31.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಆತ್ಮಿಕ ಗುಪ್ತ ರಕ್ಷಣಾ ಸೈನಿಕರಾಗಿದ್ದೀರಿ, ನೀವು ಇಡೀ ಪ್ರಪಂಚವನ್ನು ರಕ್ಷಣೆ ಮಾಡಬೇಕಾಗಿದೆ,
ಮುಳುಗಿರುವ ದೋಣಿಯನ್ನು ಪಾರು ಮಾಡಬೇಕಾಗಿದೆ"
ಪ್ರಶ್ನೆ:
ಸಂಗಮಯುಗದಲ್ಲಿ
ತಂದೆಯು ಯಾವ ವಿಶ್ವ ವಿದ್ಯಾಲಯವನ್ನು ತೆರೆಯುತ್ತಾರೆ, ಅದು ಇಡೀ ಕಲ್ಪದಲ್ಲಿಯೇ ಇರುವುದಿಲ್ಲ?
ಉತ್ತರ:
ರಾಜ್ಯ
ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಓದುವ ಈಶ್ವರೀಯ ವಿಶ್ವ ವಿದ್ಯಾಲಯ ಅಥವಾ ಕಾಲೇಜನ್ನು
ಸಂಗಮದಲ್ಲಿಯೇ ತಂದೆಯು ತೆರೆಯುತ್ತಾರೆ. ಇಂತಹ ವಿಶ್ವ ವಿದ್ಯಾಲಯವು ಇಡೀ ಕಲ್ಪದಲ್ಲಿಯೇ ಇಲ್ಲ. ಈ
ವಿಶ್ವ ವಿದ್ಯಾಲಯದಲ್ಲಿ ವಿದ್ಯೆಯನ್ನು ಓದಿ ನೀವು ಡಬಲ್ ಕಿರೀಟಧಾರಿ ರಾಜಾಧಿ ರಾಜರಾಗುತ್ತೀರಿ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳೊಂದಿಗೆ ಮೊಟ್ಟ ಮೊದಲಿಗೆ ತಂದೆಯು ಕೇಳುತ್ತಾರೆ - ಇಲ್ಲಿ ಬಂದು
ಕುಳಿತುಕೊಂಡಾಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರಾ? ಏಕೆಂದರೆ ಇಲ್ಲಿ
ನಿಮಗೆ ಯಾವುದೇ ಉದ್ಯೋಗ-ವ್ಯವಹಾರ, ಮಿತ್ರ ಸಂಬಂಧಿ ಮೊದಲಾದವರು ಯಾರೂ ಇರುವುದಿಲ್ಲ. ನಾವು
ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡಲು ಹೋಗುತ್ತೇವೆಂದು ನೀವು ವಿಚಾರ ಮಾಡಿಕೊಂಡು ಬರುತ್ತೀರಿ.
ಇದನ್ನು ಯಾರು ಹೇಳುತ್ತಾರೆ? ಆತ್ಮವು ಶರೀರದ ಮೂಲಕ ಹೇಳುತ್ತದೆ. ಪಾರಲೌಕಿಕ ತಂದೆಯು ಈ ಶರೀರವನ್ನು
ಬಾಡಿಗೆಯಾಗಿ ತೆಗೆದುಕೊಂಡಿದ್ದಾರೆ. ಇವರ ಮೂಲಕ ತಿಳಿಸಿಕೊಡುತ್ತಾರೆ. ಬೇಹದ್ದಿನ ತಂದೆಯು ಬಂದು
ಕಲ್ಪದಲ್ಲಿ ಇದೊಂದೇ ಬಾರಿ ಕಲಿಸುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು
ಮಾಡುವುದರಿಂದ ನಿಮ್ಮ ದೋಣಿಯು ಪಾರಾಗುವುದು. ಪ್ರತಿಯೊಬ್ಬರ ದೋಣಿಯು ಮುಳುಗಿದೆ, ಯಾರೆಷ್ಟು
ಪುರುಷಾರ್ಥ ಮಾಡುವರೋ ಅಷ್ಟು ದೋಣಿಯು ಪಾರಾಗುವುದು. ಹೇ ಅಂಬಿಗನೇ, ನನ್ನ ದೋಣಿಯನ್ನು ಪಾರು ಮಾಡು
ಎಂದು ಹಾಡುತ್ತಾರಲ್ಲವೆ. ವಾಸ್ತವದಲ್ಲಿ ಪ್ರತಿಯೊಬ್ಬರೂ ತಮ್ಮ ದೋಣಿಯಿಂದ ಪಾರಾಗಬೇಕಾಗಿದೆ. ಹೇಗೆ
ಈಜುವುದನ್ನು ಕಲಿಸುತ್ತಾರೆ ನಂತರ ಕಲಿತಮೇಲೆ ತಾವೇ ಈಜುತ್ತಾ ಹೋಗುತ್ತಾರೆ. ಅವೆಲ್ಲವೂ ಸ್ಥೂಲ
ಮಾತುಗಳು, ಇವು ಆತ್ಮಿಕ ಮಾತುಗಳಾಗಿವೆ. ನೀವು ತಿಳಿದುಕೊಂಡಿದ್ದೀರಿ ಆತ್ಮವು ಈಗ ಕಂದಕದಲ್ಲಿ
ಸಿಕ್ಕಿ ಹಾಕಿಕೊಂಡಿದೆ, ಇದರ ಮೇಲೆ ಜಿಂಕೆಯ ಉದಾಹರಣೆಯನ್ನೂ ಕೊಡುತ್ತಾರೆ. ನೀರೆಂದು ತಿಳಿದು
ಹೋದಾಗ ಅದು ಕೇವಲ ಕೆಸರಾಗಿರುತ್ತದೆ, ಅದರಲ್ಲಿ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತದೆ. ಕೆಲಕೆಲವೊಮ್ಮೆ
ಹಡಗುಗಳು, ವಾಹನಗಳು, ಇತ್ಯಾದಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಾಗ ಹೊರ ತೆಗೆಯುತ್ತಾರೆ. ಅವರು
ರಕ್ಷಣಾ ಸೈನಿಕರಾಗಿದ್ದಾರೆ, ನೀವು ಆತ್ಮಿಕ ರಕ್ಷಣಾ ಸೈನಿಕರಾಗಿದ್ದೀರಿ. ನಿಮಗೆ ತಿಳಿದಿದೆ,
ಎಲ್ಲರೂ ಮಾಯೆಯ ಕೆಸರಿನಲ್ಲಿ ಬಹಳ ಸಿಕ್ಕಿ ಹಾಕಿಕೊಂಡಿದ್ದಾರೆ, ಇದಕ್ಕೆ ಮಾಯೆಯ ಕೆಸರೆಂದು
ಹೇಳಲಾಗುತ್ತದೆ. ಇದರಿಂದ ನೀವು ಹೇಗೆ ಹೊರ ಬರುವುದು ಎಂಬುದನ್ನು ತಂದೆಯು ತಿಳಿಸಿ ಕೊಡುತ್ತಾರೆ.
