿಲ್ಲ. ಇವೆಲ್ಲಾ ಮಾತುಗಳನ್ನು ನೀವೀಗ ತಿಳಿದುಕೊಂಡಿದ್ದೀರಿ.

ಕೆಲವು ಮನುಷ್ಯರಂತೂ ಬ್ರಹ್ಮಾಕುಮಾರಿಯರ ಹೆಸರನ್ನು ಕೇಳಿಯೇ ಭಯಪಡುತ್ತಾರೆ ಏಕೆಂದರೆ ಇವರು ಸಹೋದರ-ಸಹೋದರಿಯರನ್ನಾಗಿ ಮಾಡಿಬಿಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಅರೆ! ಪ್ರಜಾಪಿತ ಬ್ರಹ್ಮಾರವರ ಮಕ್ಕಳಾಗುವುದು ಒಳ್ಳೆಯದೇ ಅಲ್ಲವೆ. ಬಿ.ಕೆ.ಗಳೇ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಈಗ ನೀವು ತೆಗೆದುಕೊಳ್ಳುತ್ತಾ ಇದ್ದೀರಿ. ನೀವು ಬಿ.ಕೆ. ಆಗಿದ್ದೀರಿ, ನಾವು ಸಹೋದರ-ಸಹೋದರಿ ಆಗಿದ್ದೇವೆಂದು ಇಬ್ಬರೂ ಹೇಳುತ್ತೀರಿ. ಶರೀರದ ಪರಿವೆ, ವಿಕಾರದ ದುರ್ವಾಸನೆಯು ಹೊರಟುಹೋಗುತ್ತದೆ. ನಾವು ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿ ವಿಕಾರದಲ್ಲಿ ಹೋಗಲು ಹೇಗೆ ಸಾಧ್ಯವಿದೆ, ಇದು ಮಹಾನ್ ಪಾಪವಾಗಿದೆ. ಇದು ಪವಿತ್ರರಾಗುವ ಯುಕ್ತಿಯು ನಾಟಕದಲ್ಲಿದೆ. ಸನ್ಯಾಸಿಗಳದು ನಿವೃತ್ತಿಮಾರ್ಗವಾಗಿದೆ, ನೀವು ಪ್ರವೃತ್ತಿಮಾರ್ಗದವರು. ಈಗ ಈ ಕೊಳಕು ಪ್ರಪಂಚದ ರೀತಿ-ಪದ್ಧತಿಯನ್ನು ಬಿಟ್ಟು ಈ ಪ್ರಪಂಚವನ್ನು ಮರೆಯಬೇಕಾಗಿದೆ. ನೀವು ಸ್ವರ್ಗದ ಮಾಲೀಕರಾಗಿದ್ದಿರಿ ಮತ್ತೆ ರಾವಣ ಎಷ್ಟೊಂದು ಕೊಳಕು ಮಾಡಿದ್ದಾನೆ. ಇದೂ ಸಹ ತಂದೆಯು ತಿಳಿಸಿದ್ದಾರೆ, ಕೆಲವರು ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಗೆ ಒಪ್ಪುವುದು! ಎಂದು ಕೇಳುತ್ತಾರೆ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂಬುದನ್ನು ಚೆನ್ನಾಗಿ ಹೇಳುತ್ತೀರಿ. 84 ಜನ್ಮಗಳನ್ನು ತೆಗೆದುಕೊಳ್ಳದಿದ್ದರೆ ಇಲ್ಲಿ ಉಳಿಯುವುದಿಲ್ಲ. ಇಲ್ಲವೆಂದರೆ ನೀವು ದೇವಿ-ದೇವತಾಧರ್ಮದವರಲ್ಲ, ಅವರು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ. ಪ್ರಜೆಗಳಲ್ಲಿಯೂ ಸಹ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಈ ಎಲ್ಲಾ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಭಗವಂತನು ಬಂದು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಶ್ರೀಕೃಷ್ಣನು ವೈಕುಂಠ ಮಾಲೀಕನಾಗಿದ್ದನು, ಅದರ ಸ್ಥಾಪನೆಯನ್ನೂ ತಂದೆಯೇ ಮಾಡುತ್ತಾರೆ. ತಂದೆಯು ಗೀತೆಯನ್ನು