ಹೇಗೆ ಅಲ್ಲಿಯೂ ಸಹ ಅವರು ಪಾರು ಮಾಡುತ್ತಾರೆ. ಅದರಲ್ಲಿ ಒಬ್ಬ ವ್ಯಕ್ತಿಯದು ಇನ್ನೊಬ್ಬ ವ್ಯಕ್ತಿಗೆ
ಸಹಯೋಗ ಬೇಕಾಗುತ್ತದೆ ಆದರೆ ಇಲ್ಲಂತೂ ಆತ್ಮವೇ ಹೋಗಿ ಸಿಕ್ಕಿ ಹಾಕಿಕೊಂಡಿದೆ ಆದ್ದರಿಂದ ನೀವು ಹೇಗೆ
ಇದರಿಂದ ಹೊರಬರಬೇಕೆಂಬ ಮಾರ್ಗವನ್ನು ತಂದೆಯು ತಿಳಿಸುತ್ತಾರೆ. ನೀವು ಮತ್ತೆ ಅನ್ಯರಿಗೂ ಮಾರ್ಗವನ್ನು
ತಿಳಿಸಿರಿ ಹೇಗೆ ಈ ವಿಷಯ ಸಾಗರದಿಂದ ಕ್ಷೀರ ಸಾಗರದೆಡೆಗೆ ಹೋಗಬಹುದೆಂದು ಮತ್ತೆ ಅನ್ಯರಿಗೂ ತಿಳಿಸಿ
ಕೊಡಬೇಕು. ಸತ್ಯಯುಗಕ್ಕೆ ಕ್ಷೀರ ಸಾಗರ ಅರ್ಥಾತ್ ಸುಖದ ಸಾಗರವೆಂದು ಹೇಳುತ್ತಾರೆ. ಇದು ದುಃಖದ
ಸಾಗರವಾಗಿದೆ. ರಾವಣನು ದುಃಖದ ಸಾಗರನಲ್ಲಿ ಮುಳುಗಿಸುತ್ತಾನೆ, ತಂದೆಯು ಬಂದು ಸುಖದ ಸಾಗರದಲ್ಲಿ
ಕರೆದುಕೊಂಡು ಹೋಗುತ್ತಾರೆ. ನಿಮಗೆ ಆತ್ಮಿಕ ರಕ್ಷಣಾ ಸೈನಿಕರೆಂದು ಕರೆಯಲಾಗುತ್ತದೆ. ನೀವು
ಶ್ರೀಮತದಂತೆ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ಪ್ರತಿಯೊಬ್ಬರಿಗೆ ತಿಳಿಸುತ್ತೀರಿ -
ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕ, ಇನ್ನೊಬ್ಬರು ಪಾರಲೌಕಿಕ. ಲೌಕಿಕ ತಂದೆಯಿದ್ದರೂ ಸಹ
ಎಲ್ಲರೂ ಪಾರಲೌಕಿಕ ತಂದೆಯನ್ನೇ ನೆನಪು ಮಾಡುತ್ತಾರೆ ಆದರೆ ಅವರನ್ನು ಯಾರೂ ತಿಳಿದುಕೊಂಡಿಲ್ಲ.
ತಂದೆಯು ಯಾರನ್ನೂ ನಿಂದನೆ ಮಾಡುತ್ತಿಲ್ಲ ಆದರೆ ಡ್ರಾಮಾದ ರಹಸ್ಯವನ್ನು ತಿಳಿಸುತ್ತಾರೆ. ಈ
ಸಮಯದಲ್ಲಿ ಎಲ್ಲಾ ಮನುಷ್ಯಾತ್ಮರು ಪಂಚ ವಿಕಾರಗಳೆಂಬ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಆಸುರೀ
ಸಂಪ್ರದಾಯದವರಾಗಿದ್ದಾರೆ ಎಂಬ ಮಾತನ್ನೂ ಸಹ ಮಕ್ಕಳಿಗೆ ಅರ್ಥ ಮಾಡಿಸುವುದಕ್ಕಾಗಿ ಹೇಳುತ್ತಾರೆ.
ದೈವೀ ಸಂಪ್ರದಾಯದವರಿಗೆ ಆಸುರೀ ಸಂಪ್ರದಾಯದವರು ನಮಸ್ಕರಿಸುತ್ತಾರೆ ಏಕೆಂದರೆ ಅವರು ಸಂಪೂರ್ಣ
ನಿರ್ವಿಕಾರಿಗಳಾಗಿದ್ದಾರೆ. ಸನ್ಯಾಸಿಗಳಿಗೆ ನಮಸ್ಕರಿಸುತ್ತಾರೆ ಏಕೆಂದರೆ ಅವರು ಗೃಹಸ್ಥವನ್ನು
ಬಿಟ್ಟು ಹೋಗುತ್ತಾರೆ, ಪವಿತ್ರರಾಗಿರುತ್ತಾರೆ ಆದರೆ ಈ ಸನ್ಯಾಸಿಗಳು ಮತ್ತು ದೇವತೆಗಳಲ್ಲಿ
ರಾತ್ರಿ-ಹಗಲಿನ ವ್ಯತ್ಯಾಸವಿದೆ. ದೇವತೆಗಳ ಜನ್ಮವು ಯೋಗ ಬಲದಿಂದ ಆಗುತ್ತದೆ. ಈ ಮಾತುಗಳನ್ನು ಯಾರೂ
ತಿಳಿದುಕೊಂಡಿಲ್ಲ. ಈಶ್ವರನ ಗತಿಮತವು ಭಿನ್ನವಾಗಿದೆ. ಈಶ್ವರನ ಮಹಿಮೆಯನ್ನು ತಿಳಿದುಕೊಳ್ಳಲು
ಸಾಧ್ಯವಿಲ್ಲವೆಂದು ಎಲ್ಲರೂ ಹೇಳುತ್ತಾರೆ. ಕೇವಲ ಈಶ್ವರ ಅಥವಾ ಭಗವಂತನೆಂದು ಹೇಳಿದರೆ ಅಷ್ಟು
ಪ್ರೀತಿಯು ಮೂಡುವುದಿಲ್ಲ. ಎಲ್ಲದಕ್ಕಿಂತ ಒಳ್ಳೆಯ ಶಬ್ಧವು ಬಾಬಾ ಎಂಬುದಾಗಿದೆ. ಮನುಷ್ಯರು
ಬೇಹದ್ದಿನ ತಂದೆಯನ್ನು ಅರಿತಿಲ್ಲ ಆದ್ದರಿಂದ ಅನಾಥರಾಗಿದ್ದಾರೆ.
ಮ್ಯಾಗಜಿನ್ನಲ್ಲಿಯೂ
ಹಾಕಿದ್ದಾರೆ, ಮನುಷ್ಯರು ಏನು ಹೇಳುತ್ತಾರೆ ಮತ್ತು ಭಗವಂತನು ಏನು ಹೇಳುತ್ತಾರೆ ಎಂದು. ತಂದೆಯು
ಯಾರದೇ ನಿಂದನೆ ಮಾಡುತ್ತಿಲ್ಲ ಆದರೆ ಮಕ್ಕಳಿಗೆ ತಿಳಿಸಿ ಕೊಡುತ್ತಾರೆ ಏಕೆಂದರೆ ತಂದೆಯಂತೂ
ಎಲ್ಲರನ್ನೂ ತಿಳಿದುಕೊಂಡಿದ್ದಾರಲ್ಲವೆ. ಕೇವಲ ತಿಳಿಸುವುದಕ್ಕಾಗಿ ಹೇಳುತ್ತಾರೆ - ಇವರಲ್ಲಿ ಆಸುರೀ
ಗುಣಗಳಿವೆ, ಪರಸ್ಪರ ಹೊಡೆದಾಡುತ್ತಿರುತ್ತಾರೆ ಎಂದು. ಇಲ್ಲಂತೂ ಜಗಳವಾಡುವ ಅವಶ್ಯಕತೆಯಿಲ್ಲ,
ಅವರಂತೂ ಕೌರವರು ಅರ್ಥಾತ್ ಆಸುರೀ ಸಂಪ್ರದಾಯದವರಾಗಿದ್ದಾರೆ. ಇವರು ದೈವೀ ಸಂಪ್ರದಾಯದವರಾಗಿದ್ದಾರೆ.
ತಂದೆಯು ತಿಳಿಸುತ್ತಾರೆ - ಮನುಷ್ಯರು ಮನುಷ್ಯರಿಗೆ ಮುಕ್ತಿ-ಜೀವನ್ಮುಕ್ತಿಗಾಗಿ ರಾಜಯೋಗವನ್ನು
ಕಲಿಸಿ ಕೊಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ತಂದೆಯೇ ನೀವಾತ್ಮಗಳಿಗೆ ಕಲಿಸುತ್ತಿದ್ದಾರೆ.