ನುಡಿಸಿದರು ಇದರಿಂದ ಈ ಪದವಿಯನ್ನು ಪಡೆದರು ಮತ್ತೆ ಈ ವಿದ್ಯೆಯನ್ನು ಓದುವ ಅವಶ್ಯಕತೆಯಿಲ್ಲ. ನೀವು ಓದಿ ಪದವಿಯನ್ನು ಪಡೆದುಕೊಳ್ಳುತ್ತೀರಿ ನಂತರ ಗೀತಾಜ್ಞಾನವನ್ನು ಓದುತ್ತೀರೇನು! ಜ್ಞಾನದಿಂದ ಸದ್ಗತಿ ದೊರೆಯಿತು, ಎಷ್ಟು ಪುರುಷಾರ್ಥವೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಎಷ್ಟು ಪುರುಷಾರ್ಥವನ್ನು ಕಲ್ಪದ ಹಿಂದೆ ಮಾಡಿದ್ದಿರಿ ಅದನ್ನೇ ಮಾಡುತ್ತಾ ಇರುತ್ತಾರೆ. ಸಾಕ್ಷಿಯಾಗಿ ನೋಡಬೇಕಾಗಿದೆಯಷ್ಟೆ. ಶಿಕ್ಷಕನನ್ನೂ ಸಹ ನೋಡಬೇಕು, ಇವರು ನಮಗೆ ಓದಿಸಿದರು, ನಾವು ಇವರಿಗಿಂತಲೂ ಬುದ್ಧಿವಂತರಾಗಬೇಕೆಂದು. ಅವಕಾಶವಂತೂ ಬಹಳಷ್ಟಿದೆ, ಶ್ರೇಷ್ಠಾತಿಶ್ರೇಷ್ಠರಾಗಲು ಪ್ರಯತ್ನಪಡಬೇಕು. ಮೂಲಮಾತು ತಮೋಪ್ರಧಾನರಿಂದ ಸತೋಪ್ರಧಾನರಾಗುವುದಾಗಿದೆ- ಇದು ತಿಳಿದುಕೊಳ್ಳುವ ಮಾತುಗಳಾಗಿವೆ ಅಲ್ಲವೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು, ತಂದೆಯನ್ನು ನೆನಪು ಮಾಡುವುದಾದರೆ ಪಾವನರಾಗಿಬಿಡುತ್ತೀರಿ. ಇಲ್ಲಿ ಎಲ್ಲರೂ ಪತಿತರು, ಇಲ್ಲಿ ದುಃಖವೇ ದುಃಖವಿದೆ. ಸುಖ ಏಕೆ ಕೊಟ್ಟಿರಿ ಎಂದು ಹೇಳುತ್ತಾರೆ. ಭಗವಂತ ಯಾರಿಗೂ ದುಃಖವನ್ನು ಕೊಡುವುದಿಲ್ಲ. ರಾವಣನೇ ದುಃಖವನ್ನು ಕೊಡುತ್ತಾನೆ. ನಮ್ಮ ರಾಜ್ಯದಲಿ ಬೇರೆ ಯಾವುದೇ ಧರ್ಮವಿರುವುದಿಲ್ಲವೆಂದು ಈಗ ನಿಮಗೆ ತಿಳಿದಿದೆ ನಂತರ ಬೇರೆ ಧರ್ಮಗಳು ಬರುತ್ತವೆ. ನೀವು ಎಲ್ಲಿಗೇ ಹೋಗಿ, ವಿದ್ಯೆಯು ಜೊತೆಯಲ್ಲಿದೆ. ಮನ್ಮನಾಭವದ ಲಕ್ಷ್ಯವಂತೂ ಸಿಕ್ಕಿದೆ. ತಂದೆಯನ್ನು ನೆನಪು ಮಾಡಿ, ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇದನ್ನು ನೆನಪಿಟ್ಟುಕೊಳ್ಳಲು ಆಗುವುದಿಲ್ಲವೆ? ಇದು ಪಕ್ಕಾ ನೆನಪಿರಬೇಕು. ನಂತರ ಅಂತ್ಯಮತಿ ಸೋ ಗತಿಯಾಗಿಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬೆಳಗ್ಗೆ-ಬೆಳಗ್ಗೆ ಅಮೃತವೇಳೆಯಲ್ಲಿ ಎದ್ದು ವಿಚಾರ ಮಾಡಿ- ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯು ಈಗ ಬಂದು ನಮ್ಮನ್ನು ಜ್ಞಾನರತ್ನಗಳಿಂದ ಶೃಂಗಾರ ಮಾಡುತ್ತಿದ್ದಾರೆ. ಇವರು ತಂದೆಗೂ ತಂದೆಯಾಗಿದ್ದಾರೆ, ಪತಿಯರ ಪತಿಯಾಗಿದ್ದಾರೆ- ಈ ರೀತಿ ವಿಚಾರ ಮಾಡುತ್ತಾ ಅಪಾರಖುಷಿಯ ಅನುಭವ ಮಾಡಬೇಕಾಗಿದೆ.