ದೇಹಾಭಿಮಾನ, ದೇಹೀ-ಅಭಿಮಾನಿಯಲ್ಲಿ ನೋಡಿ, ಎಷ್ಟು ಅಂತರವಿದೆ! ದೇಹಾಭಿಮಾನದಿಂದ ನೀವು ಇಳಿಯುತ್ತಾ
ಬಂದಿದ್ದೀರಿ. ತಂದೆಯು ಒಂದೇ ಬಾರಿ ಬಂದು ನಿಮ್ಮನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಾರೆ. ನೀವು
ಸತ್ಯಯುಗದಲ್ಲಿ ದೇಹದೊಂದಿಗೆ ಸಂಬಂಧವನ್ನು ಇಡುವುದಿಲ್ಲವೆಂದಲ್ಲ. ಅಲ್ಲಿ ನಾನಾತ್ಮನು ಪರಮಪಿತ
ಪರಮಾತ್ಮನ ಸಂತಾನನಾಗಿದ್ದೇನೆ ಎಂಬುದಿರುವುದಿಲ್ಲ. ಈ ಜ್ಞಾನವು ನಿಮಗೆ ಈಗಲೆ ಸಿಗುತ್ತದೆ ನಂತರ ಇದು
ಪ್ರಾಯಲೋಪವಾಗಿ ಬಿಡುತ್ತದೆ. ನೀವೇ ಶ್ರೀಮತದಂತೆ ನಡೆದು ಪ್ರಾಲಬ್ಧವನ್ನು ಪಡೆಯುತ್ತೀರಿ. ತಂದೆಯು
ರಾಜಯೋಗವನ್ನು ಕಲಿಸುವುದಕ್ಕಾಗಿಯೇ ಬರುತ್ತಾರೆ. ಇಂತಹ ವಿದ್ಯೆ ಮತ್ತ್ಯಾವುದೂ ಇಲ್ಲ. ಡಬಲ್
ಕಿರೀಟಧಾರಿ ರಾಜರು ಸತ್ಯಯುಗದಲ್ಲಿರುತ್ತಾರೆ ನಂತರ ಸಿಂಗಲ್ ಕಿರೀಟಧಾರಿಗಳ ರಾಜ್ಯವಿರುತ್ತದೆ. ಈಗ
ಆ ರಾಜ್ಯವು ಇಲ್ಲ, ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ. ನೀವು ಮಕ್ಕಳು ಈಗ ರಾಜ್ಯಭಾಗ್ಯಕ್ಕಾಗಿ
ಓದುತ್ತೀರಿ. ಇದಕ್ಕೆ ಈಶ್ವರೀಯ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ. ನಿಮ್ಮ ಹೆಸರೂ
ಬರೆಯಲ್ಪಟ್ಟಿದೆ. ಅವರಾದರೆ ಭಲೆ ಗೀತಾ ಪಾಠಶಾಲೆಯೆಂದು ಹೆಸರನ್ನಿಟ್ಟುಕೊಳ್ಳುತ್ತಾರೆ. ಓದಿಸುವವರು
ಯಾರು ಎಂದು ಕೇಳಿದರೆ ಶ್ರೀಕೃಷ್ಣ ಭಗವಾನುವಾಚವೆಂದು ಹೇಳುತ್ತಾರೆ ಆದರೆ ಕೃಷ್ಣನು ಓದಿಸಲು
ಸಾಧ್ಯವಿಲ್ಲ. ಸತ್ಯಯುಗದಲ್ಲಿ ಕೃಷ್ಣನೇ ಸ್ವಯಂ ಓದುವುದಕ್ಕಾಗಿ ಪಾಠಶಾಲೆಗೆ ಹೋಗುತ್ತಾನೆ.
ರಾಜಕುಮಾರ-ಕುಮಾರಿಯರು ಹೇಗೆ ಶಾಲೆಗೆ ಹೋಗುತ್ತಾರೆ, ಅಲ್ಲಿನ ಭಾಷೆಯೇ ಭಿನ್ನವಾಗಿರುತ್ತದೆ.
ಸಂಸ್ಕೃತದಲ್ಲಿ ಗೀತೆಯನ್ನು ಹೇಳಿದರು ಎಂದಲ್ಲ. ಇಲ್ಲಂತೂ ಅನೇಕ ಭಾಷೆಗಳಿವೆ, ಯಾರು ರಾಜನಾಗುವರೋ
ಅವರು ತಮ್ಮ ಭಾಷೆಯನ್ನು ನಡೆಸುತ್ತಾರೆ. ಸಂಸ್ಕೃತ ಭಾಷೆಯು ಯಾವುದೇ ರಾಜರ ಭಾಷೆಯಲ್ಲ. ತಂದೆಯೂ ಸಹ
ಸಂಸ್ಕೃತದಲ್ಲಿ ಕಲಿಸಿಕೊಡುವುದಿಲ್ಲ. ಸತ್ಯಯುಗಕ್ಕಾಗಿ ತಂದೆಯು ರಾಜಯೋಗವನ್ನು ಕಲಿಸುತ್ತಾರೆ.
ತಂದೆಯು ತಿಳಿಸುತ್ತಾರೆ
– ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿ ಎಂದು ಪ್ರತಿಜ್ಞೆ ಮಾಡಿಸುತ್ತಾರೆ. ಇಲ್ಲಿ
ಯಾರೆಲ್ಲರೂ ಬರುವರೋ ಅವರಿಂದ ಪ್ರತಿಜ್ಞೆ ಮಾಡಿಸಲಾಗುತ್ತದೆ. ಕಾಮದ ಮೇಲೆ ಜಯ ಗಳಿಸಿದರೆ ನೀವು
ಜಗಜ್ಜೀತರಾಗಿ ಬಿಡುವಿರಿ. ಇದು ಮುಖ್ಯ ವಿಕಾರವಾಗಿದೆ. ಈ ಹಿಂಸೆಯು ದ್ವಾಪರದಿಂದ ನಡೆದು ಬರುತ್ತದೆ,
ಇದರಿಂದ ವಾಮಮಾರ್ಗವು ಆರಂಭವಾಯಿತು, ದೇವತೆಗಳು ಹೇಗೆ ವಾಮಮಾರ್ಗದಲ್ಲಿ ಹೋಗುತ್ತಾರೆ ಎಂಬ ಮಂದಿರವೂ
ಇದೆ. ಅಲ್ಲಿ ಬಹಳ ಕೊಳಕಾಗಿ ಚಿತ್ರಗಳನ್ನು ತೋರಿಸಿದ್ದಾರೆ ಆದರೆ ಯಾವಾಗ ವಾಮಮಾರ್ಗದಲ್ಲಿ ಹೋದರು
ಅದರ ತಿಥಿ-ತಾರೀಖು ಏನೂ ಇಲ್ಲ ಅಂದರೆ ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಕಪ್ಪಾಗುತ್ತಾರೆ
ಎಂಬುದು ಸಿದ್ಧವಾಗುತ್ತದೆ ಆದರೆ ನಾಮರೂಪವಂತೂ ಬದಲಾಗುತ್ತದೆಯಲ್ಲವೆ. ಕಾಮ ಚಿತೆಯನ್ನೇರುವುದರಿಂದ
ಪತಿತರಾಗಿ ಬಿಡುತ್ತಾರೆ. ಈಗಂತೂ ಪಂಚ ತತ್ವಗಳೂ ತಮೋಪ್ರಧಾನವಾಗಿವೆ ಆದ್ದರಿಂದ ಶರೀರಗಳೂ
ತಮೋಪ್ರಧಾನವಾಗುತ್ತವೆ. ಜನ್ಮ ಪಡೆಯುತ್ತಿದ್ದಂತೆಯೇ ಕುರುಡರು, ಕುಂಟರು, ರೋಗಿಗಳಾಗಿರುತ್ತಾರೆ.
ಸತ್ಯಯುಗದಲ್ಲಾದರೆ ಸಂಪೂರ್ಣ ಸುಂದರ ಶರೀರವಿರುತ್ತದೆ, ಇಲ್ಲಿ ತಮೋಪ್ರಧಾನರಾಗಿರುವ ಕಾರಣ ಶರೀರವೂ
ಅದೇ ರೀತಿ ತಮೋಪ್ರಧಾನವಾಗಿದೆ. ಮನುಷ್ಯರು ಈಶ್ವರ, ಪ್ರಭು ಇತ್ಯಾದಿ ಭಿನ್ನ-ಭಿನ್ನ ಹೆಸರುಗಳಿಂದ
ನೆನಪು ಮಾಡುತ್ತಾರೆ ಆದರೆ ಪಾಪ! ಅವರಿಗೆ ತಿಳಿದೇ ಇಲ್ಲ. ಹೇ ತಂದೆಯೇ, ಬಂದು ಶಾಂತಿಯನ್ನು ಕೊಡಿ
ಎಂದು ಆತ್ಮವು ತನ್ನ ತಂದೆಯನ್ನು ನೆನಪು ಮಾಡುತ್ತದೆ. ಇಲ್ಲಂತೂ ಕರ್ಮೇಂದ್ರಿಯಗಳಿಂದ
ಪಾತ್ರವನ್ನಭಿನಯಿಸುತ್ತಿದ್ದೀರಿ ಅಂದಮೇಲೆ ಶಾಂತಿಯು ಹೇಗೆ ಸಿಗುವುದು! ಈ ಲಕ್ಷ್ಮೀ-ನಾರಾಯಣರ
ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು ಆದರೆ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು
ಹೇಳಿರುವ ಕಾರಣ ಪಾಪ ಮನುಷ್ಯರಿಗೆ ಹೇಗೆ ಅರ್ಥವಾಗಬೇಕು! ಈ ದೇವತೆಗಳ ರಾಜ್ಯವಿದ್ದಾಗ ಒಂದು ರಾಜ್ಯ,
ಒಂದು ಧರ್ಮವಿತ್ತು, ಮತ್ತ್ಯಾವುದೇ ಖಂಡದಲ್ಲಿ ಒಂದು ಧರ್ಮ, ಒಂದು ರಾಜ್ಯ ಬೇಕೆಂದು ಹೇಳುವುದಿಲ್ಲ.
ಇಲ್ಲಿಯೇ ಆತ್ಮವು ಒಂದು ರಾಜ್ಯವು ಬೇಕೆಂದು ಬಯಸುತ್ತದೆ. ನೀವಾತ್ಮಗಳಿಗೆ ಗೊತ್ತಿದೆ, ಈಗ ಒಂದು
ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಸತ್ಯಯುಗದಲ್ಲಿ ನಾವು ಇಡೀ ವಿಶ್ವದ ಮಾಲೀಕರಾಗಿರುತ್ತೇವೆ.
ತಂದೆಯು ನಮಗೆ ಎಲ್ಲವನ್ನೂ ಕೊಟ್ಟು ಬಿಡುತ್ತಾರೆ. ಯಾರೂ ನಮ್ಮಿಂದ ರಾಜ್ಯಭಾಗ್ಯವನ್ನು
ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಇಡೀ ವಿಶ್ವದ ಮಾಲೀಕರಾಗುತ್ತೇವೆ. ವಿಶ್ವವೆಂದರೆ ಸೂಕ್ಷ್ಮವತನ,
ಮೂಲವತನ, ಇಲ್ಲಿ ಬರುವುದಿಲ್ಲ, ಸೃಷ್ಟಿಚಕ್ರವು ಇಲ್ಲಿಯೇ ಸುತ್ತುತ್ತಿರುತ್ತದೆ. ಇದನ್ನು ರಚಯಿತ
ತಂದೆಯೇ ತಿಳಿದುಕೊಂಡಿರುತ್ತಾರೆ. ರಚನೆಯನ್ನು ರಚಿಸುತ್ತಾರೆಂದಲ್ಲ. ತಂದೆಯು ಹಳೆಯ ಪ್ರಪಂಚದಿಂದ
ಹೊಸದನ್ನಾಗಿ ಮಾಡಲು ಸಂಗಮದಲ್ಲಿಯೇ ಬರುತ್ತಾರೆ. ತಂದೆಯು ದೂರ ದೇಶದಿಂದ ಬಂದಿದ್ದಾರೆ. ನಿಮಗೆ
ತಿಳಿದಿದೆ – ಹೊಸ ಪ್ರಪಂಚವು ನಿಮಗಾಗಿಯೇ ಆಗುತ್ತದೆ. ತಂದೆಯು ನಾವಾತ್ಮಗಳ ಶೃಂಗಾರ
ಮಾಡುತ್ತಿದ್ದಾರೆ. ಅದರ ಜೊತೆಗೆ ಮತ್ತೆ ಶರೀರದ ಶೃಂಗಾರವೂ ಆಗಿ ಬಿಡುವುದು. ಆತ್ಮವು ಪವಿತ್ರವಾದರೆ
ಅದಕ್ಕೆ ಶರೀರವೂ ಸತೋಪ್ರಧಾನವಾದದ್ದು ಸಿಗುತ್ತದೆ. ಶರೀರವು ಸತೋಪ್ರಧಾನ ತತ್ವಗಳಿಂದ ತಯಾರಾಗುತ್ತದೆ.