2. ಪ್ರತಿಯೊಬ್ಬರ ಪುರುಷಾರ್ಥವನ್ನು ಸಾಕ್ಷಿಯಾಗಿ ನೋಡಬೇಕು. ಶ್ರೇಷ್ಠಪದವಿಯ ಅವಕಾಶವಿದೆ ಆದ್ದರಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು.

ವರದಾನ:
ನಿರ್ವಿಕಾರಿಯ ಶಕ್ತಿಯ ಮೂಲಕ ಸೂಕ್ಷ್ಮವತನ ಅಥವಾ ಮೂರೂ ಲೋಕಗಳ ಅನುಭವ ಮಾಡುವಂತಹ ಶ್ರೇಷ್ಠ ಭಾಗ್ಯವಂತ ಭವ

ಯಾವ ಮಕ್ಕಳ ಬಳಿ ನಿರ್ವಿಕಾರಿಯ ಶಕ್ತಿ ಇರುತ್ತದೆ, ಬುದ್ಧಿಯೋಗ ಪೂರ್ತಿ ಸ್ವಚ್ಛವಾಗಿರುತ್ತದೆ ಇಂತಹ ಭಾಗ್ಯವಾನ್ ಮಕ್ಕಳು ಸಹಜವಾಗಿ ಮೂರೂ ಲೋಕಗಳ ಪ್ರವಾಸ ಮಾಡಬಹುದಾಗಿದೆ. ಸೂಕ್ಷ್ಮವತನದವರೆಗೆ ತಮ್ಮ ಸಂಕಲ್ಪ ತಲುಪಲು ಸರ್ವಸಂಬಂಧಗಳ ಸಾರ ಸೂಕ್ಷ್ಮ ನೆನಪಿನ ಅವಶ್ಯಕತೆಯಿದೆ. ಇದೇ ಎಲ್ಲಕ್ಕಿಂತ ಶಕ್ತಿಶಾಲಿ ತಂತಿಯಾಗಿದೆ, ಇದರ ಮಧ್ಯೆ ಮಾಯೆ ಹಸ್ತಕ್ಷೇಪ ಮಾಡುವುದಿಲ್ಲ. ಅಂದರೆ ಸೂಕ್ಷ್ಮವತನದ ಸಂಭ್ರಮದ ಅನುಭವ ಮಾಡಲು ಸ್ವಯಂ ಅನ್ನು ನಿರ್ವಿಕಾರಿಯ ಶಕ್ತಿಯಿಂದ ಸಂಪನ್ನರಾಗಿ.

ಸ್ಲೋಗನ್:
ಯಾರೇ ವ್ಯಕ್ತಿ, ವಸ್ತು ಮತ್ತು ವೈಭವದ ಪ್ರತಿ ಆಕರ್ಷಿತರಾಗುವುದೆಂದರೆ ಜೊತೆಗಾರ ತಂದೆಗೆ ಸಂಕಲ್ಪದಿಂದ ವಿಚ್ಛೇದನ ಕೊಟ್ಟಹಾಗೆ.


ಅವ್ಯಕ್ತ ಸೂಚನೆ: ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.

ಪವಿತ್ರತೆ ಸಂಗಮಯುಗೀ ಬ್ರಾಹ್ಮಣರ ಮಹಾನ್ ಜೀವನದ ಮಹಾನತೆಯಾಗಿದೆ. ಪವಿತ್ರತೆ ಬ್ರಾಹ್ಮಣ ಜೀವನದ ಶ್ರೇಷ್ಠ ಶೃಂಗಾರವಾಗಿದೆ. ಹೇಗೆ ಸ್ಥೂಲ ಶರೀರದಲ್ಲಿ ವಿಶೇಷವಾಗಿ ಶ್ವಾಸ ನಡೆಯುವುದು ಅವಶ್ಯಕವಾಗಿದೆ. ಶ್ವಾಸವಿಲ್ಲವೆಂದರೆ ಜೀವನವಿಲ್ಲ. ಇಂತಹ ಬ್ರಾಹ್ಮಣ ಜೀವನದ ಶ್ವಾಸವಾಗಿದೆ ಪವಿತ್ರತೆಯಾಗಿದೆ. 21 ಜನ್ಮಗಳ ಪ್ರಾಲಬ್ಧದ ಆಧಾರ ಅರ್ಥಾತ್ ಫೌಂಡೇಷನ್ ಪವಿತ್ರತೆಯಾಗಿದೆ.