ಈ ದೇವಿ-ದೇವತೆಗಳದು ಸತೋಪ್ರಧಾನ ಶರೀರವಲ್ಲವೆ. ಸ್ವಾಭಾವಿಕ ಸೌಂದರ್ಯವಿರುತ್ತದೆ. ಧರ್ಮವೇ
ಶಕ್ತಿಯೆಂದು ಗಾಯನವಿದೆ. ಈಗ ಶಕ್ತಿಯು ಎಲ್ಲಿಂದ ಸಿಗುವುದು? ಒಂದೇ ದೇವಿ-ದೇವತಾ ಧರ್ಮವಾಗಿದೆ.
ಇದರಿಂದಲೇ ಶಕ್ತಿ ಸಿಗುತ್ತದೆ. ಈ ದೇವತೆಗಳು ಇಡೀ ವಿಶ್ವದ ಮಾಲೀಕರಾಗುತ್ತಾರೆ ಮತ್ತ್ಯಾರೂ ವಿಶ್ವದ
ಮಾಲೀಕರಾಗುವುದಿಲ್ಲ. ನಿಮಗೆ ಎಷ್ಟೊಂದು ಶಕ್ತಿ ಸಿಗುತ್ತದೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಆದಿ
ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದು ಬರೆಯಲ್ಪಟ್ಟಿದೆ. ಈ ಮಾತುಗಳು ಪ್ರಪಂಚದಲ್ಲಿ
ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬ್ರಾಹ್ಮಣ ಕುಲವನ್ನು ಸ್ಥಾಪನೆ ಮಾಡುತ್ತೇನೆ
ಮತ್ತೆ ಅವರನ್ನು ಸೂರ್ಯವಂಶಿ ರಾಜಧಾನಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಯಾರು ಚೆನ್ನಾಗಿ ಓದುವರೋ
ಅವರು ತೇರ್ಗಡೆಯಾಗಿ ಸೂರ್ಯವಂಶದಲ್ಲಿ ಬರುತ್ತಾರೆ. ಇದೆಲ್ಲವೂ ಜ್ಞಾನದ ಮಾತಾಗಿದೆ. ಇದನ್ನು ಅವರು
ಸ್ಥೂಲ ಭಾನ ಮುಂತಾದ ಆಯುಧಗಳನ್ನು ತೋರಿಸಿದ್ದಾರೆ, ಬಾಣ ಹೊಡೆಯುವುದನ್ನು ಕಲಿಸುತ್ತಾರೆ. ಚಿಕ್ಕ
ಮಕ್ಕಳಿಗೂ ಸಹ ಬಂದೂಕು ಹೊಡೆಯುವುದನ್ನು ಕಲಿಸುತ್ತಾರೆ ಆದರೆ ನಿಮ್ಮದು ಯೋಗ ಬಾಣವಾಗಿದೆ. ತಂದೆಯು
ತಿಳಿಸುತ್ತಾರೆ - ನನ್ನೊಬ್ಬನನ್ನು ನೆನಪು ಮಾಡಿದ್ದೇ ಆದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ.
ಹಿಂಸೆಯ ಯಾವುದೇ ಮಾತಿಲ್ಲ. ನಿಮ್ಮ ವಿದ್ಯೆಯು ಗುಪ್ತವಾಗಿದೆ. ನೀವು ಆತ್ಮಿಕ ಗುಪ್ತ ರಕ್ಷಣಾ
ಸೈನಿಕರಾಗಿದ್ದೀರಿ. ಆತ್ಮಿಕ ಸೈನ್ಯವು ಹೇಗಿರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವು ಗುಪ್ತ
ಆತ್ಮಿಕ ರಕ್ಷಣಾ ಸೈನಿಕರಾಗಿದ್ದೀರಿ, ಇಡೀ ಪ್ರಪಂಚವನ್ನು ರಕ್ಷಣೆ ಮಾಡುತ್ತೀರಿ. ಎಲ್ಲರ ದೋಣಿಯು
ಮುಳುಗಿ ಹೋಗಿದೆ ಬಾಕಿ ಚಿನ್ನದ ಲಂಕೆಯು ಯಾವುದೂ ಇಲ್ಲ ಅಥವಾ ಚಿನ್ನದ ದ್ವಾರಿಕೆಯು ಸಾಗರದ ಕೆಳಗಡೆ
ಹೊರಟು ಹೋಗಿದೆ ಮತ್ತೆ ಅದು ಹೊರ ಬರುವುದೆಂದೂ ಅಲ್ಲ. ದ್ವಾರಿಕೆಯಲ್ಲಿಯೂ ಇವರ ರಾಜ್ಯವಿತ್ತು ಆದರೆ
ಸತ್ಯಯುಗದಲ್ಲಿತ್ತು. ಸತ್ಯಯುಗೀ ರಾಜರ ಉಡುಪುಗಳೇ ಬೇರೆ, ತ್ರೇತಾಯುಗದವರ ಉಡುಪುಗಳೇ ಬೇರೆಯಾಗಿದೆ.
ಭಿನ್ನ-ಭಿನ್ನ ಉಡುಪು, ಭಿನ್ನ-ಭಿನ್ನ ರೀತಿ-ನೀತಿಗಳಿರುತ್ತವೆ. ಪ್ರತಿಯೊಬ್ಬ ರಾಜನ ರೀತಿ-ನೀತಿಗಳು
ಬೇರೆ-ಬೇರೆಯಾಗಿರುತ್ತವೆ. ಸತ್ಯಯುಗದ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಮನಸ್ಸಿಗೆ
ಖುಷಿಯಾಗಿಬಿಡುತ್ತದೆ. ಅದಕ್ಕೆ ಸ್ವರ್ಗ, ಪ್ಯಾರಡೈಸ್ ಎಂದು ಹೇಳುತ್ತಾರೆ ಆದರೂ ಮನುಷ್ಯರು ಏನನ್ನೂ
ತಿಳಿದುಕೊಂಡಿಲ್ಲ. ಮುಖ್ಯವಾದುದು ಈ ದಿಲ್ವಾಡಾ ಮಂದಿರವಾಗಿದೆ. ಇದು ನಿಮ್ಮದೇ ನೆನಪಾರ್ಥವಾಗಿದೆ.
ಯಾವಾಗಲೂ ಮಾದರಿಗಳನ್ನು ಚಿಕ್ಕದಾಗಿ ತೋರಿಸುತ್ತಾರಲ್ಲವೆ. ಇವು ನಿಮ್ಮದೇ ಮಾದರಿಗಳಾಗಿವೆ. ಶಿವ
ತಂದೆಯೂ ಇದ್ದಾರೆ, ಆದಿದೇವನೂ ಇದ್ದಾರೆ. ಮೇಲೆ ವೈಕುಂಠವನ್ನು ತೋರಿಸಿದ್ದಾರೆ. ಶಿವ ತಂದೆಯಿದ್ದರೆ
ಅವಶ್ಯವಾಗಿ ಅವರ ರಥವೂ ಇರುವುದು. ಆದಿ ದೇವನೂ ಕುಳಿತಿದ್ದಾರೆ, ಇದೂ ಸಹ ಯಾರಿಗೂ ತಿಳಿದಿಲ್ಲ. ಇವರು
ಶಿವ ತಂದೆಯ ರಥವಾಗಿದ್ದಾರೆ. ಮಹಾವೀರನೇ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಆತ್ಮದಲ್ಲಿ
ಹೇಗೆ ಶಕ್ತಿಯು ಬರುತ್ತದೆ ಎಂಬುದನ್ನೂ ಸಹ ನೀವೀಗ ತಿಳಿದುಕೊಳ್ಳುತ್ತೀರಿ. ಪದೇ-ಪದೇ ತಮ್ಮನ್ನು
ಆತ್ಮನೆಂದು ತಿಳಿಯಿರಿ. ನಾನಾತ್ಮನು ಸತೋಪ್ರಧಾನನಾಗಿದ್ದಾಗ ಪವಿತ್ರನಾಗಿದ್ದೆನು,
ಶಾಂತಿಧಾಮ-ಸುಖಧಾಮದಲ್ಲಿ ಅವಶ್ಯವಾಗಿ ಪವಿತ್ರರೇ ಇರುತ್ತಾರೆ. ಈಗ ಬುದ್ಧಿಯಲ್ಲಿ ಬರುತ್ತದೆ, ಎಷ್ಟು
ಸಹಜ ಮಾತಾಗಿದೆ. ಭಾರತವು ಸತ್ಯಯುಗದಲ್ಲಿ ಪವಿತ್ರವಾಗಿತ್ತು, ಅಲ್ಲಿ ಅಪವಿತ್ರ ಆತ್ಮವಿರಲು
ಸಾಧ್ಯವಿಲ್ಲ. ಇಷ್ಟೆಲ್ಲಾ ಪತಿತ ಆತ್ಮರು ಮೇಲೆ ಹೇಗೆ ಹೋಗುವರು. ಅವಶ್ಯವಾಗಿ ಪವಿತ್ರರಾಗಿಯೇ
ಹೋಗುತ್ತಾರೆ. ಬೆಂಕಿ ಬೀಳುತ್ತದೆ ಆಗ ಎಲ್ಲಾ ಆತ್ಮಗಳೂ ಹೊರಟು ಹೋಗುತ್ತಾರೆ ಬಾಕಿ ಶರೀರವು ಮಾತ್ರ
ಉಳಿಯುತ್ತದೆ. ಇವೆಲ್ಲದರ ನಿದರ್ಶನಗಳೂ ಇವೆ. ಹೋಲಿಕಾದ ಅರ್ಥವನ್ನು ಯಾರೂ ತಿಳಿದುಕೊಳ್ಳುವುದಿಲ್ಲ.
ಇಡೀ ಪ್ರಪಂಚವೇ ಇದರಲ್ಲಿ ಸ್ವಾಹಾ ಆಗಲಿದೆ. ಇದು ಜ್ಞಾನ ಯಜ್ಞವಾಗಿದೆ. ಜ್ಞಾನ ಅಕ್ಷರವನ್ನು ತೆಗೆದು
ಕೇವಲ ರುದ್ರ ಯಜ್ಞವೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಇದು ರುದ್ರ ಜ್ಞಾನ ಯಜ್ಞವಾಗಿದೆ. ಇದು
ಬ್ರಾಹ್ಮಣರ ಮೂಲಕವೇ ರಚಿಸಲ್ಪಡುತ್ತದೆ. ಸತ್ಯ-ಸತ್ಯ ಬ್ರಾಹ್ಮಣರು ನೀವಾಗಿದ್ದೀರಿ, ಪ್ರಜಾಪಿತ
ಬ್ರಹ್ಮಾನಿಗೆ ಎಲ್ಲರೂ ಸಂತಾನರಲ್ಲವೆ. ಬ್ರಹ್ಮಾರವರ ಮೂಲಕವೇ ಮನುಷ್ಯ ಸೃಷ್ಟಿಯ ರಚನೆಯಾಗುತ್ತದೆ.
ಬ್ರಹ್ಮಾನಿಗೆ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳಲಾಗುತ್ತದೆ. ಇವರ
ವಂಶಾವಳಿಯಾಗುತ್ತದೆಯಲ್ಲವೆ. ಹೇಗೆ ಅಗರ್ವಾಲ್ ಮನೆತನವಾಗುತ್ತದೆ. ಮನೆತನದ ವಂಶಾವಳಿಯನ್ನೂ
ಇಟ್ಟುಕೊಳ್ಳುತ್ತಾರೆ. ನಿಮ್ಮ ಬುದ್ಧಿಯಲ್ಲಿದೆ - ಮೂಲವತನದಲ್ಲಿ ನಿಯಮದನುಸಾರವಾಗಿ ಆತ್ಮಗಳ
ವೃಕ್ಷವಿದೆ. ಶಿವ ತಂದೆ ನಂತರ ಬ್ರಹ್ಮಾ-ವಿಷ್ಣು-ಶಂಕರ, ನಂತರ ಲಕ್ಷ್ಮೀ-ನಾರಾಯಣ ಇದೆಲ್ಲವೂ
ಮನುಷ್ಯರ ವೃಕ್ಷವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮಿಕ
ರಕ್ಷಣಾ ಸೈನಿಕರಾಗಿ ಸ್ವಯಂ ಹಾಗೂ ಸರ್ವರಿಗೆ ಸರಿಯಾದ ಮಾರ್ಗವನ್ನು ತಿಳಿಸಬೇಕಾಗಿದೆ. ಇಡೀ
ಪ್ರಪಂಚವನ್ನು ವಿಷಯ ಸಾಗರದಿಂದ ಪಾರು ಮಾಡಲು ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ.
2. ಜ್ಞಾನ-ಯೋಗದಿಂದ
ಪವಿತ್ರರಾಗಿ ಆತ್ಮದ ಶೃಂಗಾರ ಮಾಡಿಕೊಳ್ಳಬೇಕಾಗಿದೆ, ಶರೀರಕ್ಕಲ್ಲ. ಆತ್ಮವು ಪವಿತ್ರವಾದರೆ ಶರೀರದ
ಶೃಂಗಾರವು ಸ್ವತಃವಾಗಿ ಆಗುವುದು.
ವರದಾನ:
ದೂರ ಸರಿಯುವುದರ
ಬದಲು ಪ್ರತಿ ಘಳಿಗೆ ತಂದೆಯ ಆಶ್ರಯದ ಅನುಭವ ಮಾಡುವಂತಹ ನಿಶ್ಚಯ ಬುದ್ಧಿ ವಿಜಯಿ ಭವ.
ವಿಜಯಿ ಭವದ ವರಧಾನಿ
ಆತ್ಮ ಪ್ರತಿ ಗಳಿಗೆ ಸ್ವಯಂ ಅನ್ನು ಆಶ್ರಯದ ಕೆಳಗಿರುವಂತೆ ಅನುಭವ ಮಾಡುವುದು. ಅವರ ಮನಸ್ಸಿನಲ್ಲಿ
ಸಂಕಲ್ಪ ಮಾತ್ರವೂ ಸಹಾ ನಿರಾಶ್ರಿತ ಅಥವಾ ಒಬ್ಬಂಟಿ ತನದ ಅನುಭವವಾಗುವುದಿಲ್ಲ. ಎಂದೂ ಉದಾಸಿ ಅಥವಾ
ಅಲ್ಪಕಾಲದ ಹದ್ಧಿನ ವೈರಾಗ್ಯ ಬರುವುದಿಲ್ಲ. ಅವರು ಎಂದೂ ಯಾವ ಕಾರ್ಯದಿಂದಲೂ, ಸಮಸ್ಯೆಯಿಂದಲೂ,
ವ್ಯಕ್ತಿಯಿಂದಲೂ ದೂರ ಸರಿಯುವುದಿಲ್ಲ ಆದರೆ ಪ್ರತಿ ಕರ್ಮ ಮಾಡುತ್ತಿದ್ದರೂ, ಎದುರಿಸುತ್ತಾ,
ಸಹಯೋಗಿಗಳಾಗುತ್ತಾ ಬೇಹದ್ದಿನ ವೈರಾಗಿಗಳಾಗಿರುತ್ತಾರೆ.
ಸ್ಲೋಗನ್:
ಒಬ್ಬ ತಂದೆಯ (ಕಂಪನಿ)
ಸಂಗದಲ್ಲಿರಿ ಮತ್ತು ತಂದೆಯನ್ನೇ ನಿಮ್ಮ ಜೊತೆಗಾರನನ್ನಾಗಿ ಮಾಡಿಕೊಳ್ಳಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ದಿವ್ಯ ಬುದ್ಧಿ ರೂಪಿ
ವಿಮಾನದ ಮೂಲಕ ಎಲ್ಲದಕ್ಕಿಂತ ಎತ್ತರದ ಶಿಖರದ ಸ್ಥಿತಿಯಲ್ಲಿ ಸ್ಥಿತರಾಗಿ, ಅವ್ಯಕ್ತ ವತನವಾಸಿಯಾಗಿ
ವಿಶ್ವದ ಸರ್ವ ಆತ್ಮರ ಪ್ರತಿ ಶುಭ ಭಾವನೆ ಮತ್ತು ಶ್ರೇಷ್ಠ ಕಾಮನೆಯ ಸಹಯೋಗದ ಅಲೆಯನ್ನು ಹರಡಿಸಿರಿ.
ಯೋಗದ ಪ್ರಯೋಗದ ಮೂಲಕ ದುಃಖಿ-ಅಶಾಂತ ಆತ್ಮರಿಗೆ ಶಾಂತಿ ಮತ್ತು ಶಕ್ತಿಯ ಸಕಾಶ ಕೊಡಿ.